#PSSM World ಸ್ವಭಾವದ ಬಗ್ಗೆ ನಿಮ್ಮ ಅಭಿಪ್ರಾಯವೇನು?
ಇಡೀ ಮಹಾಭಾರತದಲ್ಲಿ ಒಬ್ಬೊಬ್ಬರಲ್ಲೂ ಒಂದೊಂದು ಬಗೆಯ ಬುದ್ದಿ ,ಗುಣ , ಲಕ್ಷಣಗಳಿವೆ ಎಂಬುದು ನೀವು ಮನೋವಿಜ್ಞಾನದ ದೃಷ್ಟಿಯಿಂದ ನೋಡಿದರೆ ಇದು ತಿಳಿಯುತ್ತದೆ. ಭಕ್ತಿ ಹಾಗೂ ಪ್ರೇಮದಿಂದ ನೋಡಿದರೆ, ಧರ್ಮ ಮತ್ತು ಶರಣಾಗತಿಯಿಂದ ನೋಡಿದರೆ ಶ್ರೀ ಕೃಷ್ಣ ನಿಮಗೆ ದೇವರಂತೆ ಕಾಣುತ್ತಾನೆ. ಸಾಮರ್ಥ್ಯ ದಿಂದ ನೋಡಿದರೆ ಪಿತಾಮಹ ಭೀಷ್ಮ, ಗುರು ದ್ರೋಣ , ಕರ್ಣರು ಕಾಣುತ್ತಾರೆ , ಬುದ್ದಿವಂತಿಕೆಯಿಂದ ನೋಡಿದರೆ ಶುಕುನಿಯ ಕಪಟತನ ಕಾಣುತ್ತೆ , ಕರುಣೆಯಿಂದ ನೋಡಿದರೆ ಕುಂತಿ, ದ್ರೌಪದಿಯರು ಕಾಣುತ್ತಾರೆ, ಸ್ತ್ರೀ ತನ್ನ ಮಕ್ಕಳಿಗೆ ಅಧಿಕಾರ ಸಿಗಲು, ಸ್ವತಂತ್ರರಾಗಲು ಬಯಸುತ್ತಾಳೆ . ಮತ್ತೋರ್ವ ಸ್ತ್ರೀ ತನ್ನ ವಸ್ತ್ರಾಭರಣದ ಅಪಮಾನ ಇಡೀ ಸಮಾಜದ ಅಪಮಾನವೆಂದು ಪರಿಗಣಿಸುತ್ತಾಳೆ. ಅಂಧಕಾರ ಮೂರ್ಖತನದಿಂದ ನೋಡಿದರೆ ಗಾಂಧಾರಿ, ದೃತರಾಷ್ಟ್ರ ಕಾಣಿಸುತ್ತಾರೆ. ತಾಳ್ಮೆ ಹಾಗೂ ಸೌಜನ್ಯ ದಿಂದ ನೋಡಿದರೆ ವಿಧುರ ಕಾಣುತ್ತಾರೆ. ಅಂಹಕಾರದಿಂದ ನೋಡಿದರೆ ಧುರ್ಯೋಧನನ ನೂರು ಸಹೋದರರು /ಕೌರವರು ಕಾಣುತ್ತಾರೆ. ಯುದ್ಧದ ದೃಷ್ಟಿಯಿಂದ ನೋಡಿದರೆ ಮಹಾ ವಿಧ್ವಂಸವೇ ಕಾಣುತ್ತದೆ.
ಇದನ್ನು ಮತ್ತೆ ಓದಿ ಏಕೆಂದರೆ ನೀವು ಯಾವ ದೃಷ್ಟಿಯಿಂದ ನೋಡಲು ಇಚ್ಚಿಸುವಿರಿ ಅದು ಮುಖ್ಯ ಹಾಗೂ ಅದರಂತೆ ನಿಮಗೆ ಕಾಣುತ್ತದೆ. ಕರ್ಣನ ಸ್ವಭಾವದ ಬಗ್ಗೆ ನನ್ನ ಅಭಿಪ್ರಾಯ ಇಷ್ಟೆ. ಆತನ ಸಾಮರ್ಥ್ಯದ ಪರಿಚಯ ಇಡೀ ಆರ್ಯಾವರ್ತದ ಎಲ್ಲ ರಾಜರಿಗೂ ತಿಳಿದಿತ್ತು. ಆತ ಧರ್ಮ ನಿಷ್ಟೆಯಲ್ಲಿ ಹಾಗೂ ಬುದ್ದಿ ಗುಣಗಳಲ್ಲಿ ಉತ್ತಮ ಚಾರಿತ್ರ್ಯ ಉಳ್ಳವನಾಗಿದ್ದ.
