ಕರ್ಣನೇ ದಾನ ವೀರ ಶೂರ ಏಕೆ?
ನಮಗೆಲ್ಲಾ ತಿಳಿದಿರುವಂತೆ ಮಹಾಭಾರತದಲ್ಲಿ ಪಾಂಡವರು ಮತ್ತು ಕೌರವರ ನಂತರ ಬಹಳ ಪ್ರಮುಖ ಪಾತ್ರ ವಹಿಸುವುದೇ ಕರ್ಣ ಎಂದರೂ ತಪ್ಪಾಗದು. ಕುಂತೀ ಪುತ್ರನಾದರೂ, ವಿಧಿಯಾಟದಿಂದ ಸೂತಪುತ್ರನೆಂಬ ಹಣೆಪಟ್ಟಿಯನ್ನು ಹೊತ್ತು, ವಿದ್ಯಾ ಬುದ್ಧಿ ಇದ್ದರೂ ಸಾಕಷ್ಟು ಅವಮನ ಮತ್ತು ಅಪಮಾನಗಳನ್ನು ಸಹಿಸಿಕೊಂಡು ಕರೆಗೆ ಧುರ್ಯೋಧನನಂತಹ ಗೆಳೆಯನ ಸಹಾಯದಿಂದ ಅಂಗ ರಾಜ್ಯದ ರಾಜನಾದರೂ, ದಾನ ಎಂಬ ಮಾತು ಬಂದಾಕ್ಷಣ ಇಂದಿಗೂ ಸಹಾ ಎಲ್ಲರೂ ಕರ್ಣನನ್ನೇ ದಾನ ವೀರ ಶೂರ ಎಂದು ಹೋಗಳಲು ಕಾರಣ ಎನು? ಎಂಬ ಜಿಜ್ಞಾಸೆ ಬಹುತೇಕರಿಗೆ ಕಾಡುತ್ತಿರಬಹುದು. ಇಂತಹದ್ದೇ ಪ್ರಶ್ನೆ ಪದೇ ಪದೇ ಅರ್ಜನನಿಗೆ ಕಾಡುತ್ತಿದ್ದು ಅದಕ್ಕೆ ಶ್ರೀ ಕೃಷ್ಣ ಪರಿಹಾರ ನೀಡಿದ್ದ ಕಥೆಯನ್ನು ಈ ಹಿಂದೆ ಓದಿದ್ದೀರಿ (ಈ ಲಿಂಕ್ ಒತ್ತಿದಲ್ಲಿ ಆ ಕಥೆಯನ್ನು ಓದಬಹುದು) ಈಗ ಅಂತಹದ್ದೇ ಮತ್ತೊಂದು ದೃಷ್ಟಾಂತವನ್ನು ನೋಡೋಣ ಬನ್ನಿ
ಅದೊಮ್ಮೆ ಅರ್ಜುನನು ಶ್ರೀಕೃಷ್ಣನ ಬಳಿ ಬಂದು ಕರ್ಣನನ್ನು ಜನರು ಯುಧಿಷ್ಟರಿಗಿಂತ ಏಕೆ ಹೆಚ್ಚು ಉದಾರ ಎಂದು ಪರಿಗಣಿಸುತ್ತಾರೆ? ನನ್ನ ಅಣ್ಣ ಯಾರು ಕೇಳಿದರೂ, ಏನನ್ನು ಕೇಳಿದರೂ ನಿರಾಕರಿಸಿಲ್ಲವಾದರೂ, ಕರ್ಣನನ್ನೇ ಯುಧಿಷ್ಟಿರನಿಗಿಂತ ಏಕೆ? ಮತ್ತು ಹೇಗೆ ಶ್ರೇಷ್ಠ ಎಂದು ಪರಿಗಣಿಸುತ್ತಾರೆ? ಎಂಬ ಪ್ರಶ್ನೆಯನ್ನು ಕೇಳುತ್ತಾರೆ.
ಯಥಾ ಪ್ರಕಾರ ಭಗವಾನ್ ಶ್ರೀ ಕೃಷ್ಣ ಮುಗುಳ್ನಗುತ್ತಾ ಈ ಹಿಂದೆ ದಾನದ ವಿಷಯದಲ್ಲಿ ನಿನಗೂ ಮತ್ತು ಕರ್ಣನ ನಡುವಿನ ವೆತ್ಯಾಸ ತಿಳಿಸಿದ್ದೆ. ಈಗ ನಿಮ್ಮ ಅಣ್ಣನ ಸರದಿ. ಅದನ್ನು ಹೇಳಿವುದಿದಕ್ಕಿಂತಲೂ ನೋಡುವುದರಿಂದ ಹೆಚ್ಚು ಮನನವಾಗುತ್ತದೆ ಎಂದು ಶ್ರೀಕೃಷ್ಣ ಮತ್ತು ಅರ್ಜುನರು ಋಷಿಗಳ ಶಿಷ್ಯಂದಿರಂತೆ ಮಾರು ವೇಷ ಧರಿಸಿ, ಮೊದಲು ಯುಧಿಷ್ಟರ ಆಸ್ಥಾನಕ್ಕೆ ಹೋಗಿ, ಅಯ್ಯಾ ಧರ್ಮರಾಯ, ನಮ್ಮ ಗುರುಗಳು ಲೋಕ ಕಲ್ಯಾಣಕ್ಕಾಗಿ ಯಾಗವೊಂದನ್ನು ಮಾಡುತ್ತಿದ್ದು, ಅದರ ಪೂರ್ಣಾಹುತಿಗಾಗಿ ಶ್ರೀಗಂಧದ ಕೊರಡುಗಳು ಅವಶ್ಯಕತೆ ಇದೆ. ಹಾಗಾಗಿ ದಯವಿಟ್ಟು ಶ್ರೀಗಂಧದ ಕೊರಡುಗಳನ್ನು ಕೊಡಲು ಸಾಧ್ಯವೇ? ಎಂದು ಕೇಳುತ್ತಾರೆ. ಋಷಿಗಳ ಶಿಷ್ಯಂದಿರ ಮಾತುಗಳನ್ನು ಬಹಳ ತಾಳ್ಮೆಯಿಂದ ಆಲಿಸಿದ ಧರ್ಮರಾಯ, ಕೂಡಲೇ, ತನ್ನ ಸೈನಿಕರನ್ನು ಕರೆದು ರಾಜ್ಯದ ಎಲ್ಲಾ ಭಾಗಗಳಿಂದಲೂ ಶ್ರೀಗಂಧದ ತುಂಡುಗಳನ್ನು ತರಲು ಆಜ್ಞಾಪಿಸುತ್ತಾನೆ. ದುರಾದೃಷ್ಟವಷಾತ್ ಅದು ಮುಂಗಾರು ಮಳೆಯ ಸಮಯವಾಗಿದ್ದು, ಕಾಡಿನಲ್ಲಿದ್ದ ಮರಗಳೆಲ್ಲವೂ ಮಳೆಯಿಂದ ತೋಯ್ದಿದ್ದರೂ, ರಾಜಾಜ್ಞೆಯಂತೆ, ಅದೇ ಹಸೀ ಮರದ ತುಂಡುಗಳನ್ನೇ ಹೊತ್ತು ತರುತ್ತಾರೆ. ಹಸೀ ಮರಗಳನ್ನು ಹೋಮಕ್ಕೆ ಹಾಕಲು ಸಾಧ್ಯವಿಲ್ಲ ಎಂದು ಹೇಳಿ ಆ ಇಬ್ಬರೂ ಶಿಷ್ಯಂದಿರು ಅಲ್ಲಿಂದ ನೇರವಾಗಿ ಅಂಗ ರಾಜ ಕರ್ಣನ ಆಸ್ಥಾನಕ್ಕೆ ಹೋಗುತ್ತಾರೆ.
ಅಲ್ಲಿಯೂ ಸಹಾ ಯಥಾ ಪ್ರಕಾರ ಕರ್ಣನಿಗೆ ವಂದಿಸಿ, ನಮ್ಮ ಗುರುಗಳು ಲೋಕ ಕಲ್ಯಾಣಕ್ಕಾಗಿ ಯಾಗವೊಂದನ್ನು ಮಾಡುತ್ತಿದ್ದು, ಅದರ ಪೂರ್ಣಾಹುತಿಗಾಗಿ ಶ್ರೀಗಂಧದ ಕೊರಡುಗಳು ಅವಶ್ಯಕತೆ ಇದೆ. ಹಾಗಾಗಿ ದಯವಿಟ್ಟು ಶ್ರೀಗಂಧದ ಕೊರಡುಗಳನ್ನು ನಿಮ್ಮಿಂದ ಕೊಡಲು ಸಾಧ್ಯವೇ? ಎಂದು ಕೇಳುತ್ತಾರೆ. ಕರ್ಣನೂ ಸಹಾ ಶಿಷ್ಯಂದಿರ ಮಾತುಗಳನ್ನು ಬಹಳ ತಾಳ್ಮೆಯಿಂದ ಆಲಿಸಿದ ನಂತರ ಕೆಲ ಕಾಲ ಯೋಚನಾಮಜ್ಞನಾಗಿ, ಆಚಾರ್ಯರೇ, ಕೆಲವು ದಿನಗಳಿಂದ ಬಿಟ್ಟೂ ಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಕಾಡಿನಲ್ಲಿ ಇರುವ ಶ್ರೀಗಂಧದ ಮರಗಳೆಲ್ಲವೂ ಒದ್ದೆ ಮುದ್ದೆಯಾಗಿರುವ ಕಾರಣ, ಹೋಮಕ್ಕೆ ಅಗತ್ಯವಿರುವ ಒಣಗಿದ ಶ್ರೀಗಂಧದ ಕೊರಡುಗಳು ಸಿಗುವುದು ಬಹಳ ಕಷ್ಟ. ಆದರೂ ಅದಕ್ಕೊಂದು ಪರಿಹಾರವಿದೆ. ದಯವಿಟ್ಟು ಸ್ವಲ್ಪ ಹೊತ್ತು ಇಲ್ಲೇ ಕಾಯುತ್ತಿರೀ ಎಂದು ವಿನಮ್ರನಾಗಿ ಅವರನ್ನು ಸತ್ಕರಿಸಲು ತನ್ನ ಭಟರಿಗೆ ಹೇಳಿ ಹೊರಗೆ ಹೋಗುತ್ತಾನೆ.
ಹೀಗೆ ಶಿಷ್ಯಂದಿರನ್ನು ಕೂರಲು ಹೇಳಿ ಹೋದ ಕರ್ಣ, ನೇರವಾಗಿ ತನ್ನ ಅರಮನೆಯ ದೇವರ ಕೋಣೆಗೆ ಹೋಗಿ ಅಲ್ಲಿ ಶ್ರೀಗಂಧದ ಮರದಿಂದ ಮಾಡಿದ ಬಾಗಿಲು ಮತ್ತು ಕಿಟಕಿಗಳನ್ನು ಕತ್ತರಿಸಿ ಅವುಗಳನ್ನು ತುಂಡುಗಳಾಗಿ ಮಾಡಿ ಅವುಗಳನ್ನು ತಂದು ಶಿಷ್ಯಂದಿರಿಗೆ ನೀಡೀ, ನಿಮ್ಮ ಯಜ್ಞಗಳು ಸುಸೂತ್ರವಾಗಿ ನಡೆಯಲು ಇನ್ನೂ ಯಾವುದೇ ರೀತಿಯ ಸಹಾಯ ಬೇಕಾಗಿದ್ದಲ್ಲಿ ನಿಸ್ಸಂಕೋಚವಾಗಿ ಕೇಳಿ. ನನ್ನಿಂದ ಅದು ಸಾಧ್ಯವಾದಲ್ಲಿ ಖಂಡಿತವಾಗಿಯೂ ಈಡೇರಿಸಲು ಪ್ರಯತ್ನಿಸುತ್ತೇನೆ ಎಂದು ವಿನಮ್ರದಿಂದ ಕೈ ಮುಗಿದು ಹೇಳುತ್ತಾನೆ. ಕರ್ಣನು ನೀಡಿದ ಶ್ರೀಗಂಧದ ತುಂಡುಗಳನ್ನು ಸ್ವೀಕರಿಸಿ ಅತನಿಗೆ ಮನಃಪೂರ್ವಕವಾಗಿ ಆಶೀರ್ವಾದ ಮಾಡಿ ಶಿಷ್ಯಂದಿರಿಬ್ಬರೂ ಅಲ್ಲಿಂದ ಹೊರಡುತ್ತಾರೆ.
ಹೀಗೆ ಕರ್ಣನ ಆಸ್ಥಾನದಿಂದ ಹಿಂದಿರುಗುವಾಗ ಶ್ರೀ ಕೃಷ್ಣನು, ನೋಡಿದೆಯಾ ಅರ್ಜುನ, ಇದೇ ನಿಮ್ಮ ಅಣ್ಣ ಧರ್ಮರಾಯ ಮತ್ತು ಕರ್ಣನ ನಡುವಿನ ವೆತ್ಯಾಸವನ್ನು. ನಾವು ಯಜ್ಞವನ್ನು ಮಾಡುವ ಸಲುವಾಗಿ ಇಬ್ಬರ ಬಳಿಯೂ ಒಂದೇ ಕೋರಿಕೆಯನ್ನು ಇಟ್ಟೆವು. ನಮ್ಮ ಕೋರಿಕೆಗೆ ಇಬ್ಬರೂ ಸಹಾ ಸ್ಪಂದಿಸಿ ನಾವು ಕೇಳಿದ ಗಂಧದ ಕೊರಡುಗಳನ್ನೇನೋ ಕೊಟ್ಟರು. ಆದರೆ ಯುಧಿಷ್ಠರ ಕೊಟ್ಟ ಗಂಧದ ಕೊರಡುಗಳು ಒದ್ದೆಯಾಗಿದ್ದು ಅವುಗಳನ್ನು ಕೂಡಲೇ ಹೋಮಕ್ಕೆ ಬಳಸಲು ಆಗುತ್ತಿರಲಿಲ್ಲ. ಆದರೆ ಕರ್ಣನು ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ತನ್ನ ದೇವರಮನೆಯ ಬಾಗಿಲು ಮತ್ತು ಕಿಟಕಿಗಳನ್ನೇ ದಾನವಾಗಿ ನೀಡಿದ. ಬಹುಶಃ ನಾವು ಹಸೀ ತುಂಡುಗಳ ಬದಲಾಗಿ ನಿಮ್ಮ ದೇವರು ಮನೆಯ ಬಾಗಿಲು ಮತ್ತು ಕಿಟಕಿಗಳನ್ನು ನಮಗೆ ಕೊಡಲು ಸಾಧ್ಯವೇ? ಎಂದು ಧರ್ಮರಾಯನನ್ನು ಕೇಳಿದ್ದಲ್ಲಿ, ಆತ ಖಂಡಿತವಾಗಿಯೂ ಎರಡನೇ ಆಲೋಚನೆಯಿಲ್ಲದೆ ಕೊಡುತ್ತಿದ್ದ ಎನ್ನುವುದರದಲ್ಲಿ ಯಾವುದೇ ಅನುಮಾನವಿಲ್ಲದೇ ಇದ್ದರೂ, ಆತ ಅದರ ಬಗ್ಗೆ ಸ್ವತಃ ಯೋಚಿಸಲಿಲ್ಲ ಎಂಬುದು ಸತ್ಯ. ಅದೇ ಕರ್ಣ ನಾವು ಕೇಳದೇ ಹೋದರೂ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ಕೊಡುವ ವಸ್ತು ಬಳಕೆಗೆ ಬರಲೇ ಬೇಕೆಂಬ ಉತ್ಕಟ ಆಸೆಯಿಂದಾಗಿ ಹಿಂದೂ ಮುಂದೂ ಯೋಚಿಸದೇ ತನ್ನ ದೇವರ ಮನೆಯ ಬಾಗಿಲು ಮತ್ತು ಕಿಟಕಿಗಳನ್ನೇ ದಾನವಾಗಿ ನೀಡಿದ. ನಿಮ್ಮ ಅಣ್ಣ ಯುಧಿಷ್ಠರು ಕೊಟ್ಟದ್ದು ಅವನ ಧರ್ಮ ಅದರೆ ಅದೇ ಕರ್ಣ ಕೊಟ್ಟದ್ದು ಪ್ರೀತಿ ಮತ್ತು ಬಯಕೆಯಿಂದ ಇದೇ ಅವರಿಬ್ಬರ ನಡುವಿನ ವೆತ್ಯಾಸ. ಹಾಗಾಗಿಯೇ ದಾನದ ವಿಷಯದಲ್ಲಿ ಕರ್ಣನೇ ಜಗತ್ತಿನಲ್ಲಿ ಅತೀ ಶ್ರೇಷ್ಠ ಎಂದು ಪರಿಗಣಿಸಲಾಗುತ್ತದೆ. ನಾವು ಯಾವುದೇ ಕೆಲಸ ಮಾಡಿದರೂ ಅದು ಉದಾತ್ತವಾಗುತ್ತದೆ ಎಂದು ಭಾವಿಸಿ ಪ್ರೀತಿಯಿಂದ ಮಾಡಬೇಕು ಎಂದು ಶ್ರೀಕೃಷ್ಣ ಅರ್ಜುನನಗೆ ತಿಳಿ ಹೇಳುತ್ತಾನೆ.
ದಾನ/ಸಹಾಯ ಎನ್ನುವುದನ್ನು ಮತ್ತೊಬ್ಬರಿಂದ ಕೇಳಿಸಿಕೊಂಡು ಮಾಡುವುದಲ್ಲ. ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ಕೊಟ್ಟಾಗಲೇ ಅದಕ್ಕೊಂದು ಬೆಲೆ ಇರುತ್ತದೆ. ಅದೇ ರೀತಿಯಲ್ಲಿ ಮಾಡಿದ ಸಹಾಯ ಅಥವಾ ದಾನದಿಂದ ಪ್ರತಿಫಲಾಪೇಕ್ಷೆಯನ್ನು ಪಡಬಾರದು ಮತ್ತು ಒಮ್ಮೆ ಕೊಟ್ಟ ನಂತರ ಅದರ ಬಗ್ಗೆ ಪರಿತಪಿಸಲೂ ಬಾರದು. ಇದನ್ನೇ ಅಲ್ವೇ ಶ್ರೀಕೃಷ್ಣ ಪರಮಾತ್ಮ ಭಗವದ್ಗೀತೆಯಲ್ಲಿ ಕರ್ಮಣ್ಯೇವಾಧಿಕಾರಸ್ತೇ ಮಾಫಲೇಷು ಕದಾಚನ. ಅರ್ಥಾತ್, ನಿನ್ನ ಕೆಲಸವನ್ನು ನೀನು ಶ್ರದ್ಧೆಯಿಂದ ಪ್ರತಿಫಲಾಪೇಕ್ಷೆಯಿಂದ ಮಾಡಿದಲ್ಲಿ ಅದಕ್ಕೆ ಖಂಡಿತವಾಗಿಯೂ ಫಲ ಸಿಕ್ಕೇ ಸಿಗುತ್ತದೆ ಎಂದ್ದಿದ್ದಾರೆ. ಅದೇ ರೀತಿ ತುಳಸೀ ದಾಸರು ಹೇಳಿರುವಂತೆ, ದಾನೇ ದಾನೆ ಪರ್ ಲಿಖಾ ರಹೆತಾ ಹೈ ಖಾನೇ ವಾಲೋಂಕ ನಾಮ್ ಅಂದರೆ ಪ್ರತಿಯೊಂದು ದಾನದ ಮೇಲೂ ಅದರ ಫಲಾನುಭವಿಯ ಹೆಸರು ಇದ್ದೇ ಇರುತ್ತದೆ. ಹಾಗಾಗಿ ನಾವು ದಾನ ಮಾಡಿದೆವು ಎನ್ನುವುದಕ್ಕಿಂತಲೂ ಅದು ಭಗವಂತಹ ಸಂಕಲ್ಪ ಎನ್ನುವುದು ಸತ್ಯ.
ಅದೇ ರೀತಿ ಅಪಾತ್ರರಿಗೆ ದಾನವನ್ನು ಮಾಡಬಾರದು ಎಂಬುದಾಗಿಯೂ ನಮ್ಮ ಹಿರಿಯರು ಎಚ್ಚರಿಸಿದ್ದಾರೆ. ಹಾಗಾಗಿ ಯಾರಿಗೇ ಆಗಲಿ, ಏನನ್ನೇ ಆಗಲೀ ಕೊಡುವಾಗ ಪ್ರತ್ಯಕ್ಶಿಸಿ ನೋಡಿದರೂ ಪ್ರಮಾಣಿಸಿ ನೋಡು ಎನ್ನುವಂತೆ ಒಮ್ಮೆ ಯಾಚಿಗಳ ಪೂರ್ವಪರ ವಿಚಾರಿಸಿ ನಾವು ಕೊಡುವ ದಾನ ಅಥವಾ ಮಾಡುವ ಸಹಾಯ ಅವರ ತತ್ ಕ್ಷಣ ಅಗತ್ಯತೆಗಳನ್ನು ಪೂರೈಸುವುದಕ್ಕಿಂತಲೂ ಅವರು ಸಮಸ್ಯೆಗಳಿಂದ ಶಾಶ್ವತವಾಗಿ ಹೊರಬರುವಂತಾದಲ್ಲಿ ಉತ್ತಮ ಅಲ್ವೇ?
❤️🌷🙏 ವಿಮಲ್ ನ್ಯೂಟ್ರಿಷನ್ ಸೆಂಟರ್ 🙏🌷❤️ #🎥 Motivational ಸ್ಟೇಟಸ್ #😍 ನನ್ನ ಸ್ಟೇಟಸ್ #✍️ ಮೋಟಿವೇಷನಲ್ ಕೋಟ್ಸ್ #👦🏻 Bad Boyz ಸ್ಟೇಟಸ್ #✍️ ಮೋಟಿವೇಷನಲ್ ಕೋಟ್ಸ್
ಧರ್ಮರಾಜ
ಯಾವುದು ಧರಿಸಿ ನಿಲ್ಲುತ್ತದೋ ಅದೇ ಧರ್ಮ. ಮನುಷ್ಯನನ್ನೂ ಸಮಾಜವನ್ನೂ ಮಾನವತೆಯಿಂದ ಮಾಧವತೆಯೆಡೆಗೆ ಕೊಂಡೊಯ್ಯುವ ದೈವನಿರ್ಮಿತವಾದ ಸೇತುವೆಯೇ ಧರ್ಮ, ಸಮಾಜವನ್ನು ಹಲವು ಕಾಲ ನಿಲ್ಲಿಸಬಲ್ಲದ್ದು ಧರ್ಮ. ಧರ್ಮೋ ರಕ್ಷತಿ ರಕ್ಷಿತಃ ಎಂಬ ಸುಭಾಷಿತವಿದೆ. ಧರ್ಮವನ್ನು ನಾವು ಕಾಪಾಡಿದರೆ ಧರ್ಮ ನಮ್ಮನ್ನು ಕಾಪಾಡುತ್ತದೆಯಂತೆ. ಸತಿಧರ್ಮ, ಪತಿ ಧರ್ಮ, ಸುತನ ಧರ್ಮ, ಅಪದ್ಧರ್ಮ ಹೀಗೆ ಕಾಲ, ದೇಶ, ಸಂದರ್ಭ, ಸನ್ನಿವೇಶಕ್ಕನುಸಾರ ಅವರವರ ಧರ್ಮಕ್ಕೆ ಗೌರವನೀಡಿ ಬಾಳಬೇಕು.
’ನನ್ನ ಧರ್ಮ ನನ್ನನ್ನು ಕಾಪಾಡೀತು’ ಎಂಬುದು ಜನಪದೀಯರಲ್ಲಿ ಹರಿದು ಬಂದ ನುಡಿ. ಧರ್ಮೋ ವಿಶ್ವಸ್ಥ ಜಗತ: ಪ್ರತಿಷ್ಟಾ: ಈ ಜಗ ಮೂಲವಾದ ಸ್ವಭಾವಗಳಲ್ಲಿ ಪ್ರತಿಷ್ಠಿತವಾದದ್ದು. ಧರ್ಮಕ್ರಿಯೆಗಳು, ಸೂರ್ಯ-ಚಂದ್ರರು, ಗ್ರಹ- ನಕ್ಷತ್ರಗಳು, ಋತು-ಮಾಸಗಳು ಹೀಗೆ ಸೃಷ್ಟಿಯ ಸಮಸ್ತ ವ್ಯವಹಾರಗಳೂ ಈ ಗತಿ ಶೀಲತೆಯಲ್ಲಿಯೇ ಇರುತ್ತದೆ. ಒಂದು ದಿನವಾದರೂ ಸೂರ್ಯನ ಉದಯಾಸ್ತಗಳು ವ್ಯತ್ಯಸ್ಥವಾಗುವುದಿಲ್ಲ. ಮಳೆ, ಚಳಿ, ಬಿಸಿಲುಗಳು ಕಾಲ ಕಾಲಕ್ಕೆ ತಕ್ಕ ರೀತಿಯಲ್ಲಿ ನಡೆಯುತ್ತದೆ. ಇದಕ್ಕೆ ಮೂಲವಾಗಿದ್ದ್ದು ಭಗವಂತನ ಧರ್ಮಚಕ್ರ, ‘ಯಶೋ ಧರ್ಮ ತತೋಜಯ:. ಎಲ್ಲಿ ಧರ್ಮವಿದೆಯೋ ಅಲ್ಲಿ ಜಯವಿರುತ್ತದೆ. ಧರ್ಮವನ್ನು ಭದ್ರ ಬುನಾದಿಯನ್ನಾಗಿಸಿ ಯಾರಲ್ಲೂ ವಿರೋಧವನ್ನು ಕಟ್ಟಿಕೊಳ್ಳದೆ ಅಜಾತ ಶತ್ರುವೆನಿಸಿ ವಿಶೇಷವಾದ ಧರ್ಮಾಚರಣೆಯನ್ನಾಧರಿಸಿಕೊಂಡವನೇ ಧರ್ಮರಾಯ, ಮಹಾಭಾರತದ ಪಾಂಡು ಪುತ್ರನೆಂದು ಹೆಸರು ಪಡೆದ ಇವನು ಕುಂತಿಗೆ ಯಮಧರ್ಮರಾಯನಿಂದ ಹುಟ್ಟಿದವ. ಪಾಂಡವಾಗ್ರಜನಾದ ಇವನಿಗೆ ಯುದಿಷ್ಠಿರ, ಅಜಾತಶತ್ರು, ಧರ್ಮಜ ಮುಂತಾದ ಹೆಸರುಗಳಿವೆ.
ಧರ್ಮರಾಯನ ಜನನ : ಕಾಡಿನಲ್ಲಿ ಒಂದು ದಿನ ಪಾಂಡುರಾಜನು, ಜಿಂಕೆಯ ರೂಪದಲ್ಲಿರುವ ಕಿಂದಮ ಮಹರ್ಷಿಗಳು ಪತ್ನಿಯೊಂದಿಗೆ ಕೂಡಿದ್ದಾಗ ವಿಷಯ ತಿಳಿಯದೆ ಬಾಣ ಹೂಡುತ್ತಾನೆ. ಕ್ರೋಧಗೊಂಡ ಕಿಂದಮನು ‘ನೀನೂ ನಿನ್ನ ಪತ್ನಿಯೊಂದಿಗೆ ಸೇರಿದಾಗ ನಿನ್ನ ಸಾವು ಉಂಟಾಗಲಿ ಎಂದು ಶಾಪಕೊಡುತ್ತಾನೆ’. ವ್ಯಥೆಗೊಂಡ ಪಾಂಡುರಾಜನು ಪತ್ನಿಯರಾದ ಕುಂತಿ-ಮಾದ್ರಿಯರೊಂದಿಗೆ ಅರಣ್ಯವಾಸ ಮಾಡುತ್ತಾನೆ. ಆದರೂ ಮಕ್ಕಳನ್ನು ಹೊಂದುವ ಅಭಿಲಾಶೆ ನಶಿಸುತ್ತದೆಯೇ? ತನ್ನಮನೋಭಿಷ್ಟವನ್ನು ಪತ್ನಿಯರ ಮುಂದೆ ಒಡ್ಡುತ್ತಾನೆ. ಏನು ತಾನೇ ಮಾಡಲಾದೀತು? ಕ್ಷಣ ಯೋಚಿಸಿದ ಕುಂತಿಯು ಹಿಂದೆ ದೂರ್ವಾಸರು ತನಗೆ ನೀಡಿದ ವರವನ್ನು ನೆನಪು ಮಾಡಿಕೊಳ್ಳುತ್ತಾಳೆ. ಮತ್ತೆ ಪತಿಯ ಅಪ್ಪಣೆ ಪಡೆದು ಕ್ರಮವಾಗಿ ಯಮಧರ್ಮರಾಯನಿಂದ ಯುಧಿಷ್ಠಿರನನ್ನು, ವಾಯುವಿನ ಅನುಗ್ರಹದಿಂದ ಭೀಮನನ್ನೂ, ಇಂದ್ರನಿಂದ ಅರ್ಜುನನನ್ನೂ ಪಡೆಯುತ್ತಾಳೆ. ಸೂರ್ಯನು ತುಲಾರಾಶಿಯಲ್ಲಿರುವಾಗ ಪೂರ್ಣ ತಿಥಿಯೆನ್ನಿಸಿಕೊಂಡ ಪಂಚಮೀ ತಿಥಿಯಲ್ಲಿ ಇಂದ್ರ ದೇವಾತ್ಮಕವಾದ ಜೇಷ್ಠಾ ನಕ್ಷತ್ರದೊಡನೆ ಚಂದ್ರನು ಸೇರಿದಾಗ ಅಭಿಜಿತ್ ಎಂಬ ಎಂಟನೇ ಮುಹೂರ್ತದಲ್ಲಿ ಕುಂತಿಯು ಧರ್ಮರಾಯನಿಗೆ ಜನ್ಮ ನೀಡುತ್ತಾಳೆ, ಧರ್ಮರಾಯನ ಪತ್ನಿ ದ್ರೌಪದಿ. ಈಕೆಯಲ್ಲಿ ಇವನಿಗೆ ಪ್ರತಿವಿಂದ್ಯನೆಂಬ ಮಗನಿದ್ದನು. ಧರ್ಮಜನಿಗೆ ಶೈಬ್ಯ ಮತ್ತು ದೇವಕಿಯೆಂಬ ಇನ್ನಿಬ್ಬರು ಹೆಂಡಿರೂ ಇದ್ದರು ಎಂಬುದಾಗಿ ಪುರಾಣದಲ್ಲಿ ಉಲ್ಲೇಖವಿದೆ.
ಅಜಗರನ ಶಾಪ ವಿಮೋಚನೆ : ಅಜಗರ ಎಂದರೆ ಹೆಬ್ಬಾವು . ಚಂದ್ರವಂಶದ ನಹುಷ ಎಂಬ ರಾಜನು ಅಗಸ್ತ್ಯರ ಕೋಪಕ್ಕೆ ಗುರಿಯಾಗಿ ಹೆಬ್ಬಾವಿನ ರೂಪಹೊಂದಿ ಜೀವಿಸುತ್ತಿದ್ದ. ಪಾಂಡವರು ವನವಾಸದಲ್ಲಿದ್ದ ಸಂದರ್ಭ. ಭೀಮನು ವನದಲ್ಲಿ ಮೃಗಾನ್ವೇಷಣೆಯಲ್ಲಿ ಒಂದು ದಿನ ಅಜಗರನು ಭೀಮನ ಮೈಗೆ ಸುತ್ತಿಕೊಂಡು ಕದಲಲಾರದಾದನು. ಬಂಧಿಸಲ್ಪಟ್ಟ ಭೀಮನನ್ನು ಅಜಗರ ಕೇಳಿದ ಧರ್ಮ ಪ್ರಕಾರದ ಪ್ರಶ್ನೆಗಳಿಗೆ ಸರಿ ಉತ್ತರ ನೀಡಿ ಧರ್ಮರಾಯನು ಬಂಧಮುಕ್ತಗೊಳಿಸುತ್ತಾನೆ. ತತ್ಪರಿಣಾಮವಾಗಿ ನಹುಷನ ಪಾಪವೂ ವಿಮೋಚನೆಯಾಗಿ ಅವನು ಸ್ವರ್ಗಕ್ಕೆ ತೆರಳುತ್ತಾನೆ.
