Vikas Chandra
ShareChat
click to see wallet page
@347372301
347372301
Vikas Chandra
@347372301
Changed the universe in meditation spirituality
#PSSM World ಪ್ರವೃತ್ತಿ (procrastination) ನಿವಾರಣೆ ಹೇಗೆ…? ಇದು, ಅತ್ಯಂತ ಸುಲಭ ಮತ್ತು ಮನಸ್ಥಿತಿಗೆ ಸಂಬಂಧ ಪಟ್ಟದ್ದಾಗಿರುತ್ತದೆ, ಅಂದರೆ ಮನಸ್ಥಿತಿಯನ್ನು ಬದಲಾಯಿಸಿದರೆ ಇದು ನಿವಾರಣೆಯಾಗುತ್ತದೆ. ಮೊಟ್ಟಮೊದಲಿಗೆ, ನಿಮಗೆ ಮುಂದೂಡುವ ಪ್ರವೃತ್ತಿಯಿಂದ ಹೇಗೆ ತೊಂದರೆಯಾಗುತ್ತಿದೆ ಎಂಬುದನ್ನು ಒಂದು ಕಡೆ ಪಟ್ಟಿ ಮಾಡಿಕೊಂಡು ನಂತರ ಈ ಒಂದು ಗುಣ ನನ್ನನ್ನು ಯಶಸ್ಸಿನ್ನು ತನ್ನದಾಗಿಸಿಕೊಳ್ಳಲು ಅಡ್ಡ ಗೋಡೆಯಾಗಿದೆ ಎಂಬುದನ್ನು ಕಂಡುಕೊಂಡಾಗ, ನಿಮಗೆ ಒಂದು ಬಲವಾದ ಉದ್ದೇಶ ಸೃಷ್ಟಿಯಾಗುತ್ತದೆ ಇದನ್ನು Self awareness ಅಥವಾ ತನ್ನನ್ನು ತಾನು ತಿಳಿದು ಕೊಳ್ಳುವುದು ಎಂದರ್ಥವಾಗಿರುತ್ತದೆ. ನಂತರ ನಿಮಗೆ ಈ ಗುಣ ಹೇಗೆ ಬಂದಿರಬಹುದೆಂದು ನಿಮ್ಮ ಬಾಲ್ಯದಿಂದ ಇಲ್ಲಿಯವರೆಗೆ ಆಗಿರುವ ಅನುಭವವಗಳನ್ನು ಅವಲೋಕನ ಮಾಡಿದಾಗ ನಿಮಗೆ ಕಾರಣಗಳು ತಿಳಿದು ಬರುವ ಸಾಧ್ಯತೆ ಹೆಚ್ಚಾಗಿರುತ್ತದೆ ಮತ್ತು ಈ ರೀತಿಯ ಕ್ರಿಯೆಯಿಂದ ನಮಗೆ ನಮ್ಮ Limiting Belief ಅಥವಾ ನಮಗೆ ನಮ್ಮ ಮೇಲೆ ಇರುವ ಸೀಮಿತ ನಂಬಿಕೆಯ ಅನಾವರಣವಾಗುತ್ತದೆ. ಉದಾ: ನಿಮಗೆ ಆತ್ಮ ವಿಶ್ವಾಸ ಕಡಿಮೆ ಇದ್ದರೆ ಅಂದರೆ ನಿಮ್ಮ ಮೇಲೆ ನಿಮಗೆ ನಂಬಿಕೆಯಿಲ್ಲದಿದ್ದರೆ, ನಾನು ಯಾವ ವಿಷಯದಲ್ಲೂ ಚೆನ್ನಾಗಿಲ್ಲ ಅಥವಾ ನನಗೆ ಬೇರೆಯವರಷ್ಟು ವಿಷಯಗಳು ಗೊತ್ತಿಲ್ಲ ಮತ್ತು ಜನ ನನ್ನ ವೈಫಲ್ಯವನ್ನು ಕಂಡು ಆಡಿಕೊಳ್ಳುತ್ತಾರೆ, ನನಗೆ ಇರುವ ಈ ಬಲಹೀನತೆಯಿಂದ ನನ್ನ ವೃತ್ತಿಯಲ್ಲಿ ನನ್ನ ಗೌರವ ಅಥವಾ ನನ್ನ ಹೆಸರಿಗೆ ಚ್ಯುತಿ ಬರುತ್ತದೆ, ನನ್ನ ಮಾತನ್ನು ಯಾರು ಕೇಳುವುದಿಲ್ಲ.. ಇತ್ತಾದಿ.. ಇತ್ಯಾದಿ… ಅವೆಲ್ಲವನ್ನು ನಾವು ನಮ್ಮ ಬಗ್ಗೆ ಹೇಳಿಕೊಳ್ಳುವ ಸ್ವ ವಿಮರ್ಶೆಗಳು ಅಥವಾ ಅಂತರಂಗದ ಮಾತುಗಳು. ಇವು ಯಾವುದೂ ನಿಜವಾಗಿರುವುದಿಲ್ಲ, ಕೇವಲ ನಮ್ಮ ಹಿಂದಿನ ಅನುಭವಗಳ ಆಧಾರದ ಮೇಲಿ ಮತ್ತು ಬೇರೆಯವರ ವಿಮರ್ಶೆಯ ಆಧಾರದ ಮೇಲೆ, ನಮ್ಮ ಸುಪ್ತ ಮನಸ್ಸಿನಲ್ಲಿ ನೆಲೆನಿಂತ ಸುಳ್ಳಾಗಿರುತ್ತದೆ ..! ನಮ್ಮ ಸುಪ್ತ ಮನಸ್ಸಿಗೆ ಸುಳ್ಳು ಮತ್ತು ನಿಜವನ್ನು ವ್ಯತ್ಯಾಸ ಮಾಡಿ ನೋಡುವ ಗುಣ ಅಥವಾ ಕಲೆ ಇರುವುದಿಲ್ಲ ಆದುದರಿಂದ ನೀವು ಪದೇ ಪದೇ ನೀವು ನಿಮಗೆ ಏನೂ ಅಂದು ಕೊಳ್ಳುತ್ತಿದ್ದೀರೋ ಅದನ್ನು ಚಾಚೂ ತಪ್ಪದೆ ಸ್ವೀಕರಿಸಿ ಅದು ನಿಜವೆಂದು ನಿಮ್ಮ ಜಾಗೃತ ಮನಸ್ಸಿಗೆ ಸೂಚಿಸುತ್ತದೆ ಮತ್ತು ಇದನ್ನು ನಿಯಂತ್ರಿಸಿ ನಮ್ಮ ಮೆದುಳಿಗೆ ಆದೇಶವನ್ನು ನೀಡಲು ಶುರುಮಾಡುತ್ತದೆ ಮತ್ತು ಅದರಂತೆ ನಮಗೆ ಫಲಿತಾಂಶ ಬರುವಂತೆ ಮಾಡುತ್ತದೆ. ಏಕೆಂದರೆ ಯಾವ ರೀತಿ ನಾವು ಶ್ರಮ ಪಡುತ್ತೇವೆಯೋ ಅದೇ ರೀತಿ ಫಲಿತಾಂಶ ಸಿಗುತ್ತದೆ ಅಲ್ಲವೆ?! ಈಗ ಪರಿಹಾರದ ಬಗ್ಗೆ ಬರೋಣ. ಅ) ಸಕಾರಾತ್ಮಕ ಧೃಡೀಕರಣವನ್ನು ಪ್ರಾರಂಭ ಮಾಡಬೇಕು ಅಂದರೆ, “ ನನಗೆ ಏನೂ ಬರುವುದಿಲ್ಲ ಅಥವಾ ಸರಿಯಾಗಿ ಬರುವುದಿಲ್ಲ ಆ ಕೆಲಸ ಮಾಡಲು “ ಎಂಬ ನಮಗೆ ನಾವು ಅಂದುಕೊಳ್ಳುವ ಸ್ವ ಮಾತನ್ನ “ ನಾನು ಪ್ರತಿದಿನವೂ ಕಲಿಯುತ್ತಿದ್ದೇನೆ ಮತ್ತು ಬೆಳೆಯುತ್ತೀದ್ದೇನೆ” ಎಂಬುದಾಗಿ ಬಲವಂತವಾಗಿ ಬದಲಾಯಿಸಿಕೊಂಡು ಪದೇ ಪದೇ ಅಂದುಕೊಳ್ಳಬೇಕು ಆ) ಈ ಸಕಾರಾತ್ಮಕ ಧೃಡೀಕರಣವನ್ನು ದಿನಕ್ಕೆ ಎರಡು ಬಾರಿ ಅಂದರೆ ಬೆಳಿಗ್ಗೆ ಎದ್ದ ತಕ್ಷಣ ಮತ್ತು ರಾತ್ರಿ ಮಲಗುವ ಮೊದಲು ಬರೆದು ಓದಿಕೊಳ್ಳಬೇಕು ಇ) ನಂತರ ಕೆಲಸಗಳವನ್ನು ಸಮಯದ ಆಧಾರದ ಮೇಲೆ ವಿಂಗಡಿಸಬೇಕು ಅಂದರೆ, ೨ ನಿಮಿಷಗಳಿಂದ ದಿನಗಟ್ಟಲೆ ತೆಗೆದುಕೊಳ್ಳುವ ಎಲ್ಲಾ ಕೆಲಸಗಳನ್ನು ಒಂದು ಕಡೆ ಪಟ್ಟಿ ಮಾಡಿ ಅದರ ಮುಂದೆ ಸಮಯವನ್ನು ಹಾಕಿಕೊಳ್ಳಬೇಕು. (To do list) ಮತ್ತು Time blocking ಮಾಡಬೇಕು. ಆನಂತರ ಯಾವ ಕೆಲಸ ಕಡಿಮೆ ಸಮಯ ತೆಗೆದುಕೊಳ್ಳುತ್ತದೆಯೋ ಅಂದರೆ ೨-೫ ನಿಮಿಷದ ಕೆಲಸವನ್ನು ಕೂಡಲೇ ಮಾಡಿಬಿಡಬೇಕು. (ಉದಾ: ಯಾರಿಗೋ ಫೋನ್‌ ಮಾಡಿ ಮಾತನಾಡುವುದೋ, ಯಾವುದೋ ಒಂದು ವಸ್ತುವನ್ನು ಮೇಲೆ ಇಡುವುದೋ ಇತ್ಯಾದಿ..) ಈ) ನಂತರದ ಕೆಲಸಗಳನ್ನು ತುರ್ತು (urgent) ಹಾಗೂ ಮುಖ್ಯ (Important) ಹಾಗೂ ತುರ್ತು ಆದರೆ ಮುಖ್ಯವಲ್ಲ, ಮುಖ್ಯ ಆದರೆ ತುರ್ತಲ್ಲ ಮತ್ತು, ತುರ್ತಾಗಲೀ ಮುಖ್ಯವಾಗಲೀ ಅಲ್ಲ ಎಂಬುದಾಗಿ ನಾಲ್ಕು ವಿಭಾಗಳಿಗೆ ಹಂಚ ಬೇಕು. ನಂತರ ಕೆಲಸಗಳನ್ನು ಈ ರೀತಿ ಕ್ರಮ ಕೈಗೊಳ್ಳಬೇಕು ೧) ತುರ್ತು ಹಾಗೂ ಮು̧ಖ್ಯ – ಕೂಡಲೇ ಮಾಡಲು ಶುರು ಮಾಡಬೇಕು. ೨) ತುರ್ತು ಆದರೆ ಮುಖ್ಯವಲ್ಲ-– ನಂತರದ ಆದ್ಯತೆಯ ಮೇರೆಗೆ ಮಾಡಬೇಕು ೩) ಮುಖ್ಯ ಆದರೆ ತುರ್ತಲ್ಲ – ಇದನ್ನು ಬೇರೆಯವರಿಗೆ ವಹಿಸಿ (ಆದರೆ ಹೇಳಿಕೊಟ್ಟು) ಮಾಡಿಸಬೇಕು ೪) ತುರ್ತಾಗಲೀ ಮುಖ್ಯವಾಗಲೀ ಅಲ್ಲ – ಇದನ್ನು ಸಮಯ ಸಿಕ್ಕಾಗ ಮಾಡುವುದು ಅಥವಾ ಪಟ್ಟಿಯಿಂದ ತೆಗೆದು ಹಾಕಬಿಡಬೇಕು. ಮತ್ತು ಈ ಕೆಲಸಗಳನ್ನು ನಿರ್ವಹಿಸುವಾಗ, ದೊಡ್ಡ ಕೆಲಸಗಳಿದ್ದರೆ ಅದನ್ನು ಚಿಕ್ಕ ಚಿಕ್ಕ ಕೆಲಸಗಳಾಗಿ ವಿಂಗಡಿಸಿ, ಕೇವಲ ಒಂದೊಂದೇ ಚಿಕ್ಕ ಚಿಕ್ಕ ಕೆಲಸಗಳನ್ನು ಮುಗಿಸಲು ಗಮನ ಕೊಡಬೇಕು ಉದಾ: ಮನೆಯನ್ನು ಶುಚಿ ಮಾಡಬೇಕೆಂದರೆ, ಮೊದಲಿಗೆ ಒಂದು ಕೋಣೆಯಿಂದ ಶುರುಮಾಡಬೇಕು ಮತ್ತು ಆ ಶುಚಿಮಾಡುವ ಕ್ರಿಯೆಯನ್ನು ಸಣ್ಣ ಸಣ್ಣ ಕ್ರಿಯೆ ಗಳನ್ನಾಗಿ ವಿಂಗಡಿಸಿಕೊಂಡು ಒಂದನ್ನು ಮಾಡಿ ಮುಗಿಸಿದ ನಂತರವೇ ಇನ್ನೊಂದನ್ನು ತೆಗೆದುಕೊಳ್ಳಬೇಕು ಕೆಳಗೆ ತೋರಿಸುವ ಹಂತಗಳ ಪ್ರಕಾರ ಮೊದಲು ಧೂಳನ್ನು ಒಡೆಯುವುದು ಕುರ್ಚಿ, ಸೋಫಾ, ಟೇಬಲು, ಮಂಚಗಳನ್ನು ಆಚೀಚೆ ಸರಿಸಿ ಅದರ ಮೇಲ್ಮೈನ ಧೂಳನ್ನು ಗುಡಿಸಿ, ಒರೆಸುವುದನ್ನು ಮಾಡುವುದು ಪುಸ್ತಕಗಳು ಮತ್ತು ಪೇಪರ್‌ಗಳನ್ನು ತೆಗೆದು ಅದರದರ ಸ್ಥಳದಲ್ಲಿ ಇಡುವುದು ಆಯಾ ವಸ್ತುಗಳನ್ನು ಅದಕ್ಕೆ ನಿಗದಿಪಡಿಸಿದ ಜಾಗದಲ್ಲಿ ಇರಿಸುವುದು. ನೆಲದ ಮೇಲಿನ ಕಸವನ್ನು ತೆರವುಗೊಳಿಸಿ ನೆಲದ ಮೇಲ್ಮೈಯನ್ನು ತೊಳೆದು ಸ್ವಚ್ಛಗೊಳಿಸುವುದು ಅನುಪಯುಕ್ತ ವಸ್ತುಗಳನ್ನು ತೆಗೆದು ವಿಲೇವಾರಿ ಮಾಡುವುದು ಕಸದ ಡಬ್ಬಿಯನ್ನು ವಿಲೇವಾರಿ ಮಾಡುವುದು ಕೊನೆಯದಾಗಿ ಮನೆಯವರಿಂದ ಈ ಕೆಲಸಕ್ಕೆ ಅಂಕಗಳನ್ನು ಪಡೆಯುವುದು..! (೧೦ಕ್ಕೆ) ಮತ್ತು ಪ್ರತಿ ೨೫ ನಿಮಿಷ ಅಥವಾ ೪೫ ನಿಮಿಷಗಳಿಗೊಮ್ಮೆ ೨ ರಿಂದ ನಿಮಿಷಗಳ ವಿರಾಮನ್ನು ಪಡೆಯುವುದು ಈ ರೀತಿ ಪ್ರತಿ ಬಾರಿಯೂ ಮಾಡಿದಾಗ, ನಿಮಗೆ ದೊಡ್ಡ ಕೆಲಸಗಳು ಸಣ್ಣದಾಗಿ ಕಂಡಾಗ ಆಂತರಿಕ ಉತ್ತೇಜನ ಸಿಗುತ್ತದಲ್ಲದೆ ನಿಮಗೆ ಒತ್ತಡ ನಿರ್ಮಾಣವಾಗುವುದಿಲ್ಲವಾದುದರಿಂದ ನಿಮ್ಮ ಮುಂದೂಡಿಕೆಯ ಸ್ವಭಾವ ಹೇಳ ಹೆಸರಿಲ್ಲದಂತೆ ಕೇವಲ ೪೦ ದಿನಗಳಲ್ಲಿ ಮಾಯವಾಗಿ ಬಿಡುತ್ತದೆ ಮತ್ತು ಜೀವನದಲ್ಲಿ ಯಶಸ್ಸು ಎನ್ನುವುದು ಸಿದ್ಧಹಸ್ತವಾಗಿಬಿಡುತ್ತದೆ. ನಿಮಗೆ ಒಳ್ಳೆಯದಾಗಲಿ. ನಿಮಗೆ ಈ ಸಲಹೆ ಅಥವಾ ಪರಿಹಾರ ಇಷ್ಷವಾಗಿದ್ದಲ್ಲಿ ಅಥವಾ ಯಾವುದೇ ಅನುಮಾನಗಳಿದ್ದಲ್ಲಿ ಕಾಮೆಂಟಿನ ಮೂಲಕ ತಿಳಿಸಿ, ಇಲ್ಲವೆಂದರೆ gk@aprimitaworld.com ಗೆ ಈ ಮೇಲ್‌ನಲ್ಲಿ ಬರೆದು ತಿಳಿಸಿ.
#PSSM World ಎದುರಾಗುವ ಪ್ರತಿಯೊಂದು ಸವಾಲುಗಳನ್ನು ಸ್ವೀಕರಿಸಿ; ಅದು ಕೇವಲ ಜೀವನದ ಒಂದು ಭಾಗವಾಗಿ ಅಲ್ಲ, ಯಾಕೆಂದರೆ ಇಡೀ ಜೀವನವೇ ಒಂದು ಸವಾಲು. ಹಾಗಂತ ನಾವು ಅಷ್ಟಕ್ಕೇ ಸಮಾಧಾನ ಪಟ್ಟರೇ ಸಾಲದು. ನಮ್ಮ ಜೀವನದ ಕೊನೆಯ ಘಳಿಗೆಯವರೆಗೂ ನಾವು ಸವಾಲಿನಲ್ಲಿಯೇ ಬದುಕಿದರೆ, ಎದುರಾಗುವ ಸವಾಲುಗಳನ್ನು ಸ್ವೀಕರಿಸುತ್ತ ಬದುಕಿದರೆ ಮಾತ್ರ ನಮ್ಮ ಪ್ರತಿಯೊಂದು ಕನಸುಗಳು ನಮ್ಮ ಜೊತೆಯಲ್ಲಿ ಜೀವಂತವಾಗಿರುತ್ತದೆ. ನಾವು ಸ್ವಾಭಾವಿಕವಾಗಿ ನಮ್ಮ ಜೀವನದಲ್ಲಿ ಕಳೆದುಹೋದ ಘಟನೆಗಳಿಂದ ಆದ ನೋವನ್ನೇ ಸದಾ ಮೆಲುಕು ಹಾಕಿ ವ್ಯಥೆಪಡುತ್ತಿರುತ್ತೇವೆ. ಆದರೆ ಎಲ್ಲರಂತೆ ನಾನಲ್ಲ. ನಾನು ಇಂದು ಹಾಗೂ ನಾಳೆಯ ಬಗ್ಗೆ ಬರೀ ಚಿಂತಿಸಲ್ಲ, ಯೋಚಿಸುತ್ತೇನೆ. ನಾವು ಯಾವತ್ತೂ ಒಳ್ಳೆಯ ಕೆಲಸಗಳನ್ನೇ ಮಾಡಲು ಪ್ರಯತ್ನಿಸಬೇಕು; ಉಳಿದುದನ್ನು ದೇವರು ನೋಡಿಕೊಳ್ಳುತ್ತಾನೆ ಅಂದುಕೊಂಡು ಬದುಕುತ್ತಿರಬೇಕು ಅಷ್ಟೇ. ಈ ಪ್ರಪಂಚದಲ್ಲಿ ಇಂದಿನ ಕಾಲದಲ್ಲಿ ನಂಬಿಕೆಗೆ ಬೆಲೆ ಎಲ್ಲಿದೆ? ನಂಬಿ ಸಹಾಯ ಮಾಡಿ, ಕೊನೆಗೆ ನಂಬಿಕೆಗೆ ದ್ರೋಹ ಬಗೆಯುವ ಜನರ ಮಧ್ಯೆ ಏನೋ ಮಾಡೋಕೆ ಹೋಗಿ ಏನೋ ಆಗಿದ್ದಿಕ್ಕೆ ನನ್ನ ಜೀವನದಲ್ಲಿ ಭರವಸೆ ಅನ್ನೋದನ್ನೇ ಕಳೆದುಕೊಂಡಿದ್ದೇನೆ. ನಂಬಿಕೆ ಅನ್ನೋ ಪದಕ್ಕೆ ಕೂಡ ಯಾಕೆಂದರೆ ‘ನಂಬಿಕೆ’ ಅನ್ನೋದು ಗಾಜಿನ ಗ್ಲಾಸ್ ಥರ, ಒಮ್ಮೆ ಒಡೆದು ಹೋದರೆ ಮತ್ತೆ ಅದನ್ನು ಯಥಾಸ್ಥಿತಿಗೆ ತರುವುದು ಕಷ್ಟ ಹಾಗು ಅಸಾಧ್ಯ. ನಂಬಿಕೆ ಅನ್ನೋದು ಎಲ್ಲರ ಜೀವನದಲ್ಲಿಯೂ ಒಂದು ಪ್ರಯಾಣ; ನಂಬಿಕೆ ಅನ್ನೋದು ಒಂದು ಇತಿಹಾಸ. ಕಣ್ಣಿಗೆ ಕಾಣದ ದೇವರು ಅಮೂರ್ತ ಸತ್ಯಗಳನ್ನು ನಿರ್ದೇಶಿಸುವ ಮೂಲಕ ತನ್ನನ್ನು ಬಹಿರಂಗಪಡಿಸಲಿಲ್ಲ. ಆದರೆ ಮಾನವ ಇತಿಹಾಸದಲ್ಲಿ ಕಾರ್ಯನಿರ್ವಹಿಸುವ ಮೂಲಕ. ನಂಬಿಕೆಯ ಪ್ರತಿಕ್ರಿಯೆಯು ಐತಿಹಾಸಿಕವಾಗಿದೆ, ಅಂದರೆ ಅದನ್ನು ಮತ್ತೆ ಮತ್ತೆ ನವೀಕರಿಸುವುದು ನಮ್ಮೆಲ್ಲರ ಆಧ್ಯ ಕರ್ತವ್ಯವಾಗಬೇಕು. ಜೀವಿಗಳಲ್ಲೆಲ್ಲಾ ಶ್ರೇಷ್ಠವಾದುದು ಮಾನವಜೀವಿ, ಈ ಭೂಮಿಯ ಮೇಲೆ ಹುಟ್ಟಿದ ಪ್ರತಿಯೊಂದು ಜೀವಿಯಲ್ಲೂ ಈ ನಂಬಿಕೆ ಅನ್ನುವುದು ಇದ್ದೇ ಇದೆ. ಮತ್ತೆ ಮನುಷ್ಯರಾದ ನಮಗೆ ಇದು ಸಾಮಾನ್ಯವೇ ಅಲ್ಲವೇ. ಜೀವನ ಅನ್ನೋದು ನಿಂತಿರುವುದೇ ನಂಬಿಕೆಯ ಮೇಲೆ ಹಾಗಂತ ನಂಬಿಕೆಯೇ ಜೀವನ ಆಗಲಾರದು ಅನ್ನೋದು ಸತ್ಯ. ಮನುಷ್ಯ ಸಂಘ ಜೀವಿ ಅದಕ್ಕೆ ಕಾರಣ ಹಲವಾರು ಇದ್ದರೂ ನಂಬಿಕೆಯೇ ಮೊದಲು ಹೊರತು ಬೇರೆ ಯಾವುದೂ ಅಲ್ಲ ಅನ್ನೋದು ಸತ್ಯ. ಸಾಮಾಜಿಕವಾಗಿದ್ದುಕೊಂಡು ಬದುಕುವುದು ಅವಶ್ಯಕವೇ ಆಗಿದ್ದರೂ ಅನಿವಾರ್ಯವೇನಲ್ಲ. ಸೃಷ್ಟಿಯಲ್ಲಿ ನಂಬಿಕೆಯು ಸೃಷ್ಟಿಸಿರುವ ಬುನಾದಿಯ ಮೇಲೆ ನಮ್ಮೆಲ್ಲರ ಜೀವನ ನಡೆದಿದೆ ಅಷ್ಟೇ. . ಯಾವುದೇ ನಂಬಿಕೆಯನ್ನು ವಿರೋಧಿಸುವ ಅಥವಾ ಇದೇ ಸರಿ ಅಂತ ಇನ್ನೊಬ್ಬರ ಮೇಲೆ ಹೇರುವ ಅಧಿಕಾರವಂತೂ ಯಾರಿಗೂ ಇಲ್ಲ. ದೇವರನ್ನು ನಾನು ನೋಡಿಲ್ಲ ಅನ್ನುವುದು ಎಷ್ಟು ಸತ್ಯವೋ ನೋಡಿದವರು ಆ ಶಕ್ತಿಯನ್ನು ಕರಗತ ಮಾಡಿಕೊಂಡಿರುವವರು ಇದ್ದಾರೆ ಅನ್ನುವುದು ಸೂರ್ಯ ಚಂದ್ರರಷ್ಟೇ ಸತ್ಯ. ಪ್ರಕೃತಿಯಲ್ಲಿರುವ ಕಲ್ಲು ಮಣ್ಣನ್ನೇ ಪೂಜಿಸಿರುವ ಹಿರಿಯರ ಈ ನಂಬಿಕೆಗಳೇ ದೇವರು, ವ್ರತಗಳು, ಹಬ್ಬಗಳ ಆಚರಣೆಗೆ ಕಾರಣವಾಗಿದ್ದು. ಹಾಗಂತ ತಮ್ಮ ಮನಸ್ಸಿಗೆ ಬಂದಂತೆ ಕಾರಣವಿಲ್ಲದೆ ಈ ಹಬ್ಬ ಹರಿದಿನಗಳು ಹುಟ್ಟಿಕೊಳ್ಳಲಿಲ್ಲ, ಪ್ರತಿಯೊಂದಕ್ಕೂ ಒಂದೊಂದು ಅರ್ಥವಿದೆ. ನಮ್ಮ ಋಣಾತ್ಮಕ ಯೋಚನೆಗಳನ್ನು ಬದಿಗಿಟ್ಟು ಸಾಮಾಜಿಕವಾಗಿ ಯೋಚಿಸೋಣ ಹಬ್ಬ ಅಂದಾಗ ಏನೋ ಸಂಭ್ರಮ, ಸಡಗರ ಎಲ್ಲರೂ ಜೊತೆಯಾಗಿ ಕೂಡಿ ನಲಿಯುತ್ತೇವೆ ಹಂಚಿ ತಿನ್ನುತ್ತೇವೆ ಖುಷಿಯನ್ನು ಕಾಣುತ್ತೇವೆ, ಬಹುಶಃ ಈ ಸಮ್ಮಿಲನಗಳು ಪದೇ ಪದೇ ನಡೆಯಲಿ ಎನ್ನುವ ಆಶಯಕ್ಕಾಗಿಯೇ ನಾನಾ ಆಚರಣೆಗಳು ಹುಟ್ಟಿರಬಹುದು ಅಲ್ಲವೇ? ನಾವು ಏನನ್ನು ಕಂಡಿದ್ದೇವೆ? ನಾವು ಯಾಕೆ ಹೀಗೇ ನಡೆಯಬೇಕು? ಅಂತ ಅಂದುಕೊಳ್ಳದೆ ಪರಸ್ಪರರ ಭಾವನೆಗಳನ್ನು ಗೌರವಿಸಿದಾಗಲೇ ಜೀವನಕ್ಕೆ ಒಂದು ಬೆಲೆ ಅಲ್ಲವೇ? ಆದರೂ ನಮ್ಮಲ್ಲಿನ ನಂಬಿಕೆಗಳು ಮಿತಿ ಮೀರಿದಾಗ ಸಮಾಜದ ಸ್ವಾಸ್ಥ್ಯವನ್ನು ಹಾಳುಮಾಡಿ ಮೂಢನಂಬಿಕೆಗಳಾಗಿವೆ ಅನ್ನುವುದೂ ನಿಜ, ಹಾಗೆಯೇ ಅತಿಯಾದ ಆಧುನಿಕತೆಯ ನಾಸ್ತಿಕವಾದವೂ ಸೃಷ್ಟಿಯ ಸಮತೋಲನ ಕಾಪಾಡುವಲ್ಲಿ ಎಡವಿದೆ ಅನ್ನುವುದು ವಸ್ತುಸತ್ಯ. ನಂಬಿಕೆ ಬದುಕಿನ ಆಧಾರ. ಆದರೆ ಬದುಕಿನ ಉನ್ನತೀಕರಣದಲ್ಲಿ ನಂಬಿಕೆ ಅನ್ನೋದು ತನ್ನ ಮೌಲ್ಯ ಕಳೆದುಕೊಳ್ಳದಿರಲಿ. ಮೌಡ್ಯದ ಪರಮಾವಧಿಯೂ ಆಗದಿರಲಿ ಎಂಬ ಆಶಯದೊಂದಿಗೆ ಬದುಕೋಣ ಮಾನವೀಯ ಮೌಲ್ಯಗಳ ಪ್ರೀತಿಯ ಜೊತೆಗೆ. ಜೀವನದಲ್ಲಿ ಬೆಳವಣಿಗೆಯನ್ನು ಅನುಭವಿಸಲು, ನಮಗೆ ಮೂರು ವಿಷಯಗಳಲ್ಲಿ ನಂಬಿಕೆ ಬೇಕು - ತನ್ನಲ್ಲಿ, ಸಮಾಜದ ಒಳ್ಳೆಯತನದಲ್ಲಿ ಮತ್ತು ದೇವರಲ್ಲಿ. ಆದರೆ, ಇತ್ತೀಚೆಗಿನ ಹಲವು ಘಟನೆಗಳನ್ನು ನೋಡಿದಾಗ ಅದೆಷ್ಟೋ ಅಮಾಯಕರ ಜೀವಗಳು ಬಲಿಯಾದವು, ದೇವರು ಇದ್ದಾನೆಯೇ ಎಂದು ಆಶ್ಚರ್ಯವಾಗುತ್ತದೆ. ಅವನು ಮಾಡಿದರೆ, ಅವನು ಅಂತಹ ಕೆಲಸಗಳನ್ನು ಏಕೆ ಮಾಡುತ್ತಾನೆ? ಅಂತಹ ಸಂದರ್ಭಗಳಲ್ಲಿ ನಂಬಿಕೆಯು ದುರ್ಬಲವಾಗುತ್ತದೆ ಮತ್ತು ಒಬ್ಬರು ಅದನ್ನು ಕಳೆದುಕೊಳ್ಳುತ್ತಾರೆ. ಈ ಸಂದರ್ಭಗಳಲ್ಲಿಯೇ ನಂಬಿಕೆಯು ಹೆಚ್ಚು ಅಗತ್ಯವಾಗಿರುತ್ತದೆ. ನಮಗೆ ನಂಬಿಕೆಯ ಕೊರತೆಯಿದ್ದರೆ ಮತ್ತು ಘಟನೆಗಳು ನಮ್ಮನ್ನು ಹೆದರಿಸಿದರೆ, ನಾವು ಅವುಗಳಿಂದ ದೂರ ಹೋಗುತ್ತೇವೆ, ನಮ್ಮಲ್ಲಿ ನಾವೇ ಕಳೆದುಹೋಗುತ್ತೇವೆ ಮತ್ತು ಆಧಾರರಹಿತರಾಗುತ್ತೇವೆ. ಅಂತಹ ಸಂದರ್ಭದಲ್ಲಿ ದೃಢವಾದ ಒಂದು ನೆಲೆಯನ್ನು ಹುಡುಕಲು ನಮ್ಮಲ್ಲಿನ ಯಾವುದೋ ಒಂದು ಭರವಸೆಯ ನಂಬಿಕೆ ನಮಗೆ ಸಹಾಯ ಮಾಡುತ್ತದೆ. ಕಷ್ಟದ ಸಮಯದಲ್ಲಿ ಹಾದುಹೋಗುವಾಗ, ನಾವು ನಮ್ಮ ನಂಬಿಕೆಯನ್ನು ನವೀಕರಿಸಬೇಕಾಗಿದೆ. ಅಂತಹ ಸಮಯದಲ್ಲಿ, ನಮ್ಮಲ್ಲಿರುವ ಶೌರ್ಯವನ್ನು ಆಹ್ವಾನಿಸಿ ಮತ್ತು ಸವಾಲನ್ನು ಆತ್ಮವಿಶ್ವಾಸದಿಂದ ಎದುರಿಸಬೇಕಾಗುತ್ತದೆ. ಇಂದಿನ ಜನರಲ್ಲಿ ತಾಳ್ಮೆ ಸ್ವಲ್ಪ ಕಡಿಮೆ ಎಂದೇ ಹೇಳಬಹುದು. ಇದು ಆಧುನಿಕ ಯುಗವಾಗಿರುವುದರಿಂದ ಏನೇ ಕೆಲಸ ಮಾಡಿದರೂ ತತ್‌ಕ್ಷಣ ಫ‌ಲಿತಾಂಶ ಬೇಕೇ ಬೇಕು. ಯಾವುದೇ ಕೆಲಸವನ್ನು ಮಾಡಿದರೂ ಶೀಘ್ರ ಪ್ರತಿಫ‌ಲ ದೊರೆಯದಿದ್ದಲ್ಲಿ, ಆ ಕೆಲಸವನ್ನು ಬಿಟ್ಟು ಮತ್ತೊಂದು ಕೆಲಸಕ್ಕೆ ಕೈ ಹಚ್ಚುತ್ತಾರೆ. ಇದರಿಂದಾಗಿ ಯಶಸ್ಸು ಎಂಬುದು ಮರೀಚಿಕೆಯಾಗಿಯೇ ಉಳಿದಿದೆ. ಒಂದು ನಿರ್ದಿಷ್ಟ ಕೆಲಸದಲ್ಲಿ ಒಮ್ಮೆ ಸೋಲಾದರೆ ಅಷ್ಟಕ್ಕೇ ಗುರಿಯನ್ನು ಬದಲಿಸದೆ ದೃಢ ನಂಬಿಕೆಯಿಂದ ನಿರಂತರವಾಗಿ ಪ್ರಯತ್ನವನ್ನು ಮಾಡಿ ಗೆಲುವನ್ನು ದಕ್ಕಿಸಿಕೊಳ್ಳುವಂತಹ ತಾಳ್ಮೆಯು ಬಹಳ ಮುಖ್ಯವಾಗಿ ಇರಬೇಕು. ನಮ್ಮ ಮೇಲೆ ನಾವಿಡುವ ನಂಬಿಕೆ ಮತ್ತು ತಾಳ್ಮೆಯೇ ನಮ್ಮನ್ನು ಜೀವನವನ್ನು ಔನ್ನತ್ಯಕ್ಕೇರಿಸುತ್ತದೆ. ಇದೇ ಜೀವನದ ಬಲು ಅಮೂಲ್ಯವಾದ ಹಾಗು ಕಷ್ಟಕರವಾದ ತಪಸ್ಸು. ನಮಗೆ ಅಗತ್ಯವಿರುವಾಗಲೆಲ್ಲಾ ನಮ್ಮ ನಂಬಿಕೆಯು ಅದ್ಭುತ ರೀತಿಯಲ್ಲಿ ಕೆಲಸ ಮಾಡುತ್ತದೆ. ಇದು ಅಂತಿಮವಾಗಿ ನಮ್ಮನ್ನು ಸಂತೋಷ, ಆರೋಗ್ಯ ಮತ್ತು ಸಮೃದ್ಧಿಯೊಂದಿಗೆ ಆಶೀರ್ವದಿಸುವ ಜೀವನದ ಕಡೆಗೆ ಕರೆದೊಯ್ಯುತ್ತದೆ. ನಮ್ಮ ಜೀವನದ ಕೆಲವು ಕರಾಳ ದಿನಗಳನ್ನು ನಾವು ಎದುರಿಸುತ್ತಿದ್ದರೂ ಅಥವಾ ದೊಡ್ಡ ಆರ್ಥಿಕ ಅಥವಾ ವೈಯಕ್ತಿಕ ನಷ್ಟದಿಂದ ಚೇತರಿಸಿಕೊಳ್ಳುತ್ತಿದ್ದರೂ ಸಹ ನಮ್ಮ ಮೇಲೆ ನಮಗೆ ನಂಬಿಕೆ ಇದ್ದರೆ, ನಮ್ಮ ಭರವಸೆ ಎಷ್ಟೇ ಮಸುಕಾಗಿದ್ದರೂ ಸಹ ನಮ್ಮಲ್ಲಿ ನಮಗೆ ನಂಬಿಕೆ ಇದ್ದರೆ ನಾವು ಯಾವುದೇ ಪರಿಸ್ಥಿತಿಯಿಂದ ಬೇಕಾದರೂ ಹಿಂತಿರುಗಬಹುದು. ಯಾಕೆಂದರೆ ನಮ್ಮಲ್ಲಿನ ಶಕ್ತಿಗಳಲ್ಲಿ ಬಲವಾದ ನಂಬಿಕೆಯನ್ನು ನಾವು ಹೊಂದಿರುತ್ತೇವೆ. ಈ ನಂಬಿಕೆ ಅನ್ನೋದು ನಮ್ಮ ಮನೋಭಾವವನ್ನು ಪರಿವರ್ತಿಸುತ್ತದೆ. ನಾವು ನಮ್ಮಲ್ಲಿ ಹೆಚ್ಚಿನ ಶಕ್ತಿಯಲ್ಲಿ ನಂಬಿಕೆಯನ್ನು ಹೊಂದಿದಾಗ, ನಮ್ಮ ಮನೋಭಾವವು ಸಂಪೂರ್ಣವಾಗಿ ಬದಲಾಗುತ್ತದೆ. ನಾವು ಯಾವುದೇ ಋಣಾತ್ಮಕ ಪರಿಸ್ಥಿತಿಯಲ್ಲಿ ಧನಾತ್ಮಕತೆಯನ್ನು ಹುಡುಕಲು ಪ್ರಾರಂಭಿಸುತ್ತೇವೆ. ಇದು ನಮ್ಮ ದೃಷ್ಟಿಕೋನವನ್ನು ಪರಿವರ್ತಿಸುತ್ತದೆ ಮತ್ತು ಕತ್ತಲೆಯಾದ ಸುತ್ತಮುತ್ತಲಿನ ಹೊರತಾಗಿಯೂ ನಾವು ಜೀವನದ ಉತ್ತಮ ನೋಟವನ್ನು ಪಡೆಯುತ್ತೇವೆ ಹಾಗು ಕಾಣುತ್ತೆವೆ. ನಂಬಿಕೆ ಅನ್ನೋದು ಸಮಸ್ಯೆಯಷ್ಟೇ ಅಲ್ಲ ಪರಿಹಾರದ ಕಡೆಗೆ ನಮ್ಮ ದೃಷ್ಟಿಯಲ್ಲಿ ನಮ್ಮನ್ನು ಪ್ರೇರೇಪಿಸುವಂತೆ ಮಾಡುತ್ತದೆ. ನಂಬಿಕೆಯು ಚಲನಾ ಶಕ್ತಿಯಾಗಿದ್ದು ಅದು ನಮಗೆ ಜೀವನದಲ್ಲಿ ಯಶಸ್ವಿಯಾಗಿ ಮುಂದೆ ಸಾಗಲು ಸಹಾಯ ಮಾಡುತ್ತದೆ. ನಂಬಿಕೆ ಅನ್ನೋದು ನಮಗೆ ಅಗತ್ಯವಿರುವ ಶಕ್ತಿಯನ್ನು ನಮ್ಮಲ್ಲಿಯೇ ಒದಗಿಸುತ್ತದೆ ಮತ್ತು ಎಂದಿಗೂ ಬಿಟ್ಟುಕೊಡದಂತೆ ನಮ್ಮನ್ನು ಪ್ರೇರೇಪಿಸುವಂತೆ ಮಾಡುತ್ತದೆ. ನಾವು ಯಾವಾಗಲೂ ನೆನಪಿನಲ್ಲಿಟ್ಟುಕೊಳ್ಳಬೇಕಾದ ಪ್ರಮುಖ ವಿಷಯವೆಂದರೆ:- 'ಸಂತೋಷವೇ ಮುಖ್ಯ'. ನಮ್ಮ ದೈನಂದಿನ ಜೀವನವು ನಗು ಮತ್ತು ಸಂತೋಷದ ಕೆಲವು ಸಂಚಿಕೆಗಳಿಂದ ತುಂಬಿಲ್ಲದಿದ್ದರೆ, ನಾವು ಮಾನವರಾಗಿರುವ ಸಂಪೂರ್ಣ ಅಂಶವನ್ನು ಕಳೆದುಕೊಳ್ಳುತ್ತೇವೆ. ಆದ್ದರಿಂದಲೇ ದೇವರು ಸುಂದರವಾದ ಜಗತ್ತನ್ನು ಸೃಷ್ಟಿಸಿದ್ದಾನೆ. ನಾವು ಆತನಲ್ಲಿ ಮತ್ತು ಆತನ ಪವಾಡಗಳಲ್ಲಿ ನಂಬಿಕೆ ಹೊಂದಿದ್ದರೆ, ನಾವು ಯಾವಾಗಲೂ ಸಂತೋಷವಾಗಿರಲು ಪ್ರಯತ್ನಿಸುತ್ತೇವೆ ಮತ್ತು ಕಷ್ಟಗಳನ್ನು ಎದುರಿಸುವ ವಿಶ್ವಾಸವನ್ನು ಗಳಿಸುತ್ತೇವೆ. ನಮ್ಮ ನಂಬಿಕೆಯು ಜೀವನದ ಬಗೆಗಿನ ನಮ್ಮ ಮನೋಭಾವವನ್ನು ಬದಲಾಯಿಸುತ್ತದೆ. ಆದ್ದರಿಂದ, ನಾವು ಜೀವನದಲ್ಲಿ ಏನೇ ಕಷ್ಟ-ನಷ್ಟ, ನೋವು-ಕಣ್ಣೀರು, ದುಃಖ-ದುಮ್ಮಾನಗಳನ್ನು ಎದುರಿಸುತ್ತಿದ್ದರೂ ಸಹ ಕಣ್ಣಿಗೆ ಕಾಣುವ ಜನರಿಂದ ಮೋಸ ವಂಚನೆಗೆ ಗುರಿಯಾಗಿದ್ದರೂ ಸರಿ ಮುಂದಿನ ಜೀವನದ ಕ್ಷಣ ಗಳನ್ನು ಕಣ್ಣಿಗೆ ಕಾಣದ ಆ ದೇವರಲ್ಲಿ ನಂಬಿಕೆ ಇರಿಸಿಬಿಡೋಣ. ಮತ್ತು ಸದಾಚಾರದ ಹಾದಿಯಲ್ಲಿ ಸಾಗುತ್ತಾ ನಮ್ಮ ಕರ್ಮವನ್ನು ಮಾಡುವ ಮೂಲಕ ನಮ್ಮಲ್ಲಿ ನಾವೇ ನಂಬಿಕೆಯನ್ನು ಬೆಳೆಸಿಕೊಳ್ಳೋಣ. ಅಲ್ಪಾವಧಿಯಲ್ಲಿ. ಬಲವಾದ ನಂಬಿಕೆಯನ್ನು ಹೊಂದಿರುವುದು ನಮ್ಮ ಜೀವನದ ಮಹತ್ವದ ತಿರುವು ಎಂದು ನಾವು ಅರ್ಥಮಾಡಿಕೊಳ್ಳೋಣ....
