ಮಾಹಿಷ್ಮತೀ_ನೀಲ*******
ಪೂರ್ವದಲ್ಲಿ ಮಾಹಿಷ್ಮತೀ ನಗರವನ್ನು ನೀಲನೆಂಬ ರಾಜನು ಆಳುತ್ತಿದ್ದನು. ನೀಲನಿಗೆ ಅಪ್ರತಿಮ ಸುಂದರಿಯಾಗಿದ್ದ ‘ಸುದರ್ಶನಾ’ ಎಂಬ ಹೆಸರಿನ ಮಗಳಿದ್ದಳು. ಪರಮಧಾರ್ಮಿಕನೂ, ಸತ್ಯಸಂಧನೂ ಆಗಿದ್ದ ನೀಲನು ದೀರ್ಘಕಾಲದ ಯಜ್ಞವೊಂದನ್ನು ಮಾಡಲುಪಕ್ರಮಿಸಿದನು. ರಾಜನು ಯಜ್ಞ-ಯಾಗಾದಿಗಳಲ್ಲಿ ನಿರತನಾಗಿದ್ದಾಗ ಸುದರ್ಶನಾ ಅಗ್ನಿಯನ್ನು ಪ್ರಜ್ವಲಿಸುವಂತೆ ಮಾಡಲು ತಂದೆಗೆ ಸಹಾಯ ಮಾಡುತ್ತಿದ್ದಳು. ಆಕೆಗೆ ಇದು ಪ್ರತಿನಿತ್ಯದ ಕಾರ್ಯವಾಗಿತ್ತು. ಯಜ್ಞೇಶ್ವರನಾದರೋ ರಾಜಕನ್ಯೆಯು ಗಾಳಿಹಾಕಿದರೆ ಮಾತ್ರವೇ ಪ್ರಜ್ವಲಿಸುತ್ತಿದ್ದ. ಅವಳ ಹೊರತಾಗಿ ಬೇರೆ ಯಾರೇ ಗಾಳಿಬೀಸಿದರೂ ಅತಿಯಾದ ಧೂಮವು ಎಲ್ಲೆಡೆ ಸುತ್ತಿಕೊಂಡು ಎಲ್ಲರೂ ಯಾಗಶಾಲೆಯಿಂದ ಹೊರಗೆ ಹೋಗುವಂತಾಗುತ್ತಿತ್ತು. ಸುದರ್ಶನಾಳ ಚೆಲುವು ಮತ್ತು ಶ್ರದ್ಧಾಭಕ್ತಿಗಳಿಂದ ಅಗ್ನಿಯು ರಾಜಪುತ್ರಿಯನ್ನು ಕಾಮಿಸತೊಡಗಿದ. ಬ್ರಾಹ್ಮಣ ರೂಪವನ್ನು ತಳೆದು ರಾಜಕನ್ಯೆಯೊಂದಿಗೆ ರಮಿಸತೊಡಗಿದ. ಎಲ್ಲಾ ರಹಸ್ಯಗಳಿಗೂ ಮುಕ್ತಾಯದ ಅವಧಿ ಅಂತ ಒಂದಿದೆ. ಅಂತೆಯೇ ಬ್ರಾಹ್ಮಣನೊಬ್ಬ ರಾಜಪುತ್ರಿಯೊಂದಿಗೆ ರಹಸ್ಯವಾಗಿ ರಮಿಸುತ್ತಿರುವುದು ಬಹಿರಂಗವಾಯಿತು. ವಿಷಯ ತಿಳಿದ ನೀಲರಾಜ ಸಿಟ್ಟಿನಿಂದ ಆ ಬ್ರಾಹ್ಮಣನಿಗೆ ಸರಿಯಾದ ಶಿಕ್ಷೆಯನ್ನು ವಿಧಿಸುವಂತೆ ಆದೇಶಿಸಿದ. ಬ್ರಾಹ್ಮಣರೂಪಿ ಯಜ್ಞೇಶ್ವರನು ರಾಜನ ಮಾತಿನಿಂದ ಕೋಪಗೊಂಡ. ಬ್ರಾಹ್ಮಣನ ಸುತ್ತಲೂ ಧಗಧಗನೆ ಅಗ್ನಿಯು ಕಾಣಿಸಕೊಂಡು ಜ್ವಾಲೆಗಳು ಕೆನ್ನಾಲಗೆ ಚಾಚತೊಡಗಿದವು. ತನ್ನ ಮುಂದಿರುವವನು ಸಾಧಾರಣ ಬ್ರಾಹ್ಮಣನಲ್ಲ ಎಂದು ಭಯಗೊಂಡ ನೀಲರಾಜ ಅವನಿಗೆ ಸಾಷ್ಟಾಂಗ ಪ್ರಣಾಮವನ್ನು ಸಲ್ಲಿಸಿ ತನ್ನನ್ನು ಮನ್ನಿಸುವಂತೆ ಪ್ರಾರ್ಥಿಸಿದ. ತನ್ನೆದರು ನಿಂತಿರುವವನು ಸಾಕ್ಷಾತ್ ಅಗ್ನಿದೇವನೆಂದು ತಿಳಿದು ತನ್ನ ಮಗಳನ್ನು ಕೊಟ್ಟು ವಿವಾಹವಿಧಿಯನ್ನು ನೆರವೇರಿಸಿದ.
ತಾನು ಪ್ರೇಮಿಸಿದ ಸುದರ್ಶನಾಳನ್ನು ಪಡೆದ ಅಗ್ನಿದೇವನು ನೀಲರಾಜನಿಗೆ ವರವೊಂದನ್ನು ಅನುಗ್ರಹಿಸಿದ. ಯುದ್ಧದಲ್ಲಿ ತೊಡಗಿರುವ ತನ್ನ ಚತುರಂಗಬಲವು ಯಾವುದೇ ಕಾರಣದಿಂದಲೂ ಭಯದಿಂದ ಹಿಮ್ಮೆಟ್ಟುವಂತೆ ಆಗಬಾರದು ಎಂಬ ನೀಲರಾಜನ ಪ್ರಾರ್ಥನೆಯನ್ನು ಅಗ್ನಿಯು ಮನ್ನಿಸಿದ. ಅಂದಿನಿಂದ ಮಾಹಿಷ್ಮತಿ ನಗರದ ಮೇಲೆ ಯಾರೇ ಆಕ್ರಮಣ ನಡೆಸಲು ಹೋದರೂ ಯಾರೂ ಸಹ ನಗರದ ಕೋಟೆಯನ್ನು ಪ್ರವೇಶಿಸುವುದು ಅಸಾಧ್ಯವಾಗಿತ್ತು. ಕೋಟೆಯನ್ನು ಸಮೀಪಿಸಿದವರನ್ನು ಅಗ್ನಿಯು ಸುಟ್ಟು ಭಸ್ಮಮಾಡುತ್ತಿದ್ದನು. ಶತ್ರುರಾಜರು ಮಾಹಿಷ್ಮತೀ ನಗರದ ಮೇಲೆ ಆಕ್ರಮಣ ಮಾಡುವುದನ್ನೇ ನಿಲ್ಲಿಸಿಬಿಟ್ಟರು. ಅಗ್ನಿಯ ವರದ ಪ್ರಭಾವದಿಂದ ಆ ಪಟ್ಟಣದಲ್ಲಿ ಪುರುಷರು ತಮ್ಮ ಇಚ್ಛಾನುಸಾರ ಯುವತಿಯರನ್ನು ಪಾಣಿಗ್ರಹಣ ಮಾಡಿಕೊಳ್ಳುವಂತಿರಲಿಲ್ಲ, ಬದಲಾಗಿ ಯುವತಿಯರು ಇಷ್ಟಪಟ್ಟರೆ ಮಾತ್ರ ಅದು ಸಾಧ್ಯವಾಗುತ್ತಿತ್ತು. ಪೂರ್ಣಸ್ವತಂತ್ರರಾದ ಕನ್ಯೆಯರು ತಮಗೆ ಇಷ್ಟವಾದವರನ್ನು ವರಿಸುತ್ತಿದ್ದರು. ನೀಲರಾಜನ ವಂಶೀಯರು ಆಳ್ವಿಕೆಯಿರುವವರೆಗೆ ಅಗ್ನಿಯು ಅವರ ರಾಜ್ಯರಕ್ಷಣೆ ಮಾಡುವೆನೆಂಬ ವಾಗ್ದಾನದಿಂದಾಗಿ ನೀಲನು ಅಪರಾಜಿತನೆಂಬ ಖ್ಯಾತಿ ಪಡೆದ.
ರಾಜಸೂಯಯಾಗದ ಸಮಯದಲ್ಲಿ ಸಹದೇವನು ದಕ್ಷಿಣದೆಡೆಗೆ ದಿಗ್ವಿಜಯ ಯಾತ್ರೆಗೈದನು. ಯಜ್ಞಾಶ್ವವನ್ನು ಅಡ್ಡಗಟ್ಟಿದ ನೀಲರಾಜನಿಗೂ ಸಹದೇವನಿಗೂ ಅತಿಭಯಂಕರವಾದ ಯುದ್ಧ ನಡೆದು ಅಗ್ನಿಯ ವರಬಲದಿಂದ ನೀಲರಾಜನು ಅಪರಾಜಿತನಾದನು. ಸಹದೇವನ ಸೈನ್ಯವೆಲ್ಲವೂ ಯಜ್ಞೇಶ್ವರನ ಜ್ವಾಲೆಗಳಿಂದ ಆವೃತವಾಗಿ ಹೊತ್ತಿ ಉರಿಯತೊಡಗಿ ಮುಂದೇನು ಮಾಡಬೇಕೆಂಬುದೇ ತಿಳಿಯದಾಯಿತು. ಧೃತಿಗೆಡದೆ ಸಹದೇವನು ಶುದ್ಧಾಚಮನವನ್ನು ಮಾಡಿ ಸ್ಥಿರವಾಗಿ ಕುಳಿತು ನಾನಾವಿಧವಾಗಿ ಅಗ್ನಿಯನ್ನು ಸ್ತುತಿಸಿದನು. ಯುಧಿಷ್ಠಿರನ ಯಜ್ಞಸಂಕಲ್ಪ ಮತ್ತು ಸಹದೇವನ ಉದ್ದೇಶ ಎರಡನ್ನೂ ಅರಿತು ಅವನನ್ನು ಪರೀಕ್ಷಿಸಿದ್ದ ಅಗ್ನಿಯು ಪ್ರಸನ್ನನಾಗಿ ನೀಲರಾಜನಿಗೆ ಕುರುವಂಶದವರೊಂದಿಗೆ ಸಾಮೋಪಾಯವನ್ನು ಅನುಸರಿಸಲು ಸೂಚನೆ ನೀಡಿದ. ಅದರಂತೆ ನೀಲರಾಜನು ರಾಜಸೂಯಕ್ಕೆ ಕಪ್ಪಕಾಣಿಕೆಗಳನ್ನು ಸಲ್ಲಿಸಿ ಸಹದೇವನನ್ನು ಬೀಳ್ಕೊಟ್ಟ.
ಮುಂದೆ ಭಾರತ ಯುದ್ಧದಲ್ಲಿ ನೀಲರಾಜನು ಪಾಂಡವರ ಪಕ್ಷವನ್ನು ಬೆಂಬಲಿಸುತ್ತಾನೆ. ಅಗ್ನಿಯ ತೇಜಸ್ಸಿನಿಂದ ಪ್ರಜ್ವಲಿಸುತ್ತಿದ್ದ ನೀಲನು ಬಿಲ್ಲನ್ನೇ ಜ್ವಾಲೆಯನ್ನಾಗಿಸಿ ಬಾಣಗಳನ್ನೇ ಕಿಡಿಯಾಗಿಸಿ ಕುರುಸೈನ್ಯವನ್ನು ಭಸ್ಮಮಾಡತೊಡಗಿದ. ಹದಿಮೂರನೆಯ ದಿನದ ಯುದ್ಧದಲ್ಲಿ ದ್ರೋಣಪುತ್ರ ಅಶ್ವತ್ಥಾಮನಿಗೆ ನೀಲರಾಜನು ಎದುರಾದನು. ಎರಡು ಅಗ್ನಿಪರ್ವತಗಳ ಘರ್ಷಣೆಯೋಪಾದಿಯಲ್ಲಿ ಪರಸ್ಪರ ಹೋರಾಟ ನಡೆಯಿತು. ಕೊನೆಯಲ್ಲಿ ಅಶ್ವತ್ಥಾಮನಿಂದ ಹತನಾಗಿ ಭೂಮಿಗೊರಗಿದನು.
ಅಂದಹಾಗೆ ಮಾಹಿಷ್ಮತಿ ಎಂದರೆ ಈಗಿನ ಮಧ್ಯಪ್ರದೇಶದ ಮಾಹೇಶ್ವರ!
❤️🌷🙏 ವಿಮಲ್ ನ್ಯೂಟ್ರಿಷನ್ ಸೆಂಟರ್ 🙏🌷❤️ #🎥 Motivational ಸ್ಟೇಟಸ್ #😍 ನನ್ನ ಸ್ಟೇಟಸ್ #✍️ ಮೋಟಿವೇಷನಲ್ ಕೋಟ್ಸ್ #👦🏻 Bad Boyz ಸ್ಟೇಟಸ್ #✍️ ಮೋಟಿವೇಷನಲ್ ಕೋಟ್ಸ್
ಮಧ್ಯಕಾಲೀನ ಯುಗದವರೆಗೂ "ಹಲ್ಲು ನೋವಿಗೆ ಹಲ್ಲಿನ ಒಳಗಿರುವ ಹುಳುಗಳೇ ಕಾರಣ" ಎಂಬ ತಪ್ಪು ನಂಬಿಕೆ ಜಗತ್ತಿನಾದ್ಯಂತ ಇತ್ತು. ಆದರೆ ಫ್ರೆಂಚ್ ನೌಕಾಪಡೆಯಲ್ಲಿ ಶಸ್ತ್ರಚಿಕಿತ್ಸಕ ವಿದ್ಯಾರ್ಥಿಯಾಗಿ ಸೇರಿಕೊಂಡಿದ್ದ "ಪಿಯರೆ ಫೌಚಾರ್ಡ್" ರವರಿಗೆ ಇದು ಸರಿಯೆನಿಸಲಿಲ್ಲ.! ಏಕೆಂದರೆ, ಹಡಗಿನಲ್ಲಿ ತಿಂಗಳುಗಟ್ಟಲೆ ಸಮುದ್ರಯಾನ ಮಾಡುವಾಗ ನಾವಿಕರು ಮತ್ತು ಕೆಲಸಗಾರರು ಅನುಭವಿಸುತ್ತಿದ್ದ ಹಲ್ಲಿನ ಸಮಸ್ಯೆಗಳನ್ನು ಸೂಕ್ಷ್ಮವಾಗಿ ಗಮನಿಸಿದ್ದ ಅವರಿಗೆ ಇದು"ಹುಳುಗಳ" ಕಾಟವಲ್ಲ ಎಂಬ ವಿಚಾರ ಸ್ಪಷ್ಟವಾಗಿತ್ತು.
ಅಂದಿನ ಕಾಲದಲ್ಲಿ ಯಾರಿಗಾದರೂ ಹಲ್ಲು ನೋವು ತೀವ್ರವಾದರೆ ಹಲ್ಲನ್ನು ಕೀಳುವುದೊಂದೇ ಪರಿಹಾರವಾಗಿತ್ತು. ಆಗ ಪ್ರತ್ಯೇಕ ದಂತವೈದ್ಯರೇ ಇರಲಿಲ್ಲವಾದ್ದರಿಂದ ಇಕ್ಕಳ ಬಳಸಿ ಹಲ್ಲು ಕೀಳುವ ಕೆಲಸವನ್ನು ಕ್ಷೌರಿಕರು ಮಾಡುತ್ತಿದ್ದರು. ಯುರೋಪಿನಲ್ಲಿ ಇವರನ್ನು 'ಬಾರ್ಬರ್ ಸರ್ಜನ್ಸ್' ಎಂದು ಕರೆಯುತ್ತಿದ್ದರು. ಹಲ್ಲು ಕೀಳುವುದಷ್ಟೇ ಮಾಡುತ್ತಿದ್ದ ಅವರ ಬಳಿ ಹಲ್ಲನ್ನು ಉಳಿಸುವ ಯಾವುದೇ ಉಪಾಯ ಅವರ ಬಳಿ ಇರಲಿಲ್ಲ.
ಇಂತಹ ಸಮಯದಲ್ಲಿ ಫೌಚಾರ್ಡ್ ಅವರು ಪ್ರಾಚೀನ ಕಾಲದಿಂದ ಎಲ್ಲರೂ ನಂಬಿದ್ದ "ಹಲ್ಲಿನ ಹುಳು" ಸಿದ್ಧಾಂತವನ್ನು ತಳ್ಳಿಹಾಕಿದರು. ಸೂಕ್ಷ್ಮದರ್ಶಕದ ಮೂಲಕ ಹಲ್ಲುಗಳನ್ನು ಪರೀಕ್ಷಿಸಿ, ಅಲ್ಲಿ ಯಾವುದೇ ಹುಳುಗಳಿಲ್ಲ ಬದಲಿಗೆ ಇದು ಕೆಟ್ಟ ಆಹಾರ ಪದ್ಧತಿ ಮತ್ತು ಸ್ವಚ್ಛತೆಯ ಕೊರತೆಯಿಂದ "ಹಲ್ಲಿನ ಮೇಲೆ ಉಳಿದುಕೊಂಡ ಸಕ್ಕರೆ ಮತ್ತು ಆಹಾರದ ಕಣಗಳು ಆಮ್ಲವಾಗಿ (Acid) ಪರಿವರ್ತನೆಯಾಗಿ, ಅದು ಹಲ್ಲಿನ ಗಟ್ಟಿಯಾದ ಪದರವನ್ನು (Enamel) ನಿಧಾನವಾಗಿ ಕರಗಿಸುವ ಮೂಲಕ ಹಲ್ಲಿನಲ್ಲಿ ಕುಳಿ ಉಂಟು ಮಾಡುತ್ತಿದೆ" ಎಂದು ಪ್ರತಿಪಾದಿಸಿದರು.
"ಪಿಯರೆ ಫೌಚಾರ್ಡ್" ರವರು 1678 ರಲ್ಲಿ ಫ್ರಾನ್ಸ್ನ ಬ್ರಿಟಾನಿ ಎಂಬಲ್ಲಿ ಒಂದು ಸಾಧಾರಣ ಕುಟುಂಬದಲ್ಲಿ ಜನಿಸಿದರು. ಓದಿನಲ್ಲಿ ಬಹಳ ಚುರುಕಾಗಿದ್ದ ಇವರು ತಮ್ಮ 15 ನೇ ವಯಸ್ಸಿನಲ್ಲಿ (1693) ಫ್ರೆಂಚ್ ರಾಯಲ್ ನೇವಿಯಲ್ಲಿ ಅಪ್ರೆಂಟಿಸ್ ಶಸ್ತ್ರಚಿಕಿತ್ಸಕನಾಗಿ ಸೇರಿದರು. ನೌಕಾಪಡೆಯಲ್ಲಿ ತರಬೇತಿ ಮುಗಿದ ನಂತರ ಪ್ಯಾರಿಸ್ಗೆ ತೆರಳಿದ ಇವರು, ಹಲ್ಲುಗಳನ್ನು ಕೇವಲ ಕಿತ್ತುಹಾಕುವ ಬದಲು ಅವುಗಳನ್ನು ಸಂರಕ್ಷಿಸುವ ಮತ್ತು ಚಿಕಿತ್ಸೆ ನೀಡುವ ಹೊಸ ಮಾರ್ಗಗಳನ್ನು ಜನರಿಗೆ ಪರಿಚಯಿಸಿದರು.
ಅಂದಿನ ಕಾಲದ ವೈದ್ಯರು ತಮ್ಮ ಚಿಕಿತ್ಸಾ ವಿಧಾನಗಳನ್ನು ರಹಸ್ಯವಾಗಿಡುತ್ತಿದ್ದರು. ಆದರೆ ಫೌಚಾರ್ಡ್ ಅವರು1728 ರಲ್ಲಿ 'Le Chirurgien Dentiste' ಎಂಬ ಪುಸ್ತಕದ ಮೂಲಕ ತಮ್ಮೆಲ್ಲಾ ಅನುಭವಗಳನ್ನು ಜಗತ್ತಿನ ಮುಂದೆ ತೆರೆದಿಟ್ಟರು. ದಂತವೈದ್ಯಶಾಸ್ತ್ರಕ್ಕೆ ಸಂಬಂಧಿಸಿದ ವಿಶ್ವದ ಮೊದಲ ವೈಜ್ಞಾನಿಕ ಕೈಪಿಡಿ ಅಥವಾ ಅಧಿಕೃತ ದಾಖಲೆ ಇದಾಗಿದೆ.
ಹಲ್ಲುಗಳಿಗೆ ನೀಡುವ ಫಿಲ್ಲಿಂಗ್ (Fillings) ವ್ಯವಸ್ಥೆಯನ್ನು ಇವರು ಪರಿಚಯಿಸಿದರು. ಮೊಟ್ಟಮೊದಲ ಬಾರಿಗೆ ಹಲ್ಲುಗಳನ್ನು ನೇರಗೊಳಿಸಲು ಬಳಸುವ ಬ್ರೇಸ್ಗಳ (Braces) ಮೂಲ ರೂಪವಾದ 'ಬ್ಯಾಂಡೋ' (Bandeau) ಅನ್ನು ಕಂಡುಹಿಡಿದರು.
ದಂತ ಕವಚಗಳನ್ನು (Dentures) ತಯಾರಿಸಲು ಆನೆ ದಂತ ಅಥವಾ ಮೂಳೆಗಳನ್ನು ಬಳಸುವ ವಿಧಾನವನ್ನು ಪ್ರಸಿದ್ಧಗೊಳಿಸಿದರು. ರೋಗಿಗಳಿಗೆ ಆರಾಮದಾಯಕವಾಗಿ ಚಿಕಿತ್ಸೆ ನೀಡಲು ದಂತ ವೈದ್ಯಕೀಯ ಕುರ್ಚಿ (Dental Chair) ಬಳಕೆಯನ್ನು ಮೊದಲು ಆರಂಭಿಸಿದವರಲ್ಲಿ ಇವರೂ ಒಬ್ಬರು.
ದಂತವೈದ್ಯರಾಗಿ ಆಗ ಅವರು ಎಷ್ಟು ಪ್ರಸಿದ್ಧರಾಗಿದ್ದರೆಂದರೆ, ಅಂದಿನ ಕಾಲದ ಫ್ರೆಂಚ್ ಶ್ರೀಮಂತರು ಮತ್ತು ರಾಜಮನೆತನದವರು ಅವರ ಬಳಿ ಚಿಕಿತ್ಸೆ ಪಡೆಯುತ್ತಿದ್ದರು .
ಫೌಚರ್ಡ್ ಅವರ ಕೆಲಸದಿಂದ ಪ್ರೇರಿತರಾಗಿ, ನಂತರದ ದಿನಗಳಲ್ಲಿ ಯುರೋಪ್ ಮತ್ತು ಅಮೆರಿಕಾದಲ್ಲಿ ದಂತವೈದ್ಯಕೀಯ ಶಾಲೆಗಳು ಆರಂಭವಾದವು..1844 ರಲ್ಲಿ ಹಲ್ಲು ಕೀಳುವಾಗ ನೋವಾಗದಂತೆ ತಡೆಯಲು 'ನೈಟ್ರಸ್ ಆಕ್ಸೈಡ್' ಅನಿಲವನ್ನು ಬಳಸಲು ಪ್ರಾರಂಭಿಸಲಾಯಿತು. 1895 ರಲ್ಲಿ ಕ್ಷ-ಕಿರಣಗಳ ಸಂಶೋಧನೆಯ ನಂತರ ಹಲ್ಲಿನ ಒಳಗಿನ ಸಮಸ್ಯೆಗಳನ್ನು ಪತ್ತೆ ಹಚ್ಚುವುದು ಸುಲಭವಾಯಿತು
ಭಾರತದಲ್ಲಿ ಆಧುನಿಕ ದಂತವೈದ್ಯಶಾಸ್ತ್ರವು ಡಾ. ರಫಿಯುದ್ದೀನ್ ಅಹ್ಮದ್ ಅವರಿಂದ ಪ್ರಾರಂಭವಾಯಿತು. ಇವರು 1920 ರಲ್ಲಿ ಕಲ್ಕತ್ತಾದಲ್ಲಿ ಮೊದಲ ದಂತ ಕಾಲೇಜನ್ನು ಸ್ಥಾಪಿಸಿದರು.
ದಂತವೈದ್ಯಕೀಯವನ್ನು ಕೇವಲ ಹಲ್ಲು ಕೀಳುವ " ಸಾಮಾನ್ಯ ವೃತ್ತಿ"ಯಿಂದ "ವೈದ್ಯಕೀಯ ವಿಜ್ಞಾನ"ದ ಹಂತಕ್ಕೆ ಏರಿಸಿದ ಪಿಯರೆ ಫೌಚಾರ್ಡ್" ರವರು ತಮ್ಮ ಅಧ್ಯಯನ ಮತ್ತು ಶಿಸ್ತಿನ ಮೂಲಕ ದಂತವೈದ್ಯರಿಗೆ ಸಮಾಜದಲ್ಲಿ ಗೌರವ ಸಿಗುವಂತೆ ಮಾಡಿದರು.
ಪಿಯರೆ ಫೌಚಾರ್ಡ್ ಅವರ ಜೀವನವು ಸೇವೆಯ ಮನೋಭಾವ, ಸಂಶೋಧನೆಯ ಹಸಿವು ಮತ್ತು ಪ್ರಾಮಾಣಿಕತೆಯ ಸಂಕೇತವಾಗಿದೆ. ಇಂದಿಗೂ ದಂತವೈದ್ಯಕೀಯ ವಿದ್ಯಾರ್ಥಿಗಳಿಗೆ ಇವರ ಸಾಧನೆಗಳು ದಾರಿದೀಪವಾಗಿವೆ. ಎಂತಹ ಕಷ್ಟದ ಪರಿಸ್ಥಿತಿಯಲ್ಲೂ ಸೃಜನಶೀಲತೆಯಿಂದ ಹೊಸ ದಾರಿಯನ್ನು ಕಂಡುಕೊಳ್ಳಬಹುದು ಎಂಬುದಕ್ಕೆ ಇವರೇ ಸಾಕ್ಷಿ.
❤️🌷🙏 ವಿಮಲ್ ನ್ಯೂಟ್ರಿಷನ್ ಸೆಂಟರ್ 🙏🌷❤️ #👦🏻 Bad Boyz ಸ್ಟೇಟಸ್ #✍️ ಮೋಟಿವೇಷನಲ್ ಕೋಟ್ಸ್ #😍 ನನ್ನ ಸ್ಟೇಟಸ್ #🎥 Motivational ಸ್ಟೇಟಸ್ #✍️ ಮೋಟಿವೇಷನಲ್ ಕೋಟ್ಸ್
#🎥 Motivational ಸ್ಟೇಟಸ್ #😍 ನನ್ನ ಸ್ಟೇಟಸ್ #✍️ ಮೋಟಿವೇಷನಲ್ ಕೋಟ್ಸ್ #👦🏻 Bad Boyz ಸ್ಟೇಟಸ್
ಕುಂತಿ - ಯುಧಿಷ್ಠಿರ, ಭೀಮ ಮತ್ತು ಅರ್ಜುನರ ತಾಯಿ.
ಕುಂತಿಯ ಜೀವನವು ಏರಿಳಿತಗಳಿಂದ ಕೂಡಿದ ರೋಲರ್ ಕೋಸ್ಟರ್ ಸವಾರಿಗಿಂತ ಕಡಿಮೆಯಿಲ್ಲ ಎಂದು ನಮಗೆಲ್ಲರಿಗೂ ತಿಳಿದಿದ್ದರೂ, ಆಕೆಯ ಜೀವನವನ್ನು ರೂಪಿಸಿದ ವಿವರಗಳು ನಮಗೆ ತಿಳಿದಿಲ್ಲ. ಕುಂತಿಭೋಜನ ರಾಜಕುಮಾರಿ ಕುಂತಿಯ ಸಂಕ್ಷಿಪ್ತ ಕಥೆ ಇಲ್ಲಿದೆ.
ಯಾದವ ಮುಖ್ಯಸ್ಥ ಶೂರಸೇನಳಿಗೆ ಕುಂತಿ ಪೃಥಳಾಗಿ ಜನಿಸಿದಳು. ಮಕ್ಕಳಿಲ್ಲದ ಚಿಕ್ಕಪ್ಪ ಕುಂತಿಭೋಜ ಅವಳನ್ನು ದತ್ತು ತೆಗೆದುಕೊಂಡು ಕುಂತಿ ಎಂದು ಮರುನಾಮಕರಣ ಮಾಡಿದಳು. ಅವಳನ್ನು ಕುಂತಿಭೋಜನ ಅದೃಷ್ಟಶಾಲಿ ಎಂದು ಪರಿಗಣಿಸಲಾಗುತ್ತಿತ್ತು ಮತ್ತು ಅವಳನ್ನು ಅತ್ಯಂತ ಪ್ರೀತಿ ಮತ್ತು ಗೌರವದಿಂದ ನಡೆಸಿಕೊಳ್ಳಲಾಗುತ್ತಿತ್ತು. ಒಂದು ದಿನ, ಋಷಿ ದೂರ್ವಾಸ ರಾಜ್ಯಕ್ಕೆ ಬಂದಿದ್ದನು ಮತ್ತು ಕುಂತಿಭೋಜ ಅವನನ್ನು ತನ್ನ ಅರಮನೆಗೆ ಆಹ್ವಾನಿಸಿದ್ದನು. ಕುಂತಿಯ ಭಕ್ತಿ ಮತ್ತು ಸೇವೆಯಿಂದ ದೂರ್ವಾಸನು ತುಂಬಾ ಪ್ರಭಾವಿತನಾಗಿ ಅವಳಿಗೆ ಅವಳು ಬಯಸುವ ಯಾವುದೇ ದೇವರಿಂದ ಮಗನನ್ನು ಪಡೆಯಲು ಅನುವು ಮಾಡಿಕೊಡುವ ದೈವಿಕ ಮಂತ್ರವನ್ನು ಆಶೀರ್ವದಿಸುತ್ತಾನೆ. ಕುಂತಿಯ ಕುತೂಹಲ ಮತ್ತು ಅಸಹನೆಯ ಸ್ವಭಾವವು ಮದುವೆಯಿಲ್ಲದೆ ಈ ಮಂತ್ರವನ್ನು ಪ್ರಯತ್ನಿಸುವಂತೆ ಮಾಡಿತು ಮತ್ತು ಅವಳು ಕರ್ಣನಿಗೆ ಜನ್ಮ ನೀಡಿದಳು , ನಂತರ ಅವನು ದುರದೃಷ್ಟಕರ ಜೀವನವನ್ನು ಕಳೆದನು.
ಕುಂತಿ ತನ್ನ ಸ್ವಯಂವರದಲ್ಲಿ ಪಾಂಡುವನ್ನೇ ಆರಿಸಿಕೊಂಡಳು. ಒಂದು ದಿನ, ಪಾಂಡು ಕಾಡಿಗೆ ಬೇಟೆಯಾಡಲು ಹೋದನು, ಅಲ್ಲಿ ಅವನು ಎರಡು ಸಂಯೋಗ ಜಿಂಕೆಗಳನ್ನು ಕೊಂದನು, ಅವು ವಾಸ್ತವವಾಗಿ ಋಷಿ ಕಿಂದಮ ಮತ್ತು ಅವನ ಪತ್ನಿಯಾಗಿದ್ದವು. ಸಾಯುತ್ತಿರುವ ಋಷಿ ಕಿಂದಮನು ತನ್ನ ಹೆಂಡತಿಯೊಂದಿಗೆ ಪ್ರೇಮಿಸಲು ಪ್ರಯತ್ನಿಸಿದಾಗಲೆಲ್ಲಾ ಅವನು ಸಾಯುತ್ತಾನೆ ಎಂದು ಶಪಿಸಿದನು. ಪಾಂಡು ಇದರ ಹೊರೆಯನ್ನು ಸಹಿಸಲಾರದೆ ತನ್ನ ಇಬ್ಬರು ಹೆಂಡತಿಯರೊಂದಿಗೆ ವನವಾಸಕ್ಕೆ ಹೋದನು. ಅವರು ಗುರುಗಳನ್ನು ಭೇಟಿಯಾದರು ಮತ್ತು ಮಕ್ಕಳನ್ನು ಪಡೆಯದೆ ಸ್ವರ್ಗದಲ್ಲಿ ಸ್ಥಾನ ಪಡೆಯಲು ಸಾಧ್ಯವಿಲ್ಲ ಎಂದು ಅರಿತುಕೊಂಡರು. ಆಗ ಕುಂತಿ ಅವರಿಗೆ ದೈವಿಕ ಮಂತ್ರವನ್ನು ನೆನಪಿಸುತ್ತಾಳೆ. ಅವಳು ಯುಧಿಷ್ಠಿರ, ಅರ್ಜುನ ಮತ್ತು ಭೀಮನಿಗೆ ಜನ್ಮ ನೀಡುತ್ತಾಳೆ, ಆದರೆ ಮಾದ್ರಿ ಅದೇ ಮಂತ್ರದಿಂದ ನಕುಲ ಮತ್ತು ಸಹದೇವನಿಗೆ ಜನ್ಮ ನೀಡುತ್ತಾಳೆ.
ಪಾಂಡು ಮಾದ್ರಿಯನ್ನು ಪ್ರೀತಿಸಲು ಪ್ರಯತ್ನಿಸಿದ ಮತ್ತು ತನ್ನ ಶಾಪವನ್ನು ಮರೆತುಬಿಟ್ಟನು, ಅದು ಅವನನ್ನು ಸಾಯುವಂತೆ ಮಾಡಿತು. ಮಾದ್ರಿಯೂ ತನ್ನ ಸಾವಿಗೆ ಕಾರಣನೆಂದು ಭಾವಿಸಿ ಆತ್ಮಹತ್ಯೆ ಮಾಡಿಕೊಂಡನು. ಕುಂತಿ ತನ್ನ ಐದು ಗಂಡು ಮಕ್ಕಳೊಂದಿಗೆ ಉಳಿದು ನಂತರ ಹಸ್ತಿನಾಪುರಕ್ಕೆ ಹಿಂತಿರುಗಿದಳು. ಅವರನ್ನು ಚೆನ್ನಾಗಿ ಸ್ವೀಕರಿಸಲಿಲ್ಲ ಆದರೆ ಅವರನ್ನು ಸ್ವಾಗತಿಸಲಾಯಿತು. ಕುಂತಿ ಅವರಿಗೆ ರಾಜಕುಮಾರರಂತೆ ಎಲ್ಲಾ ತರಬೇತಿ ಮತ್ತು ಹಕ್ಕುಗಳು ಸಿಗುವಂತೆ ನೋಡಿಕೊಂಡಳು.
ಪಾಂಡವರು ಗಡಿಪಾರು ಮಾಡುವಾಗ ರಾಜಧಾನಿಯಲ್ಲಿಯೇ ಇರಲು ಅವಳಿಗೆ ಆದೇಶಿಸಲಾಯಿತು ಆದರೆ ಅವಳು ಅರಮನೆಯ ಬದಲು ವಿದುರನ ಅರಮನೆಯನ್ನು ಆರಿಸಿಕೊಂಡಳು. ಭೀಮನು ಕಾಡಿನಲ್ಲಿ ಹಿಡಿಂಬಳನ್ನು ಮದುವೆಯಾಗುವಂತೆ ಅವಳು ಖಚಿತಪಡಿಸಿಕೊಂಡಳು, ಇದು ಯುದ್ಧದಲ್ಲಿ ಮಹತ್ವದ ಪಾತ್ರ ವಹಿಸಿದ ಘಟೋತ್ಕಚನ ಜನನಕ್ಕೆ ಕಾರಣವಾಯಿತು.
ಇತರ ಎಲ್ಲಾ ರಾಜಕುಮಾರರನ್ನು ಸೋಲಿಸಿ ದ್ರೌಪದಿಯನ್ನು ಮೆಚ್ಚಿಸಿ ಅರ್ಜುನ ಹಿಂತಿರುಗಿದಾಗ, ಕುಂತಿಗೆ ತಾನು ಭಿಕ್ಷೆ ಖರೀದಿಸಿದ್ದೇನೆಂದು ಹೇಳಿದನು, ಅದನ್ನು ಕುಂತಿ ಐದು ಸಹೋದರರಲ್ಲಿ ಹಂಚಿಕೊಳ್ಳಲು ಆದೇಶಿಸಿದಳು. ಆಗ ಕುಂತಿ ತನ್ನ ತಪ್ಪನ್ನು ಅರಿತುಕೊಂಡಳು ಆದರೆ ದ್ರೌಪದಿ ಇದನ್ನೇ ತನ್ನ ಅದೃಷ್ಟವೆಂದು ಒಪ್ಪಿಕೊಂಡಳು.
ಯುದ್ಧ ಪ್ರಾರಂಭವಾಗುವ ಸ್ವಲ್ಪ ಮೊದಲು, ಕುಂತಿ ಕರ್ಣನ ಬಳಿಗೆ ಹೋಗಿ ತನ್ನ ಸತ್ಯವನ್ನು ಅವಳಿಗೆ ಬಹಿರಂಗಪಡಿಸಿದಳು. ಕರ್ಣನಿಗೆ ಹೃದಯ ಮುರಿದುಹೋಯಿತು ಆದರೆ ಅವನು ಪಾಂಡವರ ಜೊತೆ ಇರುವುದಿಲ್ಲ ಎಂದು ಹೇಳಿದನು. ಬದಲಾಗಿ, ಯುದ್ಧದಲ್ಲಿ ಅರ್ಜುನನನ್ನು ಮಾತ್ರ ಕೊಲ್ಲುತ್ತೇನೆ ಮತ್ತು ಬೇರೆ ಯಾರಿಗೂ ಹಾನಿ ಮಾಡುವುದಿಲ್ಲ ಎಂದು ಭರವಸೆ ನೀಡಿದನು.
ಪಾಂಡವರ ಪರವಾಗಿದ್ದರೂ, ಗಾಂಧಾರಿ ಎಂದಿಗೂ ಒಂಟಿತನ ಅನುಭವಿಸದಂತೆ ನೋಡಿಕೊಳ್ಳಲು ಕುಂತಿ ಯಾವಾಗಲೂ ಗಾಂಧಾರಿಯೊಂದಿಗೆ ಇರುತ್ತಿದ್ದಳು. ನಂತರ, ಕುಂತಿ ಕರ್ಣನ ಬಗ್ಗೆ ಪಾಂಡವರಿಗೆ ಸತ್ಯವನ್ನು ಬಹಿರಂಗಪಡಿಸಿದಳು ಮತ್ತು ಎಲ್ಲಾ ಪಾಂಡವರು ತಮ್ಮ ಸಹೋದರನ ಕೊಲೆಯನ್ನು ಮಾಡಿದ ಅಪರಾಧಿ ಭಾವನೆಯನ್ನು ಅನುಭವಿಸಿದರು. ಯುಧಿಷ್ಠಿರನು ತನ್ನ ತಾಯಿಯಿಂದ ಇದನ್ನು ಕೇಳಿದ ಯಾವುದೇ ಮಹಿಳೆಯರು ರಹಸ್ಯಗಳನ್ನು ಮರೆಮಾಡಲು ಸಾಧ್ಯವಾಗುವುದಿಲ್ಲ ಎಂದು ಶಪಿಸಿದನು.
ಕೊನೆಗೆ ಅವಳು ಸಂಜಯ, ವಿದುರ, ಧೃತರಾಷ್ಟ್ರ ಮತ್ತು ಗಾಂಧಾರಿಯೊಂದಿಗೆ ಹಿಮಾಲಯಕ್ಕೆ ಹೊರಟು ಅಲ್ಲಿ ಕಾಡಿನ ಬೆಂಕಿಯಲ್ಲಿ ಸಾವನ್ನಪ್ಪಿದಳು.
