#🙏ತಿರುಪತಿ ತಿಮ್ಮಪ್ಪ #🔱 ಭಕ್ತಿ ಲೋಕ #ದಿನಕ್ಕೊಂದು ಕಥೆ
‘ಮಣ್ಣಿನ’ ಹೂವುಗಳಿಗೆ ಸುಗಂಧ ಕೊಟ್ಟ ಭಗವಂತ:-
ತಿರುಪತಿಯ ತಿಮ್ಮಪ್ಪ ಕೋಟ್ಯಾಂತರ ಕೋಟಿ ಆಸ್ತಿಗಳ ಒಡೆಯ. ಭಕ್ತರ ಭಕ್ತ ಆದರೆ ವೆಂಕಟೇಶನಿಗೆ ಮಣ್ಣಿನ ಹೂವುಗಳು, ಒಡೆದ ಮಡಿಕೆಯ ಮೊಸರನ್ನ ಬಹಳ ಪ್ರಿಯವಾದದ್ದು. ತಿರುಮಲ ದೇವಸ್ಥಾನ ಕಟ್ಟಿಸಿದ್ದು ಪದ್ಮಾವತಿ ತಂದೆ ಆಕಾಶ ರಾಜನ ಸಹೋದರ ತೋಂಡಮಾನ ಚಕ್ರವರ್ತಿ. ಪದ್ಮಾವತಿ ಶ್ರೀನಿವಾಸನ ಪತ್ನಿ. ಇವರೆಲ್ಲ ಶ್ರೀನಿವಾಸನ ಬಂಧುಗಳು. ತೋಂಡ ಮಾನ ವೆಂಕಟೇಶನ ಮಹಾಭಕ್ತ. ಎಂತಹ ಭಕ್ತ ಎಂದರೆ, ಸ್ವತಃ ಶ್ರೀನಿವಾಸ ಒಂದು ಯುದ್ಧದಲ್ಲಿ ಚಕ್ರವರ್ತಿಗೆ ಸಹಾಯ ಮಾಡಿ ನೀನು ಮಾಡುವ ಯುದ್ಧದಲ್ಲಿ ನಿನಗೆ ವಿಜಯಮಾಲೆ ಒಲಿಯಲಿ ಎಂದು ತನ್ನ ಶಂಕ- ಚಕ್ರಗಳನ್ನೇ ಕೊಟ್ಟ ಸ್ವಾಮಿ. ಇದನ್ನು ತಿಳಿದ ಮತ್ತೊಬ್ಬ ಮಹಾನ್ ಭಕ್ತ ಹೊಸ ಶಂಕ- ಚಕ್ರಗಳನ್ನು ಮಾಡಿಸಿ ಶ್ರೀನಿವಾಸನಿಗೆ ಅರ್ಪಿಸಿದನು.
ತೋಂಡಮಾನ್ ಚಕ್ರವರ್ತಿ ವೆಂಕಟೇಶ್ವರನ ಅರ್ಚನೆಗಾಗಿ ಪ್ರತಿದಿನ ಬಂಗಾರದ ಪುಷ್ಪಗಳನ್ನು ಮಾಡಿಸುತ್ತಿದ್ದನು. ಒಂದು ದಿನ ಅರ್ಚನೆ ಮಾಡಲು ಬಂದು
ಗರ್ಭಗುಡಿಯ ಬಾಗಿಲು ತೆಗೆದು ಸ್ವಾಮಿಯ ಪಾದದ ಕೆಳಗೆ ನೋಡಿದರೆ ಬಂಗಾರದ ಹೂಗಳ ಬದಲಾಗಿ ಮಣ್ಣಿನಿಂದ ಮಾಡಿದ ಹೂವುಗಳ ಗುಡ್ಡೆ ಇತ್ತು. ಇದು ಎಲ್ಲಿಂದ ಬಂದಿತು ಎಂದು ಹೂವನ್ನು ಕೈಯಲ್ಲಿ ಹಿಡಿದು ನೋಡಿದರೆ ಅವು ಸುಗಂಧ ಭರಿತ ಪರಿಮಳ ತುಂಬಿದ ಮಣ್ಣಿನ ಹೂವುಗಳಾಗಿತ್ತು. ಆಶ್ಚರ್ಯಪಟ್ಟು,