#PSSM World (Spirituality) ಎಂಬುದು ಕೇವಲ ಒಂದು ಧರ್ಮ ಅಥವಾ ಆಚರಣೆಯಲ್ಲ; ಅದು ನಮ್ಮ ಅಂತರಂಗದ ಶೋಧನೆ. ಕರ್ನಾಟಕದ ಶ್ರೀಮಂತ ಪರಂಪರೆಯಲ್ಲಿ ಆಧ್ಯಾತ್ಮಿಕತೆಗೆ ಅತ್ಯಂತ ಮಹತ್ವದ ಸ್ಥಾನವಿದೆ. ​ಕನ್ನಡದಲ್ಲಿ ಆಧ್ಯಾತ್ಮಿಕತೆಯ ಬಗ್ಗೆ ಕೆಲವು ಮುಖ್ಯ ವಿಷಯಗಳು ಇಲ್ಲಿವೆ: ​1. ಆಧ್ಯಾತ್ಮಿಕತೆ ಎಂದರೇನು? ​ಆಧ್ಯಾತ್ಮಿಕತೆ ಎಂದರೆ 'ಆತ್ಮದ ಬಗ್ಗೆ ತಿಳಿಯುವುದು'. ನಾವು ಯಾರು? ನಮ್ಮ ಜೀವನದ ಉದ್ದೇಶವೇನು? ಮತ್ತು ಈ ಬ್ರಹ್ಮಾಂಡದ ಜೊತೆಗಿನ ನಮ್ಮ ಸಂಬಂಧವೇನು ಎಂಬುದನ್ನು ಅರಿಯುವುದೇ ನಿಜವಾದ ಆಧ್ಯಾತ್ಮ. ಇದು ಕೇವಲ ಗುಡಿ-ಗುಂಡಾರಗಳಿಗೆ ಸೀಮಿತವಾಗಿರದೆ, ಮನಸ್ಸಿನ ಶಾಂತಿ ಮತ್ತು ಅರಿವಿನ ದಾರಿಯಾಗಿದೆ. ​2. ಕರ್ನಾಟಕದ ಶ್ರೇಷ್ಠ ಆಧ್ಯಾತ್ಮಿಕ ಪರಂಪರೆ ​ನಮ್ಮ ನಾಡು ಅನೇಕ ಶರಣರು, ಸಂತರು ಮತ್ತು ದಾಸರನ್ನು ಕಂಡಿದೆ. ಅವರ ಕೊಡುಗೆ ಅಪಾರ: ​ವಚನ ಸಾಹಿತ್ಯ: ಬಸವಣ್ಣನವರು "ಕಾಯಕವೇ ಕೈಲಾಸ" ಎಂದು ಹೇಳುವ ಮೂಲಕ ಕೆಲಸದಲ್ಲೇ ದೇವರನ್ನು ಕಾಣುವ ಹಾದಿ ತೋರಿದರು. ಅಕ್ಕಮಹಾದೇವಿ, ಅಲ್ಲಮಪ್ರಭುಗಳ ವಚನಗಳು ಇಂದಿಗೂ ನಮಗೆ ದಾರಿದೀಪ. ​ದಾಸ ಸಾಹಿತ್ಯ: ಪುರಂದರದಾಸರು ಮತ್ತು ಕನಕದಾಸರು ತಮ್ಮ ಕೀರ್ತನೆಗಳ ಮೂಲಕ ಭಕ್ತಿ ಮತ್ತು ಮಾನವೀಯತೆಯ ಮಹತ್ವವನ್ನು ಸರಳವಾಗಿ ತಿಳಿಸಿಕೊಟ್ಟಿದ್ದಾರೆ. ​ಅಧ್ಯಾತ್ಮಿಕ ಕೇಂದ್ರಗಳು: ಶೃಂಗೇರಿ, ಧರ್ಮಸ್ಥಳ, ಉಡುಪಿ ಮತ್ತು ಸಿದ್ದಗಂಗಾ ಮಠಗಳಂತಹ ಕೇಂದ್ರಗಳು ಸಮಾಜಕ್ಕೆ ಜ್ಞಾನದ ಜೊತೆಗೆ ಸೇವೆಯನ್ನೂ ನೀಡುತ್ತಿವೆ. ​3. ಆಧ್ಯಾತ್ಮಿಕ ಜೀವನದ ಮುಖ್ಯ ಹಂತಗಳು ​ದೈನಂದಿನ ಜೀವನದಲ್ಲಿ ಆಧ್ಯಾತ್ಮಿಕತೆಯನ್ನು ಅಳವಡಿಸಿಕೊಳ್ಳಲು ಈ ಕೆಳಗಿನವುಗಳು ಸಹಕಾರಿ: ​ಧ್ಯಾನ (Meditation): ಮನಸ್ಸನ್ನು ಏಕಾಗ್ರಗೊಳಿಸಲು ಮತ್ತು ಒತ್ತಡದಿಂದ ಮುಕ್ತಿ ಪಡೆಯಲು. ​ಸೇವೆ (Service): ಇತರರಿಗೆ ಸಹಾಯ ಮಾಡುವ ಮೂಲಕ ಅಹಂಕಾರವನ್ನು ಕಳೆದುಕೊಳ್ಳುವುದು. ​ಸ್ವಾಧ್ಯಾಯ (Self-study): ಒಳ್ಳೆಯ ಪುಸ್ತಕಗಳನ್ನು ಓದುವುದು ಮತ್ತು ಆತ್ಮಾವಲೋಕನ ಮಾಡಿಕೊಳ್ಳುವುದು. ​ಸಮಚಿತ್ತ: ಸುಖ-ದುಃಖಗಳನ್ನು ಸಮಾನವಾಗಿ ಸ್ವೀಕರಿಸುವ ಮನೋಭಾವ ಬೆಳೆಸಿಕೊಳ್ಳುವುದು. ​"ಒಳಗೆ ನೋಡಿದರೆ ಇರುವುದೆಲ್ಲಾ ಹೊರಗಿದೆ, ಹೊರಗೆ ನೋಡಿದರೆ ಇರುವುದೆಲ್ಲಾ ಒಳಗಿದೆ." ​ಆಧ್ಯಾತ್ಮಿಕತೆಯು ನಿಮ್ಮನ್ನು ಹೆಚ್ಚು ಶಾಂತಿಯುತ ಮತ್ತು ಪ್ರೀತಿಯುಳ್ಳ ವ್ಯಕ್ತಿಯನ್ನಾಗಿ ಮಾಡುತ್ತದೆ. ​ನಾನು ನಿಮಗೆ ಯಾವುದಾದರೂ ನಿರ್ದಿಷ್ಟ ವಿಷಯದ ಬಗ್ಗೆ (ಉದಾಹರಣೆಗೆ: ವಚನಗಳ ಅರ್ಥ, ಧ್ಯಾನದ ಕ್ರಮ ಅಥವಾ ಯಾವುದಾದರೂ ಸಂತರ ಬಗ್ಗೆ) ಹೆಚ್ಚಿನ ಮಾಹಿತಿ ನೀಡಬೇಕೆ?