ಹಿರಿಯಣ್ಣನ ಹಿರಿ ಹೃದಯ : ಒಂದು ದಿನ ದುರ್ಯೋದನನು ಪರಿವಾರ ಸಮೇತವಾಗಿ ಗೊಲ್ಲರಹಳ್ಳಿಗೆ ಹೊರಟನು. ಅಲ್ಲಿರುವ ಸುಂದರವಾದ ದ್ವೈತವನದಲ್ಲಿರುವ ಸರೋವರದಲ್ಲಿ ಭಾನುಮತಿ ಹಾಗೂ ಅವಳ ಸಖಿಯರೊಡಗೂಡಿ ಜಲ ಕ್ರೀಡೆಗೆ ತೊಡಗಿದನು. ವನ ಹಾಗೂ ಸುಂದರವಾದ ಸರೋವರ ಕಲುಷಿತವಾಗಲು, ಅದರ ರಕ್ಷಣೆ ಮಾಡುತ್ತಿದ್ದ ಗಂಧರ್ವ, ದೇವಲೋಕಕ್ಕೆ ಸುದ್ದಿ ಮುಟ್ಟಿಸಿದ. ಗಂಧರ್ವನಿಗೂ ಕೌರವನಿಗೂ ಹೊಡೆದಾಟ, ಗುದ್ದಾಟ ಪ್ರಾರಂಭವಾಗಿ ಘೋರ ಯುದ್ಧವೇರ್ಪಟ್ಟಿತು.
ಅದರಲ್ಲಿ ಕೌರವ ಸೋತಾಗ ಜೀವಸಹಿತ ಕೌರವನನ್ನು ಸೆರೆ ಹಿಡಿದರು. ಇದರಿಂದಾಗಿ ಕೌರವನ ಪತ್ನಿ ಭಾನುಮತಿ ಚಿಂತೆಗೀಡಾದಳು. ಅದೇ ಪರಿಸರದಲ್ಲಿ ಪರ್ಣಶಾಲೆಯಲ್ಲಿ ಬೀಡುಬಿಟ್ಟಿದ್ದ ದ್ರೌಪದಿಯ ಮೂಲಕ ಪತಿಯ ಪ್ರಾಣ ಉಳಿಸುವಂತೆ ಮೊರೆಯಿಟ್ಟಳು. ತಮ್ಮಂದಿರಿಗೆ ನಾಲ್ವರಿಗೂ ಕೌರವನ ರಕ್ಷಣೆ ಮಾಡುವುದಕ್ಕೆ ಮನಸ್ಸಿಲ್ಲದ್ದಿದ್ದರೂ ಧರ್ಮರಾಯ ಹೇಳುತ್ತಾನೆ ‘ ಅಣ್ಣ-ತಮ್ಮಂದಿರಲ್ಲಿ ಪರಸ್ಪರ ಜಗಳ ಸಹಜ. ಅದರ ಉಪಯೋಗ ಹೊರಗಿನವನು ಪಡೆ, ಹೊರಗಿನವರು ನಮ್ಮ ಮೇಲೆ ದಾಳಿ ಮಾಡಲು ಬಂದರೆ ನಾವು ಐವರಲ್ಲ, ನೂರು ಮಂದಿ ಇದ್ದೇವೆ ನಮ್ಮ ಮನೆತನಕ್ಕೆ ಉಂಟಾದ ಅಪಕೀರ್ತಿಯನ್ನು ತಪ್ಪಿಸುವುದು ನಮ್ಮ ಕರ್ತವ್ಯ’ ಎಂದು ಹೇಳಿ ದುರ್ಯೋಧನನನ್ನು ಗಂಧರ್ವನದ ಚಿತ್ರಸೇನನಿಂದ ಬಿಡಿಸುವ ಧರ್ಮರಾಯನ ವಿಶೇಷವಾದ ಸೋದರ ಧರ್ಮ ಮೆಚ್ಚಬೇಕಾದ್ದು.
ದೈತವನದಲ್ಲಿ : ಬ್ರಾಹ್ಮಣನೊಬ್ಬನು ಅಗ್ನಿ ಉತ್ಪತ್ತಿಗೆ ಕಾರಣನಾದ ಅರಣಿ ಮತ್ತು ಮಂಥನವನ್ನು ಹರಿಣವೊಂದು ಹೊತ್ತುಕೊಂಡು ಹೋಯಿತೆಂದು ಧರ್ಮರಾಯನಲ್ಲಿ ದೂರಿತ್ತನು. ಪಾಂಡವರೈವರೂ ಮೃಗವು ತೆರಳಿದ ದಾರಿಯನ್ನುಪಕ್ರಮಿಸಿದರು. ಈ ದಾರಿ ಮಧ್ಯೆ ಪಾಂಡವರೈವರೂ ಬಾಯಾರಿ ಬಳಲಿದರು. ತೃಷೆ ನೀಗಿಸುವುದಕ್ಕಾಗಿ ಸರೋವರಕ್ಕೆ ತೆರಳಿದರು. ಕ್ರಮಾಗತವಾಗಿ ನೀರು ಕುಡಿಯಲು ಸರೋವರಕ್ಕಿಳಿದಾಗ, ಯಕ್ಷನು ಪ್ರಶ್ನೆ ಹಾಕುವುದಕ್ಕೆ ತೊಡಗುತ್ತಾನೆ. ಅವನ ಪ್ರಶ್ನೆಗೆ ಸಮರ್ಪಕವಾದ ನೀಡಿದರೆ ನೀರು ಕುಡಿದು ನೀರಡಿಕೆ ನೀಗಿಸಬಹುದಿತ್ತು. ಇಲ್ಲದೆ ಹೋದರೆ ಮರಣವೇ ಗತಿ. ಸಹದೇವ, ನಕುಲ, ಅರ್ಜುನ, ಭೀಮ ಹೀಗೆ ನಾಲ್ವರೂ ಯಕ್ಷನ ಪ್ರಶ್ನೆಗೆ ಉತ್ತರಿಸದೆ ಸರೋವರದ ತಟದಲ್ಲಿ ಮೂರ್ಛ ತಪ್ಪಿ ಬೀಳುತ್ತಾರೆ.
ಕೊನೆಗೆ ಧರ್ಮರಾಯನು ಯಕ್ಷನ ಎಲ್ಲಾ ಪ್ರಶ್ನೆಗಳಿಗೆ ತಕ್ಕುದಾದ ಉತ್ತರ ನೀಡಿ ಸಂತೋಷಪಡಿಸಿದಾಗ ನಿನ್ನ ನಾಲ್ವರು ತಮ್ಮಂದಿರಲ್ಲಿ ಒಬ್ಬನನ್ನು ಬದುಕಿಸುತ್ತೇನೆ. ಯಾರಾಗಬಹುದು ಎಂಬ ಧರ್ಮ ಪರೀಕ್ಷೆಯ ಪ್ರಶ್ನೆಗೆ ಧರ್ಮರಾಯ ನಕುಲನನ್ನು ಬದುಕಿಸಿಕೊಡಲು ಕೇಳುತ್ತಾನೆ. ನನ್ನ ಹೆತ್ತಬ್ಬೆ ಕುಂತಿಯ ಮಕ್ಕಳಲ್ಲಿ ನಾನು ಬದುಕಿದ್ದೇನೆ ಹಾಗೆಯೆ ಚಿಕ್ಕಮ್ಮನಾದ ಮಾದ್ರಿಯ ಮಗನಾದ ನಕುಲನು ಬದುಕಿ ಬರಲಿ ಎಂಬುದೇ ನನ್ನ ಆಶಯ ಎನ್ನುತ್ತಾನೆ, ಯುದಿಷ್ಠಿರ, ಮಲತಾಯಿ ಮಕ್ಕಳಾದರೂ ನಕುಲ, ಸಹದೇವರಲ್ಲಿ ನೀನು ತೋರಿಸಿದ ಪ್ರೀತಿ ಅವರ್ಣನೀಯ. ಇದರಿಂದ ಸಂತೋಷಗೊಂಡ ಯಕ್ಷನು ನಾಲ್ವರು ಸಹೋದರರೂ ಮರುಜೀವ ಪಡೆಯುವಂತಾಗಲಿ ಎನ್ನುತ್ತಾ, ನಾನು ಯಕ್ಷನೆಂದು ಹೇಳಿದರೂ ಯಕ್ಷನಲ್ಲ. ನಿನ್ನ ತಂದೆಯಾದ ಯಮಧರ್ಮರಾಯನೇ ಆಗಿದ್ದೇನೆ ಎನ್ನುತ್ತಾನೆ. ಧರ್ಮಕ್ಕೆ ಎಲ್ಲೆಲ್ಲೂ ಜಯ ಎಂಬುದಕ್ಕೆ ಧರ್ಮರಾಯನಿಗೆ ಸೂರ್ಯದೇವ ಕರುಣಿಸಿದ ಅಕ್ಷಯ ಪಾತ್ರೆಯೂ ವಿಶೇಷ ಸಾಕ್ಷಿ. ಎಲ್ಲವನ್ನೂ ಕಳೆದುಕೊಂಡು ವನವಾಸದಲ್ಲಿದ್ದಾಗ ಧರ್ಮಜನು ಮಮ್ಮಲ ಮರುಗುತ್ತಾನೆ. ತನಗಾಗಿ ಅಲ್ಲದಿದ್ದರೂ ದೇಹಿ ಎಂದು ಬೇಡಲು ಬಂದವರಿಗೆ ಇದುವರೆಗೆ ನಾಸ್ತಿ ಎಂದು ಹೇಳಿಲ್ಲ. ಯಾರಾದರೂ ಅಪ್ಪಿ-ತಪ್ಪಿ ಯಾಚಿಸಲು ಬಂದರೆ ಏನೆನ್ನಲಿ! ಅತಿಥಿಗಳಿಗೆ, ಮುನಿರಾಜನಿಗೆ ಏನನ್ನು ಅರ್ಪಿಸಲಿ? ಧರ್ಮಜನ ಈ ರೀತಿಯ ಅಳಲನ್ನು ಅರ್ಥಮಾಡಿಕೊಂಡ ಧೌಮ್ಯರು ಸೂರ್ಯದೇವನಲ್ಲಿ ನಿನ್ನ ಇಚ್ಚೆಯನ್ನು ತೋಡಿಕೊಳ್ಳು ಎನ್ನುತ್ತಾರೆ. ಇದರಿಂದಾಗಿ ಧರ್ಮಜನು ಸೂರ್ಯನನ್ನು ಅನನ್ಯ ಪ್ರಾರ್ಥಿಸುತ್ತಾನೆ. ಪರಿಣಾಮವಾಗಿ ಭಾಸ್ಕರನು ಅಕ್ಷಯ ಪಾತ್ರೆಯನ್ನು ಕರುಣಿಸುತ್ತಾನೆ.
ಮಹಾ ಪ್ರಸ್ಥಾನಿಕ : ಪಾಂಡವರೈವರೂ ನೇರ ಸ್ವರ್ಗಕ್ಕೆ ತೆರಳುತ್ತಾರೆ. ಸ್ವರ್ಗಾರೋಹಣ ಸಂದರ್ಭದಲ್ಲೂ ಧರ್ಮರಾಯ ತನ್ನ ಧರ್ಮವನ್ನು ಬಿಟ್ಟುಕೊಡುವುದಿಲ್ಲ. ಆತನ ಜೊತೆಯಲ್ಲಿ ಒಂದು ನಾಯಿ ಹಿಂಬಾಲಿಸುತ್ತದೆ. ತಮ್ಮಂದಿರು ನಾಲ್ವರೂ ದ್ರೌಪದಿಯೂ ದಾರಿ ಮಧ್ಯೆ ಅಸುನೀಗಿ ಸ್ವರ್ಗ ಸೇರುತ್ತಾರೆ, ಆದರೆ ನಾಯಿಯು ಧರ್ಮಜನನ್ನು ಬಿಡಲೇ ಇಲ್ಲ. ಸ್ವರ್ಗದ ಬಾಗಿಲಿನಲ್ಲಿ ದೇವೇಂದ್ರನು ನಾಯಿಯನ್ನು ತಡೆಯುತ್ತಾನೆ.ಧರ್ಮಜನಾದರೋ ನನ್ನನ್ನು ನಂಬಿ ಬಂದ ನಾಯಿಗೆ ಸ್ವರ್ಗಕ್ಕೇರಲು ಪ್ರವೇಶ ಇಲ್ಲವಾದಲ್ಲಿ ನನಗೂ ಬೇಡವೆಂದು ನಿರಾಕರಿಸುತ್ತಾನೆ. ಆದರೆ ಯುದಿಷ್ಠಿರನು ತನ್ನ ನಿರ್ಧಾರವನ್ನು ಬದಲಿಸಲಾರ. ಇಲ್ಲಿಯೂ ಧರ್ಮಜನೇ ಗೆಲ್ಲುತ್ತಾನೆ. ಇಲ್ಲಿ ನಾಯಿ ಎಂದರೆ ಅದು ಅವನ ಧರ್ಮವಾಗಿತ್ತು. ಹೀಗೆ ಧರ್ಮಜನ ಧರ್ಮಸೂಕ್ಷ ಆತನ ಜೀವನದುದ್ದಕ್ಕೂ ಎದ್ದು ಕಾಣುತ್ತದೆ. ಧರ್ಮರಾಜನು ಧರ್ಮರೂಪವಾದ ಒಂದು ಮಹಾವೃಕ್ಷವಾಗಿದ್ದಾನೆ ಎಂದು ಮಹಾಭಾರತವೇ ನಮಗೆ ತಿಳಿಸುತ್ತದೆ. ಇದು ಮಾನವನ ದಿನನಿತ್ಯದ ಬದುಕಿಗೆ ದಾರಿದೀಪವಾಗಿದೆ.