❤️🌷🙏 ವಿಮಲ್ ನ್ಯೂಟ್ರಿಷನ್ ಸೆಂಟರ್ 🙏🌷❤️ #👦🏻 Bad Boyz ಸ್ಟೇಟಸ್ #✍️ ಮೋಟಿವೇಷನಲ್ ಕೋಟ್ಸ್ #😍 ನನ್ನ ಸ್ಟೇಟಸ್ #🎥 Motivational ಸ್ಟೇಟಸ್ #✍️ ಮೋಟಿವೇಷನಲ್ ಕೋಟ್ಸ್
ನಾರದ_ಪರ್ವತರ_ಉಪಾಖ್ಯಾನ******
ನಾರದ ಮತ್ತು ಪರ್ವತ ಋಷಿಗಳಿಗೆ ಒಮ್ಮೆ ಭೂಲೋಕ ವಿಹಾರ ಮಾಡಬೇಕೆಂಬ ಬಯಕೆಯುಂಟಾಯಿತು. ಹಾಗೆ ಭೂಚರರಾಗಿ ಸ್ವೇಚ್ಛೆಯಿಂದ ತಿರುಗಾಡುತ್ತಿದ್ದರು. ನಾರದರು ಸೋದರಮಾವ ಮತ್ತು ಪರ್ವತ ಋಷಿಯು ಅವರ ಸೋದರಳಿಯ. ಪರಸ್ಪರ ಪ್ರೀತಿಯುಳ್ಳವರಾಗಿ ಅನ್ಯೋನ್ಯವಾಗಿದ್ದರಿಂದ ಇಬ್ಬರ ಮನಸ್ಸಿನಲ್ಲಿ ಯಾವುದೇ ವಿಧವಾದ ಸಂಕಲ್ಪ ಹುಟ್ಟಿದರೂ ಅದು ಒಳ್ಳೆಯದೇ ಆಗಲೀ, ಕೆಟ್ಟದೇ ಆಗಿರಲಿ ಪರಸ್ಪರ ಮುಚ್ಚಿಡದೇ ಒಬ್ಬರಿಗೊಬ್ಬರು ಹೇಳಲೇಬೇಕು, ಯಾರೇ ತಪ್ಪಿದಲ್ಲಿ ಶಾಪಕ್ಕೆ ಭಾಜನರಾಗಬೇಕಾಗುವುದು ಎಂಬ ಪ್ರತಿಜ್ಞೆ ಮಾಡಿದರು. ಹೀಗೆ ನಾರದ-ಪರ್ವತರು ಸಂಚರಿಸುತ್ತ ಸೃಂಜಯರಾಜನ ಅರಮನೆಯಲ್ಲಿ ಸ್ವಲ್ಪಕಾಲ ತಂಗಲು ನಿಶ್ಚಯಿಸಿದರು. ಸೃಂಜಯನು ಋಷಿದ್ವಯರಿಗೆ ಅರ್ಘ್ಯಪಾದ್ಯಾದಿಗಳನ್ನಿತ್ತು ಯಥೋಚಿತವಾಗಿ ಸತ್ಕರಿಸಿ ಮುನಿಗಳ ವಾಸ್ತವ್ಯಕ್ಕೆ ಅನುವು ಮಾಡಿಕೊಟ್ಟನು ಮತ್ತು ತನ್ನ ಏಕಮಾತ್ರ ಪುತ್ರಿಯಾದ ಸುಶೀಲೆಯೂ ಗುಣವತಿಯೂ ಆದ ‘ಸುಕುಮಾರಿ’ ಯನ್ನು ಮಹರ್ಷಿಗಳ ಸೇವೆಗಾಗಿ ನಿಯೋಜಿಸಿದನು. ಸೃಂಜಯನ ಮಗಳ ಅಪ್ರತಿಮ ರೂಪದಿಂದಾಗಿ ಮತ್ತು ಸೇವೆಯಿಂದ ನಾರದರಿಗೆ ಆಕೆಯ ಮೇಲೆ ಪ್ರೀತಿ ಹುಟ್ಟಿತು. ನಾಚಿಕೆಯಿಂದಾಗಿ ತಮ್ಮ ಹೃದಯದಲ್ಲಿದ್ದ ಪ್ರೀತಿಯ ವಿಷಯವನ್ನು ಪರ್ವತರಲ್ಲಿ ಹೇಳಲಿಲ್ಲ. ಆದರೆ ನಾರದರ ನಡುವಳಿಕೆಯಲ್ಲಾದ ಬದಲಾವಣೆ ಹಾಗೂ ತಮ್ಮ ತಪಃಪ್ರಭಾವದಿಂದ ಪರ್ವತರಿಗೆ ನಾರದ ಮನಸ್ಸಿನಲ್ಲುಂಟಾಗುತ್ತಿದ್ದ ಪ್ರೇಮದ ವಿಚಾರ ಅರ್ಥವಾಯಿತು. ತಮ್ಮಿಬ್ಬರ ಮಧ್ಯೆ ಆದ ಪ್ರತಿಜ್ಞೆಯನ್ನು ನಾರದರು ಮೀರಿದ್ದರಿಂದ ಕ್ರುದ್ಧರಾಗಿ “ನೀನು ಮೋಹಿಸಿರುವ ಸುಕುಮಾರಿಯನ್ನು ನೀನು ವಿವಾಹವಾದ ಕೂಡಲೇ ನಿನಗೆ ಕಪಿರೂಪ ಬರುತ್ತದೆ” ಎಂದು ಶಪಿಸಿದರು. ಪರ್ವತರ ಶಾಪವಾಕ್ಯವನ್ನು ಕೇಳಿದ ಕೂಡಲೇ ಸೋದರಮಾವನಾದ ನಾರದರಿಗೂ ಕೋಪವುಂಟಾಗಿ “ನೀನು ಮಹಾ ತಪೋಧನನೇ ಆಗಿದ್ದು, ಧರ್ಮಪರಾಯಣನೇ ಆದರೂ ನಿನಗೆ ಸ್ವರ್ಗಪ್ರಾಪ್ತಿಯಿಲ್ಲ” ಎಂದು ಪ್ರತಿಶಾಪವನ್ನಿತ್ತು. ಪರಸ್ಪರ ಶಪಿಸಿಕೊಂಡು ಕೋಪದಿಂದ ಬುಸುಗುಡುತ್ತಾ ವಿರುದ್ಧ ದಿಕ್ಕುಗಳಲ್ಲಿ ಹೊರಟುಹೋದರು!
ಸೃಂಜಯನು ಅತೀವ ಭಕ್ತಿಯಿಂದ ಪುತ್ರಿ ಸುಕುಮಾರಿಯನ್ನು ವೇದೋಕ್ತವಾಗಿ ನಾರದರಿಗೆ ವಿವಾಹ ಮಾಡಿಕೊಟ್ಟ. ವಿವಾಹವಿಧಿಗಳು ಮುಗಿದ ಕೂಡಲೇ ಶಾಪಪ್ರಭಾವದಿಂದಾಗಿ ಸುಕುಮಾರಿಯು ನಾರದರನ್ನು ಮಂಗದ ರೂಪದಲ್ಲಿ ಕಂಡಳು. ಅವಳಿಗೆ ಅಚ್ಚರಿಯಾದರೂ ಅವರನ್ನು ಅವಹೇಳನ ಮಾಡಲಿಲ್ಲ. ನಾರದರ ವಿಕಾರವಾದ ಮುಖವನ್ನು ಕಂಡಮೇಲೆಯೂ ಯಾವುದೇ ವ್ಯತ್ಯಾಸವಿಲ್ಲದಂತೆ ಬಹುವಾಗಿ ಪ್ರೀತಿಸತೊಡಗಿದಳು. ಪತಿಯ ಸೇವೆಯಲ್ಲಿಯೇ ಸದಾ ತೊಡಗಿಕೊಂಡಿದ್ದಳು. ಸ್ವಲ್ಪಕಾಲ ಕಳೆಯಿತು. ಒಮ್ಮೆ ಲೋಕಸಂಚಾರ ಮಾಡುತ್ತಾ ಬಂದ ಪರ್ವತರು ಕಪಿರೂಪದಲ್ಲಿದ್ದ ನಾರದರನ್ನು ಸಂದರ್ಶಿಸಿದರು. ಶಾಪದ ಪ್ರಭಾವದಿಂದ ಅವರೂ ಸಹ ಭೂಮಿಯನ್ನು ಬಿಟ್ಟು ಸ್ವರ್ಗಕ್ಕೆ ಹೋಗಲಾರದ ಪರಿಸ್ಥಿತಿಯಲ್ಲಿ ಸಿಲುಕಿಕೊಂಡಿದ್ದರು. ಸೋದರಮಾವನನ್ನು ಕಂಡ ಕೂಡಲೇ ನಮಸ್ಕರಿಸಿ ತಮ್ಮ ತಪ್ಪನ್ನು ಮನ್ನಿಸುವಂತೆ ಬೇಡಿಕೊಂಡರು. ನಾರದರಿಗೂ ಪುತ್ರಸಮಾನನಾದ ಸೋದರಳಿಯನನ್ನು ಕೋಪದಿಂದ ಶಪಿಸಿದೆನಲ್ಲ ಎಂಬ ಮರುಕವುಂಟಾಯಿತು. ನಾರದ-ಪರ್ವತರು ತಾವು ಮಾಡಿದ ಅಕಾರ್ಯಕ್ಕೆ ಪಶ್ಚಾತ್ತಾಪಪಟ್ಟು ಪರಸ್ಪರ ಶಾಪಗಳನ್ನು ನಿವೃತ್ತಿಗೊಳಿಸಿದರು. ನಾರದರಿಗೆ ಮಂಗನ ಮುಖವೂ ಹೋಯಿತು, ಪರ್ವತರಿಗೆ ಸ್ವರ್ಗಕ್ಕೆ ಹೋಗಲು ಸಾಧ್ಯವಾಯಿತು.
ಕಪಿಯ ಮುಖ ಹೋಗಿ ದೇವರೂಪಿಗಳಾದ ನಾರದರನ್ನು ನೋಡಿ ಸುಕುಮಾರಿಯು ಪರಪುರುಷನೆಂದು ಭ್ರಮೆಗೊಂಡು ಓಡಿಹೋಗಲು ಮುಂದಾದಳು! ಓಡುತ್ತಿದ್ದ ಅವಳನ್ನು ಪರ್ವತರು ಕೂಗಿ ನಿಲ್ಲಿಸಿ ನಡೆದ ವಿಷಯವನ್ನೆಲ್ಲ ಅರುಹಿದರು. ಶಾಪದದೋಷದಿಂದ ತನ್ನ ಪತಿಗೆ ಮಂಗದ ಮುಖ ಬಂದದ್ದನ್ನು ಪರ್ವತರಿಂದ ತಿಳಿದ ರಾಜಕುಮಾರಿಯು ಹೃಷ್ಟಳಾದಳು. ಇತ್ತ ಪರ್ವತರು ಸ್ವರ್ಗಕ್ಕೆ ಪ್ರಯಾಣಿಸಿದರು, ನಾರದರು ಪತ್ನಿಯೊಡನೆ ಸ್ವಗೃಹಕ್ಕೆ ತೆರಳಿದರು. ಪ್ರಕರಣ ಸುಖಾಂತ್ಯವಾಯಿತು!
❤️🌷🙏 ವಿಮಲ್ ನ್ಯೂಟ್ರಿಷನ್ ಸೆಂಟರ್ 🙏🌷❤️ #🎥 Motivational ಸ್ಟೇಟಸ್ #😍 ನನ್ನ ಸ್ಟೇಟಸ್ #✍️ ಮೋಟಿವೇಷನಲ್ ಕೋಟ್ಸ್ #👦🏻 Bad Boyz ಸ್ಟೇಟಸ್ #✍️ ಮೋಟಿವೇಷನಲ್ ಕೋಟ್ಸ್
*ಊಟದ ತಟ್ಟೆಯಲ್ಲಿ ಎಂಜಲು ಬಿಡಬಾರದು**
ರಾಮಾಯಣದ ಪ್ರಕಾರ, ಸೀತೆಯ ಹುಡುಕಾಟದ ಸಮಯದಲ್ಲಿ ಹನುಮಂತನು ರಾವಣನ ಅಡುಗೆಮನೆಯನ್ನು ಪ್ರವೇಶಿಸಿದಾಗ, ರಾವಣನ ಎಂಜಲು ತಟ್ಟೆಯನ್ನು ನೋಡಿ ಅವನ ಸಾವು ಹತ್ತಿರದಲ್ಲಿದೆ ಎಂದು ಹನುಮಂತನಿಗೆ ಅರ್ಥವಾಯಿತು. ಏಕೆಂದರೆ ರಾವಣನು ತನ್ನ ತಟ್ಟೆಯಲ್ಲಿ ಮೊಸರನ್ನು ಎಂಜಲು ಬಿಟ್ಟಿದ್ದನು.
ಊಟದಲ್ಲಿ ಎಂಜಲು ಬಿಡುವವರ ಆಯಸ್ಸು ಕ್ಷೀಣಿಸುತ್ತಾ ಹೋಗುತ್ತದೆ. ಬಹುಶಃ ಇದೇ ಕಾರಣಕ್ಕಾಗಿ ನಮ್ಮ ಪೂರ್ವಜರು ಊಟವಾದ ನಂತರ ತಟ್ಟೆಗೆ ನೀರು ಹಾಕಿ, ಉಳಿದ ಅನ್ನದ ಕಣಗಳನ್ನು ಕಲಕಿ ಕುಡಿಯುತ್ತಿದ್ದರು.
**ವಿದ್ವಾಂಸರ ಪ್ರಕಾರ:** ತಟ್ಟೆಯಲ್ಲಿ ಆಹಾರವನ್ನು ವ್ಯರ್ಥ ಮಾಡುವುದು ಅನ್ನಪೂರ್ಣೇಶ್ವರಿ ಮತ್ತು ಲಕ್ಷ್ಮಿ ದೇವಿಗೆ ಮಾಡುವ ಅಪಮಾನವೆಂದು ಪರಿಗಣಿಸಲಾಗುತ್ತದೆ. ಹೀಗೆ ಮಾಡುವುದರಿಂದ ಆರ್ಥಿಕ ಪರಿಸ್ಥಿತಿ ದುರ್ಬಲಗೊಳ್ಳುತ್ತದೆ, ಅಷ್ಟೇ ಅಲ್ಲದೆ ಮನೆಗೆ ಬರುವ ಲಕ್ಷ್ಮೀಯು ಮುನಿಸಿಕೊಂಡು ಹೊರಟು ಹೋಗುತ್ತಾಳೆ.
