ಮದ್ರ ದೇಶದ ಸೇನಾ ದಂಡನಾಯಕ :-
ಮಹಾಭಾರರತದ ಶಲ್ಯ ಮದ್ರ ದೇಶದ ಮಹಾರಾಜ. ಮದ್ರ ದೇಶ ಇಂದಿನ ಪಂಜಾಬ್ ಭಾಗದಲ್ಲಿದೆ ಎನ್ನುತ್ತಾರೆ. ಮಹಾಭಾರತದ ನಾಯಕರಲ್ಲಿ ಪ್ರಮುಖ ಪಾತ್ರಧಾರಿ. ಶಲ್ಯನ ತಂದೆ ಮದ್ರ ದೇಶ ಅಥವಾ ಬಾಹ್ಲಿಕಾ ಬಣದ ‘ಕೃತಾಯನ’ ಮಹಾರಾಜ. ದೇಹ ಬಲ ಮತ್ತು ಪರಾಕ್ರಮದಲ್ಲಿ ಶಲ್ಯನನ್ನು ಮೀರಿಸುವವರಿಲ್ಲ, ಮಹಾವೀರ- ಬುದ್ಧಿವಂತ- ಅಷ್ಟೇ ಅಹಂಕಾರಿ, ಅವಸರದಿಂದ ಆಡಿದ ಮಾತಿಗೆ ಸಿಕ್ಕಿಕೊಳ್ಳುವ ಪರಿಸ್ಥಿತಿಗೆ ಒಳ್ಳೆ ಉದಾಹರಣೆ ಎಂದರೆ, ಕುರುಕ್ಷೇತ್ರ ಯುದ್ಧದಲ್ಲಿ ಶಲ್ಯನು ತನ್ನ ಸೋದರಳಿಯರಾದ ನಕುಲ- ಸಹದೇವರ ಮೇಲೆ ಅಪಾರ ಪ್ರೀತಿ ಇದ್ದ ಕಾರಣ ಕುರುಕ್ಷೇತ್ರ ಯುದ್ಧದಲ್ಲಿ ಪಾಂಡವರ ಪರವಾಗಿ ಯುದ್ಧ ಮಾಡಿ ಪಾಂಡವರಿಗೆ ಸಹಾಯ ಮಾಡಲು ನಿರ್ಧರಿಸಿ ತನ್ನ ಒಂದು ಅಕ್ಷೋಹಿಣಿ ಸೈನ್ಯ ದೊಡನೆ ಹೊರಟು ಬರುತ್ತಿದ್ದ ವಿಷಯ ಮುಂಚಿತವಾಗಿಯೇ ತಿಳಿದ ದುರ್ಯೋಧನ ಅವರು ಬರುವ ಮಾರ್ಗ ಮಧ್ಯದಲ್ಲಿ ಶಲ್ಯ ಮಹಾರಾಜನಿಗೆ ಮತ್ತು ಅವನ ಸೈನ್ಯಕ್ಕೆ ವಿಶೇಷ ಆತಿಥ್ಯದ ವ್ಯವಸ್ಥೆಯನ್ನು ಮಾಡಿದ್ದನು. ಶಲ್ಯ ಇದನ್ನೆಲ್ಲಾ ಪಾಂಡವರು ಮಾಡಿದ್ದಾರೆ ಎಂದೇ ತಪ್ಪಾಗಿ ತಿಳಿದು ಅವಸರದಲ್ಲಿ “ಆತಿಥ್ಯ ಮಾಡಿದವರಿಗೆ ಕೇಳಿದುದನ್ನು ಕೊಡುತ್ತೇನೆ” ಎಂದು ಘೋಷಿಸುತ್ತಾನೆ. ಆಗ ಎದುರಿಗೆ ಬಂದ ದುರ್ಯೋಧನ ತಾನೇ ಈ ವ್ಯವಸ್ಥೆ ಮಾಡಿದ್ದು ಎಂದೂ ಹಾಗೂ ತನ್ನ ಪಕ್ಷವನ್ನು ಸೇರುವಂತೆ ಕೇಳಿಕೊಳ್ಳುತ್ತಾನೆ ಅವಸರದಿಂದ ಆಡಿದ ಮಾತಿಗೆ ಸಿಲುಕಿದ ಶಲ್ಯ ಕೌರವರ ಪರವಾಗಿ ಯುದ್ಧ ಮಾಡಲು ಒಪ್ಪಿಕೊಂಡನು. ಆದರೂ ಅವನ ಒಳ ಮನಸ್ಸಿನಲ್ಲಿ ಪಾಂಡವರ ಮೇಲೆಯೇ ವಿಶ್ವಾಸವಿತ್ತು.
