
ಕಾಯಕವೇ ಕೈಲಾಸ..
@76865063
ದಯವೇ ಧರ್ಮದ ಮೂಲವಯ್ಯಾ.. ದೇಹವೇ ದೇಗುಲ.. ಅರಿವೇ ಗುರು..
ಶ್ರೀ ಗುರು ಬಸವ ಲಿಂಗಾಯ ನಮಃ.. "ಧರೆ ಗಿರಿಯನಂಬರವ ಖರಕಿರಣನ ಪ್ರಭೆಯ, ಸುರಿವ ಮಳೆ ಉರಿವಗ್ನಿ ಮಾರುತನನು, ಹರಿವಿರಂಚಿಗಳ ಕುಬೇರ ಇಂದ್ರ ಚಂದ್ರಾಮರರನು, ಹರನು ಹಡದಲ್ಲಿ ನೆರವಾದವರೊಳರೆ? ಕರಕಷ್ಟದ ಮಾನವರು ಪರಪುಟ್ಟದ ಮರಿಯಂತೆ
ಹರನ ದಾನವನುಂಡು ಬೇರೆ ಪರದೈವವುಂಟೆಂದು ಬೆಸಕೈವರು. ಎರಡೇಳು ಲೋಕಕ್ಕೆ ಪರಮಪ್ರಭು
ತೆಲುಗೇಶ್ವರನೊಬ್ಬನೇ ಎಂದೆನ್ನದವನ ಬಾಯಲ್ಲಿಪಾಕುಳ.. ✍🏻 ಶರಣ ತೆಲುಗೇಶ ಮಸಣಯ್ಯನವರ ವಚನ.. ಶರಣು ಶರಣಾರ್ಥಿ ಗಳು ಶರಣರಿಗೆ 💐🦚 #ಶರಣ ಸಾಹಿತ್ಯ #ಬಸವಾದಿ ಶರಣ ಶರಣೆಯರು #ಬಸವಣ್ಣನವರ ವಚನಗಳು #//🌳ವಚನ ಸಾಹಿತ್ಯ 🌳// #ವಚನಗಳು
"ಎನ್ನ ಕಾಯವ ದಂಡಿಗೆಯ ಮಾಡಯ್ಯ, ಎನ್ನ ಶಿರವ ಸೋರೆಯ ಮಾಡಯ್ಯ, ಎನ್ನ ನರವ ತಂತಿಯ ಮಾಡಯ್ಯ, ಎನ್ನ ಬೆರಲ ಕಡ್ಡಿಯ ಮಾಡಯ್ಯ, ಬತ್ತೀಸ ರಾಗವ ಹಾಡಯ್ಯ, ಉರದಲೊತ್ತಿ ಬಾಜಿಸು ಕೂಡಲಸಂಗಮದೇವ.. ✍🏻ವಿಶ್ವಗುರು ಬಸವಣ್ಣನವರು.. ಶರಣು ಶರಣಾರ್ಥಿಗಳು 🙏 #ವಚನಗಳು #//🌳ವಚನ ಸಾಹಿತ್ಯ 🌳// #ಬಸವಣ್ಣನವರ ವಚನಗಳು #ಬಸವಾದಿ ಶರಣ ಶರಣೆಯರು #ಶರಣ ಸಾಹಿತ್ಯ
ಶ್ರೀ ಗುರು ಬಸವ ಲಿಂಗಾಯನಮಃ.. "ಮನದಲ್ಲಿ ಹುಟ್ಟಿದ ಅರಿವು ಮಾಡುವ ಮಾಟದಲ್ಲಿ ಕಾಣಬಹುದು