ಪಾಂಡವರ ಪತ್ನಿ ದ್ರೌಪದಿಯು ವಿಶ್ವದ ಅತ್ಯಂತ ಶ್ರೇಷ್ಠ ಸೌಂದರ್ಯವತಿ ಆಗಿದ್ದಳು ಅಂದಿನ ಯುಗದಲ್ಲಿ, ಕೃಷ್ಣ ಒಮ್ಮೆ ಒಂದು ಸೇಬಿನ ಮರದಡಿ ನಿಂತು ಕೇಳುತ್ತಾರೆ, ದ್ರೌಪದಿ ನಿನಗೆ ಪ್ರೇಮಕಾಮದ ವಿಷಯದಲ್ಲಿ ಆಂತರಿಕ ನೆಮ್ಮದಿ ಇದೆಯೆ ಎಂದು. ಆಕೆ ಏನನ್ನೂ ಉತ್ತರಿಸುವುದಿಲ್ಲ ಕೃಷ್ಣನಿಗೆ ಈ ಮರ್ಮ ತಿಳಿದಿರುತ್ತದೆ , ಆತ ಒಬ್ಬೊಬ್ಬರ ಹೆಸರನ್ನೂ ಸೂಚಿಸುತ್ತಾನೆ , ಪಾಂಡವರ ೫ ಜನರ ಹೆಸರನ್ನು ಸೂಚಿಸಿದಾಗ ಸೇಬು ಮರದಿಂದ ಒಂದೆರಡು ಅಡಿಯಷ್ಟು ಕೆಳಗೆ ಬೀಳುತ್ತಿರುತ್ತದೆ. ಆದರೆ ಸಂಪೂರ್ಣವಾಗಿ ಕೆಳಗೆ ಬೀಳುವುದಿಲ್ಲ, ಅದು ಪೂರ್ಣವಾಗಿ ನೆಲದಮೇಲೆ ಬಿದ್ದರೆ ಮಾತ್ರ ಆಕೆಯ ಬಯಕೆಯು ಪೂರ್ಣವಾಗಿದೆ ಎಂದರ್ಥ.
ಆಕೆಯ ಮೌನವನ್ನು ಅರಿತ ಕೃಷ್ಣ ನಿನಗೆ ಕರ್ಣನ ಮೇಲೂ ಮೋಹವಿದೆಯೇ ಎಂದಾಗ ಆಕೆಯ ಮುಕದಲ್ಲಿ ಮಂದಹಾಸದ ಮುಗಳ್ನಗು ಮೂಡುತ್ತದೆ , ಹಣ್ಣು ಕೆಳಗೆ ಬೀಳುತ್ತದೆ. ಏಕೆಂದರೆ ಪಾಂಡವರಲ್ಲಿ ಎಲ್ಲರಿಗಿಂತ ಹೆಚ್ಚು ಶ್ರೇಷ್ಠ ಹಾಗೂ ಸಾಮರ್ಥ್ಯ ಉಳ್ಳವ್ಯಕ್ತಿ ಅರ್ಜುನ, ಆತನಿಗಿಂತಲೂ ಹೆಚ್ಚು ಸಾಮರ್ಥ್ಯ, ಶ್ರೇಷ್ಠ ,ಗೌರವಾನ್ವಿತ ವ್ಯಕ್ತಿ ಕರ್ಣ ಎಂಬುದು ದ್ರೌಪದಿಗೆ ತಿಳಿದಿತ್ತು. ಇದರ ಕುರಿತಾಗಿ ಕೃಷ್ಣ ಆಕೆಗೆ ವಿವರಣೆ ನೀಡುತ್ತಾನೆ ಕರ್ಣನ ಸ್ವಭಾವದ ಬಗ್ಗೆ, ಕರ್ಣನೊಂಂದಿಗೆ ದ್ರೌಪದಿ ಪ್ರೇಮ ಕಾಮದ ಸುಖವನ್ನು ಭಾವನೆಗಳನ್ನು ಹಂಚಿಕೊಳ್ಳದೆ ಅತೃಪ್ತಳಾಗಿ ಉಳಿಯುತ್ತಾಳೆ. ಕಾರಣ ಹೊರಗಿನ ಪ್ರಪಂಚಲ್ಲಿ ಸ್ತ್ರೀ ಸೌಖ್ಯತೆಯನ್ನು ಬಯಸಿದರೆ , ಒಳಗಿನ ಪ್ರಪಂಚದಲ್ಲಿ ತನ್ನ ಇಷ್ಟಾರ್ಥ ಹಾಗೂ ಕಾಮನೆಗಳ ಇಡೇರುವಿಕೆಯ ಬಗ್ಗೆ ಚಿಂತಿಸುತ್ತಾಳೆ.
