#✍️📜ದ.ರಾ. ಬೇಂದ್ರೆಯವರ ಜನ್ಮ ದಿನಾಚರಣೆ✍️📜 ದ. ರಾ. ಬೇಂದ್ರೆಯವರು ಕನ್ನಡ ಸಾಹಿತ್ಯದ ನವೋದಯ ಕಾಲಘಟ್ಟದ ಪ್ರಮುಖ ಕವಿಗಳಲೊಬ್ಬರು. ಅವರನ್ನು 'ಕನ್ನಡದ ವರಕವಿ' ಎಂದು ಪರಿಗಣಿಸಲಾಗಿದೆ. ಬೇಂದ್ರೆಯವರು 'ಅಂಬಿಕಾತನಯದತ್ತ' ಎಂಬ ಕಾವ್ಯನಾಮದಿಂದ ಪ್ರಸಿದ್ಧರಾದವರು. ಭಾರತೀಯ ಜ್ಞಾನಪೀಠವು ೧೯೭೩ ರ ಸಾಹಿತ್ಯ ಪ್ರಶಸ್ತಿಯನ್ನು ದ. ರಾ. ಬೇಂದ್ರೆಯವರ 'ನಾಕುತಂತಿ' ಎಂಬ ಕವನ ಸಂಕಲನಕ್ಕೆ ನೀಡಿ ಗೌರವಿಸಿದೆ. ಬೇಂದ್ರೆಯವರು ತಮ್ಮ ಕೃತಿಗಳಲ್ಲಿ ವೈವಿಧ್ಯಮಯ ಆಧ್ಯಾತ್ಮಿಕ ತಂತ್ರಗಳನ್ನು, ಶಾಸ್ತ್ರೀಯ ಹಾಗೂ ಸಾಂಪ್ರದಾಯಿಕ ಶೈಲಿ, ಗ್ರಾಮೀಣ ಮತ್ತು ಜಾನಪದ ಸಾಹಿತ್ಯ ಆಡುಭಾಷೆಯ ನುಡಿಗಟ್ಟುಗಳು ಯತೇಚ್ಛವಾಗಿ ಬಳಸಿದ್ದರು.ಈ ಮಹಾನ್ ಪದ ಮಾಂತ್ರಿಕ ಅಂಬಿಕಾ ತನಯದತ್ತ ದ. ರಾ. ಬೇಂದ್ರೆಯವರ ಜನ್ಮದಿನದಂದು ಭಕ್ತಿ ಪೂರ್ವಕ ನಮನಗಳನ್ನು ಸಲ್ಲಿಸೋಣ. #ನಿಮ್ಮ ಸ್ನೇಹಿತ ಅನಿಲ್ ಮಲ್ನಾಡ್


