Vikas Chandra
ShareChat
click to see wallet page
@347372301
347372301
Vikas Chandra
@347372301
Changed the universe in meditation spirituality
#PSSM World ಯಾರಿಗಾದರೂ ನೀಡುವ ನಿಮ್ಮ ಮನಸ್ಸಿಗೆ ಬರುವ ಅತ್ಯುತ್ತಮ ಸಲಹೆ ಯಾವುದು? ನನ್ನ ಮನಸ್ಸಿಗೆ ಬರುವ ಅತ್ಯುತ್ತಮ ಸಲಹೆ ಇದು: ಪ್ರತಿಯೊಂದು ದಿನವೂ ಸಾತ್ವಿಕ ಹಾಸ್ಯ, ಸಹನೆ, ಮತ್ತು ಅನುಕಂಪೆಯನ್ನು ತೋರಿಸಿ, ಇತರರಿಗೆ ನೆರವಾಗಿ, ಅವರ ಸಮಸ್ಯೆಗಳನ್ನು ಕೇಳಿ ಕಾಣಿಕೆ ತೋರಿಸಿ, ಮತ್ತು ಪ್ರೀತಿಸಿ. ನೀವು ಇದನ್ನು ಮಾಡುವುದರಿಂದ ನೀವು ಸುಖಿಯಾಗುವಿರಿ, ಸ್ವತಂತ್ರವಾಗಿ ಮತ್ತು ಸಮರ್ಥನಾಗಿ ನಿಮ್ಮ ಜೀವನವನ್ನು ನಿಯಂತ್ರಿಸಲು ನೆರವಾಗುವಿರಿ, ಹಾಗೂ ನೀವು ಇತರರ ಜೀವನದಲ್ಲಿ ಬದಲಾಗುವಿರಿ. ಸ್ನೇಹಿತರು, ಕುಟುಂಬದವರು ಅಥವಾ ನಿಮ್ಮ ಸಾಮ್ರಾಜ್ಯದ ಕಾರ್ಯಸಾಮರ್ಥ್ಯಕ್ಕೆ ಮನಸ್ಸಿಟ್ಟಿದ್ದರೆ, ಇದು ನಿಮ್ಮನ್ನು ಯಶಸ್ವಿ ಮಾಡಲು ಸಹಾಯಕವಾಗುವುದು. ಕೆಲವೊಮ್ಮೆ ಸಹಾಯ ಕೋರುವುದು, ಇತರರಿಗೆ ವಿಶೇಷ ಕಾರಣಗಳಿಂದ ಪ್ರೀತಿಸುವುದು, ಅವರ ಜೊತೆಯಲ್ಲಿ ಕಾಣಿಕೆ ತೋರುವುದು ಮತ್ತು ಕೊನೆಗೆ ಅವರನ್ನು ಸಮರ್ಥಿಸುವುದು ನಿಮ್ಮ ಮನಸ್ಸಿಗೆ ಹೊಳೆಯುವ ಅತ್ಯುತ್ತಮ ಸಲಹೆ. ಇದರಿಂದ ನೀವು ಸಮೃದ್ಧಿ, ಶಾಂತಿ, ಮತ್ತು ಪ್ರೀತಿಯನ್ನು ಅನುಭವಿಸುವಿರಿ.