ಈ ಕುರಿತು ಸ್ವಾಮಿಯನ್ನೇ ಕೇಳುವೆ ಎಂದು, ಶ್ರೀನಿವಾಸನ ಬಳಿಬಂದು ಸ್ವಾಮಿ ಇಷ್ಟು ದಿನಗಳು ನಾನು ನಿಮ್ಮ ಪಾದಕ್ಕೆ ಅರ್ಚನೆ ಮಾಡಿದ ಬಂಗಾರದ ಹೂಗಳು ಇಲ್ಲಿ ಇರುತ್ತಿತ್ತು. ಆದರೆ ಇಂದು ಮಣ್ಣಿಂದ ಮಾಡಿದ ಹೂಗಳು ನಿಮ್ಮ ಪಾದದ ಮೇಲಿದೆ, ಅಲ್ಲದೆ ಗಿಡದಲ್ಲಿ ಬಿಡುವ ಹೂವಿಗೆ ಇರುವ ಸುವಾಸನೆಯಂತೆ ಮಣ್ಣಿನ ಹೂಗಳಿಗೂ ಸುಗಂಧ ಇದೆ ಇದು ಹೇಗೆ? ಕೇಳಿದ. ಆದರೆ ಸ್ವಾಮಿಯದು ಮುಗುಳ್ನ ಗುವೇ ಉತ್ತರವಾಗಿತ್ತು. ಇನ್ನೊಂದು ದಿನ ಹೇಳಬಹುದು ಎಂದು ಮತ್ತೆ ಒಂದಷ್ಟು ಕಾದು ನೋಡುತ್ತಿದ್ದರೆ, ತೊಂಡಮಾನ ಚಕ್ರವರ್ತಿ ಬಂಗಾರದ ಹೂವಿನ ಅರ್ಚನೆ ಮಾಡಿ ಹೋಗಿ ಮರು ದಿನ ಬೆಳಿಗ್ಗೆ ಬಂದು ನೋಡಿದಾಗ ಸ್ವಾಮಿಯ ಪಾದದ ಮೇಲೆ ಮಣ್ಣಿನ ಹೂಗಳು ಇರುತ್ತಿತ್ತು. ಬಂಗಾರದ ಹೂವುಗಳು ನಿರ್ಮಾಲ್ಯದಲ್ಲಿ ಸೇರಿತ್ತು.
ಚಕ್ರವರ್ತಿಗೆ ಆಶ್ಚರ್ಯವಾಗಿ ಈ ಸುಗಂಧದ ಹೂವು ಎಲ್ಲಿಂದ ಬರುತ್ತಿದೆ. ಯಾರು ಕೊಡುತ್ತಿದ್ದಾರೆ ಎಂದು ಯೋಚಿಸಿ ಪುನಃ ಶ್ರೀನಿವಾಸನಲ್ಲಿ ಕೈಮುಗಿದು ಸ್ವಾಮಿ ನನ್ನಿಂದಲೇ ಏನೋ ಲೋಪ ವಾಗಿದೆ ನಾನು ಮಾಡಿದ ಬಂಗಾರದ ಪುಷ್ಪಗಳ ಅರ್ಚನೆಗಳು ನಿರ್ಮಾಲ್ಯ ಸೇರಿದೆ. ಮಣ್ಣಿನ ಹೂಗಳು ನಿನ್ನ ಪಾದದ ಮೇಲೆ ಇರಲು ಬಲವಾದ ಕಾರಣ ಇರಬೇಕು, ದಯವಿಟ್ಟು ತಿಳಿಸು ಸ್ವಾಮಿ , ನನ್ನಿಂದ ಆದ ಅಪರಾಧವೇನು? ತಪ್ಪನ್ನು ಮನ್ನಿಸು ಎಂದು ಕೇಳಿದ. ಆಗ ಶ್ರೀನಿವಾಸ ಹೇಳಿದ ತೊಂಡಮಾನ್ ನಿನಗೆ ಬಂಗಾರದ ಹೂಗಳನ್ನು ಮಾಡಿಸಿ ಅರ್ಚನೆ ಮಾಡುವ ಶಕ್ತಿ ನಿನ್ನಂಥ ಚಕ್ರವರ್ತಿಗೆ ಮಾತ್ರ ಸಾಧ್ಯ ಎಂಬ ಗರ್ವ ನಿನ್ನ ಮನದಲ್ಲಿತ್ತು. ಅದಕ್ಕಾಗಿ ಈ ಘಟನೆ ನಡೆದಿದೆ. ನಿಜವಾದ ಭಕ್ತಿ ಎಂದರೆ ಏನು ಎಂದು ತಿಳಿಯಬೇಕಾದರೆ ಕುಂಬಾರ ಬಾಲಯ್ಯ (ಪೊಟಯ್ಯ) ಎಂಬುವನು ನಿಜವಾದ ಭಕ್ತ ಅವನು ತಾನೆ