ಎಂಬ ಪದಕ್ಕೆ ಕನ್ನಡದಲ್ಲಿ ಹಲವು ಪದಗಳನ್ನು ಬಳಸಬಹುದು, ಸಂದರ್ಭಕ್ಕೆ ಅನುಗುಣವಾಗಿ ಅವುಗಳ ಅರ್ಥದಲ್ಲಿ ಸ್ವಲ್ಪ ವ್ಯತ್ಯಾಸವಿರುತ್ತದೆ. ​ಸಾಮಾನ್ಯವಾಗಿ ಬಳಸುವ ಪದಗಳು: ​ಆಚರಣೆ (Ācaraṇe): ಇದು ಅತ್ಯಂತ ಸಾಮಾನ್ಯವಾದ ಮತ್ತು ವ್ಯಾಪಕವಾಗಿ ಬಳಸಲಾಗುವ ಪದ. ಯಾವುದೇ ಒಂದು ಧಾರ್ಮಿಕ, ಸಾಮಾಜಿಕ ಅಥವಾ ಸಾಂಪ್ರದಾಯಿಕ ಕಾರ್ಯವನ್ನು ವಿಧಿವಿಧಾನಗಳ ಮೂಲಕ ಮಾಡುವುದನ್ನು ಇದು ಸೂಚಿಸುತ್ತದೆ. ಉದಾಹರಣೆಗೆ, "ಮದುವೆ ಆಚರಣೆಗಳು" (wedding rituals). ​ಸಂಸ್ಕಾರ (Saṃskāra): ಇದು ಹಿಂದೂ ಧರ್ಮದಲ್ಲಿ ಜನನದಿಂದ ಮರಣದವರೆಗೆ ನಡೆಯುವ ಹದಿನಾರು ಪ್ರಮುಖ ವಿಧಿಗಳನ್ನು ಸೂಚಿಸುತ್ತದೆ. ಇದು ವ್ಯಕ್ತಿಯ ಜೀವನದ ಪ್ರತಿಯೊಂದು ಹಂತವನ್ನೂ ಪವಿತ್ರಗೊಳಿಸುವ ವಿಧಿ. ಉದಾಹರಣೆಗೆ, "ಉಪನಯನ ಸಂಸ್ಕಾರ" (Upanayana Saṃskāra). ​ಕರ್ಮ (Karma): ಇದು 'ಕ್ರಿಯೆ' ಎಂಬ ಸಾಮಾನ್ಯ ಅರ್ಥವನ್ನು ಹೊಂದಿದ್ದರೂ, ಧಾರ್ಮಿಕ ಸಂದರ್ಭದಲ್ಲಿ ಒಂದು ನಿರ್ದಿಷ್ಟ ವಿಧಿಯನ್ನು ಸೂಚಿಸಲು ಬಳಸಲಾಗುತ್ತದೆ. ಉದಾಹರಣೆಗೆ, "ಪೂಜಾ ಕರ್ಮಗಳು" (worship rituals). ​ವಿಧಿ (Vidhi): ಇದು ಒಂದು ಕಾರ್ಯವನ್ನು ನಿರ್ವಹಿಸಲು ಇರುವ ನಿಯಮಗಳು ಅಥವಾ ಕ್ರಮವನ್ನು ಸೂಚಿಸುತ್ತದೆ. ಉದಾಹರಣೆಗೆ, "ಪೂಜಾ ವಿಧಿ" (method of worship). ​ಸಂಪ್ರದಾಯ (Saṃpradāya): ಇದು ಹಲವು ತಲೆಮಾರುಗಳಿಂದ ನಡೆದುಕೊಂಡು ಬಂದಿರುವ ಪದ್ಧತಿಗಳು ಮತ್ತು ಆಚರಣೆಗಳನ್ನು ಸೂಚಿಸುತ್ತದೆ. "ಕುಟುಂಬದ ಸಂಪ್ರದಾಯ" (family tradition) ಎಂದು ಹೇಳುವಾಗ ಇದನ್ನು ಬಳಸಲಾಗುತ್ತದೆ. ​ಸಂದರ್ಭದ ಆಧಾರದ ಮೇಲೆ, ನೀವು ಈ ಪದಗಳಲ್ಲಿ ಯಾವುದಾದರೂ ಒಂದನ್ನು ಬಳಸಬಹುದು. ಉದಾಹರಣೆಗೆ: ​ಧಾರ್ಮಿಕ ಆಚರಣೆಗಳು (Religious rituals) ​ಮದುವೆ ವಿಧಿವಿಧಾನಗಳು (Wedding rites and rituals) ​ಹಬ್ಬದ ಸಂಪ್ರದಾಯಗಳು (Festival traditions) #PSSM World
#PSSM World ಖಿನ್ನತೆ (Depression), ಆಧ್ಯಾತ್ಮಿಕತೆ (Spirituality) ಮತ್ತು ಧ್ಯಾನ (Meditation) ಇವುಗಳ ನಡುವೆ ಆಳವಾದ ಸಂಬಂಧವಿದೆ. ಇಂದಿನ ಒತ್ತಡದ ಜೀವನದಲ್ಲಿ ಮನಸ್ಸಿನ ಶಾಂತಿ ಕಂಡುಕೊಳ್ಳಲು ಈ ಮೂರರ ಬಗ್ಗೆ ಅರಿವು ಇರುವುದು ಬಹಳ ಮುಖ್ಯ. ​ಕನ್ನಡದಲ್ಲಿ ಇದರ ಸಾರಾಂಶ ಇಲ್ಲಿದೆ: ​1. ಖಿನ್ನತೆ (Depression): ಮನಸ್ಸಿನ ಮೌನ ಹೋರಾಟ ​ಖಿನ್ನತೆ ಕೇವಲ ಒಂದು ಕ್ಷಣದ ಬೇಸರವಲ್ಲ; ಇದು ದೀರ್ಘಕಾಲದ ಮಾನಸಿಕ ಸ್ಥಿತಿ. ಇದು ವ್ಯಕ್ತಿಯ ಆಲೋಚನೆಗಳು, ಭಾವನೆಗಳು ಮತ್ತು ದೈನಂದಿನ ಕಾರ್ಯಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ​ಲಕ್ಷಣಗಳು: ಆಸಕ್ತಿ ಕಳೆದುಕೊಳ್ಳುವುದು, ಅತಿಯಾದ ಸುಸ್ತು, ನಿದ್ರೆಯ ಸಮಸ್ಯೆ ಮತ್ತು ಭರವಸೆ ಇಲ್ಲದ ಭಾವನೆ. ​ಪರಿಹಾರ: ಇದಕ್ಕೆ ವೈದ್ಯಕೀಯ ಚಿಕಿತ್ಸೆ (Therapy/Medicine) ಎಷ್ಟು ಮುಖ್ಯವೋ, ಜೀವನಶೈಲಿಯ ಬದಲಾವಣೆ ಕೂಡ ಅಷ್ಟೇ ಅಗತ್ಯ. ​2. ಆಧ್ಯಾತ್ಮಿಕತೆ (Spirituality): ಅಂತರಂಗದ ಅರಿವು ​ಆಧ್ಯಾತ್ಮಿಕತೆ ಎಂದರೆ ಕೇವಲ ಧಾರ್ಮಿಕ ಆಚರಣೆಗಳಲ್ಲ. ಇದು 'ನಾನು ಯಾರು?' ಮತ್ತು 'ನನ್ನ ಜೀವನದ ಉದ್ದೇಶವೇನು?' ಎಂದು ಹುಡುಕುವ ಪ್ರಕ್ರಿಯೆ. ​ಸಹಾಯ: ಆಧ್ಯಾತ್ಮಿಕತೆಯು ಜೀವನಕ್ಕೆ ಒಂದು ಹೊಸ ದೃಷ್ಟಿಕೋನವನ್ನು ನೀಡುತ್ತದೆ. ಇದು ನಮ್ಮನ್ನು ನಾವು ಪ್ರೀತಿಸಲು ಮತ್ತು ಕ್ಷಮಿಸಲು ಕಲಿಸುತ್ತದೆ. ​ಸ್ಥಿತಪ್ರಜ್ಞತೆ: ಏರಿಳಿತಗಳನ್ನು ಸಮಚಿತ್ತದಿಂದ ಸ್ವೀಕರಿಸುವ ಶಕ್ತಿಯನ್ನು ಇದು ನೀಡುತ್ತದೆ. ​3. ಧ್ಯಾನ (Meditation): ಮನಸ್ಸನ್ನು ಶಾಂತಗೊಳಿಸುವ ಕಲೆ ​ಧ್ಯಾನವು ಖಿನ್ನತೆಯನ್ನು ಎದುರಿಸಲು ಇರುವ ಅತ್ಯಂತ ಶಕ್ತಿಶಾಲಿ ನೈಸರ್ಗಿಕ ಸಾಧನ. ಇದು ಮೆದುಳಿನ ಕಾರ್ಯವೈಖರಿಯನ್ನು ಧನಾತ್ಮಕವಾಗಿ ಬದಲಾಯಿಸುತ್ತದೆ. ​ಒತ್ತಡ ಕಡಿಮೆ ಮಾಡುತ್ತದೆ: ಧ್ಯಾನವು ದೇಹದಲ್ಲಿನ 'ಕಾರ್ಟಿಸೋಲ್' (ಒತ್ತಡದ ಹಾರ್ಮೋನ್) ಮಟ್ಟವನ್ನು ತಗ್ಗಿಸುತ್ತದೆ. ​ಏಕಾಗ್ರತೆ: ಅಲೆದಾಡುವ ಮನಸ್ಸನ್ನು ಪ್ರಸ್ತುತ ಕ್ಷಣಕ್ಕೆ ತರುತ್ತದೆ (Mindfulness). ​ಹೇಗೆ ಮಾಡುವುದು?: ದಿನಕ್ಕೆ ಕೇವಲ 10-15 ನಿಮಿಷಗಳ ಕಾಲ ಪ್ರಶಾಂತವಾಗಿ ಕುಳಿತು ನಿಮ್ಮ ಉಸಿರಾಟದ ಮೇಲೆ ಗಮನ ಕೇಂದ್ರೀಕರಿಸಿ. ​ಈ ಮೂರರ ಸಮನ್ವಯ (The Connection) ​ಖಿನ್ನತೆಯಿಂದ ಹೊರಬರಲು ಈ ಕೆಳಗಿನ ಹಂತಗಳು ಸಹಕಾರಿ:
