ShareChat
click to see wallet page
search
#💐ಗುರುವಾರದ ಶುಭಾಶಯಗಳು ಹಿಂದೂ-ಮುಸ್ಲಿಂ ಭಾವೈಕ್ಯತೆಯ ಸಾಕಾರ ಮೂರ್ತಿ, ಪದ್ಮಶ್ರೀ ಪುರಸ್ಕೃತ, ಆಧುನಿಕ ಸೂಫಿಸಂತ ದಿ. ಇಬ್ರಾಹಿಂ ಸುತಾರ ಅವರ ಪುಣ್ಯಸ್ಮರಣೆಯಂದು ಗೌರವ ನಮನಗಳು. ಹಿಂದೂ ಧರ್ಮ ಪ್ರವಚನ ಸಾರುತ್ತಾ, ಭಾವೈಕ್ಯ ಬೆಸೆಯುತ್ತಾ, ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಪ್ರಶಸ್ತಿ ಪಡೆದುಕೊಂಡ ಶ್ರೀಯುತರು ಸದಾ ಆದರ್ಶಪ್ರಾಯರು.ನನ್ನ ಪ್ರೀತಿಯ ಕರುನಾಡಿನ ಸ್ನೇಹಿತರೆ ಮತ್ತು ನಾಡಿನ ಜನತೆ ಅದ್ಭುತವಾದ ಪ್ರವಚನಗಾರ ಇಬ್ರಾಹಿಂ ಎನ್. ಸುತಾರ್ ಅವರ ಅಪೂರ್ಣ ಹೆಸರು ನಬೀ ಸಾಹೇಬ್ ಸುತಾರ್ ರವರು ಬದುಕಿ ಬಾಳಿದ ದಿನಗಳು ಹೀಗೆ ಅವರ ಜನನ ೧೦ ಮೇ ೧೯೪೦ - ಅವರ ಮರಣ ೦೫ ಫೆಬ್ರವರಿ ೨೦೨೨ ಬದುಕಿ ಬಂದ ದಿನವೆಲ್ಲ ನಾಡಿಗೆ ಅರ್ಪಿಸಿದ ವ್ಯಕ್ತಿ ಎಂದರು ತಪ್ಪಾಗಲಾರದು ಅವರ ಈ ಪುಣ್ಯ ಸ್ಮರಣೆ ಎಂದು ಅವರ ನಡೆದು ಬಂದು ಹಾದಿಯ ಮೆಲುಕು ಹಾಕೋಣ ಅವರನ್ನು ಮರಿಸೋಣ ಎನ್ನುವುದು ನಮ್ಮ ಯುವ ಪೀಳಿಗೆಯ ಆಸೆಯಾಗಲಿ ಎನ್ನುವುದು ನನ್ನ ಆಸೆ ವೈದಿಕ, ವಚನ ಮತ್ತು ಸೂಫಿ ಪರಂಪರೆಗಳ ಕುರಿತು ಭಜನೆ, ಪ್ರವಚನ, ಸಂವಾದಗಳ ಮೂಲಕ ಜನರಲ್ಲಿ ಭಾವೈಕ್ಯತೆ ಉಂಟು ಮಾಡಿದ ತತ್ವಪದಕಾರ ಮತ್ತು ಪ್ರವಚನಕಾರಾಗಿದ್ದರು. ಇವರಿಗೆ ೨೦೧೮ರ ಪದ್ಮಶ್ರೀ ಪ್ರಶಸ್ತಿಯನ್ನು ಕೊಡಲಾಗಿದೆ.ಇವರ ತಂದೆ ಮಹಾಲಿಂಗಪುರದ ನಬಿಸಾಹೆಬ್ ತಾಯಿ ಅಮೀನಾಬಿ. ಬಡತನದಿಂದಾಗಿ ಶಿಕ್ಷಣ ಮೂರನೇ ತರಗತಿಯವರೆಗೆ ಮಾತ್ರ ಕಲಿತರು. ನಂತರ ನೇಕಾರಿಕೆ ಕಲಿತು ಬದುಕು ಸಾಗಿಸತೊಡಗಿದರು. ಬಾಲ್ಯದಲ್ಲಿ ಮಸೀದಿಯಲ್ಲಿ ನಮಾಜು ಕಲಿತು ಕುರಾನ್ ಅಧ್ಯಯನ ಮಾಡಿದರು. ಬೇರೆ ಧರ್ಮಗಳನ್ನು ತಿಳಿಯಬಯಸಿದರು. ಊರಿನ ಭಜನಾಸಂಘದಲ್ಲಿ ಪಾಲುಗೊಳ್ಳುವ ಮೂಲಕ ತತ್ವಪದ ವಚನಗಳನ್ನು ಕಲಿತರು. ಪ್ರವಚನಗಳನ್ನು ಕೇಳಿದರು. ನಿಜಗುಣಯೋಗಿಗಳ ಶಾಸ್ತ್ರ ಭಗವದ್ಗೀತೆಗಳ ಅಧ್ಯಯನ ಮಾಡಿದರು. ದೇವರು ಧರ್ಮ ಬೇರೆ ಆದರೂ ಸತ್ಯ ಒಂದೇ ಎಂದು ಅರಿತರು. ೧೯೮೦ರಲ್ಲಿ ಪ್ರವಚನಗಳನ್ನು ಕೊಡಲು ಆರಂಬಿಸಿದರು ಮಹಾತ್ಮ ಕಬೀರರಂತೆ ಇವರು ಜನರಲ್ಲಿ ಭಾವೈಕ್ಯತೆಯನ್ನು ಉಂಟು ಮಾಡುತ್ತಿದ್ದಾರೆ.