ಮದ್ರ ದೇಶಾಧಿಪತಿ ಶಲ್ಯ ಪಾಂಡವರಿಗೆ ಸೋದರ ಮಾವ. ಶಲ್ಯ ಸ್ವಭಾವತಃ ಸತ್ಯವಂತ- ದಾನಶೂರ. ಅವನ ತಲೆಯಲ್ಲಿ ಯುದ್ಧಕ್ಕೆ ಸಂಬಂಧ ಪಟ್ಟಂತೆ ಅಂತ ಯೋಚನೆ ಇರಲಿಲ್ಲ. ಪಾಂಡವರು ಸಹಜವಾಗಿ ಯುದ್ಧದಲ್ಲಿ ಶಲ್ಯನ ಸಹಾಯ
ಬಯಸಿದರು. ಅದರಂತೆ ಪಾಂಡವರ ಕಡೆ ತನ್ನ ಅಕ್ಷೋಹಿಣಿ ಸೈನ್ಯದೊಡನೆ
ಹೊರಟು, ಪಾಂಡವರ ಪಾಳಯ ಸೇರುವುದಕ್ಕೆ ಕಾತರನಾಗಿದ್ದನು. ಆದರೆ ಮಾರ್ಗ ಮಧ್ಯದಲ್ಲಿ ದುರ್ಯೋಧನನ ಕುತಂತ್ರಕ್ಕೆ ಸಿಕ್ಕಿಕೊಂಡ. ಆದರೆ ಕೊನೆವರೆಗೂ ಇವನ ಮನಸ್ಸಿನಲ್ಲಿ ತಾನು ಮಾಡಿದ್ದು ಸರಿ ಅಥವಾ ತಪ್ಪೇ ಎಂಬ ಮಂಥನ ನಡೆದೇ ಇತ್ತು.
ಅಂದು ಶಲ್ಯನಿಗೆ ಅನಿರೀಕ್ಷಿತವಾಗಿ ಯುದ್ಧ ಬಿಡಾರದೊಳಗೆ ಕುರು ಸಾರ್ವಭೌಮ ದುರ್ಯೋಧನನ ಪ್ರವೇಶವಾಯಿತು, ಹಾಗೆ ಚತುಷ್ಟಯರಾದ ದುಶ್ಯಾಸನ, ಕರ್ಣ, ಶಕುನಿ, ಇವರು ಜೊತೆಯಲ್ಲಿದ್ದರು. ಇವರೆಲ್ಲರನ್ನು ನೋಡಿ ಶಲ್ಯನ ಮನಸ್ಸಿನಲ್ಲಿ ನೂರಾರು ಯೋಚನೆಗಳು ಹಾದು ಹೋದವು. ಆದರೆ ಕ್ಷಣದಲ್ಲೇ ಮನಸ್ಸಿಗೆ ಖುಷಿ ಕೊಡುವಂತ, ಹಾಗೂ ಒಪ್ಪುವಂಥ ದುರ್ಯೋಧನನ ಪ್ರೀತಿಯ ಮಾತುಗಳು ಶಲ್ಯನನ್ನೇ ಕ್ಷಣಕಾಲ ಮರಳು ಮಾಡಿತು. “ಮದ್ರ ದೇಶದ ರಾಜರೇ, ನಮ್ಮ ಅತಿಥ್ಯ ದಲ್ಲಿ ನಿಮಗೆ ಏನಾದರೂ ದೋಷವೇನಾದರೂ ಆಗಿದ್ದರೆ ಕ್ಷಮಿಸಿ”. ಇಂಥ ಸುಯೋದನನ ಮಾತುಗಳು ವೀರ ಶಲ್ಯನ ಹೃದಯವನ್ನೆ ಕರಗಿಸಿತು. ಇವನು ಹಸ್ತಿನಾಪುರದ ಸಾರ್ವಭೌಮನೇ? ಅದೆಂಥ ವಿನಯ- ನಮ್ರತೆ ತೋರುತ್ತಿದ್ದಾನೆ ಎಂದರೆ, ಹಾಗಾದರೆ ಇದುವರೆಗೂ ದುರ್ಯೋಧನನ ಬಗ್ಗೆ ನಾನು ತಿಳಿದು ಕೊಂಡಿದ್ದು ತಪ್ಪೇ? ಅಥವಾ ಇದು ಭ್ರಮೆಯೇ? ಗೊಂದಲದಲ್ಲಿ ಮುಳುಗಿದ ಹಾಗಿದ್ದರೆ ನನ್ನ ಅಳಿಯಂದಿರಾದ ಪಾಂಡವರು ದುರಹಂಕಾರಿಗಳೇ? ದುರ್ಯೋಧ ನ ವಿನಯ ನಮ್ರತೆ, ಕೊಡುವ ಗೌರವ ಇವುಗಳೆಲ್ಲಿ, ಆ ಪಾಂಡವರ ಬಿಗುಮಾನ- ದುರಹಂಕಾರ- ಪ್ರತಿಷ್ಠೆಗಳೆಲ್ಲಿ. ಪಾಂಡವರು ಅವನೊಂದಿಗೆ ನಡೆದುಕೊಂಡ ಪ್ರತಿಯೊಂದು ಒಂದೊಂದಾಗಿ ಶಲ್ಯನ ಸ್ಮೃತಿ ಪಟಲದಲ್ಲಿ ಹಾದು ಹೋಯಿತು.
ದುರ್ಯೋಧನನ ವಿನಯದ ಮುಂದೆ, ಪಾಂಡು ಕುಮಾರರ ಅಹಂಕಾರವೇ ಜಾಸ್ತಿ ಎನಿಸಿತು. ಹಾಗೆ ಆಗ ನಡೆದ ಎಲ್ಲವೂ ಶಲ್ಯನ ಕಣ್ಣ ಮುಂದೆ ಕಟ್ಟಿದಂತಿದೆ. ಖಾಂಡ ವ ಪ್ರಸ್ತವನ್ನು ಇಂದ್ರಪ್ರಸ್ಥವನ್ನಾಗಿ ಮಾಡಿ ರಾಜಸೂಯಯಾಗಕ್ಕೆ, ಆಹ್ವಾನ ಕೊಟ್ಟು ಕಪ್ಪ ಕಾಣಿಕೆ ಪಡೆದು ಬರಲು ಧರ್ಮ ರಾಜನ ತಮ್ಮಂದಿರು ದೇಶ ಪರ್ಯ ಟನೆಗೆ ಹೊರಟರು. ಮದ್ರ ದೇಶಕ್ಕೆ ಆಹ್ವಾನ ಕೊಡಲು ಬಂದ ‘ನಕುಲ’ನ ವರ್ತನೆಯಲ್ಲಿ ಅಹಂಕಾರ, ಗತ್ತು, ದೊಡ್ಡಸ್ತಿಕೆ, ತಾನೇನೋ ಸಾಧಿಸಿದ್ಧೇನೆ ಎಂಬ ಅಹಂ ಎದ್ದು ಕಾಣುತ್ತಿತ್ತು. ಪಾಪ ಏನೋ ತಾಯಿ ಇಲ್ಲದ ತಬ್ಬಲಿ ಮಕ್ಕಳು ಎಂದು ತಿಳಿದು
ಕೊಂಡಿದ್ದ ಶಲ್ಯನಿಗೆ ಪಾಂಡು ಮಕ್ಕಳ ಬಗ್ಗೆ ಸ್ವಲ್ಪ ಸಹಾನುಭೂತಿ ಅನುಕಂಪ ಇತ್ತು.
