
ಕಾಯಕವೇ ಕೈಲಾಸ..
@76865063
ದಯವೇ ಧರ್ಮದ ಮೂಲವಯ್ಯಾ.. ದೇಹವೇ ದೇಗುಲ.. ಅರಿವೇ ಗುರು..
"ತನು ಮನ ಧನವ ಹಿಂದಿಕ್ಕಿಕೊಂಡು
ಮಾತಿನ ಬಣಬೆಯ ಮುಂದಿಟ್ಟುಕೊಂಡು ಒಳಲೊಟೆಯ ನುಡಿವವರು ನೀವೆಲ್ಲರೂ ಕೇಳಿರೆ. ತಲಹಿಲ್ಲದ ಕೋಲು ಹೊಳ್ಳು ಹಾರುಹುದಲ್ಲದೆ ಗುರಿಯ ತಾಗಬಲ್ಲುದೆ ಮಾಯಾಪಾಶ ಹಿಂಗಿ, ಮನದ ಗಂಟು ಬಿಡದನ್ನಕ್ಕ ಕೂಡಲಸಂಗಮದೇವನೆಂತೊಲಿವನಯ್ಯಾ.. ✍️ ವಿಶ್ವಗುರು ಬಸವಣ್ಣನವರ ವಚನ.. ಬಸವ ಬೆಳಗಿನ ಶರಣು ಶರಣಾರ್ಥಿಗಳು 🙏 #ಬಸವಣ್ಣನವರ ವಚನಗಳು #ಬಸವಾದಿ ಶರಣ ಶರಣೆಯರು #ಶರಣ ಸಾಹಿತ್ಯ #//🌳ವಚನ ಸಾಹಿತ್ಯ 🌳// #ವಚನಗಳು
"ಆಸೆಯುಳ್ಳವಂಗೆ ಮಾಟಕೂಟವಲ್ಲದೆ,
ನಿರಾಸೆಯುಳ್ಳವಂಗೆ ಮಾಟಕೂಟವೇಕೆ??? ಮನಪರಿಣಾಮಿಗೆ ಮತ್ಸರವೇಕೆ??? ಸುತ್ತಿದ ಮಾಯಾಪ್ರಪಂಚವ ಜರಿದವಂಗೆ ಅಂಗನೆಯರ ಹಿಂದು ಮುಂದೆ ತಿರುಗಲೇಕೆ??? ಅಮುಗೇಶ್ವರನೆಂಬ ಲಿಂಗವನರಿದವಂಗೆ ಅಷ್ಟವಿಧಾರ್ಚನೆ ಷೋಡಶೋಪಚಾರದ ಹಂಗೇಕೆ.. ✍️ ಅಮುಗೆ ರಾಯಮ್ಮನವರ ವಚನ.. ಶರಣು ಶರಣಾರ್ಥಿಗಳು.. ಸಮಗ್ರ ವಚನ ಸಂಪುಟ: 5 ವಚನದ ಸಂಖ್ಯೆ: 604 #ವಚನಗಳು #//🌳ವಚನ ಸಾಹಿತ್ಯ 🌳// #ಶರಣ ಸಾಹಿತ್ಯ #ಬಸವಾದಿ ಶರಣ ಶರಣೆಯರು #ಬಸವಣ್ಣನವರ ವಚನಗಳು
"ಕಾಣಿಯ ಲೋಭ ಕೋಟಿಯ ಲಾಭವ ಕೆಡಿಸಿದುದ ನಾನರಿಯೆನಯ್ಯಾ| ಭಕ್ತಿಯ ಕುಳವನರಿಯದೆ ಮತಿಗೆಟ್ಟ ಪರಿಯ ನಾನರಿಯೆನಯ್ಯಾ| ಕೂಡಲಸಂಗನ ಶರಣರ ಸಂಗದಿಂದ ಅರಿದಡೆ| ನಾನು ಬದುಕುವೆನಯ್ಯಾ| ✍️ ವಿಶ್ವಗುರು ಬಸವಣ್ಣನವರ ವಚನ.. ಶರಣು ಶರಣಾರ್ಥಿಗಳು 🙏 #ಬಸವಾದಿ ಶರಣ ಶರಣೆಯರು #ಬಸವಣ್ಣನವರ ವಚನಗಳು #ಶರಣ ಸಾಹಿತ್ಯ #//🌳ವಚನ ಸಾಹಿತ್ಯ 🌳// #ವಚನಗಳು