❤️🌷🙏 ವಿಮಲ್ ನ್ಯೂಟ್ರಿಷನ್ ಸೆಂಟರ್ 🙏🌷❤️ #👦🏻 Bad Boyz ಸ್ಟೇಟಸ್ #✍️ ಮೋಟಿವೇಷನಲ್ ಕೋಟ್ಸ್ #😍 ನನ್ನ ಸ್ಟೇಟಸ್ #🎥 Motivational ಸ್ಟೇಟಸ್ #✍️ ಮೋಟಿವೇಷನಲ್ ಕೋಟ್ಸ್
ಮಾಹಿಷ್ಮತೀ_ನೀಲ*******
ಪೂರ್ವದಲ್ಲಿ ಮಾಹಿಷ್ಮತೀ ನಗರವನ್ನು ನೀಲನೆಂಬ ರಾಜನು ಆಳುತ್ತಿದ್ದನು. ನೀಲನಿಗೆ ಅಪ್ರತಿಮ ಸುಂದರಿಯಾಗಿದ್ದ ‘ಸುದರ್ಶನಾ’ ಎಂಬ ಹೆಸರಿನ ಮಗಳಿದ್ದಳು. ಪರಮಧಾರ್ಮಿಕನೂ, ಸತ್ಯಸಂಧನೂ ಆಗಿದ್ದ ನೀಲನು ದೀರ್ಘಕಾಲದ ಯಜ್ಞವೊಂದನ್ನು ಮಾಡಲುಪಕ್ರಮಿಸಿದನು. ರಾಜನು ಯಜ್ಞ-ಯಾಗಾದಿಗಳಲ್ಲಿ ನಿರತನಾಗಿದ್ದಾಗ ಸುದರ್ಶನಾ ಅಗ್ನಿಯನ್ನು ಪ್ರಜ್ವಲಿಸುವಂತೆ ಮಾಡಲು ತಂದೆಗೆ ಸಹಾಯ ಮಾಡುತ್ತಿದ್ದಳು. ಆಕೆಗೆ ಇದು ಪ್ರತಿನಿತ್ಯದ ಕಾರ್ಯವಾಗಿತ್ತು. ಯಜ್ಞೇಶ್ವರನಾದರೋ ರಾಜಕನ್ಯೆಯು ಗಾಳಿಹಾಕಿದರೆ ಮಾತ್ರವೇ ಪ್ರಜ್ವಲಿಸುತ್ತಿದ್ದ. ಅವಳ ಹೊರತಾಗಿ ಬೇರೆ ಯಾರೇ ಗಾಳಿಬೀಸಿದರೂ ಅತಿಯಾದ ಧೂಮವು ಎಲ್ಲೆಡೆ ಸುತ್ತಿಕೊಂಡು ಎಲ್ಲರೂ ಯಾಗಶಾಲೆಯಿಂದ ಹೊರಗೆ ಹೋಗುವಂತಾಗುತ್ತಿತ್ತು. ಸುದರ್ಶನಾಳ ಚೆಲುವು ಮತ್ತು ಶ್ರದ್ಧಾಭಕ್ತಿಗಳಿಂದ ಅಗ್ನಿಯು ರಾಜಪುತ್ರಿಯನ್ನು ಕಾಮಿಸತೊಡಗಿದ. ಬ್ರಾಹ್ಮಣ ರೂಪವನ್ನು ತಳೆದು ರಾಜಕನ್ಯೆಯೊಂದಿಗೆ ರಮಿಸತೊಡಗಿದ. ಎಲ್ಲಾ ರಹಸ್ಯಗಳಿಗೂ ಮುಕ್ತಾಯದ ಅವಧಿ ಅಂತ ಒಂದಿದೆ. ಅಂತೆಯೇ ಬ್ರಾಹ್ಮಣನೊಬ್ಬ ರಾಜಪುತ್ರಿಯೊಂದಿಗೆ ರಹಸ್ಯವಾಗಿ ರಮಿಸುತ್ತಿರುವುದು ಬಹಿರಂಗವಾಯಿತು. ವಿಷಯ ತಿಳಿದ ನೀಲರಾಜ ಸಿಟ್ಟಿನಿಂದ ಆ ಬ್ರಾಹ್ಮಣನಿಗೆ ಸರಿಯಾದ ಶಿಕ್ಷೆಯನ್ನು ವಿಧಿಸುವಂತೆ ಆದೇಶಿಸಿದ. ಬ್ರಾಹ್ಮಣರೂಪಿ ಯಜ್ಞೇಶ್ವರನು ರಾಜನ ಮಾತಿನಿಂದ ಕೋಪಗೊಂಡ. ಬ್ರಾಹ್ಮಣನ ಸುತ್ತಲೂ ಧಗಧಗನೆ ಅಗ್ನಿಯು ಕಾಣಿಸಕೊಂಡು ಜ್ವಾಲೆಗಳು ಕೆನ್ನಾಲಗೆ ಚಾಚತೊಡಗಿದವು. ತನ್ನ ಮುಂದಿರುವವನು ಸಾಧಾರಣ ಬ್ರಾಹ್ಮಣನಲ್ಲ ಎಂದು ಭಯಗೊಂಡ ನೀಲರಾಜ ಅವನಿಗೆ ಸಾಷ್ಟಾಂಗ ಪ್ರಣಾಮವನ್ನು ಸಲ್ಲಿಸಿ ತನ್ನನ್ನು ಮನ್ನಿಸುವಂತೆ ಪ್ರಾರ್ಥಿಸಿದ. ತನ್ನೆದರು ನಿಂತಿರುವವನು ಸಾಕ್ಷಾತ್ ಅಗ್ನಿದೇವನೆಂದು ತಿಳಿದು ತನ್ನ ಮಗಳನ್ನು ಕೊಟ್ಟು ವಿವಾಹವಿಧಿಯನ್ನು ನೆರವೇರಿಸಿದ.
ತಾನು ಪ್ರೇಮಿಸಿದ ಸುದರ್ಶನಾಳನ್ನು ಪಡೆದ ಅಗ್ನಿದೇವನು ನೀಲರಾಜನಿಗೆ ವರವೊಂದನ್ನು ಅನುಗ್ರಹಿಸಿದ. ಯುದ್ಧದಲ್ಲಿ ತೊಡಗಿರುವ ತನ್ನ ಚತುರಂಗಬಲವು ಯಾವುದೇ ಕಾರಣದಿಂದಲೂ ಭಯದಿಂದ ಹಿಮ್ಮೆಟ್ಟುವಂತೆ ಆಗಬಾರದು ಎಂಬ ನೀಲರಾಜನ ಪ್ರಾರ್ಥನೆಯನ್ನು ಅಗ್ನಿಯು ಮನ್ನಿಸಿದ. ಅಂದಿನಿಂದ ಮಾಹಿಷ್ಮತಿ ನಗರದ ಮೇಲೆ ಯಾರೇ ಆಕ್ರಮಣ ನಡೆಸಲು ಹೋದರೂ ಯಾರೂ ಸಹ ನಗರದ ಕೋಟೆಯನ್ನು ಪ್ರವೇಶಿಸುವುದು ಅಸಾಧ್ಯವಾಗಿತ್ತು. ಕೋಟೆಯನ್ನು ಸಮೀಪಿಸಿದವರನ್ನು ಅಗ್ನಿಯು ಸುಟ್ಟು ಭಸ್ಮಮಾಡುತ್ತಿದ್ದನು. ಶತ್ರುರಾಜರು ಮಾಹಿಷ್ಮತೀ ನಗರದ ಮೇಲೆ ಆಕ್ರಮಣ ಮಾಡುವುದನ್ನೇ ನಿಲ್ಲಿಸಿಬಿಟ್ಟರು. ಅಗ್ನಿಯ ವರದ ಪ್ರಭಾವದಿಂದ ಆ ಪಟ್ಟಣದಲ್ಲಿ ಪುರುಷರು ತಮ್ಮ ಇಚ್ಛಾನುಸಾರ ಯುವತಿಯರನ್ನು ಪಾಣಿಗ್ರಹಣ ಮಾಡಿಕೊಳ್ಳುವಂತಿರಲಿಲ್ಲ, ಬದಲಾಗಿ ಯುವತಿಯರು ಇಷ್ಟಪಟ್ಟರೆ ಮಾತ್ರ ಅದು ಸಾಧ್ಯವಾಗುತ್ತಿತ್ತು. ಪೂರ್ಣಸ್ವತಂತ್ರರಾದ ಕನ್ಯೆಯರು ತಮಗೆ ಇಷ್ಟವಾದವರನ್ನು ವರಿಸುತ್ತಿದ್ದರು. ನೀಲರಾಜನ ವಂಶೀಯರು ಆಳ್ವಿಕೆಯಿರುವವರೆಗೆ ಅಗ್ನಿಯು ಅವರ ರಾಜ್ಯರಕ್ಷಣೆ ಮಾಡುವೆನೆಂಬ ವಾಗ್ದಾನದಿಂದಾಗಿ ನೀಲನು ಅಪರಾಜಿತನೆಂಬ ಖ್ಯಾತಿ ಪಡೆದ.
ರಾಜಸೂಯಯಾಗದ ಸಮಯದಲ್ಲಿ ಸಹದೇವನು ದಕ್ಷಿಣದೆಡೆಗೆ ದಿಗ್ವಿಜಯ ಯಾತ್ರೆಗೈದನು. ಯಜ್ಞಾಶ್ವವನ್ನು ಅಡ್ಡಗಟ್ಟಿದ ನೀಲರಾಜನಿಗೂ ಸಹದೇವನಿಗೂ ಅತಿಭಯಂಕರವಾದ ಯುದ್ಧ ನಡೆದು ಅಗ್ನಿಯ ವರಬಲದಿಂದ ನೀಲರಾಜನು ಅಪರಾಜಿತನಾದನು. ಸಹದೇವನ ಸೈನ್ಯವೆಲ್ಲವೂ ಯಜ್ಞೇಶ್ವರನ ಜ್ವಾಲೆಗಳಿಂದ ಆವೃತವಾಗಿ ಹೊತ್ತಿ ಉರಿಯತೊಡಗಿ ಮುಂದೇನು ಮಾಡಬೇಕೆಂಬುದೇ ತಿಳಿಯದಾಯಿತು. ಧೃತಿಗೆಡದೆ ಸಹದೇವನು ಶುದ್ಧಾಚಮನವನ್ನು ಮಾಡಿ ಸ್ಥಿರವಾಗಿ ಕುಳಿತು ನಾನಾವಿಧವಾಗಿ ಅಗ್ನಿಯನ್ನು ಸ್ತುತಿಸಿದನು. ಯುಧಿಷ್ಠಿರನ ಯಜ್ಞಸಂಕಲ್ಪ ಮತ್ತು ಸಹದೇವನ ಉದ್ದೇಶ ಎರಡನ್ನೂ ಅರಿತು ಅವನನ್ನು ಪರೀಕ್ಷಿಸಿದ್ದ ಅಗ್ನಿಯು ಪ್ರಸನ್ನನಾಗಿ ನೀಲರಾಜನಿಗೆ ಕುರುವಂಶದವರೊಂದಿಗೆ ಸಾಮೋಪಾಯವನ್ನು ಅನುಸರಿಸಲು ಸೂಚನೆ ನೀಡಿದ. ಅದರಂತೆ ನೀಲರಾಜನು ರಾಜಸೂಯಕ್ಕೆ ಕಪ್ಪಕಾಣಿಕೆಗಳನ್ನು ಸಲ್ಲಿಸಿ ಸಹದೇವನನ್ನು ಬೀಳ್ಕೊಟ್ಟ.
ಮುಂದೆ ಭಾರತ ಯುದ್ಧದಲ್ಲಿ ನೀಲರಾಜನು ಪಾಂಡವರ ಪಕ್ಷವನ್ನು ಬೆಂಬಲಿಸುತ್ತಾನೆ. ಅಗ್ನಿಯ ತೇಜಸ್ಸಿನಿಂದ ಪ್ರಜ್ವಲಿಸುತ್ತಿದ್ದ ನೀಲನು ಬಿಲ್ಲನ್ನೇ ಜ್ವಾಲೆಯನ್ನಾಗಿಸಿ ಬಾಣಗಳನ್ನೇ ಕಿಡಿಯಾಗಿಸಿ ಕುರುಸೈನ್ಯವನ್ನು ಭಸ್ಮಮಾಡತೊಡಗಿದ. ಹದಿಮೂರನೆಯ ದಿನದ ಯುದ್ಧದಲ್ಲಿ ದ್ರೋಣಪುತ್ರ ಅಶ್ವತ್ಥಾಮನಿಗೆ ನೀಲರಾಜನು ಎದುರಾದನು. ಎರಡು ಅಗ್ನಿಪರ್ವತಗಳ ಘರ್ಷಣೆಯೋಪಾದಿಯಲ್ಲಿ ಪರಸ್ಪರ ಹೋರಾಟ ನಡೆಯಿತು. ಕೊನೆಯಲ್ಲಿ ಅಶ್ವತ್ಥಾಮನಿಂದ ಹತನಾಗಿ ಭೂಮಿಗೊರಗಿದನು.
ಅಂದಹಾಗೆ ಮಾಹಿಷ್ಮತಿ ಎಂದರೆ ಈಗಿನ ಮಧ್ಯಪ್ರದೇಶದ ಮಾಹೇಶ್ವರ!
❤️🌷🙏 ವಿಮಲ್ ನ್ಯೂಟ್ರಿಷನ್ ಸೆಂಟರ್ 🙏🌷❤️ #🎥 Motivational ಸ್ಟೇಟಸ್ #😍 ನನ್ನ ಸ್ಟೇಟಸ್ #✍️ ಮೋಟಿವೇಷನಲ್ ಕೋಟ್ಸ್ #👦🏻 Bad Boyz ಸ್ಟೇಟಸ್ #✍️ ಮೋಟಿವೇಷನಲ್ ಕೋಟ್ಸ್
ಮಧ್ಯಕಾಲೀನ ಯುಗದವರೆಗೂ "ಹಲ್ಲು ನೋವಿಗೆ ಹಲ್ಲಿನ ಒಳಗಿರುವ ಹುಳುಗಳೇ ಕಾರಣ" ಎಂಬ ತಪ್ಪು ನಂಬಿಕೆ ಜಗತ್ತಿನಾದ್ಯಂತ ಇತ್ತು. ಆದರೆ ಫ್ರೆಂಚ್ ನೌಕಾಪಡೆಯಲ್ಲಿ ಶಸ್ತ್ರಚಿಕಿತ್ಸಕ ವಿದ್ಯಾರ್ಥಿಯಾಗಿ ಸೇರಿಕೊಂಡಿದ್ದ "ಪಿಯರೆ ಫೌಚಾರ್ಡ್" ರವರಿಗೆ ಇದು ಸರಿಯೆನಿಸಲಿಲ್ಲ.! ಏಕೆಂದರೆ, ಹಡಗಿನಲ್ಲಿ ತಿಂಗಳುಗಟ್ಟಲೆ ಸಮುದ್ರಯಾನ ಮಾಡುವಾಗ ನಾವಿಕರು ಮತ್ತು ಕೆಲಸಗಾರರು ಅನುಭವಿಸುತ್ತಿದ್ದ ಹಲ್ಲಿನ ಸಮಸ್ಯೆಗಳನ್ನು ಸೂಕ್ಷ್ಮವಾಗಿ ಗಮನಿಸಿದ್ದ ಅವರಿಗೆ ಇದು"ಹುಳುಗಳ" ಕಾಟವಲ್ಲ ಎಂಬ ವಿಚಾರ ಸ್ಪಷ್ಟವಾಗಿತ್ತು.
ಅಂದಿನ ಕಾಲದಲ್ಲಿ ಯಾರಿಗಾದರೂ ಹಲ್ಲು ನೋವು ತೀವ್ರವಾದರೆ ಹಲ್ಲನ್ನು ಕೀಳುವುದೊಂದೇ ಪರಿಹಾರವಾಗಿತ್ತು. ಆಗ ಪ್ರತ್ಯೇಕ ದಂತವೈದ್ಯರೇ ಇರಲಿಲ್ಲವಾದ್ದರಿಂದ ಇಕ್ಕಳ ಬಳಸಿ ಹಲ್ಲು ಕೀಳುವ ಕೆಲಸವನ್ನು ಕ್ಷೌರಿಕರು ಮಾಡುತ್ತಿದ್ದರು. ಯುರೋಪಿನಲ್ಲಿ ಇವರನ್ನು 'ಬಾರ್ಬರ್ ಸರ್ಜನ್ಸ್' ಎಂದು ಕರೆಯುತ್ತಿದ್ದರು. ಹಲ್ಲು ಕೀಳುವುದಷ್ಟೇ ಮಾಡುತ್ತಿದ್ದ ಅವರ ಬಳಿ ಹಲ್ಲನ್ನು ಉಳಿಸುವ ಯಾವುದೇ ಉಪಾಯ ಅವರ ಬಳಿ ಇರಲಿಲ್ಲ.