ತಯಾರಿಸಿದ ಮಣ್ಣಿನ ಹೂಗಳನ್ನು ತಂದು ಅರ್ಪಿಸುತ್ತಾನೆ. ನೀನು ಹೋಗಿ ಅವನಿಂದ ತಿಳಿದುಕೋ ಎಂದನು.
ಚಕ್ರವರ್ತಿಗೆ ಶ್ರೀನಿವಾಸನ ಮಾತು ಮನಸ್ಸಿಗೆ ನಾಟಿತು. ನನ್ನ ಭಕ್ತಿಯಲ್ಲಿ ದೋಷ ನನಗೆ ಕಾಣದಂತೆ ಬಂದುಬಿಟ್ಟಿದೆ. ಕುಂಬಾರ ಬಾಲಯ್ಯ ನನ್ನು ಹುಡುಕಿ ತಿಳಿಯ ಬೇಕು ಎಂದು ಸಾಧಾರಣ ಮನುಷ್ಯನಂತೆ ರಸ್ತೆಯಲ್ಲಿ ನಡೆದೆ ಹೊರಟನು.
ಕುಂಬಾರನ ಮನೆ ಬಹಳ ದೂರವಿತ್ತು ನಡೆದು ನಡೆದು ಸುಸ್ತಾಗಿ ಕುಂಬಾರ ಬಾಲಯ್ಯನ ಮನೆ ಮುಂದೆಯೇ ತೊಂಡಮಾನ ಚಕ್ರವರ್ತಿ ಆಯಾಸದಿಂದ ತಲೆ ಸುತ್ತಿಬಂದು ಬಿದ್ದು ಬಿಟ್ಟನು. ಕುಂಬಾರ ಬಾಲಯ್ಯ ಚಕ್ರವರ್ತಿಯನ್ನು ಎಬ್ಬಿಸಿ ಶೈತ್ಯೋಪಚಾರ ಮಾಡಿ ಉಪಚರಿಸಿದಾಗ ಅವರ ಆಯಾಸ ಕಡಿಮೆಯಾಯಿತು ಆಗ ಅಲ್ಲಿಗೆ ಸಾಕ್ಷಾತ್ ಶ್ರೀನಿವಾಸನೆ ಬಂದು ನಿಂತು ಕುಂಂಬಾರ ಬಾಲಯ್ಯನಿಗೆ
ಹಾಗೂ ತೊಂಡಮಾನ ಚಕ್ರವರ್ತಿಗೆ ದರ್ಶನ ಕೊಟ್ಟನು. ಈ ಕಥೆಯನ್ನು ಬರಹ ರೂಪಕ್ಕೆ ತಂದವರು — ಆಶಾ ನಾಗಭೂಷಣ.ತೊಂಡಮಾನನಿಗೆ ಹೇಳುತ್ತಾ ಇವನೇ ನನ್ನ ನಿಜವಾದ ಭಕ್ತ ಕುಂಬಾರ ಬಾಲಯ್ಯ. ಭಕ್ತಿಯಿಂದ ಮಣ್ಣಿನ ಹೂವುಗಳನ್ನು ಮಾಡಿ ಅರ್ಪಿಸುತ್ತಾನೆ. ಇವನ ಭಕ್ತಿಗೆ ನಾನು ಸೋತು ಹೋದೆ. ಅದರಿಂದಲೇ ಆ ಭಕ್ತಿಯ ಹೂಗಳು ನನ್ನ ಪಾದದ ಬುಡದಲ್ಲಿ ಇರುತ್ತಿತ್ತು ನೀನು ಕೊಟ್ಟ ಬಂಗಾರದ ಹೂವು ನಿರ್ಮಾಲ್ಯದ ಜೊತೆ ಹೋಗುತ್ತಿತ್ತು. ಎಂದು ಭಗವಂತ ನುಡಿದನು.