**ಮಕ್ಕಳ ಮೇಲೆ ಪ್ರಭಾವ:** ಊಟವನ್ನು ಎಂಜಲು ಮಾಡುವ ಮಕ್ಕಳು ಓದಿನಲ್ಲಿ ಹಿಂದುಳಿಯುತ್ತಾರೆ. ಮನಸ್ಸು ಮೆಲ್ಲನೆ ಓದಿನಿಂದ ಸಂಪೂರ್ಣವಾಗಿ ವಿಮುಖವಾಗುತ್ತದೆ. ಆದ್ದರಿಂದ ಮಕ್ಕಳಿಗೆ ಮೊದಲ ಬಾರಿಗೆ ಅವರು ಎಷ್ಟು ತಿನ್ನಬಲ್ಲರೋ ಅಷ್ಟನ್ನೇ ಬಡಿಸಿ.
**ಗ್ರಹ ದೋಷಗಳು:** ತಟ್ಟೆಯಲ್ಲಿ ಆಹಾರವನ್ನು ಉಳಿಸುವುದರಿಂದ ಶನಿ ದೇವನ ಕೋಪಕ್ಕೆ ತುತ್ತಾಗಬೇಕಾಗಬಹುದು. ಇದರೊಂದಿಗೆ ಚಂದ್ರನ ಅಶುಭ ದೃಷ್ಟಿಯೂ ವ್ಯಕ್ತಿಯ ಜೀವನದ ಮೇಲೆ ಬೀಳತೊಡಗುತ್ತದೆ. ಚಂದ್ರನ ಅಶುಭ ಪ್ರಭಾವದಿಂದಾಗಿ ಮಾನಸಿಕ ಕಾಯಿಲೆಗಳು ಕೂಡ ವ್ಯಕ್ತಿಯನ್ನು ಆವರಿಸಿಕೊಳ್ಳಬಹುದು.
ಇದಲ್ಲದೆ, ನೀವು ಪ್ರಯಾಣದ ಸಮಯದಲ್ಲಿ ಎಂಜಲು ಆಹಾರವನ್ನು ಎಸೆದರೆ, ನಿಮ್ಮ ಕೆಲಸಗಳು ಎಂದಿಗೂ ಪೂರ್ಣಗೊಳ್ಳುವುದಿಲ್ಲ ಅಥವಾ ಆಗುವ ಕೆಲಸಗಳು ಕೂಡ ಕೆಡಲು ಪ್ರಾರಂಭಿಸುತ್ತವೆ.
ತಟ್ಟೆಯಲ್ಲಿ ಆಹಾರವನ್ನು ವ್ಯರ್ಥ ಮಾಡುವುದರಿಂದ ವ್ಯಕ್ತಿಯು ಪಾಪದ ಭಾಗಿಯಾಗುತ್ತಾನೆ. ಆದ್ದರಿಂದ ತಟ್ಟೆಯಲ್ಲಿ ಎಷ್ಟು ಬೇಕೋ ಅಷ್ಟನ್ನೇ ಹಾಕಿಕೊಳ್ಳಬೇಕು ಮತ್ತು ಆಹಾರವು ಎಂದಿಗೂ ವ್ಯರ್ಥವಾಗದಂತೆ ನೋಡಿಕೊಳ್ಳಬೇಕು. ಒಂದು ವೇಳೆ ಯಾವುದೋ ಕಾರಣದಿಂದ ಆಹಾರ ಉಳಿದುಹೋದರೆ, ಕೈಮುಗಿದು ಅನ್ನಪೂರ್ಣೇಶ್ವರಿಯ ಬಳಿ ಕ್ಷಮೆ ಕೇಳಿ.
**ತುಂಬಾ ಒಳ್ಳೆಯ ಮಾತು:** *"ತಿನ್ನಿ ಮಣದಷ್ಟು, ಬಿಡಬೇಡಿ ಕಣದಷ್ಟು"*
*"ಅಷ್ಟೇ ಹಾಕಿ ತಟ್ಟೆಯಲ್ಲಿ"*
*"ವ್ಯರ್ಥವಾಗಿ ಹೋಗದಿರಲಿ ಚರಂಡಿಯಲ್ಲಿ"*
❤️🌷🙏 ವಿಮಲ್ ನ್ಯೂಟ್ರಿಷನ್ ಸೆಂಟರ್ 🙏🌷❤️ #👦🏻 Bad Boyz ಸ್ಟೇಟಸ್ #✍️ ಮೋಟಿವೇಷನಲ್ ಕೋಟ್ಸ್ #😍 ನನ್ನ ಸ್ಟೇಟಸ್ #🎥 Motivational ಸ್ಟೇಟಸ್ #✍️ ಮೋಟಿವೇಷನಲ್ ಕೋಟ್ಸ್
ಒಂದಕ್ಷರ_ಒತ್ತೆಯಿಟ್ಟ_ಕವಿ…...
ಋಣಂ ಕೃತ್ವಾ ಘೃತಂ ಪಿಬೇತ್ – ಇದು ಚಾರ್ವಾಕ ಮತ. ಸಾಲ ಮಾಡಿಯಾದರೂ ತುಪ್ಪ ತಿನ್ನು ಎಂಬುದು ಉಪದೇಶಕ್ಕೇನೋ ಚೆನ್ನಾಗಿ ಕೇಳಿಸುತ್ತದಾದರೂ, ವ್ಯವಹಾರಕ್ಕೆ ಸೂಕ್ತವಲ್ಲ.
ಕೆಲವೊಮ್ಮೆ ಅನಿವಾರ್ಯವಾಗಿ ಸಾಲ ಮಾಡಬೇಕಾದ ಸಂದರ್ಭಗಳು ಬರುತ್ತವೆ. ಕಷ್ಟ ಬಂದಾಗ ಅಪಾತ್ರರ ಮುಂದೆಯೂ ಹಿಡಿಜೀವ ಮಾಡಿಕೊಂಡು ಕೈಯೊಡ್ಡುವ ಅನಿವಾರ್ಯತೆ. ಸಾಲ ಕೊಂಬುದಕ್ಕಿಂತ ಕಡಿಮೆ ಅವಮಾನದ ಕೆಲಸವೆಂದರೆ, ಒತ್ತೆ ಇಡುವುದು. ಧರ್ಮರಾಯ ತನ್ನ ಖಜಾನೆ, ರಾಜಧಾನಿ, ರಾಜ್ಯ, ಪ್ರಜೆಗಳು, ತಮ್ಮಂದಿರು ಮತ್ತು ಕೊನೆಗೆ ಪತ್ನಿಯನ್ನೂ ಒತ್ತೆಯಿಟ್ಟು ಪಗಡೆಯಾಡಿದ್ದು ಪ್ರಸಿದ್ಧವಷ್ಟೆ?
ಭಾರವಿ ಎಂಬ ಸಂಸ್ಕೃತ ಕವಿ, ದುಡ್ಡಿನ ಅವಶ್ಯಕತೆ ಬಿದ್ದಾಗ ಒಂದು ಪದ್ಯ ಬರೆದು, ಅದನ್ನು ಒತ್ತೆಯಿಟ್ಟು ಸಾಲ ಪಡೆದಿದ್ದನಂತೆ. ಹಾಗೆಯೇ, ತನ್ನ ಸ್ವಂತದ ಅಮೂಲ್ಯ ಸಂಗತಿಯೊಂದನ್ನು ಒತ್ತೆ ಇಟ್ಟು ಸಾವಿರ ಹೊನ್ನ ನಾಣ್ಯಗಳನ್ನು ಸಂಪಾದಿಸಿದವನು ಕವಿ ರುದ್ರಭಟ್ಟ. 9ನೆಯ ಶತಮಾನದಲ್ಲಿ ಕಾಶ್ಮೀರದಲ್ಲಿದ್ದ ಮತ್ತು ಕಾವ್ಯಾಲಂಕಾರ ಎಂಬ ಲಕ್ಷಣಗ್ರಂಥವನ್ನು ಬರೆದ ಭಾಷಾಶಾಸ್ತ್ರಿಯೊಬ್ಬ; 12ನೆಯ ಶತಮಾನದಲ್ಲಿ ಕರ್ನಾಟಕದಲ್ಲಿದ್ದ ಮತ್ತು ಜಗನ್ನಾಥ ವಿಜಯ ಕಾವ್ಯವನ್ನು ಬರೆದ ಕವಿಯೊಬ್ಬ – ಇಬ್ಬರ ಹೆಸರಲ್ಲೂ ಈ ಒತ್ತೆಯ ಕಥೆ ಪ್ರಚಲಿತದಲ್ಲಿರುವುದರಿಂದ, ನಿಖರವಾಗಿ ಯಾರ ಜೀವನದಲ್ಲಿ ನಡೆದ್ದರೆಂದು ಹೇಳುವುದು ಕಷ್ಟವೇ.
ನಡೆದದ್ದಿಷ್ಟು: ರುದ್ರಭಟ್ಟ ಮಹಾವಿದ್ವಾಂಸ. ರಾಜನ ಆಸ್ಥಾನದಲ್ಲಿದ್ದು ಕಾಲಕಾಲಕ್ಕೆ ತನ್ನ ಪಾಂಡಿತ್ಯಕ್ಕೆ ತಕ್ಕ ಮನ್ನಣೆಯನ್ನು ಧನ-ಕನಕಗಳ ರೂಪದಲ್ಲಿ ಸಂಪಾದಿಸಿದವನು. ಅಷ್ಟಿದ್ದರೂ ಅದೊಂದು ಸಂದರ್ಭದಲ್ಲಿ, ಕವಿಗೆ ಸಾವಿರ ಹೊನ್ನಿನ ಅವಶ್ಯಕತೆ ಬಿತ್ತು.
ಒಬ್ಬ ಸಾಹುಕಾರನಲ್ಲಿಗೆ ಹೋದ. ಸಾಲ ಪಡೆಯಬೇಕಾದರೆ ಏನನ್ನಾದರೂ ಒತ್ತೆ ಇಡಬೇಕಲ್ಲ? ಕವಿಯ ಜೀವನ ಆ ಸಂದರ್ಭದಲ್ಲಿ ಅದೆಷ್ಟು ದುರ್ಭರವಾಗಿತ್ತೆಂದರೆ, ಅಡವಿಡಲು ಯಾವೊಂದು ಅಮೂಲ್ಯ ಸಂಗತಿಯೂ ಕೈಯಲ್ಲಿರಲಿಲ್ಲ. ಸರಿ, ತನ್ನಿಂದ ಕೊಡಬಹುದಾದದ್ದನ್ನಷ್ಟೇ ಕೊಡೋಣ ಎಂದುಕೊಂಡ ರುದ್ರಭಟ್ಟ, ತನ್ನ ಹೆಸರಿನ ಮೂರನೆಯ ಅಕ್ಷರವನ್ನು ಒತ್ತೆಯಿಟ್ಟ! ಅರ್ಥಾತ್ ಭ ಎಂಬ ಅಕ್ಷರವನ್ನು ಸಾಹುಕಾರನಲ್ಲಿ ಒತ್ತೆಯಿಟ್ಟು ದುಡ್ಡು ಪಡೆದ.
ಆ ದುಡ್ಡನ್ನು ಮರಳಿಸುವವರೆಗೂ ತಾನು ಕಾವ್ಯದಲ್ಲಾಗಲೀ ವ್ಯವಹಾರದಲ್ಲಾಗಲೀ ತನ್ನ ಹೆಸರಲ್ಲಿ ಆ ಅಕ್ಷರವನ್ನು ಬಳಸುವುದಿಲ್ಲವೆಂಬ ವಾಗ್ಧಾನವನ್ನೂ ಕೊಟ್ಟ! ಸ್ವಂತ ನಾಮಧೇಯದ ಮೇಲಿನ ಮೋಹ ಯಾರಿಗಿಲ್ಲ? ಇಂದಲ್ಲ ನಾಳೆ, ಆದಷ್ಟು ಶೀಘ್ರದಲ್ಲಿ ಸಾಲ ಮರುಪಾವತಿಯಾಗೇ ಆಗುತ್ತದೆ ಎಂದು ಸಾಲ ಕೊಟ್ಟವನು ಭಾವಿಸಿರಬೇಕು! ಒತ್ತೆ ಸ್ವೀಕೃತವಾಯಿತು;
ಸಾಹುಕಾರನಿಂದ ಸಾವಿರ ಹೊನ್ನಿನ ಗಂಟು ಸಿಕ್ಕಿತು. ಅದಾಗಿ ಯಾವಾಗರುದ್ರಭಟ್ಟ ಆ ದುಡ್ಡನ್ನು ಮರಳಿಸಿ ಹೆಸರಿನ ಸ್ವಾಮ್ಯವನ್ನು ವಾಪಸು ಪಡೆದ ಎಂಬುದಕ್ಕೆ ಮಾತ್ರ ದಾಖಲೆ ಇಲ್ಲ. ಆತ ನಿಜವಾಗಿ ದುಡ್ಡನ್ನು ಮರಳಿಸಿದನೋ ಅಥವಾ ತನ್ನ ಪರಿಷ್ಕೃತ ಹೆಸರಲ್ಲೇ ತೃಪ್ತಿಪಟ್ಟು, ಸಾಲ ತೀರಿಸುವುದನ್ನು ಮರೆತು ಜೀವನ ಕಳೆದನೋ ಎಂಬುದೂ ತಿಳಿದಿಲ್ಲ. ಯಾಕೆಂದರೆ, ಕಾವ್ಯಾಲಂಕಾರ ಮತ್ತು ಜಗನ್ನಾಥ ವಿಜಯ – ಈ ಎರಡೂ ಕಾವ್ಯಗಳನ್ನು ಬರೆದವರೂ ತಮ್ಮನ್ನು ರುದ್ರಟ ಎಂದೇ ಹೇಳಿಕೊಂಡಿದ್ದಾರೆ!