ಹಾಗೆ ಶಲ್ಯ ಏನು ಕಡಿಮೆಯಲ್ಲ, ಪಾಂಡು ಮಕ್ಕಳ ಬಗ್ಗೆ ಅಯ್ಯೋ ಪಾಪ ನ್ಯಾಯ ನೀತಿ ಧರ್ಮ ಅಂತ ಕಷ್ಟಪಡುತ್ತವೆ ಎಂಬ ತಾತ್ಸಾರ ಭಾವ ಅವನ ಮನಸ್ಸಿನಲ್ಲಿ ಮಡುಗಟ್ಟಿತ್ತು. ಈಗ ಬಂದಿರುವ ನಕುಲನನ್ನು ನೋಡಿದರೆ ಅದೇನು ರಾಜನ ಗತ್ತು ಗಾಂಭೀರ್ಯ ಬಂದಿತ್ತು. ಅಲ್ಲಿಗೆ ಬಂದರೂ, ಸೋದರ ಮಾವ ಎಂದು ಲೆಕ್ಕಿಸದೆ ಬೇರೆ ಎಲ್ಲಾ ರಾಜರು ಮಾತನಾಡಿದಷ್ಟೇ ದಾಷ್ಟ್ಯದಿಂದ ಮಾತನಾಡಿಸಿದ್ದ.
ಹಾಗೆ ಶಲ್ಯನಿಗೆ ಮತ್ತೊಂದು ನೆನಪು ಬಂದಿತು. ತಂಗಿ ಮಾದ್ರಿ ಪಾಂಡುವಿನ ಎರಡನೇ ಪತ್ನಿಯಾಗಿ ಕಾಲಿಟ್ಟ ನನ್ನ ಸಹೋದರಿ, ಯಾವತ್ತೂ ಸುಖ- ಸಂತೋಷ ಕಾಣಲಿಲ್ಲ. ಇದಾದ ಮೇಲೆ ಪಾಂಡು ಅವನಾಗೆ ಎಡವಟ್ಟು ಮಾಡಿಕೊಂಡ ತಪ್ಪಿಗೆ ಅವನ ಜೊತೆ ನನ್ನ ತಂಗಿ ಮಾದ್ರಿಯೂ ವನವಾಸಕ್ಕೆ ಹೋಗಬೇಕಾಯಿತು. ಅರಮನೆಯ ಸುಖದ ಸುಪ್ಪತ್ತಿಗೆಯಲ್ಲಿ ಇರಬೇಕಾದ ರಾಜಕುಮಾರಿಯನ್ನು ಪಾಂಡು ವನವಾಸ ಮಾಡಿಸಿದ, ಗಂಡನ ಜೊತೆಯಲ್ಲೂ ನೆಮ್ಮದಿ ಇಲ್ಲ. ಪಾಂಡು ತನ್ನ ಅವಿವೇಕದಿಂದ ಕೊಟ್ಟಿದ್ದ ಶಾಪವನ್ನು ಮರೆತು ಸ್ತ್ರೀ ಸಂಗ ಬಯಸಿ ಪಾಂಡು ಸಾವು ತಂದುಕೊಂಡರೆ, ಅದಕ್ಕೆ ಮಾದ್ರಿ ಕಾರಣ ಎಂದು ಅಪವಾದ ಹೊರಿಸಿ, ಹಿರಿಯ ಪತ್ನಿ ಸಹಗಮನ ಮಾಡಬೇಕಾದ ಜಾಗದಲ್ಲಿ ತನ್ನ ತಂಗಿಯನ್ನು ಸಹಗಮನ ಮಾಡಿಕೊಳ್ಳಲು ತಳ್ಳಿದರು. ಇಂಥ ಪಾಂಡವರಿಗೆ, ನಾನು ತಂಗಿಯ ಮಕ್ಕಳೆಂದು ಸಹಾಯಕ್ಕೆ ಹೋಗಬೇಕೋ ಅಥವಾ ಸಂಪನ್ನವುಳ್ಳ ದುರ್ಯೋಧನನ ಕಡೆ ಹೋಗಬೇಕು ಎಂಬ ಹೊಯ್ದಾಟದಲ್ಲಿ ಬಿದ್ದಿದ್ದ. ನಿಜವಾಗಿಯೂ ನೋಡಿದರೆ ಶಲ್ಯನಂಥ ಬಲಶಾಲಿ ಯಾರು ಇಲ್ಲ. ಇವನಿಗೆ ಸರಿಗಟ್ಟಿ ಹೋರಾಡಿ ಶಲ್ಯನನ್ನೇ ಸೋಲಿಸಬಲ್ಲ ವೀರರು ಎಂದರೆ, ಕೃಷ್ಣ- ಬಲರಾಮ- ಕರ್ಣ ಮತ್ತು ದುರ್ಯೋಧನ ಮಾತ್ರ. ಇನ್ನಾರಿಂದಲೂ ಶಲ್ಯನನ್ನು ಸೋಲಿಸಲು ಸಾಧ್ಯವಿರಲಿಲ್ಲ.