ಕುಂಬಾರ ಬಾಲಯ್ಯನಿಗೆ ಇವೆಲ್ಲವೂ ಕನಸಿನಂತೆ ಕಂಡಿತು. ಸಾಕ್ಷಾತ ಶ್ರೀನಿವಾಸನೆ ದರ್ಶನ ಕೊಟ್ಟಿದ್ದಾನೆ ಅಂದಮೇಲೆ ಅವನ ಆನಂದಕ್ಕೆ ಪಾರವೇ ಇರಲಿಲ್ಲ. ಅವನಿಗೆ ಏನು ಮಾಡಬೇಕು, ತನ್ನ ಮನೆಗೆ ಸಾಕ್ಷಾತ್ ಭಗವಂತನೇ ಬಂದಿದ್ದಾನೆ ಅತಿಥಿ
ಸತ್ಕಾರದಲ್ಲಿ ನಾನು ಏನು ಅವನಿಗೆ ಕೊಡಲಿ ಎಂದು ತಿಳಿಯಲಿಲ್ಲವಂತೆ ತಕ್ಷಣವೇ ಅಲ್ಲೇ ಮೂಲೆಯಲ್ಲಿದ್ದ ಒಡೆದ ಮಣ್ಣಿನ ಕುಡಿಕೆಯನ್ನೇ ತೊಳೆದು ಅನ್ನಕ್ಕೆ ಮೊಸರು ಹಾಕಿ ಕಲಸಿ ಅದನ್ನೇ ಒಡೆದ ಮಣ್ಣಿನ ಕುಡಿಕೆಗೆ ಹಾಕಿ ತಂದು ಭಗವಂತನಿಗೆ ಅರ್ಪಿಸಿದ. ಶ್ರೀನಿವಾಸ ಆ ಮೊಸರನ್ನ ಹಾಕಿದ್ದ ಒಡೆದ ಮಡಿಕೆಯಲ್ಲೇ ಕೈಹಾಕಿ ಮೊಸರನ್ನದ ತುತ್ತನ್ನು ಸಂತೋಷವಾಗಿ ತಿಂದು ತೃಪ್ತಿಯಾಗಿ ತೇಗಿದನಂತೆ. ಅಂದಿ ನಿಂದ ಶ್ರೀನಿವಾಸನಿಗೆ ಮೊದಲ ಹಾಗೂ ಮುಂಜಾನೆಯ ನೈವೇದ್ಯ ಮಾಡುವುದು ಕುಂಬಾರ ಬಾಲಯ್ಯ ಕೊಟ್ಟ ಮಡಿಕೆಯಂತೆ. ಅಂದರೆ ಒಡೆದ ಮಡಿಕೆಯಲ್ಲಿ ಮೊಸರನ್ನದ ನೈವೇದ್ಯ ಅರ್ಪಿಸುತ್ತಾರಂತೆ.