#PSSM World ಇಷ್ಟೇನಾ!' ಎಂದು ಯಾವಾಗದರು ಅನಿಸಿದೆಯಾ? ಈ ವಿಷಯವನ್ನು ಒಂದು ಸಮಾಜದ ದೃಷ್ಟಿಯಿಂದ ನೋಡಿದಾಗ ನನಗನಿಸುವುದು ಅದು ಪ್ರತಿ ವ್ಯಕ್ತಿಯ ಮನೋಭಾವ ಮತ್ತು ಅನುಭವಗಳ ವಿವಿಧತೆಗಳಿಗೆ ಸಂಬಂಧಿಸಿದ್ದು. ಕೆಲವು ವ್ಯಕ್ತಿಗಳು ಹಿರಿಯರ ಸ್ಥಿತಿಯನ್ನು ಪಡೆದವರು ಅಥವಾ ಸಾಮಾಜಿಕ ಪ್ರಮಾಣಗಳನ್ನು ಸಾಧಿಸಿದವರು ಆಗಿರಬಹುದು, ಮತ್ತು ಅವರ ಪ್ರತಿಭೆ, ಅನುಭವ, ಮತ್ತು ಸಹಾಯಗಳ ಫಲವಾಗಿ ಅವರು ತಮ್ಮ ಜೀವನದಲ್ಲಿ ಸಂತೋಷವನ್ನು ಪಡೆಯುತ್ತಾರೆ. ಇದು ಅವರಿಗೆ ಒಳ್ಳೆಯ ಜೀವನದ ಭಾವನೆಗಳನ್ನು ಹುಟ್ಟಿಸಬಲ್ಲದು. ಆದರೆ ಇನ್ನು ಕೆಲವರಿಗೆ, ಜೀವನದಲ್ಲಿ ಅಪಾಯಗಳು, ಕಷ್ಟಗಳು ಅಥವಾ ಅಸಮಾಧಾನಕರ ಅನುಭವಗಳು ಹೆಚ್ಚಾಗಿರಬಹುದು, ಅವರಿಗೆ ಅದು ಅನುಭವಿಸಲಾದ ವಿಕಲಾಂಗ ಭಾವನೆಗಳನ್ನು ಹುಟ್ಟಿಸಬಹುದು. ಇಂತಹ ಪ್ರಸ್ತುತಿಗಳಲ್ಲಿ, ಜೀವನ ಇಷ್ಟೇನೂ ಆಗಲಾರದು ಅಥವಾ ಮುಂದೆ ಒಳ್ಳೆಯ ಜೀವನ ಸಿಗಲಾರದು ಎಂಬ ಭಾವನೆ ಅವರಲ್ಲಿ ಏಕೆ ಹುಟ್ಟುತ್ತದೆ. ಇದು ಅವರ ಮನಸ್ಸಿನ ಸ್ಥಿತಿ, ಅನುಭವ, ಮತ್ತು ಅವರು ಬೆಳೆದ ಸಾಮಾಜಿಕ ಪರಿಸ್ಥಿತಿಗಳ ಪರಿಣಾಮವಾಗಿರಬಹುದು. ಹೀಗೆ, ವ್ಯಕ್ತಿಯ ಅನುಭವಗಳು ಮತ್ತು ಸಂದರ್ಭಗಳ ಪರಿಣಾಮವಾಗಿ ಜೀವನ ಇಷ್ಟೇನು ಎಂಬುದು ವ್ಯಕ್ತಿಗಳ ನೋಟದಲ್ಲಿ ಬದಲಾಗಬಹುದು.
#PSSM World ಕಷ್ಟಕರ ವಿಷಯ ಯಾವುದು? ಜೀವನದಲ್ಲಿ ಹೊಂದಾಣಿಕೆ ಎಂಬುದು ಬಹಳ ಕಷ್ಟ. ಹೇಗೆ ಐದು ಬೆರಳುಗಳು ಸಮನಾಗಿರುವುದಿಲ್ಲವೋ ಹಾಗೆ ಮನುಷ್ಯರ ಸ್ವಭಾವಗಳು ವಿಭಿನ್ನ ವಾಗಿರುತ್ತದೆ. ಜೀವನ ಎಂದರೆ ಹೊಂದಾಣಿಕೆ. ಒಂದು ಕುಟುಂಬದಲ್ಲಿ ಶಾಂತಿ, ನೆಮ್ಮದಿ ನೆಲೆಸಿರ ಬೇಕೆಂದರೆ ಅತ್ತೆಮಾವ ಸೊಸೆಗೆ, ಸೊಸೆ ತನ್ನ ಅತ್ತೆ ಮಾವಂದಿರಿಗೆ , ಗಂಡ ಹೆಂಡತಿಗೆ , ಹೆಂಡತಿ ಗಂಡನಿಗೆ ಹೊಂದಿಕೊಂಡು ಹೋಗ್ಬೇಕು. ಒಬ್ಬರಿಗೊಬ್ಬರು ಸಹಕರಿಸಬೇಕು. ಅನಿವಾರ್ಯ ಹೊಂದಾಣಿಕೆಗಿಂತ ಅಲ್ಲಿ ಪರಸ್ಪರ ಪ್ರೀತಿ ವಿಶ್ವಾಸವಿರಬೇಕು. ಹೊಂದಾಣಿಕೆ ಎಂಬುದು ಬರೀ ಕುಟುಂಬಕಷ್ಟೆ ಮೀಸಲಲ್ಲ, ಹೊರ ಪ್ರಪಂಚ, ಸಮಾಜದಲ್ಲಿಯೂ ಹೊಂದಾಣಿಕೆ ಬೇಕು. ಅಕ್ಕ ಪಕ್ಕದವರು 'ನೆರೆ ಹೊರೆ' ಎಂಬಂತಿದ್ದರೂ, ಪರಸ್ಪರ ಮುಗುಳ್ನಗುವಷ್ಟಾದರೂ ಸೌಜನ್ಯತೆಯನ್ನು ಉಳಿಸಿಕೊಳ್ಳಬೇಕಾಗುತ್ತದೆ. ಎಲ್ಲರೂ ನಾವೆಣಿಸಿದಂತೆ ಇರುವುದಿಲ್ಲ , ಹಾಗೂ ಇರಲು ಸಾಧ್ಯವೂ ಇಲ್ಲ. ಇದನ್ನರಿತು ಹೊಂದಿಕೊಂಡು ಹೋಗುವುದಿದೆಯಲ್ಲ ಇದು ಜೀವನದಲ್ಲಿ ಕಷ್ಟಕರ ವಾದರೂ ಅಸಾಧ್ಯವೇನಲ್ಲ.