ಅಂಥ ಶಲ್ಯ ಅನಿವಾರ್ಯಕ್ಕೋ, ಆತುರಗಾರನಿಗೆ ಬುದ್ಧಿಮಟ್ಟ ಎಂಬ ಕಾರಣಕ್ಕೋ
ಜನಜನಿತವಾಗಿ ಕೆಟ್ಟವನಾದ ದುರ್ಯೋಧನನ ಕುತಂತ್ರಕ್ಕೆ ಸಿಲುಕಿ ಅರೆ ಬರೆ ಮನಸ್ಸಿನಿಂದ ಕೌರವರ ಪರ ಯುದ್ಧ ಮಾಡಿದರೂ, ಉತ್ತರ ಕುಮಾರ ಸೇರಿದಂತೆ ಹಲವಾರು ವೀರರನ್ನು ಕೊಲ್ಲುತ್ತಾನೆ. 17ನೇ ದಿನದ ಯುದ್ಧದಲ್ಲಿ ಶಲ್ಯನು ಕರ್ಣ ನಿಗೆ ಸಾರಥಿಯಾಗಿ ನಿಂತನು. ಶಲ್ಯ ಯುದ್ಧದಲ್ಲಿ ಕರ್ಣನ ಮನೋಬಲ ಕುಗ್ಗಿಸು ವಂತೆ ಮಾತಾಡುತ್ತಿದ್ದನು ಮತ್ತು ಅರ್ಜುನನ ಶೌರ್ಯವನ್ನು ಹೊಗಳಿ ಕರ್ಣನನ್ನು ಪರೋಕ್ಷವಾಗಿ ಹತಾಶಗೊಳಿಸುತ್ತಿದ್ದನು. ಇದು ಎಷ್ಟು ಎಂದರೆ ಕರ್ಣನ ಆತ್ಮವಿಶ್ವಾ ಸ ಕುಂದಿತಂತೆ. ಮಹಾಭಾರತದಲ್ಲಿ ಈ ಕುರಿತು ಉಲ್ಲೇಖವಿದೆ. ಕರ್ಣನಿಗೆ ಸಾರಥಿಯಾಗಿದ್ದನು. ಆದರೆ ಕರ್ಣನನ್ನು ಹೀಯಾಳಿಸಿ- ಅವಮಾನವಾಗುವ ಮಾತನಾಡಿ, ಅವನ ಮಾನಸಿಕ ಧೈರ್ಯ ಮತ್ತು ಆತ್ಮವಿಶ್ವಾಸ ಕುಗ್ಗುವಂತೆ ಮಾಡಿದನು. ಕರ್ಣನ ಮರಣದ ನಂತರ ಶಲ್ಯನು ಕೌರವ ಸೇನೆಯ ಮುಖ್ಯ ಸೇನಾಧಿಪತಿಯಾದನು ಸೇನಾಧಿಪತಿ ಪಟ್ಟ ಸಿಕ್ಕಾಗ ಅರ್ಧ ದಿನ ಹೋರಾಟ ಮಾಡಿದನು. 18ನೇ ದಿನ ಯುಧಿಷ್ಠಿರನೇ ಶಲ್ಯನನ್ನು ಯುದ್ಧದಲ್ಲಿ ಸಂಹರಿಸಿದನು ಶಲ್ಯ ಧರ್ಮರಾಜನಿಂದ ಹತನಾದನು. ಯುಧಿಷ್ಠಿರನು. ಸಾಮಾನ್ಯವಾಗಿ ಶಾಂತ ಸ್ವಭಾವಿ ಆದರೆ ಆ ದಿನ ಧರ್ಮಕ್ಕಾಗಿ ಶಲ್ಯನನ್ನು ಸಂಹರಿಸಿದನು.