❤️🌷🙏 ವಿಮಲ್ ನ್ಯೂಟ್ರಿಷನ್ ಸೆಂಟರ್ 🙏🌷❤️ #🎥 Motivational ಸ್ಟೇಟಸ್ #😍 ನನ್ನ ಸ್ಟೇಟಸ್ #✍️ ಮೋಟಿವೇಷನಲ್ ಕೋಟ್ಸ್ #👦🏻 Bad Boyz ಸ್ಟೇಟಸ್ #✍️ ಮೋಟಿವೇಷನಲ್ ಕೋಟ್ಸ್
ಸುವರ್ಣಷ್ಠೀವಿ*******
ನಾರದ ಮಹರ್ಷಿಯ ಸೋದರಳಿಯ ಪರ್ವತ ಮುನಿ ಇಬ್ಬರೂ ಭೂಲೋಕದಲ್ಲಿ ಸಂಚರಿಸುತ್ತಿರುವಾಗ ಸೃಂಜಯ ರಾಜನ ಅರಮನೆಯಲ್ಲಿ ಸ್ವಲ್ಪಕಾಲ ತಂಗುತ್ತಾರೆ. ರಾಜನ ಆತಿಥ್ಯದಿಂದ ಸುಪ್ರೀತರಾದ ಮಹರ್ಷಿಗಳಿಬ್ಬರೂ ರಾಜನಿಗೆ ವಾಂಛಿತ ವರವನ್ನು ಅನುಗ್ರಹಿಸಲು ನಿಶ್ಚಯಿಸಿದರು. ತನ್ನಿಮಿತ್ತವಾಗಿ ಪರ್ವತಮುನಿಯು ಸೃಂಜಯನಲ್ಲಿ ಅವನ ಬಹುದಿನದ ಆಕಾಂಕ್ಷೆ ಯಾವುದಾದರೂ ಇದ್ದಲ್ಲಿ ವರರೂಪದಲ್ಲಿ ಕೇಳಬಹುದು. ಆದರೆ ರಾಜನು ದೇವತೆಗಳಿಗೆ ಪೀಡೆಯಾಗುವಂತಹ, ಮನುಷ್ಯರಿಗೆ ತೊಂದರೆಯಾಗುವಂತಹ ವರವನ್ನು ಕೇಳಕೂಡದು ಎಂಬ ನಿಯಮ ವಿಧಿಸಿದರು. ಪರ್ವತನ ಮಾತಿಗೆ ಸೃಂಜಯನು ಸಂತೋಷದಿಂದ “ಮಹರ್ಷಿಯೇ, ವೀರಪರಾಕ್ರಮಿಯಾದ, ಸೌಭಾಗ್ಯಶಾಲಿಯಾದ, ದೀರ್ಘಾಯುಷ್ಯವುಳ್ಳ, ಇಂದ್ರನಿಗೆ ಸಮಾನನಾದ ಪುತ್ರನನ್ನು ಪಡೆಯಬೇಕೆಂಬ ಬಹುಕಾಲದ ನನ್ನ ಬಯಕೆಯನ್ನು ಈಡೇರಿಸಿರಿ” ಎಂದು ಪ್ರಾರ್ಥಿಸಿದ. ಸೃಂಜಯನ ಬಯಕೆಯೇನೋ ನೆರವೇರಿತು ಆದರೆ ಇಂದ್ರನನ್ನು ಪರಾಭವಗೊಳಿಸುವ ಮಗನನ್ನು ಪಡೆಯುವ ಸಂಕಲ್ಪವಿದ್ದ ಕಾರಣದಿಂದ ಹುಟ್ಟುವ ಮಗನು ಅಲ್ಪಾಯುಷ್ಯನಾಗುವಂತಾಯಿತು. ಈ ವಿಷಯದಿಂದ ಬಾಧಿತನಾದ ಸೃಂಜಯನು ಪರ್ವತನನ್ನು “ವಿಪ್ರಶ್ರೇಷ್ಠರೇ, ನನ್ನ ಮಗನು ಎಂದಿಗೂ ಅಲ್ಪಾಯುವಾಗಬಾರದು. ನಿಮ್ಮ ತಪಃಪ್ರಭಾವದಿಂದ ಅವನನ್ನು ದೀರ್ಘಾಯುವಾಗಿ ಮಾಡಿರಿ” ಎಂದು ದೀನನಾಗಿ ಪ್ರಾರ್ಥಿಸಿದರೂ ಇಂದ್ರನ ಮೇಲಿನ ಗೌರವದಿಂದಾಗಿ ಪರ್ವತ ಮಹರ್ಷಿಯು ಸುಮ್ಮನುಳಿದರು. ರಾಜಕುಮಾರನು ಪ್ರೇತರಾಜನ ವಶವಾದಾಗ ತನ್ನನ್ನು ಸ್ಮರಿಸುವಂತೆ ನಾರದರು ಸೂಚಿಸಿ ಸೃಂಜಯನನ್ನು ಸಂತೈಸಿದರು.
ಕಾಲ ಸರಿಯಿತು. ರಾಜರ್ಷಿ ಸೃಂಜಯನಿಗೆ ತೇಜಸ್ವಿಯಾದ ಮಗನೊಬ್ಬನು ಜನಿಸಿದನು. ಸುವರ್ಣವನ್ನು ಉಗುಳುತ್ತಿದ್ದುದ್ದರಿಂದ ಅವನಿಗೆ “ಸುವರ್ಣಷ್ಠೀವಿ” ಎಂಬ ಅಭಿಧಾನವಾಯಿತು. ಶುಕ್ಲಪಕ್ಷದ ಚಂದ್ರನಂತೆ ದಿನದಿಂದ ದಿನಕ್ಕೆ ಪ್ರವರ್ಧಮಾನಕ್ಕೆ ಬರುತ್ತಿದ್ದ ಮಗನನ್ನು ಕಂಡು ಸೃಂಜಯನು ಆನಂದದಿಂದಿದ್ದನು. ಪರ್ವತಮಹರ್ಷಿಯ ವರದಾನದಿಂದ ಹುಟ್ಟಿದ ಸೃಂಜಯನ ಮಗನು ಸುವರ್ಣವನ್ನೇ ಉಗುಳುವನೆಂದು ಲೋಕವಿಖ್ಯಾತವಾದನು. ಈ ವಿಚಾರ ಇಂದ್ರನಿಗೂ ತಿಳಿಯಿತು. ಸುವರ್ಣಷ್ಠೀವಿಯಿಂದ ಮುಂದೆ ತನ್ನ ಪರಾಜಯವಾಗುವುದು ನಿಶ್ಚಿತವೆಂದು ಯೋಚಿಸಿದ ಇಂದ್ರನು ಅವನನ್ನು ಕೊಲ್ಲಲು ತನ್ನ ವಜ್ರಾಯುಧವನ್ನು ನಿರ್ದೇಶಿಸಿದನು. ರಾಜರ್ಷಿ ಸೃಂಜಯನು ಪತ್ನಿ-ಪುತ್ರರೊಡನೆ ಅರಣ್ಯದಲ್ಲಿದ್ದು ವ್ರತಾನುಷ್ಠಾನಗಳಲ್ಲಿ ತೊಡಗಿಕೊಂಡಿದ್ದ ಸಂದರ್ಭ. ಐದು ವರ್ಷದ ಬಾಲಕ ಸುವರ್ಣಷ್ಠೀವಿಯು ಆಟವಾಡುತ್ತಿದ್ದಾಗ ವ್ಯಾಘ್ರರೂಪವನ್ನು ತಳೆದ ವಜ್ರಾಯುಧವು ಅವನನ್ನು ಕ್ಷಣಮಾತ್ರದಲ್ಲಿ ಕಚ್ಚಿ ಸಾಯಿಸಿ ಅಲ್ಲಿಂದ ಹೊರಟುಹೋಯಿತು. ಬಾಲಕನ ಜೊತೆಯಲ್ಲಿದ್ದ ಸೇವಕಿಯ ಕೂಗಾಟ ಕೇಳಿದ ಅಲ್ಲಿಗೆ ಬಂದ ರಾಜನು ರಕ್ತಸಿಕ್ತ ದೇಹದೊಂದಿಗೆ ಗತಪ್ರಾಣನಾಗಿ ಬಿದ್ದಿದ್ದ ಮಗನನ್ನು ಕಂಡು ಶೋಕಾವಿಷ್ಟನಾದನು. ಮೃತಶರೀರವನ್ನು ತೊಡೆಯಮೇಲೆ ಮಲಗಿಸಿಕೊಂಡು ವಿಲಪಿಸತೊಡಗಿದನು. ಹಿಂದೆ ಇಂತಹ ಸನ್ನಿವೇಶ ಒದಗಿದಾಗ ತಮ್ಮನ್ನು ಸ್ಮರಿಸುವಂತೆ ನಾರದರು ಹೇಳಿದ್ದನ್ನು ಸೃಂಜಯ ನೆನಪಿಸಿಕೊಂಡ. ನಾರದರು ಅವನಿಗೆ ಕಾಣಿಸಿಕೊಂಡರು. ಸೃಂಜಯ ಮತ್ತು ನಾರದರು ಇಂದ್ರನನ್ನು ಸ್ತುತಿಸಲಾಗಿ ಬಾಲಕನು ಪುನಃ ಸಜೀವನಾದನು. ವಿಧಿನಿಯಮವನ್ನು ಮೀರಲು ಯಾರಿಂದಲೂ ಸಾಧ್ಯವಿಲ್ಲ!
ಅನೇಕ ವರ್ಷಗಳ ಪ್ರಜಾಪರಿಪಾಲನೆಯ ನಂತರ ಸೃಂಜಯನು ಸ್ವರ್ಗಸ್ಥನಾದ. ಪರಮವಿಕ್ರಮನೂ ಸತ್ಯಸಂಧನೂ ಆದ ಸುವರ್ಣಷ್ಠೀವಿಯು ದೀರ್ಘಕಾಲ ಧರ್ಮದಿಂದ ರಾಜ್ಯಭಾರ ಮಾಡಿದನು. ಯಜ್ಞಯಾಗಾದಿಗಳನ್ನು ನಡೆಸಿ ದೇವತೆಗಳನ್ನೂ, ಶ್ರಾದ್ಧ-ತರ್ಪಣಾದಿಗಳಿಂದ ಪಿತೃಗಳನ್ನೂ ತೃಪ್ತಿಗೊಳಿಸಿ ವಂಶೋದ್ಧಾರಕರಾದ ಸಂತಾನವನ್ನು ಪಡೆದು ಕಾಲಾನಂತರದಲ್ಲಿ ಮರಣಿಸಿ ಪುಣ್ಯಲೋಕವನ್ನು ಸೇರಿದನು.
ಮುಪ್ಪು ಮತ್ತು ಮರಣಗಳೆಂಬ ಮೊಸಳೆಗಳಿಂದ ಕೂಡಿರುವ ಗಂಭೀರವಾದ ಕಾಲವೆಂಬ ಸಾಗರದಲ್ಲಿ ಈ ಜಗತ್ತೆಲ್ಲವೂ ಮುಳುಗಿಹೋಗುತ್ತಿದೆ. ಆದರೆ ಈ ಗಂಭೀರವಾದ ವಿಷಯವನ್ನು ತಿಳಿದುಕೊಳ್ಳದೇ ತಮ್ಮನ್ನೇ ಸರ್ವಜ್ಞರು ಸರ್ವಶಕ್ತರೆಂದು ತಿಳಿದು ಕೂಪದಲ್ಲಿ ಜೀವಿಸುತ್ತಿರುವರು.
🌷🙏❤️ ವಿಮಲ್ ನ್ಯೂಟ್ರಿಷನ್ ಸೆಂಟರ್ ❤️🙏🌷 #✍️ ಮೋಟಿವೇಷನಲ್ ಕೋಟ್ಸ್ #😍 ನನ್ನ ಸ್ಟೇಟಸ್ #✍️ ಮೋಟಿವೇಷನಲ್ ಕೋಟ್ಸ್ #🎥 Motivational ಸ್ಟೇಟಸ್
ಕಾಳಿಂದಿ - ಕೃಷ್ಣನ ನಾಲ್ಕನೇ ಪತ್ನಿ*****
ಕೃಷ್ಣನಿಗೆ ಬಹಳಷ್ಟು ಹೆಂಡತಿಯರಿದ್ದರು ಎಂದು ನೀವು ಬಹುಶಃ ಕೇಳಿರಬಹುದು. ಆದರೆ ಅವರ ಎಲ್ಲಾ ಪ್ರೇಮಕಥೆಗಳು ನಿಮಗೆ ತಿಳಿದಿದೆಯೇ? ಇಲ್ಲದಿದ್ದರೆ, ಕಾಳಿಂದಿಯವರ ಕೃಷ್ಣನ ಮೇಲಿನ ಶುದ್ಧ ಮತ್ತು ನಿಸ್ವಾರ್ಥ ಪ್ರೀತಿ ಅವರ ಪ್ರೇಮಕಥೆಯ ಹೃದಯಭಾಗದಲ್ಲಿದೆ ಎಂದು ನಾವು ನೋಡುತ್ತೇವೆ.
ಕಾಳಿಂದಿ ಕೃಷ್ಣನನ್ನು ಏಕೆ ಮದುವೆಯಾದಳು ಎಂಬುದನ್ನು ಚಿತ್ರಿಸುವ ಕಥೆ?