"ಅರಿತು ಜನ್ಮವಾದವರಿಲ್ಲ ಸತ್ತು ಮರಳಿ ತೋರುವರಿಲ್ಲ. ದುರಭಿಮಾನವ ಹೊತ್ತು ಅಘಟಿತ ಘಟಿತವ ನುಡಿವಿರಿ. ಈ ದೇಹವಿಡಿದು ನುಡಿವ ಪ್ರಪಂಚಿಗಳನೇನೆಂಬೆ ಗುಹೇಶ್ವರಾ.. ✍️ ಶೂನ್ಯ ಪೀಠಾಧೀಶ ಅಲ್ಲಮಪ್ರಭು ದೇವರ ವಚನ.. ಬಸವ ಬೆಳಗಿನ ಶರಣು ಶರಣಾರ್ಥಿಗಳು 🙏 #ವಚನಗಳು #//🌳ವಚನ ಸಾಹಿತ್ಯ 🌳// #ಶರಣ ಸಾಹಿತ್ಯ #ಬಸವಣ್ಣನವರ ವಚನಗಳು #ಬಸವಾದಿ ಶರಣ ಶರಣೆಯರು
#ಬಸವಾದಿ ಶರಣ ಶರಣೆಯರು #ಬಸವಣ್ಣನವರ ವಚನಗಳು #ಶರಣ ಸಾಹಿತ್ಯ #//🌳ವಚನ ಸಾಹಿತ್ಯ 🌳// #ವಚನಗಳು
#ವಚನಗಳು #//🌳ವಚನ ಸಾಹಿತ್ಯ 🌳// #ಶರಣ ಸಾಹಿತ್ಯ #ಬಸವಣ್ಣನವರ ವಚನಗಳು #ಬಸವಾದಿ ಶರಣ ಶರಣೆಯರು
ಉಳವಿ ಚಿನ್ಮಯ ಜ್ಞಾನಿ ಶ್ರೀ ಗುರು ಚೆನ್ನಬಸವಣ್ಣ ನವರು..
Q: *ಯಾವಾಗ ಉಳವಿಗೆ ಶ್ರೀ ಚೆನ್ನಬಸವಣ್ಣನವರ ಆಗಮನವಾಯಿತು?*
- 12 ನೇಯ ಶತಮಾನದಲ್ಲಿ, ಕಲ್ಯಾಣ ಕ್ರಾಂತಿಯ ನಂತರ ಉಳಿವಿಗೆ ಬಂದರು.
*Q: ಉಳಿವಿಗೆ ಏಕೆ ಬಂದರು?*
- ಸಹ್ಯಾದ್ರಿ ಅರಣ್ಯದಲ್ಲಿ ವಚನಗಳನ್ನು ರಕ್ಷಿಸಲು ಅನುಕೂಲವಾದ ವಾತಾವರಣ ಇರುವ ಕಾರಣ ಶ್ರೀ ಗುರು ಚನ್ನಬಸವಣ್ಣನವರು ಹಾಗೂ ಶರಣರು ಈ ಉಳಿದ ನೆಲವೇ *ಸುಕ್ಷೇತ್ರ ಉಳವಿ*.
Q: *ಕಲ್ಯಾಣದಿಂದ ಉಳಿವಿಗೆ ಬರುವಾಗ ಚನ್ನಬಸವಣ್ಣನವರ ಜೊತೆಗೆ ಯಾರು ಯಾರು ಆಗಮಿಸಿದರು?*
- ಅಕ್ಕನಾಗಲಾಂಬಿಕಾತಾಯಿ, ಮಡಿವಾಳ ಮಾಚಿದೇವರು, ರೇಚಯ್ಯ ಶರಣರು, ಕೂಗುಮಾರಿತಂದೆ, ಕಲ್ಯಾಣಮ್ಮನವರು, ಡೋಹಾರ ಕಕ್ಕಯ್ಯನವರು, ಬೀಷ್ಠಾದೇವಿ, ಮುಂತಾದ ಶರಣರು ಮತ್ತು ಶರಣೆಯರು.
*Q: ಅನುಭವಮಂಟಪದಿಂದ ಉಳಿವಿಗೆ ವಚನಗಳನ್ನು ಹೇಗೆ ಸಾಗಿಸಿದರು?*
- *ವಚನಗಳ ಕಟ್ಟುಗಳ ಗಂಟುಗಳನ್ನು* ಚಕ್ಕಡಿಗಳು, ಕುದುರೆಗಳು, ಎತ್ತುಗಳ ಮೇಲೆ ಮತ್ತು ತೆಲೆಯ ಮೇಲೆ, ಬೆನ್ನಿನ ಹಿಂದೆ, ಹೆಗಲ ಮೇಲೆ ಹೊತ್ತುಕೊಂಡು ಉಳಿವಿಗೆ ಬಂದರು.
