Anthoniraj
ShareChat
click to see wallet page
@anthoniraj4671
anthoniraj4671
Anthoniraj
@anthoniraj4671
ಐ ಲವ್ ಶೇರ್ ಚಾಟ್
🪅ಅಪರಿಚಿತರು ಮಾಡುವ ನೋವಿಗಿಂತ, ಸ್ವಂತದವರಿಂದ ಉಂಟಾಗುವ ನೋವು ಹೆಚ್ಚು🪅 ಒಬ್ಬ ಅಕ್ಕಸಾಲಿಗನ ಅಂಗಡಿಯ ಪಕ್ಕದಲ್ಲೇ ಒಬ್ಬ ಕಮ್ಮಾರನ ಕುಲುಮೆ ಇತ್ತು. ಅಕ್ಕಸಾಲಿಗನು ತನ್ನ ಅಂಗಡಿಯಲ್ಲಿ ಕೆಲಸ ಮಾಡುವಾಗ ತುಂಬಾ ಸಣ್ಣದಾದ ಶಬ್ದವು ಕೇಳಿಸುತ್ತಿತ್ತು. ಆದರೆ ಕಮ್ಮಾರನು ತನ್ನ ಕುಲುಮೆಯಲ್ಲಿ ಕೆಲಸ ಮಾಡುವಾಗ ಅಲ್ಲಿಂದ ಕಿವಿಯ ಒಳತಮಟೆಯು ಹರಿದೇ ಹೋಗುವುದೇನೋ ಎಂಬಷ್ಟು ಕರ್ಕಶವಾಗಿ ಶಬ್ದ ಬರುತ್ತಿತ್ತು. ಒಂದು ದಿನ ಅಕ್ಕಸಾಲಿಗನು ಕೆಲಸ ಮಾಡುವಾಗ ಚಿನ್ನದ ಒಂದು ತುಣುಕು ಸಿಡಿದು ಕಮ್ಮಾರನ ಕುಲುಮೆಗೆ ಬಿತ್ತು. ಅಲ್ಲಿ ಅದು ಒಂದು ಕಬ್ಬಿಣದ ತುಣುಕನ್ನು ಭೇಟಿಯಾಯಿತು. ಆಗ ಚಿನ್ನದ ತುಣುಕು ಕಬ್ಬಿಣದ ತುಣುಕಿಗೆ ಹೇಳಿತು ಸಹೋದರ, “ನಮ್ಮಿಬ್ಬರ ಕಷ್ಟವು, ದುಃಖವು ಸಮಾನವಾಗಿದೆ, ನಮ್ಮಿಬ್ಬರನ್ನೂ ಒಂದೇ ರೀತಿಯಲ್ಲಿ ಬೆಂಕಿಯಲ್ಲಿ ಚನ್ನಾಗಿ ಬಿಸಿಮಾಡುತ್ತಾರೆ, ಮತ್ತು ಸುತ್ತಿಗೆಯ ಏಟಿನ ಹೊಡೆತಗಳ ಚಿತ್ರಹಿಂಸೆಗಳನ್ನು ಅನುಭವಿಸಬೇಕಾಗುತ್ತದೆ. ಆದರೆ ನಾನು ನನ್ನ ನೋವುಗಳನ್ನು ಮೌನವಾಗಿ ಸಹಿಸುತ್ತೇನೆ, ಆದರೆ ನೀನು ತುಂಬಾ ಆಕ್ರಂದನ ಮಾಡುವೆ ಏಕೆ?” ಎಂದಿತು. ಅದಕ್ಕೆ ಕಬ್ಬಿಣದ ತುಂಡು ಹೇಳಿತು – “ನೀನು ಹೇಳಿದ್ದು ಸರಿ. ಆದರೆ ನಿನ್ನ ಮೇಲೆ ಏಟಿನ ಹೊಡೆತಗಳನ್ನು ಕೊಡುವ ಸುತ್ತಿಗೆಯು ನಿನ್ನ ಸ್ವಂತ ಸಹೋದರನಲ್ಲ. ಆದರೆ ನನಗೆ ಹೊಡೆಯುವ ದಪ್ಪ ಕಬ್ಬಿಣದ ಸುತ್ತಿಗೆಯು ನನ್ನ ನಿಜವಾದ ಸ್ವಂತ ಸಹೋದರ.” ಅದಕ್ಕೇ ನಾನು ಆಘಾತದಿಂದ ಕಿರುಚುತ್ತೇನೆ ಎಂದು ದುಃಖದಿಂದ ಉತ್ತರಿಸಿತು. ಸ್ವಲ್ಪಹೊತ್ತು ಸುಮ್ಮನಿದ್ದ ಕಬ್ಬಿಣದ ತುಂಡು ಮತ್ತೆ ಹೇಳಿತು – “ನಮ್ಮ ಸ್ವಂತದವರಿಂದ , ಪ್ರೀತಿಪಾತ್ರರಿಂದ ಉಂಟಾಗುವ ಗಾಯದ ನೋವು, ಅಪರಿಚಿತರು ಮಾಡುವ ನೋವಿಗಿಂತ ಹೆಚ್ಚು ಅಸಹನೀಯವಾಗಿದೆ.” ಎಂದಿತು. ಈ ದೃಷ್ಟಾಂತದ ಸಂಭಾಷಣೆಯನ್ನು ಚನ್ನಾಗಿ ಅರ್ಥ ಮಾಡಿಕೊಂಡರೆ, ನಾವು ಯಾರನ್ನು ನಮ್ಮವರು, ನಮ್ಮ ಸ್ವಂತದವರು ಎಂದು ತಿಳಿದುಕೊಂಡು ಅವರನ್ನು ನಂಬಿ ಅವರಿಂದಲೇ ನಮಗೆ ಅಸಹನೀಯವಾದ ನೋವಾದರೆ ಸಹಿಸಿಕೊಳ್ಳುವುದು ಕಷ್ಟವಾಗುವುದು ಎಂದಿತು. ❤️🙏🌷 ವಿಮಲ್ ನ್ಯೂಟ್ರಿಷನ್ ಸೆಂಟರ್ 🌷🙏❤️ #✍️ ಮೋಟಿವೇಷನಲ್ ಕೋಟ್ಸ್ #👦🏻 Bad Boyz ಸ್ಟೇಟಸ್ #🎥 Motivational ಸ್ಟೇಟಸ್ #😍 ನನ್ನ ಸ್ಟೇಟಸ್ #✍️ ಮೋಟಿವೇಷನಲ್ ಕೋಟ್ಸ್
✍️ ಮೋಟಿವೇಷನಲ್ ಕೋಟ್ಸ್ - ShareChat
ಶಿವನಿಗೆ ಪ್ರಿಯವಾದದ್ದು ವಿಷ್ಣು ಆದರೆ, ವಿಷ್ಣುವಿಗೆ ಪ್ರಿಯವಾದದ್ದು ಶಿವ ಇದರ ಕಥೆ ಬಗ್ಗೆ ನಿಮಗೆ ಗೊತ್ತಾ ನಾರಾಯಣ ಮತ್ತು ಲಕ್ಷ್ಮಿಯ ಮಧ್ಯೆ ಏನೋ ಕಾರಣಕ್ಕೆ ಮಾತಿಗೆ ಮಾತಾಗಿ ಕೋಪಗೊಂಡು ಲಕ್ಷ್ಮಿಗೆ ಕುದುರೆಯಾಗು ಎಂದು ವಿಷ್ಣು ಶಾಪ ಕೊಟ್ಟನು. ( ಇದು ಭಗವಂತನ ಲೀಲಾ ನಾಟಕದ ವೇದಿಕೆಗೆ ಪೂರ್ವ ತಯಾರಿ) ಶಾಪ ಕೊಟ್ಟಿದ್ದು ಏಕೆಂದು ಅವಳು ಕೇಳಲಿಲ್ಲ. ಶಾಪದ ಪ್ರಭಾವದಿಂದ ಯಮುನಾ ಮತ್ತು ತಮಸ ನದಿಗಳ ಸಂಗಮ ಜಾಗದಲ್ಲಿ ಹೆಣ್ಣು ಕುದುರೆಯಾಗಿ ಜನಿಸಿದಳು. ಲಕ್ಷ್ಮಿಗೆ ಪೂರ್ವ ಜನ್ಮದ ಸ್ಮೃತಿ ಇದ್ದು, ತಾನು ಶಾಪದಿಂದ ಕುದುರೆಯಾಗಿ ಇಲ್ಲಿರಬೇಕಾ ಗಿದೆ. ವೈಕುಂಠದಲ್ಲಿ ನಾರಾಯಣ ಹಾಯಾಗಿದ್ದಾನೆ ಎಂಬ ದುಃಖಕ್ಕಿಂತ, ತನ್ನ ಪತಿಯನ್ನು ಬಿಟ್ಟಿರ ಬೇಕಲ್ಲ ಎಂಬ ಹತಾಶೆ ನೋವು ಹೆಚ್ಚಾಗಿ, ತನ್ನ ಪತಿಯನ್ನು ಹೇಗಾದರೂ ಮಾಡಿ ಹತ್ತಿರ ಕರೆಸಿ ಕೊಳ್ಳಬೇಕು ಎಂಬ ಯೋಚನೆ ಬಂದಿತು. 'ಶಿವ'ನನ್ನು ಕುರಿತು ಕಠಿಣ ತಪಸ್ಸು ಮಾಡಲು ಕುಳಿತಳು. ಅವಳ ತಪಸ್ಸಿಗೆ ಮೆಚ್ಚಿ ಶಿವನು ಪ್ರತ್ಯಕ್ಷನಾಗಿ, ಲಕ್ಷ್ಮಿಯನ್ನು ಕೇಳಿದ ನೀನು ನನ್ನನ್ನು ಕುರಿತು ಏಕೆ ತಪಸ್ಸು ಮಾಡಿದೆ ನಿನಗೆ ಎಂತದೇ ಕಠಿಣ ಸಮಸ್ಯೆ ಬಂದರೂ ಜಗತ್ಪರಿಪಾಲಕನಾದ ಶ್ರೀ ಹರಿ ಚಿಟಿಕೆ ಹೊಡೆಯುವುದರಲ್ಲಿ ಸರಿಪಡಿಸುತ್ತಿದ್ದ. ಹೀಗಿರುವಾಗ ನನ್ನನ್ನು ಆರಾಧಿಸಿದ್ದು ಏಕೆ ಎಂದು ಕೇಳಿದ. ಲಕ್ಷ್ಮಿಯು ಪ್ರಾರ್ಥಿಸಿ, ಮಹಾದೇವ ನೀವು ಹೇಗಾದರೂ ಮಾಡಿ ನಾರಾಯಣನನ್ನು ಕರೆಸುವಂತೆ ಶಿವನಲ್ಲಿ ಬೇಡಿದಳು. ಶಿವನು ತಕ್ಷಣ ತನ್ನ ಗಣಗಳಲ್ಲಿ ಒಬ್ಬನನ್ನು ವೈಕುಂಠಕ್ಕೆ ಕಳಿಸಿ ವಿಷ್ಣುವನ್ನು ಕರೆಸಿದನು. ಮಹಾವಿಷ್ಣು ಶಿವನ ಮಾತನ್ನು ಮನ್ನಣೆ ಮಾಡಿ ಮುಂದಿನ ತನ್ನ ಲೀಲಾ ಕಾರ್ಯ ಆರಂಭಿಸಲು, ತಾನು ಗಂಡು ಕುದುರೆ ಯಾಗಿ ಲಕ್ಷ್ಮಿ ಇದ್ದ ಜಾಗಕ್ಕೆ ಬಂದನು. ಹೆಣ್ಣು ಕುದುರೆಯಾ ಗಿದ್ದ ಲಕ್ಷ್ಮಿಗೆ ಗಂಡು ಕುದುರೆ ನೋಡಿ ತನ್ನ ಪತಿ ಎಂಬುದು ತಿಳಿಯಿತು. ಇಬ್ಬರು ಕೆಲವು ಕಾಲ ಸುಖವಾಗಿದ್ದರು. ಅವರಿಗೆ ಒಂದು ಮಗು ಹುಟ್ಟಿತು. ಲಕ್ಷ್ಮಿಗೆ ಮಗುವನ್ನು ಕಂಡರೆ ಬಹಳ ಪ್ರೀತಿ. ಕ್ಷಣವು ಬಿಟ್ಟಿರಲಿಲ್ಲ. ಆದರೆ ವಿಷ್ಣು ಲೀಲಾ ಕಾರ್ಯದ ನಿಮಿತ್ತ ಜನಿಸಿದ ಮಗುವನ್ನು ವೈಕುಂಠಕ್ಕೆ ಕರೆತರಲು ಒಪ್ಪದ ಅಲ್ಲೇ ಬಿಟ್ಟು, ಲಕ್ಷ್ಮಿ ಯನ್ನು ಕರೆದುಕೊಂಡು ವೈಕುಂಠಕ್ಕೆ ಬಂದನು. 'ಹರಿವರ್ಮ' ಎಂಬ ರಾಜ ನೂರು ವರ್ಷದಿಂದ ಸಂತಾನಕ್ಕಾಗಿ ತಪಸ್ಸು ಮಾಡುತ್ತಿ ದ್ದನು. ನಾರಾಯಣನು, ರಾಜನ ಕನಸಿನಲ್ಲಿ ಬಂದು ಏನು ಬೇಕು? ಎಂದಾಗ, ರಾಜನು,‌ ಹೇ ನಾರಾಯಣ ನಿನ್ನ ಹಾಗೂ ಲಕ್ಷ್ಮಿಯಿಂದ ಜನಿಸಿದ ಸಂತಾನ ನನಗೆ ಕರುಣಿಸು ಎಂದು ಬೇಡಿದ, ಆಯಿತು ಎಂದ ವಿಷ್ಣು ಹಾಗಾದರೆ ನೀನು ಈಗಲೇ ಯಮುನಾ ಮತ್ತು ತಮಸ ನದಿಗಳ ಸಂಗಮದಲ್ಲಿ ನನ್ನ ಹಾಗೂ ಲಕ್ಷ್ಮಿಯ ಸಂತಾನವಾದ ಒಂದು ಮಗು ಇದೆ ಅದನ್ನ ತೆಗೆದುಕೊಂಡು ಬಂದು ಸಾಕು ಎಂದನು. ರಾಜನು ಬೆಳಿಗ್ಗೆ ಎದ್ದು ಕನಸಿನಂತೆ ಯಮುನಾ ಮತ್ತು ತಮಾಸ ನದಿಗಳ ಸಂಗಮ ದತ್ತ ಹೋಗಿ ನೋಡಿದಾಗ ಸುಂದರವಾದ ಶಿಶು ಕಾಣಿಸಿತು. ಸಂತೋಷದಿಂದ ಆ ಮಗುವನ್ನು ಅರಮನೆಗೆ ತಂದು 'ಏಕವೀರ' ಎಂದು ನಾಮಕರಣ ಮಾಡಿ ಅಕ್ಕರೆಯಿಂದ ಸಾಕಿದನು. ಈ ಮಗು ಮುಂದೆ ದೊಡ್ಡವನಾಗಿ ರಾಜ್ಯದ ಅರಸನಾಗಿ 'ಹಯ್ ಹಯರ' ವಂಶವನ್ನು ನಿರ್ಮಾಣ ಮಾಡಿದನು. ❤️🙏🌷 ವಿಮಲ್ ನ್ಯೂಟ್ರಿಷನ್ ಸೆಂಟರ್ 🌷🙏❤️ #😍 ನನ್ನ ಸ್ಟೇಟಸ್ #🎥 Motivational ಸ್ಟೇಟಸ್ #👦🏻 Bad Boyz ಸ್ಟೇಟಸ್ #✍️ ಮೋಟಿವೇಷನಲ್ ಕೋಟ್ಸ್ #✍️ ಮೋಟಿವೇಷನಲ್ ಕೋಟ್ಸ್
😍 ನನ್ನ ಸ್ಟೇಟಸ್ - ವಿಷ್ಣು ' ಶಿವನಿಗೆ ಪ್ರಿಯವಾದದ್ದು  ಆದರೆ, ವಿಷ್ಣುವಿಗೆ ಪ್ರಿಯವಾದದ್ದು ಶಿವ ಗೊತ್ತಾ ಇದರ ಕಥೆ ಬಗ್ಗೆ ನಿಮಗೆ ವಿಷ್ಣು ' ಶಿವನಿಗೆ ಪ್ರಿಯವಾದದ್ದು  ಆದರೆ, ವಿಷ್ಣುವಿಗೆ ಪ್ರಿಯವಾದದ್ದು ಶಿವ ಗೊತ್ತಾ ಇದರ ಕಥೆ ಬಗ್ಗೆ ನಿಮಗೆ - ShareChat
ಪೂರ್ಣ ಶರಣಾಗತಿ ಇಲ್ಲದೆ ದೇವರು ಕಾಪಾಡಲಾರನು ಒಂದು ಕೆರೆಯಲ್ಲಿ ಒಬ್ಬ ಧೋಬಿ ಬಟ್ಟೆ ಒಗೆಯುತ್ತಿದ್ದನಂತೆ. ಆಗ ಆ ಕೆರೆಯ ಬಳಿಗೆ ಬಂದ ಸನ್ಯಾಸಿಯೊಬ್ಬ ಅದರಲ್ಲಿ ಸ್ನಾನ ಮಾಡಿ ಅಲ್ಲೇ ಕೆರೆದಂಡೆಯ ಮೇಲೆ ಧ್ಯಾನಕ್ಕೆ ಕುಳಿತ. ಧೋಬಿ ಬಟ್ಟೆ ಒಗೆಯುವಾಗ ಆ ಸನ್ಯಾಸಿಯ ಮೈ ಮೇಲೆ ಕೆಲವು ನೀರಿನ ಹನಿಗಳು ಸಿಡಿಯಲು, ಸಿಟ್ಟಿಗೆದ್ದ ಸನ್ಯಾಸಿಯು ಧೋಬಿಯನ್ನು ಅವಾಚ್ಯ ಶಬ್ದಗಳಿಂದ ಬೈದ. ಇದರಿಂದ ಕೆರಳಿದ ಧೋಬಿಯೂ ಪ್ರತಿಯಾಗಿ ಬೈದ. ಇಬ್ಬರಿಗೂ ಜಗಳ ಪ್ರಾರಂಭವಾಗಿ ಕೈ ಕೈ ಹತ್ತಿತು. ಧೋಬಿ ಸನ್ಯಾಸಿಯನ್ನು ಕೆಳಕ್ಕೆ ಕೆಡವಿ ತಾನು ಅವನ ಎದೆಯ ಮೇಲೆ ಕುಳಿತು ಗುದ್ದುತ್ತಿರಲು, ಸನ್ಯಾಸಿ ತಾನೂ ಧೋಬಿಯನ್ನು ಚೆನ್ನಾಗಿ ಹಣಿದ. ಆದರೆ ಧೋಬಿಯ ಬಲ ಹೆಚ್ಚಾಯ್ತು. ಆಗ ಸನ್ಯಾಸಿ ದೇವರಿಗೆ ಶರಣುಹೋಗಿ "ಹೇ ಪರಮಾತ್ಮಾ! ನಿನ್ನ ಪರಮಭಕ್ತನಾದ ಈ ಸನ್ಯಾಸಿಯನ್ನು ಕೈ ಬಿಟ್ಟೆಯಾ! ನನ್ನ ಸಹಾಯಕ್ಕೆ ಬರಲಾರೆಯಾ!" ಎಂದು ಕೂಗಿಕೊಂಡಾಗ ಪರಮಾತ್ಮನು ಹೇಳಿದನಂತೆ, ಅಯ್ಯಾ ಸನ್ಯಾಸಿ! ನಾನು ನಿನಗೆ ಸಹಾಯ ಮಾಡಲು ಎರಡು ಮೂರು ಬಾರಿ ಬಂದೆ. ಆದರೆ "ಸನ್ಯಾಸಿ ಯಾರು, ಧೋಬಿ ಯಾರು" ಗೊತ್ತಾಗದೆ ಹಿಂದಕ್ಕೆ ಹೋದೆ ಎಂದನಂತೆ. ಸನ್ಯಾಸಿಯಲ್ಜಿ ಸಂಪೂರ್ಣ ಶರಣಾಗತಿ ಇರಲಿಲ್ಲ. ಅದಕ್ಕೆ ಅವನಿಗೆ ಭಗವಂತನ ಸಹಾಯ ದೊರಕಲಿಲ್ಲ. ❤️🙏🌷 ವಿಮಲ್ ನ್ಯೂಟ್ರಿಷನ್ ಸೆಂಟರ್ 🌷🙏❤️ #✍️ ಮೋಟಿವೇಷನಲ್ ಕೋಟ್ಸ್ #👦🏻 Bad Boyz ಸ್ಟೇಟಸ್ #🎥 Motivational ಸ್ಟೇಟಸ್ #✍️ ಮೋಟಿವೇಷನಲ್ ಕೋಟ್ಸ್ #😍 ನನ್ನ ಸ್ಟೇಟಸ್
✍️ ಮೋಟಿವೇಷನಲ್ ಕೋಟ್ಸ್ - ShareChat