ತೊಂಡಮಾನ ಚಕ್ರವರ್ತಿಗೆ ಕುಂಬಾರನ ಭಕ್ತಿಯ ಅರಿವಾಯಿತು. ಇನ್ನು ಮುಂದೆ ಪ್ರತಿನಿತ್ಯವೂ ಶ್ರೀನಿವಾಸನಿಗೆ ಮುಂಜಾನೆಯ ಮೊದಲ ನೈವೇದ್ಯ ಒಡೆದ ಮಡಿಕೆ ಯಲ್ಲಿ ಹಾಕಿದ ಮೊಸರನ್ನ ನೈವೇದ್ಯ ಮಾಡಿ ಭಕ್ತರಿಗೂ ಅದನ್ನೇ ಪ್ರಸಾದ ಕೊಡು ವುದು ಎಂಬ ಶಾಸನವನ್ನು ಜಾರಿಗೆ ತಂದನಂತೆ.( ಪುರಿ ಜಗನ್ನಾಥನ ಭಕ್ತಳಾದ ಕರ್ಮಭಾಯಿ, ಹೆಸರುಬೇಳೆ- ಅಕ್ಕಿ -ಬೆಲ್ಲ- ತುಪ್ಪ ಹಾಕಿ ಮಾಡಿದ ಕಿಚಡಿ ತಿನ್ನಲು ಬೆಳಗಿನ ಜಾವವೇ ಭಗವಂತ ಕರ್ಮಭಾಯಿ ಮನೆಗೆ ಬರುತ್ತಿದ್ದ. ಆಕೆಯ ಮರಣದ ನಂತರ ಜಗನ್ನಾಥನ ಅಭಿಷೇಕದ ಮೊದಲ ನೈವೇದ್ಯ ಸಿಹಿಯಾದ ಕಿಚಡಿ ಆಗಲಿ ಎಂಬ ಜಗನ್ನಾಥನ ಇಚ್ಛೆಯಂತೆ ರಾಜನು ಅದೇ ಪದ್ಧತಿಯನ್ನು ರೂಢಿಗೆ ತಂದನು.) ಇಂದಿಗೂ ತಿರುಪತಿಯಲ್ಲಿ ನಿತ್ಯವೂ ಶ್ರೀನಿವಾಸನಿಗೆ ಮೊದಲ ನೈವೇದ್ಯ ಒಡೆದ ಮಡಿಕೆ ಯಲ್ಲಿ ಮೊಸರನ್ನ ಮಾಡುವ ಪದ್ಧತಿ ನಡೆಯುತ್ತಿದೆ. ಕುಂಬಾರನ ಭಕ್ತಿ ಎಂದೆಂದಿಗೂ ಅಚ್ಚಳಿಯದೆ ಉಳಿಯಬೇಕು ಎನ್ನುವುದೇ ತೊಂಡಮಾನ ಚಕ್ರ ವರ್ತಿಯ ಆಶಯವಾಗಿ ಅದನ್ನು ಶಾಸನವನ್ನಾಗಿ ಮಾಡಿದ.
ತೋಂಡಮಾನ ತಾನು ಚಕ್ರವರ್ತಿ ಎಂಬ ಭಾವದಲ್ಲಿ, ಭಕ್ತಿ ಮತ್ತು ಪ್ರೀತಿಯಿಂದ ಅಮೂಲ್ಯವಾದ ಸ್ವರ್ಣ ಹೂಗಳ ಹಾರವನ್ನು ಅರ್ಪಿಸಿದಾಗ ಸುಮ್ಮನಿದ್ದ
ಶ್ರೀನಿವಾಸ, ಬಡ ಕುಂಬಾರ ಮಣ್ಣಿನಿಂದ ಮಾಡಿದ ಹೂಗಳನ್ನು ಅರ್ಪಿಸಿದಾಗ ಅದನ್ನು ಸ್ವೀಕರಿಸಿ ಮಣ್ಣಿನ ಹೂವುಗಳಿಗೆ ಸುಗಂಧವನ್ನು ಕೊಟ್ಟು, ತೋಂಡಮಾನ ಭಗವಂತನ ನಿಷ್ಠಾವಂತ ಭಕ್ತನಾದರೂ ತಾನು ದೊಡ್ಡ ಚಕ್ರವರ್ತಿ ಚಿನ್ನದ ಹೂವು ಗಳನ್ನು