ಇವರ ಭಜನೆ ತತ್ವಪದಗಳ ಸುರುಳಿಗಳು ಬಿಡುಗಡೆ ಆಗಿವೆ. 'ನಾವೆಲ್ಲಾ ಭಾರತೀಯರು' ಎಂಬುದು ಅವರ ಕವನ ಸಂಕಲನ. ಇವರು ಪಡೆದ ಪ್ರಶಸ್ತಿಗಳು ಸನ್ಮಾನ ಪುರಸ್ಕಾರಗಳು ಹಲವು೧೯೯೫ ರಲ್ಲಿ ಕರ್ನಾಟಕ ಸರಕಾರದಿಂದ ರಾಜ್ಯೋತ್ಸವ ಪ್ರಶಸ್ತಿ.೨೦೧೮ರಲ್ಲಿ ಭಾರತ ಸರಕಾರದಿಂದ ಪದ್ಮಶ್ರೀ ಪ್ರಶಸ್ತಿ ಇವರ ಪ್ರಶಸ್ತಿಗಳಿಗೆ ಸಿಕ್ಕ ಗೌರವದ ಗೌರವಕ್ಕಿಂತ ಇವರ ವಚನಗಳು ಮತ್ತು ಇವರ ಬೋಧನೆಗಳಿಗೆ ಸಿಕ್ಕ ಗೌರವವೇ ಹೆಚ್ಚು ಅಂತಹ ಗೌರವ ಸಂಪಾದಿಸುವುದು ಸುಲಭದ ಮಾತಲ್ಲ ಕರುನಾಡಿನ ಸಂತ ಎಂದೇ ಕರೆಯಲ್ಪಡುತ್ತಿದ್ದ ಇಬ್ರಾಹಿಂ ಸುತಾರ್ ರವರ ಪುಣ್ಯ ಸ್ಮರಣೆ ಎಂದು ನಾವು ಅವರ ಬೋಧನೆಗಳನ್ನು ಮತ್ತು ಅವರ ನಡವಳಿಕೆಗಳನ್ನು ನಮ್ಮ ಜೀವನದಲ್ಲಿ ಅಂಟಿ ಹಾಕಿಕೊಳ್ಳೋಣ ದೇಶ ಕಟ್ಟೋಣ ಎನ್ನುವ ಇಬ್ರಾಹಿಂ ಸುತಾರ್ ಅವರ ಮಾತುಗಳು ನಮ್ಮ ಕಿವಿಯೊಳಗೆ ಗುಯಿಗುಟ್ಟುತ್ತಿದೆ ಅವರ ದಾರಿ ದೇಶದ ಯುವ ಪೀಳಿಗೆ ಅಳವಡಿಸಿಕೊಂಡರೆ ದೇಶ ದೇಶದ ಜನರು ಸದಾ ನಗುನಗುತ್ತಿರಬಹುದು ಅನಿಸುತ್ತದೆ ಇಬ್ರಾಹಿಂ ಸುತಾರ್ ರವರು ಕೆಲವೊಮ್ಮೆ ಹೇಳುತ್ತಿದ್ದ ಮಾತುಗಳು ನಾಡಿನ ಜನರ ಜೀವನ ಶೈಲಿಯ ಆಧಾರಿತ ಜಾತಿ ಪದ್ಧತಿಯನ್ನು ಮತ್ತು ಅವಲಂಬಿಸಿದ್ದ ಕೃಷಿ ಪದ್ಧತಿಯನ್ನು ಅವಲಂಬಿಸಿ ಜಾತಿಗಳನ್ನು ಕಟ್ಟಲಾಗಿತ್ತು ಅದನ್ನು ಇಂದು ದುರುಪಯೋಗ ಪಡಿಸದೆ ಒಳ್ಳೆತನಕ್ಕೆ ಬಳಸಿಕೊಳ್ಳೋಣ ನಾವೆಲ್ಲ ಎನ್ನುತ್ತಿದ್ದರು. ಇವರ ಮಾತುಗಳು ದೇಶದ ಜನರ ಹಾಗೂ ಕನ್ನಡ ನಾಡಿನ ಜನರ ಹಿತವನ್ನು ಕಾಪಾಡುವುದರಲ್ಲಿ ಹೆಚ್ಚಿನ ಶ್ರಮ ವಹಿಸಿದೆ ಎನಿಸುತ್ತದೆ ಸ್ನೇಹಿತರೆ, ನೋಡಿಕೊಂಡ ಅದ್ಭುತ ವ್ಯಕ್ತಿಗೆ ನಮ್ಮ ಕೋಟಿ ಕೋಟಿ ನಮನ ಸಲ್ಲಿಸೋಣ ಎಂದು ಎನ್ನುತ್ತಾ ನಿಮ್ಮ ಸ್ನೇಹಿತರು ಅನಿಲ್ ಮಲ್ನಾಡ್
💐ಗುರುವಾರದ ಶುಭಾಶಯಗಳು - 3 ಕನ್ನಡದ ಕಬೀರ, ಪದ್ಮಶ್ರೀ ಪುರಸ್ಕೃತ, ಆಧುನಿಕ ಸೂಫಿಸಂತ ದಿ. ಇಬ್ರಾಹಿಂ ಸುತಾರ್ ಪುಣ್ಯಸ್ಮರಣೆಯಂದು ಗೌರವ ನಮನಗಳು " అచం 3 ಕನ್ನಡದ ಕಬೀರ, ಪದ್ಮಶ್ರೀ ಪುರಸ್ಕೃತ, ಆಧುನಿಕ ಸೂಫಿಸಂತ ದಿ. ಇಬ್ರಾಹಿಂ ಸುತಾರ್ ಪುಣ್ಯಸ್ಮರಣೆಯಂದು ಗೌರವ ನಮನಗಳು " అచం - ShareChat