ಬೆಳವಾಡಿ ಮಲ್ಲಮ್ಮ. ಭಾಗ-೧. ಶಿವಾಜಿಯ ಸೊಂಟ ಮುರಿದು '"ಕನ್ನಡ ದೇಶದ " ಕೀರ್ತಿ ಪತಾಕೆ ಹಾರಿಸಿದ ಕೆಚ್ಚೆದೆಯ ಕನ್ನಡತಿ "ತಾಯಿ ಬೆಳವಾಡಿ ಮಲ್ಲಮ್ಮ".💛❤ ನಿಜಕ್ಕೂ ಅಂದು ನಡೆದದ್ದೇನು? ಹಲವು ಕನ್ನಡ ಹಾಗೂ ಬ್ರಿಟಿಷ್ ಇತಿಹಾಸಕಾರರು ಬೈಲಹೊಂಗಲ ಯುದ್ಧ, ಇಡೀ ಶಿವಾಜಿಯ ಜೀವಮಾನದಲ್ಲಿಯೇ, ಆತನ‌ ಮನಸ್ಸಿನಲ್ಲಿ ಅವಮಾನಕಾರಿಯಾಗಿ ಉಳಿದ ಯುದ್ಧ ಎನ್ನುತ್ತಾರೆ. ಸೋಂದೆ ಸಂಸ್ಥಾನದ ಮೇಲೆ ಯುದ್ಧ ಮಾಡಿ ಈಶಪ್ರಭುವನ್ನು‌ ಕೊಂದ ಶಿವಾಜಿಯ ಸೈನ್ಯ, ಇನ್ನೇನು ಇಡೀ ಸೋಂದೆ ಸಂಸ್ಥಾನವನ್ನೇ ತಮ್ಮ ಮರಾಠ ಸಾಮ್ರಾಜ್ಯದೊಳಕ್ಕೆ ವಿಲೀನಗೊಳಿಸಿಕೊಳ್ಳಲು ಮುಂದಾದ ಹೊತ್ತಲ್ಲಿ ಮಹಾಕಾಳಿಯಂತೆ ಎದ್ದು ಬಂದವಳೇ ಈಶಪ್ರಭುವಿನ‌ ಹೆಂಡತಿ, ಆ ದಿನಗಳಲ್ಲಿಯೇ ಚೊಚ್ಚಲ ಹೆರಿಗೆಯಾಗಿದ್ದ ಬಾಣಂತಿ ಮಲ್ಲಮ್ಮ, ಬೆಳವಾಡಿ ಮಲ್ಲಮ್ಮ. ಭಾರತದ ಬಹುತೇಕ ರಾಜರು ಹೆಣ್ಣುಗಳನ್ನು ತಮ್ಮ ಆಸ್ಥಾನದಲ್ಲಿ ಕುಣಿಯಲಿಕ್ಕೆ ಬಳಸುತ್ತಿದ್ದ ಆ ಕಾಲದಲ್ಲಿ ಕನ್ನಡ ನಾಡು, ಅದೆಷ್ಟೋ ಹೆಣ್ಣುಗಳ ಸೈನ್ಯವನ್ನೇ ಪಡೆದಿತ್ತು.‌ ಅಂತಹ ಸೈನ್ಯಗಳಲ್ಲಿ ಮಲ್ಲಮ್ಮನ ಸೈನ್ಯವೂ ಒಂದು.‌ ಈಶಪ್ರಭುವನ್ನು ಕೊಂದು ಬೈಲಹೊಂಗಲದಲ್ಲಿ ಬಿಡಾರ ಹೂಡಿದ್ದ ಶಿವಾಜಿಯ ಮರಾಠ ಸೈನ್ಯ, ಮರುದಿನ ಮುಂಜಾನೆಯ ಹೊತ್ತಿಗೆ ತಮಗೆ ಬೇಕಾದ ದಿನೋಪಯೋಗಿ ಆಹಾರ ಪದಾರ್ಥಗಳಿಗಾಗಿ ಬೈಲಹೊಂಗಲ ಹಾಗೂ ಸುತ್ತಮುತ್ತಲಿನ ಪ್ರದೇಶಗಳನ್ನು‌ ಕೊಳ್ಳೆ ಹೊಡೆಯಲಾರಂಭಿಸುತ್ತಾರೆ. ತನ್ನ ಗಂಡನು ಯುದ್ಧದಲ್ಲಿ ವೀರಮರಣ ಅಪ್ಪಿದ ವಿಚಾರ ತಿಳಿದ ಮಲ್ಲಮ್ಮನ ಎದೆಯಲ್ಲಿ ದುಃಖ ಆವರಿಸಿದರೆ, ಮತ್ತದೇ ಪರದೇಸಿಗಳು ತಮ್ಮ ಆಸ್ಥಾನದ ಜನರನ್ನು ಕೊಳ್ಳೆ ಹೊಡೆಯುತ್ತಿದ್ದ ವಿಚಾರವನ್ನು ಕೇಳಿ ಉಗ್ರಳಾಗುತ್ತಾಳೆ.‌ ಚಿತೆಗೇರಿದ ಗಂಡ ಈಶಫ್ರಭುವಿನ‌ ಶವದೆದುರು “ಸೋಂದೆ ಎಂದಿಗೂ ಪರದೇಸಿಗಳ ಪಾಲಾಗದು, ಇದು ನಿಮ್ಮಾಣೆ” ಎಂದು ಪ್ರತಿಜ್ಞೆ ಮಾಡುತ್ತಾಳೆ. ಇತ್ತ ಬೈಲಹೊಂಗಲ ಹಾಗೂ ಸುತ್ತಲಿನ ಹಳ್ಳಿಗಳಿಗೆ ನುಗ್ಗಿದ ಮರಾಠರ ಸೈನ್ಯ, ದನಕರಗಳನ್ನೂ ಹೆಣ್ಣು ಹೊನ್ನುಗಳನ್ನೂ ಕೊಳ್ಳೆ ಹೊಡೆಯುತ್ತಾರೆ.‌ ಅತ್ತ ಬೆಳವಾಡಿ ಮಲ್ಲಮ್ಮ ತನ್ನ ಹೆಣ್ಣು ಹುಲಿಗಳ ಸೈನ್ಯದೊಂದಿದೆ ಮರಾಠರ ಬಿಡಾರಕ್ಕೆ ನುಗ್ಗುತ್ತಾಳೆ. ಹೆಣ್ಣು ಹೊನ್ನು ದನಕರುಗಳನ್ನು ಬಿಡುಗಡೆಗೊಳಿಸುತ್ತದೆ. ಅಂದು ಬಿಡಾರದಲ್ಲಿದ್ದ ಅರ್ಧಕ್ಕರ್ಧ ಸೈನಿಕರು ನರಕದ ಬಾಗಿಲನ್ನು‌ ತಟ್ಟಿದ್ದರು. ಸುದ್ದಿ ತಿಳಿದ ಶಿವಾಜಿ ಯುದ್ಧವನ್ನು ಇನ್ನಷ್ಟು ಚುರುಕುಗೊಳಿಸಲು ಆದೇಶಿಸುತ್ತಾನೆ.‌ ಆತ ಮಲ್ಲಮ್ಮನ ಹೆಣ್ಣಹುಲಿಗಳ ಸೈನ್ಯದ ಸಾಮಾರ್ಥ್ಯವನ್ನು ಕಡೆಗಣಿಸಿದ್ದಂತು ನಿಜ. ಈ ಯುದ್ಧ ತನ್ನಿಡೀ ಜೀವನವನ್ನೆಲ್ಲ ಕೊರಗಿನಲ್ಲಿ ಮುಳುಗಿಸುತ್ತದೆ ಎಂಬ ಅಂದಾಜೂ ಸಹ ಅವನಿಗಿರಲಿಲ್ಲ. ಹೀಗೆ ಯುದ್ಧದಲ್ಲಿ ಮೊದಲ ಬಾರಿಗೆ ಮಲ್ಲಮ್ಮ ಹಾಗು ಶಿವಾಜಿಯ ಮೊದಲ ಮುಖಾಮುಖಿಯಾದದ್ದು 22ನೇ ದಿನ. ಬೇರಾವ ಯುದ್ಧದಲ್ಲಿಯೂ ಅಷ್ಟು ಸೈನಿಕರನ್ನು ಕಳೆದುಕೊಂಡಿರದ ಶಿವಾಜಿಗೆ, ಬೆಳವಾಡಿಯ ಯುದ್ಧ ಬರೀ ಸೋಲು‌ ನಿರಾಸೆಗಳನ್ನೇ ಉಣಿಸಿತ್ತು.‌ ಇದರಿಂದ ಕುಗ್ಗಿದ್ದ ಶಿವಾಜಿ, ಬೆಳವಾಡಿ ಮಲ್ಲಮ್ಮನೆದುರು ಸಂದಾನವಾಗುವನಂತೆ ಮಾತುಗಳನ್ನಾಡಿ ಮಲ್ಲಮ್ಮನ ಸೈನ್ಯವು ಯುದ್ಧದಿಂದ ಹಿಂದೆ ಸರಿಯುವಂತೆ ಮಾಡುತ್ತಾನೆ.‌ ಆದರೆ ನಂತರ ನಡೆದದ್ದೇನು? ಮತ್ತದೇ ನಂಬಿಕೆ ದ್ರೋಹ! ಅತ್ತ ಬೆಳವಾಡಿ ಮಲ್ಲಮ್ಮನ‌ ಸೈನ್ಯವು ಸಂದಾನವಾಯಿತೆಂದು ಆಸ್ಥಾನಕ್ಕೆ ತೆರಳುವ ತಯಾರಿ ಮಾಡಿಕೊಳ್ಳುತ್ತಿದ್ದರೆ, ಇತ್ತ ಶಿವಾಜಿ ಸಂದಾನವಾದ ವಿಚಾರವನ್ನು ಸೇನಾಧಿಪತಿಗಳಿಗೆ ತಿಳಿಸದೆ, ಇಲ್ಲೂ ಕುತಂತ್ರದಿಂದ ಬೆಳವಾಡಿಯನ್ನು ಕಬಳಿಸಿಕೊಳ್ಳಲು, ತನಗಾದ ಇಡೀ ಜೀವಮಾನದ ಅವಮಾನವೊಂದನ್ನು ಅಳಿಸಿಹಾಕುವ ದುಃಸಾಹಸಕ್ಕೆ ಕೈ ಹಾಕುತ್ತಾನೆ. ಯುದ್ಧ ಮುಂದುವರೆಸುತ್ತಾನೆ! ಶಿವಾಜಿಯ ನಸಗುನ್ನಿ ಬುದ್ದಿಯಿಂದ ಇನ್ನಷ್ಟು ಉಗ್ರಳಾದ ಮಲ್ಲಮ್ಮ, ತನ್ನ ಸೈನ್ಯವನ್ನು ಈಗ ಉರಿಮಾರಿಯರ ಸೈನ್ಯವನ್ನಾಗಿಸುತ್ತಾಳೆ! ನಿರಂತರ ಐದು ದಿನಗಳ ಯುದ್ಧದಲ್ಲಿ ಶಿವಾಜಿಯ ಮರಾಠ ಸೈನ್ಯ ಅಕ್ಷರಶಃ ನಾಮವಶೇಷಗೊಳ್ಳುತ್ತದೆ.‌ ಯುದ್ಧದ ಕೊನೆಯ ದಿನ ಮರಾಠರ ಮಂತ್ರಿಯೊಬ್ಬ ಬೆಳವಾಡಿ ಮಲ್ಲಮ್ಮನ‌ ಸವಾರಿ ಕುದುರೆಯ ಕಾಲು ಮುರಿದು ನೆಲಕ್ಕುರುಳಿಸುತ್ತಾನೆ. ಚಂಡಿಗೆ ಹುಲಿವಾಹನವಿದ್ದರೇನು? ಇಲ್ಲದಿದ್ದರೇನು? ಚಂಡಿ ಚಂಡಿಯೇ! ನೆಲ್ಲಕ್ಕೆ ಬಿದ್ದವಳೇ ಎದ್ದು ನಿಂತು, ಕುದುರೆಯ ಕಾಲು‌ ಕಡಿದವನತ್ತ ಓಡಿ ಅವನ ತಲೆ ಕತ್ತರಿಸುತ್ತಾಳೆ. ಅಡ್ಡ ಬಂದವರ ರುಂಡ ಮುಂಡಗಳ ಚೆಂಡಾಡುತ್ತಾ, ಶಿವಾಜಿ ಅಡಗಿ ಕುಳಿತಿದ್ದ ಬಿಡಾರದತ್ತ ನುಗುತ್ತಾಳೆ. ಶಿವಾಜಿಗಿದು ಗಾಯದ ಮೇಲೆ ಬರೆ ಎಳೆದಂತಹ ದುಃಸ್ಥಿತಿ. ತನ್ನ ಕುತಂತ್ರವೂ ಫಲಿಸದೇ ಹೋದದ್ದು ಅವನನ್ನು ಬಹಳಷ್ಟು ಕುಗ್ಗಿಸಿತ್ತು. ಮಲ್ಲಮ್ಮ‌ ಎದುರಾಗುತ್ತಿದ್ದಂತೆ ಅವಳೆದುರು ನೆಲಕ್ಕುರುಳಿದ ಶಿವಾಜಿ, ಆಕೆಗೆ ಕತ್ತಿಯನ್ನು ಕೊಡುತ್ತಾ, “ಇಗೋ ತಾಯೇ, ನಾನಿನ್ನು ಬದುಕಲು ಅರ್ಹನಲ್ಲ, ನನ್ನ ಶಿರಚ್ಛೇದವಾಗಲಿ” ಎಂದು ಇಳಿಧನಿಯಲ್ಲಿಯೇ ಊಳಿಡುತ್ತಾನೆ. ಅಂದೂ ಇಂದೂ ಕನ್ನಡಿಗರ ದೌರ್ಬಲ್ಯ ಇದೇ ಅಲ್ಲವೇ? ಶರಣಾದವರ ತಲೆಕಾಯುವುದು! ಇಂಥಹ ರಾಜನೊಬ್ಬ ತನ್ನೆದುರು ಸೋತು ಆತ್ಮಾಹುತಿಗೆ ಸಿದ್ದನಾಗಿ ಕುಳಿತಿದ್ದದ್ದನ್ನು ಕಂಡ‌ ಮಲ್ಲಮ್ಮನ ಕೆಂಡದೆದೆ ತಣ್ಣಗಾಗುತ್ತಾ ಹೋಯಿತೇನೋ! ತನ್ನ ಗಂಡನನ್ನು ಕೊಂದ ಇವನು, ಇನ್ನೂ ಜೀವನವಿಡಿ ನಾ ಕೊಟ್ಟ ಪ್ರಾಣ ಭಿಕ್ಷೆಯಲ್ಲೇ ಬದುಕುವಂತಾಗಲಿ, ಇದಕ್ಕಿಂತಲೂ ದೊಡ್ಡ ಶಿಕ್ಷೆ ಮತ್ತೊಂದು ಇರಲಿಕ್ಕಿಲ್ಲವೆಂದು ಆತನಿಗೆ ಪ್ರಾಣ ಭಿಕ್ಷೆ ನೀಡುತ್ತಾಳೆ. ಸೋಂದೆ ಸಂಸ್ಥಾನ‌ ಕನ್ನಡಿಗರ ಪಾಲಾಗುತ್ತದೆ. ಅಂದೇನಾದರೂ ಸೋಂದೆ ಸಂಸ್ಥಾನ ಮರಾಠರ ವಶವಾಗಿದ್ದಿದ್ದೆ ಆದರೆ, ಇಂದು ಅರ್ಧಕ್ಕರ್ಧ ಬೆಳಗಾವಿ ಜಿಲ್ಲೆಯಲ್ಲಿ ಮರಾಠಿಗರ ಸಂಖ್ಯೆ ಹೆಚ್ಚಾಗಿ, ಬೆಳಗಾವಿ ಮಹಾರಾಷ್ಟ್ರದ ಪಾಲಾಗಿತ್ತಿತ್ತು. ಬೆಳಗಾವಿಯ ಕನ್ನಡಿಗರು ಇಂದು ಕರ್ನಾಟಕವು ತಮ್ಮ ರಾಜ್ಯವಾಗಿರುವುದಕ್ಕೆ ತಾಯಿ ಬೆಳವಾಡಿ ಮಲ್ಲಮ್ಮನಿಗೆ ಸದಾ ಚಿರ‌ಋಣಿಗಳಾಗಿರಬೇಕು.‌ ಬಹಳಷ್ಟು ಇತಿಹಾಸಕಾರರು ಹೇಳುವಂತೆ, ಶಿವಾಜಿಯು ಮೈಸೂರು ಅರಸರೆದುರು ಸೋತದ್ದು, ಬಿಜಾಪುರ ಸುಲ್ತಾನರೆದುರು ಸೋತದ್ದು, ಈ ಎಲ್ಲಾ ಸೋಲುಗಳಿಗಿಂತ, ಬೆಳವಾಡಿ ಮಲ್ಲಮ್ಮನ ಜೊತೆಗಿನ 27 ದಿನಗಳ ಯುದ್ಧದಲ್ಲಿ ಸೋತದ್ದು ದೊಡ್ಡ ಕೊರಗಾಗಿ ಉಳಿಯಿತು ಎನ್ನುತ್ತಾರೆ. ಶಿವಾಜಿಯ ಕೊರಗು ಯಾವ ಮಟ್ಟಕ್ಕಿತ್ತೆಂದರೆ, ತಾನೂ ಸಾಯುವ ಗಳಿಗೆಯಲ್ಲಿಯೂ ಈ ಕೊರಗು ಅವನನ್ನು ಬಿಟ್ಟಿದ್ದಿಲ್ಲ. ಇದನ್ನು ಗಮನಿಸಿದ ಶಿವಾಜಿಯ ಎರಡನೇ ಸೊಸೆಯಾದ ತಾರಾಬಾಯಿ, ಆ ಕಾಲಕ್ಕೆ ಸ್ವತಃ ಹಣ್ಣಣ್ಣು ಮುದಿಕಿಯಾಗಿದ್ದ ಮಲ್ಲಮ್ಮಳನ್ನು ಭೇಟಿಯಾಗಿ ನಡೆದದ್ದನ್ನೆಲ್ಲ ಕೇಳಿ ತಿಳಿದುಕೊಂಡಿದ್ದಳು.‌ ನಡೆದದ್ದೇನೋ‌ ನಡೆದುಹೋಯಿತು, ಆದರೆ ಶಿವಾಜಿಯ ಮರಣದ ನಂತರ, ಆತನ ಇತಿಹಾಸದ ಹಾನಿ ನಿಯಂತ್ರಣಕ್ಕಾಗಿ ಮರಾಠಿ ಕೃತಿಗಳಲ್ಲಿ, ಬರಿ ಮಲ್ಲಮ್ಮ ಹಾಗೂ ಶಿವಾಜಿಯ ನಡುವೆ ಕೇವಲ ಸಂದಾನವಾದಂತೆ, ಇಲ್ಲವೇ ಮಲ್ಲಮ್ಮಳೇ ಶಿವಾಜಿ ಎದುರು ಸೋತಂತೆ ಇತಿಹಾಸವನ್ನು ತಿದ್ದಲಾಯಿತು. ಆದರೆ ಕನ್ನಡ ಜಾನಪದ, ಕನ್ನಡ ಇತಿಹಾಸಕಾರರು ದಾಖಲಿಸಿದ ಇತಿಹಾಸ, ಬೈಲಹೊಂಗಲದ ಇತಿಹಾಸ, ಬ್ರಿಟಿಷ್ ಇತಿಹಾಸಕಾರರು ದಾಖಲಿಸಿದ ಇತಿಹಾಸಗಳು ಈಗಲೂ ಹಸಿ ಹಸಿ ಸತ್ಯವನ್ನು ತೆರೆದಿಡುತ್ತಿವೆ. ಶಿವಾಜಿ ಯಾವ ರೀತಿಯಿಂದಲೂ ಆದರ್ಶನಲ್ಲ.‌ ಆತನ ಕಪಟಿತನ, ನಸಗುನ್ನಿತನದಿಂದ ಆತನನ್ನು ಸುತ್ತಮುತ್ತಲಿನ ಸಂಸ್ಥಾನದವರೆಲ್ಲ “ಬೆಟ್ಟದ ಇಲಿ” ಎಂದೇ ಕರೆಯುತ್ತಿದ್ದರು. ಮುಖ್ಯವಾಗಿ ಆತ ಹಿಂದೂ ಧರ್ಮ‌ ರಕ್ಷಕನಂತೂ ಅಲ್ಲವೇ ಅಲ್ಲ.‌ ಶಿವಾಜಿ ಕಾಲದಲ್ಲಿಯೇ ಮರಾಠರ ಹಾಗೂ ಹೈದರಾಬಾದ್ ನಿಜಾಮರ ನಡುವೆ ಒಳ್ಳೆಯ ಸ್ನೇಹ ಬಾಂಧವ್ಯವಿತ್ತು.‌ ಇವರಿಬ್ಬರೂ ಸೇರಿಯೇ ಈಗಿನ ಉತ್ತರ ಕರ್ನಾಟಕವನ್ನು ಬಹಳಷ್ಟು ಸಾರಿ ಕೊಳ್ಳೆ ಹೊಡೆದಿದ್ದರು. ಈಗಲೂ ಉತ್ತರ ಕರ್ನಾಟಕ ಭಾಗ ಹೈರಾಣಾಗಿರಲು ಕಾರಣ ಮರಾಠರು ಹಾಗೂ ನಿಜಾಮರು. ಬರೀ ಉತ್ತರ ಕರ್ನಾಟಕ ಅಷ್ಟೇ ಅಲ್ಲ, ದಕ್ಷಿಣ ಕರ್ನಾಟಕದ ಮೇಲೆಯೂ ಸಹ ಶಿವಾಜಿಯಿಂದ ಲೂಟಿಗಳಾಗಿವೆ.‌ ಮೇಲುಕೋಟೆ ಹಾಗೂ ಶ್ರೀರಂಗಪಟ್ಟಣಗಳ ಮೇಲೆ ದಾಳಿಯಾಗಿ, ದೇವಾಲಯಗಳನ್ನು ವಿರೂಪಗೊಳಿಸಿ ಅಲ್ಲಿನ ಸಂಪತ್ತನ್ನು ದೋಚಿದ್ದರು. ಕಬ್ಬಿಣದ ತೇರುಗಳಿಗೆ ಬೆಂಕಿ ಇಟ್ಟು ಕಬ್ಬಿಣವನ್ನು ದೋಚಿದ್ದರು. ಇದೇ ಕಾರಣಕ್ಕೆ ಮೇಲುಕೋಟೆಯಲ್ಲಿ 90ರ ದಶಕದವರೆಗೂ, ದೊಡ್ಡ ತೇರಿಗೆ ದನದ ಮಾಂಸವನ್ನು ನೇತುಹಾಕುವ ಸಂಪ್ರದಾಯವಿತ್ತು.‌ ದನದ ಮಾಂಸವಿದ್ದ ಕಡೆ ಮರಾಠ/ಪೇಶ್ವೆಗಳು ಬಾರರು ಎಂದು. ಇಷ್ಟೆಲ್ಲಾ ಆದರೂ ಸಹ ಶಿವಾಜಿ ಹಾಗೂ ಮರಾಠ ಸೈನ್ಯಕ್ಕೆ ಮೈಸೂರು ಸಂಸ್ಥಾನವನ್ನು ಗೆಲ್ಲಲಾಗಲಿಲ್ಲ. ಚಿಕ್ಕದೇವರಾಜ ಒಡೆಯರು ಶಿವಾಜಿಯನ್ನು ಯುದ್ದದಲ್ಲಿ ಎರಡೆರಡು ಬಾರಿ ಸೋಲಿಸಿ‌ ಶ್ರೀರಂಗಪಟ್ಟಣದಿಂದ ಒದ್ದೋಡಿಸಿದರು. ಇನ್ನೂ ಮಜಾ ಕೊಡುವ ವಿಷಯವೇನೆಂದರೆ, ತುಮಕೂರಿನ‌ ಮೂಕನಾಯಕನಹಳ್ಳಿ ಎಂಬ ಊರನ್ನು‌‌ ಕೊಳ್ಳೆ ಹೊಡೆಯಲೋದ‌ ಶಿವಾಜಿ ಹಾಗೂ ಆತನ‌ ಸೈನ್ಯವನ್ನು, ಅದೇ ಊರಿನ ಸಾಮಾನ್ಯ ಜನರು, ಹಾರೆ, ಗುದ್ದಲಿ, ಪೊರಕೆ‌ ದೊಣ್ಣೆ, ಚೂರಿಗಳಿಂದ ಆಕ್ರಮಣ ಮಾಡಿ, ಅಟ್ಟಾಡಿಸಿ ಒದ್ದೋಡಿಸಿದ್ದರು.‌ ಈ ಎರಡೂ ವಿಷಯಗಳು ಹಯವದನ ರಾವ್ ಬರೆದಿರುವ ಮೈಸೂರು ಗೆಜೆಟಿಯರ್‌ನಲ್ಲಿ ದಾಖಲಾಗಿವೆ. ಇನ್ನೂ ಮರಾಠ ಸೇನೆ ಎಂಬುದು ಲೂಟಿ‌ ಆಧಾರಿತ ಸೇನೆಯೇ ಆಗಿತ್ತು ಎಂದು‌ ಸ್ಪಷ್ಟವಾಗಿ ಹೇಳಬಹುದು. ‌ಸುಗ್ಗಿ ಕಾಲದಲ್ಲಿಯೇ ಈ ಮರಾಠರು ದಾಳಿ ಮಾಡಿ ಧಾನ್ಯಗಳನ್ನ, ದನಕರುಗಳನ್ನ ಹೆಣ್ಣು ಹೊನ್ನುಗಳನ್ನು ಕೊಳ್ಳೆ ಹೊಡೆಯುತ್ತಿದ್ದರು.