
ಕಾಯಕವೇ ಕೈಲಾಸ..
@76865063
ದಯವೇ ಧರ್ಮದ ಮೂಲವಯ್ಯಾ.. ದೇಹವೇ ದೇಗುಲ.. ಅರಿವೇ ಗುರು..
#ಬಸವಣ್ಣನವರ ವಚನಗಳು #ವಚನಗಳು #ಬಸವಾದಿ ಶರಣ ಶರಣೆಯರು #//🌳ವಚನ ಸಾಹಿತ್ಯ 🌳// #ಶರಣ ಸಾಹಿತ್ಯ
#ಬಸವಣ್ಣನವರ ವಚನಗಳು #ಬಸವಾದಿ ಶರಣ ಶರಣೆಯರು #ವಚನಗಳು #//🌳ವಚನ ಸಾಹಿತ್ಯ 🌳// #ಶರಣ ಸಾಹಿತ್ಯ
#ಬಸವಣ್ಣನವರ ವಚನಗಳು #ಬಸವಾದಿ ಶರಣ ಶರಣೆಯರು #ವಚನಗಳು #//🌳ವಚನ ಸಾಹಿತ್ಯ 🌳// #ಶರಣ ಸಾಹಿತ್ಯ
#ಶರಣ ಸಾಹಿತ್ಯ #//🌳ವಚನ ಸಾಹಿತ್ಯ 🌳// #ವಚನಗಳು #ಬಸವಾದಿ ಶರಣ ಶರಣೆಯರು #ಬಸವಣ್ಣನವರ ವಚನಗಳು
"ಆದಿ ಅನಾದಿಗಳಿಂದತ್ತಲಯ್ಯಾ ಬಸವಣ್ಣನು. ಮೂದೇವರ ಮೂಲಸ್ಥಾನವಯ್ಯಾ ಬಸವಣ್ಣನು. ನಾದ ಬಿಂದು ಕಳಾತೀತ ಆದಿ ನಿರಂಜನನಯ್ಯಾ ಬಸವಣ್ಣನು. ಆ ನಾದಸ್ವರೂಪೇ ಬಸವಣ್ಣನಾದ ಕಾರಣ, ಆ ಬಸವಣ್ಣನ ಶ್ರೀಪಾದಕ್ಕೆ ನಮೋ ನಮೋ ಎನುತಿರ್ದೆನು ಕಾಣಾ ಚೆನ್ನಮಲ್ಲಿಕಾರ್ಜುನಯ್ಯಾ.. ✍️ ವೈರಾಗ್ಯ ನಿಧಿ ಅಕ್ಕಮಹಾದೇವಿಯವರ ವಚನ.. ಶರಣು ಶರಣಾರ್ಥಿಗಳು 🙏 #ಶರಣ ಸಾಹಿತ್ಯ #//🌳ವಚನ ಸಾಹಿತ್ಯ 🌳// #ವಚನಗಳು #ಬಸವಾದಿ ಶರಣ ಶರಣೆಯರು #ಬಸವಣ್ಣನವರ ವಚನಗಳು
"ಅಂಗವೆಂಬ ಸಂಸಾರದೊಳಗೆ ಸವೆದವರೆಲ್ಲರೂ ಶಿವನನರಿವರೆ??? ಮನವೆಂಬ ಸಂಕಲ್ಪದ ಕುಣಿಕೆಗೊಳಗಾದವರೆಲ್ಲರೂ
ಮಾಯದ ಹೊಡೆಗಿಚ್ಚ ಗೆಲ್ಲಬಲ್ಲರೆ??? ಗುಹೇಶ್ವರ ಲಿಂಗದಲ್ಲಿ ಸರ್ವ ಸಂದೇಹವ ಕಳೆದಿಪ್ಪ ಚನ್ನಬಸವಣ್ಣಂಗೆ ನಮೋ ನಮೋ ಎಂಬೆನು.. ✍️ ಅಲ್ಲಮಪ್ರಭುಗಳ ವಚನ.. ಶರಣು ಶರಣಾರ್ಥಿಗಳು 🙏🏻 #ಬಸವಾದಿ ಶರಣ ಶರಣೆಯರು #ವಚನಗಳು #//🌳ವಚನ ಸಾಹಿತ್ಯ 🌳// #ಶರಣ ಸಾಹಿತ್ಯ #ಬಸವಣ್ಣನವರ ವಚನಗಳು
"ಕೆಂಡದ ಮಳೆ ಕರೆವಲ್ಲಿ ಉದಕವಾಗಿರಬೇಕು.. ಜಲಪ್ರಳಯವಾದಲ್ಲಿ ವಾಯುವಿನಂತಿರಬೇಕು.. ಮಹಾಪ್ರಳಯವಾದಲ್ಲಿ ಆಕಾಶದಂತಿರಬೇಕು.. ಜಗತ್ಪ್ರಳಯವಾದಲ್ಲಿ ತನ್ನ ತಾ ಬಿಡಬೇಕು, ಗುಹೇಶ್ವರನೆಂಬ ಲಿಂಗ ತಾನಾಗಿರಬೇಕು.. ✍️ ಅಲ್ಲಮಪ್ರಭುಗಳ ವಚನ.. ಬಸವ ಬೆಳಗಿನ ಶರಣು ಶರಣಾರ್ಥಿಗಳು 🙏 #ಶರಣ ಸಾಹಿತ್ಯ #//🌳ವಚನ ಸಾಹಿತ್ಯ 🌳// #ವಚನಗಳು #ಬಸವಾದಿ ಶರಣ ಶರಣೆಯರು #ಬಸವಣ್ಣನವರ ವಚನಗಳು