#PSSM World ಯಾವ ಗುಣ ಸ್ವಭಾವಗಳು ಸರಿಯಲ್ಲ? ಸಾಕಷ್ಟು, ಅದರಲ್ಲೂ ಹರಿಷಡ್ವರ್ಗಗಳು , ಕಾಮ, ಕ್ರೋದ, ಮೋಹ, ಲೋಭ, ಮದ, ಮತ್ಸರ, ಇವು ಅತಿಹೆಚ್ಚು ಮುಖ್ಯ, ಒಂದೊಂದೂ ಒಂದೊಂದು ಗುಣವನ್ನು ಸೂಚಿಸುತ್ತದೆ. ಮೂಲತಃ ಇವುಗಳು ಮನುಷ್ಯನ ಬದುಕು ಹಾಳುಮಾಡುವಂತವು. ಎಲ್ಲಿಯವರೆಗೆ ನಾವು ಇವುಗಳನ್ನು ತೊರೆಯುವುದಿಲ್ಲವೋ ಅಲ್ಲಿಯವರೆಗೆ ಅವು ನಮ್ಮ ಸ್ವಭಾವವಾಗಿರುತ್ತವೆ. ಕಾಮ- ಬಯಸುವಿಕೆ, ನೀವು ಏನನ್ನೇ ಬಯಸಿ ಅದು ಇಂದಲ್ಲನಾಳೆ ನಿಮಗೆನೋವು ನೀಡುವುದು. ಅದರಿಂದ ನಿಮಗೆಂದು ತೃಪ್ತಿ ದೊರೆಯಲಾರದು. ಕ್ರೋದ - ಕೇವಲ ಕೋಪ & ದ್ವೇಷಗಳು ನಮ್ಮ ಬುದ್ದಿ ಮತ್ತು ಗುಣವನ್ನು, ತಾಳ್ಮೆಯ ಮನಸ್ಥಿತಿಯನ್ನು ಕೊಲ್ಲುತ್ತವೆ. ಮೋಹ - ಬಯಸಿದ್ದೆಲ್ಲವೂ ನಾನು, ನನ್ನದು, ನನಗೆ ಬೇಕು, ನನ್ನಿಂದಲೇ ಎಂಬ ಅಹಂ. ಲೋಭ - ಸ್ವಾರ್ಥ ಪರತೆ, ನಾವು ಕಂಡಿದ್ದನ್ನು ಪಡೆದಿದ್ದನ್ನು ಇರುವುದೆಲ್ಲವನ್ನು ದುಪ್ಪಟ್ಟು ಮಾಡುವಿಕೆ, ಹೆಚ್ಚು, ಇನ್ನಷ್ಟು ಬೇಕು ಎಂಬುದು. ಮದ - ಸೋಂಬೇರಿತನ, ಅಲಸ್ಯತನ, ಅಸಡ್ಡೆಯ/ ನಿರ್ಲಕ್ಷ್ಯ ಮನೋಭಾವ. ಮತ್ಸರ -ನಾವು ಪಡೆದದ್ದನ್ನು ಅನುಭವಿಸಲು ಆಗದಿದ್ದಾಗ ಉಂಟಾಗುವ ಸಮಸ್ಯೆ, ಅಸೂಯೆಯ ಭಾವನೆ, ಕೇವಲ ನಾನು ನನ್ನವರು ಮಾತ್ರಅನುಭವಿಸಲೆಂಬ ಮಮಕಾರ , ಇಂತಹ ಭಾವನೆಯಿಂದ ಮುಕ್ತರಾಗಬೇಕಿದೆ. ಇವುಗಳಿಂದ ಮುಕ್ತರಾದಲ್ಲಿ ಬದುಕು ಸುಂದರ. ಆದ್ದರಿಂದ ಬಿಡುವಂತಿದ್ದರೆ ಇವುಗಳನ್ನು ಬಿಡಿ.