#PSSM World ಖಿನ್ನತೆ (Depression) ಮತ್ತು ಆಧ್ಯಾತ್ಮಿಕತೆ (Spirituality) ನಡುವಿನ ಸಂಬಂಧವು ತುಂಬಾ ಆಳವಾದದ್ದು. ಆಧ್ಯಾತ್ಮಿಕತೆಯು ಖಿನ್ನತೆಗೆ ಕೇವಲ "ಪರಿಹಾರ" ಮಾತ್ರವಲ್ಲ, ಅದು ಜೀವನವನ್ನು ನೋಡುವ ದೃಷ್ಟಿಕೋನವನ್ನೇ ಬದಲಿಸುವ ಶಕ್ತಿಯನ್ನು ಹೊಂದಿದೆ. ​ಕನ್ನಡದಲ್ಲಿ ಇದರ ಬಗ್ಗೆ ಕೆಲವು ಪ್ರಮುಖ ಅಂಶಗಳು ಇಲ್ಲಿವೆ: ​1. ಆಧ್ಯಾತ್ಮಿಕತೆ ಹೇಗೆ ಸಹಾಯ ಮಾಡುತ್ತದೆ? ​ಆಧ್ಯಾತ್ಮಿಕತೆಯು ಮನುಷ್ಯನಿಗೆ ಆಂತರಿಕ ಶಕ್ತಿಯನ್ನು ನೀಡುತ್ತದೆ. ಇದು ಕೇವಲ ಪೂಜೆ ಅಥವಾ ಧಾರ್ಮಿಕ ವಿಧಿವಿಧಾನಗಳಿಗೆ ಸೀಮಿತವಾಗಿಲ್ಲ: ​ಜೀವನದ ಅರ್ಥ: "ನಾನು ಯಾರು? ನನ್ನ ಜೀವನದ ಉದ್ದೇಶವೇನು?" ಎಂಬ ಪ್ರಶ್ನೆಗಳಿಗೆ ಉತ್ತರ ಹುಡುಕುವ ಪ್ರಯತ್ನವು ಶೂನ್ಯತೆಯ ಭಾವನೆಯನ್ನು ಕಡಿಮೆ ಮಾಡುತ್ತದೆ. ​ಸಾಕ್ಷಿ ಭಾವ: ಕಷ್ಟಗಳನ್ನು ನನ್ನದೇ ಕಷ್ಟ ಎಂದು ಭಾವಿಸದೆ, ಅವುಗಳನ್ನು ಒಂದು ಅನುಭವವಾಗಿ ನೋಡುವ 'ಸಾಕ್ಷಿ ಭಾವ'ವನ್ನು ಬೆಳೆಸುತ್ತದೆ. ​ನಂಬಿಕೆ: ನಮ್ಮನ್ನು ಮೀರಿದ ಒಂದು ಶಕ್ತಿ ಇದೆ ಎಂಬ ನಂಬಿಕೆಯು ಒಬ್ಬಂಟಿತನದ ಭಾವನೆಯನ್ನು ದೂರ ಮಾಡುತ್ತದೆ. ​2. ಪ್ರಮುಖ ಸಾಧನಗಳು ​ಮನಸ್ಸಿನ ಶಾಂತಿಗಾಗಿ ಕೆಳಗಿನವುಗಳನ್ನು ರೂಢಿಸಿಕೊಳ್ಳಬಹುದು: ​ಧ್ಯಾನ (Meditation): ದಿನಕ್ಕೆ 10-15 ನಿಮಿಷಗಳ ಧ್ಯಾನವು ಮೆದುಳಿನ ಒತ್ತಡವನ್ನು ಕಡಿಮೆ ಮಾಡಿ, ಪ್ರಸ್ತುತ ಕ್ಷಣದಲ್ಲಿ ಬದುಕಲು ಕಲಿಸುತ್ತದೆ. ​ಸೇವಾ ಮನೋಭಾವ: ಇತರರಿಗೆ ಸಹಾಯ ಮಾಡುವುದರಿಂದ ನಮ್ಮಲ್ಲಿ ಸಕಾರಾತ್ಮಕ ಹಾರ್ಮೋನ್‌ಗಳು ಬಿಡುಗಡೆಯಾಗಿ, ಆತ್ಮವಿಶ್ವಾಸ ಹೆಚ್ಚುತ್ತದೆ. ​ಸತ್ಸಂಗ: ಸಕಾರಾತ್ಮಕ ವಿಚಾರಗಳನ್ನು ಹಂಚಿಕೊಳ್ಳುವ ಜನರ ಒಡನಾಟವು ಮನಸ್ಸಿನ ಭಾರವನ್ನು ಇಳಿಸುತ್ತದೆ. ​3. ವಿಜ್ಞಾನ ಮತ್ತು ಆಧ್ಯಾತ್ಮಿಕತೆಯ ಸಮನ್ವಯ ​ಒಂದು ಮುಖ್ಯವಾದ ವಿಷಯವೆಂದರೆ, ಖಿನ್ನತೆಯು ಒಂದು ವೈದ್ಯಕೀಯ ಸ್ಥಿತಿ. ​"ಆಧ್ಯಾತ್ಮಿಕತೆಯು ಮನಸ್ಸಿಗೆ ಶಕ್ತಿ ನೀಡಿದರೆ, ವೈದ್ಯಕೀಯ ಚಿಕಿತ್ಸೆಯು ಮೆದುಳಿನ ರಾಸಾಯನಿಕ ಸಮತೋಲನವನ್ನು ಸರಿಪಡಿಸುತ್ತದೆ." ​ಆದ್ದರಿಂದ, ತೀವ್ರವಾದ ಖಿನ್ನತೆ ಇದ್ದಾಗ ಆಧ್ಯಾತ್ಮಿಕ ಮಾರ್ಗದ ಜೊತೆಗೆ ಮನೋವೈದ್ಯರ (Psychiatrist) ಸಲಹೆ ಪಡೆಯುವುದು ಬಹಳ ಮುಖ್ಯ. ಇದನ್ನು ದೌರ್ಬಲ್ಯ ಎಂದು ಭಾವಿಸಬೇಡಿ. ​ನೀವು ಅಥವಾ ನಿಮಗೆ ತಿಳಿದವರು ಈ ಕೆಳಗಿನವುಗಳನ್ನು ಅನುಭವಿಸುತ್ತಿದ್ದೀರಾ? ​ಯಾವುದರಲ್ಲೂ ಆಸಕ್ತಿ ಇಲ್ಲದಿರುವುದು. ​ಸದಾ ಕಾಲ ಸುಸ್ತು ಮತ್ತು ಅಳು ಬರುವುದು. ​ನಿದ್ರೆಯ ಸಮಸ್ಯೆ. ​ನಾನು ನಿಮಗಾಗಿ ಏನು ಮಾಡಬಲ್ಲೆ? ನಿಮ್ಮ ಮನಸ್ಸನ್ನು ಪ್ರಶಾಂತಗೊಳಿಸಲು ಸಹಾಯ ಮಾಡುವ ಕೆಲವು ಸರಳ ಧ್ಯಾನ ಕ್ರಮಗಳ (Meditation techniques) ಬಗ್ಗೆ ನಾನು ತಿಳಿಸಿಕೊಡಲೇ? ಅಥವಾ ಸಕಾರಾತ್ಮಕ ಚಿಂತನೆಗೆ ಸಂಬಂಧಿಸಿದ ಪುಸ್ತಕಗಳ ಬಗ್ಗೆ ಮಾಹಿತಿ ನೀಡಲೇ?
#PSSM World ಜೀವನದಲ್ಲಿ ಅತೀವವಾದ ಬೇಸರ ಅಥವಾ ಖಿನ್ನತೆ (Depression) ಎದುರಾದಾಗ ಅದರಿಂದ ಹೊರಬಂದು ಜೀವನವನ್ನು ಬದಲಿಸಿಕೊಳ್ಳುವುದು ಖಂಡಿತ ಸಾಧ್ಯ. ಇದು ಒಂದು ದಿನದಲ್ಲಿ ಆಗುವ ಬದಲಾವಣೆಯಲ್ಲ, ಆದರೆ ಸಣ್ಣ ಸಣ್ಣ ಹೆಜ್ಜೆಗಳ ಮೂಲಕ ದೊಡ್ಡ ಬದಲಾವಣೆ ತರಬಹುದು. ​ನಿಮ್ಮ ಜೀವನವನ್ನು ಸಕಾರಾತ್ಮಕವಾಗಿ ಬದಲಿಸಿಕೊಳ್ಳಲು ಇಲ್ಲಿವೆ ಕೆಲವು ಪ್ರಮುಖ ಸಲಹೆಗಳು: ​1. ದಿನಚರಿಯನ್ನು ಬದಲಿಸಿ (Change Your Routine) ​ಬೇಗ ಏಳುವುದು: ಬೆಳಿಗ್ಗೆ ಬೇಗ ಎದ್ದು ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವುದರಿಂದ ಮನಸ್ಸಿಗೆ ಚೈತನ್ಯ ಸಿಗುತ್ತದೆ. ​ವ್ಯಾಯಾಮ: ದಿನಕ್ಕೆ ಕನಿಷ್ಠ 20 ನಿಮಿಷಗಳ ನಡಿಗೆ ಅಥವಾ ಯೋಗ ಮಾಡಿ. ಇದು ಮೆದುಳಿನಲ್ಲಿ 'ಎಂಡಾರ್ಫಿನ್' ಎಂಬ ಸಂತೋಷದ ಹಾರ್ಮೋನ್ ಬಿಡುಗಡೆ ಮಾಡುತ್ತದೆ. ​2. ಆಹಾರ ಮತ್ತು ನಿದ್ರೆ (Diet and Sleep) ​ಸರಿಯಾದ ನಿದ್ರೆ: ರಾತ್ರಿ 7 ರಿಂದ 8 ಗಂಟೆಗಳ ಕಾಲ ಗಾಢವಾದ ನಿದ್ರೆ ಮಾಡಿ. ನಿದ್ರೆಯ ಕೊರತೆ ಮನಸ್ಸಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ​ಪೌಷ್ಟಿಕ ಆಹಾರ: ಜಂಕ್ ಫುಡ್ ಬಿಟ್ಟು ಹಣ್ಣು, ತರಕಾರಿ ಮತ್ತು ನೀರನ್ನು ಹೆಚ್ಚಾಗಿ ಸೇವಿಸಿ. ​3. ಸಕಾರಾತ್ಮಕ ಆಲೋಚನೆ (Positive Thinking) ​ಹವ್ಯಾಸಗಳನ್ನು ಬೆಳೆಸಿಕೊಳ್ಳಿ: ನಿಮಗೆ ಇಷ್ಟವಾದ ಕೆಲಸಗಳನ್ನು ಮಾಡಿ (ಉದಾಹರಣೆಗೆ: ಹಾಡು ಕೇಳುವುದು, ಪುಸ್ತಕ ಓದುವುದು, ಗಿಡ ನೆಡುವುದು). ​ಸಾಮಾಜಿಕ ಸಂಪರ್ಕ: ನಿಮ್ಮನ್ನು ಪ್ರೀತಿಸುವ ಮತ್ತು ಪ್ರೋತ್ಸಾಹಿಸುವ ಸ್ನೇಹಿತರು ಅಥವಾ ಕುಟುಂಬದವರೊಂದಿಗೆ ಸಮಯ ಕಳೆಯಿರಿ. ಏಕಾಂಗಿಯಾಗಿ ಇರುವುದನ್ನು ಕಡಿಮೆ ಮಾಡಿ. ​4. ಗುರಿಗಳನ್ನು ಹೊಂದಿಸಿ (Set Small Goals) ​ಒಂದೇ ಬಾರಿಗೆ ದೊಡ್ಡ ಬದಲಾವಣೆ ಬಯಸಬೇಡಿ. ಇಂದಿನ ದಿನದಲ್ಲಿ ಮಾಡಬೇಕಾದ ಸಣ್ಣ ಕೆಲಸಗಳ ಪಟ್ಟಿ (To-do list) ಮಾಡಿಕೊಳ್ಳಿ. ಆ ಕೆಲಸ ಮುಗಿದಾಗ ನಿಮಗೆ ಆತ್ಮವಿಶ್ವಾಸ ಹೆಚ್ಚುತ್ತದೆ. ​5. ತಜ್ಞರ ಸಹಾಯ ಪಡೆಯಿರಿ (Professional Help) ​ನೆನಪಿಡಿ, ಖಿನ್ನತೆ ಎಂಬುದು ಕೇವಲ ಮನಸ್ಸಿನ ಸ್ಥಿತಿಯಲ್ಲ, ಅದು ಒಂದು ಆರೋಗ್ಯ ಸಮಸ್ಯೆ. ನಿಮಗೆ ತುಂಬಾ ಕಷ್ಟವಾಗುತ್ತಿದ್ದರೆ ಒಬ್ಬ ಉತ್ತಮ ಪ್ಸೈಕಾಲಜಿಸ್ಟ್ (Psychologist) ಅಥವಾ ಆಪ್ತ ಸಮಾಲೋಚಕರನ್ನು ಭೇಟಿ ಮಾಡಲು ಹಿಂಜರಿಯಬೇಡಿ. ಮಾತನಾಡLinkುವುದು ಮನಸ್ಸಿನ ಭಾರವನ್ನು ಕಡಿಮೆ ಮಾಡುತ್ತದೆ. ​ಒಂದು ಸಣ್ಣ ಕಿವಿಮಾತು: "ಸಮಯ ಎಲ್ಲವನ್ನೂ ಗುಣಪಡಿಸುತ್ತದೆ." ನಿಮ್ಮ ಮೇಲೆ ನಿಮಗೆ ನಂಬಿಕೆ ಇರಲಿ. ನೀವು ಈ ಹಂತದಿಂದ ಖಂಡಿತ ಹೊರಬರುತ್ತೀರಿ. ​ನಾನು ನಿಮಗೆ ಯಾವುದಾದರೂ ನಿರ್ದಿಷ್ಟ ವಿಷಯದ ಬಗ್ಗೆ (ಉದಾಹರಣೆಗೆ: ಒತ್ತಡ ನಿರ್ವಹಣೆ ಅಥವಾ ಉತ್ತಮ ಹವ್ಯಾಸಗಳು) ಹೆಚ್ಚಿನ ಮಾಹಿತಿ ನೀಡಬೇಕೆ?