ಇಂತಹ ಸಮಯದಲ್ಲಿ ಫೌಚಾರ್ಡ್ ಅವರು ಪ್ರಾಚೀನ ಕಾಲದಿಂದ ಎಲ್ಲರೂ ನಂಬಿದ್ದ "ಹಲ್ಲಿನ ಹುಳು" ಸಿದ್ಧಾಂತವನ್ನು ತಳ್ಳಿಹಾಕಿದರು. ಸೂಕ್ಷ್ಮದರ್ಶಕದ ಮೂಲಕ ಹಲ್ಲುಗಳನ್ನು ಪರೀಕ್ಷಿಸಿ, ಅಲ್ಲಿ ಯಾವುದೇ ಹುಳುಗಳಿಲ್ಲ ಬದಲಿಗೆ ಇದು ಕೆಟ್ಟ ಆಹಾರ ಪದ್ಧತಿ ಮತ್ತು ಸ್ವಚ್ಛತೆಯ ಕೊರತೆಯಿಂದ "ಹಲ್ಲಿನ ಮೇಲೆ ಉಳಿದುಕೊಂಡ ಸಕ್ಕರೆ ಮತ್ತು ಆಹಾರದ ಕಣಗಳು ಆಮ್ಲವಾಗಿ (Acid) ಪರಿವರ್ತನೆಯಾಗಿ, ಅದು ಹಲ್ಲಿನ ಗಟ್ಟಿಯಾದ ಪದರವನ್ನು (Enamel) ನಿಧಾನವಾಗಿ ಕರಗಿಸುವ ಮೂಲಕ ಹಲ್ಲಿನಲ್ಲಿ ಕುಳಿ ಉಂಟು ಮಾಡುತ್ತಿದೆ" ಎಂದು ಪ್ರತಿಪಾದಿಸಿದರು.
"ಪಿಯರೆ ಫೌಚಾರ್ಡ್" ರವರು 1678 ರಲ್ಲಿ ಫ್ರಾನ್ಸ್ನ ಬ್ರಿಟಾನಿ ಎಂಬಲ್ಲಿ ಒಂದು ಸಾಧಾರಣ ಕುಟುಂಬದಲ್ಲಿ ಜನಿಸಿದರು. ಓದಿನಲ್ಲಿ ಬಹಳ ಚುರುಕಾಗಿದ್ದ ಇವರು ತಮ್ಮ 15 ನೇ ವಯಸ್ಸಿನಲ್ಲಿ (1693) ಫ್ರೆಂಚ್ ರಾಯಲ್ ನೇವಿಯಲ್ಲಿ ಅಪ್ರೆಂಟಿಸ್ ಶಸ್ತ್ರಚಿಕಿತ್ಸಕನಾಗಿ ಸೇರಿದರು. ನೌಕಾಪಡೆಯಲ್ಲಿ ತರಬೇತಿ ಮುಗಿದ ನಂತರ ಪ್ಯಾರಿಸ್ಗೆ ತೆರಳಿದ ಇವರು, ಹಲ್ಲುಗಳನ್ನು ಕೇವಲ ಕಿತ್ತುಹಾಕುವ ಬದಲು ಅವುಗಳನ್ನು ಸಂರಕ್ಷಿಸುವ ಮತ್ತು ಚಿಕಿತ್ಸೆ ನೀಡುವ ಹೊಸ ಮಾರ್ಗಗಳನ್ನು ಜನರಿಗೆ ಪರಿಚಯಿಸಿದರು.
ಅಂದಿನ ಕಾಲದ ವೈದ್ಯರು ತಮ್ಮ ಚಿಕಿತ್ಸಾ ವಿಧಾನಗಳನ್ನು ರಹಸ್ಯವಾಗಿಡುತ್ತಿದ್ದರು. ಆದರೆ ಫೌಚಾರ್ಡ್ ಅವರು1728 ರಲ್ಲಿ 'Le Chirurgien Dentiste' ಎಂಬ ಪುಸ್ತಕದ ಮೂಲಕ ತಮ್ಮೆಲ್ಲಾ ಅನುಭವಗಳನ್ನು ಜಗತ್ತಿನ ಮುಂದೆ ತೆರೆದಿಟ್ಟರು. ದಂತವೈದ್ಯಶಾಸ್ತ್ರಕ್ಕೆ ಸಂಬಂಧಿಸಿದ ವಿಶ್ವದ ಮೊದಲ ವೈಜ್ಞಾನಿಕ ಕೈಪಿಡಿ ಅಥವಾ ಅಧಿಕೃತ ದಾಖಲೆ ಇದಾಗಿದೆ.
ಹಲ್ಲುಗಳಿಗೆ ನೀಡುವ ಫಿಲ್ಲಿಂಗ್ (Fillings) ವ್ಯವಸ್ಥೆಯನ್ನು ಇವರು ಪರಿಚಯಿಸಿದರು. ಮೊಟ್ಟಮೊದಲ ಬಾರಿಗೆ ಹಲ್ಲುಗಳನ್ನು ನೇರಗೊಳಿಸಲು ಬಳಸುವ ಬ್ರೇಸ್ಗಳ (Braces) ಮೂಲ ರೂಪವಾದ 'ಬ್ಯಾಂಡೋ' (Bandeau) ಅನ್ನು ಕಂಡುಹಿಡಿದರು.
ದಂತ ಕವಚಗಳನ್ನು (Dentures) ತಯಾರಿಸಲು ಆನೆ ದಂತ ಅಥವಾ ಮೂಳೆಗಳನ್ನು ಬಳಸುವ ವಿಧಾನವನ್ನು ಪ್ರಸಿದ್ಧಗೊಳಿಸಿದರು. ರೋಗಿಗಳಿಗೆ ಆರಾಮದಾಯಕವಾಗಿ ಚಿಕಿತ್ಸೆ ನೀಡಲು ದಂತ ವೈದ್ಯಕೀಯ ಕುರ್ಚಿ (Dental Chair) ಬಳಕೆಯನ್ನು ಮೊದಲು ಆರಂಭಿಸಿದವರಲ್ಲಿ ಇವರೂ ಒಬ್ಬರು.
ದಂತವೈದ್ಯರಾಗಿ ಆಗ ಅವರು ಎಷ್ಟು ಪ್ರಸಿದ್ಧರಾಗಿದ್ದರೆಂದರೆ, ಅಂದಿನ ಕಾಲದ ಫ್ರೆಂಚ್ ಶ್ರೀಮಂತರು ಮತ್ತು ರಾಜಮನೆತನದವರು ಅವರ ಬಳಿ ಚಿಕಿತ್ಸೆ ಪಡೆಯುತ್ತಿದ್ದರು .
ಫೌಚರ್ಡ್ ಅವರ ಕೆಲಸದಿಂದ ಪ್ರೇರಿತರಾಗಿ, ನಂತರದ ದಿನಗಳಲ್ಲಿ ಯುರೋಪ್ ಮತ್ತು ಅಮೆರಿಕಾದಲ್ಲಿ ದಂತವೈದ್ಯಕೀಯ ಶಾಲೆಗಳು ಆರಂಭವಾದವು..1844 ರಲ್ಲಿ ಹಲ್ಲು ಕೀಳುವಾಗ ನೋವಾಗದಂತೆ ತಡೆಯಲು 'ನೈಟ್ರಸ್ ಆಕ್ಸೈಡ್' ಅನಿಲವನ್ನು ಬಳಸಲು ಪ್ರಾರಂಭಿಸಲಾಯಿತು. 1895 ರಲ್ಲಿ ಕ್ಷ-ಕಿರಣಗಳ ಸಂಶೋಧನೆಯ ನಂತರ ಹಲ್ಲಿನ ಒಳಗಿನ ಸಮಸ್ಯೆಗಳನ್ನು ಪತ್ತೆ ಹಚ್ಚುವುದು ಸುಲಭವಾಯಿತು
ಭಾರತದಲ್ಲಿ ಆಧುನಿಕ ದಂತವೈದ್ಯಶಾಸ್ತ್ರವು ಡಾ. ರಫಿಯುದ್ದೀನ್ ಅಹ್ಮದ್ ಅವರಿಂದ ಪ್ರಾರಂಭವಾಯಿತು. ಇವರು 1920 ರಲ್ಲಿ ಕಲ್ಕತ್ತಾದಲ್ಲಿ ಮೊದಲ ದಂತ ಕಾಲೇಜನ್ನು ಸ್ಥಾಪಿಸಿದರು.
ದಂತವೈದ್ಯಕೀಯವನ್ನು ಕೇವಲ ಹಲ್ಲು ಕೀಳುವ " ಸಾಮಾನ್ಯ ವೃತ್ತಿ"ಯಿಂದ "ವೈದ್ಯಕೀಯ ವಿಜ್ಞಾನ"ದ ಹಂತಕ್ಕೆ ಏರಿಸಿದ ಪಿಯರೆ ಫೌಚಾರ್ಡ್" ರವರು ತಮ್ಮ ಅಧ್ಯಯನ ಮತ್ತು ಶಿಸ್ತಿನ ಮೂಲಕ ದಂತವೈದ್ಯರಿಗೆ ಸಮಾಜದಲ್ಲಿ ಗೌರವ ಸಿಗುವಂತೆ ಮಾಡಿದರು.
ಪಿಯರೆ ಫೌಚಾರ್ಡ್ ಅವರ ಜೀವನವು ಸೇವೆಯ ಮನೋಭಾವ, ಸಂಶೋಧನೆಯ ಹಸಿವು ಮತ್ತು ಪ್ರಾಮಾಣಿಕತೆಯ ಸಂಕೇತವಾಗಿದೆ. ಇಂದಿಗೂ ದಂತವೈದ್ಯಕೀಯ ವಿದ್ಯಾರ್ಥಿಗಳಿಗೆ ಇವರ ಸಾಧನೆಗಳು ದಾರಿದೀಪವಾಗಿವೆ. ಎಂತಹ ಕಷ್ಟದ ಪರಿಸ್ಥಿತಿಯಲ್ಲೂ ಸೃಜನಶೀಲತೆಯಿಂದ ಹೊಸ ದಾರಿಯನ್ನು ಕಂಡುಕೊಳ್ಳಬಹುದು ಎಂಬುದಕ್ಕೆ ಇವರೇ ಸಾಕ್ಷಿ.
❤️🌷🙏 ವಿಮಲ್ ನ್ಯೂಟ್ರಿಷನ್ ಸೆಂಟರ್ 🙏🌷❤️ #👦🏻 Bad Boyz ಸ್ಟೇಟಸ್ #✍️ ಮೋಟಿವೇಷನಲ್ ಕೋಟ್ಸ್ #😍 ನನ್ನ ಸ್ಟೇಟಸ್ #🎥 Motivational ಸ್ಟೇಟಸ್ #✍️ ಮೋಟಿವೇಷನಲ್ ಕೋಟ್ಸ್
#🎥 Motivational ಸ್ಟೇಟಸ್ #😍 ನನ್ನ ಸ್ಟೇಟಸ್ #✍️ ಮೋಟಿವೇಷನಲ್ ಕೋಟ್ಸ್ #👦🏻 Bad Boyz ಸ್ಟೇಟಸ್
ಕುಂತಿ - ಯುಧಿಷ್ಠಿರ, ಭೀಮ ಮತ್ತು ಅರ್ಜುನರ ತಾಯಿ.
ಕುಂತಿಯ ಜೀವನವು ಏರಿಳಿತಗಳಿಂದ ಕೂಡಿದ ರೋಲರ್ ಕೋಸ್ಟರ್ ಸವಾರಿಗಿಂತ ಕಡಿಮೆಯಿಲ್ಲ ಎಂದು ನಮಗೆಲ್ಲರಿಗೂ ತಿಳಿದಿದ್ದರೂ, ಆಕೆಯ ಜೀವನವನ್ನು ರೂಪಿಸಿದ ವಿವರಗಳು ನಮಗೆ ತಿಳಿದಿಲ್ಲ. ಕುಂತಿಭೋಜನ ರಾಜಕುಮಾರಿ ಕುಂತಿಯ ಸಂಕ್ಷಿಪ್ತ ಕಥೆ ಇಲ್ಲಿದೆ.
ಯಾದವ ಮುಖ್ಯಸ್ಥ ಶೂರಸೇನಳಿಗೆ ಕುಂತಿ ಪೃಥಳಾಗಿ ಜನಿಸಿದಳು. ಮಕ್ಕಳಿಲ್ಲದ ಚಿಕ್ಕಪ್ಪ ಕುಂತಿಭೋಜ ಅವಳನ್ನು ದತ್ತು ತೆಗೆದುಕೊಂಡು ಕುಂತಿ ಎಂದು ಮರುನಾಮಕರಣ ಮಾಡಿದಳು. ಅವಳನ್ನು ಕುಂತಿಭೋಜನ ಅದೃಷ್ಟಶಾಲಿ ಎಂದು ಪರಿಗಣಿಸಲಾಗುತ್ತಿತ್ತು ಮತ್ತು ಅವಳನ್ನು ಅತ್ಯಂತ ಪ್ರೀತಿ ಮತ್ತು ಗೌರವದಿಂದ ನಡೆಸಿಕೊಳ್ಳಲಾಗುತ್ತಿತ್ತು. ಒಂದು ದಿನ, ಋಷಿ ದೂರ್ವಾಸ ರಾಜ್ಯಕ್ಕೆ ಬಂದಿದ್ದನು ಮತ್ತು ಕುಂತಿಭೋಜ ಅವನನ್ನು ತನ್ನ ಅರಮನೆಗೆ ಆಹ್ವಾನಿಸಿದ್ದನು. ಕುಂತಿಯ ಭಕ್ತಿ ಮತ್ತು ಸೇವೆಯಿಂದ ದೂರ್ವಾಸನು ತುಂಬಾ ಪ್ರಭಾವಿತನಾಗಿ ಅವಳಿಗೆ ಅವಳು ಬಯಸುವ ಯಾವುದೇ ದೇವರಿಂದ ಮಗನನ್ನು ಪಡೆಯಲು ಅನುವು ಮಾಡಿಕೊಡುವ ದೈವಿಕ ಮಂತ್ರವನ್ನು ಆಶೀರ್ವದಿಸುತ್ತಾನೆ. ಕುಂತಿಯ ಕುತೂಹಲ ಮತ್ತು ಅಸಹನೆಯ ಸ್ವಭಾವವು ಮದುವೆಯಿಲ್ಲದೆ ಈ ಮಂತ್ರವನ್ನು ಪ್ರಯತ್ನಿಸುವಂತೆ ಮಾಡಿತು ಮತ್ತು ಅವಳು ಕರ್ಣನಿಗೆ ಜನ್ಮ ನೀಡಿದಳು , ನಂತರ ಅವನು ದುರದೃಷ್ಟಕರ ಜೀವನವನ್ನು ಕಳೆದನು.
ಕುಂತಿ ತನ್ನ ಸ್ವಯಂವರದಲ್ಲಿ ಪಾಂಡುವನ್ನೇ ಆರಿಸಿಕೊಂಡಳು. ಒಂದು ದಿನ, ಪಾಂಡು ಕಾಡಿಗೆ ಬೇಟೆಯಾಡಲು ಹೋದನು, ಅಲ್ಲಿ ಅವನು ಎರಡು ಸಂಯೋಗ ಜಿಂಕೆಗಳನ್ನು ಕೊಂದನು, ಅವು ವಾಸ್ತವವಾಗಿ ಋಷಿ ಕಿಂದಮ ಮತ್ತು ಅವನ ಪತ್ನಿಯಾಗಿದ್ದವು. ಸಾಯುತ್ತಿರುವ ಋಷಿ ಕಿಂದಮನು ತನ್ನ ಹೆಂಡತಿಯೊಂದಿಗೆ ಪ್ರೇಮಿಸಲು ಪ್ರಯತ್ನಿಸಿದಾಗಲೆಲ್ಲಾ ಅವನು ಸಾಯುತ್ತಾನೆ ಎಂದು ಶಪಿಸಿದನು. ಪಾಂಡು ಇದರ ಹೊರೆಯನ್ನು ಸಹಿಸಲಾರದೆ ತನ್ನ ಇಬ್ಬರು ಹೆಂಡತಿಯರೊಂದಿಗೆ ವನವಾಸಕ್ಕೆ ಹೋದನು. ಅವರು ಗುರುಗಳನ್ನು ಭೇಟಿಯಾದರು ಮತ್ತು ಮಕ್ಕಳನ್ನು ಪಡೆಯದೆ ಸ್ವರ್ಗದಲ್ಲಿ ಸ್ಥಾನ ಪಡೆಯಲು ಸಾಧ್ಯವಿಲ್ಲ ಎಂದು ಅರಿತುಕೊಂಡರು. ಆಗ ಕುಂತಿ ಅವರಿಗೆ ದೈವಿಕ ಮಂತ್ರವನ್ನು ನೆನಪಿಸುತ್ತಾಳೆ. ಅವಳು ಯುಧಿಷ್ಠಿರ, ಅರ್ಜುನ ಮತ್ತು ಭೀಮನಿಗೆ ಜನ್ಮ ನೀಡುತ್ತಾಳೆ, ಆದರೆ ಮಾದ್ರಿ ಅದೇ ಮಂತ್ರದಿಂದ ನಕುಲ ಮತ್ತು ಸಹದೇವನಿಗೆ ಜನ್ಮ ನೀಡುತ್ತಾಳೆ.