"ಭಕ್ತ ಭಕ್ತನ ಮನೆಗೆ ಬಂದರೆ, ಭೃತ್ಯಾಚಾರವ ಮಾಡಬೇಕು: ಕರ್ತನಾಗಿ ಕಾಲ ತೊಳೆಯಿಸಿಕೊಂಡರೆ, ಹಿಂದೆ ಮಾಡಿದ ಭಕ್ತಿಗೆ ಹಾನಿ! ಲಕ್ಷಗಾವುದ ದಾರಿಯ ಹೋಗಿ ಭಕ್ತನು ಭಕ್ತನ ಕಾಂಬುದು ಸದಾಚಾರ; ಅಲ್ಲಿ ಕೂಡಿ ದಾಸೋಹವ ಮಾಡಿದರೆ ಕೂಡಿಕೊಂಬನು ನಮ್ಮ ಕೂಡಲಸಂಗಮದೇವನು.. ✍️ ವಿಶ್ವಗುರು ಬಸವಣ್ಣನವರ ವಚನ.. ಶರಣು ಶರಣಾರ್ಥಿಗಳು 🙏 #ಬಸವಣ್ಣನವರ ವಚನಗಳು #ಬಸವಾದಿ ಶರಣ ಶರಣೆಯರು #ವಚನಗಳು #//🌳ವಚನ ಸಾಹಿತ್ಯ 🌳// #ಶರಣ ಸಾಹಿತ್ಯ
ಶ್ರೀ ಗುರು ಬಸವ ಲಿಂಗಾಯ ನಮಃ.. "ಅಂಗಕ್ಕೆ ಅಷ್ಟಾವರಣ, ಮನಕ್ಕೆ ಮಂತ್ರ, ಪ್ರಾಣಕ್ಕೆ ಪಂಚಾಚಾರ, ಭಾವಕ್ಕೆ ಅರಿವುಸಂಬಂಧವಾದ ಭಕ್ತ ಎಂತು ನಡೆದಂತೆ ಸಂತು, ಹಿಂದುಮುಂದೆಂಬ ಸಂದೇಹಿಗಳ ಮಾತು ಹಿಂದಕೆ ಸರಿ. ಗುರುನಿರಂಜನ ಚನ್ನಬಸವಲಿಂಗದಂಗವಾದ ಅಗಮ್ಯರಿಗೆ ಅಂತಿಂತೆನ್ನಲಾಗದು.. ✍🏻 ದೇಶಿಕೇಂದ್ರ ಸಂಗನಬಸವಯ್ಯನವರ ವಚನ.. ಬಸವ ಬೆಳಗಿನ ಶರಣು ಶರಣಾರ್ಥಿಗಳು 🙏🏻 #ಶರಣ ಸಾಹಿತ್ಯ #//🌳ವಚನ ಸಾಹಿತ್ಯ 🌳// #ವಚನಗಳು #ಬಸವಾದಿ ಶರಣ ಶರಣೆಯರು #ಬಸವಣ್ಣನವರ ವಚನಗಳು
ಶ್ರೀ ಗುರು ಬಸವ ಲಿಂಗಾಯ ನಮಃ.. "ಸರ್ಪನ ಗಮನದಂತೆ ಗಮನವುಳ್ಳರೆ ಭಕ್ತನೆಂಬೆ. ನವಿಲಿನ ಕಣ್ಣಿನಂತೆ ಕಣ್ಣುಳ್ಳರೆ ಭಕ್ತನೆಂಬೆ. ಬೆಕ್ಕಿನ ಹೃದಯದಂತೆ ಹೃದಯವುಳ್ಳರೆ ಭಕ್ತನೆಂಬೆ. ಕಾಕನ ಪಿಕನ ಸ್ನೇಹವ ಹಿಂದಿಟ್ಟು, ಸೂರ್ಯಂಗೆ ಕಮಲದ ರೂಪವ ಮುಂದಿಟ್ಟು ಮಾಟವರಿದು ಮಾಡುವಾತನಲ್ಲದೆ ಭಕ್ತನಲ್ಲ ಕಾಣಾ ಗುರುನಿರಂಜನ ಚನ್ನಬಸವಲಿಂಗಾ.. ✍🏻 ದೇಶಿಕೇಂದ್ರ ಸಂಗನಬಸವಯ್ಯನವರ ವಚನ.. ಬಸವ ಬೆಳಗಿನ ಶರಣು ಶರಣಾರ್ಥಿಗಳು 🙏🏻 #ಬಸವಣ್ಣನವರ ವಚನಗಳು #ಬಸವಾದಿ ಶರಣ ಶರಣೆಯರು #ವಚನಗಳು #//🌳ವಚನ ಸಾಹಿತ್ಯ 🌳// #ಶರಣ ಸಾಹಿತ್ಯ












