
ಕಾಯಕವೇ ಕೈಲಾಸ..
@76865063
ದಯವೇ ಧರ್ಮದ ಮೂಲವಯ್ಯಾ.. ದೇಹವೇ ದೇಗುಲ.. ಅರಿವೇ ಗುರು..
ಶ್ರೀ ಗುರು ಬಸವ ಲಿಂಗಾಯನಮಃ.. "ಉಟ್ಟುದ ತೊರೆದವಂಗೆ ಊರೇನು, ಕಾಡೇನು??? ನಷ್ಟ ಸಂತಾನಕ್ಕೆ ಕುಲವೇನು, ಛಲವೇನು??? ಹುಟ್ಟುಗೆಟ್ಟಾತಂಗೆ ಪುಣ್ಯವೇನು, ಪಾಪವೇನು??? ಅದು ಕೆಟ್ಟದು ಕೆಟ್ಟದು ನಿನ್ನ ನೀನರಿಯದೆ ಬಟ್ಟ ಬಯಲಲ್ಲಿ ಬಿದ್ದೆಯಲ್ಲಾ ಅಜಗಣ್ಣ ತಂದೆ.. ✍️ ಶರಣೆ ಮುಕ್ತಾಯಕ್ಕ ನವರ ವಚನ.. ಬಸವ ಬೆಳಗಿನ ಶರಣು ಶರಣಾರ್ಥಿಗಳು 🙏 #ವಚನಗಳು #//🌳ವಚನ ಸಾಹಿತ್ಯ 🌳// #ಶರಣ ಸಾಹಿತ್ಯ #ಬಸವಣ್ಣನವರ ವಚನಗಳು #ಬಸವಾದಿ ಶರಣ ಶರಣೆಯರು
ಶರಣೆ ಮುಕ್ತಾಯಕ್ಕ ನವರ ವಚನ.. #ಬಸವಾದಿ ಶರಣ ಶರಣೆಯರು #ಬಸವಣ್ಣನವರ ವಚನಗಳು #ಶರಣ ಸಾಹಿತ್ಯ #//🌳ವಚನ ಸಾಹಿತ್ಯ 🌳// #ವಚನಗಳು
ಶರಣೆ ಮುಕ್ತಾಯಕ್ಕ ನವರ ವಚನ.. #ವಚನಗಳು #//🌳ವಚನ ಸಾಹಿತ್ಯ 🌳// #ಶರಣ ಸಾಹಿತ್ಯ #ಬಸವಣ್ಣನವರ ವಚನಗಳು #ಬಸವಾದಿ ಶರಣ ಶರಣೆಯರು
ಶ್ರೀ ಗುರು ಬಸವಲಿಂಗಾಯ ನಮ:.. "ತೊರೆಯ ಕಟ್ಟೆಯ ಕಟ್ಟಿ ನಿಲಿಸಲುಬಹುದೆ??? ನೆರೆ ಮರುಳಿಗೆ ಬುದ್ಧಿಯ ಹೇಳಲುಬಹುದೆ??? ತರಿಸಲುವೋಚ್ಛೆಯನರಿಯದೆ ಮರೆದಿದ್ದಡೆ ಹಗೆ ಇರುವುದ ಮಾಣ್ಬನೆ??? ದೂರದಲ್ಲಿ ಹೋದವ ಊರ ಸುದ್ದಿಯನರಿಯ ಹೇಳದೆ ಬಯಲಾದ ಕಾಣ, ಎನ್ನ ಅಜಗಣ್ಣ ತಂದೆ.. ✍️ ಶರಣೆ ಮುಕ್ತಾಯಕ್ಕ ನವರ ವಚನ.. ವಚನದ ಭಾವಾರ್ಥ: ತೊರೆಯ ನೀರನ್ನೇ ಕಟ್ಟಿಯಾಗಿ ನಿಲ್ಲಿಸಲು ಸಾಧ್ಯವಿಲ್ಲ. ಪೂರ್ತಿ ಮರುಳನಾದ ವ್ಯಕ್ತಿಗೆ ಬುದ್ಧಿ ಹೇಳಲು ಆಗದು. ಹಾಗೆಯೆ, ವೈರಿಯ ಸಂಹಾರಕ್ಕೆಂದು ಹೋಗಿ, ಎದುರಿಗೆ ಇರುವ ವೈರಿಯ ಮನೋಸ್ಥಿಯನ್ನೇ ಅರಿಯದೆ ಸುಮ್ಮನಿದ್ದರೆ, ಆತ ಇರಿಯದೆ ಬಿಡಲಾರ. ಈ ಸತ್ಯಸಂಗತಿಗಳನ್ನು ಹೇಳಿ, ದೂರಾನ್ವಯದಿಂದ ಯಾವ ಕೆಲಸವೂ ಸಾಧಿತವಾಗದೆಂಬ ವಾಸ್ತವವನ್ನು ಮನಗಾಣಿಸುತ್ತಾಳೆ ಮುಕ್ತಾಯಕ್ಕ ಈ ವಚನದಲ್ಲಿ. ದೂರ ಹೋದವನು ಊರ ಸುದ್ದಿಯನ್ನು ಅರಿಯದಂತೆ, ನನ್ನ ಅಜಗಣ್ಣ ಏನನ್ನೂ ಹೇಳದೆ ದೂರ ಹೋಗಿಬಿಟ್ಟ, ಎಂದು ಮನದ ಅಳಲನ್ನು ಮನನೊಂದು ತೋಡಿಕೊಳುತ್ತಾರೆ ಮಹಾ ತಾಯಿ ಶರಣೆ ಮುಕ್ತಾಯಕ್ಕ ನವರು.. #ಬಸವಾದಿ ಶರಣ ಶರಣೆಯರು #ಬಸವಣ್ಣನವರ ವಚನಗಳು #ಶರಣ ಸಾಹಿತ್ಯ #//🌳ವಚನ ಸಾಹಿತ್ಯ 🌳// #ವಚನಗಳು
"ಆದ್ಯರಲ್ಲ, ವೇದ್ಯರಲ್ಲ, ಸಾಧ್ಯರಲ್ಲದ ಹಿರಿಯರ ನೋಡಾ.. ತನು ವಿಕಾರ, ಮನ ವಿಕಾರ, ಇಂದ್ರಿಯ ವಿಕಾರದ ಹಿರಿಯರ ನೋಡಾ.. ಶಿವಚಿಂತೆ ಶಿವಜ್ಞಾನಿಗಳ ಕಂಡರೆ ಅಳವಾಡಿ ನುಡಿವರು ಗುಹೇಶ್ವರನರಿಯದ ಕರ್ಮಿಗಳಯ್ಯ.. ✍️ ಅಲ್ಲಮಪ್ರಭುಗಳ ವಚನ.. ಶರಣು ಶರಣಾರ್ಥಿಗಳು 🙏 #ವಚನಗಳು #//🌳ವಚನ ಸಾಹಿತ್ಯ 🌳// #ಶರಣ ಸಾಹಿತ್ಯ #ಬಸವಣ್ಣನವರ ವಚನಗಳು #ಬಸವಾದಿ ಶರಣ ಶರಣೆಯರು
"ಮರುಳ ಹಿಡಿದಿಹೆನೆಂಬವರು ಮರುಳಾಗಿ ಹಿಡಿಯಬೇಕು ಕೇಳಿರೆ| ಬಹುಬುದ್ಧಿಯ ಜಡರಿಗೆ ಹಿಡಿಯಬಾರದು| ನಿರವಯಲ ಬಯಲ ಹಿಡಿಯಬಹುದೆ| ಕೂಡಲಸಂಗಮದೇವರ ಭಾವಶಸ್ತ್ರದಿಂದ ಗೆಲಿದುಕೊಂಡು ಬನ್ನಿ| ✍️ ವಿಶ್ವಗುರು ಬಸವಣ್ಣನವರ ವಚನ.. ಶರಣು ಶರಣಾರ್ಥಿಗಳು 🙏 #ಬಸವಾದಿ ಶರಣ ಶರಣೆಯರು #ಬಸವಣ್ಣನವರ ವಚನಗಳು #ಶರಣ ಸಾಹಿತ್ಯ #//🌳ವಚನ ಸಾಹಿತ್ಯ 🌳// #ವಚನಗಳು
