#🧠 ಸಾಮಾನ್ಯ ಜ್ಞಾನ & ಕರೆಂಟ್ ಅಫೇರ್ಸ್ 🧠 scheme in news
✍️ ಸೇತುಬಂಧ ವಿದ್ವಾನ್ ಯೋಜನೆ ( Setubandha scholar scheme )
👉 ಈ ಯೋಜನೆಯನ್ನು ಶಿಕ್ಷಣ ಸಚಿವಾಲಯ ಹಾಗೂ ಕೇಂದ್ರ ಸಂಸ್ಕೃತಿ ವಿಶ್ವವಿದ್ಯಾಲಯದ ಭಾರತೀಯ ಜ್ಞಾನ ವ್ಯವಸ್ತೆಗಳ ಸಹಭಾಗಿತ್ವದಲ್ಲಿ ಪ್ರಾರಂಭಿಸಿದೆ.
👉 ಉದ್ದೇಶ : ಸಾಂಪ್ರದಾಯಿಕ ಗುರುಕುಲ ಕಲಿಕೆಯು ಆಧುನಿಕ ಸಂಶೋಧನೆಯೊಂದಿಗೆ ಸಂಯೋಜಿಸುವುದು ಮತ್ತು ಉನ್ನತ ಶಿಕ್ಷಣದಲ್ಲಿ ಭಾರತೀಯ ಜ್ಞಾನ ವ್ಯವಸ್ಥೆಗಳನ್ನು ( Indian knowledge system ) ಮುಖ್ಯ ವಾಹಿನಿಗೆ ತರುವುದು.
👉 ಈ ಯೋಜನೆಯು ಸ್ನಾತಕೋತ್ತರ ಪದವಿ ಮತ್ತು ಡಾಕ್ಟರೇಟ್ ಸಂಶೋಧನೆಗೆ ದೇಶದ ಪ್ರತಿಷ್ಠಿತ IIT ಸಂಸ್ಥೆಗಳಲ್ಲಿ ದಾಖಲಾತಿಗೆ ಪ್ರೋತ್ಸಾಹಿಸುತ್ತದೆ.
👉 ಅರ್ಹತೆ :
1) ಮಾನ್ಯತೆ ಪಡೆದ ಗುರುಕುಲದಲ್ಲಿ ಕನಿಷ್ಠ ಐದು ವರ್ಷ ಕಲಿತು ಶಾಸ್ತ್ರ ಮತ್ತು ಸಾಂಪ್ರದಾಯಿಕ ಜ್ಞಾನ ಹೊಂದಿರಬೇಕು.
2) ವಯಸ್ಸಿನಮಿತಿ : 32 ವಯಸ್ಸಿಗಿಂತ ಕಡಿಮೆ.
3) ಯಾವುದೇ ಪದವಿ ಅಗತ್ಯವಿಲ್ಲ.
👉 ಸ್ನಾತಕೋತ್ತರ ಪದವಿಗೆ ಆಯ್ಕೆಯಾದವರು ತಿಂಗಳಿಗೆ 40,000 ಫೆಲೋಶಿಪ್ ಮತ್ತು ವಾರ್ಷಿಕ 1 ಲಕ್ಷ ಸಂಶೋಧನಾ ಅನುದಾನ ಪಡೆಯುತ್ತಾರೆ.
👉 ಪಿಎಚ್ಡಿ ಅಡಿಯಲ್ಲಿ ಬರುವವರು ತಿಂಗಳಿಗೆ 65000 ಫೆಲೋಶಿಪ್ ಮತ್ತು ವರ್ಷಕ್ಕೆ 2 ಲಕ್ಷ ಸಂಶೋಧನಾ ಅನುದಾನ ಪಡೆಯುತ್ತಾರೆ.
👉 ಸೇತುಬಂಧ ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬಹುದು.