#PSSM World ಹೊಂದಾಣಿಕೆ ಎಷ್ಟು ಮುಖ್ಯ? ಮತ್ತು ಯಾಕೆ? ಜೀವನ ವೆಂದರೇನೇ ಹೊಂದಾಣಿಕೆ. ಜೀವನದ ಪ್ರತಿ ಹಂತದಲ್ಲಿಯೂ ಹೊಂದಾಣಿಕೆ ಅಗತ್ಯ. ಮಕ್ಕಳು ಬೆಳೆದು ದೊಡ್ದವರಾದಂತೆ, ಅಪ್ಪ ಅಮ್ಮ ಮಕ್ಕಳಿಗೆ ಹೊಂದಿಕೊಳ್ಳಬೇಕು. ಮಕ್ಕಳು , ವಯಸ್ಸಾಗುತ್ತಿರುವ ಅಪ್ಪ ಅಮ್ಮಅಥವಾ ವೃದ್ಧ ತಂದೆ ತಾಯಿಯರಿಗೆ ಹೊಂದಿಕೊಳ್ಳಬೇಕು. ಗಂಡ ಹೆಂಡತಿ ಒಬ್ಬರಿಗೊಬ್ಬರು ಹೊಂದಿಕೊಳ್ಳಬೇಕು. ಅತ್ತೆಮಾವ ಸೊಸೆಗೆ ಹೊಂದಿಕೊಳ್ಳಬೇಕು. ಸೊಸೆ ಅತ್ತೆ ಮಾವಂದಿರಿಗೆ ಹೊಂದಿಕೊಳ್ಳಬೇಕು. ಸೊಸೆ ಹೊರಗೆಲ್ಲಾದರೂ ಹೋಗಿದ್ದರೆ, ಅತ್ತೆ ಮನೆಗೆಲಸಗಳನ್ನು ಅವಳೇ ಬಂದು ಮಾಡಲಿ ಎಂದು ಬಿಡದೆ ಸಾಧ್ಯವಿದ್ದಷ್ಟು ಮಾಡಬೇಕು. ಹಾಗೆ ಸೊಸೆಯೂ ಅತ್ತೆ ಹೋದಾಗ ಮನೆಯ ಜವಾಬ್ದಾರಿ ವಹಿಸಿಕೊಳ್ಳಬೇಕು. ಗಂಡ ಹೆಂಡತಿಯರೂ ಸಹ ಜವಾಬ್ದಾರಿಗಳನ್ನು ಪರಸ್ಪರ ಹಂಚಿಕೊಂಡು ಪ್ರೀತಿಯಿಂದ ನಿರ್ವಹಿಸಬೇಕು. ಪರಸ್ಪರರ ಅಭಿರುಚಿ ಆಸಕ್ತಿಗಳಿಗೆ ಗೌರವ ಪ್ರೋತ್ಸಾಹ ನೀಡಬೇಕು. ಹೊಂದಾಣಿಕೆ ಎಂಬುದು ಇಬ್ಬರ ಕಡೆಯಿಂದಲೂ ಇರಬೇಕು. ಪ್ರೀತಿ ಇದ್ದಲ್ಲಿ ಹೊಂದಾಣಿಕೆ ಸಹಜವಾಗಿಯೇ ಬರುತ್ತದೆ.ಸಮರಸವೇ ಜೀವನ ಅಲ್ಲವೆ!