ಪಾಂಡು ಮಾದ್ರಿಯನ್ನು ಪ್ರೀತಿಸಲು ಪ್ರಯತ್ನಿಸಿದ ಮತ್ತು ತನ್ನ ಶಾಪವನ್ನು ಮರೆತುಬಿಟ್ಟನು, ಅದು ಅವನನ್ನು ಸಾಯುವಂತೆ ಮಾಡಿತು. ಮಾದ್ರಿಯೂ ತನ್ನ ಸಾವಿಗೆ ಕಾರಣನೆಂದು ಭಾವಿಸಿ ಆತ್ಮಹತ್ಯೆ ಮಾಡಿಕೊಂಡನು. ಕುಂತಿ ತನ್ನ ಐದು ಗಂಡು ಮಕ್ಕಳೊಂದಿಗೆ ಉಳಿದು ನಂತರ ಹಸ್ತಿನಾಪುರಕ್ಕೆ ಹಿಂತಿರುಗಿದಳು. ಅವರನ್ನು ಚೆನ್ನಾಗಿ ಸ್ವೀಕರಿಸಲಿಲ್ಲ ಆದರೆ ಅವರನ್ನು ಸ್ವಾಗತಿಸಲಾಯಿತು. ಕುಂತಿ ಅವರಿಗೆ ರಾಜಕುಮಾರರಂತೆ ಎಲ್ಲಾ ತರಬೇತಿ ಮತ್ತು ಹಕ್ಕುಗಳು ಸಿಗುವಂತೆ ನೋಡಿಕೊಂಡಳು.
ಪಾಂಡವರು ಗಡಿಪಾರು ಮಾಡುವಾಗ ರಾಜಧಾನಿಯಲ್ಲಿಯೇ ಇರಲು ಅವಳಿಗೆ ಆದೇಶಿಸಲಾಯಿತು ಆದರೆ ಅವಳು ಅರಮನೆಯ ಬದಲು ವಿದುರನ ಅರಮನೆಯನ್ನು ಆರಿಸಿಕೊಂಡಳು. ಭೀಮನು ಕಾಡಿನಲ್ಲಿ ಹಿಡಿಂಬಳನ್ನು ಮದುವೆಯಾಗುವಂತೆ ಅವಳು ಖಚಿತಪಡಿಸಿಕೊಂಡಳು, ಇದು ಯುದ್ಧದಲ್ಲಿ ಮಹತ್ವದ ಪಾತ್ರ ವಹಿಸಿದ ಘಟೋತ್ಕಚನ ಜನನಕ್ಕೆ ಕಾರಣವಾಯಿತು.
ಇತರ ಎಲ್ಲಾ ರಾಜಕುಮಾರರನ್ನು ಸೋಲಿಸಿ ದ್ರೌಪದಿಯನ್ನು ಮೆಚ್ಚಿಸಿ ಅರ್ಜುನ ಹಿಂತಿರುಗಿದಾಗ, ಕುಂತಿಗೆ ತಾನು ಭಿಕ್ಷೆ ಖರೀದಿಸಿದ್ದೇನೆಂದು ಹೇಳಿದನು, ಅದನ್ನು ಕುಂತಿ ಐದು ಸಹೋದರರಲ್ಲಿ ಹಂಚಿಕೊಳ್ಳಲು ಆದೇಶಿಸಿದಳು. ಆಗ ಕುಂತಿ ತನ್ನ ತಪ್ಪನ್ನು ಅರಿತುಕೊಂಡಳು ಆದರೆ ದ್ರೌಪದಿ ಇದನ್ನೇ ತನ್ನ ಅದೃಷ್ಟವೆಂದು ಒಪ್ಪಿಕೊಂಡಳು.
ಯುದ್ಧ ಪ್ರಾರಂಭವಾಗುವ ಸ್ವಲ್ಪ ಮೊದಲು, ಕುಂತಿ ಕರ್ಣನ ಬಳಿಗೆ ಹೋಗಿ ತನ್ನ ಸತ್ಯವನ್ನು ಅವಳಿಗೆ ಬಹಿರಂಗಪಡಿಸಿದಳು. ಕರ್ಣನಿಗೆ ಹೃದಯ ಮುರಿದುಹೋಯಿತು ಆದರೆ ಅವನು ಪಾಂಡವರ ಜೊತೆ ಇರುವುದಿಲ್ಲ ಎಂದು ಹೇಳಿದನು. ಬದಲಾಗಿ, ಯುದ್ಧದಲ್ಲಿ ಅರ್ಜುನನನ್ನು ಮಾತ್ರ ಕೊಲ್ಲುತ್ತೇನೆ ಮತ್ತು ಬೇರೆ ಯಾರಿಗೂ ಹಾನಿ ಮಾಡುವುದಿಲ್ಲ ಎಂದು ಭರವಸೆ ನೀಡಿದನು.
ಪಾಂಡವರ ಪರವಾಗಿದ್ದರೂ, ಗಾಂಧಾರಿ ಎಂದಿಗೂ ಒಂಟಿತನ ಅನುಭವಿಸದಂತೆ ನೋಡಿಕೊಳ್ಳಲು ಕುಂತಿ ಯಾವಾಗಲೂ ಗಾಂಧಾರಿಯೊಂದಿಗೆ ಇರುತ್ತಿದ್ದಳು. ನಂತರ, ಕುಂತಿ ಕರ್ಣನ ಬಗ್ಗೆ ಪಾಂಡವರಿಗೆ ಸತ್ಯವನ್ನು ಬಹಿರಂಗಪಡಿಸಿದಳು ಮತ್ತು ಎಲ್ಲಾ ಪಾಂಡವರು ತಮ್ಮ ಸಹೋದರನ ಕೊಲೆಯನ್ನು ಮಾಡಿದ ಅಪರಾಧಿ ಭಾವನೆಯನ್ನು ಅನುಭವಿಸಿದರು. ಯುಧಿಷ್ಠಿರನು ತನ್ನ ತಾಯಿಯಿಂದ ಇದನ್ನು ಕೇಳಿದ ಯಾವುದೇ ಮಹಿಳೆಯರು ರಹಸ್ಯಗಳನ್ನು ಮರೆಮಾಡಲು ಸಾಧ್ಯವಾಗುವುದಿಲ್ಲ ಎಂದು ಶಪಿಸಿದನು.
ಕೊನೆಗೆ ಅವಳು ಸಂಜಯ, ವಿದುರ, ಧೃತರಾಷ್ಟ್ರ ಮತ್ತು ಗಾಂಧಾರಿಯೊಂದಿಗೆ ಹಿಮಾಲಯಕ್ಕೆ ಹೊರಟು ಅಲ್ಲಿ ಕಾಡಿನ ಬೆಂಕಿಯಲ್ಲಿ ಸಾವನ್ನಪ್ಪಿದಳು.
❤️🌷🙏 ವಿಮಲ್ ನ್ಯೂಟ್ರಿಷನ್ ಸೆಂಟರ್ 🙏🌷❤️ #👦🏻 Bad Boyz ಸ್ಟೇಟಸ್ #✍️ ಮೋಟಿವೇಷನಲ್ ಕೋಟ್ಸ್ #😍 ನನ್ನ ಸ್ಟೇಟಸ್ #🎥 Motivational ಸ್ಟೇಟಸ್ #✍️ ಮೋಟಿವೇಷನಲ್ ಕೋಟ್ಸ್
ನಾರದ_ಪರ್ವತರ_ಉಪಾಖ್ಯಾನ******
ನಾರದ ಮತ್ತು ಪರ್ವತ ಋಷಿಗಳಿಗೆ ಒಮ್ಮೆ ಭೂಲೋಕ ವಿಹಾರ ಮಾಡಬೇಕೆಂಬ ಬಯಕೆಯುಂಟಾಯಿತು. ಹಾಗೆ ಭೂಚರರಾಗಿ ಸ್ವೇಚ್ಛೆಯಿಂದ ತಿರುಗಾಡುತ್ತಿದ್ದರು. ನಾರದರು ಸೋದರಮಾವ ಮತ್ತು ಪರ್ವತ ಋಷಿಯು ಅವರ ಸೋದರಳಿಯ. ಪರಸ್ಪರ ಪ್ರೀತಿಯುಳ್ಳವರಾಗಿ ಅನ್ಯೋನ್ಯವಾಗಿದ್ದರಿಂದ ಇಬ್ಬರ ಮನಸ್ಸಿನಲ್ಲಿ ಯಾವುದೇ ವಿಧವಾದ ಸಂಕಲ್ಪ ಹುಟ್ಟಿದರೂ ಅದು ಒಳ್ಳೆಯದೇ ಆಗಲೀ, ಕೆಟ್ಟದೇ ಆಗಿರಲಿ ಪರಸ್ಪರ ಮುಚ್ಚಿಡದೇ ಒಬ್ಬರಿಗೊಬ್ಬರು ಹೇಳಲೇಬೇಕು, ಯಾರೇ ತಪ್ಪಿದಲ್ಲಿ ಶಾಪಕ್ಕೆ ಭಾಜನರಾಗಬೇಕಾಗುವುದು ಎಂಬ ಪ್ರತಿಜ್ಞೆ ಮಾಡಿದರು. ಹೀಗೆ ನಾರದ-ಪರ್ವತರು ಸಂಚರಿಸುತ್ತ ಸೃಂಜಯರಾಜನ ಅರಮನೆಯಲ್ಲಿ ಸ್ವಲ್ಪಕಾಲ ತಂಗಲು ನಿಶ್ಚಯಿಸಿದರು. ಸೃಂಜಯನು ಋಷಿದ್ವಯರಿಗೆ ಅರ್ಘ್ಯಪಾದ್ಯಾದಿಗಳನ್ನಿತ್ತು ಯಥೋಚಿತವಾಗಿ ಸತ್ಕರಿಸಿ ಮುನಿಗಳ ವಾಸ್ತವ್ಯಕ್ಕೆ ಅನುವು ಮಾಡಿಕೊಟ್ಟನು ಮತ್ತು ತನ್ನ ಏಕಮಾತ್ರ ಪುತ್ರಿಯಾದ ಸುಶೀಲೆಯೂ ಗುಣವತಿಯೂ ಆದ ‘ಸುಕುಮಾರಿ’ ಯನ್ನು ಮಹರ್ಷಿಗಳ ಸೇವೆಗಾಗಿ ನಿಯೋಜಿಸಿದನು. ಸೃಂಜಯನ ಮಗಳ ಅಪ್ರತಿಮ ರೂಪದಿಂದಾಗಿ ಮತ್ತು ಸೇವೆಯಿಂದ ನಾರದರಿಗೆ ಆಕೆಯ ಮೇಲೆ ಪ್ರೀತಿ ಹುಟ್ಟಿತು. ನಾಚಿಕೆಯಿಂದಾಗಿ ತಮ್ಮ ಹೃದಯದಲ್ಲಿದ್ದ ಪ್ರೀತಿಯ ವಿಷಯವನ್ನು ಪರ್ವತರಲ್ಲಿ ಹೇಳಲಿಲ್ಲ. ಆದರೆ ನಾರದರ ನಡುವಳಿಕೆಯಲ್ಲಾದ ಬದಲಾವಣೆ ಹಾಗೂ ತಮ್ಮ ತಪಃಪ್ರಭಾವದಿಂದ ಪರ್ವತರಿಗೆ ನಾರದ ಮನಸ್ಸಿನಲ್ಲುಂಟಾಗುತ್ತಿದ್ದ ಪ್ರೇಮದ ವಿಚಾರ ಅರ್ಥವಾಯಿತು. ತಮ್ಮಿಬ್ಬರ ಮಧ್ಯೆ ಆದ ಪ್ರತಿಜ್ಞೆಯನ್ನು ನಾರದರು ಮೀರಿದ್ದರಿಂದ ಕ್ರುದ್ಧರಾಗಿ “ನೀನು ಮೋಹಿಸಿರುವ ಸುಕುಮಾರಿಯನ್ನು ನೀನು ವಿವಾಹವಾದ ಕೂಡಲೇ ನಿನಗೆ ಕಪಿರೂಪ ಬರುತ್ತದೆ” ಎಂದು ಶಪಿಸಿದರು. ಪರ್ವತರ ಶಾಪವಾಕ್ಯವನ್ನು ಕೇಳಿದ ಕೂಡಲೇ ಸೋದರಮಾವನಾದ ನಾರದರಿಗೂ ಕೋಪವುಂಟಾಗಿ “ನೀನು ಮಹಾ ತಪೋಧನನೇ ಆಗಿದ್ದು, ಧರ್ಮಪರಾಯಣನೇ ಆದರೂ ನಿನಗೆ ಸ್ವರ್ಗಪ್ರಾಪ್ತಿಯಿಲ್ಲ” ಎಂದು ಪ್ರತಿಶಾಪವನ್ನಿತ್ತು. ಪರಸ್ಪರ ಶಪಿಸಿಕೊಂಡು ಕೋಪದಿಂದ ಬುಸುಗುಡುತ್ತಾ ವಿರುದ್ಧ ದಿಕ್ಕುಗಳಲ್ಲಿ ಹೊರಟುಹೋದರು!
ಸೃಂಜಯನು ಅತೀವ ಭಕ್ತಿಯಿಂದ ಪುತ್ರಿ ಸುಕುಮಾರಿಯನ್ನು ವೇದೋಕ್ತವಾಗಿ ನಾರದರಿಗೆ ವಿವಾಹ ಮಾಡಿಕೊಟ್ಟ. ವಿವಾಹವಿಧಿಗಳು ಮುಗಿದ ಕೂಡಲೇ ಶಾಪಪ್ರಭಾವದಿಂದಾಗಿ ಸುಕುಮಾರಿಯು ನಾರದರನ್ನು ಮಂಗದ ರೂಪದಲ್ಲಿ ಕಂಡಳು. ಅವಳಿಗೆ ಅಚ್ಚರಿಯಾದರೂ ಅವರನ್ನು ಅವಹೇಳನ ಮಾಡಲಿಲ್ಲ. ನಾರದರ ವಿಕಾರವಾದ ಮುಖವನ್ನು ಕಂಡಮೇಲೆಯೂ ಯಾವುದೇ ವ್ಯತ್ಯಾಸವಿಲ್ಲದಂತೆ ಬಹುವಾಗಿ ಪ್ರೀತಿಸತೊಡಗಿದಳು. ಪತಿಯ ಸೇವೆಯಲ್ಲಿಯೇ ಸದಾ ತೊಡಗಿಕೊಂಡಿದ್ದಳು. ಸ್ವಲ್ಪಕಾಲ ಕಳೆಯಿತು. ಒಮ್ಮೆ ಲೋಕಸಂಚಾರ ಮಾಡುತ್ತಾ ಬಂದ ಪರ್ವತರು ಕಪಿರೂಪದಲ್ಲಿದ್ದ ನಾರದರನ್ನು ಸಂದರ್ಶಿಸಿದರು. ಶಾಪದ ಪ್ರಭಾವದಿಂದ ಅವರೂ ಸಹ ಭೂಮಿಯನ್ನು ಬಿಟ್ಟು ಸ್ವರ್ಗಕ್ಕೆ ಹೋಗಲಾರದ ಪರಿಸ್ಥಿತಿಯಲ್ಲಿ ಸಿಲುಕಿಕೊಂಡಿದ್ದರು. ಸೋದರಮಾವನನ್ನು ಕಂಡ ಕೂಡಲೇ ನಮಸ್ಕರಿಸಿ ತಮ್ಮ ತಪ್ಪನ್ನು ಮನ್ನಿಸುವಂತೆ ಬೇಡಿಕೊಂಡರು. ನಾರದರಿಗೂ ಪುತ್ರಸಮಾನನಾದ ಸೋದರಳಿಯನನ್ನು ಕೋಪದಿಂದ ಶಪಿಸಿದೆನಲ್ಲ ಎಂಬ ಮರುಕವುಂಟಾಯಿತು. ನಾರದ-ಪರ್ವತರು ತಾವು ಮಾಡಿದ ಅಕಾರ್ಯಕ್ಕೆ ಪಶ್ಚಾತ್ತಾಪಪಟ್ಟು ಪರಸ್ಪರ ಶಾಪಗಳನ್ನು ನಿವೃತ್ತಿಗೊಳಿಸಿದರು. ನಾರದರಿಗೆ ಮಂಗನ ಮುಖವೂ ಹೋಯಿತು, ಪರ್ವತರಿಗೆ ಸ್ವರ್ಗಕ್ಕೆ ಹೋಗಲು ಸಾಧ್ಯವಾಯಿತು.
