#🔱 ಭಕ್ತಿ ಲೋಕ #ದಿನಕ್ಕೊಂದು ಕಥೆ
ಪ್ರತಿಯೊಬ್ಬರೂ ತಿಳಿಯಲೇ ಬೇಕಾದ ವಿಶೇಷ ವಿಚಾರಗಳು ಒಮ್ಮೆ ಓದಿ ಜ್ಞಾನ ದೀವಿಗೆಯಾಗಿ 🌺🙏🌸
ಮಾನವ ಜೀವನ ಅಮೂಲ್ಯ- ಜ್ಞಾನ ಸಂಪಾದಿಸಿ ಭಗವತ್ಕೃಪೆಗೆ ಪಾತ್ರರಾಗೋಣ.
ಅನೇಕ ಪ್ರಾಣಿಗಳಿಗೆ ನೆವೆಯಾದಾಗ ತುರಿಸಿಕೊಳ್ಳಲು ಸಹ ಕೈಬಲವಿಲ್ಲ. ಹೀಗಿರುವಾಗ ರೋಗನಿವಾರಣೆಗೆ, ಆಹಾರಸೇವನೆಗೆ, ಎಲ್ಲಕ್ಕೂ ಮಿಗಿಲಾದ ಆತ್ಮೋದ್ಧಾರಕ್ಕೆ ಮೀಸಲಾದ ಮಾನವ ಜನ್ಮ ಸಣ್ಣದಲ್ಲ. ಮತ್ತೆ ಸಿಗಲಾರದ ಈ ಮಾನವ ಜನ್ಮ ಎಂತಹಾ ಅಮೂಲ್ಯ. ಅದರಲ್ಲೂ ಇವನ ಆಯುಸ್ಸು ಅತಿ ಹೆಚ್ಚೆಂದರೆ 100 ವರ್ಷ. ನಮ್ಮ 1 ವರ್ಷದೇವತೆಗಳ 1 ದಿನ. ನಮ್ಮ 360 ವರ್ಷ ದೇವತೆಗಳ 1 ವರ್ಷ. ಕೃತಯುಗದ ಅವಧಿ 17,28,000 ಆಗಿತ್ತು. ತ್ರೇತಾಯುಗದಲ್ಲಿ ಅದು ಮತ್ತಷ್ಟು ಇಳಿಯುತ್ತಾ 12 ಲಕ್ಷ 296 ಸಾವಿರ ವರ್ಷಗಳು ದ್ವಾಪರಕ್ಕೆ ಬಂದಾಗ ಅವಧಿ ಇನ್ನೂ ಕಡಿಮೆಯಾಗಿ 8 ಲಕ್ಷ 64 ಸಾವಿರ ಎನಿಸಿತ್ತು. ಕಲಿಯುಗದ ಅವಧಿಯಂತು 4 ಲಕ್ಷ 32 ಸಾವಿರ ಆಗಿತ್ತು. ಇಂತಹ ಒಂದು ಯುಗ ಚಕ್ರ ಕಳೆದಾಗ 43 ಲಕ್ಷ 20ಸಾವಿರ ವರ್ಷಗಳು ಸಾಗುವವು. ಇಂತಹ 43 ಲಕ್ಷ 20 ಸಾವಿರವರ್ಷಗಳು ಒಂದು ಯುಗಚಕ್ರ. ಇವು ಸಾವಿರಭಾರಿ ತಿರುಗಿದಾಗ ಬ್ರಹ್ಮ ದೇವರ ಒಂದು ಹಗಲು ಆದಂತೆ. ಅದು ಮತ್ತೂ ಸಾವಿರ ಬಾರಿ ಕಳೆದಾಗ ಒಂದು ರಾತ್ರಿಯಾದಂತೆ. ನಮ್ಮ 86.4 ಕೋಟಿ ವರ್ಷಗಳು ಬ್ರಹ್ಮದೇವರ ಒಂದು ದಿನ. ಅಂತಹಾ 360 ದಿನಗಳು ಒಂದು ವರ್ಷವು. ಅಂತಹಾ ನೂರುವರ್ಷಗಳು ಅವರ ಆಯುಸ್ಸು. ಇದು ನಮ್ಮ ಭಗವಂತನಿಗೆ ರೆಪ್ಪೆ ತೆರೆದಂತೆ. ಇಂತಹಾ ಬ್ರಹ್ಮಾದಿಗಳ ಆಯುಸ್ಸಿನ ಮುಂದೆ ನಮ್ಮ ಮಾನವರ ಈ ನೂರು ವರ್ಷದ ಜನ್ಮದ ಆಯುಸ್ಸು, ಅದರಲ್ಲೂ ರೋಗರುಜಿನಗಳಿಂದ ಬಳಲಿರದ ಸಮಯ ಕೋಟಿಯ ಒಂದಂಶವೂ ಇಲ್ಲ. ಹೀಗಿರುವಾಗ ಅವನನ್ನು ಮರೆತು, ಭೋಗದಲ್ಲೇ ಮುಳುಗಿ ಅಮೂಲ್ಯ ಅವಕಾಶವನ್ನೂ ಮೂಲೆಗುಂಪು ಮಾಡಿಕೊಳ್ಳಬೇಕೆ? ಜ್ಞಾನಸಂಪಾದನೆ, ಲೋಕೋಪಕಾರದಿಂದ ಕರ್ತವ್ಯಪರರಾಗಿ ಸಾರ್ಥಕ ಮಾಡಿಕೊಳ್ಳಬೇಡವೆ? ಇಂದೇ ತೀರ್ಮಾನಿಸಿ ಭಗವಚ್ಚಿಂತನೆಯಿಂದ ನಿಮ್ಮ ಆಯುಸ್ಸಿಗೆ ಸಾರ್ಥಕ್ಯದ ಪದಕ ನೀಡಿ. 'ಕಾಲನ ದೂತರು ಕಾಲ್ಪಿಡಿದೆಳೆದಾಗ ತಾಳು ತಾಳು ಎಂದರೆ ತಾಳುವರೆ' 'ಮೃತ್ಯು ಬಾರದ ಮುನ್ನ ಧರ್ಮವ ಗಳಿಸಿರೋ' 'ಅಲ್ಪಾವಕಾಶದ ಈಶರೀರವು ಗಾಳಿಗೊಡ್ಡಿದ ದೀಪ" ಹೀಗಿರುವಾಗ ಶರೀರದಿಂದ ಮೆರೆಯದಿರಿ. ಭಗವಂತನನ್ನು ಮರೆಯದಿರಿ. 'ವೈಕುಂಠವೆಂಬುದು ಅಲ್ಲೇ ಬರಿದೆ ಲೌಕಿಕವ ತೊಡೆದರೆ ಇಪ್ಪುದು ಇಲ್ಲೇ' ಲೌಕಿಕ ಜಂಜಾಟಸ್ವಲ್ಪ ತೊರೆದು ಜ್ಞಾನ ಸಂಪಾದಿಸಿಕೊಳ್ಳಿರಿ. ಅದರಿಂದ ಭಗವಂತ ಪ್ರೀತನಾಗುವನು ಆಧ್ಯಾತ್ಮ ಜ್ಞಾನವನ್ನು ಬೆಳೆಸೋಣ ಭಗವತ್ಕೃಪೆಗೆ ಪಾತ್ರರಾಗೋಣ ಸದಾ ಭಗವಂತನ ಸ್ಮರಣೆ ಮಾಡೋಣ🌺🙏🌸
▬▬ஜ۩۞۩ஜ▬▬▬*▬▬▬ஜ۩۞۩ஜ▬▬
!! ಸರ್ವಂ ಶ್ರೀ ಕೃಷ್ಣಾರ್ಪಣಮಸ್ತು !!
🙏 ಸರ್ವೇ ಜನಾಃ ಸುಖಿನೋ ಭವಂತುಸರ್ವೇ
ಸಂತು ನಿರಾಮಯಾಃ 🙏
!! ಧರ್ಮೋ ರಕ್ಷತಿ ರಕ್ಷಿತಃ !!
▬▬▬ஜ۩۞۩ஜ▬▬▬▬▬▬ஜ۩۞۩ஜ▬▬▬
🙏 ಹರಿ ಸರ್ವೋತ್ತಮ ವಾಯು ಜೀವೋತ್ತಮ 🙏