#PSSM World ಪ್ರಕಾರ ಆಧ್ಯಾತ್ಮ ವಿಜ್ಞಾನವೇ? ಆಧ್ಯಾತ್ಮಿಕತೆಯು ಯಾವುದೋ ಭಾವನಾತ್ಮಕ ವಿಷಯವಲ್ಲ. ವಿಜ್ಞಾನದಂತೆ ಕ್ರಮಬದ್ಧವಾಗಿ ಅದರ ಅಧ್ಯಯನ ಮಾಡಬಹುದು. ನಿರ್ದಿಷ್ಟ ಕಾಲ, ಸೃಷ್ಟಿಯ ಉದ್ದೇಶ, ಸಮಯದ ಅರ್ಥ ಮತ್ತು ಅದು ನಮ್ಮ ಬದುಕನ್ನು ಹೇಗೆ ಸಂಪದ್ಭರಿತಗೊಳಿಸುತ್ತದೆ ಎನ್ನುವುದನ್ನು ಅದರಿಂದ ತಿಳಿದುಕೊಳ್ಳಬಹುದು. ಯಾವುದೇ ಜ್ಞಾನದ ಕ್ರಮಬದ್ಧ ಅಧ್ಯಯನ ವಿಜ್ಞಾನ. ಆಧ್ಯಾತ್ಮಿಕ ವಿಷಯವನ್ನೂ ಅದೇ ರೀತಿ ಅಧ್ಯಯನ ಮಾಡುವುದು ಸಾಧ್ಯ. ನಮ್ಮ ಆಧ್ಯಾತ್ಮಿಕ ಅಧ್ಯಯನಕ್ಕೆ ಒಂದು ಕ್ರಮಬದ್ಧತೆಯನ್ನು ಅಳವಡಿಸಿ ನೋಡಿ, ನಮ್ಮ ಗ್ರಹಿಕೆಯು ಗಾಢವಾಗುವ ಭಾಸವಾಗುತ್ತದೆ. ಅಧ್ಯಾತ್ಮ ಮತ್ತು ವಿಜ್ಞಾನದ ಮೌಲ್ಯ ಭಿನ್ನ. ಲೌಕಿಕ ಲೋಕದ ಅಸಂಖ್ಯ ವಿಷಯಗಳನ್ನು ಕಂಡುಕೊಳ್ಳಲು ವಿಜ್ಞಾನ ನಮಗೆ ಅತ್ಯುತ್ತಮ ಸಾಧನ, ನಿಜ. ಆದರೆ ವಿಜ್ಞಾನವು ಸೀಮಿತ ವ್ಯಾಪ್ತಿಯಲ್ಲಿ ಕೆಲಸ ಮಾಡುತ್ತದೆ. ಮಾನವೀಯತೆಯ ಬಗೆಗೆ ಹೆಚ್ಚು ಯೋಚಿಸುವುದಿಲ್ಲ. ಆದರೆ ಆಧ್ಯಾತ್ಮಿಕ ಜ್ಞಾನದಲ್ಲಿ ತರಬೇತಿ ಹೊಂದಿದರೆ ನಾವು ಭೌತಿಕ ಲೋಕವನ್ನು ಭಿನ್ನವಾಗಿ ನೋಡುವುದು ಸಾಧ್ಯ. ಆದರೆ ಅದರ ಅಚರಣೆ ಮಾಡದವರಿಗೆ ಅದು ಸಾಧ್ಯವಿಲ್ಲ. ಆಧ್ಯಾತ್ಮಿಕ ಮಾರ್ಗವನ್ನು ಸ್ವೀಕರಿಸಿದಾಗ ನಾವು ಅನುಭವದ ವಿವಿಧ ಹಂತಗಳನ್ನು ದಾಟಿ ಹೋಗುತ್ತೇವೆ. ಆಗ ನಮಗೆ ಸ್ಪಷ್ಟ ದಾರಿ ಗೋಚರವಾಗುತ್ತದೆ.. ಅಧ್ಯಾತ್ಮದ ಬಗೆಗೆ ಗಂಭೀರವಾಗಿ ಯೋಚಿಸಿ, ಆನಂದವನ್ನು ಅನುಭವಿಸುವಿರಿ. ಬದುಕಿನ ಈ ಲಾಭವನ್ನು ಕಳೆದುಕೊಳ್ಳಬೇಡಿ. ಆಧ್ಯಾತ್ಮ ವಿಜ್ಞಾನವು ಅಂತರಂಗದ ಶೋಧನೆ, ಆತ್ಮದ ಸ್ವರೂಪ ಮತ್ತು ಸೃಷ್ಟಿಕರ್ತನ ಬುದ್ಧಿವಂತಿಕೆಯನ್ನು ಕ್ರಮಬದ್ಧವಾಗಿ ಅಧ್ಯಯನ ಮಾಡುವ ಪ್ರಕ್ರಿಯೆಯಾಗಿದೆ. ಇದು ಕೇವಲ ನಂಬಿಕೆಯಲ್ಲ, ಬದಲಾಗಿ ಅನುಭವ, ತರ್ಕ ಮತ್ತು ನಿರಂತರ ಅನ್ವೇಷಣೆಯ ಮೂಲಕ ಸತ್ಯವನ್ನು ಅರಿಯುವ ಜೀವನದ ಅಂತರಂಗದ ಅನುಭವವಾಗಿದೆ.