ಕಪಿಯ ಮುಖ ಹೋಗಿ ದೇವರೂಪಿಗಳಾದ ನಾರದರನ್ನು ನೋಡಿ ಸುಕುಮಾರಿಯು ಪರಪುರುಷನೆಂದು ಭ್ರಮೆಗೊಂಡು ಓಡಿಹೋಗಲು ಮುಂದಾದಳು! ಓಡುತ್ತಿದ್ದ ಅವಳನ್ನು ಪರ್ವತರು ಕೂಗಿ ನಿಲ್ಲಿಸಿ ನಡೆದ ವಿಷಯವನ್ನೆಲ್ಲ ಅರುಹಿದರು. ಶಾಪದದೋಷದಿಂದ ತನ್ನ ಪತಿಗೆ ಮಂಗದ ಮುಖ ಬಂದದ್ದನ್ನು ಪರ್ವತರಿಂದ ತಿಳಿದ ರಾಜಕುಮಾರಿಯು ಹೃಷ್ಟಳಾದಳು. ಇತ್ತ ಪರ್ವತರು ಸ್ವರ್ಗಕ್ಕೆ ಪ್ರಯಾಣಿಸಿದರು, ನಾರದರು ಪತ್ನಿಯೊಡನೆ ಸ್ವಗೃಹಕ್ಕೆ ತೆರಳಿದರು. ಪ್ರಕರಣ ಸುಖಾಂತ್ಯವಾಯಿತು!
❤️🌷🙏 ವಿಮಲ್ ನ್ಯೂಟ್ರಿಷನ್ ಸೆಂಟರ್ 🙏🌷❤️ #🎥 Motivational ಸ್ಟೇಟಸ್ #😍 ನನ್ನ ಸ್ಟೇಟಸ್ #✍️ ಮೋಟಿವೇಷನಲ್ ಕೋಟ್ಸ್ #👦🏻 Bad Boyz ಸ್ಟೇಟಸ್ #✍️ ಮೋಟಿವೇಷನಲ್ ಕೋಟ್ಸ್
*ಊಟದ ತಟ್ಟೆಯಲ್ಲಿ ಎಂಜಲು ಬಿಡಬಾರದು**
ರಾಮಾಯಣದ ಪ್ರಕಾರ, ಸೀತೆಯ ಹುಡುಕಾಟದ ಸಮಯದಲ್ಲಿ ಹನುಮಂತನು ರಾವಣನ ಅಡುಗೆಮನೆಯನ್ನು ಪ್ರವೇಶಿಸಿದಾಗ, ರಾವಣನ ಎಂಜಲು ತಟ್ಟೆಯನ್ನು ನೋಡಿ ಅವನ ಸಾವು ಹತ್ತಿರದಲ್ಲಿದೆ ಎಂದು ಹನುಮಂತನಿಗೆ ಅರ್ಥವಾಯಿತು. ಏಕೆಂದರೆ ರಾವಣನು ತನ್ನ ತಟ್ಟೆಯಲ್ಲಿ ಮೊಸರನ್ನು ಎಂಜಲು ಬಿಟ್ಟಿದ್ದನು.
ಊಟದಲ್ಲಿ ಎಂಜಲು ಬಿಡುವವರ ಆಯಸ್ಸು ಕ್ಷೀಣಿಸುತ್ತಾ ಹೋಗುತ್ತದೆ. ಬಹುಶಃ ಇದೇ ಕಾರಣಕ್ಕಾಗಿ ನಮ್ಮ ಪೂರ್ವಜರು ಊಟವಾದ ನಂತರ ತಟ್ಟೆಗೆ ನೀರು ಹಾಕಿ, ಉಳಿದ ಅನ್ನದ ಕಣಗಳನ್ನು ಕಲಕಿ ಕುಡಿಯುತ್ತಿದ್ದರು.
**ವಿದ್ವಾಂಸರ ಪ್ರಕಾರ:** ತಟ್ಟೆಯಲ್ಲಿ ಆಹಾರವನ್ನು ವ್ಯರ್ಥ ಮಾಡುವುದು ಅನ್ನಪೂರ್ಣೇಶ್ವರಿ ಮತ್ತು ಲಕ್ಷ್ಮಿ ದೇವಿಗೆ ಮಾಡುವ ಅಪಮಾನವೆಂದು ಪರಿಗಣಿಸಲಾಗುತ್ತದೆ. ಹೀಗೆ ಮಾಡುವುದರಿಂದ ಆರ್ಥಿಕ ಪರಿಸ್ಥಿತಿ ದುರ್ಬಲಗೊಳ್ಳುತ್ತದೆ, ಅಷ್ಟೇ ಅಲ್ಲದೆ ಮನೆಗೆ ಬರುವ ಲಕ್ಷ್ಮೀಯು ಮುನಿಸಿಕೊಂಡು ಹೊರಟು ಹೋಗುತ್ತಾಳೆ.
**ಮಕ್ಕಳ ಮೇಲೆ ಪ್ರಭಾವ:** ಊಟವನ್ನು ಎಂಜಲು ಮಾಡುವ ಮಕ್ಕಳು ಓದಿನಲ್ಲಿ ಹಿಂದುಳಿಯುತ್ತಾರೆ. ಮನಸ್ಸು ಮೆಲ್ಲನೆ ಓದಿನಿಂದ ಸಂಪೂರ್ಣವಾಗಿ ವಿಮುಖವಾಗುತ್ತದೆ. ಆದ್ದರಿಂದ ಮಕ್ಕಳಿಗೆ ಮೊದಲ ಬಾರಿಗೆ ಅವರು ಎಷ್ಟು ತಿನ್ನಬಲ್ಲರೋ ಅಷ್ಟನ್ನೇ ಬಡಿಸಿ.
**ಗ್ರಹ ದೋಷಗಳು:** ತಟ್ಟೆಯಲ್ಲಿ ಆಹಾರವನ್ನು ಉಳಿಸುವುದರಿಂದ ಶನಿ ದೇವನ ಕೋಪಕ್ಕೆ ತುತ್ತಾಗಬೇಕಾಗಬಹುದು. ಇದರೊಂದಿಗೆ ಚಂದ್ರನ ಅಶುಭ ದೃಷ್ಟಿಯೂ ವ್ಯಕ್ತಿಯ ಜೀವನದ ಮೇಲೆ ಬೀಳತೊಡಗುತ್ತದೆ. ಚಂದ್ರನ ಅಶುಭ ಪ್ರಭಾವದಿಂದಾಗಿ ಮಾನಸಿಕ ಕಾಯಿಲೆಗಳು ಕೂಡ ವ್ಯಕ್ತಿಯನ್ನು ಆವರಿಸಿಕೊಳ್ಳಬಹುದು.
ಇದಲ್ಲದೆ, ನೀವು ಪ್ರಯಾಣದ ಸಮಯದಲ್ಲಿ ಎಂಜಲು ಆಹಾರವನ್ನು ಎಸೆದರೆ, ನಿಮ್ಮ ಕೆಲಸಗಳು ಎಂದಿಗೂ ಪೂರ್ಣಗೊಳ್ಳುವುದಿಲ್ಲ ಅಥವಾ ಆಗುವ ಕೆಲಸಗಳು ಕೂಡ ಕೆಡಲು ಪ್ರಾರಂಭಿಸುತ್ತವೆ.
ತಟ್ಟೆಯಲ್ಲಿ ಆಹಾರವನ್ನು ವ್ಯರ್ಥ ಮಾಡುವುದರಿಂದ ವ್ಯಕ್ತಿಯು ಪಾಪದ ಭಾಗಿಯಾಗುತ್ತಾನೆ. ಆದ್ದರಿಂದ ತಟ್ಟೆಯಲ್ಲಿ ಎಷ್ಟು ಬೇಕೋ ಅಷ್ಟನ್ನೇ ಹಾಕಿಕೊಳ್ಳಬೇಕು ಮತ್ತು ಆಹಾರವು ಎಂದಿಗೂ ವ್ಯರ್ಥವಾಗದಂತೆ ನೋಡಿಕೊಳ್ಳಬೇಕು. ಒಂದು ವೇಳೆ ಯಾವುದೋ ಕಾರಣದಿಂದ ಆಹಾರ ಉಳಿದುಹೋದರೆ, ಕೈಮುಗಿದು ಅನ್ನಪೂರ್ಣೇಶ್ವರಿಯ ಬಳಿ ಕ್ಷಮೆ ಕೇಳಿ.
**ತುಂಬಾ ಒಳ್ಳೆಯ ಮಾತು:** *"ತಿನ್ನಿ ಮಣದಷ್ಟು, ಬಿಡಬೇಡಿ ಕಣದಷ್ಟು"*
*"ಅಷ್ಟೇ ಹಾಕಿ ತಟ್ಟೆಯಲ್ಲಿ"*
*"ವ್ಯರ್ಥವಾಗಿ ಹೋಗದಿರಲಿ ಚರಂಡಿಯಲ್ಲಿ"*
❤️🌷🙏 ವಿಮಲ್ ನ್ಯೂಟ್ರಿಷನ್ ಸೆಂಟರ್ 🙏🌷❤️ #👦🏻 Bad Boyz ಸ್ಟೇಟಸ್ #✍️ ಮೋಟಿವೇಷನಲ್ ಕೋಟ್ಸ್ #😍 ನನ್ನ ಸ್ಟೇಟಸ್ #🎥 Motivational ಸ್ಟೇಟಸ್ #✍️ ಮೋಟಿವೇಷನಲ್ ಕೋಟ್ಸ್
ಒಂದಕ್ಷರ_ಒತ್ತೆಯಿಟ್ಟ_ಕವಿ…...
ಋಣಂ ಕೃತ್ವಾ ಘೃತಂ ಪಿಬೇತ್ – ಇದು ಚಾರ್ವಾಕ ಮತ. ಸಾಲ ಮಾಡಿಯಾದರೂ ತುಪ್ಪ ತಿನ್ನು ಎಂಬುದು ಉಪದೇಶಕ್ಕೇನೋ ಚೆನ್ನಾಗಿ ಕೇಳಿಸುತ್ತದಾದರೂ, ವ್ಯವಹಾರಕ್ಕೆ ಸೂಕ್ತವಲ್ಲ.
ಕೆಲವೊಮ್ಮೆ ಅನಿವಾರ್ಯವಾಗಿ ಸಾಲ ಮಾಡಬೇಕಾದ ಸಂದರ್ಭಗಳು ಬರುತ್ತವೆ. ಕಷ್ಟ ಬಂದಾಗ ಅಪಾತ್ರರ ಮುಂದೆಯೂ ಹಿಡಿಜೀವ ಮಾಡಿಕೊಂಡು ಕೈಯೊಡ್ಡುವ ಅನಿವಾರ್ಯತೆ. ಸಾಲ ಕೊಂಬುದಕ್ಕಿಂತ ಕಡಿಮೆ ಅವಮಾನದ ಕೆಲಸವೆಂದರೆ, ಒತ್ತೆ ಇಡುವುದು. ಧರ್ಮರಾಯ ತನ್ನ ಖಜಾನೆ, ರಾಜಧಾನಿ, ರಾಜ್ಯ, ಪ್ರಜೆಗಳು, ತಮ್ಮಂದಿರು ಮತ್ತು ಕೊನೆಗೆ ಪತ್ನಿಯನ್ನೂ ಒತ್ತೆಯಿಟ್ಟು ಪಗಡೆಯಾಡಿದ್ದು ಪ್ರಸಿದ್ಧವಷ್ಟೆ?
ಭಾರವಿ ಎಂಬ ಸಂಸ್ಕೃತ ಕವಿ, ದುಡ್ಡಿನ ಅವಶ್ಯಕತೆ ಬಿದ್ದಾಗ ಒಂದು ಪದ್ಯ ಬರೆದು, ಅದನ್ನು ಒತ್ತೆಯಿಟ್ಟು ಸಾಲ ಪಡೆದಿದ್ದನಂತೆ. ಹಾಗೆಯೇ, ತನ್ನ ಸ್ವಂತದ ಅಮೂಲ್ಯ ಸಂಗತಿಯೊಂದನ್ನು ಒತ್ತೆ ಇಟ್ಟು ಸಾವಿರ ಹೊನ್ನ ನಾಣ್ಯಗಳನ್ನು ಸಂಪಾದಿಸಿದವನು ಕವಿ ರುದ್ರಭಟ್ಟ. 9ನೆಯ ಶತಮಾನದಲ್ಲಿ ಕಾಶ್ಮೀರದಲ್ಲಿದ್ದ ಮತ್ತು ಕಾವ್ಯಾಲಂಕಾರ ಎಂಬ ಲಕ್ಷಣಗ್ರಂಥವನ್ನು ಬರೆದ ಭಾಷಾಶಾಸ್ತ್ರಿಯೊಬ್ಬ; 12ನೆಯ ಶತಮಾನದಲ್ಲಿ ಕರ್ನಾಟಕದಲ್ಲಿದ್ದ ಮತ್ತು ಜಗನ್ನಾಥ ವಿಜಯ ಕಾವ್ಯವನ್ನು ಬರೆದ ಕವಿಯೊಬ್ಬ – ಇಬ್ಬರ ಹೆಸರಲ್ಲೂ ಈ ಒತ್ತೆಯ ಕಥೆ ಪ್ರಚಲಿತದಲ್ಲಿರುವುದರಿಂದ, ನಿಖರವಾಗಿ ಯಾರ ಜೀವನದಲ್ಲಿ ನಡೆದ್ದರೆಂದು ಹೇಳುವುದು ಕಷ್ಟವೇ.
ನಡೆದದ್ದಿಷ್ಟು: ರುದ್ರಭಟ್ಟ ಮಹಾವಿದ್ವಾಂಸ. ರಾಜನ ಆಸ್ಥಾನದಲ್ಲಿದ್ದು ಕಾಲಕಾಲಕ್ಕೆ ತನ್ನ ಪಾಂಡಿತ್ಯಕ್ಕೆ ತಕ್ಕ ಮನ್ನಣೆಯನ್ನು ಧನ-ಕನಕಗಳ ರೂಪದಲ್ಲಿ ಸಂಪಾದಿಸಿದವನು. ಅಷ್ಟಿದ್ದರೂ ಅದೊಂದು ಸಂದರ್ಭದಲ್ಲಿ, ಕವಿಗೆ ಸಾವಿರ ಹೊನ್ನಿನ ಅವಶ್ಯಕತೆ ಬಿತ್ತು.