*Q: ಉಳವಿಗೆ ಶರಣರು ಯಾವ ಮಾರ್ಗವಾಗಿ ಬಂದರು?*
- *ಒಂದು ಶರಣರ ತಂಡ* ಬಿಜ್ಜಳನ ಸೈನಿಕರು ಮತ್ತು ಶರಣರೊಡನೆ ಕಾದ್ರೊಳ್ಳಿ, ಬೈಲಹೂಂಗಲ, ಮೂರಗೋಡ ಯುದ್ದಗಳು ನಡೆದವು ಆ ಯುದ್ದಗಳಲ್ಲಿ ಶರಣರು ಜೈಯಶಾಲಿಯಾಗಿ ಕಿತ್ತೂರು ಮಾರ್ಗವಾಗಿ ಉಳಿವಿಗೆ ಬಂದರು.
- *ಇನ್ನೊಂದು ಶರಣರ ತಂಡ* ಹುಬ್ಬಳ್ಳಿ, ತಿಮ್ಮಸಾಗರ, ಉಣಕಲ್, ಧಾರವಾಡ, ಹಳಿಯಾಳ, ದಾಂಡೇಲಿ ಮಾರ್ಗ ಬಳಿಸಿ ಉಳಿವಿಗೆ ಬಂದರು.
- *ಮೊತ್ತೊಂದು ಶರಣರ ತಂಡ* ಹುಬ್ಬಳ್ಳಿ, ಕಲಘಟಗಿ, ಯಲ್ಲಾಪುರ, ಶಿವಪುರ ಮಾರ್ಗ ಬಳಿಸಿ ಉಳಿವಿಗೆ ಬಂದರು.
*Q ಉಳವಿಯಿಂದ ಬರುವಾಗ ಏನನ್ನು ತರಬಹುದು?*
- ಶ್ರೀ ಚನ್ನಬಸವಣ್ಣನವರ ಹಾಗೂ ಶರಣರ ವಚನಗಳ ಪುಸ್ತಕಗಳನ್ನು ಮಾರಾಟ ಮಾಡುತ್ತಿರುತ್ತಾರೆ, ಈ ಪುಸ್ತಕಗಳನ್ನು ಕೊಂಡು ತಂದು ನಾವು ಪ್ರತಿನಿತ್ಯ ಪಾರಾಯಣ ಮಾಡಬೇಕು ಮನೆಯಲ್ಲಿ ಮಕ್ಕಳಿಗೂ ಕಳಿಸಬೇಕು.
*Q: ಉಳವಿಯಿಂದ ಬಂದ ನಂತರ ನೆರೆಹೊರೆಯವರಿಗೆ ಪ್ರಸಾದದ ಜೊತೆಗೆ ಏನನ್ನು ಕೊಡಬೇಕು?*
- ಪ್ರಸಾದದ ಜೊತೆಗೆ ಒಂದು ವಿಭೂತಿ, ರುದ್ರಾಕ್ಷಿ, ವಚನದ ಪುಸ್ತಕವನ್ನು ಕೊಡುವುದರಿಂದ ಚೆನ್ನಬಸವಣ್ಣನವರ ಹಾಗೂ ಶರಣರ ಕೃಪೆ ಅನುಗ್ರಹ ಆಶೀರ್ವಾದವಾಗುತ್ತದೆ.