"ರೂಪ[ನೆ] ಕಂಡರು, ನಿರೂಪ[ನೆ] ಕಾಣರು. ಅನುವನೆ ಕಂಡರು, ತನುವನೆ ಕಾಣರು. ಆಚಾರವನೆ ಕಂಡರು, ವಿಚಾರವನೆ ಕಾಣರು. ಗುಹೇಶ್ವರಾ ನಿಮ್ಮ ಕುರುಹನೆ ಕಂಡರು, ಕೂಡಲರಿಯದೆ ಕೆಟ್ಟರು! ✍️ ಶೂನ್ಯ ಪೀಠಾಧೀಶ ಅಲ್ಲಮಪ್ರಭುದೇವರ ವಚನ.. ಬಸವ ಬೆಳಗಿನ ಶರಣು ಶರಣಾರ್ಥಿಗಳು 🙏 #ವಚನಗಳು #//🌳ವಚನ ಸಾಹಿತ್ಯ 🌳// #ಶರಣ ಸಾಹಿತ್ಯ #ಬಸವಣ್ಣನವರ ವಚನಗಳು #ಬಸವಾದಿ ಶರಣ ಶರಣೆಯರು
"ಚಿನ್ಮಯ ಚಿತ್ಪ್ರಕಾಶ ಚಿದಾನಂದ ಲಿಂಗವೆ, ಎನ್ನ ಹೃದಯ ಕಮಲದಲ್ಲಿ ಬೆಳಗಿ ತೋರುವ ಪರಂಜ್ಯೋತಿ, ಎನ್ನ ಕರಸ್ಥಲಕ್ಕನುವಾದ ಧರ್ಮಿ, ಎನ್ನ ಕಂಗಳ ಕೊನೆಯಲ್ಲಿ ಮೂರ್ತಿಗೊಂಡಿಪ್ಪೆಯಯ್ಯಾ, ಕೂಡಲಸಂಗಮದೇವಯ್ಯಾ.. ✍🏻 ವಿಶ್ವಗುರು ಬಸವಣ್ಣನವರ ವಚನ.. ಶರಣು ಶರಣಾರ್ಥಿಗಳು 🙏 #ಬಸವಾದಿ ಶರಣ ಶರಣೆಯರು #ಬಸವಣ್ಣನವರ ವಚನಗಳು #ಶರಣ ಸಾಹಿತ್ಯ #//🌳ವಚನ ಸಾಹಿತ್ಯ 🌳// #ವಚನಗಳು
"ಜಡೆ ಮುಡಿ ಬೋಳು ಹೇಗಾದಡಾಗಲಿ, ನಡೆನುಡಿ ಸಿದ್ದಾಂತವಾದಡೆ ಸಾಕು, ಆತ ಪರಂಜ್ಯೋತಿ ಗುರುವಹ. ಆ ಇರವ ನಿನ್ನ ನೀನರಿ, ಪುಣ್ಯಾರಣ್ಯ ದಹನ ಭೀಮೇಶ್ವರಲಿಂಗ ನಿರಂಗಸಂಗ.. ✍️ ಶರಣ ಕೋಲ ಶಾಂತಯ್ಯನವರ ವಚನ.. (12 ನೇ ಶತಮಾನ ಬಸವಕಲ್ಯಾಣ ಬೀದರ ಜಿಲ್ಲೆ).. ವಚನ ವಿಮರ್ಶೆ: ಬಹಿರಂಗವಾಗಿ ಮೀಸೆ ಗಡ್ಡ ಬಿಡುವುದು, ಜಡೆ ಬೆಳೆಸುವುದು, ತಲೆಗೂದಲು ಬೋಳಿಸಿಕೊಳ್ಳುವುದು ಇವೆಲ್ಲವೂ ಹೇಗಾದರೂ ಇರಲಿ ಆದರೆ ನಡೆ ನುಡಿ ಸರಿಯಾಗಿರಬೇಕು ಮತ್ತು ಅದೇ ಜೀವನದ ತತ್ವವಾಗಿರಬೇಕು. ಅಂತಹ ಮನುಷ್ಯರು ಮಾತ್ರ ಮಾರ್ಗದರ್ಶಕ ಗುರುಗಳು ಮತ್ತು ಜ್ಞಾನಿಗಳು. ಅಂತಹ ಅರಿವು ತಿಳಿದಿರಬೇಕು..! #ವಚನಗಳು #//🌳ವಚನ ಸಾಹಿತ್ಯ 🌳// #ಶರಣ ಸಾಹಿತ್ಯ #ಬಸವಣ್ಣನವರ ವಚನಗಳು #ಬಸವಾದಿ ಶರಣ ಶರಣೆಯರು