ಒಬ್ಬ ಸಾಹುಕಾರನಲ್ಲಿಗೆ ಹೋದ. ಸಾಲ ಪಡೆಯಬೇಕಾದರೆ ಏನನ್ನಾದರೂ ಒತ್ತೆ ಇಡಬೇಕಲ್ಲ? ಕವಿಯ ಜೀವನ ಆ ಸಂದರ್ಭದಲ್ಲಿ ಅದೆಷ್ಟು ದುರ್ಭರವಾಗಿತ್ತೆಂದರೆ, ಅಡವಿಡಲು ಯಾವೊಂದು ಅಮೂಲ್ಯ ಸಂಗತಿಯೂ ಕೈಯಲ್ಲಿರಲಿಲ್ಲ. ಸರಿ, ತನ್ನಿಂದ ಕೊಡಬಹುದಾದದ್ದನ್ನಷ್ಟೇ ಕೊಡೋಣ ಎಂದುಕೊಂಡ ರುದ್ರಭಟ್ಟ, ತನ್ನ ಹೆಸರಿನ ಮೂರನೆಯ ಅಕ್ಷರವನ್ನು ಒತ್ತೆಯಿಟ್ಟ! ಅರ್ಥಾತ್ ಭ ಎಂಬ ಅಕ್ಷರವನ್ನು ಸಾಹುಕಾರನಲ್ಲಿ ಒತ್ತೆಯಿಟ್ಟು ದುಡ್ಡು ಪಡೆದ.
ಆ ದುಡ್ಡನ್ನು ಮರಳಿಸುವವರೆಗೂ ತಾನು ಕಾವ್ಯದಲ್ಲಾಗಲೀ ವ್ಯವಹಾರದಲ್ಲಾಗಲೀ ತನ್ನ ಹೆಸರಲ್ಲಿ ಆ ಅಕ್ಷರವನ್ನು ಬಳಸುವುದಿಲ್ಲವೆಂಬ ವಾಗ್ಧಾನವನ್ನೂ ಕೊಟ್ಟ! ಸ್ವಂತ ನಾಮಧೇಯದ ಮೇಲಿನ ಮೋಹ ಯಾರಿಗಿಲ್ಲ? ಇಂದಲ್ಲ ನಾಳೆ, ಆದಷ್ಟು ಶೀಘ್ರದಲ್ಲಿ ಸಾಲ ಮರುಪಾವತಿಯಾಗೇ ಆಗುತ್ತದೆ ಎಂದು ಸಾಲ ಕೊಟ್ಟವನು ಭಾವಿಸಿರಬೇಕು! ಒತ್ತೆ ಸ್ವೀಕೃತವಾಯಿತು;
ಸಾಹುಕಾರನಿಂದ ಸಾವಿರ ಹೊನ್ನಿನ ಗಂಟು ಸಿಕ್ಕಿತು. ಅದಾಗಿ ಯಾವಾಗರುದ್ರಭಟ್ಟ ಆ ದುಡ್ಡನ್ನು ಮರಳಿಸಿ ಹೆಸರಿನ ಸ್ವಾಮ್ಯವನ್ನು ವಾಪಸು ಪಡೆದ ಎಂಬುದಕ್ಕೆ ಮಾತ್ರ ದಾಖಲೆ ಇಲ್ಲ. ಆತ ನಿಜವಾಗಿ ದುಡ್ಡನ್ನು ಮರಳಿಸಿದನೋ ಅಥವಾ ತನ್ನ ಪರಿಷ್ಕೃತ ಹೆಸರಲ್ಲೇ ತೃಪ್ತಿಪಟ್ಟು, ಸಾಲ ತೀರಿಸುವುದನ್ನು ಮರೆತು ಜೀವನ ಕಳೆದನೋ ಎಂಬುದೂ ತಿಳಿದಿಲ್ಲ. ಯಾಕೆಂದರೆ, ಕಾವ್ಯಾಲಂಕಾರ ಮತ್ತು ಜಗನ್ನಾಥ ವಿಜಯ – ಈ ಎರಡೂ ಕಾವ್ಯಗಳನ್ನು ಬರೆದವರೂ ತಮ್ಮನ್ನು ರುದ್ರಟ ಎಂದೇ ಹೇಳಿಕೊಂಡಿದ್ದಾರೆ!
❤️🌷🙏 ವಿಮಲ್ ನ್ಯೂಟ್ರಿಷನ್ ಸೆಂಟರ್ 🙏🌷❤️ #🎥 Motivational ಸ್ಟೇಟಸ್ #😍 ನನ್ನ ಸ್ಟೇಟಸ್ #✍️ ಮೋಟಿವೇಷನಲ್ ಕೋಟ್ಸ್ #👦🏻 Bad Boyz ಸ್ಟೇಟಸ್ #✍️ ಮೋಟಿವೇಷನಲ್ ಕೋಟ್ಸ್
ಸುವರ್ಣಷ್ಠೀವಿ*******
ನಾರದ ಮಹರ್ಷಿಯ ಸೋದರಳಿಯ ಪರ್ವತ ಮುನಿ ಇಬ್ಬರೂ ಭೂಲೋಕದಲ್ಲಿ ಸಂಚರಿಸುತ್ತಿರುವಾಗ ಸೃಂಜಯ ರಾಜನ ಅರಮನೆಯಲ್ಲಿ ಸ್ವಲ್ಪಕಾಲ ತಂಗುತ್ತಾರೆ. ರಾಜನ ಆತಿಥ್ಯದಿಂದ ಸುಪ್ರೀತರಾದ ಮಹರ್ಷಿಗಳಿಬ್ಬರೂ ರಾಜನಿಗೆ ವಾಂಛಿತ ವರವನ್ನು ಅನುಗ್ರಹಿಸಲು ನಿಶ್ಚಯಿಸಿದರು. ತನ್ನಿಮಿತ್ತವಾಗಿ ಪರ್ವತಮುನಿಯು ಸೃಂಜಯನಲ್ಲಿ ಅವನ ಬಹುದಿನದ ಆಕಾಂಕ್ಷೆ ಯಾವುದಾದರೂ ಇದ್ದಲ್ಲಿ ವರರೂಪದಲ್ಲಿ ಕೇಳಬಹುದು. ಆದರೆ ರಾಜನು ದೇವತೆಗಳಿಗೆ ಪೀಡೆಯಾಗುವಂತಹ, ಮನುಷ್ಯರಿಗೆ ತೊಂದರೆಯಾಗುವಂತಹ ವರವನ್ನು ಕೇಳಕೂಡದು ಎಂಬ ನಿಯಮ ವಿಧಿಸಿದರು. ಪರ್ವತನ ಮಾತಿಗೆ ಸೃಂಜಯನು ಸಂತೋಷದಿಂದ “ಮಹರ್ಷಿಯೇ, ವೀರಪರಾಕ್ರಮಿಯಾದ, ಸೌಭಾಗ್ಯಶಾಲಿಯಾದ, ದೀರ್ಘಾಯುಷ್ಯವುಳ್ಳ, ಇಂದ್ರನಿಗೆ ಸಮಾನನಾದ ಪುತ್ರನನ್ನು ಪಡೆಯಬೇಕೆಂಬ ಬಹುಕಾಲದ ನನ್ನ ಬಯಕೆಯನ್ನು ಈಡೇರಿಸಿರಿ” ಎಂದು ಪ್ರಾರ್ಥಿಸಿದ. ಸೃಂಜಯನ ಬಯಕೆಯೇನೋ ನೆರವೇರಿತು ಆದರೆ ಇಂದ್ರನನ್ನು ಪರಾಭವಗೊಳಿಸುವ ಮಗನನ್ನು ಪಡೆಯುವ ಸಂಕಲ್ಪವಿದ್ದ ಕಾರಣದಿಂದ ಹುಟ್ಟುವ ಮಗನು ಅಲ್ಪಾಯುಷ್ಯನಾಗುವಂತಾಯಿತು. ಈ ವಿಷಯದಿಂದ ಬಾಧಿತನಾದ ಸೃಂಜಯನು ಪರ್ವತನನ್ನು “ವಿಪ್ರಶ್ರೇಷ್ಠರೇ, ನನ್ನ ಮಗನು ಎಂದಿಗೂ ಅಲ್ಪಾಯುವಾಗಬಾರದು. ನಿಮ್ಮ ತಪಃಪ್ರಭಾವದಿಂದ ಅವನನ್ನು ದೀರ್ಘಾಯುವಾಗಿ ಮಾಡಿರಿ” ಎಂದು ದೀನನಾಗಿ ಪ್ರಾರ್ಥಿಸಿದರೂ ಇಂದ್ರನ ಮೇಲಿನ ಗೌರವದಿಂದಾಗಿ ಪರ್ವತ ಮಹರ್ಷಿಯು ಸುಮ್ಮನುಳಿದರು. ರಾಜಕುಮಾರನು ಪ್ರೇತರಾಜನ ವಶವಾದಾಗ ತನ್ನನ್ನು ಸ್ಮರಿಸುವಂತೆ ನಾರದರು ಸೂಚಿಸಿ ಸೃಂಜಯನನ್ನು ಸಂತೈಸಿದರು.
ಕಾಲ ಸರಿಯಿತು. ರಾಜರ್ಷಿ ಸೃಂಜಯನಿಗೆ ತೇಜಸ್ವಿಯಾದ ಮಗನೊಬ್ಬನು ಜನಿಸಿದನು. ಸುವರ್ಣವನ್ನು ಉಗುಳುತ್ತಿದ್ದುದ್ದರಿಂದ ಅವನಿಗೆ “ಸುವರ್ಣಷ್ಠೀವಿ” ಎಂಬ ಅಭಿಧಾನವಾಯಿತು. ಶುಕ್ಲಪಕ್ಷದ ಚಂದ್ರನಂತೆ ದಿನದಿಂದ ದಿನಕ್ಕೆ ಪ್ರವರ್ಧಮಾನಕ್ಕೆ ಬರುತ್ತಿದ್ದ ಮಗನನ್ನು ಕಂಡು ಸೃಂಜಯನು ಆನಂದದಿಂದಿದ್ದನು. ಪರ್ವತಮಹರ್ಷಿಯ ವರದಾನದಿಂದ ಹುಟ್ಟಿದ ಸೃಂಜಯನ ಮಗನು ಸುವರ್ಣವನ್ನೇ ಉಗುಳುವನೆಂದು ಲೋಕವಿಖ್ಯಾತವಾದನು. ಈ ವಿಚಾರ ಇಂದ್ರನಿಗೂ ತಿಳಿಯಿತು. ಸುವರ್ಣಷ್ಠೀವಿಯಿಂದ ಮುಂದೆ ತನ್ನ ಪರಾಜಯವಾಗುವುದು ನಿಶ್ಚಿತವೆಂದು ಯೋಚಿಸಿದ ಇಂದ್ರನು ಅವನನ್ನು ಕೊಲ್ಲಲು ತನ್ನ ವಜ್ರಾಯುಧವನ್ನು ನಿರ್ದೇಶಿಸಿದನು. ರಾಜರ್ಷಿ ಸೃಂಜಯನು ಪತ್ನಿ-ಪುತ್ರರೊಡನೆ ಅರಣ್ಯದಲ್ಲಿದ್ದು ವ್ರತಾನುಷ್ಠಾನಗಳಲ್ಲಿ ತೊಡಗಿಕೊಂಡಿದ್ದ ಸಂದರ್ಭ. ಐದು ವರ್ಷದ ಬಾಲಕ ಸುವರ್ಣಷ್ಠೀವಿಯು ಆಟವಾಡುತ್ತಿದ್ದಾಗ ವ್ಯಾಘ್ರರೂಪವನ್ನು ತಳೆದ ವಜ್ರಾಯುಧವು ಅವನನ್ನು ಕ್ಷಣಮಾತ್ರದಲ್ಲಿ ಕಚ್ಚಿ ಸಾಯಿಸಿ ಅಲ್ಲಿಂದ ಹೊರಟುಹೋಯಿತು. ಬಾಲಕನ ಜೊತೆಯಲ್ಲಿದ್ದ ಸೇವಕಿಯ ಕೂಗಾಟ ಕೇಳಿದ ಅಲ್ಲಿಗೆ ಬಂದ ರಾಜನು ರಕ್ತಸಿಕ್ತ ದೇಹದೊಂದಿಗೆ ಗತಪ್ರಾಣನಾಗಿ ಬಿದ್ದಿದ್ದ ಮಗನನ್ನು ಕಂಡು ಶೋಕಾವಿಷ್ಟನಾದನು. ಮೃತಶರೀರವನ್ನು ತೊಡೆಯಮೇಲೆ ಮಲಗಿಸಿಕೊಂಡು ವಿಲಪಿಸತೊಡಗಿದನು. ಹಿಂದೆ ಇಂತಹ ಸನ್ನಿವೇಶ ಒದಗಿದಾಗ ತಮ್ಮನ್ನು ಸ್ಮರಿಸುವಂತೆ ನಾರದರು ಹೇಳಿದ್ದನ್ನು ಸೃಂಜಯ ನೆನಪಿಸಿಕೊಂಡ. ನಾರದರು ಅವನಿಗೆ ಕಾಣಿಸಿಕೊಂಡರು. ಸೃಂಜಯ ಮತ್ತು ನಾರದರು ಇಂದ್ರನನ್ನು ಸ್ತುತಿಸಲಾಗಿ ಬಾಲಕನು ಪುನಃ ಸಜೀವನಾದನು. ವಿಧಿನಿಯಮವನ್ನು ಮೀರಲು ಯಾರಿಂದಲೂ ಸಾಧ್ಯವಿಲ್ಲ!
ಅನೇಕ ವರ್ಷಗಳ ಪ್ರಜಾಪರಿಪಾಲನೆಯ ನಂತರ ಸೃಂಜಯನು ಸ್ವರ್ಗಸ್ಥನಾದ. ಪರಮವಿಕ್ರಮನೂ ಸತ್ಯಸಂಧನೂ ಆದ ಸುವರ್ಣಷ್ಠೀವಿಯು ದೀರ್ಘಕಾಲ ಧರ್ಮದಿಂದ ರಾಜ್ಯಭಾರ ಮಾಡಿದನು. ಯಜ್ಞಯಾಗಾದಿಗಳನ್ನು ನಡೆಸಿ ದೇವತೆಗಳನ್ನೂ, ಶ್ರಾದ್ಧ-ತರ್ಪಣಾದಿಗಳಿಂದ ಪಿತೃಗಳನ್ನೂ ತೃಪ್ತಿಗೊಳಿಸಿ ವಂಶೋದ್ಧಾರಕರಾದ ಸಂತಾನವನ್ನು ಪಡೆದು ಕಾಲಾನಂತರದಲ್ಲಿ ಮರಣಿಸಿ ಪುಣ್ಯಲೋಕವನ್ನು ಸೇರಿದನು.
ಮುಪ್ಪು ಮತ್ತು ಮರಣಗಳೆಂಬ ಮೊಸಳೆಗಳಿಂದ ಕೂಡಿರುವ ಗಂಭೀರವಾದ ಕಾಲವೆಂಬ ಸಾಗರದಲ್ಲಿ ಈ ಜಗತ್ತೆಲ್ಲವೂ ಮುಳುಗಿಹೋಗುತ್ತಿದೆ. ಆದರೆ ಈ ಗಂಭೀರವಾದ ವಿಷಯವನ್ನು ತಿಳಿದುಕೊಳ್ಳದೇ ತಮ್ಮನ್ನೇ ಸರ್ವಜ್ಞರು ಸರ್ವಶಕ್ತರೆಂದು ತಿಳಿದು ಕೂಪದಲ್ಲಿ ಜೀವಿಸುತ್ತಿರುವರು.
🌷🙏❤️ ವಿಮಲ್ ನ್ಯೂಟ್ರಿಷನ್ ಸೆಂಟರ್ ❤️🙏🌷 #✍️ ಮೋಟಿವೇಷನಲ್ ಕೋಟ್ಸ್ #😍 ನನ್ನ ಸ್ಟೇಟಸ್ #✍️ ಮೋಟಿವೇಷನಲ್ ಕೋಟ್ಸ್ #🎥 Motivational ಸ್ಟೇಟಸ್