ಶಲ್ಯನ ಗುಣ ಧರ್ಮಗಳು:- ಶೂರ ಮತ್ತು ಮಹಾರಥಿ ಆದಿತ್ಯಪ್ರಿಯ ಮಾತಿನ ಮೌಲ್ಯ ಕಾಪಾಡುವವನು ಅವನ ಮನಸ್ಸು ನಲ್ಲಿ ಪಾಂಡವರ ಕಡೆ ಪ್ರೀತಿ ಇಟ್ಟುಕೊಂಡ ದ್ವಂದ್ವ ಭಾವ ಇತ್ತು. ಶಲ್ಯನಿಗೆ ರತಕಲ್ಪ ಮತ್ತು ಅಶ್ವ ಹೃದಯ ವಿದ್ಯೆ ತಿಳಿದಿತ್ತು. ‘ರತಕಲ್ಪ’ ಅಂದರೆ ಯುದ್ಧ ರಥದ ಸಂಪೂರ್ಣ ಜ್ಞಾನ ತಿಳಿದಿರುವುದು. ಯುದ್ಧಕ್ಕೆ ಯೋಗ್ಯವಾದ ರಥವನ್ನು ನಿರ್ಮಿಸುವುದು ಚಕ್ರ- ಅಕ್ಷ- ಧುರಿ- ಧ್ವಜ ಇತ್ಯಾದಿ ಭಾಗಗಳನ್ನು ಸರಿಯಾಗಿ ಜೋಡಿಸುವುದು. ಮತ್ತು ರಥವನ್ನು ಸಮ ತೋಲನದಲ್ಲಿ ಓಡಿಸುವ ತಂತ್ರ. ಯುದ್ಧ ಸಮಯದಲ್ಲಿ ರಥದ ದಿಕ್ಕು ವೇಗ ತಿರುಗಾಟ ನಿಯಂತ್ರಿಸುವುದು ಯೋಧನ ಸುರಕ್ಷತೆ ಕಾಪಾಡುವುದು ಒಟ್ಟಾರೆ ರಥಕಲ್ಪ ಎಂದರೆ ರಥವನ್ನು ಸಮರ್ಥವಾಗಿ ಬಳಸುವ ವಿದ್ಯೆ ಅಶ್ವ ಹೃದಯ: ಕುದುರೆಗಳ ಮನಸ್ಸು ಮತ್ತು ದೇಹ ಎರಡನ್ನೂ ಅರ್ಥ ಮಾಡಿ ಕೊಳ್ಳುವ ವಿದ್ಯೆ.
ಇಂಥ ಮಹಾವೀರ ಅತ್ಯಂತ ಬುದ್ಧಿವಂತ ಚಾಣಕ್ಯ ಆಗಿದ್ದರೂ ಯಾವುದೋ ದುರ್ಬಲತೆಗೆ ಒಳಗಾಗಿ ಸೋಲಬೇಕಾಗುತ್ತದೆ ಶಲ್ಯನ ಜೀವನದಲ್ಲಿ ದುರ್ಯೋಧನ ಪರ ಯುದ್ಧ ಮಾಡಿದ್ದೆ ಅವನ ಪ್ರಮುಖ ದೌರ್ಬಲ್ಯವಾಯಿತು.
❤️🙏🌷 ವಿಮಲ್ ನ್ಯೂಟ್ರಿಷನ್ ಸೆಂಟರ್ 🌷🙏❤️ #😍 ನನ್ನ ಸ್ಟೇಟಸ್ #✍️ ಮೋಟಿವೇಷನಲ್ ಕೋಟ್ಸ್ #👦🏻 Bad Boyz ಸ್ಟೇಟಸ್ #🎥 Motivational ಸ್ಟೇಟಸ್ #✍️ ಮೋಟಿವೇಷನಲ್ ಕೋಟ್ಸ್