ಭಗವಂತನಿಗೆ ಕೊಡುವ ಶಕ್ತಿ ತನಗೆ ಮಾತ್ರ ಇದೆ ಎಂಬ ಸಣ್ಣ ಅಹಂಕಾರದ ಒಂದು ಎಳೆ ಗೊತ್ತಿದ್ದು ಗೊತ್ತಿಲ್ಲದಂತೆ ನುಸುಳಿತ್ತು. ಆದರೆ ಭಗವಂತನಿಗೆ ಬೇಕಾದ್ದು ಕುಂಬಾರನಲ್ಲಿದ್ದ ಪ್ರೀತಿ, ಭಕ್ತಿ, ಶ್ರಮ ಮತ್ತು ನಿಷ್ಠೆ. ಇದಕ್ಕಾಗಿ ಭಗವಂತ ಅವನಿಗೆ ಸ್ಪಂದಿಸಿದ. ತೋಂಡಮಾನನ ಭಕ್ತಿಯೊಳಗೆ ಆತ್ಮ ಗರ್ವವು ಇರುವುದನ್ನು ಅವನಿಗೆ ತಿಳಿಸ ಲೆಂದೇ ಕುಂಬಾರನ ಮನೆಯಲ್ಲಿ ಪ್ರತ್ಯಕ್ಷನಾದ ಭಗವಂತ, ಪ್ರೀತಿ ಮತ್ತು ಭಕ್ತಿಯಿಂದ ಒಡೆದ ಮಡಿಕೆಯಲ್ಲಿ ಕುಂಬಾರ ತಂದುಕೊಟ್ಟ ಮೊಸರನ್ನವನ್ನು ಭೂರಿ ಭೋಜನ ದಂತೆ ಸವಿದನು. ಆಡಂಬರದ ಚಿನ್ನಕ್ಕಿಂತಲೂ ಭಕ್ತಿಯ ಪರಿಮ ಳವೆ ಹೆಚ್ಚು ಎಂಬುದನ್ನು ತೋಂಡಮಾದ ಚಕ್ರವರ್ತಿಗೆ ಭಗವಂತ ಈ ಮೂಲಕ ತೋರಿಸಿಕೊಟ್ಟನು.
ವೆಂಕಟೇಶೋ ವಾಸುದೇವ:
ಪ್ರದ್ಯುಮ್ನೋ ಅಮಿತ ವಿಕ್ರಮ:
ಸಂಕರ್ಷಣೋ ಅನಿರುದ್ಧಶ್ಚ
ಶೇಷಾದ್ರಿ ಪತಿರೇವ ಚ!!
ಜನಾರ್ಧನ: ಪದ್ಮನಾಭೋ
ವೆಂಕಟಾಚಲ ವಾಸನ:
ಸೃಷ್ಟಿಕರ್ತಾ ಜಗನ್ನಾಥೋ
ಮಾಧವೋ ಭಕ್ತ ವತ್ಸಲ:
ಗೋವಿಂದೋ ಗೋಪತಿ: ಕೃಷ್ಣ:
ಕೇಶವೋ ಗರುಡಧ್ವಜ:
ವರಾಹೋ ವಾಮನಶ್ಚೈವ
ನಾರಾಯಣ ಅಧೋಕ್ಷಜ:
ಕಲ್ಯಾಣಾಧ್ಬುತಗಾತ್ರಾಯ
ಕಾಮಿತಾರ್ಥ ಪ್ರದಾಯಿನೇ|
ಶ್ರೀ ಮದ್ವೇಂಕಟನಾಥಾಯ
ಶ್ರೀನಿವಾಸಾಯ ಮಂಗಳಂ||
ವೆಂಕಟಾದ್ರಿಸಮಂ ಸ್ಥಾನಂ
ಬ್ರಹ್ಮಾಂಡೇ ನಾಸ್ತಿ ಕಿಂಚನ|
ವೆಂಕಟೇಶ ಸಮೋದೇವೋ
ನ ಭೂತೋ ನ ಭವಿಷ್ಯತಿ|
ಏತೇನ ಸತ್ಯ ವಾಕ್ಯೇನ
ಸರ್ವಾರ್ಥಾನ್
ಸಾಧಯಾಮ್ಯಹಂ!!
ವಂದನೆಗಳೊಂದಿಗೆ,
ಬರಹ: ©ಆಶಾ ನಾಗಭೂಷಣ — ಹಕ್ಕುಗಳು ಸಂರಕ್ಷಿತ