‌ ಇದಕ್ಕೆ ಹೆಚ್ಚು ಬಲಿಯಾದವರು ಈಗಿನ ಉತ್ತರ ಕರ್ನಾಟಕದ ಕನ್ನಡಿಗ ಹಿಂದೂಗಳು ಹಾಗೂ ಬಂಗಾಳಿ ಹಿಂದೂಗಳು.‌ ಹೈದರ್ ಟಿಪ್ಪು ಸೈನ್ಯದ ವಿರುದ್ಧ ಚಿತ್ರದುರ್ಗದ ಪಾಳೆಗಾರರು ಸೋಲಲು ಪರೋಕ್ಷವಾಗಿ ಕಾರಣ ಇದೇ ಶಿವಾಜಿಯ ಮಗ ಸಾಂಬಾಜಿ ಹಾಗೂ ಮರಾಠ ಸಾಮ್ರಾಜ್ಯ. ಪಾಳೆಗಾರರ ಹಾಗು ಹೈದರ್ ಟಿಪ್ಪು ನಡುವಲ್ಲಿ ಯುದ್ಧ ಏರ್ಪಟ್ಟರೆ, ಪಾಳೆಗಾರರ ಪರ ಹೋರಾಡುತ್ತೇವೆಂದು ಮಾತು ಕೊಟ್ಟ ಮರಾಠ ಸಾಮ್ರಾಜ್ಯ, ಅದೇ ಯುದ್ಧ ಏರ್ಪಟ್ಟಾಗ ಹೈದರ್ ಟಿಪ್ಪುವಿನ ಎಂಜಲು ಕಾಸಿಗೆ ಆಸೆ ಪಟ್ಟು, ನಿಜಾಮನ ಸ್ನೇಹಕ್ಕೆ ಕಟ್ಟುಬಿದ್ದು, ಪಾಳೆಗಾರರೊಡನೆ ಹೈದರ್ ಟಿಪ್ಪುವಿನ ವಿರುದ್ಧ ಯುದ್ಧಕ್ಕೆ ಬಾರದೆ, ಮಾತು ತಪ್ಪುತ್ತಾರೆ. ಇದರ ಮೂಲಕ ಹಿಂದೂ ಪಾಳಯಪಟ್ಟೊಂದು ಸುಲ್ತಾರೆದುರು ಸೋಲಲು ಶಿವಾಜಿಯ ಮಗ ಸಾಂಬಾಜಿ ಹಾಗೂ ಮರಾಠ ಸಾಮ್ರಾಜ್ಯ ಕಾರಣವಾಗುತ್ತದೆ. ಮರಾಠರು ಮಾತಿಗೆ ತಪ್ಪಿದ ಮಕ್ಕಳಾಗುತ್ತಾರೆ. ಕರ್ನಾಟಕದ ಮೇಲೆ ಮರಾಠ ದಾಳಿಗಳು. 1639ರಲ್ಲಿ ಶಿವಾಜಿಯ ಅಪ್ಪ ಶಹಾಜಿ ಮತ್ತು ರಣದುಲ್ಲಾ ಖಾನ್ ನೇತೃತ್ವದ ಬಿಜಾಪುರ ಸುಲ್ತಾನರ ಸೇನೆಯನ್ನು ಕಂಠೀರವ ಒಡೆಯರ್ ಸೋಲಿಸುತ್ತಾರೆ. 1655ರಲ್ಲಿ ಕರಾವಳಿಯ ಶ್ರೀಮಂತ ವ್ಯಾಪಾರಿ ಪಟ್ಟಣ ಬಸ್ರೂರಿನ ಮೇಲೆ ದಾಳಿ ಮಾಡಿದ್ದು ಶಿವಾಜಿ. ಅಪ್ಪಟ ಕನ್ನಡಿಗರ ಬೆಳವಾಡಿ ಸಂಸ್ಥಾನದ ಕೋಟೆಯನ್ನು ಮುತ್ತಿಗೆ ಹಾಕಲು ಬಂದು 27 ದಿನಗಳ ಕಾಲ ನಡೆದ ಯುದ್ಧದಲ್ಲಿ ಮಲ್ಲಮ್ಮನ ಕೈಯಿಂದ ಸೋಲುಂಡ ಶಿವಾಜಿ. 1677ರಲ್ಲಿ ಶ್ರೀರಂಗಪಟ್ಟಣ ಕೊಳ್ಳೆ ಹೊಡೆದು ಸಂಪತ್ತನ್ನೆಲ್ಲ ಮಹಾರಾಷ್ಟ್ರಕ್ಕೆ ಸಾಗಿಸಿ ಮತ್ತೊಮ್ಮೆ ಕೊಳ್ಳೆ ಹೊಡೆಯಲು ಬಂದು ಮೈಸೂರು ಒಡೆಯರಾದ ಚಿಕ್ಕದೇವರಾಜ ಒಡೆಯರ ಹತ್ತಿರ ಸೋತಿದ್ದು. 1682ರಲ್ಲಿ ಶಿವಾಜಿ ಸತ್ತ ಮೇಲೆ ಅವನ ಮಗ ಸಂಭಾಜಿ ಹಾಸನ ಜಿಲ್ಲೆಯ ಮೇಲೆ ದಾಳಿ ಮಾಡಲು ಬಂದು ಬಾಣವಾರದಲ್ಲಿ ಚಿಕ್ಕದೇವರಾಜ ಒಡೆಯರ ಹತ್ತಿರ ಸೋತ್ತಿದ್ದು. 1770ರಲ್ಲಿ ಪೇಶ್ವ ಮಾಧವ ರಾವ್ ಬರಗಾಲಕ್ಕೆ ತುತ್ತಾಗಿದ್ದ ಮೈಸೂರು ಸಂಸ್ಥಾನದ ಚಾಮರಾಜನಗರ ಜಿಲ್ಲೆಯ ಮೇಲೆ ದಾಳಿ ಮಾಡಿ ಕೊಳ್ಳೆ ಹೊಡೆದದ್ದು. 1791ರಲ್ಲಿ ಶೃಂಗೇರಿ ಮಠದ ಮೇಲೆ ಪೇಶ್ವೆಗಳು ಪಿಂಡಾರಿಗಳನ್ನು ಬಿಟ್ಟು ಕೊಳ್ಳೆ ಹೊಡೆದಿದ್ದು. 1792ರಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ಪರಶುರಾಮ್ ಭಾವು ಎನ್ನುವವನ ಮರಾಠ ಸೇನಾ ತುಕಡಿ 6000 ಮನೆಗಳನ್ನು ಸುಟ್ಟು ಅಲ್ಲಿನ ಹೆಣ್ಣುಮಕ್ಕಳನ್ನು ಹೊತ್ತೊಯ್ದಿದ್ದು. ಇನ್ನೂ ಬೇಕಾದಷ್ಟು ಉದಾಹರಣೆಗಳಿವೆ. ಮರಾಠ ಸಾಮ್ರಾಜ್ಯದವರು ಕರ್ನಾಟಕದ, ಕನ್ನಡಿಗರ ಮೇಲೆ ನಡೆಸಿರುವ ಹಲ್ಲೆಗಳನ್ನು ವ್ಯವಸ್ಥಿತವಾಗಿ ಮುಚ್ಚಿಹಾಕಲಾಗಿದೆ. ಇನ್ನೂ ಶಿವಾಜಿ ತನ್ನ ಮೂಲದ ಬಗ್ಗೆ ಕೆಟ್ಟ ಕೀಳರಿಮೆಯನ್ನು ಇಟ್ಟುಕೊಂಡಿದ್ದನು. ರಾಜ್ಯ ಪಟ್ಟಗಳ ಆಸೆಗೆ ಅದನ್ನು ತಿದ್ದಿಸಿಯೂ ಬಿಟ್ಟ! ಮೂಲದಲ್ಲಿ ಕಾನಡಿ ಬೋಸಲೆ ಎಂಬ ಕನ್ನಡ ಶೂದ್ರ ಜಾತಿಯವನಾಗಿದ್ದು, ರಾಜ್ಯ ಪಟ್ಟ ಅಧಿಕಾರದ ಆಸೆಗೆ, ತನ್ನನ್ನು ತಾನು ರಜಪೂತನೆಂದು ಸಿಸೊಡಿಯ ರಾಣಪಂಥೀಯನೆಂದು ತನ್ನ ಮೂಲವನ್ನು ತಿದ್ದಿಸಿಕೊಂಡು ಅಧಿಕಾರ ಪಡೆಯುತ್ತಾನೆ. ಅವನೇ ಬೇಡವೆಂದು ಎಡಗಾಲಿನಲ್ಲಿ ಒದ್ದು ಹೋದ ಕನ್ನಡ ಮೂಲವನ್ನು ಈಗ ಕೆಲವು ಎಡಬಿಡಂಗಿಗಳು ನಾಚಿಕೆ ಇಲ್ಲದೆ ಪ್ರಚಾರ ಮಾಡುತ್ತಿರುವುದು ಅಸಯ್ಯ! ಅಧಿಕಾರದ ಆಸೆಗೆ ಮೊದಲ “ಫೇಕ್ ಕ್ಯಾಸ್ಟ್ ಸರ್ಟಿಫಿಕೇಟ್” ಪಡೆದ ದೊಡ್ಡ ಕಂತ್ರಿ ಈತ. ಇಂಥವರು ಅಧಿಕಾರದ ಆಸೆಗೆ ಅಪ್ಪನ ಹೆಸರನ್ನೂ ಸಹ ಬದಲಿಸಿಕೊಂಡುಬಿಡ್ತಾರೆ. ಈತನ ಸಾಮ್ರಾಜ್ಯದಲ್ಲಿದ್ದ ಬಹುತೇಕ ಅಂಗರಕ್ಷಕರು, ಸೇನಾಧಿಪತಿಗಳು, ಖಜಾಂಚಿಗಳು, ಅಧಿಕಾರಿಗಳೆಲ್ಲರೂ ಮುಸಲ್ಮಾನರೇ. ಮಂತ್ರಿ ಪದವಿ ಮಾತ್ರ ಪೇಶ್ವೆ ಬ್ರಾಹ್ಮಣರದ್ದು. ಅಳಿದುಳಿದ ಸಣ್ಣಪುಟ್ಟ ಸ್ಥಾನಗಳು ಮಾತ್ರ ಶೂದ್ರ ಅವರ್ಣೀಯ ಹಾಗೂ ಇತರೆ ಸಮುದಾಯಗಳಿಗೆ. ಈತನ ಎಂಟು ಜನ ಹೆಂಡಿರುಗಳ ಪೈಕಿ ಇಬ್ಬರು ಮುಸಲ್ಮಾನರು. ಇನ್ನೂ ಈತನ ಪೂರ್ವ ಪರಂಪರೆಯೇ ದೊಡ್ಡ ದುರಂತ. ಪಾಳು ಹಂಪೆಯ ಛಿದ್ರಗೊಂಡ ಕಟ್ಟಡ ಶಿಲ್ಪಗಳನ್ನು ನೋಡುವಾಗ ಕೇವಲ ಸುಲ್ತಾನರನ್ನು ನೆನೆದು, ಬೈದುಕೊಂಡು ಅವರಿಗೆ ಹಿಡಿ ಶಾಪ ಹಾಕಿಬಿಟ್ಟರೆ ಸಾಲದು. ಅವರೊಡನೆ ಕೈ ಜೋಡಿಸಿ ಹಂಪಿಯನ್ನ ಇಂಚಿಂಚೂ ಹಾಳಗೆಡವಿದ ಶಿವಾಜಿ ಪೂರ್ವಜರಾದ ಹಳೆ ಮರಾಠ ಸೈನಿಕರೇನು ಸಾಚಾಗಳೇ? ಇಂಡೋ‌ ಸಿಥಿಯನ್, ತುರ್ಕರು ಹಾಗೂ ಕಾನಡಿಗಳ ಬೆರಕೆಯಾಗಿ ರೂಪುಗೊಂಡ ಈ ಮರಾಠರು, ಮೂಲದಲ್ಲಿ ಸುಲ್ತಾನರ ಗುಲಾಮರಾಗಿ, ಅವರ ಆಸ್ಥಾನದಲ್ಲಿ ಕಾಲಾಳುಪಡೆಗಳಾಗಿ ಇದ್ದರು.‌ ಶಿವಾಜಿಯ ತಂದೆ ಶಹಾಜಿಯೂ ಸಹ ಅಂತಹ ಗುಲಾಮರಲ್ಲಿ ಒಬ್ಬ‌. ಬಂಗಾಳದ ಹಿಂದೂಗಳಂತು ಮರಾಠರನ್ನು ದರಿದ್ರದ ಸಂಕೇತ ಎಂದೇ ಪರಿಗಣಿಸುತ್ತಾರೆ. ಬಂಗಾಳಿ ಜಾನಪದವು ಮರಾಠರ ಕುದುರೆ ಕಾಲಿಟ್ಟ ಕಡೆ ದಟ್ಟದಾರಿದ್ರ್ಯ ಆವರಿಸುತ್ತದೆ ಎಂಬ ಆಡುಮಾತುಗಳನ್ನು‌ ಹೊಂದಿದೆ. ಇದೇ ಕಾರಣಕ್ಕೆ ಕೆಚ್ಚೆದೆ, ಸ್ವಾಭಿಮಾನ ಇರುವ ಬಂಗಾಳಿಗಳು ಮರಾಠರೆಂದರೆ, ಶಿವಾಜಿ ಎಂದರೆ ಕವಡೆ ಕಾಸಿನ ಕಿಮ್ಮತ್ತು ತೋರುವುದಿಲ್ಲ. ಹಿಂದೂಗಳನ್ನೇ ಕೊಳ್ಳೆ ಹೊಡೆದು, ಹಿಂದೂ ಹೆಂಗಸರನ್ನೇ ಅಪಹರಿಸಿ ಅತ್ಯಾಚಾರಗಳ ಮಾಡಿದ ಈ ಸಾಮ್ರಾಜ್ಯ ಹಿಂದೂ ಧರ್ಮ ರಕ್ಷಕ ಸಾಮ್ರಾಜ್ಯ ಹೇಗಾಗುತ್ತದೆ? ಇವರ ಅತ್ಯಾಚಾರಗಳಿಗೆ ಹುಟ್ಟಿದವರು ಮಾತ್ರ ಈ ಸಾಮ್ರಾಜ್ಯವನ್ನು ಹಿಂದೂ ಧರ್ಮ ರಕ್ಷಕ ಸಾಮ್ರಾಜ್ಯ ಎನ್ನಬಹುದಷ್ಟೇ. ❤️🙏🌷 ವಿಮಲ್ ನ್ಯೂಟ್ರಿಷನ್ ಸೆಂಟರ್ 🌷🙏❤️ #🎥 Motivational ಸ್ಟೇಟಸ್ #😍 ನನ್ನ ಸ್ಟೇಟಸ್ #👦🏻 Bad Boyz ಸ್ಟೇಟಸ್ #✍️ ಮೋಟಿವೇಷನಲ್ ಕೋಟ್ಸ್ #✍️ ಮೋಟಿವೇಷನಲ್ ಕೋಟ್ಸ್
🎥 Motivational ಸ್ಟೇಟಸ್ - ವಿಮಲ್ ನ್ಯೂಟ್ರಿಷನ್ ಸೆಂಟರ್ ವಿಮಲ್ ನ್ಯೂಟ್ರಿಷನ್ ಸೆಂಟರ್ - ShareChat
ಅಂದು ಶ್ರೀಕೃಷ್ಣನು ಹಸ್ತಿನಾಪುರಕ್ಕೆ ಬರುತ್ತಿದ್ದಾನೆಂದು ಗೂಢಾಚಾರರಿಂದ ಧೃತರಾಷ್ಟ್ರನಿಗೆ ತಿಳಿಯಿತು. ಅವನು ಭೀಷ್ಮ, ವಿದುರ ಮತ್ತು ಸಂಜಯನಿಗೆ ಹೇಳಿಕಳುಹಿಸಿದನು. ದ್ರೋಣ ದುರ್ಯೋದನರೂ ಅಲ್ಲಿದ್ದರು‌. ಆಗ ಧೃತರಾಷ್ಟ್ರನು:- "ಮಹಾತ್ಮನಾದ ಕೃಷ್ಣನು ಯುದ್ದ ವಿಚಾರವಾಗಿ ಮಾತನಾಡಲು ಹಸ್ತಿನಾಪುರಕ್ಕೆ ಬರುತ್ತಿದ್ದಾನೆ. ಅವನನ್ನು ಗೌರವಿಸಿಕೊಳ್ಳಬೆಕು, ಒಲಿಸಿಕೊಳ್ಳಬೆಕು. ಈಗ ಅವನ ಶುಭಾಶಂಸನೆ ಅತ್ಯವಶ್ಯಕ. ಅವನನ್ನು ಎದುರುಗೊಳ್ಳಲು ಏರ್ಪಾಡು ಮಾಡಿ. ಅವನ ಪ್ರಯಾಣ ಪ್ರಯಾಸವಾಗದಂತೆ ನೋಡಿಕೊಳ್ಳಿ, ಭೀಷ್ಮರು ಈಗ ಏನನ್ನುವರು ?" ಎಂದು ಹೇಳಿದನು. ರಾಜನಾದ ಧೃತರಾಷ್ಟರನ ಮಾತಿಗೆ ಯಾರೂ ಇಲ್ಲವೆನ್ನಲಿಲ್ಲ. ದುರ್ಯೋದನ ಎಲ್ಲ ಏರ್ಪಾಡುಗಳನ್ನ ಮಾಡಿ, ರಾಜನಿಗೆ ವರದಿ ಮಾಡಿದನು. ವಿದುರನಿಗೆ ಧೃತರಾಷ್ಟ್ರನು:- "ಕೃಷ್ಣನು ಇಂದು ರಾತ್ರಿ ಕುಶಸ್ಥಳ ಎಂಬಲ್ಲಿ ಉಳಿದು ನಾಳೆ ಹಸ್ತಿನಾಪುರಕ್ಕೆ ಬರುತ್ತಿದ್ದಾನೆ‌. ಮಹಾಪುರುಷನಾದ ಆತನ ಸ್ವಾಗತವನ್ನ ನೀನೆ ನೋಡಿಕೊಳ್ಳಬೇಕು. ಅನೇಕ ರತ್ನಾಭರಣಗಳನ್ನು, ರಥ ಕುದುರೆಗಳನ್ನೂ ಇನ್ನೂ ಸಾವಿರಾರು ವಸ್ತ್ರಗಳನ್ನ ಕೊಡಬೇಕೆಂದಿದ್ದೇನೆ. ಅವನನ್ನು ಮೆಚ್ಚಿಸಲು ನಾನು ಕಾತುರದಿಂದ್ದೇನೆ ಏನನ್ನುತ್ತೀ" ಎಂದು ಕೇಳಿದನು. ತನ್ನಲ್ಲಿಯೇ ನಕ್ಕು ವಿದುರನು:- "ಕೃಷ್ಣನು ಈ ಭೂಮಿಯಲ್ಲಿ ಈ ಹಿಂದೆಯೇ ಆಗಿ ಹೋದ, ಈಗ ಇರುವ ಮತ್ತೆ ಮುಂದೆ ಹುಟ್ಟಲಿರುವ ಪುರುಷರಲ್ಲೆಲ್ಲ ಉತ್ತಮನು ಸರಿ. ಆದರೇ ಮಕ್ಕಳಂತೆ ಮಾತನಾಡುತ್ತಿರಿವುದನ್ನ ನೋಡಿ ನನಗೆ ನಗು ಬರುತ್ತಿದೆ. ಕೃಷ್ಣನಿಗೆ ಉಡುಗೊರೆಯನ್ನು ಕೊಡುವುದೇ..? ಅವನಿಗೆ ಇಡೀ ಭೂಮಂಡಲವನ್ನೆ ಕೊಟ್ಟರೂ ಸಾಲದು. ಅದು ಬೇರೆ ವಿಚಾರ. ನಾನು ನಿನ್ನ ಜೊತೆ ಬಾಲ್ಯದಿಂದ ಬೆಳೆದವನು. ನಿನ್ನ ಒಳಗೂ ಹೊರಗೂ ನನಗೆ ಗೊತ್ತು. ನನ್ನಿಂದ ನೀ ಏನನ್ನೂ ಮುಚ್ಚಿಡಲಾರೆ. ಅವನನ್ನು ಲಂಚ ಕೊಟ್ಟು ಒಲಿಸಿಕೊಳ್ಳುವುದಕ್ಕೆ ನೋಡುತ್ತಿರುವೆಯಾ ? ಇದೇನು ಇದ್ದಕ್ಕಿದ್ದ ಹಾಗೆ ಉದಾರಿಯಾಗಿಬಿಟ್ಟೆ ? ಪಾಂಡವರ ಹಾಗೂ ನಿನ್ನ‌ ಮಕ್ಕಳ ವಿಚಾರವಾಗಿ ಮಾತನಾಡಲು ಬರುವವರಿಗೆ ಏನೆಲ್ಲ ಕೊಡಲು ಸಿದ್ದನಾಗಿಬಿಟ್ಟಿದ್ದಿಯಾ ? ಪಾಂಡವರಿಗಾಗಿ ಐದು ಹಳ್ಳಿಗಳನ್ನ ಕೊಡಲು ಮನಸ್ಸು ನಿನಗೆ ಬರಲಿಲ್ಲ. ಆದರೇ ಅವನ ದೂತನಿಗೆ ಏಕೆ ಇಷ್ಟೊಂದು ಸಂಭ್ರಮದ ಆದರ...?" "ನೀನು ಕೃಷ್ಣನನ್ನು ಅಷ್ಟೊಂದು ಸುಲಭವಾಗಿ ನಮ್ಮ ಕಡೆಗೆ ಒಲಿಸುಕೊಳ್ಳುವುದಕ್ಕೆ ಆಗದು. ಅವನ ಜೀವ ಅರ್ಜನನೊಂದಿಗೆ ಇದೆ. ನೀನು ಏನೂ ಕೊಟ್ಟರೂ ಪಾಂಡವರಿಂದ, ಅರ್ಜುನಿಂದ ಅವರನ್ನು ಬೇರ್ಪಡಿಸಲಾರೆ. ನಿನಗೆ ನಿಜವಾಗಿಯೂ ಅವನನ್ನು ಮೆಚ್ಚಿಸುವ ಮನಸಿದ್ದರೇ, ಅವನು ಹೇಳಿದ್ದನ್ನು ಮಾಡು. ಕೇಳಿದ್ದನ್ನು‌ ಕೊಟ್ಟು ಗೌರವಿಸು. ಅವನಿಲ್ಲೀಗ ಬರುತ್ತಿರುವುದು ನಿನಗೂ ನಿನ್ನ ಮಗನಿಗೂ ಯುದ್ಧದ ದುಷ್ಪರಿಣಾಮಗಳನ್ನು ಪಾಂಡವರಿಗೆ ನೀವು ಮಾಡಿದ ಅನ್ಯಾಯಗಳನ್ನು, ನಿನ್ನ ಲೋಭವನ್ನು, ನಿನ್ನ ಸ್ವಾರ್ಥಕ್ಕಾಗಿ ರಾಜರೆಲ್ಲರ ರಕ್ತವನ್ನು ಬಸಿಯಲು ಹೊರಟಿರುವುದನ್ನು ಮನವರಿಕೆ ಮಾಡಿಕೊಡುವುದಕ್ಕೆ, ಅವನು ಬರುತ್ತಿರುವುದು ಕುರುವಂಶಕ್ಕೆ ಒಳ್ಳೆಯದನ್ನು ಮಾಡುವುದಕ್ಕೆ‌. ಅವನು ಬಯಸುವುದು ಶಾಂತಿಯನ್ನ. ಅದನ್ನು ಗೌರವಿಸಿ ಯುದ್ದ ಸಿಧ್ಧತೆಗಳನ್ನು ನೀನು ನಿಲ್ಲಿಸಿದರೇ, ಅದು ಅವನಿಗೆ ಮಾಡುವ ನಿಜವಾದ ಸ್ವಾಗತವಾಗಬಹುದು. ನೀನು‌ ತಂದೆಯಿಲ್ಲದ ಮಕ್ಕಳಿಗೆ ತಂದೆ. ಆ ತಬ್ಬಲಿಗಳಿಗೆ ಸ್ವಲ್ಪ ಪ್ರೀತಿ ತೋರಿಸುವುದು ಅಣ್ಟು ಕಷ್ಟವೇ ?" ಎಂದು ವಿದುರನು ಹೇಳಿದನು. ಇದನ್ನೆಲ್ಲ ಕೇಳಿದ ದುರ್ಯೋದನನು:- "ಚಿಕ್ಕಪ್ಪ ಹೇಳುತ್ತಿರುವುದು ಸರಿ. ಕೃಷ್ಣನು, ಪಾಂಡವರ ಪಕ್ಷಪಾತಿ ಎಂಬುದರಲ್ಲಿ ಸಂದೇಹವಿಲ್ಲ. ಉಡುಗೊರೆಗಳನ್ನು ಕೊಡಬೇಕಾದರೇ ವಿವೇಚನೆ ಬೇಕು. ಎಲ್ಲಕ್ಕೂ ಒಂದು ಸಂದರ್ಭ ಅಗತ್ಯ. ನಿನ್ನ ಯೋಚನೆ ಪೆದ್ಧುತನದ್ದು. ಕೃಷ್ಣನೇನೂ ಮೂರ್ಖನಲ್ಲ. ಅವನು ನಮ್ಮನ್ನು ನೋಡಿ ನಕ್ಕಾನು. ಹೆದರಿಕೆಯಿಂದ ಅವನನ್ನು ಮೆಚ್ಚಿಸಲು ಹೊರಟಿರುವೆವು ಎಂದು ತಿಳಿಯಬಹುದು. ಅವನ ಮುಂದೆ ಹೀಗೆ ಹಲ್ಲುಗಿಂಜುವುದು ನಮ್ಮ‌ ಮರ್ಯಾದೆಗೆ ಕಡಿಮೆ. ಅವನಿಗೂ ಅದು ಕಿರಿಕಿರಿ ಆಗುವುದು. ಅವನು ಉತ್ತಮರಲ್ಲಿ ಉತ್ತಮ. ಇಂತಹ ಅಲ್ಪ ಉಡುಗೊರೆ ಕೊಟ್ಟು ಅವಮಾನಿಸಬಾರದು. ಅದರಿಂದ ನಮ್ಮ ಉದ್ದೇಶ ಸಾಧನೆಯೂ ಆಗದು. ಮಾರ್ಯಾದೆ ಮಾಡೋಣ; ಆದರೇ ಈ ಒಲಿಸಿಕೊಳ್ಳುವ ಯೋಚನೆ ಬಿಟ್ಟುಬಿಡು; ಜನ ನಮ್ಮನ್ಮು ನೋಡಿ ನಕ್ಕುಬಿಡುವರು !" ಎಂದನು. ಭೀಷ್ಮನು:- "ನೀವು ಮರ್ಯಾದೆ ಮಾಡಿದರೂ ಅಷ್ಟೆ, ಮಾಡದಿದ್ದರೂ ಅಷ್ಟೆ. ಕೃಷ್ಣನಿಗೇನೂ ಅನಿಸುವುದಿಲ್ಲ. ಯಾವನಾದರೂ ಮೂರ್ಖತನದಿಂದ ಅವನನ್ನು ಅವಮಾನ ಮಾಡಲು ಎತ್ನಿಸಿದರೂ ಅವನು ಅದನ್ನು ಪರಿಗಣಿಸದಿರುವಷ್ಟು ಮೇಲ್ಮಟ್ಟದವನು‌. ಸತ್ಯದ ಪರವಾಗಿರುವ ಅವನು ಪಾಂಡವರಿಗಾದ ಅನ್ಯಾಯವನ್ನು ಸರಿಪಡಿಸಬೇಕೆನ್ನುವವನು. ಅವನು ಹೇಳುವುದನ್ನ ನೀವು ಕೇಳಿದ್ದೇ ಆದರೇ, ಅವನಿಗೆ ಸಂತೋಷವಾಗುವುದು. ಅದನ್ನೇ ನೀವು ಮಾಡಬೇಕು" ಎಂದನು. ದುರ್ಯೋದನನು:- "ಅಜ್ಜನು ಯಾವಾಗಲೂ ಮಾತನಾಡುವುದು ಪಾಂಡವರ ಬಗ್ಗೆಯೇ. ಪಾಂಡವರನ್ನು ನನ್ನ ಸೇವಕರನ್ನಾಗಿಸಿಕೊಳ್ಳಲು ನಾನೊಂದು ಉಪಾಯ ಮಾಡಿದ್ದೇನೆ. ಬರಲಿರುವ ಈ ಪಾಂಡವರ ಸ್ನೇಹಿತನನ್ನು ಸೆರೆಯಲ್ಲಿಡುವೆ. ಆಗ ಅವರು ನಿಸ್ಸಹಾಯಕರಾಗುವರು. ಇದು ಸಾಧ್ಯವಾಗುವುದಾದರೇ ಒಳ್ಳೆಯ ಉಪಾಯವಲ್ಲವೇ ?" ಎಂದನು. ಗಾಭರಿಯಾದ ಧೃತರಾಷ್ಟ್ರನು:- "ಛೇ.. ಛೇ.. ಬೇಡ. ಹಾಗೆಲ್ಲ ಯೋಚಿಸುವುದೂ ತಪ್ಪು. ಕೃಷ್ಣನು ಬರುತ್ತಿರುವುದು ರಾಯಭಾರಿಯಾಗಿ. ಮೇಲಾಗಿ ಅವನು ನಮ್ಮ ಸಂಭಂದಿ. ಹಾಗೆಲ್ಲ ಮಾಡುವುದಕ್ಕೆ ಹೋಗಬೇಡ ದುರ್ಯೋಧನ" ಎಂದನು. ಜಿಗುಪ್ಸೆಯಿಂದ ಭೀಷ್ಮನು:- "ಈ ನಿನ್ನ ಮಗ ವಿವೇಕವನ್ನು ಕಳೆದುಕೋಳ್ಳುತ್ತಿದ್ದಾನೆ. ದುರಾದೃಷ್ಣವನ್ನು ತಾನಾಗಿ ಬರಮಾಡಿಕೊಳ್ಳುತ್ತಿದ್ದಾನೆ. ಅವನೂ ಅವರ ಗೆಳೆಯರೂ ಪರಮ ಪಾಪಿಗಳು. ಅವನ ಒಳಿತಿಗಾಗಿ ನಾವು ಹೇಳಿದ್ದನ್ನು ಉದಾಸೀನ ಮಾಡುತ್ತಾನೆ. ಈಗ ಕೃಷ್ಣನನ್ನು ಬಂದಿಸುತ್ತಾನಂತೆ ! ಇವನ ಮಾತುಗಳನ್ನು ನಾನಿನ್ನು ಖಂಡಿತ ಕೇಳಲಾರೆ" ಎಂದು ಇನ್ನೇನೂ ಮಾತನಾಡದೇ ಸಭೆಯಿಂದ ಎದ್ದು ಹೋದನು. ಬೆಳಿಗ್ಗೆ ಕೃಷ್ಣನು ಹಸ್ತಿನಾಪುರಕ್ಕೆ ಬಂದನು. ಭೀಷ್ಮ, ದ್ರೋಣ, ಕೃಪರೊಂದಿಗೆ, ಧೃತರಾಷ್ಟ್ರನು ಅವರೊಂದಿಗೆ ಎದುರುಗೋಳ್ಳಲು ಹೋದನು. ದುರ್ಯೋದನ ಕರ್ಣ ಮತ್ತಿತರರು ಬಂದಿರಲಿಲ್ಲ. ರಸ್ತೆಗಳನ್ನೆಲ್ಲ ಸಿಂಗರಿಸಿದ್ದ ಪುರಜನರು, ಕೃಷ್ಣನನ್ನು ನಗುನಗುತ್ತಾ ಪ್ರೀತಿಯಿಂದ ಬರಮಾಡಿಕೊಂಡರು. ಕೃಷ್ಣನು ಅರಮನೆಗೆ ಬಂದು ಧೃತರಾಷ್ಟ್ರನು ಹಾಕಿಸಿದ್ದ ರತ್ನ ಖಚಿತವಾದ ಆಸನದ ಮೇಲೆ‌ ಕುಳಿತನು. ಮಂದಹಾಸವು ಮುಖದಲ್ಲಿ ಶೋಭಿಸುತ್ತಿತ್ತು. ಕುಶಲ ಪ್ರೆಶ್ನೆಗಳಾದ ಮೇಲೆ ಅಲ್ಲಿಂದ ಕೃಷ್ಣನು ಹೊರಟು ವಿದುರನ ಮನೆಗೆ ಹೋದನು. ವಿದುರನಿಗೆ ಬಹಳ ಸಂತೋಷವಾಯಿತು‌. ಆನಂದ ಬಾಷ್ಪಗಳನ್ನು ಸುರಿಸುತ್ತಾ ಅವನು ಆದರಿಂದ ಸ್ವಾಗತಿಸಿದನು. ಕುಂತಿಯ ಮಕ್ಕಳು ಹೇಗಿರುವರೆಂದು ವಿಚಾರಿಸಲು, ಕಳೆದ ಕೆಲವು ದಿನಗಳಲ್ಲಿ ನಡೆದುದನ್ನು ಎಲ್ಲವೂ ವಿವರಿಸಿದನು. ಕುಂತಿಯು ವಿದುರನ ಮನೆಯಲ್ಲಿದ್ದಳು ಅಷ್ಟೆ. ಕೃಷ್ಣನು ಅವಳಿದ್ದಲ್ಲಿಗೆ ಹೋಗಲು, ಕುಂತಿಗೆ ಭಾವ ತೀವ್ರತೆಯಿಂದ ಕಣ್ಣೀರು ಬಂತು. ಗದ್ಗದ ಕಂಠದಿಂದ ಕುಂತಿಯು:- "ನನ್ನ ಮಗು ಯುದಿಷ್ಟಿರ ಹೇಗಿದ್ದಾನಪ್ಪಾ ? ಭೀಮ? ಅವನೆಂದರೇ ಯುದಿಷ್ಟಿರನಿಗೆ ಬಹಳ ಪ್ರೀತಿ. ಅರಮನೆಯ ಸುಖಜೀವನಕ್ಕೆ ಒಗ್ಗಿಕೊಂಡಿದ್ದವನು; ಕಾಡಿನಲ್ಲಿ ಇಷ್ಟೊಂದು ವರ್ಷಗಳು ಹೇಗೆ ಕಳೆದ ? ಅರ್ಜುನ ತನ್ನ ಶೌರ್ಯವನ್ನು ಇಷ್ಟು ವರ್ಷಗಳ ಕಾಲ ಹೇಗೆ ಬಚ್ಚಿಟ್ಟುಕೊಂಡಿದ್ದ ? ನಕುಲ ಸಹದೇವರು ಹೇಗಿದ್ದಾರೆ? ತನ್ನ ಮೇಲೆ ಹೇರಲ್ಪಟ್ಟ ಕಷ್ಟಗಳನ್ನು ಆ ಅಗ್ನಿಪುತ್ರಿ (ದ್ರೌಪದಿ) ಹೇಗೆ ಸಹಿಸಿದಳು ?" ಎನ್ನುವಷ್ಟರಲ್ಲಿ ದುಃಖ ಉಕ್ಕಿಬಂದು ಇನ್ನು ಮಾತನಾಡಲು ಅವಳಿಗೆ ಸಾಧ್ಯವಾಗದಾಯಿತು. ಮೃದುವಚನಗಳಿಂದ ಕುಂತಿಯನ್ನು ಸಮಾಧಾನ ಮಾಡಿದ, ಕೃಷ್ಣನು:- "ನಿನ್ನ ಮಕ್ಕಳು ಈಗ ತಮ್ಮ ವನವಾಸ ಅಜ್ಞಾತವಾಸ ಮುಗಿಸಿ, ಪುಟಕ್ಕಿಟ್ಟ ಚಿನ್ನದಂತೆ ಹೊರಹೊಮ್ಮಿದ್ದಾರೆ‌. ಧೀರರಾಗಿ ಕಷ್ಟಗಳನ್ನು ಸಹಿಸಿದ್ದಾರೆ. ತಪಸ್ಸಿನ ಫಲ ಅವರಿಗೀಗ ದೊರಕಿದೆ. ಕಷ್ಟದ ಕಾಲ ಮುಗಿಯಿತು‌, ಸಮಾಧಾನ ಮಾಡಿಕೊ ತಾಯಿ" ಎಂದನು. ನಂತರ, ಕೃಷ್ಣನು ದುರ್ಯೋದನನ ಮನೆಗೆ ಹೋದನು. ಅದು ಇಂದ್ರನ ಅರಮನೆಯಂತೆ ಸುಂದರವಾಗಿತ್ತು. ಮೆಟ್ಟಿಲುಗಳನ್ನು ಹತ್ತಿ, ಸಭೆಯನ್ನು ಪ್ರವೇಷಿಸಿದನು. ದುರ್ಯೋದನನು ಸಿಂಹಾಸನದ ಮೇಲೆ ಕುಳಿತಿದ್ದನು. ಶಕುನಿ, ದುಶ್ಶಾಸನ ಮತ್ತು ರಾಧೇಯರು ಹತ್ತಿರದಲ್ಲಿದ್ದರು‌. ಕೃಷ್ಙನು ಬಂದ ನಂತರ ಎಲ್ಲರೂ ಎದ್ದು ನಿಂತು ಸ್ವಾಗತಿಸಿದರು. ಸುಂದರವಾಗಿ ಕುಸುರಿ ಕೆಲಸ ಮಾಡಿದ ರತ್ನ ಖಚಿತವಾದ ಆಸನದ ಮೇಲೆ ಕುಳ್ಳಿರಿಸಿದನು. ಕೃಷ್ಣನು ಮುಗುಳ್ನಗುತ್ತಾ ಕುಳಿತನು. ರಾಧೆಯನೊಂದಿಗೆ ಏನೋ ಹೇಳುತ್ತಿದ್ದವನು, ಈಗ ಕೃಷ್ಣನ ಕಡೆಗೆ ತಿರುಗಿ, ದುರ್ಯೋಧನನು:- "ಕೃಷ್ಣ, ನಿನ್ನ ವಾಸ್ತವ್ಯಕ್ಕೆ ಹಾಗೂ ಮನರಂಜೆನೆಗೆ ನಾವು ಎಲ್ಲಾ ಏರ್ಪಾಟುಗಳನಗನ್ನು ಮಾಡಿಸಿದ್ದೆವು. ಉತ್ತಮವಾದ ಭೋಜನವನ್ನೂ ಸಿದ್ಧಪಡಿಸಿದ್ದೇವು. ಅವೊಂದನ್ನು ಸ್ವೀಕರಿಸದೇ, ನೀನು ವಿದುರನ ಮನೆಗೆ ಹೋದದ್ದೇಕೆ‌ ?" ಎನ್ನಲು. ಕೃಷ್ಣನು:- "ಏಕೆ ದುರ್ಯೋದನ, ನೀನು ನನ್ನನ್ನು ಚೆನ್ನಾಗಿಯೇ ನೋಡಿಕೊಳ್ಳುತ್ತಿರುವೆ. ನಿನ್ನ ಮನೆಯಲ್ಲಿ ಊಟ ಮಾಡದಿದ್ದರೇನಾಯಿತು ? ನಾನು ಬಂದ ಕೆಲಸವಾದ ಮೇಲೆ ಬಂದು ಊಟ ಮಾಡುವೆ" ಎನ್ನಲು. ದುರ್ಯೋದನನು:- "ನಮ್ಮ ಆತಿಥ್ಯವನ್ನು ಉದಾಸೀನ ಮಾಡಿದೆಯಲ‌್ಲ ? ನೀನು ಹೀಗೆ ಮಾಡಬಾರದಾಗಿತ್ತು. ನಮ್ಮ ನಡುವೇ ಶತ್ರುತ್ವ ಏನಿದೆ ? ಆದರೇ, ನಿನ್ನನ್ನು ಕಂಡರೇ ನಮಗೆಲ್ಲ ತುಂಬಾ ಪ್ರೀತಿ !" ಎಂದನು. ಕೃಷ್ಣನು ಮೃದುವಾಗಿ ನಕ್ಕು:- "ಇರುವುದನ್ನು ಹೇಳಿಬಿಡುತ್ತೇನೆ. ನಿನ್ನ ಮೃಷ್ಟಾನ್ನ ಇತ್ಯಾದಿಗಳು ನನಗೆ ಇಷ್ಟವಿಲ್ಲ. ಋಜುತ್ವವಿಲ್ಲದ ಮನೆಯಲ್ಲಿ ನಾನು ಊಟ ಮಾಡಲಾರೆ. ನನಗೆ ಪ್ರೀತಿಪಾತ್ರರಾದ ಪಾಂಡವರನ್ನು ನೀನು ಅನೇಕ ವರ್ಷಗಳಿಂದ ಕಾರಣವಿಲ್ಲದೇ ದ್ವೇಷಸುತ್ತೀದ್ದಿಯೇ. ಪಾಂಡವರ ಜೀವವೇ ನಾನು. ಲೋಭಕ್ಕೆ ದಾಸನಾಗಿರುವವನನ್ನು ನಾನು ಕೀಳು ಮನುಷ್ಯನೆಂದು ಭಾವಿಸುತ್ತೇನೆ. ನೀನು ಅವರನ್ನು ದ್ವೇಷಿಸುವುದರಿಂದ ನಿನ್ನ ಅನ್ನವು ನನಗೆ ಶತ್ರುವಿನ ಅನ್ನ; ನಾನು ಅದನ್ನು ತಿನ್ನಲಾರೆ. ಅದರಿಂದಾಗಿಯೇ ಪಾಂಡವರನನ್ನು ಪ್ರೀತಿಸುವ ವಿದುರನ ಮನೆಯಲ್ಲಿ ಊಟ ಮಾಡುವೆ" ಎಂದು ಮೇಲೆದ್ದು ಹೊರಟು ಹೋದನು‌. ಭೀಷ್ಮ, ಕೃಪರು ಕರೆದರೂ ಅವರ ಮನೆಗೂ ಹೋಗದೇ, ನೇರವಾಗಿ ಕೃಷ್ಣನು ವಿದುರನ ಮನೆಗೆ ಬಂದನು. ಅವನು ಪ್ರೀತಿಯಿಂದ ಕೃಷ್ಣನನ್ನು ಪೂಜಿಸಿ ಉಣಬಡಿಸಲು, ಕೃಷ್ಣನು ಅಲ್ಲಿಯೇ ತಂಗಿದನು. ಸಂಜೆಯಾಯಿತು. ವಿಶ್ರಾಂತಿ ಆದ ಮೇಲೆ ಕೃಷ್ಣನು ಎದ್ದು ಕುಳಿತು, ಅಂದಿನ‌ ವಿಷಯವನ್ನು ವಿದುರನೊಂದಿಗೆ ಚರ್ಚಿಸಿದನು. ವಿದುರನು:- "ಕೃಷ್ಣ, ನೀನು ಹಸ್ತಿನಾಪುರಕ್ಕೆ ಬಂದದ್ದು ತಪ್ಪಾಯಿತು. ಮೂರ್ಖನಾದ ದುರ್ಯೋದನನು ಯಾರ ಮಾತನ್ನೂ ಕೇಳುವುದಿಲ್ಲ. ನಾವೆಲ್ಲ ಹಿರಿಯರು ಬೇಡವೆಂದು ಎಷ್ಟು ಹೇಳಿದರೂ, ಅವನು ಯುದ್ದ ಮಾಡಲೇ ಬೇಕು ಎಂದು ತೀರ್ಮಾನಿಸಿದ್ದಾನೆ. ತಾನು ಯುದ್ಧದಲ್ಲಿ ಗೆಲ್ಲುವನೆಂದೇ ಅವನ ನಂಬಿಕೆ. ರಾಧೇಯ ಶತ್ರುಗಳನ್ನೆಲ್ಲ ಕೊಲ್ಲಬಲ್ಲನೆಂದು ಅವನು ನಂಬಿದ್ದಾನೆ. ನಿನ್ನ ಮಾತನ್ನು ಅವನು ಕೇಳುವುದಿಲ್ಲ. ಆ ಪಾಪಿಗಳ ಮಧ್ಯದಲ್ಲಿ ನೀನು ಹೋಗಿ ಕುಳ್ಳಿರುವುದೇ ನನಗಿಷ್ಟವಿಲ್ಲ. ಸುಮ್ಮನೆ ಸಂದಿ ಮಾತಾಡಿ ಗಂಟಲು ‌ನೋಯಿಸಿಕೊಳ್ಳಬೇಡ. ಅವರು ನಿನ್ನನ್ನು ಅವಮಾನಿಸುವರು. ಅದನ್ನು ನಾನು ಹೇಗೆ ಸಹಿಸಲಿ ? ಕೃಷ್ಣ" ಎನ್ನಲು. ಕೃಷ್ಣನು:- "ವಿದುರ, ನಿನಗೆ ನನ್ನ ಮೇಲೆ ಅತಿಯಾದ ಪ್ರೀತಿಯಿರುವುದರಿಂದ ನಿನಗೆ ಹಾಗೆ ಎನಿಸುತ್ತದೆ. ನಾನು ಬಂದಿರುವುದೇಕೆಂದು ಕೇಳು. ಯುದ್ದ ನಡೆದೇ ನಡಿಯುವುದಾದರೂ, ಜನರು ವೃಥಾ ಸಾಯುವವರಲ್ಲ. ಅದನ್ನು ತಪ್ಪಿಸುವುದಕ್ಕಾದೀತೇ ಎಂದು ನೋಡೋಣ ಎಂದು ಬಂದೆ. ತಪ್ಪಿಸುವುದಕ್ಕಾದರೇ ದೊಡ್ಡ ಕೀರ್ತಿ ನನ್ನದಾಗುತ್ತದೆ. ಆಗದಿದ್ದರೂ ಅದಕ್ಕಾಗಿ ಪ್ರಯತ್ನಿಸಿದ ತೃಪ್ತಿ ನನಗೆ ಸಾಕು. ವಿನಾಶ ಹತ್ತಿರಕ್ಕೆ ಬಂದಿರವುದನ್ನು ಕಂಡರೂ ರಕ್ಷಣೆಗೆ ಧಾವಿಸದೇ ಇರುವವನು ಮನುಷ್ಯನೇ? ಅಪಾಯದಲ್ಲಿರುವವನನ್ನು ಕೂದಲು ಹಿಡಿದು ಎಳೆದಾದರೂ ರಕ್ಷಿಸಬೇಕು. ಮಾನವೀಯತೇಗೆ ಈ ಸೇವೆ ಮಾಡುವ ಇಷ್ಟ ನನ್ನದು. ಯುದಿಷ್ಟಿರನು ತನಗೆ ಶಾಂತಿ ಬೇಕೆಂದು ಹೇಳಿದ್ದಾನೆ‌. ದುರ್ಯೋದನನ್ನು ಒಪ್ಪಿಸಲು ಪ್ರಯತ್ನಿಸುತ್ತೇನೆ. ಈ ಪ್ರಯತ್ನದಲ್ಲಿ ಸೋತರೂ ಚಿಂತೆ ಇಲ್ಲ. ಪಾಂಡವರೊಡನೆ ಹೋರಾಡಲು ನಿರ್ಧರಿಸುವುದು ಎಂತಹಾ ಪಾಪವೆಂದು ನಾನು ಭೀಷ್ಮ-ದ್ರೋಣಾದಿಗಳಿಗೆ ತಿಳಿಸಿಕೊಡಬೇಕಾಗಿದೆ. ಯುದ್ಧವನ್ನು ತಪ್ಪಿಸಲಾಗದಿದ್ದರೂ, ಅದು ಏಕೆ ನಡೆಯುತ್ತದೆಂದೂ ಲೋಕವೂ ತಿಳಿಯಬೇಕು‌. ಅದೇ ನಾನು ಬರಲು ಕಾರಣ ವಿದುರ" ಎಂದನು. ಅಂದು ರಾತ್ರಿ ಮಾತನಾಡುತ್ತಾ ಎಲ್ಲರೂ ಮಲಗಿದರು. ಬೆಳಗಾಯಿತು. ಕೃಷ್ಣನು ತನ್ನ ಕರ್ಮಗಳನ್ನೆಲ್ಲ ಮುಗಿಸಿದೊಡನೆ ಅವನನ್ನು ಕರೆದುಕೊಂಡು ಹೋಗಲು ದುರ್ಯೋದನ, ಕರ್ಣನೊಂದಿಗೆ ಕೌರವರೆಲ್ಲರೂ ವಿದುರನ ಮನೆಗೆ ಬಂದರು. ಕೃಷ್ಣನು ವಿದುರನೊಂದಿಗೆ ರಥವನ್ನು ಏರಿ‌ ಕುಳಿತನು. ಎಲ್ಲರೂ ತಮ್ಮ ತಮ್ಮ ರಥಗಳಲ್ಲಿ ಬಂದರು. ಸಂಭ್ರಮದಿಂದ ಅವನನ್ನು ಸ್ಬಾಗತಿಸಿದರು. ಕೃಷ್ಣನನ್ನು ನೋಡಲು ಜನ ಜಂಗುಳಿ ದಟ್ಟೈಸಿತ್ತು. ಮೆರವಣಿಗೆ ಅರಮನೆಗೆ ಬಂದಿತು. ವಿದುರ, ಸಾತ್ಯಕಿ ಕೃಷ್ಣನನ್ನು ಕೈ ಹಿಡಿದು ಇಳಿಸಿದರು. ಕೃಷ್ಣನು ಹಾಗೆ ರಾಜಸಭೆಯನ್ನು ಪ್ರವೇಶಿಸಿದನು. ಧೃತರಾಷ್ಟ್ರ ಮತ್ತಿತರು ಎದ್ದು ನಿಂತು ಗೌರವಿಸಿದರು. ತನಗಾಗಿ ಇರಿಸಿದ ಆಸನವನ್ನು ಕುಳಿತುಕೊಳ್ಳುವ ಮುನ್ನ ಕೃಷ್ಣನು ನಾರದ ಮತ್ತಿತರ ಋಷಿಗಳು ಬರುತ್ತಿರುವುದನ್ನು ಕಂಡು, ಅದನ್ನು ಭೀಷ್ಮನಿಗೆ ತಿಸಿದನು‌. ಭೀಷ್ಮನು ಅವರನ್ನೆಲ್ಲ ಗೌರವದಿಂದ ಕರೆತಂದು ಆಸನದಲ್ಲಿ ಕುಳ್ಳಿರಿಸಿದ ಮೇಲೆ, ಕೃಷ್ಣನು ಮುಸಿನಗುತ್ತಾ ಕುಳಿತನು. ಅವನ ಇರುವಿಕೆಯಿಂದ ಇಡೀ ಸಭೆ ಶೋಭೆಯನ್ನು ತಂದುಕೊಟ್ಟಿತು. ಎದೆಯ ಮೇಲೆ ಕೌಸ್ತುಭ ರತ್ನ, ಅವನಿಗೆ ಪ್ರಿಯವಾದ ಹಳದೀ ಪೀತಾಂಬರ, ಇವುಗಳ ನಡುವೆ ಎಳೆ ಬಿಸಿಲು ಬಿದ್ದಿರುವ ನೀಲಪರ್ವದಂತೆ ಕೃಷ್ಣನು ಕಾಣಿಸುತ್ತಿದ್ದನು. ಸ್ವಲ್ಪ ಹೊತ್ತು ಗಾಢ ಮೌನ. ಇದ್ದಕ್ಕಿದ್ದಂತೆ ದೂರದ ಮೇಘಗರ್ಜನೆಯಂತೆ ಕೃಷ್ಣನ ವಾಣಿ ಮೊಳಗಿತು. ಧೃತರಾಷ್ಟ್ರನನ್ನು ಉದ್ದೇಶಿಸಿ, ಕೃಷ್ಣನು:- "ಕೌರವ ಪಾಂಡವರ ಮಧ್ಯೆ ಶಾಂತಿಯನ್ನು ಸ್ಥಾಪಿಸಿ ಆ ಮೂಲಕ ಬಹುಜನರ ವೀರರ ಸಾವನ್ನು ತಪ್ಪಿಸುವುದಕ್ಕೆಂದು ನಾನು ಹಸ್ತಿನಾಪುರಕ್ಕೆ ಬಂದಿರುವೆನು. ಎಲ್ಲವೂ ನಿನಗೆ ತಿಳಿದಿರುವುದರಿಂದ ನಾನೇನೂ ಹೆಚ್ಚಿಗೆ ಹೇಳಬೇಕಾಗಿಲ್ಲ. ಸರಿಯಾದ ಸಮಯದಲ್ಲಿ ನೀನು ಕಾರ್ಯೋನ್ಮುಖನಾದರೇ ಪಾಂಡವ ಕೌರವರಿಬ್ಬರನ್ನೂ ಉಳಿಸಹುದು. ಪಾಂಡುವಿನ ಮಕ್ಕಳಲ್ಲಿ ಅಪರಾಧಿಯಾಗಿಸಬೇಡ. ಈ ಶಾಂತಿಯನ್ನು ಸಾಧಿಸಿದರೇ, ನಿನ್ನ ಸಮಾನ ಯಾರೂ ಇರುವುದಿಲ್ಲ. ಪಾಂಡವ ಕೌರವರು ನಿನ್ನ ರಕ್ಷಕರಾಗಿ ನಿಲ್ಲುವರು. ಪಾಂಡವರ ಬೆಂಬಲ ಸಿಕ್ಕಿದರೇ ನಿನಗೆ ಯಾರ ಭಯವೂ ಇರದು. ಆಗ ನಿನ್ನ ಸೈನ್ಯದ ಬಲವನ್ನು ಕಲ್ಪಿಸಿಕೋ. ಕುರುವಂಶದ ಅತ್ಯುತ್ತಮ ರಾಜನೆಂದು ನೀನು ಇಹ-ಪರಗಳಲ್ಲಿ ಕೀರ್ತಿಯನ್ನು ಪಡೆಯುವೆ. ಈಗಿರುವಂತೆಯೇ ಚಕ್ರಾಧಿಪತಿಯಾಗಿ ಮುಂದುವರೆಯುವೆ; ಯಾರೂ ನಿನ್ನನ್ನು ವಿರೋಧಿಸಲು ಧೈರ್ಯ ಮಾಡಲು ಆಗುವುದಿಲ್ಲ. ಪಾಂಡವರು ನಿನ್ನವರಾದರೇ ನಿನಗೆ ಅವರು ಲೋಕವನ್ನೆ ಗೆದ್ದುಕೊಂಡುವರು" "ಈ ವೈಭವದ ಬದಲಾಗಿ ನೀನು ನಾಶವನ್ನು, ಅಪಕೀರ್ತಿಯನ್ನು ಪಡೆಯುತ್ತಿರುವಿ. ಒಂದೇ ಮರದ ಎರಡು ಶಾಖೆಗಳ ನಡುವೆ ಸೀಳನ್ನು ಎಚ್ಚಿಸುವುದರಿಂದ ನಿನಗೇನು ಲಾಭ? ಪಾಂಡವರನ್ನು ನಿನ್ನ ಮಕ್ಕಳಿಂದ ಕೊಲ್ಲಿಸುವುದರಿಂದ ನೀ ಏನನ್ನು ಪಡೆಯುತ್ತಿಯಾ ? ನಿನ್ನ ಮಕ್ಕಳೇನೂ ಶೂರರೇ; ಆದರೇ ಪಾಂಡವರೂ ಕೂಡ ಶೂರರು. ದಯವಿಟ್ಟು ಲೋಕನಾಶವನ್ನು ತಪ್ಪಿಸು. ದಾಯಾದಿಗಳ ನಡುವೆ ಯುದ್ದವನ್ನು ನೆನೆಸಿಕೊಂಡರೇ ನನಗೆ ಮೈ ಜುಮ್ಮೆನ್ನಿಸುವುದು. ಇಲ್ಲಿ ನೆರೆದಿರುವ ರಾಜರೆಲ್ಲ ಸಾವಿನ ಹೊಸ್ತಿಲಲ್ಲೇ ನಿಂತಿರುವರು. ಅವರನ್ನೆಲ್ಲ ರಕ್ಷಿಸು. ಲೋಕವನ್ನು ರಕ್ಷಿಸು. ಪಾಂಡವರು ಸಜ್ಜನರು; ನಿನ್ನ ಮೇಲೆ ಪ್ರೀತಿಯಿಟ್ಟುಕೊಂಡಿರುವವರು. ನಿನ್ನ ಮಕ್ಕಳೂ ಅವರೂ ಶಾಂತಿಯಿಂದ ಬದುಕಲಿ‌. ಎಲ್ಲಿ ಅನ್ಯಾಯವು ನ್ಯಾಯವನ್ನು ಮೆಟ್ಟಿರುವುದೋ, ಅಸತ್ಯವು ಸತ್ಯವನ್ನು ಹೊಸಕಿ ಹಾಕಿರುವುದೋ, ಹಿರಿಯರೆನಿಸಿಕೊಂಡವರು ಅದನ್ನು ನೋಡಿಯೂ ಸುಮ್ಮನಿರುವರೋ, ಅಂತಹ ಸಭೆ ಸಭೆಯೇ ಅಲ್ಲ. ಅದೊಂದು ಪಾಪ ಕೂಪ. ನನ್ನ ಮಾತನ್ನು ಎಚ್ಚರಿಕೆಯಿಂದ ಕೇಳು. ಪಾಂಡವರಿಗೆ ಅವರ ಹಕ್ಕಿನ‌ರಾಜ್ಯವನ್ನ ಹಿಂದಿರುಗಿಸು.‌ ನಿನಗೆ ಯುದಿಷ್ಟಿರನ ಸ್ವಭಾವ ಗೊತ್ತು‌. ಅವನು ಹಿಂದೆ ನಡೆದ ಅನ್ಯಾಯಗಳನ್ನು ನೆನಪಿಟ್ಟುಕೊಂಡಿರುವವನಲ್ಲ. ಅವನು ನಿನಗೆ ಪ್ರಿಯನೂ ವಿಧೇಯನೂ ಅಗಿರುವನು. ರಾಜಾ, ನಿನ್ನ ಮೇಲಿನ ಪ್ರೀತಿಯಿಂದ ಹೇಳುತ್ತಿದ್ದೇನೆ; ಪುತ್ರಶೋಕದಿಂದ ನೀನು ನರಳುವಂಥಾದ್ದು ಆಗಬಾರದು. ಭವಿಷ್ಯದಲ್ಲಿ ಶಾಂತಿಯಿಂದಿರಬೇಕೆಂದು ಇಷ್ಟವಿದಗದರೇ ಈಗ ಪಾಂಡವರೊಂದಿಗೆ ಶಾಂತಿಯನ್ನು ಸ್ಥಾಪಿಸಿಕೋ" ಎಂದನು. ( ನಾವು ಹೊರಗಡೆಗೆ ಬರೀ ಕೆಟ್ಟದ್ದನ್ನೇ ಮಾಡಿ, ಕಷ್ಟಪಡದೇ ಮೋಸದಿಂದ ಹಣ ಸಂಪಾದಿಸಿ, ಅದರಿಂದ ಹೆಚ್ಚು ಖರ್ಚು ಮಾಡಿ ವೈಭವೋಪೇತವಾಗಿ ಹೋಮ, ಪೂಜೆ, ಜಪ ಮಾಡಿಸಿ ಅಂಥಾ ಹಣದಿಂದ ಭಗವಂತನಿಗೆ ಮೃಷ್ಟಾನ್ನ ಭೋಜನವನ್ನು ನೈವೇದ್ಯ ಮಾಡಿಸಿದರೇ, ಆ ಭಗವಂತ ಸ್ವೀಕರಿಸುವುದಿಲ್ಲ. ನಾವು ನಿಷ್ಠೆಯಿಂದ ದುಡಿದು, ಕಷ್ಟದಲ್ಲಿರುವ ನಾಲ್ಕು ಜನರಿಗೆ ಕೈಲಾದಷ್ಟು ಸೇವೆ ಮಾಡಿ, ಒಂದು ಹೂವು ಏರಿಸಿ, ಗಂಜಿಯನ್ನಾದರೂ ನೈವೇದ್ಯ ಮಾಡಿ ಭಗವಂತನಿಗೆ ಭಕ್ತಿಯಿಂದ ಪೂಜೆ ಮಾಡಿದಾಗ ಅವನು ಸ್ವೀಕರಿಸುತ್ತಾನೆ. ಒಟ್ಟಿನಲ್ಲಿ ಆ ದೇವರಿಗೆ ವೈಭವ ಬೇಡ, ಭಕ್ತಿ ಸಾಕು) ❤️🙏🌷 ವಿಮಲ್ ನ್ಯೂಟ್ರಿಷನ್ ಸೆಂಟರ್ 🌷🙏❤️ #👦🏻 Bad Boyz ಸ್ಟೇಟಸ್ #✍️ ಮೋಟಿವೇಷನಲ್ ಕೋಟ್ಸ್ #😍 ನನ್ನ ಸ್ಟೇಟಸ್ #🎥 Motivational ಸ್ಟೇಟಸ್ #✍️ ಮೋಟಿವೇಷನಲ್ ಕೋಟ್ಸ್
👦🏻 Bad Boyz ಸ್ಟೇಟಸ್ - रर्म का मनडिज कने. ।वनगुड क काव्त यतव झने... पुल गेन फने! पुग़ा की मीय ककिवना  अर्व्वाव ऊ माना ग्वन! पात्त चातद. पुक्नटो गास क्न का फिका न्िडिप ढे! रर्म का मनडिज कने. ।वनगुड क काव्त यतव झने... पुल गेन फने! पुग़ा की मीय ककिवना  अर्व्वाव ऊ माना ग्वन! पात्त चातद. पुक्नटो गास क्न का फिका न्िडिप ढे! - ShareChat
ಶುಕ್ರ ಗ್ರಹ :- ಶುಕ್ರ ಗ್ರಹ ಸೂರ್ಯನಿಗೆ ಅತಿ ಸಮೀಪ ಅಂದರೆ ಸೂರ್ಯ- ಚಂದ್ರರ ನಂತರ ಎರಡನೇ ಹತ್ತಿರದ ಗ್ರಹ ಶುಕ್ರಗ್ರಹ, ಇದು ಅತ್ಯಂತ ಸುಂದರವಾದ ಗ್ರಹ ಬೆಳಗ್ಗೆ ಮತ್ತು ಸಂಜೆ ಪ್ರಖರವಾಗಿ ಕಾಣುವುದರಿಂದ ಇದನ್ನು ಹಗಲು ನಕ್ಷತ್ರ ಮತ್ತು ಸಂಜೆ ನಕ್ಷತ್ರ ಎಂದು ಕರೆಯುತ್ತಾರೆ. ಈ ಗ್ರಹ ಭೂಮಿಯಷ್ಟೇ ದೊಡ್ಡದಾಗಿದ್ದು ಭೂಮಿಯ ಆಕಾರವನ್ನೇ ಹೊಂದಿದೆ. ಆದ್ದರಿಂದ ಭೂಮಿ ಸಹೋದರ ಎನ್ನುತ್ತಾರೆ. ಅಸುರ ಗುರುಗಳಾದ 'ಶುಕ್ರಾಚಾರ್ಯರೇ'ಶುಕ್ರಗ್ರಹ ಆಗಿದ್ದಾರೆ. ಅಸುರ ಗುರು ಶುಕ್ರಾಚಾರ್ಯರು ಗ್ರಹ ಆಗಲು ಒಂದು ಹಿನ್ನೆಲೆ. ಶುಕ್ರ ಗ್ರಹ ಆಗುವ ಮೊದಲು ಶುಕ್ರಾಚಾರ್ಯರು ಆಗಿದ್ದರು. ಭೃಗು ಮಹರ್ಷಿ ಮತ್ತು ಅವರ ಪತ್ನಿ ಪುಲೋಮೆ ಇವರಿಗೆ ಹುಟ್ಟಿದ ಮಗ ಶುಕ್ರಾಚಾರ್ಯರು. ಇವರ ಹಿರಿಯ ಸಹೋದರ ಚ್ಯವನ ಮಹರ್ಷಿಗಳು. ಶುಕ್ರಾಚಾರ್ಯರು ತಂದೆ ಭೃಗು ಮಹರ್ಷಿಗಳಂತೆ ಮಹಾಜ್ಞಾನಿಗಳು ತಂದೆಯಷ್ಟೇ ಪಾಂಡಿತ್ಯ ಪಡೆದ ಮೇಧಾವಿಗಳಾಗಿದ್ದರು. ಶುಕ್ರಾಚಾರ್ಯರ ಪತ್ನಿ ಸುಖೀರ್ತಿ ಇವರ ಮಗಳೇ ದೇವಯಾನಿ. ಒಮ್ಮೆ ರಾಕ್ಷಸರ ಉಪಟಳ ತಾಳಲಾರದೆ ಭೂದೇವಿ ನಲುಗಿದಾಗ ಮಹಾವಿಷ್ಣು ಅವರನ್ನು ಸಂಹರಿಸಲು ಸುದರ್ಶನ ಚಕ್ರವನ್ನು ಕಳಿಸುತ್ತಾನೆ. ಚಕ್ರವು ರಾಕ್ಷಸರನ್ನು ಬೆನ್ನಟ್ಟಿ ಬರುತ್ತದೆ ಅವರೆಲ್ಲ ಚಕ್ರದಿಂದ ತಪ್ಪಿಸಿಕೊಳ್ಳಲಾಗದೆ ಹೆದರಿ ಓಡುತ್ತಾ ಬಂದು ಭೃಗು ಮಹರ್ಷಿಗಳ ಆಶ್ರಮ ಕ್ಕೆ ಬರುತ್ತಾರೆ. ಅಲ್ಲಿ ಶುಕ್ರಾಚಾರ್ಯರ ತಾಯಿ ಪುಲೋಮೆ ಯಲ್ಲಿ ರಕ್ಷಿಸಲು ಕೇಳುತ್ತಾರೆ. ರಕ್ಷಣೆ ಬೇಡಿ ಬಂದವರನ್ನು ನಿರಾಕರಿಸಬಾರದೆಂದು ಪುಲೋಮೆ ಅವರನ್ನು ತನ್ನ ಆಶ್ರಮದೊಳಗೆ ಮುಚ್ಚಿಡುತ್ತಾಳೆ. ಬೆನ್ನಟ್ಟಿ ಬಂದ ಚಕ್ರವೂ ಅವಳ ಮುಂದೆ ಬಂದಾಗ ಅವಳು ನಾನು ರಾಕ್ಷಸರನ್ನು ಕಾಪಾಡುವುದಾಗಿ ಮಾತು ಕೊಟ್ಟಿದ್ದೇನೆ ಮೊದಲು ನನ್ನನ್ನು ಕೊಂದು ನಂತರ ರಾಕ್ಷಸರನ್ನು ಕೊಲ್ಲು ಎಂದಳು ಸುದರ್ಶನ ಚಕ್ರ ಅವಳನ್ನು ಕೊಲ್ಲುತ್ತದೆ. ಕೂಡಲೇ ಈ ವಿಷಯ ಶುಕ್ರಾಚಾರ್ಯರಿಗೆ ತಿಳಿದು ತಮ್ಮ ತಾಯಿಯನ್ನು ಕೊಂದ ಮಹಾ ವಿಷ್ಣುವನ್ನು ದ್ವೇಷ ಮಾಡುತ್ತಾರೆ. ಹಾಗೂ ದೇವತೆಗಳ ಮೇಲಿನ ಕೋಪದಿಂದ ಅಸುರರ ಗುರುವಾಗುತ್ತಾರೆ. ಅಸುರರು ಕೆಟ್ಟವರು ಎಂದು ತಿಳಿದೂ ಅದನ್ನೇ ಸವಾಲಾಗಿ ಸ್ವೀಕರಿಸುತ್ತಾರೆ. ಒಮ್ಮೆ ಮಹಾದಾನಿ ಅಸುರ ರಾಜ ಬಲಿ ಚಕ್ರವರ್ತಿಯಾಗ ಮಾಡುವ ಸಮಯದಲ್ಲಿ ಮಹಾವಿಷ್ಣು ವಾಮನಾವತಾರಿಯಾಗಿ ಬಂದು ಬಲಿಯಲ್ಲಿ ಮೂರು ಹೆಜ್ಜೆ ದಾನ ಕೇಳಿದ ನು, ಗುರುಗಳಾದ ಶುಕ್ರಾಚಾರ್ಯರಿಗೆ ಬಂದವನು ಸಾಮಾನ್ಯ ವಟು ಅಲ್ಲ ಎಂದು ತಿಳಿದು, ದಾನ ಕೊಡಬೇಡ ಎಂದು ಬಲಿಗೆ ಎಚ್ಚರಿಸುತ್ತಾರೆ. ಆದರೆ ಕೊಟ್ಟ ಮಾತಿಗೆ ತಪ್ಪದ ಬಲಿಯು ದಾನ ಕೊಡಲು ಮುಂದಾಗುತ್ತಾನೆ. ಆಚಾರ್ಯರು ತಪ್ಪಿಸಲು ಉಪಾಯ ಮಾಡುತ್ತಾರೆ. ಆಚಾರ್ಯರು ಸಣ್ಣ ಕ್ರಿಮಿಯಾಗಿ ದಾನ ಕೊಡಲು ಅಗತ್ಯವಾದ ನೀರಿನ ಕಮಂಡಲದ ನಾಳದ ಸಂಧಿಯಲ್ಲಿ ಸೇರಿಕೊಂಡು ದಾನ ಕೊಡುವಾಗ ಅರ್ಪಿಸಲು ನೀರು ಬೀಳ ದಂತೆ ತಡೆಯಾದರು. ಇದನ್ನರಿತ ವಾಮನ ಒಂದು ದರ್ಬೆಯ ಕಡ್ಡಿಯನ್ನು ತೆಗೆದುಕೊಂಡು ಕಮಂಡಲದ ನಾಳದೊಳಗೆ ದರ್ಬೆ ಕಡ್ಡಿ ಚುಚ್ಚಿದನು. ಅದು ಕಂಡಿಯೊಳಗಿದ್ದ ಶುಕ್ರಾಚಾರ್ಯರ ಒಂದು ಕಣ್ಣಿಗೆ ಚುಚ್ಚಿ ಕಣ್ಣು ಕಳೆದು ಕೊಂಡರು. ಮುಂದೆ ಇವರು ಒಕ್ಕಣ್ಣಿನ ಶುಕ್ರಾಚಾರ್ಯ ಎಂದು ಗುರುತಿಸಿ ದರು. ಆದರೂ ಶುಕ್ರಾಚಾರ್ಯರನ್ನು ಕಂಡರೆ ವಿಷ್ಣು ಗೆ ಗೌರವ. ಏಕೆಂದರೆ ಎಂಥದೇ ಪರಿಸ್ಥಿತಿ ಎದುರಾದರೂ, ಅಸುರ ಶಿಷ್ಯರ ಕೈಬಿಡದೆ ಶಿಷ್ಯರ ಏಳ್ಗೆ ಯಲ್ಲಿಯೇ ನಿಷ್ಠೆ ತೋರಿದ ಆಚಾರ್ಯರನ್ನು ಕೊಂಡಾಡಿದನು ಮತ್ತು ಪ್ರತಿದಿನ ಪ್ರತಿ ನಿಮಿಷ ರಾಕ್ಷಸ ಶಿಷ್ಯರ ಜೊತೆಗಿದ್ದು ಶುಕ್ರಾಚಾರ್ಯರು ತಮ್ಮ ಗುಣ ಸ್ವಭಾವದಲ್ಲಿ ಒಂದಿಂಚು ಬದಲಾಗಲಿಲ್ಲ, ಇದನ್ನೆಲ್ಲಾ ನೋಡುತ್ತಿದ್ದ ವಿಷ್ಣು ಅವರ ನಿಷ್ಠೆ ಪ್ರಾಮಾಣಿಕತೆಗೆ ಮೆಚ್ಚಿ ಶುಕ್ರಾಚಾರ್ಯರಿಗೆ ನವಗ್ರಹದ ಲ್ಲಿ ಒಂದಾಗಿ 'ಶುಭ ಕೊಡುವ" ಶುಕ್ರ ಗ್ರಹ" ಆಗುವಂತೆ ವರ ಕೊಟ್ಟನು. ಅಂದಿನಿಂದ ಶುಕ್ರಾಚಾರ್ಯರು ಶುಕ್ರ ಗ್ರಹವಾಗಿ ನವಗ್ರಹಗಳಲ್ಲಿ ಒಬ್ಬರಾ ದರು. ❤️🙏🌷 ವಿಮಲ್ ನ್ಯೂಟ್ರಿಷನ್ ಸೆಂಟರ್ 🌷🙏❤️ #🎥 Motivational ಸ್ಟೇಟಸ್ #😍 ನನ್ನ ಸ್ಟೇಟಸ್ #✍️ ಮೋಟಿವೇಷನಲ್ ಕೋಟ್ಸ್ #👦🏻 Bad Boyz ಸ್ಟೇಟಸ್ #✍️ ಮೋಟಿವೇಷನಲ್ ಕೋಟ್ಸ್
🎥 Motivational ಸ್ಟೇಟಸ್ - ೦ ೦ - ShareChat
ಗ್ರೀಸ್‌ನ ನಾರ್ಸಿಸಸ್ ಕತೆ ಮತ್ತು ಮಂತಿಕ್ ಅಲ್ ತೈರ್‌ನ ಹಕ್ಕಿ******** ಸೌಂದರ್ಯವನ್ನು ಆಸ್ವಾದಿಸುವ ಅಭಿರುಚಿ, ಸೌಂದರ್ಯವನ್ನು ಮೆಚ್ಚುವ ಗುಣ ಕೆಟ್ಟದೇನಲ್ಲ. ನಮ್ಮದೇ ರೂಪವನ್ನು ನಾವು ಮೆಚ್ಚುವುದು ಅಥವಾ ಮೋಹಿಸುವುದೂ ತಪ್ಪಲ್ಲ. ಆದರೆ ಈ ಮೆಚ್ಚುಗೆ, ಈ ಮೋಹ ಮಿತಿ ಮೀರಬಾರದು. ಯಾವುದೇ ಸಂಗತಿಯಂತೆ ಈ ಬಾಹ್ಯ ರೂಪದ ಮೋಹವೂ ನಮ್ಮನ್ನು ವಿನಾಶಕ್ಕೆ ತಳ್ಳುತ್ತದೆ. ಅದರಲ್ಲೂ ಆ ರೂಪ ನಮ್ಮದೇ ಆಗಿದ್ದಾಗ ಈ ವಿನಾಶ ಇನ್ನಷ್ಟು ದಾರುಣ. ಇದು ಇನ್ನೂ ಉಸಿರಿದ್ದಾಗಲೇ ನಮ್ಮ ಶವಪೆಟ್ಟಿಗೆಯ ಮೊಳೆ ನಾವೇ ಹೊಡೆದುಕೊಂಡಂತೆ. ಸೌಂದರ್ಯದ ಮೋಹ, ನಮ್ಮಲ್ಲಿ ಅದನ್ನು ಪಡೆದೇ ತೀರುವ ಹಠ ಹುಟ್ಟಿಸುತ್ತೆ. ನಮ್ಮೆದುರು ಕಾಣುತ್ತಿರುವ ರೂಪ ಮಿಥ್ಯೆಯೆಂದು ಅರಿಯದೇ ಹೋದರೆ ಮಿರರ್ ರೂಮಿನಲ್ಲಿ ನೂರಾರು ಬಿಂಬಗಳೆದ್ದು ಭ್ರಮೆ ಹುಟ್ಟಿಸುವಂತೆ ನಮ್ಮನ್ನು ಮಾಯೆ ಮುಸುಕುತ್ತದೆ. ನಾವೂ ಸೇರಿದಂತೆ ಸೃಷ್ಟಿಯ ಜಡ ಚೇತನಗಳೆಲ್ಲ ಪರಮ ಅಸ್ತಿತ್ವದ ಬಿಂಬಗಳಷ್ಟೇ. ಯಾವುದೇ ರೂಪ, ಯಾವುದೇ ಸೌಂದರ್ಯವೂ ಕೇವಲ ಬಿಂಬವೇ. ಅದನ್ನು ಮೋಹಿಸುವುದು, ಅದಕ್ಕಾಗಿ ಹಂಬಲಿಸುವುದು, ನಮ್ಮನ್ನು ನಮ್ಮ ಅಂತರಂಗದಿಂದ ದೂರ ಮಾಡಿಕೊಳ್ಳುವ ಮರುಳುತನವಷ್ಟೇ. ಇದನ್ನು ಮನದಟ್ಟು ಮಾಡಿಸುವ ಎರಡು ಕತೆಗಳು ಇಲ್ಲಿವೆ… ~ ಮೊದಲನೆಯದು, ಗ್ರೀಕ್ ಪುರಾಣದಲ್ಲಿ ಬರೋ ನಾರ್ಸಿಸಸ್‌ನಕತೆ. ನಾರ್ಸಿಸಸ್ ಅನ್ನೋ ದೇವತೆ ಬಹಳ ಸುಂದರವಾಗಿರ್ತಾನೆ. ಆದ್ರೆ ಅವ್ನು ಯಾವತ್ತೂ ತನ್ನ ಮುಖಾನೇ ನೋಡ್ಕೊಂಡಿರಲ್ಲ. ಬೇರೆಯವರು ತನ್ನನ್ನ ಹೊಗಳೋದು ಕೇಳಿ ಅವನಿಗೆ ತನ್ನ ರೂಪದ ಬಗ್ಗೆ ಒಂಥರಾ ಅಹಂಕಾರ ಬೆಳೆದಿರತ್ತೆ. ಒಂದಿನ ನಾರ್ಸಿಸಸ್ ಒಂದು ಕೊಳದ ಬಳಿ ಬರ್ತಾನೆ. ಅದರೊಳಗೇನಿದೆ ಅಂತ ಹಣಕ್ತಾನೆ. ಕಂಡಿದ್ದೇನು? ಬಹಳ ಸುಂದರ ರೂಪದ, ಸದೃಢ ಮೈಕಟ್ಟಿನ ತರುಣ! ಮೊದಲ ನೋಟಕ್ಕೇ ಅವನಿಗೆ ಆ ರೂಪದ ಮೇಲೆ ಮೋಹ ಹುಟ್ಟಿಕೊಳ್ಳುತ್ತೆ. ಅವನನ್ನ ಪಡ್ಕೋಬೇಕು ಅನಿಸುತ್ತೆ. ಆ ಬಿಂಬದ ರೂಪವನ್ನೇ ನೋಡ್ತಾ, ನೀರೊಳಗಿರೋ ಅವನೂ ನನ್ನನ್ನೇ ನೋಡ್ತಿದಾನೆ, ಅವನಿಗೂ ನನ್ನ ರೂಪ ಇಷ್ಟವಾಗಿರಬೇಕು ಅಂದುಕೊಳ್ತಾನೆ. ‘ಮೇಲೆ ಬಾ’ ಅಂತ ಕರೀತಾನೆ. ಬಿಂಬವೂ ಅದೇ ಮಾತು ಹೇಳ್ತಿರೋ ಹಾಗೆ ಭಾಸವಾಗುತ್ತೆ. ಅವನು ಬರೋದನ್ನೆ ಕಾಯ್ತಾ, ಅವನ ಕಣ್ಣಲ್ಲೆ ಕಣ್ಣು ನೆಟ್ಟು ದಡದಲ್ಲಿ ಕುಳಿತುಬಿಡ್ತಾನೆ. ಬಿಂಬದ ತರುಣ ಮೇಲೆ ಬರೋದು ಹೇಗೆ? ನಾರ್ಸಿಸಸ್‌ಗೆ ಅವನನ್ನು ಬಿಟ್ಟು ಕದಲಲು ಮನಸೇ ಬರೋದಿಲ್ಲ. ನೀರಡಿಕೆಯಾಗುತ್ತೆ, ಹಸಿವಾಗುತ್ತೆ, ಚಳಿಯಾಗುತ್ತೆ, ಏನಾದ್ರೂ ಅವ್ನು ಅಲ್ಲಾಡೋದಿಲ್ಲ. ದಿನಗಳು ಕಳೆದು, ವಾರವೂ ಉರುಳುತ್ತೆ. ನಾರ್ಸಿಸಸ್ ಕೊಳದೊಳಗೆ ಬಾಗಿ ಕೈಚಾಚಿ ‘ಇನ್ನು ತಡೆಯಲು ಆಗೋದಿಲ್ಲ, ಬಂದುಬಿಡು’ ಅಂತ ಅಂಗಲಾಚ್ತಾನೆ. ಬಿಂಬವೂ ಕೈಚಾಚುತ್ತೆ. ನಾರ್ಸಿಸಸ್ ಅದನ್ನ ಆಹ್ವಾನ ಅಂದುಕೊಂಡು ಕೊಳಕ್ಕೆ ಜಿಗಿತಾನೆ. ಅದರಲ್ಲಿ ಮುಳುಗಿ ಜೀವ ಕಳೆದುಕೊಳ್ತಾನೆ. ~ ಇಂಥದೇ ಇನ್ನೊಂದು ಕತೆ, ಸೂಫಿ ಕವಿ ಫರೀದ್ ಉದ್ದೀನ್ ಅತ್ತಾರನ ಮಂತಿಕ್ ಅಲ್ ತೈರ್ (ಹಕ್ಕಿಗಳ ಸಮ್ಮೇಳನ) ಕೃತಿಯಲ್ಲಿದೆ. ಅದೊಂದು ಸುಂದರವಾದ ಹಕ್ಕಿ. ಅದರ ಕಂಠವೂ ಅಷ್ಟೇ ಮಧುರ. ಅದಕ್ಕೆ ತನ್ನ ಮೇಲೆ ಇನ್ನಿಲ್ಲದ ಮೋಹ. ಒಂದು ದಿನ ಆ ಹಕ್ಕಿ ಬಾಯಾರಿ ಕೊಳವೊಂದರ ಬಳಿ ಬರುತ್ತೆ. ದಾಹದಿಂದ ಗಂಟಲು ಒಣಗಿ, ತಾಳಲಾರದೆ ಇನ್ನೇನು ಕೊಕ್ಕು ಇಳಿಸಬೇಕು, ಅಲ್ಲೊಂದು ಮಿರುಗುವ ಗರಿಗಳ, ಕೆಂಪು ಜುಟ್ಟಿನ, ನೀಲಿ ಕಂಗಳ ಸುಂದರ ರೂಪ! ಅದನ್ನು ಕಂಡ ಹಕ್ಕಿ, ಅದು ತನ್ನ ಪ್ರತಿಬಿಂಬವೆಂದು ಅರಿಯದೇ ಅದರ ಮೇಲೆ ಮೋಹಗೊಳ್ಳುತ್ತೆ. ನಾನೇ ಸುಂದರ ಅಂದರೆ ಇದು ನನಗಿಂತ ಸುಂದರವಾಗಿದೆ ಎಂದು ಅದನ್ನೆ ದಿಟ್ಟಿಸುತ್ತ ಕುಳಿತುಕೊಳ್ಳುತ್ತೆ. ದಿನ ಕಳೆದು ರಾತ್ರಿಯಾದರೂ ನೀರಡಿಕೆ ಮರೆತು, ಕಣ್ಣೆದುರೇ ನೀರಿದ್ದರೂ ಅದನ್ನು ಕುಡಿಯದೆ, ತನ್ನದೇ ಬಿಂಬವನ್ನು ಹೀರುತ್ತ ಉಳಿದುಬಿಡುತ್ತೆ. ಆ ನೀರಿನೊಳಗಿನ ಹಕ್ಕಿಯನ್ನು ಭೇಟಿಯಾಗಲು, ಅದನ್ನು ಮುಟ್ಟಲು ಹಂಬಲಿಸುತ್ತೆ. ಆದರೆ ಅದು ನೀರಿನ ಬಳಿ ಹೋದಾಗೆಲ್ಲಾ ರೆಕ್ಕೆಯ ಗಾಳಿ ಬೀಸಿ ಅಲೆಯೆದ್ದು ಬಿಂಬ ಮಾಯ! ಇದರಿಂದ ಹಕ್ಕಿ ಮತ್ತಷ್ಟು ಕಂಗಾಲಾಗುತ್ತದೆ. ಹಗಲಿರುಳು ಆ ಕೊಳದ ದಡದಲ್ಲೇ ಕುಳಿತು ತನ್ನ ಬಿಂಬವನ್ನೇ ದಿಟ್ಟಿಸುತ್ತ ಕೊನೆಗೊಂದು ದಿನ ನಿತ್ರಾಣವಾಗಿ, ಇನ್ನು ಕಾಯಲು ಸಾಧ್ಯವಿಲ್ಲ ಅನ್ನುತ್ತಾ ನೀರಹಕ್ಕಿಯನ್ನು ತಬ್ಬಿಕೊಳ್ಳಲು ಕೊಳದುಳಗೆ ಧುಮುಕುತ್ತೆ. ಈಜಲು ಶಕ್ತಿ ಇಲ್ಲದೆ ರೆಕ್ಕೆ ಸೋತು ಸತ್ತುಹೋಗುತ್ತೆ. ಭೌತಿಕ ರೂಪದ ಮೋಹದಲ್ಲಿ ಮೈಮರೆತರೆ ನಾವೂ ನಾರ್ಸಿಸಸ್‌ನಂತೆ, ಫರೀದನ ಕತೆಯ ಹಕ್ಕಿಯಂತೆ ಕೊನೆಯಾಗಿಹೋಗ್ತೀವಿ. ಕೇವಲ ಹೊರಗಿನ ಆವರಣವನ್ನು ಪಡೆಯಲು ಹವಣಿಸುವ ನಾವು, ಅಂತಃಸತ್ವವನ್ನು ಸಾಕ್ಷಾತ್ಕರಿಸಿಕೊಳ್ಳುವ ನಮ್ಮ ಹುಟ್ಟಿನ ಮೂಲ ಉದ್ದೇಶವನ್ನೇ ಮರೆತುಬಿಡ್ತೀವಿ. ಪರಿಣಾಮ? ಕೆಲವೊಬ್ಬರು ಸತ್ತೇ ಹೋಗುತ್ತಾರೆ, ಕೆಲವರು ಬದುಕಿದ್ದೂ ಸತ್ತಂತೆ ಇರುತ್ತಾರೆ. ❤️🙏🌷 ವಿಮಲ್ ನ್ಯೂಟ್ರಿಷನ್ ಸೆಂಟರ್ 🌷🙏❤️ #👦🏻 Bad Boyz ಸ್ಟೇಟಸ್ #✍️ ಮೋಟಿವೇಷನಲ್ ಕೋಟ್ಸ್ #😍 ನನ್ನ ಸ್ಟೇಟಸ್ #🎥 Motivational ಸ್ಟೇಟಸ್ #✍️ ಮೋಟಿವೇಷನಲ್ ಕೋಟ್ಸ್
👦🏻 Bad Boyz ಸ್ಟೇಟಸ್ - ShareChat