ಈ ಕಥೆ ಕೃಷ್ಣ ಮತ್ತು ಕಾಳಿಂದಿಯವರ ಬಗ್ಗೆ. ಒಂದು ದಿನ, ಕೃಷ್ಣ ಮತ್ತು ಅರ್ಜುನ ಬೇಟೆಯಾಡಲು ಹೋದರು. ದಿನ ಹತ್ತಿರವಾಗುತ್ತಿದ್ದಂತೆ ಅವರು ಯಮುನಾ ನದಿಯಲ್ಲಿ ಸ್ನಾನ ಮಾಡಲು ನಿರ್ಧರಿಸಿದರು. ಕೃಷ್ಣನು ನದಿಯ ಬಳಿಯಲ್ಲಿ ಒಬ್ಬ ಸುಂದರ ಮಹಿಳೆ ನಡೆದುಕೊಂಡು ಹೋಗುವುದನ್ನು ನೋಡಿದ್ದನು. ಅರ್ಜುನನು ಅವಳನ್ನು ಬೆನ್ನಟ್ಟಲು ಕೃಷ್ಣನು ಕಳುಹಿಸಿದನು. ಅರ್ಜುನನು ಅವಳ ಬಗ್ಗೆ ವಿಚಾರಿಸಿದಾಗ, ಕಾಳಿಂದಿ ಸೂರ್ಯನ ಮಗಳು ಮತ್ತು ಅವಳು ಕೃಷ್ಣನನ್ನು ತುಂಬಾ ಪ್ರೀತಿಸುತ್ತಿದ್ದಳು ಮತ್ತು ಅವನನ್ನು ಮದುವೆಯಾಗಲು ಬಯಸುತ್ತಿದ್ದಳು ಎಂದು ಅವನಿಗೆ ತಿಳಿಯಿತು. ಕೃಷ್ಣನು ತನ್ನ ಬಾಲ್ಯದ ವರ್ಷಗಳಲ್ಲಿ ಕಾಳಿಂದಿಯೊಂದಿಗೆ ಮಹತ್ವದ ಸಂಬಂಧವನ್ನು ಹೊಂದಿದ್ದನು. ಮುಂದಿನ ಅಧ್ಯಾಯಗಳಲ್ಲಿ ಸಂಪೂರ್ಣ ನಿರೂಪಣೆಯನ್ನು ಓದೋಣ.
ಶ್ರೀಕೃಷ್ಣನ ಪತ್ನಿ ಕಾಳಿಂದಿಯ ಕಥೆ
ಕಾಳಿಂದಿ ಯಾರು ಗೊತ್ತಾ? ಕಾಳಿಂದಿ ಶ್ರೀಕೃಷ್ಣನ ನಾಲ್ಕನೇ ಪತ್ನಿ. ಆದ್ದರಿಂದ ಅವಳು ಅಷ್ಟಭಾರ್ಯ ಪಟ್ಟಿಯಲ್ಲಿ ಇದ್ದಾಳೆ. ಹಳೆಯ ಕೃತಿಗಳಲ್ಲಿ ಕಾಳಿಂದಿಯನ್ನು ಯಮುನಾ ಅಥವಾ ಯಾಮಿ ಎಂದು ಉಲ್ಲೇಖಿಸಲಾಗಿದೆ, ಮತ್ತು ನಂತರ ನಂತರದ ಸಾಹಿತ್ಯ ಮತ್ತು ಧರ್ಮಗ್ರಂಥಗಳಲ್ಲಿ ಕಾಳಿಂದಿಯನ್ನು ಕಾಳಿಂದಿ ಎಂಬ ಹೆಸರಿನಿಂದ ವಿವರಿಸಲಾಗಿದೆ. ಅವಳ ಹಿಂದಿನ ಹೆಸರಾದ ಯಮುನಾಗೆ, ಅವಳು ಹಿಂದೂ ಸಂಸ್ಕೃತಿಯ ಪ್ರಸಿದ್ಧ ಮತ್ತು ಪವಿತ್ರ ನದಿ. ಅವಳನ್ನು ಪೂಜಿಸಲಾಗುತ್ತದೆ ಮತ್ತು ನದಿಯಲ್ಲಿ ಸ್ನಾನ ಮಾಡುವವರ ಪಾಪಗಳನ್ನು ತೊಳೆಯುತ್ತಾಳೆ ಎಂದು ಹೇಳಲಾಗುತ್ತದೆ. ಸೂರ್ಯ ಮತ್ತು ಸಂಜನರ ಮಗಳು ಯಮುನಾ. ಸೂರ್ಯ ಸೂರ್ಯ ದೇವತೆ, ಮತ್ತು ಸಂಜನಾ ಮೋಡ ದೇವತೆ. ಕೃಷ್ಣನ ಜೀವನದಲ್ಲಿ ಕಾಳಿಂದಿಯ ಮಹತ್ವವು ಅವನ ಹೆಂಡತಿಯಾಗುವುದನ್ನು ಮೀರಿ ನದಿಯಲ್ಲಿ ಈಜುವ ಅವನ ಆರಂಭಿಕ ದಿನಗಳಲ್ಲಿ ವಿಸ್ತರಿಸುತ್ತದೆ.
ಹುಟ್ಟಿನಿಂದಲೇ ಯಮುನೆಯು ಶ್ರೀಕೃಷ್ಣನ ಜೀವನದ ಪ್ರಮುಖ ಭಾಗವಾಗಿದ್ದಾಳೆ. ವಾಸುದೇವನು ಶ್ರೀಕೃಷ್ಣನನ್ನು ತನ್ನ ತಲೆಯ ಮೇಲೆ ಹೊತ್ತುಕೊಂಡು ಯಮುನಾ ನದಿಯನ್ನು ದಾಟಿ ವೃಂದಾವನಕ್ಕೆ ಹೋಗಿ ನಂದ ಮತ್ತು ಯಶೋದೆಗೆ ಸುರಕ್ಷಿತವಾಗಿ ತಲುಪಿಸಿದನು. ಯಮುನೆಯು ನದಿಯನ್ನು ದಾಟಿ ವೃಂದಾವನಕ್ಕೆ ಬರಲು ದಾರಿಯನ್ನು ತೆರವುಗೊಳಿಸಬೇಕೆಂದು ವಾಸುದೇವನು ವಿನಂತಿಸಿದನು. ಅವಳ ಕ್ರಿಯೆಗಳಿಂದಾಗಿ ವಾಸುದೇವನು ನದಿಯನ್ನು ಸುರಕ್ಷಿತವಾಗಿ ಮತ್ತು ಸುರಕ್ಷಿತವಾಗಿ ದಾಟಲು ಸಾಧ್ಯವಾಯಿತು. ಇದು ಶ್ರೀಕೃಷ್ಣನೊಂದಿಗಿನ ಅವಳ ಮೊದಲ ಭೇಟಿ ಮತ್ತು ಅವನ ಪರಿಚಯವಾಗಿತ್ತು. ಆ ರಾತ್ರಿ ಅವಳು ಕೋಪಗೊಂಡಳು ಆದರೆ ಈ ಮಗುವಿನ ಪಾದಗಳನ್ನು ಮುಟ್ಟಿದ ನಂತರ ಇದ್ದಕ್ಕಿದ್ದಂತೆ ಶಾಂತಳಾದಳು.
ಬೆಳೆಯುತ್ತಾ, ಕೃಷ್ಣನು ಯಮುನಾಳಿಗೆ ತುಂಬಾ ಹತ್ತಿರವಾಗಿದ್ದನು, ಏಕೆಂದರೆ ಅವನು ತನ್ನ ಹೆಚ್ಚಿನ ಸಮಯವನ್ನು ನದಿಯ ದಡದಲ್ಲಿ ತನ್ನ ಸ್ನೇಹಿತರೊಂದಿಗೆ ಕಳೆದನು. ಅವನು ಕೊಳಲು ನುಡಿಸಿದನು; ಅವನು ಗೋಪಿಯರು ಮತ್ತು ರಾಧೆಯರೊಂದಿಗೆ ನೃತ್ಯ ಮಾಡಿದನು. ಅವನು ತನ್ನ ಸ್ನೇಹಿತರೊಂದಿಗೆ ಕ್ಯಾಚ್ ಅಂಡ್ ಥ್ರೋ ಆಟವನ್ನೂ ಆಡಿದನು. ಕ್ಯಾಚ್ ಅಂಡ್ ಥ್ರೋ ಆಟವು ನಮ್ಮನ್ನು ಅವನ ಜೀವನದ ಒಂದು ನಿರ್ದಿಷ್ಟ ಘಟನೆಗೆ ಕರೆದೊಯ್ಯುತ್ತದೆ. ನದಿಯಲ್ಲಿ ವಾಸಿಸುತ್ತಿದ್ದ ಹಾವುಗಳ ರಾಜ ಕಲಿಯಾದಮನ್ ಅದನ್ನು ಕಲುಷಿತಗೊಳಿಸುತ್ತಿದ್ದನು ಮತ್ತು ಹೆಚ್ಚಿನ ವೃಂದಾವನ ನಿವಾಸಿಗಳಿಗೆ ಮಾರಕವಾಗಿ ಪರಿಣಮಿಸಿದನು. ಕೃಷ್ಣನು ಹಾವನ್ನು ಸೋಲಿಸಲು ಮತ್ತು ನದಿ ಮತ್ತು ಹಳ್ಳಿಯಿಂದ ದೂರ ಕಳುಹಿಸಲು ಒಂದು ಮಾರ್ಗವನ್ನು ಚಾಣಾಕ್ಷತನದಿಂದ ಕಂಡುಕೊಂಡನು. ಕಾಳಿಂದಿ ಅವನನ್ನು ಪ್ರೀತಿಸುತ್ತಲೇ ಇದ್ದನು ಮತ್ತು ಕೃಷ್ಣ ಮತ್ತು ರಾಧೆಯ ಆತ್ಮಸ್ಪರ್ಶಿ ಪ್ರೀತಿಯನ್ನು ನೋಡಿದಾಗ ಅವನತ್ತ ಹೆಚ್ಚು ಆಕರ್ಷಿತಳಾದಳು.
ಭಾಗವತ ಪುರಾಣದ ಪ್ರಕಾರ, ವಯಸ್ಕ ಕೃಷ್ಣನೊಬ್ಬ ಒಮ್ಮೆ ತನ್ನ ಸಂಬಂಧಿಕರಾದ ಐದು ಪಾಂಡವ ಸಹೋದರರು, ಅವರ ಸಾಮಾನ್ಯ ಪತ್ನಿ ದ್ರೌಪದಿ ಮತ್ತು ಅವರ ತಾಯಿ ಕುಂತಿಯನ್ನು ಯಮುನಾ ನದಿಯ ದಡದಲ್ಲಿರುವ ಅವರ ರಾಜಧಾನಿ ಇಂದ್ರಪ್ರಸ್ಥಕ್ಕೆ ಭೇಟಿ ನೀಡಿದನು. ಹಿರಿಯ ಪಾಂಡವ ಯುಧಿಷ್ಠಿರನು ಕೃಷ್ಣನು ಕೆಲವು ದಿನಗಳ ಕಾಲ ತಮ್ಮೊಂದಿಗೆ ಇರಬೇಕೆಂದು ವಿನಂತಿಸುತ್ತಾನೆ. ಮಧ್ಯ ಪಾಂಡವನಾದ ಕೃಷ್ಣ ಮತ್ತು ಅರ್ಜುನ ಒಂದು ದಿನ ಕಾಡಿನಲ್ಲಿ ಬೇಟೆಯಾಡಲು ಹೋಗುತ್ತಾರೆ. ಅರ್ಜುನನು ಬೇಟೆಯಿಂದ ದಣಿದಿದ್ದನು. ಅವನು ಮತ್ತು ಕೃಷ್ಣ ಯಮುನಾ ನದಿಯಲ್ಲಿ ಸ್ನಾನ ಮಾಡಿ ಅದರ ಶುದ್ಧ ನೀರನ್ನು ಕುಡಿದರು. ಒಬ್ಬ ಸುಂದರ ಯುವತಿಯು ನದಿಯ ದಡದಲ್ಲಿ ಅಲೆದಾಡುತ್ತಿದ್ದಳು. ಕೃಷ್ಣನು ಅವಳನ್ನು ನೋಡಿ ತಾನು ಯಾರೆಂದು ತಿಳಿದುಕೊಳ್ಳಲು ಅರ್ಜುನನನ್ನು ಭೇಟಿಯಾಗಲು ಆಹ್ವಾನಿಸಿದನು.
ಅರ್ಜುನ ಪ್ರಶ್ನಿಸಿದಾಗ, ಆ ಹುಡುಗಿ ತಾನು ಸೂರ್ಯನ ಮಗಳು ಕಾಳಿಂದಿ ಎಂದೂ, ತನ್ನ ತಂದೆ ನದಿಯಲ್ಲಿ ನಿರ್ಮಿಸಿದ ಒಂದು ಭವನದಲ್ಲಿ ವಾಸಿಸುತ್ತಿರುವುದಾಗಿಯೂ, ಅಲ್ಲಿ ಕೃಷ್ಣನನ್ನು ತನ್ನ ಪತಿಯನ್ನಾಗಿ ಮಾಡಿಕೊಳ್ಳಲು ವಿಧಿವಿಧಾನಗಳನ್ನು ನಡೆಸುತ್ತಿದ್ದಳು ಮತ್ತು ಅವಳು ಅವನನ್ನು ಕಂಡುಕೊಳ್ಳುವವರೆಗೂ ಅಲ್ಲಿಯೇ ಇರುವುದಾಗಿಯೂ ಹೇಳಿದಳು. ಅರ್ಜುನನು ಕಾಳಿಂದಿಯ ಸಂದೇಶವನ್ನು ವಿಷ್ಣುವಿನ ಅವತಾರವಾದ ಕೃಷ್ಣನಿಗೆ ತಲುಪಿಸುತ್ತಾನೆ, ಅವನು ಅವಳನ್ನು ಮದುವೆಯಾಗಲು ಒಪ್ಪುತ್ತಾನೆ, ಅವಳ ಭಕ್ತಿಗೆ ಸ್ಪರ್ಶಿಸಲ್ಪಟ್ಟನು. ನಂತರ ಅವರು ಕಾಳಿಂದಿಯೊಂದಿಗೆ ಇಂದ್ರಪ್ರಸ್ಥಕ್ಕೆ ರಥದಲ್ಲಿ ಸವಾರಿ ಮಾಡಿ ಯುಧಿಷ್ಠಿರನನ್ನು ನೋಡಿದರು. ಕೃಷ್ಣ ಮತ್ತು ಕಾಳಿಂದಿ ಕೆಲವು ದಿನಗಳ ನಂತರ ತಮ್ಮ ಪರಿವಾರದೊಂದಿಗೆ ತನ್ನ ರಾಜಧಾನಿ ದ್ವಾರಕೆಗೆ ಹಿಂತಿರುಗಿ ಮದುವೆಯಾದರು.