*Q: ಉಳವಿ ಸುತ್ತಮುತ್ತಲೂ ಯಾವ ಯಾವ ಸ್ಥಳಗಳನ್ನು ನೋಡಬಹುದು?*
1) ಚಿನ್ಮಯಜ್ಞಾನಿ ಚನ್ನಬಸವೇಶ್ವರ ಲಿಂಗೈಕ್ಯ ಗದ್ದುಗೆ (ದೇವಸ್ಥಾನ)
2) ಶ್ರೀ ಅಡಕೇಶ್ವರ ಶರಣರ ಲಿಂಗೈಕ್ಯ ಗದ್ದುಗೆ (ದೇವಸ್ಥಾನ)
3) ಶ್ರೀ ಮಡಿಕೇಶ್ವರ ಶರಣರ ಲಿಂಗೈಕ್ಯ ಗದ್ದುಗೆ (ದೇವಸ್ಥಾನ)
4) ಅಕ್ಕನಾಗಮ್ಮ ಗವಿ (ವೀರಮಾತೆ ಅಕ್ಕನಾಗಲಾಂಬಿಕ ತಾಯಿಯವರು ಲಿಂಗಾಂಗ ಯುಗ ಧ್ಯಾನ ಅನುಸಂಧಾನ ಮಾಡಿದ ಪವಿತ್ರವಾದ ಸ್ಥಳ)
5) ಹರಳಯ್ಯ ಚಿಲುಮೆ
6) ಆಕಳಗವಿ ( ಆಕಳ ಗವಿಗೂ ಹಾಗೂ ಮಾಮನೆಗೆ ಒಳಗಡೆಯಿಂದ ಸಂಪರ್ಕವಿದೆ ಎಂಬ ಇತಿಹಾಸವಿದೆ)
7) ಶಿವಪುರ (ಪರಮಪೂಜ್ಯ ಚನ್ನಬಸವೇಶ್ವರ ಆನಂದ ಸ್ವಾಮೀಜಿಯವರ ಆಶ್ರಮ)
8) 12ನೇ ಶತಮಾನದ ರೇಚಯ್ಯ ಶರಣರ ಗದ್ದುಗೆ (ಲಿಂಗೈಕ್ಯ ಸ್ಥಳ)
9) ಮಹಾಮನೆ ( ಶರಣರು ವಚನಗಳನ್ನು ರಕ್ಷಣೆ ಮಾಡಿದ ಗವಿ ಹಾಗೂ ಅವರು ಇಲ್ಲಿಂದ ಬೇರೆ ಬೇರೆ ಕಡೆ ಮತ್ತೆ ಲಿಂಗಾಯತ ತತ್ವಗಳನ್ನು ಜನಸಾಮಾನ್ಯರಿಗೆ ತಿಳಿಸಲು ವಚನಗಳನ್ನು ಶರಣರೊಂದಿಗೆ, ಜಂಗಮ ರೊಂದಿಗೆ ಕಳಿಸುತ್ತಿದ್ದರು)
10) ವೀರಮಾತೆ ಅಕ್ಕ ನಾಗಲಾಂಬಿಕತಾಯಿ ಪೀಠ (ಮಾತಾಜಿ ಆಶ್ರಮ)
11) ತೋಗು ಸೇತುವೆ (ಕಾಳಿ ನದಿಗೆ ಅಡ್ಡಲಾಗಿ ಉಳವಿಯಿಂದ ಯಲ್ಲಾಪುರಗೆ ಸಂಪರ್ಕ ಕಲ್ಪಿಸುವ ತೂಗು ಸೇತುವೆ )
11) ಸಾತೋಡಿ ಫಾಲ್ಸ್ .. ಇನ್ನೂ ಹಲವು ಸ್ಥಳಗಳು.. #ಬಸವಾದಿ ಶರಣ ಶರಣೆಯರು #ಬಸವಣ್ಣನವರ ವಚನಗಳು #ಶರಣ ಸಾಹಿತ್ಯ #//🌳ವಚನ ಸಾಹಿತ್ಯ 🌳// #ವಚನಗಳು
ಶರಣ ಅಜಗಣ್ಣತಂದೆ ಯವರ ವಚನ.. #ವಚನಗಳು #//🌳ವಚನ ಸಾಹಿತ್ಯ 🌳// #ಶರಣ ಸಾಹಿತ್ಯ #ಬಸವಣ್ಣನವರ ವಚನಗಳು #ಬಸವಾದಿ ಶರಣ ಶರಣೆಯರು
ಅಗ್ಘವಣಿಯ ಹಂಪಯ್ಯನವರು.. #ಬಸವಾದಿ ಶರಣ ಶರಣೆಯರು #ಬಸವಣ್ಣನವರ ವಚನಗಳು #ಶರಣ ಸಾಹಿತ್ಯ #//🌳ವಚನ ಸಾಹಿತ್ಯ 🌳// #ವಚನಗಳು
ಲಿಂಗಾಯತ ಧರ್ಮ.. #ವಚನಗಳು #//🌳ವಚನ ಸಾಹಿತ್ಯ 🌳// #ಶರಣ ಸಾಹಿತ್ಯ #ಬಸವಣ್ಣನವರ ವಚನಗಳು #ಬಸವಾದಿ ಶರಣ ಶರಣೆಯರು