ಶ್ರೀ ಗುರು ಬಸವ ಲಿಂಗಾಯ ನಮಃ.. "ಎನಗೆ ಹರಿಯಿತ್ತು ತಮವೆಂಬ ಸಂಸಾರದ ಬಂಧನ. ಅಡಗಿಯೂ ಉಡುಗಿಯೂ ಕಂಡೆಹೆನೆಂದೆಂಬ ಸಂಶಯ. ಸಂಕಲ್ಪ ಸಂದೇಹ ಭ್ರಾಂತು ಭ್ರಮೆಯ ಭಾವಕ್ಕೆ ಬಯಲಾಯಿತ್ತು. ನಿತ್ಯನಿರಂಜನ ಪರಂಜ್ಯೋತಿ ಪ್ರಕಾಶವೆನಗೆ ತಲೆದೋರಿತ್ತು. ಶುದ್ಧಸಿದ್ಧ ಪ್ರಸಿದ್ಧ ಪ್ರಸನ್ನ ಪ್ರಭುವೆ ಶಾಂತಚೆನ್ನಮಲ್ಲಿಕಾರ್ಜುನ ದೇವಯ್ಯಾ, ಕಾಣಬಂದಿತ್ತು ಕಾಣಾ, ಪ್ರಭುದೇವರ ಕಾರುಣ್ಯ ಪ್ರಸಾದದಿಂದ ಬಸವಣ್ಣ.. ✍🏻 ಶರಣ ಮರುಳಶಂಕರದೇವರ ವಚನ.. ಬಸವ ಬೆಳಗಿನ ಶರಣು ಶರಣಾರ್ಥಿ ಗಳು 🙏🏻 #ಬಸವಾದಿ ಶರಣ ಶರಣೆಯರು #ಬಸವಣ್ಣನವರ ವಚನಗಳು #ಶರಣ ಸಾಹಿತ್ಯ #//🌳ವಚನ ಸಾಹಿತ್ಯ 🌳// #ವಚನಗಳು









![ವಚನಗಳು - ఓం ಶ್ರೀ ಗುರು ಬಸವ ಲಿಂಗಾಯ ನಮಃ PHOTOLAB photolab-Icom] ఓం ಶ್ರೀ ಗುರು ಬಸವ ಲಿಂಗಾಯ ನಮಃ PHOTOLAB photolab-Icom] - ShareChat ವಚನಗಳು - ఓం ಶ್ರೀ ಗುರು ಬಸವ ಲಿಂಗಾಯ ನಮಃ PHOTOLAB photolab-Icom] ఓం ಶ್ರೀ ಗುರು ಬಸವ ಲಿಂಗಾಯ ನಮಃ PHOTOLAB photolab-Icom] - ShareChat](https://cdn4.sharechat.com/bd5223f_s1w/compressed_gm_40_img_195091_11d7bda9_1772000193365_sc.jpg?tenant=sc&referrer=user-profile-service%2FrequestType50&f=365_sc.jpg)