ಶರಣರ ಸಂಗಕ್ಕೆಳಸಿದ ಚಿತ್ತವ ಅನುಭಾವದಲ್ಲಿ ಕಾಣಬಹುದು ಒಳಹೊರಗೆ ತೆರಹಿಲ್ಲದ ಕೂಟ ನಿನ್ನದು ಅಮರೇಶ್ವರಲಿಂಗದಲ್ಲಿ ಸಂಗನಬಸವಣ್ಣಾ ನಿನ್ನ ಪಾದಕ್ಕೆ ನಮೋ ನಮೋ ಎಂಬೆನು.. ✍️ ಶರಣೆ ಆಯ್ದಕ್ಕಿ ಮಾರಯ್ಯನವರು.. ಶರಣು ಶರಣಾರ್ಥಿಗಳು 🙏🏻 #ಶರಣ ಸಾಹಿತ್ಯ #ಬಸವಾದಿ ಶರಣ ಶರಣೆಯರು #ಬಸವಣ್ಣನವರ ವಚನಗಳು #//🌳ವಚನ ಸಾಹಿತ್ಯ 🌳// #ವಚನಗಳು
"ಕೆಂಡದ ಮಳೆ ಕರೆವಲ್ಲಿ ಉದಕವಾಗಿರಬೇಕು.. "ಜಲಪ್ರಳಯವಾದಲ್ಲಿ ವಾಯುವಿನಂತಿರಬೇಕು.. "ಮಹಾಪ್ರಳಯವಾದಲ್ಲಿ ಆಕಾಶದಂತಿರಬೇಕು.. "ಜಗತ್ಪ್ರಳಯವಾದಲ್ಲಿ ತನ್ನ ತಾ ಬಿಡಬೇಕು.. "ಗುಹೇಶ್ವರನೆಂಬ ಲಿಂಗ ತಾನಾಗಿರಬೇಕು.. ✍️ ಅಲ್ಲಮಪ್ರಭುದೇವರ ವಚನ.. ಶರಣು ಶರಣಾರ್ಥಿಗಳು 🙏🏻 #ವಚನಗಳು #//🌳ವಚನ ಸಾಹಿತ್ಯ 🌳// #ಬಸವಣ್ಣನವರ ವಚನಗಳು #ಬಸವಾದಿ ಶರಣ ಶರಣೆಯರು #ಶರಣ ಸಾಹಿತ್ಯ
ವಿಶ್ವಗುರು ಬಸವಣ್ಣನವರ ವಚನ.. #ಶರಣ ಸಾಹಿತ್ಯ #ಬಸವಾದಿ ಶರಣ ಶರಣೆಯರು #ಬಸವಣ್ಣನವರ ವಚನಗಳು #//🌳ವಚನ ಸಾಹಿತ್ಯ 🌳// #ವಚನಗಳು
ಶ್ರೀ ಗುರು ಬಸವ ಲಿಂಗಾಯ ನಮಃ.. "ಹಲವು ಕಾಲ ಧಾವತಿಗೊಂದು ಒಟ್ಟಿದ ಹಿದಿರೆಯು ಒಂದು ಮಿಡುಕುರಲ್ಲಿ ಬೇವಂತೆ, ಸಲೆ ನೆಲೆ ಸನ್ನಿಹಿತನಾಗಿಪ್ಪ ಶರಣನ ಭಕ್ತಿ ಒಂದನಾಯತದಿಂದ ಕೆಡುವುದು. [ಸು]ಧರ್ಮದಲ್ಲಿ ಗಳಿಸಿದ ಪಿತನ ಧನವ ಅಧರ್ಮದಲ್ಲಿ ಕೆಡಿಸುವ ಸುತನಂತೆ- ಶಿವನ ಸೊಮ್ಮ ಶಿವಂಗೆ ಮಾಡದೆ, ಅನ್ಯಕ್ಕೆ ಮಾಡಿದಡೆ, ತನ್ನ ಭಕ್ತಿ ತನ್ನನೆ ಕೆಡಿಸುವುದು ಕೂಡಲಸಂಗಮದೇವಾ ! ✍🏻 ವಿಶ್ವ ಗುರು ಬಸವಣ್ಣನವರ ವಚನ.. ಬಸವ ಬೆಳಗಿನ ಶರಣು ಶರಣಾರ್ಥಿಗಳು 🙏 #ವಚನಗಳು #//🌳ವಚನ ಸಾಹಿತ್ಯ 🌳// #ಬಸವಣ್ಣನವರ ವಚನಗಳು #ಬಸವಾದಿ ಶರಣ ಶರಣೆಯರು #ಶರಣ ಸಾಹಿತ್ಯ
