ShareChat
click to see wallet page
search
ಶುಕ್ರ ಗ್ರಹ :- ಶುಕ್ರ ಗ್ರಹ ಸೂರ್ಯನಿಗೆ ಅತಿ ಸಮೀಪ ಅಂದರೆ ಸೂರ್ಯ- ಚಂದ್ರರ ನಂತರ ಎರಡನೇ ಹತ್ತಿರದ ಗ್ರಹ ಶುಕ್ರಗ್ರಹ, ಇದು ಅತ್ಯಂತ ಸುಂದರವಾದ ಗ್ರಹ ಬೆಳಗ್ಗೆ ಮತ್ತು ಸಂಜೆ ಪ್ರಖರವಾಗಿ ಕಾಣುವುದರಿಂದ ಇದನ್ನು ಹಗಲು ನಕ್ಷತ್ರ ಮತ್ತು ಸಂಜೆ ನಕ್ಷತ್ರ ಎಂದು ಕರೆಯುತ್ತಾರೆ. ಈ ಗ್ರಹ ಭೂಮಿಯಷ್ಟೇ ದೊಡ್ಡದಾಗಿದ್ದು ಭೂಮಿಯ ಆಕಾರವನ್ನೇ ಹೊಂದಿದೆ. ಆದ್ದರಿಂದ ಭೂಮಿ ಸಹೋದರ ಎನ್ನುತ್ತಾರೆ. ಅಸುರ ಗುರುಗಳಾದ 'ಶುಕ್ರಾಚಾರ್ಯರೇ'ಶುಕ್ರಗ್ರಹ ಆಗಿದ್ದಾರೆ. ಅಸುರ ಗುರು ಶುಕ್ರಾಚಾರ್ಯರು ಗ್ರಹ ಆಗಲು ಒಂದು ಹಿನ್ನೆಲೆ. ಶುಕ್ರ ಗ್ರಹ ಆಗುವ ಮೊದಲು ಶುಕ್ರಾಚಾರ್ಯರು ಆಗಿದ್ದರು. ಭೃಗು ಮಹರ್ಷಿ ಮತ್ತು ಅವರ ಪತ್ನಿ ಪುಲೋಮೆ ಇವರಿಗೆ ಹುಟ್ಟಿದ ಮಗ ಶುಕ್ರಾಚಾರ್ಯರು. ಇವರ ಹಿರಿಯ ಸಹೋದರ ಚ್ಯವನ ಮಹರ್ಷಿಗಳು. ಶುಕ್ರಾಚಾರ್ಯರು ತಂದೆ ಭೃಗು ಮಹರ್ಷಿಗಳಂತೆ ಮಹಾಜ್ಞಾನಿಗಳು ತಂದೆಯಷ್ಟೇ ಪಾಂಡಿತ್ಯ ಪಡೆದ ಮೇಧಾವಿಗಳಾಗಿದ್ದರು. ಶುಕ್ರಾಚಾರ್ಯರ ಪತ್ನಿ ಸುಖೀರ್ತಿ ಇವರ ಮಗಳೇ ದೇವಯಾನಿ. ಒಮ್ಮೆ ರಾಕ್ಷಸರ ಉಪಟಳ ತಾಳಲಾರದೆ ಭೂದೇವಿ ನಲುಗಿದಾಗ ಮಹಾವಿಷ್ಣು ಅವರನ್ನು ಸಂಹರಿಸಲು ಸುದರ್ಶನ ಚಕ್ರವನ್ನು ಕಳಿಸುತ್ತಾನೆ. ಚಕ್ರವು ರಾಕ್ಷಸರನ್ನು ಬೆನ್ನಟ್ಟಿ ಬರುತ್ತದೆ ಅವರೆಲ್ಲ ಚಕ್ರದಿಂದ ತಪ್ಪಿಸಿಕೊಳ್ಳಲಾಗದೆ ಹೆದರಿ ಓಡುತ್ತಾ ಬಂದು ಭೃಗು ಮಹರ್ಷಿಗಳ ಆಶ್ರಮ ಕ್ಕೆ ಬರುತ್ತಾರೆ. ಅಲ್ಲಿ ಶುಕ್ರಾಚಾರ್ಯರ ತಾಯಿ ಪುಲೋಮೆ ಯಲ್ಲಿ ರಕ್ಷಿಸಲು ಕೇಳುತ್ತಾರೆ. ರಕ್ಷಣೆ ಬೇಡಿ ಬಂದವರನ್ನು ನಿರಾಕರಿಸಬಾರದೆಂದು ಪುಲೋಮೆ ಅವರನ್ನು ತನ್ನ ಆಶ್ರಮದೊಳಗೆ ಮುಚ್ಚಿಡುತ್ತಾಳೆ. ಬೆನ್ನಟ್ಟಿ ಬಂದ ಚಕ್ರವೂ ಅವಳ ಮುಂದೆ ಬಂದಾಗ ಅವಳು ನಾನು ರಾಕ್ಷಸರನ್ನು ಕಾಪಾಡುವುದಾಗಿ ಮಾತು ಕೊಟ್ಟಿದ್ದೇನೆ ಮೊದಲು ನನ್ನನ್ನು ಕೊಂದು ನಂತರ ರಾಕ್ಷಸರನ್ನು ಕೊಲ್ಲು ಎಂದಳು ಸುದರ್ಶನ ಚಕ್ರ ಅವಳನ್ನು ಕೊಲ್ಲುತ್ತದೆ. ಕೂಡಲೇ ಈ ವಿಷಯ ಶುಕ್ರಾಚಾರ್ಯರಿಗೆ ತಿಳಿದು ತಮ್ಮ ತಾಯಿಯನ್ನು ಕೊಂದ ಮಹಾ ವಿಷ್ಣುವನ್ನು ದ್ವೇಷ ಮಾಡುತ್ತಾರೆ. ಹಾಗೂ ದೇವತೆಗಳ ಮೇಲಿನ ಕೋಪದಿಂದ ಅಸುರರ ಗುರುವಾಗುತ್ತಾರೆ. ಅಸುರರು ಕೆಟ್ಟವರು ಎಂದು ತಿಳಿದೂ ಅದನ್ನೇ ಸವಾಲಾಗಿ ಸ್ವೀಕರಿಸುತ್ತಾರೆ. ಒಮ್ಮೆ ಮಹಾದಾನಿ ಅಸುರ ರಾಜ ಬಲಿ ಚಕ್ರವರ್ತಿಯಾಗ ಮಾಡುವ ಸಮಯದಲ್ಲಿ ಮಹಾವಿಷ್ಣು ವಾಮನಾವತಾರಿಯಾಗಿ ಬಂದು ಬಲಿಯಲ್ಲಿ ಮೂರು ಹೆಜ್ಜೆ ದಾನ ಕೇಳಿದ ನು, ಗುರುಗಳಾದ ಶುಕ್ರಾಚಾರ್ಯರಿಗೆ ಬಂದವನು ಸಾಮಾನ್ಯ ವಟು ಅಲ್ಲ ಎಂದು ತಿಳಿದು, ದಾನ ಕೊಡಬೇಡ ಎಂದು ಬಲಿಗೆ ಎಚ್ಚರಿಸುತ್ತಾರೆ. ಆದರೆ ಕೊಟ್ಟ ಮಾತಿಗೆ ತಪ್ಪದ ಬಲಿಯು ದಾನ ಕೊಡಲು ಮುಂದಾಗುತ್ತಾನೆ. ಆಚಾರ್ಯರು ತಪ್ಪಿಸಲು ಉಪಾಯ ಮಾಡುತ್ತಾರೆ. ಆಚಾರ್ಯರು ಸಣ್ಣ ಕ್ರಿಮಿಯಾಗಿ ದಾನ ಕೊಡಲು ಅಗತ್ಯವಾದ ನೀರಿನ ಕಮಂಡಲದ ನಾಳದ ಸಂಧಿಯಲ್ಲಿ ಸೇರಿಕೊಂಡು ದಾನ ಕೊಡುವಾಗ ಅರ್ಪಿಸಲು ನೀರು ಬೀಳ ದಂತೆ ತಡೆಯಾದರು. ಇದನ್ನರಿತ ವಾಮನ ಒಂದು ದರ್ಬೆಯ ಕಡ್ಡಿಯನ್ನು ತೆಗೆದುಕೊಂಡು ಕಮಂಡಲದ ನಾಳದೊಳಗೆ ದರ್ಬೆ ಕಡ್ಡಿ ಚುಚ್ಚಿದನು. ಅದು ಕಂಡಿಯೊಳಗಿದ್ದ ಶುಕ್ರಾಚಾರ್ಯರ ಒಂದು ಕಣ್ಣಿಗೆ ಚುಚ್ಚಿ ಕಣ್ಣು ಕಳೆದು ಕೊಂಡರು. ಮುಂದೆ ಇವರು ಒಕ್ಕಣ್ಣಿನ ಶುಕ್ರಾಚಾರ್ಯ ಎಂದು ಗುರುತಿಸಿ ದರು. ಆದರೂ ಶುಕ್ರಾಚಾರ್ಯರನ್ನು ಕಂಡರೆ ವಿಷ್ಣು ಗೆ ಗೌರವ. ಏಕೆಂದರೆ ಎಂಥದೇ ಪರಿಸ್ಥಿತಿ ಎದುರಾದರೂ, ಅಸುರ ಶಿಷ್ಯರ ಕೈಬಿಡದೆ ಶಿಷ್ಯರ ಏಳ್ಗೆ ಯಲ್ಲಿಯೇ ನಿಷ್ಠೆ ತೋರಿದ ಆಚಾರ್ಯರನ್ನು ಕೊಂಡಾಡಿದನು ಮತ್ತು ಪ್ರತಿದಿನ ಪ್ರತಿ ನಿಮಿಷ ರಾಕ್ಷಸ ಶಿಷ್ಯರ ಜೊತೆಗಿದ್ದು ಶುಕ್ರಾಚಾರ್ಯರು ತಮ್ಮ ಗುಣ ಸ್ವಭಾವದಲ್ಲಿ ಒಂದಿಂಚು ಬದಲಾಗಲಿಲ್ಲ, ಇದನ್ನೆಲ್ಲಾ ನೋಡುತ್ತಿದ್ದ ವಿಷ್ಣು ಅವರ ನಿಷ್ಠೆ ಪ್ರಾಮಾಣಿಕತೆಗೆ ಮೆಚ್ಚಿ ಶುಕ್ರಾಚಾರ್ಯರಿಗೆ ನವಗ್ರಹದ ಲ್ಲಿ ಒಂದಾಗಿ 'ಶುಭ ಕೊಡುವ" ಶುಕ್ರ ಗ್ರಹ" ಆಗುವಂತೆ ವರ ಕೊಟ್ಟನು. ಅಂದಿನಿಂದ ಶುಕ್ರಾಚಾರ್ಯರು ಶುಕ್ರ ಗ್ರಹವಾಗಿ ನವಗ್ರಹಗಳಲ್ಲಿ ಒಬ್ಬರಾ ದರು. ❤️🙏🌷 ವಿಮಲ್ ನ್ಯೂಟ್ರಿಷನ್ ಸೆಂಟರ್ 🌷🙏❤️ #🎥 Motivational ಸ್ಟೇಟಸ್ #😍 ನನ್ನ ಸ್ಟೇಟಸ್ #✍️ ಮೋಟಿವೇಷನಲ್ ಕೋಟ್ಸ್ #👦🏻 Bad Boyz ಸ್ಟೇಟಸ್ #✍️ ಮೋಟಿವೇಷನಲ್ ಕೋಟ್ಸ್
🎥 Motivational ಸ್ಟೇಟಸ್ - ೦ ೦ - ShareChat