ಆದರೆ ಕರ್ಣ ಎಂದೂ ಇಂತಹ ಆಲೋಚನೆಯ ಬಗ್ಗೆ ಚಿಂತಿಸಿದವನಲ್ಲ, ಆತನಿಗೆ ಇದಾವುದರ ಬಗ್ಗೆ ಮೋಹವಿಲ್ಲ, ಆತ ಸ್ವಭಾವತಃ ತನ್ನ ಸಾಮರ್ಥ್ಯವನ್ನು , ಧರ್ಮವನ್ನು ನಂಬಿದವನು, ದುರ್ದೈವವೇನೆಂದರೆ ಧರ್ಮನಿಷ್ಟೆ ಪಾಲಿಸುವವರು ಅಧರ್ಮಿಗಳ ಜೊತೆಗೂಡಿದರೆ ಅಲ್ಲಿ ಧರ್ಮಕ್ಕೆ ಯಾವ ಬೆಲೆಯೂ ಇರಲಾರದು. ತನ್ನ ಇಡೀ ಜೀವನದ ಗುರಿ ಸೂತಪುತ್ರನೆಂಬ ಕೀಳರಿಮೆಯ ಭಾವನೆಯನ್ನು ಬಿಟ್ಟು ಸಮಾಜವು ತನ್ನನ್ನು ಶ್ರೇಷ್ಠ ವ್ಯಕ್ತಿಯೆಂದು ಗುರುತಿಸಲಿ ಎಂದು ಬಯಸಿದ. ಪಾಂಡವರು ತನ್ನ ಅನುಜರು ಎಂದು ತಿಳಿದು ಕುಂತಿಗೆ ಯುದ್ದದಲ್ಲಿ ತಾನು ಅರ್ಜುನನ್ನು ಹೊರತುಪಡಿಸಿ ಉಳಿದ ಯಾರೊಬ್ಬರ ಮೇಲೂ ನಾನು ಪ್ರಹಾರ ಮಾಡಲಾರೆ ಎಂದು ಮಾತು ಕೊಟ್ಟ. ಆತ ತನ್ನ ಇಡೀ ಜೀವನದಲ್ಲಿ ಸಂಪತ್ತನ್ನೆಂದೂ ಕೂಡಿಡಲಿಲ್ಲ, ಪ್ರತೀ ದಿನವೂ ತನ್ನ ಸಂಪತ್ತನ್ನು ದಾನ ಮಾಡುತ್ತಾಹೋದ.
ನನ್ನ ಪ್ರಕಾರ ೩ಜನ ಶ್ರೇಷ್ಠ ಯೋಧರು ಎಂದರೆ ಪಿತಾಮಹ ಭೀಷ್ಮ, ಗುರು ದ್ರೋಣ, ಮಹಾರತಿ ಕರ್ಣ, ಮೂವರೂ ನತದೃಷ್ಟರು ಧರ್ಮನಿಷ್ಠೆಯ ಪರಿಪಾಲಕರು ಆದರೆ ಅದೃಷ್ಟ ಇಲ್ಲದವರು. ಭೀಷ್ಮ ಕರುವಂಶದ ಹಿರಿಯ ತಲೆ, ಸಿಂಹಾಸನದ ಮೇಲೆ ಎಂದಿಗೂ ತನ್ನ ಅಧಿಕಾರವನ್ನು ಪಾಲಿಸಲಿಲ್ಲ, ದಾಸನಂತೆ ಸೇವೆ ಸಲ್ಲಿಸಿದರು, ತನ್ನ ಕಣ್ಣೆದರು ಎಷ್ಟೆ ಅನ್ಯಾಯಗಳು ನಡೆದರೂ ದೃತರಾಷ್ಟ್ರನ ಪುತ್ರರಿಗೆ ತಿಳಿ ಹೇಳಲಾಗಲಿಲ್ಲ , ಗುರು ದ್ರೋಣ ಪುತ್ರಮೋಹದಿಂದ ಗುರುವಾಗಿದ್ದವರು ಶಿಕ್ಷಕನಂತೆ ಕೆಳಗಿಳಿದರು , ಮಗನ ವಿದ್ರೋಹ, ಅಧರ್ಮದ ಪಾಲನೆ ಅವರನ್ನು ವಿವಶವನ್ನಾಗಿಸಿತು. ಕರ್ಣ ಎಷ್ಟೆ ಸಾಮರ್ಥ್ಯವಿದ್ದರೂ ಅಧರ್ಮಿಗಳ ಜೊತೆಸೇರಿ ನತದೃಷ್ಟನಾದ , ಪರಿಸ್ಥಿತಿ ಹಾಗೂ ಸಂಬಂಧಗಳ ಮರ್ಮ ತಿಳಿದು ಮೂಕ ಸ್ತಬ್ಧನಾದ . ವಿಧಿಯಿಲ್ಲದೆ ಯುದ್ದದಲ್ಲಿ ಭಾಗವಹಿಸಿ ಮೃತನಾದ. ಮೂರು ಜನರ ಶಸ್ತ್ರತ್ಯಾಗ ಮಾಡಿಸಿ ಕೃಷ್ಣ ಮೂವರನ್ನು ಮೃತನಾಗಿಸಿದ. ಸದ್ಯಕ್ಕೆ ಇಷ್ಟು ಸಾಕು.