ಅಕ್ಕಮಹಾದೇವಿಯವರ ವಚನ.. #ಶರಣ ಸಾಹಿತ್ಯ #ಬಸವಾದಿ ಶರಣ ಶರಣೆಯರು #ಬಸವಣ್ಣನವರ ವಚನಗಳು #//🌳ವಚನ ಸಾಹಿತ್ಯ 🌳// #ವಚನಗಳು
ಅಲ್ಲಮಪ್ರಭುದೇವರ ವಚನ.. #ವಚನಗಳು #//🌳ವಚನ ಸಾಹಿತ್ಯ 🌳// #ಬಸವಣ್ಣನವರ ವಚನಗಳು #ಬಸವಾದಿ ಶರಣ ಶರಣೆಯರು #ಶರಣ ಸಾಹಿತ್ಯ
ಅನ್ಯ ಮುಸ್ಲಿಂ ರಾಷ್ಟ್ರದ ವ್ಯಕ್ತಿಯನ್ನು ಅತ್ಯಂತ ಹೀನಾಯವಾಗಿ ಸೋಲಿಸಿದೆ ಜೈ ಕರ್ನಾಟಕ ಜೈ ಭಾರತ 🇮🇳🇮🇳🇮🇳 #🪖ಐ ಲವ್ ಇಂಡಿಯನ್ ಆರ್ಮಿ ❤️ #🇮🇳 ಗಣರಾಜ್ಯೋತ್ಸವ ಸ್ಟೇಟಸ್ 🇮🇳🎉 #🙏ದೇಶಭಕ್ತಿ ವೀಡಿಯೋಸ್ #🔴ನಮ್ಮ ಕರ್ನಾಟಕ🟡 #🤩ಭಾರತದ ಆಟ🏏
"ಅನುಭಾವಿ ಅನುಭಾವಿಗಳೆಂಬ ಅಜ್ಞಾನಿಗಳ ಮುಖವ ನೋಡಲಾಗದು. ಕಂಗಳ ಮುಂದಣ ಕಾಮ, ಮನದ ಮುಂದಣ ಆಸೆ, ಅಂಗದಲ್ಲಿ ಅಹಂಕಾರವಾಗಿಪ್ಪವರ ಅನುಭಾವಿಗಳೆಂಬೆನೆ??? ಸೂಳೆಯ ಮನೆಯಲ್ಲಿಪ್ಪ ಗವುಡಿಯಂತೆ ತಮ್ಮ ತಮ್ಮ ಹಿರಿಯತನವ ಮುಂದುಗೊಂಡು ಕುರಿಗಳಂತೆ ತಿರುಗುವ ಜಡರುಗಳ ಅನುಭಾವಿಗಳೆಂಬೆನೆ??? ಹತ್ತೈದ ಕೂಡಿಕೊಂಡು ಇಕ್ಕಿ ಎರೆವವರ ಮನೆಗೆ ಹೋಗಿ, ಭಕ್ತಿಬಿನ್ನಹವ ಕೈಕೊಂಡಡೆ ಬೆಕ್ಕು ಹಾಲುಕುಡಿದಂತೆ. ಅತ್ಯತ್ತಿಷ್ಠದ್ದಶಾಂಗುಲನೆಂದು ಘಟವ ಹೊರೆವ ಮಿಟ್ಟೆಯ ಭಂಡರು ಕಟ್ಟಿಗೆ ಮಣ್ಣ ಹಾಕಿ ಹೊಟ್ಟೆಯ ಹೊರೆವವನಂತೆ. ಇಷ್ಟಲಿಂಗವನರಿಯದೆ ಸತ್ಯರೆಂದು ಘಟವ ಹೊರೆವ ಘಟಕರ್ಮಿಗಳ ಮುಖವ ನೋಡಲಾಗದು ಅಮುಗೇಶ್ವರಲಿಂಗವೆ.. ✍️ ಶರಣೆ ಅಮುಗೆ ರಾಯಮ್ಮನವರ ವಚನ.. ಶರಣು ಶರಣಾರ್ಥಿಗಳು ✡️ #ವಚನಗಳು #//🌳ವಚನ ಸಾಹಿತ್ಯ 🌳// #ಬಸವಣ್ಣನವರ ವಚನಗಳು #ಬಸವಾದಿ ಶರಣ ಶರಣೆಯರು #ಶರಣ ಸಾಹಿತ್ಯ