#PSSM World ಜನರು ಸಾವಿಗೆ ಏಕೆ ಹೆದರುತ್ತಾರೆ? ಭಯಕ್ಕೆ ನಿಜವಾದ ಕಾರಣ ಅಜ್ಞಾನ. ಪರೀಕ್ಷೆಯಲ್ಲಿ ನಮಗೆ ಓದದೆ ಇದ್ದರೆ ಭಯವಾಗುವುದು ಸಹಜ ಯಾಕೆಂದರೆ ಅಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸುವ ಜ್ಞಾನ ನಮ್ಮಲ್ಲಿ ಇರುವುದಿಲ್ಲ. ಯಾವಾಗ ಚೆನ್ನಾಗಿ ಓದಿಕೊಂಡು ಹೋಗಿರುತ್ತೇವೆಯೋ ಆಗ ಅದನ್ನು ಎದುರಿಸುವ ತಾಕತ್ತು, ಆತ್ಮವಿಶ್ವಾಸ ಎಲ್ಲವೂ ನಮ್ಮಲ್ಲಿ ಬಂದಿರುತ್ತದೆ. ಸತ್ತ ಮೇಲೆ ಏನಾಗುತ್ತೇವೆ ಎನ್ನುವುದು ಯಾರಿಗೂ ತಿಳಿಯದ ರಹಸ್ಯ. ಹಿರಿಯರು, ಹಾಗೂ ಕೆಲವೊಂದು ಗ್ರಂಥಗಳು, ತಿಳಿದವರು ಅದರ ಬಗ್ಗೆ ಬೇರೆ ಬೇರೆ ವಿಷಯಗಳನ್ನು ಹೇಳಿದರೂ ಸಹ ನಿಜವಾಗಿಯೂ ಮನಸ್ಸಿನ ಒಂದು ಮೂಲೆಯಲ್ಲಿ ಅದರ ಕುರಿತಾದ ಅನುಮಾನ ಹಾಗೆಯೇ ಇರುತ್ತದೆ. ಇದಕ್ಕೆ ಕಾರಣ ನಮಗೆ ಅದರ ಕುರಿತಾದ ಯಾವುದೇ ಜ್ಞಾನ ಇಲ್ಲದೆ ಇರುವುದು. ಹಾಗಾಗಿಯೇ ಅದರ ಬಗ್ಗೆ ಭಯ ಸಹಜವಾಗಿ ಮನೆ ಮಾಡಿರುತ್ತದೆ. ಏನಾಗಬಹುದು ? ಹೇಗಿರಬಹುದು? ಹೀಗೆ ಕೆಲವೊಂದು ಪ್ರಶ್ನೆಗಳು ಹಾಗೆಯೇ ಕೊನೆಯ ತನಕ ಉಳಿಯುವಂತದ್ದು. ನಮಗೆ ಉತ್ತರ ಸಿಗುವುದಿಲ್ಲ. ಬೇರೆಯವರು ಕೊಟ್ಟ ಉತ್ತರ ಸಮಾಧಾನ ಕೊಡುವುದಿಲ್ಲ. ಹಾಗಾಗಿ ಚಿಂತೆ, ಭಯ, ಅತಿಯಾದ ಆಲೋಚನೆ ಮುಂತಾದವುಗಳು ಶುರುವಾಗುತ್ತವೆ. ಜೀವನ ನಮ್ಮದೇ ಅಂದ ಮೇಲೆ ನಾವೇ ಅಲ್ವಾ ಜೀವಿಸಬೇಕಾಗಿರೋದು.