"ಗಾಂಧಾರಿ ಮಾಂಧಾರಿಯೆಂಬ ಆಹೋರಾತ್ರಿಯಲ್ಲಿ ಲಿಂಗವ ಪೂಜಿಸಬೇಕು. ಊರ ಕೋಳಿ ಕೂಗವ ಮುನ್ನ, ಕಾಡ ನವಿಲು ಒದರದ ಮುನ್ನ, ಲಿಂಗವ ಪೂಜಿಸಬೇಕು. ಗೋವುಗಳ ಕೊಲ್ಲುವ ಪಾಪಿಯ ದನಿ ಕೇಳುವ ಮುನ್ನ, ತುಂಬಿ ಮುಟ್ಟಿ ಪುಷ್ಪ ನಿಮ೯ಲ್ಯವಾಗದ ಮುನ್ನ, ಲಿಂಗವ ಪೂಜಿಸಬೇಕು. ಶುದ್ಧಾಂತ: ಕರಣವಾಗಿ ಲಿಂಗದ ಪೂಜೆಯ ಮಾಡಬೇಕು. ತನ್ನೊಡನೆ ಮಲಗಿದ೯ ಸತಿಯನೆಬ್ಬಿಸದೆ ಲಿಂಗಕ್ಕೆರೆದ ಸದ್ಬಕ್ತನ ಶ್ರೀಪಾದವ ತೋರಿ ಬದುಕಿಸಯ್ಯಾ ಕೂಡಲಸಂಗಮದೇವಾ.. ✍️ ವಿಶ್ವಗುರು ಬಸವಣ್ಣನವರ ವಚನ.. ಶರಣು ಶರಣಾರ್ಥಿಗಳು 🙏 #ವಚನಗಳು #//🌳ವಚನ ಸಾಹಿತ್ಯ 🌳// #ಬಸವಣ್ಣನವರ ವಚನಗಳು #ಬಸವಾದಿ ಶರಣ ಶರಣೆಯರು #ಶರಣ ಸಾಹಿತ್ಯ