ಕಥೆಯ ನೀತಿ
ಯಾರನ್ನಾದರೂ ನಿಜವಾಗಿಯೂ ಕಾಳಜಿ ವಹಿಸುವುದು ಮತ್ತು ಅವರ ಹಿತಾಸಕ್ತಿಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳುವುದು ಯಾವಾಗಲೂ ಫಲ ನೀಡುತ್ತದೆ. ನೀವು ಯಾರನ್ನಾದರೂ ನಿಜವಾಗಿಯೂ ಪ್ರೀತಿಸಿದಾಗ, ವಿಧಿ ಯಾವಾಗಲೂ ನಿಮ್ಮ ಆಸೆಗಳನ್ನು ಪೂರೈಸಲು ನಿಮ್ಮ ಪರವಾಗಿ ಕೆಲಸ ಮಾಡುತ್ತದೆ ಎಂದು ಓದುಗರು ಅರ್ಥಮಾಡಿಕೊಳ್ಳುತ್ತಾರೆ. ಆದ್ದರಿಂದ, ನಿಮ್ಮ ಭಾವನೆಗಳು ಪ್ರಾಮಾಣಿಕವಾಗಿದ್ದರೆ, ಪ್ರೀತಿಯನ್ನು ಎಂದಿಗೂ ಬಿಟ್ಟುಕೊಡಬೇಡಿ; ಎಲ್ಲವೂ ಹೊರಬರುತ್ತವೆ.
ಪೋಷಕರಿಗೆ ಟಿಪ್ಪಣಿ
ಪೋಷಕರು ತಮ್ಮ ಮಕ್ಕಳಿಗೆ ಕೃಷ್ಣ ಮತ್ತು ಕಾಳಿಂದಿ ದೇವರುಗಳಂತಹ ಜೀವನ ಮತ್ತು ಅವರು ಪರಸ್ಪರ ಆರಂಭಿಕ ಪ್ರಭಾವ ಬೀರಿದ ಬಗ್ಗೆ ವಿವರಿಸುವಾಗ ಈ ಕಥೆಯನ್ನು ಓದಬೇಕು. ಪುರಾಣಗಳನ್ನು ಅಧ್ಯಯನ ಮಾಡುವ ಚಿಕ್ಕ ಮಕ್ಕಳು ತಮ್ಮ ಸಂಸ್ಕೃತಿಯ ಬಗ್ಗೆ ಬಹಳಷ್ಟು ಕಲಿಯಬಹುದು ಮತ್ತು ವಿವಿಧ ನೈತಿಕತೆಗಳನ್ನು ಪಡೆಯಬಹುದು.
ತೀರ್ಮಾನ
ಈ ಕಥೆಯು ಕೃಷ್ಣನ ಪತ್ನಿ ಕಾಳಿಂದಿಯ ಬಗ್ಗೆ. ಅವಳು ಅಷ್ಟಭಾರ್ಯ ಪಟ್ಟಿಯಲ್ಲಿ ಕೃಷ್ಣನ ನಾಲ್ಕನೇ ಪತ್ನಿ. ಅವಳನ್ನು ಹಳೆಯ ಕೃತಿಗಳಲ್ಲಿ ಯಮುನಾ ಅಥವಾ ಯಾಮಿ ಎಂದು ಮತ್ತು ನಂತರದ ಸಾಹಿತ್ಯದಲ್ಲಿ ಕಾಳಿಂದಿ ಎಂದು ಉಲ್ಲೇಖಿಸಲಾಗಿದೆ. ಅವಳ ಹಿಂದಿನ ಹೆಸರಿನ ಬಗ್ಗೆ, ನಾವು ಅವಳನ್ನು ಹಿಂದೂ ಸಂಸ್ಕೃತಿಯ ಪ್ರಸಿದ್ಧ ಮತ್ತು ಪವಿತ್ರ ನದಿ ಎಂದು ಹೇಳಬಹುದು. ಕೃಷ್ಣ ಯಮುನಾ ನದಿಯ ದಡದಲ್ಲಿ ತನ್ನ ಸ್ನೇಹಿತರೊಂದಿಗೆ ಕ್ಯಾಚ್ ಅಂಡ್ ಥ್ರೋ ಆಡುತ್ತಿದ್ದನು. ನದಿಯಲ್ಲಿ ಹಾವುಗಳ ರಾಜ ಕಲಿಯದಮನ್ ಅದನ್ನು ಕಲುಷಿತಗೊಳಿಸುತ್ತಿದ್ದನು. ಕೃಷ್ಣನು ಹಾವನ್ನು ಸೋಲಿಸಲು ಮತ್ತು ನದಿ ಮತ್ತು ಹಳ್ಳಿಯಿಂದ ದೂರ ಕಳುಹಿಸಲು ಒಂದು ಮಾರ್ಗವನ್ನು ಚಾಣಾಕ್ಷತನದಿಂದ ಕಂಡುಕೊಂಡನು.
❤️🌷🙏 ವಿಮಲ್ ನ್ಯೂಟ್ರಿಷನ್ ಸೆಂಟರ್ 🙏🌷❤️ #🎥 Motivational ಸ್ಟೇಟಸ್ #👦🏻 Bad Boyz ಸ್ಟೇಟಸ್ #😍 ನನ್ನ ಸ್ಟೇಟಸ್ #✍️ ಮೋಟಿವೇಷನಲ್ ಕೋಟ್ಸ್ #✍️ ಮೋಟಿವೇಷನಲ್ ಕೋಟ್ಸ್
12ನೇ ಶತಮಾನದ ಶಿವಶರಣರ ಸಾಲಿನಲ್ಲಿ "ಜೋದರ ಮಾಯಣ್ಣ" ನವರು ವಿಶಿಷ್ಟವಾಗಿ ನಿಲ್ಲುತ್ತಾರೆ. ಇವರು ಕೇವಲ ಒಬ್ಬ ವಚನಕಾರರಾಗಿರದೆ, ಅಂದಿನ ಕಲ್ಯಾಣದ ರಾಜಕೀಯ ಮತ್ತು ಸೈನಿಕ ವ್ಯವಸ್ಥೆಯಲ್ಲಿ ಪ್ರಮುಖ ಜವಾಬ್ದಾರಿಯನ್ನು ಹೊಂದಿದ್ದವರು. ಕಾಯಕವೇ ಕೈಲಾಸ ಎಂದು ನಂಬಿದ್ದ ಇವರು, ತಮ್ಮ ವೃತ್ತಿ ಮತ್ತು ಪ್ರವೃತ್ತಿಗಳೆರಡನ್ನೂ ಸಮನಾಗಿ ನಿಭಾಯಿಸಿದವರು.
ಜೋದರ ಮಾಯಣ್ಣನವರು ಅರಸ ಬಿಜ್ಜಳನ ಆಸ್ಥಾನದಲ್ಲಿ ಉನ್ನತ ಅಧಿಕಾರಿಯಾಗಿದ್ದರು. ಇವರು ರಾಜನ 'ಗಜಸಾಲೆಯ ಉಸ್ತುವಾರಿ' ಅಥವಾ ಆನೆ ಪಡೆಯ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದರು. 'ಜೋದರ' ಎಂದರೆ ಯೋಧ ಅಥವಾ ರಕ್ಷಕ ಎಂದರ್ಥ. ಯುದ್ಧಕಲೆಯಲ್ಲೂ ಪ್ರವೀಣರಾಗಿದ್ದ ಇವರು, ರಾಜನಿಗೆ ಅತ್ಯಂತ ನಂಬಿಕಸ್ತ ಸೇನಾ ನಾಯಕರಾಗಿದ್ದರು.
ಬಸವಣ್ಣನವರ ಸಿದ್ಧಾಂತಗಳಿಂದ ಪ್ರಭಾವಿತರಾಗಿದ್ದ ಇವರು ಶರಣ ಸಂಕುಲಕ್ಕೆ ಸೇರಿದವರು. ಇವರು ರಚಿಸಿರುವ ವಚನಗಳಲ್ಲಿ ಶರಣಾಗತಿ ಭಾವ ಮತ್ತು ಆಧ್ಯಾತ್ಮಿಕ ಚಿಂತನೆಗಳು ಎದ್ದು ಕಾಣುತ್ತವೆ. ಇವರ ವಚನಗಳ ಅಂಕಿತ ನಾಮ "ಶಂಭು ಸೋಮನಾಥಲಿಂಗ".
"ನಡೆಯಿಂದ ನುಡಿ ಗಡಣಿಸಿತ್ತು ಮನವೆ
ಬೆಡಗು ಬಿನ್ನಾಣವನಾಡದಿರು ಮನವೆ.
ಎನ್ನೊಡೆಯ ಶಂಭು ಸೋಮನಾಥಲಿಂಗ
ಭಾಷೆ ಪರಿಪಾಲಕನಾಗಿ
ಹಿಡಿದುದ ಬಿಡೆನೆಂಬ ನುಡಿಗೊರೆಯಾದುದನರಿಯಾ."
ಪ್ರಸ್ತುತ ಲಭ್ಯವಿರುವ ಇವರ ವಚನಗಳ ಸಂಖ್ಯೆ ಕಡಿಮೆಯಾದರೂ, ಅವುಗಳ ಸಾರ ಅತ್ಯಂತ ಗಹನವಾಗಿದೆ.
ಜೋದರ ಮಾಯಣ್ಣನವರಿಗೆ ಸಂಬಂಧಿಸಿದಂತೆ ಜನಪದದಲ್ಲಿ 'ಆನೆ ದಾನ' ಮಾಡಿದ ಪ್ರಸಂಗ ಅತ್ಯಂತ ಪ್ರಸಿದ್ಧವಾದುದು. ಜಂಗಮ ದಾಸೋಹಕ್ಕೆ ಹಣದ ಕೊರತೆಯಾದಾಗ, ಇವರು ರಾಜನ ಪಟ್ಟದ ಆನೆಯನ್ನೇ ದಾನವಾಗಿ ನೀಡಿದ್ದರು ಎನ್ನಲಾಗುತ್ತದೆ. ಇದರಿಂದ ಕ್ರುದ್ಧನಾದ ರಾಜ ಬಿಜ್ಜಳ ಆನೆಯ ಬಗ್ಗೆ ವಿಚಾರಿಸಿದಾಗ, ಮಾಯಣ್ಣನು ಅಚಲವಾದ ದೈವಭಕ್ತಿಯಿಂದ "ಆನೆ ಗಜಶಾಲೆಯಲ್ಲೇ ಇದೆ" ಎಂದು ಉತ್ತರಿಸುತ್ತಾರೆ. ಶಿವನ ಕೃಪೆಯಿಂದ ಅಲ್ಲಿ ಆನೆ ಮತ್ತೆ ಪ್ರತ್ಯಕ್ಷವಾಯಿತು ಎಂಬ ಐತಿಹ್ಯ ಇವರ ಭಕ್ತಿಯ ಪರಾಕಾಷ್ಠೆಯನ್ನು ಸಾರುತ್ತದೆ.
ಇವರ ವಚನಗಳಲ್ಲಿ ಪ್ರಕೃತಿ, ಮಾನವನ ಇಂದ್ರಿಯಗಳು ಮತ್ತು ದೈವದ ನಡುವಿನ ಸಂಬಂಧವನ್ನು ವಿವರಿಸಲಾಗಿದೆ. ಪಂಚೇಂದ್ರಿಯಗಳನ್ನು ಹತೋಟಿಯಲ್ಲಿಟ್ಟುಕೊಂಡು ಪರಶಿವನನ್ನು ಒಲಿಸಿಕೊಳ್ಳುವ ಮಾರ್ಗವನ್ನು ಇವರು ಬೋಧಿಸಿದರು. ಸತ್ವ, ರಜ ಮತ್ತು ತಮ ಎಂಬ ತ್ರಿಗುಣಗಳನ್ನು ಮೀರಿದ ಭಕ್ತಿಯೇ ಶ್ರೇಷ್ಠವೆಂಬುದು ಇವರ ಅಭಿಮತವಾಗಿತ್ತು.
ಜೋದರ ಮಾಯಣ್ಣನವರು ಅಧಿಕಾರದಲ್ಲಿದ್ದೂ ಅಹಂಕಾರವನ್ನು ಹೊಂದಿರಲಿಲ್ಲ. ಅವರು ತಮ್ಮ ವೃತ್ತಿಯನ್ನು ನಿಷ್ಠೆಯಿಂದ ಮಾಡುತ್ತಾ, ಭಕ್ತಿಯ ಮಾರ್ಗದಲ್ಲಿ ಸಾಗಿದವರು. ಕರ್ತವ್ಯ ಮತ್ತು ಆಧ್ಯಾತ್ಮ ಎರಡನ್ನೂ ಸಮತೋಲನದಿಂದ ಕೊಂಡೊಯ್ದ ಮಾಯಣ್ಣನವರ ಜೀವನ ಇಂದಿಗೂ ನಮಗೆ ಸ್ಫೂರ್ತಿದಾಯಕವಾಗಿದೆ.
❤️🌷🙏 ವಿಮಲ್ ನ್ಯೂಟ್ರಿಷನ್ ಸೆಂಟರ್ 🙏🌷❤️ #✍️ ಮೋಟಿವೇಷನಲ್ ಕೋಟ್ಸ್ #😍 ನನ್ನ ಸ್ಟೇಟಸ್ #👦🏻 Bad Boyz ಸ್ಟೇಟಸ್ #🎥 Motivational ಸ್ಟೇಟಸ್ #✍️ ಮೋಟಿವೇಷನಲ್ ಕೋಟ್ಸ್