"ಬ್ರಹ್ಮ" ಪದದ ಉಚ್ಚಾರ ಜಿಜ್ಞಾಸೆಯನ್ನು ಸ್ವತಃ ಬ್ರಹ್ಮನಿಂದಲೂ ಬಗೆಹರಿಸಲಾಗದು! =============================== ಎಂದು ನಾನು ತಮಾಷೆಗೆ ಹೇಳುವುದಿದೆ. "ಬರೆದಂತೆಯೇ ಉಚ್ಚರಿಸುವುದು, ಉಚ್ಚರಿಸಿದಂತೆಯೇ ಬರೆಯುವುದು ಸಂಸ್ಕೃತ ಮತ್ತು ಕನ್ನಡ ಭಾಷೆ್ಗಳ ಜಾಯಮಾನ". ಹೌದು ತಾನೆ? ಅಂದಮೇಲೆ "ಬ್ರಹ್ಮ"ವನ್ನು "ಬ್ರ ಹ್ ಮ" ಎಂದು, "ಜಾಹ್ನವಿ"ಯನ್ನು "ಜಾ ಹ್ ನ ವಿ" ಎಂದು, "ಮಧ್ಯಾಹ್ನ"ವನ್ನು "ಮ ಧ್ಯಾ ಹ್ ನ" ಎಂದು ಉಚ್ಚರಿಸಿದರೆ ತಪ್ಪಂತೂ ಅಲ್ಲವೇ ಅಲ್ಲ. ನಿಜವಾಗಿಯಾದರೆ ಅದೇ ಸೂಕ್ತ. ಆದರೆ, ಈ ರೀತಿ ಹ್ ಜೊತೆ ಇನ್ನೊಂದು ವ್ಯಂಜನ ಸೇರಿ ಸಂಯುಕ್ತಾಕ್ಷರವಾದಾಗ ಮೊದಲಿಗೆ ಆ ’ಇನ್ನೊಂದು ವ್ಯಂಜನ’ವನ್ನು ಉಚ್ಚರಿಸಿ ಆಮೇಲೆ ಹ್ ವನ್ನು ಉಚ್ಚರಿಸಬಹುದು ಎಂದು, ಜನಸಾಮಾನ್ಯರಿಗೆ ಅನುಕೂಲವಾಗುವಂತೆ ಮಾಡಿಕೊಂಡಿರುವ ಒಂದು ಅನುಕೂಲ ಶಾಸ್ತ್ರ. ವಿಪರ್ಯಾಸವೇನೆಂದರೆ, ಈ ತಥಾಕಥಿತ ಅನುಕೂಲ ಶಾಸ್ತ್ರದಲ್ಲಿ ಏಕರೂಪತೆ ಇಲ್ಲ. ಒಬ್ಬೊಬ್ಬರದು ಒಂದೊಂದು ರೀತಿಯ ಪ್ರತಿಪಾದನೆ. ಕೆಲವರು "ಹಿ ನ ಮ ಪರೇ ತತ್ಪರಸ್ಯ ಚ" ಎಂಬ ಒಂದು ಸೂತ್ರವನ್ನು ಪ್ರಸ್ತಾವಿಸಿ, "ಹ್ ಜೊತೆ ಮ್/ನ್ ಇದ್ದರೆ ಮೊದಲಿಗೆ ಮ್/ನ್ ಉಚ್ಚರಿಸಿ ಆಮೇಲೆ ಹ್ ಉಚ್ಚರಿಸಬೇಕು" ಎನ್ನುತ್ತಾರೆ. "ಹ್ ಜೊತೆ ಣ್ ಬಂದರೆ- ಉದಾಹರಣೆಗೆ ಅಪರಾಹ್ಣ- ಏನು ಮಾಡಬೇಕು?" ಎಂಬುದಕ್ಕೆ ಅವರ ಬಳಿ ಉತ್ತರವಿಲ್ಲ! "ಹ್ ಜೊತೆ ಯ್/ರ್/ಲ್/ವ್ ಬಂದರೆ- ಉದಾಹರಣೆಗೆ ಬಾಹ್ಯ, ಹ್ರೀರ, ಪ್ರಹ್ಲಾದ, ಜಿಹ್ವಾ ಇತ್ಯಾದಿ- ಏನು ಮಾಡಬೇಕು?" ಎಂಬುದಕ್ಕೂ ಅವರ ಬಳಿ ಉತ್ತರವಿಲ್ಲ! ಇನ್ನು ಕೆಲವರು "ಹ್ ಜೊತೆ ಯಾವುದೇ ಅನುನಾಸಿಕ ಇದ್ದರೆ ಮೊದಲಿಗೆ ಅನುನಾಸಿಕವನ್ನು ಉಚ್ಚರಿಸಿ ಆಮೇಲೆ ಹ್ ಉಚ್ಚರಿಸಬೇಕು" ಎನ್ನುತ್ತಾರೆ. ಅವರ ವ್ಯಾಖ್ಯೆಯಲ್ಲಿ ಬ್ರಹ್ಮ, ಜಾಹ್ನವಿ, ಅಪರಾಹ್ಣಗಳು ಒಳಗೊಳ್ಳುತ್ತವಾದರೂ ಬಾಹ್ಯ, ಹ್ರೀರ, ಪ್ರಹ್ಲಾದ, ಜಿಹ್ವಾ ಇತ್ಯಾದಿಗಳ ಉಚ್ಚಾರಕ್ಕೆ ಅವರ ಬಳಿಯೂ ನಿರ್ದಿಷ್ಟ ಉತ್ತರವಿಲ್ಲ. ಆದ್ದರಿಂದಲೇ, "ಬರೆದಂತೆಯೇ ಉಚ್ಚರಿಸುವುದು" ಯಾವುದೇ ಗೊಂದಲವಿಲ್ಲದ ಆಯ್ಕೆ. ಬನ್ನಂಜೆ ಗೋವಿಂದಾಚಾರ್ಯರು, ಈಗ ಅವರ ಪುತ್ರಿ ವೀಣಾ ಬನ್ನಂಜೆ ಮುಂತಾದ ಕೆಲವು ವಿದ್ವಾಂಸರು ಇದನ್ನೇ ಆಯ್ದುಕೊಂಡಿದ್ದಾರೆ. ಅವರು "ಬ್ರಹ್ಮ" ಪದವನ್ನು "ಬ್ರ ಹ್ ಮ" ಎಂದೇ ಉಚ್ಚರಿಸುತ್ತಾರೆ, "ಬ್ರ ಮ್ ಹ" ಎಂದು ಅಲ್ಲ. ಅಷ್ಟಾಗಿ, ‘ಬ್ರಹ್ಮ’ ಪದದ ವ್ಯುತ್ಪತ್ತಿ ಏನು? ಬೃಹ್ + ಮನಿನ್. ‘ಬೃಹ್’ ಆಂದರೆ something that is expanded, or great; ‘ಬೃಹತ್’ ಪದ ಸಹ ಅದೇ ಮೂಲದಿಂದ ಬಂದದ್ದು. ಬೃಹ್ + ಮನಿನ್ ರೀತಿಯಲ್ಲಿ ಬ್ರಹ್ಮ ಪದ ಉಂಟಾದದ್ದು ಅಂದಮೇಲೆ ಆ ದೃಷ್ಟಿಯಿಂದಲೂ ‘ಹ್’ ಉಚ್ಚಾರವೇ ಮೊದಲು. ಬ್ರಮ್ಹ ಎಂದು ಉಚ್ಚರಿಸಿದರೆ ಅಲ್ಲಿ ‘ಬೃಹ್’ ಧಾತುವನ್ನೇ ಕೊಂದಂತಾಗುತ್ತದಲ್ಲ!? ವಹ್ನಿ ಪದ ಸಹ ಹೀಗೆಯೇ. ವಹ್ + ನಿ. ‘ವಹ್’ ಅಂದರೆ something that carries. ಅಗ್ನಿಯು ದೇವತೆಗಳ ಮತ್ತು ಮನುಷ್ಯರ ನಡುವಿನ ಕೊಡುಕೊಳ್ಳುವಿಕೆಯ ವಾಹಕ. ಆದ್ದರಿಂದ ವಹ್ನಿ ಎಂದು ಹೆಸರು. ಅದನ್ನು ವನ್ಹಿ ಎಂದು ಉಚ್ಚರಿಸಿದರೆ ಅಲ್ಲಿ ‘ವಹ್’ ಧಾತುವಿನಿಂದ ಪಡೆದ ಅರ್ಥವನ್ನೇ ಬೆಂಕಿಗೆ ಹಾಕಿ ನಾಶಮಾಡಿದಂತಾಗುತ್ತದೆ. ಮಧ್ಯಾಹ್ನ, ಅಪರಾಹ್ಣಗಳದೂ ಇದೇ ಕಥೆ. ಮಧ್ಯ + ಅಹ್ + ನ. ‘ಅಹ್’ ಎಂದರೆ ಹಗಲು. ಹಗಲಿನ ಮಧ್ಯಭಾಗವೇ ಮಧ್ಯಾಹ್ನ. ಅದನ್ನು ಮಧ್ಯಾನ್ಹ, ಮಧ್ಯಾನ್ನ, ಮಧ್ಯಾನ, ಮದ್ಯಾನ ಅಂತೆಲ್ಲ ಉಚ್ಚರಿಸಿದರೆ/ಬರೆದರೆ ಹಗಲುದರೋಡೆ (“ಅಹ್ = ಹಗಲು" ಎಂಬ ಅರ್ಥವನ್ನು ದರೋಡೆ ಮಾಡಿದಂತೆ) ಆಗುತ್ತದೆ! ಇದಾವುದೇ ಗೊಂದಲ ಪಾಪಪ್ರಜ್ಞೆಯೂ ಬೇಡವೆಂದು ಗೀತಾಪರಿವಾರವು "ಬರೆದಂತೆಯೇ ಉಚ್ಚರಿಸುವುದು" ರೀತಿಯನ್ನು ಆಯ್ದುಕೊಂಡಿದೆ. ಗೀತಾಪರಿವಾರದಲ್ಲಿ ನಾವು "ಬ್ರ ಹ್‌ ಮ", "ಜಾ ಹ್ ನ ವಿ", "ಮ ಧ್ಯಾ ಹ್ ನ" ಎಂಬಂತೆ ಉಚ್ಚರಿಸುತ್ತೇವೆ. ಒಟ್ಟಾರೆಯಾಗಿ ಈ ಉಚ್ಚಾರವಿಷಯವನ್ನು ಸರಿ-ತಪ್ಪು ಎಂದು ನಿಷ್ಕರ್ಷೆ ಮಾಡುವುದಕ್ಕಿಂತ "ಎರಡು ವಿಭಿನ್ನ ಚಿಂತನಾ ಶಾಲೆಗಳು" (two different schools of thought) ಎಂದು ಪರಿಗಣಿಸಬಹುದು ಅಷ್ಟೇ. ❤️🙏🌷 ವಿಮಲ್ ನ್ಯೂಟ್ರಿಷನ್ ಸೆಂಟರ್ 🌷🙏❤️ #🎥 Motivational ಸ್ಟೇಟಸ್ #😍 ನನ್ನ ಸ್ಟೇಟಸ್ #✍️ ಮೋಟಿವೇಷನಲ್ ಕೋಟ್ಸ್ #👦🏻 Bad Boyz ಸ್ಟೇಟಸ್ #✍️ ಮೋಟಿವೇಷನಲ್ ಕೋಟ್ಸ್
🎥 Motivational ಸ್ಟೇಟಸ್ - 8? ಬ್ರಹ್ಕ? 09 8? ಬ್ರಹ್ಕ? 09 - ShareChat
ಲಕ್ಷ್ಮಿ ನಾರಾಯಣನ ಪರಿಚಯ ವಿಷ್ಣು ಎಂದೂ ಕರೆಯಲ್ಪಡುವ ಭಗವಾನ್ ನಾರಾಯಣ, ಹಿಂದೂ ಧರ್ಮದ ಸರ್ವೋಚ್ಚ ದೇವರುಗಳಲ್ಲಿ ಒಬ್ಬರು. ಅವರು ಬ್ರಹ್ಮಾಂಡದ ರಕ್ಷಣೆ ಮತ್ತು ಪೋಷಣೆಯ ದೇವರು. ಪವಿತ್ರ ತ್ರಿಮೂರ್ತಿಗಳಲ್ಲಿ ಒಬ್ಬರಾದ ಅವರು ಆಧ್ಯಾತ್ಮಿಕ ಪ್ರಜ್ಞೆಯ ಭೌತಿಕ ಅಭಿವ್ಯಕ್ತಿ ಎಂದು ಹೇಳಲಾಗುತ್ತದೆ. ಅವರು ಭೂಮಿಯ ಮೇಲಿನ ಎಲ್ಲಾ ಜೀವಿಗಳನ್ನು ರಕ್ಷಿಸುತ್ತಾರೆ ಮತ್ತು ಭಕ್ತರಿಗೆ ದೀರ್ಘಾಯುಷ್ಯ, ಶಾಂತಿ, ಸಂತೋಷ ಮತ್ತು ಯಶಸ್ಸನ್ನು ನೀಡುತ್ತಾರೆ. ಲಕ್ಷ್ಮಿ ಅಥವಾ ಮಹಾಲಕ್ಷ್ಮಿ ದೇವತೆ ಅವರ ದೈವಿಕ ಪತ್ನಿ. ಅವರು ಸಂಪತ್ತು, ಫಲವತ್ತತೆ ಮತ್ತು ಅದೃಷ್ಟದ ದೇವತೆ, ಮತ್ತು 'ಶ್ರೀ' ಅಥವಾ 'ಶ್ರೀದೇವಿ' ಎಂದೂ ಕರೆಯುತ್ತಾರೆ, ಶುಭ ಮತ್ತು ಸಮೃದ್ಧಿಯ ಸಾಕಾರ. ಲಕ್ಷ್ಮಿ ನಾರಾಯಣನು ತನ್ನ ಪತ್ನಿ ಲಕ್ಷ್ಮಿಯೊಂದಿಗೆ ಕಾಣಿಸಿಕೊಳ್ಳುವ ಭಗವಂತ. ಲಕ್ಷ್ಮಿ ನಾರಾಯಣನ ಮಹತ್ವ ಲಕ್ಷ್ಮಿ ನಾರಾಯಣನ ವಿಶಿಷ್ಟತೆಯು ಈ ದೈವಿಕ ಜೋಡಿಯು ಒಂದೇ, ಬೇರ್ಪಡಿಸಲಾಗದ ಅಸ್ತಿತ್ವವಾಗಿ ಉಳಿದಿದೆ ಎಂಬ ಅಂಶದಲ್ಲಿದೆ. ಲಕ್ಷ್ಮಿ ದೇವಿಯು ನಿಂತಿರುವ ನಾರಾಯಣನ ಪಕ್ಕದಲ್ಲಿಯೇ ಇರಬಹುದು ಅಥವಾ ಅವರ ಸ್ವರ್ಗೀಯ ವಾಸಸ್ಥಾನವಾದ ವೈಕುಂಠದಲ್ಲಿ ಅವನ ಸೇವೆಯಲ್ಲಿರಬಹುದು, ಭಗವಂತ ಕ್ಷೀರ ಸಾಗರದ ಮಧ್ಯದಲ್ಲಿ ಬ್ರಹ್ಮಾಂಡದ ಸರ್ಪ ಆದಿಶೇಷನ ಮಂಚದ ಮೇಲೆ ಒರಗಿದಾಗ, ಆದರೆ ಅವಳ ಪ್ರಮುಖ ವಾಸಸ್ಥಾನವು ಭಗವಂತನ ಹೃದಯವಾಗಿಯೇ ಉಳಿಯುತ್ತದೆ. ಅದಕ್ಕಾಗಿಯೇ ಭಗವಂತನನ್ನು ಶ್ರೀನಿವಾಸ - ಶ್ರೀ ನಿವಾಸ - ಅಂದರೆ ನಿವಾಸ, ಶ್ರೀ, ಲಕ್ಷ್ಮಿ ದೇವಿಯ ನಿವಾಸ ಸ್ಥಳ ಎಂದೂ ಕರೆಯಲಾಗುತ್ತದೆ. ಹೀಗಾಗಿ, 'ಲಕ್ಷ್ಮಿ ನಾರಾಯಣ' ಎಂಬ ಪದವು ಲಕ್ಷ್ಮಿಯೊಂದಿಗೆ ನಾರಾಯಣನ ಏಕೈಕ ದೈವತ್ವವನ್ನು ಮತ್ತು ಲಕ್ಷ್ಮಿಯ ನಾರಾಯಣನನ್ನು ಸೂಚಿಸುತ್ತದೆ. ನಾರಾಯಣನು ರಕ್ಷಕನಾಗಿದ್ದರೂ, ಲಕ್ಷ್ಮಿ ಕರುಣೆಯ ಸಾಕಾರರೂಪವಾಗಿದೆ ಮತ್ತು ಆದ್ದರಿಂದ, ಲಕ್ಷ್ಮಿ ಪೂಜೆಯ ಮಾರ್ಗವನ್ನು ತೆಗೆದುಕೊಳ್ಳುವ ಮೂಲಕ ಲಕ್ಷ್ಮಿ ನಾರಾಯಣನ ಅನುಗ್ರಹವನ್ನು ಸುಲಭವಾಗಿ ಪಡೆಯಬಹುದು ಎಂದು ಹೇಳಲಾಗುತ್ತದೆ . ಲಕ್ಷ್ಮಿ ನಾರಾಯಣನ ಹಿಂದಿನ ಪುರಾಣ ಲಕ್ಷ್ಮಿ ನಾರಾಯಣ ಅಂದರೆ ನಾರಾಯಣ ತನ್ನ ಪತ್ನಿ ಲಕ್ಷ್ಮಿ ಜೊತೆ ಸಾಮಾನ್ಯವಾಗಿ ತನ್ನ ಸ್ವರ್ಗೀಯ ವಾಸಸ್ಥಾನವಾದ ವೈಕುಂಠದಲ್ಲಿ ವಾಸಿಸುತ್ತಾನೆ. ಬ್ರಹ್ಮಾಂಡದ ರಕ್ಷಕನಾಗಿ, ಜನರ ಜೀವನವನ್ನು ರಕ್ಷಿಸುವ ಮತ್ತು ಅವರ ಶಾಂತಿಯುತ ಅಸ್ತಿತ್ವವನ್ನು ಖಚಿತಪಡಿಸಿಕೊಳ್ಳುವ ಜವಾಬ್ದಾರಿಯನ್ನು ಭಗವಂತನು ವಹಿಸಿಕೊಳ್ಳುತ್ತಾನೆ. ಈ ಗುರಿಯನ್ನು ಸಾಧಿಸಲು, ಭಗವಂತನು ಕಾಲಕಾಲಕ್ಕೆ ಭೂಮಿಯ ಮೇಲೆ ಅವತರಿಸುತ್ತಾನೆ, ದುಷ್ಟತನವನ್ನು ನಿರ್ಮೂಲನೆ ಮಾಡಲು, ಜನರನ್ನು ಕ್ರೌರ್ಯಗಳಿಂದ ರಕ್ಷಿಸಲು ಮತ್ತು ಧರ್ಮವನ್ನು ಸ್ಥಾಪಿಸಲು, ಪರಮ ನೀತಿಯನ್ನು ಸ್ಥಾಪಿಸಲು. ಅವನಿಂದ ಬೇರ್ಪಡಿಸಲಾಗದ ಲಕ್ಷ್ಮಿ ದೇವಿಯು ಈ ಎಲ್ಲಾ ಅವತಾರಗಳಲ್ಲಿ (ಅವತಾರಗಳು) ಅವನ ಭಾಗವಾಗಿ ಉಳಿದಿದ್ದರೂ, ಅವಳು ಮಾನವ ರೂಪದಲ್ಲಿ ಅವತರಿಸುತ್ತಾಳೆ ಮತ್ತು ಅಂತಹ ಕೆಲವು ಅವತಾರಗಳಲ್ಲಿ ಭಗವಂತನೊಂದಿಗೆ ಸೇರುತ್ತಾಳೆ ಮತ್ತು ಲಕ್ಷ್ಮಿ ನಾರಾಯಣನಾಗಿ ಒಟ್ಟಾಗಿ ಅವರು ದುಷ್ಟರ ವಿರುದ್ಧ ಹೋರಾಡುತ್ತಾರೆ, ನೀತಿಯನ್ನು ಸ್ಥಾಪಿಸುತ್ತಾರೆ ಮತ್ತು ಜನರ ಯೋಗಕ್ಷೇಮವನ್ನು ಖಚಿತಪಡಿಸುತ್ತಾರೆ. ಭಗವಂತ ಅಯೋಧ್ಯೆಯ ರಾಜಕುಮಾರ ರಾಮನಾಗಿ ಇಳಿದು ಬಂದಾಗ, ಲಕ್ಷ್ಮಿಯೂ ಸಹ ಮಿಥಿಲೆಯ ರಾಜಕುಮಾರಿ ಸೀತೆಯ ರೂಪದಲ್ಲಿ ಅವತರಿಸಿದಳು. ಹೀಗೆ, ಲಕ್ಷ್ಮಿ ನಾರಾಯಣರು ಭೂಮಿಯ ಮೇಲೆ ಆದರ್ಶ ಮಾನವ ದಂಪತಿಗಳಾದ ರಾಮ ಮತ್ತು ಸೀತೆಯಾಗಿ ವಾಸಿಸುತ್ತಿದ್ದರು, ತಮ್ಮ ಸ್ವಂತ ಜೀವನ ಮತ್ತು ನಡವಳಿಕೆಯ ಮೂಲಕ ಇತರರಿಗೆ ಮಾದರಿಯಾಗಿದ್ದರು, ಜೀವನದಲ್ಲಿ ಪರೀಕ್ಷೆಗಳು ಮತ್ತು ಕ್ಲೇಶಗಳನ್ನು ಎದುರಿಸಿದರು ಮತ್ತು ಮಾನವಕುಲದ ಕಲ್ಯಾಣಕ್ಕಾಗಿ ಇತರ ಮಾನವರಂತೆ ದುಃಖಗಳನ್ನು ಅನುಭವಿಸಿದರು. ಒಟ್ಟಾಗಿ, ಅವರು ಆಗ ರಾಕ್ಷಸ ರಾವಣನ ರೂಪದಲ್ಲಿದ್ದ ದುಷ್ಟತನದ ವಿರುದ್ಧ ಹೋರಾಡಿದರು. ಈ ರಾಕ್ಷಸ (ರಾಕ್ಷಸ) ಸೀತೆಯನ್ನು ಅಪಹರಿಸಿ ತನ್ನ ದ್ವೀಪ ರಾಜಧಾನಿ ಲಂಕಾದಲ್ಲಿ ಬಂಧಿಸಿದನು, ಮತ್ತು ರಾಮನು ವಾನರ ಸೈನ್ಯವನ್ನು ಮುನ್ನಡೆಸುತ್ತಾ ಅಲ್ಲಿಗೆ ಮೆರವಣಿಗೆ ಮಾಡಿದನು, ರಕ್ತಸಿಕ್ತ ಯುದ್ಧದಲ್ಲಿ ರಾಕ್ಷಸನನ್ನು ಹೋರಾಡಿ ಕೊಂದನು ಮತ್ತು ಹೀಗೆ ಪ್ರಪಂಚ ಮತ್ತು ಅದರ ಜನರನ್ನು ಅವನ ದೌರ್ಜನ್ಯಗಳಿಂದ ಮುಕ್ತಗೊಳಿಸಿದನು. ನಾರಾಯಣನು ಕೃಷ್ಣನಾಗಿ ಮುಂದಿನ ಅವತಾರವನ್ನು ತೆಗೆದುಕೊಂಡಾಗ, ಲಕ್ಷ್ಮಿಯೂ ಅವನೊಂದಿಗೆ ರುಕ್ಮಿಣಿಯಾಗಿ ಅವನೊಂದಿಗೆ ನಿಂತಳು ಮತ್ತು ಅವನು ದುಷ್ಟತನವನ್ನು ನಿರ್ಮೂಲನೆ ಮಾಡಿ ಭೂಮಿಯ ಮೇಲೆ ಧರ್ಮವನ್ನು ಸ್ಥಾಪಿಸಿದಾಗ ಅವನ ಪಕ್ಕದಲ್ಲಿ ನಿಂತಳು. ಭಗವಂತನು ಯುವ ಬ್ರಹ್ಮಚಾರಿ ಬ್ರಾಹ್ಮಣ ಬಾಲಕನಾಗಿ ವಾಮನ ಅವತಾರವನ್ನು ತೆಗೆದುಕೊಂಡಾಗಲೂ, ಲಕ್ಷ್ಮಿ ದೇವಿಯು ಭಗವಂತನ ಎದೆಯಲ್ಲಿ ತನ್ನ ಸಾಮಾನ್ಯ ವಾಸಸ್ಥಾನದಲ್ಲಿ ಇದ್ದಳು ಮತ್ತು ತನ್ನ ಗುರುತನ್ನು ಭಗವಾನ್ ನಾರಾಯಣ ಎಂದು ಮರೆಮಾಚುವ ಸಲುವಾಗಿ, ಭಗವಂತನು ಅವನ ಎದೆಯನ್ನು ಮುಚ್ಚಿಕೊಂಡು ಕಾಣಿಸಿಕೊಂಡನು ಮತ್ತು ಹೀಗಾಗಿ ದೇವಿಯೇ ಬಟ್ಟೆಯಿಂದ ಕಾಣಿಸಿಕೊಂಡಳು ಎಂದು ರಸವತ್ತಾಗಿ ಹೇಳಲಾಗುತ್ತದೆ! ಲಕ್ಷ್ಮಿ ನಾರಾಯಣನನ್ನು ಪೂಜಿಸುವುದರಿಂದ ಸಿಗುವ ಆಶೀರ್ವಾದಗಳು ಲಕ್ಷ್ಮಿ ನಾರಾಯಣ ಪೂಜೆಯು ಜನರಲ್ಲಿ ಬಹಳ ಜನಪ್ರಿಯವಾಗಿದೆ, ಅವರು ತಮ್ಮ ಮನೆಗಳಲ್ಲಿ ಮತ್ತು ದೇವಾಲಯಗಳಲ್ಲಿ ಭಗವಂತನನ್ನು ಪ್ರಾರ್ಥಿಸುತ್ತಾರೆ. ಲಕ್ಷ್ಮಿ ನಾರಾಯಣನನ್ನು ಪರಮ ದೈವವೆಂದು ಪರಿಗಣಿಸುವ ಅನೇಕ ಸಂಪ್ರದಾಯಗಳು ಅಥವಾ ಪಂಗಡಗಳಿವೆ ಮತ್ತು ಅದಕ್ಕೆ ಅನುಗುಣವಾಗಿ ಅನೇಕ ಸ್ಥಳಗಳಲ್ಲಿ ಭಗವಂತನಿಗೆ ಭವ್ಯವಾದ ಮತ್ತು ಸೊಗಸಾದ ದೇವಾಲಯಗಳನ್ನು ನಿರ್ಮಿಸಲಾಗಿದೆ. ನವದೆಹಲಿಯಲ್ಲಿರುವ ಬಿರ್ಲಾ ಮಂದಿರ ಎಂದು ಜನಪ್ರಿಯವಾಗಿ ಕರೆಯಲ್ಪಡುವ ಲಕ್ಷ್ಮಿ ನಾರಾಯಣ ಮಂದಿರವು ಅಂತಹ ಒಂದು ಪ್ರಸಿದ್ಧ ದೇವಾಲಯವಾಗಿದೆ. ಲಕ್ಷ್ಮಿ ನಾರಾಯಣನನ್ನು ಪೂಜಿಸುವುದರಿಂದ ಭಕ್ತರಿಗೆ ದೈವಿಕ ದಂಪತಿಗಳ ಸಂಪೂರ್ಣ ಆಶೀರ್ವಾದ ಸಿಗುತ್ತದೆ ಮತ್ತು ಭಕ್ತರು ಮತ್ತು ಅವರ ಕುಟುಂಬಗಳಿಗೆ ಕಲ್ಯಾಣ, ಯಶಸ್ಸು, ಸಮೃದ್ಧಿ ಮತ್ತು ತೃಪ್ತಿಕರ ಜೀವನವನ್ನು ನೀಡುತ್ತದೆ ಎಂದು ನಂಬಲಾಗಿದೆ. ವೇದಗಳು ಮತ್ತು ಪುರಾಣಗಳಲ್ಲಿ, ನಾರಾಯಣನು ನೀರಿನಿಂದ ತುಂಬಿದ ಮೋಡಗಳ ದಿವ್ಯವಾದ ಕಪ್ಪು-ನೀಲಿ ಬಣ್ಣವನ್ನು ಹೊಂದಿದ್ದು, ನಾಲ್ಕು ತೋಳುಗಳು, ಪದ್ಮ(ಕಮಲ), ಕೌಮೋದಕಿ ಗದಾ(ಗದೆ), ಪಾಂಚಜನ್ಯ ಶಂಖ (ಶಂಖ) ಮತ್ತು ಸುದರ್ಶನ ಚಕ್ರವನ್ನು ಹಿಡಿದಿದ್ದಾನೆ ಎಂದು ವಿವರಿಸಲಾಗಿದೆ. ವಿಷ್ಣು ಪುರಾಣ, ಭಾಗವತ ಪುರಾಣ, ಗರುಡ ಪುರಾಣ ಮತ್ತು ಪದ್ಮ ಪುರಾಣದಂತಹ ಗ್ರಂಥಗಳ ಪ್ರಕಾರ, ನಾರಾಯಣನು ವಿಷ್ಣುವೇ ಆಗಿದ್ದು, ವಿವಿಧ ಅವತಾರಗಳಲ್ಲಿ ಅವತರಿಸುತ್ತಾನೆ. ಭಗವದ್ಗೀತೆ ಪ್ರಕಾರ, ಆತನು "ಬ್ರಹ್ಮಾಂಡದ ಗುರು" ಕೂಡ ಆಗಿದ್ದಾನೆ. ಭಾಗವತ ಪುರಾಣವು ನಾರಾಯಣನನ್ನು ಪರಮಾತ್ಮನ ಪರಮ ಪುರುಷನೆಂದು ಘೋಷಿಸುತ್ತದೆ. ಆತ ಬ್ರಹ್ಮಾಂಡದೊಳಗೆ ೧೪ ಲೋಕಗಳ ಸೃಷ್ಟಿಯಲ್ಲಿ ತೊಡಗುತ್ತಾನೆ. ರಾಜಸ-ಗುಣದ ದೇವತೆಯಾದ ಬ್ರಹ್ಮ, ಸ್ವತಃ ಸತ್ವವನ್ನು ಸ್ವೀಕರಿಸುವ ಮೂಲಕ ಬ್ರಹ್ಮಾಂಡವನ್ನು ವಿಷ್ಣುವಾಗಿ ಪೋಷಿಸುತ್ತಾನೆ, ನಿರ್ವಹಿಸುತ್ತಾನೆ ಮತ್ತು ಸಂರಕ್ಷಿಸುತ್ತಾನೆ. ನಾರಾಯಣನು ಮಹಾ-ಕಲ್ಪದ ಅಂತ್ಯದಲ್ಲಿ ತಮಸ್-ಗುಣದ ಅಧಿದೇವತೆಯಾದ ಕಾಲಾಗ್ನಿ ರುದ್ರನಾಗಿ ಬ್ರಹ್ಮಾಂಡವನ್ನು ನಾಶಮಾಡುತ್ತಾನೆ. ಭಾಗವತ ಪುರಾಣ, ಪುರುಷ ಸೂಕ್ತ, ನಾರಾಯಣ ಸೂಕ್ತ ಮತ್ತು ವೇದಗಳ ನಾರಾಯಣ ಉಪನಿಷತ್ತಿನ ಪ್ರಕಾರ, ಆತನೇ ಪರಮಾತ್ಮನಾಗಿದ್ದಾನೆ. ಮಧ್ವಾಚಾರ್ಯರ ಪ್ರಕಾರ, ನಾರಾಯಣನು ವಿಷ್ಣುವಿನ ಐದು ವ್ಯೂಹಗಳಲ್ಲಿ ಒಬ್ಬನಾಗಿದ್ದು, ಅವನ ಅವತಾರಗಳಿಗೆ ವ್ಯತಿರಿಕ್ತವಾಗಿ, ದೇವರ ಬ್ರಹ್ಮಾಂಡದ ಆವಿರ್ಭಾವಗಳಾಗಿವೆ. ಮಧ್ವಾಚಾರ್ಯರು ವಿಷ್ಣುವಿನ ಅಭಿವ್ಯಕ್ತಿಗಳನ್ನು ಎರಡು ಗುಂಪುಗಳಾಗಿ ಪ್ರತ್ಯೇಕಿಸುತ್ತಾರೆ: ವಿಷ್ಣುವಿನ ವ್ಯೂಹಗಳು (ಮಾನೇಶಗಳು) ಮತ್ತು ಅವನ ಅವತಾರಗಳು.ವ್ಯೂಹಗಳು ಪಂಚರಾತ್ರಗಳಲ್ಲಿ ತಮ್ಮ ಆಧಾರವನ್ನು ಹೊಂದಿವೆ, ಇದು ವೇದಾಂತದ ವಿಶಿಷ್ಟಾದ್ವೈತ ಮತ್ತು ದ್ವೈತ ಎರಡೂ ಶಾಲೆಗಳಿಂದ ಅಧಿಕೃತವಾಗಿ ಅಂಗೀಕರಿಸಲ್ಪಟ್ಟ ಪಂಥೀಯ ಪಠ್ಯವಾಗಿದೆ. ಅವು ಬ್ರಹ್ಮಾಂಡವನ್ನು ಆದೇಶಿಸುವ, ರಚಿಸಲಾದ ಮತ್ತು ವಿಕಸನಗೊಳ್ಳುವ ಕಾರ್ಯವಿಧಾನಗಳಾಗಿವೆ. ಬ್ರಹ್ಮಾಂಡದ ಬೆಳವಣಿಗೆಯಲ್ಲಿ ಒಂದರ ನಂತರ ಒಂದರಂತೆ ವಿಕಸನಗೊಳ್ಳುವ ವಸುದೇವ, ಸಂಕರ್ಷಣ, ಪ್ರದ್ಯುಮ್ನ ಮತ್ತು ಅನಿರುದ್ಧರ ಚತುರ್-ವ್ಯೂಹ ಅಂಶಗಳನ್ನು ನಾರಾಯಣ ಹೊಂದಿದ್ದಾನೆ. ಮಹಾಭಾರತದಲ್ಲಿ, ಕೃಷ್ಣನು ನಾರಾಯಣನಿಗೆ ಸಮಾನಾರ್ಥಕನಾಗಿದ್ದಾನೆ ಮತ್ತು ಅರ್ಜುನನನ್ನು ನರ ಎಂದು ಉಲ್ಲೇಖಿಸಲಾಗಿದೆ. ಈ ಮಹಾಕಾವ್ಯವು ಅವರನ್ನು ಬಹುವಚನದಲ್ಲಿ 'ಕೃಷ್ಣರು' ಎಂದು ಗುರುತಿಸುತ್ತದೆ ಅಥವಾ ವಿಷ್ಣುವಿನ ಹಿಂದಿನ ಅವತಾರಗಳ ಭಾಗವಾಗಿ ನರ-ನಾರಾಯಣ ಎಂದು ತಮ್ಮ ಅತೀಂದ್ರಿಯ ಗುರುತನ್ನು ನೆನಪಿಸುತ್ತದೆ. ನಾರಾಯಣನು (ಕೃಷ್ಣನಾಗಿ) ಸಾರ್ವತ್ರಿಕ ರೂಪವನ್ನು ಹೊಂದಿದ್ದಾನೆ ಎಂದು ಭಗವದ್ಗೀತೆ ವಿವರಿಸಲಾಗಿದೆ(ವಿಶ್ವರೂಪ). ಇದು ಮಾನವ ಗ್ರಹಿಕೆ ಅಥವಾ ಕಲ್ಪನೆಯ ಸಾಮಾನ್ಯ ಮಿತಿಗಳನ್ನು ಮೀರಿದೆ. ನಾರಾಯಣ ಸೂಕ್ತದಲ್ಲಿ, ನಾರಾಯಣನು ಮೂಲಭೂತವಾಗಿ ಸರ್ವೋಚ್ಚ ಶಕ್ತಿ ಮತ್ತು/ಅಥವಾ ಎಲ್ಲರ ಮೂಲತತ್ವವಾಗಿದೆಃ ನಾರಾಯಣ ಪರಬ್ರಹ್ಮನ್ ತತ್ವಂ ನಾರಾಯಣ ಪರಹಾ. ಭೌತಿಕ ಬ್ರಹ್ಮಾಂಡದ ಆಚೆಗೆ ನಾರಾಯಣನ ಶಾಶ್ವತ ಮತ್ತು ಸರ್ವೋಚ್ಚ ನಿವಾಸ ವೈಕುಂಠವಾಗಿದೆ. ಪರಮಪದ(ಮೋಕ್ಷ) ಎಂಬ ಆನಂದ ಮತ್ತು ಸಂತೋಷದ ಕ್ಷೇತ್ರವಾಗಿದೆ. ಇದರರ್ಥ ವಿಮೋಚನೆಗೊಂಡ ಆತ್ಮಗಳಿಗೆ ಅಂತಿಮ ಅಥವಾ ಅತ್ಯುನ್ನತ ಸ್ಥಳವಾಗಿದೆ. ಅಲ್ಲಿ ಅವರು ಪರಮ ಭಗವಂತನ ಸಹವಾಸದಲ್ಲಿ ಶಾಶ್ವತವಾಗಿ ಆನಂದ ಮತ್ತು ಸಂತೋಷವನ್ನು ಅನುಭವಿಸುತ್ತಾರೆ. ವೈಕುಂಠವು ಭೌತಿಕ ಬ್ರಹ್ಮಾಂಡದ ಆಚೆಗೆ ನೆಲೆಗೊಂಡಿದೆ ಮತ್ತು ಆದ್ದರಿಂದ, ಭೌತಿಕ ವಿಜ್ಞಾನ ಅಥವಾ ತರ್ಕದಿಂದ ಗ್ರಹಿಸಲು ಅಥವಾ ಅಳೆಯಲು ಸಾಧ್ಯವಿಲ್ಲ. ಕೆಲವೊಮ್ಮೆ, ನಾರಾಯಣ ಅಥವಾ ವಿಷ್ಣುವು ಶೇಷನ ಮೇಲೆ ಮಲಗಿರುವ ಅನಂತ ಶಯನ ರೂಪದಲ್ಲಿ ಇರುವ ಕ್ಷೀರ ಸಾಗರವನ್ನು ಭೌತಿಕ ಬ್ರಹ್ಮಾಂಡದೊಳಗೆ ವೈಕುಂಠ ಎಂದೂ ಗ್ರಹಿಸಲಾಗುತ್ತದೆ. ಬ್ರಹ್ಮ ಮತ್ತು ಈಶಾನ(ಶಿವ) ಇಲ್ಲದಿರುವಾಗಲೂ ಉಪಸ್ಥಿತರಿದ್ದ ಆದಿಪುರುಷ(ಆದಿ ಜೀವಿ) ಎಂದು ಶ್ರುತಿ ಗ್ರಂಥಗಳು ನಾರಾಯಣನನ್ನು ಉಲ್ಲೇಖಿಸುತ್ತವೆ. ಗ್ರಂಥಗಳಲ್ಲಿ ಆತನನ್ನು ಪರಮ ಆತ್ಮ(ಪರಮಾತ್ಮ) ಎಂದು ಪರಿಗಣಿಸಲಾಗಿದೆ. ❤️🙏🌷 ವಿಮಲ್ ನ್ಯೂಟ್ರಿಷನ್ ಸೆಂಟರ್ 🌷🙏❤️ #👦🏻 Bad Boyz ಸ್ಟೇಟಸ್ #✍️ ಮೋಟಿವೇಷನಲ್ ಕೋಟ್ಸ್ #😍 ನನ್ನ ಸ್ಟೇಟಸ್ #🎥 Motivational ಸ್ಟೇಟಸ್ #✍️ ಮೋಟಿವೇಷನಲ್ ಕೋಟ್ಸ್
👦🏻 Bad Boyz ಸ್ಟೇಟಸ್ - ShareChat
ಕಲ್ಲಾಜಿ ರಾಥೋಡ್ (1601 ರಲ್ಲಿ ಜನಿಸಿದರು. ಮರಣ - 24-02-1624) ಲೋಕದೇವತ ಎಂದೇ ಪ್ರಸಿದ್ಧರಾಗಿದ್ದ ರಾಜಸ್ಥಾನದ ಒಬ್ಬ ಧೈರ್ಯಶಾಲಿ ಯೋಧ ಕಲ್ಲಾಜಿ, ಬಾಲ್ಯದಿಂದಲೇ ಅವರು ಕತ್ತಿವರಸೆ, ಬಿಲ್ಲು ವಿದ್ಯೆ, ಈಟಿ ಮತ್ತು ಗುರಾಣಿವರಸೆಗಳಲ್ಲಿ ಅತ್ಯುತ್ತಮ ತರಬೇತಿಯನ್ನು ಪಡೆದರು. ಅಕ್ಬರನ ದೊಡ್ಡ ಸೈನ್ಯದೊಂದಿಗೆ ರಾಜಸ್ಥಾನದ ಮೆರ್ಟಾದ ಮೇಲೆ ದಾಳಿ ಮಾಡಿದಾಗ ಕಲ್ಲಾಜೀ ಮೆರ್ಟಾದ ಸೇನಾಧಿಪತಿಯಾಗಿದ್ದರು. ಕಲ್ಲಾಜಿ ಮತ್ತು ಮೆರ್ಟಾದ ಇತರ ಕೆಚ್ಚೆದೆಯ ಯೋಧರು 13 ದಿನಗಳ ಕಾಲ ಧೈರ್ಯದಿಂದ ಅಕ್ಬರನ ಸೇನೆಯನ್ನು ಎದುರಿಸಿದರು, ಆದರೆ ಯಾವುದೇ ಯಶಸ್ಸನ್ನು ಕಾಣದೆ, ಅವರು ಚಿತ್ತೋಡ್ ಕಡೆಗೆ ತೆರಳಿದರು. ಚಿತ್ತೋಡಿನ ಮಹಾರಾಜ ರಾಣಾ ಉದಯ್ ಸಿಂಗ್, ಕಲ್ಲಾಜಿಯ ಯುದ್ಧ ಕೌಶಲ್ಯ ಮತ್ತು ನಾಯಕತ್ವದ ಸಾಮರ್ಥ್ಯವನ್ನು ನೋಡಿ ಅವನನ್ನು ರಂಧಾಲ್‌ಪುರದ ಜಾಗೀರದಾರನನ್ನಾಗಿ ಮಾಡಿದರು. ಕಲ್ಲಾಜೀಯವರ ಮದುವೆಯ ದಿನವೇ, ಅಕ್ಬರ್ ಚಿತ್ತೋಡದ ಮೇಲೆ ದಾಳಿ ಮಾಡಿದ್ದಾನೆ ಎಂಬ ಸಂದೇಶ ಮಹಾರಾಣಾ ಉದಯ್ ಸಿಂಗ್ ಅವರಿಂದ ಬಂದಿತು, ಆದ್ದರಿಂದ ಕಲ್ಲಾಜೀ ತಕ್ಷಣವೇ ತನ್ನ ಸೈನ್ಯೆಯೊಂದಿಗೆ ಚಿತ್ತೋಡದ ಕಡೆಗೆ ಹೊರಟರು. ಕಲ್ಲಾಜಿಯ ಚಿಕ್ಕಪ್ಪ ರಾಜ ಜೈಮಲ್ ಚಿತ್ತೋಡಿನ ಸೇನಾಧಿಪತಿಯಾಗಿದ್ದರು. ಅಕ್ಬರನ ಸೈನ್ಯವು ಚಿತ್ತೋಡನ್ನು ಎಲ್ಲಾ ಕಡೆಯಿಂದ ಸುತ್ತುವರೆದಿತ್ತು. ಚಿತ್ತೋಡಿನ ಸೈನಿಕರು ಹೊರಗೆ ಹೋಗಿ ದಾಳಿ ಮಾಡಿ ಹಿಂತಿರುಗುತ್ತಿದ್ದರು. ಹಲವಾರು ದಿನಗಳ ಹೋರಾಟದ ನಂತರ, ಕ್ಷತ್ರಿಯ ಯೋಧರ ಸಂಖ್ಯೆ ಬಹಳ ಕಡಿಮೆಯಾದಾಗ, ಜೈಮಲ್ಲನು ಎಲ್ಲಾ ಸೈನಿಕರಿಗೆ ಕೇಸರಿ ನಿಲುವಂಗಿಯನ್ನು ಧರಿಸಲು ಸೂಚಿಸಿದರು. ಕೋಟೆಯಲ್ಲಿದ್ದ ಎಲ್ಲಾ ಮಹಿಳಾ ಯೋಧರು ಜೌಹರ್ ಮಾಡಿದರು ಮತ್ತು ಮರುದಿನ ಮೇವಾಡಿ ಯೋಧರು ಕೋಟೆಯ ದ್ವಾರಗಳನ್ನು ತೆರೆದು ಹಸಿದ ಸಿಂಹಗಳಂತೆ ಮೊಘಲ್ ಸೈನ್ಯದ ಮೇಲೆ ದಾಳಿ ಮಾಡಿದರು - ಭೀಕರ ಯುದ್ಧ ಪ್ರಾರಂಭವಾಯಿತು. ರಾಥೋಡ್ ಜೈಮಲ್ ಅವರ ಕಾಲಿಗೆ ಗುಂಡು ತಗುಲಿದ್ದು, ಅವರು ನಿಲ್ಲಲು ಸಾಧ್ಯವಾಗಲಿಲ್ಲ. ಇದನ್ನು ನೋಡಿದ ಕಲ್ಲಾಜೀ ಜೈಮಲ್ ಅವರ ಎರಡೂ ಕೈಗಳಲ್ಲಿ ಕತ್ತಿಯನ್ನು ನೀಡಿ ಅವರ ಹೆಗಲ ಮೇಲೆ ಕುಳಿತುಕೊಳ್ಳುವಂತೆ ಮಾಡಿದರು. ಇದಾದ ನಂತರ, ಕಲ್ಲಾಜೀ ಕೂಡ ತಮ್ಮ ಎರಡೂ ಕೈಗಳಲ್ಲಿ ಕತ್ತಿಗಳನ್ನು ತೆಗೆದುಕೊಂಡರು. ನಾಲ್ಕು ಕತ್ತಿಗಳು ಮಿಂಚಿನ ವೇಗದಲ್ಲಿ ಚಲಿಸಲು ಪ್ರಾರಂಭಿಸಿದವು. ನೆಲವು ಮೊಘಲ್ ಶವಗಳಿಂದ ಆವೃತವಾಗಿತ್ತು. ಇದನ್ನು ಕಂಡ ಅಕ್ಬರ್, ಎರಡು ತಲೆಗಳು ಮತ್ತು ನಾಲ್ಕು ಕೈಗಳನ್ನು ಹೊಂದಿರುವ ಯಾವುದೋ ದೇವರು ಹೋರಾಡುತ್ತಿದ್ದಾನೆ ಎಂದು ಭಾವಿಸಿದನು - ಯುದ್ಧದಲ್ಲಿ ಇಬ್ಬರೂ ತೀವ್ರವಾಗಿ ಗಾಯಗೊಂಡರು. ಕಲ್ಲಾಜಿ ಜೈಮಾಲ್‌ನನ್ನು ಕೆಳಗೆ ಕರೆತಂದು ಚಿಕಿತ್ಸೆ ನೀಡಲು ಪ್ರಯತ್ನಿಸಿದರು; ಆದರೆ ಆ ಕ್ಷಣದಲ್ಲಿ ಒಬ್ಬ ಶತ್ರು ಸೈನಿಕನು ಕಲ್ಲಾಜೀಯ ಮೇಲೆ ಹಿಂದಿನಿಂದ ದಾಳಿ ಮಾಡಿ ಅವರ ಶಿರಚ್ಛೇದ ಮಾಡಿದನು. ಅವರ ತಲೆ ಕತ್ತರಿಸಿದ ನಂತರವೂ, ಅವರ ಮುಂಡವು ದೀರ್ಘಕಾಲದವರೆಗೆ ಹೋರಾಡುತ್ತಲೇ ಇತ್ತು. ❤️🙏🌷 ವಿಮಲ್ ನ್ಯೂಟ್ರಿಷನ್ ಸೆಂಟರ್ 🌷🙏❤️ #🎥 Motivational ಸ್ಟೇಟಸ್ #😍 ನನ್ನ ಸ್ಟೇಟಸ್ #✍️ ಮೋಟಿವೇಷನಲ್ ಕೋಟ್ಸ್ #👦🏻 Bad Boyz ಸ್ಟೇಟಸ್ #✍️ ಮೋಟಿವೇಷನಲ್ ಕೋಟ್ಸ್
🎥 Motivational ಸ್ಟೇಟಸ್ - ShareChat