#PSSM World ಸಂದರ್ಭಗಳು ನಮ್ಮ ಜೀವನದಲ್ಲಿ ಮಿಂಚಿನಂತೆ ಬಂದು ಹೋಗುತ್ತವೆ. ಆದರೆ ಆ ಮಿಂಚಿನ ಬೆಳಕು ಮನಸ್ಸಿನ ಕತ್ತಲೆಯನ್ನು ದೂರ ಮಾಡುತ್ತದೆ. ಅಂತಹ ಒಂದು ಪ್ರಸಂಗ ನನ್ನ ಮನದೊಳಗೆ ಹೊಸ ಭಾವನೆಗೆ ದಾರಿ ಮಾಡಿಕೊಟ್ಟಿತು. ಅದು ಮಳೆಗಾಲದ ಸಂಜೆ. ಆಕಾಶ ತುಂಬ ಮೋಡ, ಮನಸ್ಸು ಕೂಡ ಹಾಗೆಯೇ ಭಾರವಾಗಿತ್ತು. ಕೆಲಸಗಳ ಒತ್ತಡ, ನಿರೀಕ್ಷೆಗಳ ಭಾರ, ಜೀವನದ ಅನಿಶ್ಚಿತತೆ – ಎಲ್ಲವೂ ಸೇರಿ ಮನಸ್ಸನ್ನು ನಿಶ್ಚಷ್ಟಗೊಳಿಸಿದ್ದವು. ಬಸ್‌ ನಿಲ್ದಾಣದಲ್ಲಿ ನಿಂತಿದ್ದೆ. ಮಳೆ ಸುರಿಯುತ್ತಿತ್ತು. ಜನರು ತಮ್ಮ ತಮ್ಮ ಲೋಕದಲ್ಲಿ ತೊಡಗಿಕೊಂಡಿದ್ದರು. ಅಷ್ಟರಲ್ಲಿ ಒಂದು ದೃಶ್ಯ ನನ್ನ ಗಮನ ಸೆಳೆಯಿತು. ಒಬ್ಬ ಯುವತಿ ತನ್ನ ಮಡಿಲಲ್ಲಿ ಮಗು ಹಿಡಿದು ನಿಂತಿದ್ದಳು. ಮಳೆಯ ಚಿಮುಕಿನಿಂದ ಮಗುವನ್ನು ರಕ್ಷಿಸಲು ತನ್ನ ಒರೆಯನ್ನು ಮುಚ್ಚಿಕೊಂಡಿದ್ದಳು. ಆಕೆಯ ಬಳಿ ಛತ್ರಿ ಇರಲಿಲ್ಲ. ಅವಳ ಪಕ್ಕದಲ್ಲಿ ನಿಂತಿದ್ದ ಒಬ್ಬ ಅಪರಿಚಿತ ಮಹಿಳೆ ತನ್ನ ಛತ್ರಿಯನ್ನು ನಿಧಾನವಾಗಿ ಆಕೆಯ ಮೇಲೆ ಹಿಡಿದರು. ಮಾತಿಲ್ಲ, ಪರಿಚಯ ಇಲ್ಲ, ಯಾವುದೇ ದೊಡ್ಡ ನಡೆ ಇಲ್ಲ. ಕೇವಲ ಒಂದು ಹಂಚಿಕೆ. ಆ ಕ್ಷಣ ಅಸಾಧಾರಣವಾಗಿತ್ತು. ಆ ಮಹಿಳೆ ತನ್ನನ್ನು ತಾನು ಒದ್ದೆಯಾಗಲು ಬಿಡುತ್ತಾ - ಇನ್ನೊಬ್ಬರನ್ನೂ, ವಿಶೇಷವಾಗಿ ಒಂದು ಮಗುವನ್ನೂ - ರಕ್ಷಿಸುತ್ತಿದ್ದರು. ಅದು ಕೇವಲ ಛತ್ರಿಯ ಹಂಚಿಕೆಯಲ್ಲ... ಅದು ಮಾನವೀಯತೆಯ ನೆರಳು.ದೃಶ್ಯ ನನ್ನ ಮನಸ್ಸಿನಲ್ಲಿ ಒಂದು ಪ್ರಶ್ನೆ ಹುಟ್ಟಿಸಿತು: ನಾವು ಎಷ್ಟು ಬಾರಿ ನಮ್ಮ ಸುಖವನ್ನು ಬಿಟ್ಟು ಇನ್ನೊಬ್ಬರ ನೆರಳಾಗಿದ್ದೇವೆ? ಜೀವನದಲ್ಲಿ ನಾವು ಎಲ್ಲರೂ ಏನನ್ನೋ ಹುಡುಕುತ್ತೇವೆ - ಸಂತೋಷ, ಭದ್ರತೆ, ಪ್ರೀತಿ, ಒಳಿತು. ಆದರೆ ಕೆಲವೊಮ್ಮೆ ನಾವು ಹುಡುಕುತ್ತಿರುವದೇ, ಇನ್ನೊಬ್ಬರಿಗೆ ನೀಡುವ ಸಾಮರ್ಥ್ಯ ನಮ್ಮಲ್ಲೇ ಇರುತ್ತದೆ. ಆ ಸಂಜೆ ನನಗೆ ಹೊಸ ಭಾವನೆ ಕಲಿಸಿತು, "ಸಹಾನುಭೂತಿ ಎಂದರೆ ದೊಡ್ಡ ತ್ಯಾಗವಲ್ಲ, ಸಣ್ಣ ಹಂಚಿಕೆ." ಆ ದಿನದ ನಂತರ ನಾನು ಜೀವನವನ್ನು ಬೇರೆ ರೀತಿಯಲ್ಲಿ ನೋಡಲು ಶುರು ಮಾಡಿದೆ. ಒಂದು ಸಣ್ಣ ನೆರಳು, ಒಂದು ಸಣ್ಣ ಕಾಳಜಿ, ಒಂದು ಸಣ್ಣ ದಯೆ - ಇವುಗಳು ಯಾರಿಗಾದರೂ ಒಂದು ದೊಡ್ಡ ಆಶ್ರಯವಾಗಬಹುದು. ಆ ಪ್ರಸಂಗ ನನ್ನೊಳಗೆ ಹುಟ್ಟಿಸಿದ ನವ ಭಾವನೆ, “ಮಾನವೀಯತೆ ಎಂದರೆ ದೊಡ್ಡ ಕಾರ್ಯಗಳಲ್ಲಿ ಅಲ್ಲ, ಸಣ್ಣ ಕ್ಷಣಗಳಲ್ಲಿ ಬೆಳೆಯುವ ಮಮತೆ." ಮಳೆ ನಿಂತಿತು. ಜನರು ತಮ್ಮ ದಾರಿಯಲ್ಲಿ ಹೋದರು. ಆದರೆ ನನ್ನ ಮನಸ್ಸಿನಲ್ಲಿ ಆ ದೃಶ್ಯ ಇನ್ನೂ ಮಳೆಯಂತೆ ತಾಜಾ. ಒಂದು ಕ್ಷಣ – ಆದರೆ ಒಂದು ನವ ಭಾವನೆಗೆ ದಾರಿ ಮಾಡಿದ ಕ್ಷಣ.🙏🙏🙏
ಎಲ್ಲರೊಂದಿಗೂ ಹಂಚಿಕೊಳ್ಳ ಬಯಸುವ ಆ ನಿಮ್ಮ ಮನದಾಳದ ಮಾತು ಯಾವುದು? ಮನದಾಳದಲ್ಲೊಂದು ಮಾತು.. ಮನಸ್ಸಿನ ಆಳದಲ್ಲಿ ಕೂತಿರುವ ಎಷ್ಟೋ ವಿ #PSSM World ಷಯಗಳನ್ನು ಮೇಲಕ್ಕೆತ್ತುವುದು ಸ್ವಲ್ಪ ಕಷ್ಟಾನೆ. ಕೆಲವೊಂದು ವಿಷಯಗಳು ಯಾರಿಗೂ ಹೇಳಲಾರದೆ ಮರೆಯಾಗುತ್ತವೆ. ಹೀಗೆ ಹೇಳ್ಬೇಕಂದ್ರೆ ನನ್ನನ್ನು ಅತಿಯಾಗಿ ಕಾಡುವುದು ನಾನು ಒಂಟಿ ಎಂಬ ಭಾವನೆ. ನನಗೂ ಯಾರಾದರೂ ಅಕ್ಕ-ತಂಗಿ ಅಣ್ಣ-ತಮ್ಮ ಇರಬೇಕೆಂದು ಎಷ್ಟೋ ಸಾರಿ ಅನ್ನಿಸಿದ್ದುಂಟು. ಬಾಲ್ಯದಲ್ಲಿ ಜೊತೆಯಾಗಿ ಆಟವಾಡಲು, ಅಮ್ಮನ ಪೆಟ್ಟನ್ನು ತಪ್ಪಿಸಲು, ಜೊತೆಯಾಗಿ ಶಾಲೆಗೆ ಹೋಗಲು, ಜಗಳವಾಡಲು, ಹೊಡೆದಾಡಲು, ಹದಿಹರೆಯದಲ್ಲಿ ಮನೆಯವರಲ್ಲಿ ಹಂಚಿಕೊಳ್ಳಲಾರದ ಎಷ್ಟೋ ವಿಷಯಗಳನ್ನು ಹೇಳಿಕೊಳ್ಳಲು, ಸರಿಯಾದ ನಿರ್ಧಾರವನ್ನು ತೆಗೆದುಕೊಳ್ಳಲು, ತಪ್ಪನ್ನು ತಿದ್ದಲು,ಕಷ್ಟದ ಸಂದರ್ಭದಲ್ಲಿ ನಾನಿದ್ದೇನೆ ಎಂಬ ಭರವಸೆ ಮೂಡಿಸಲು ಯಾರಾದರೂ ಇರಬೇಕೆಂಬ ಭಾವನೆ . ವಡಹುಟ್ಟಿದವರು ಹೊಂದಿದವರು ನಿಜವಾಗಲೂ ಅದೃಷ್ಟವಂತರು. ಈ ಸಮಾಜ, ಸಮಾಜದ ಜನರು ಗಂಡನ್ನು ನಂಬುವಷ್ಟು ಹೆಣ್ಣನ್ನು ಯಾಕೆ ನಂಬುವುದಿಲ್ಲ ? ಮನೆಯವರು ಸ್ವಾತಂತ್ರ್ಯವೇನೋ ಕೊಡುತ್ತಾರೆ ಆದರೆ ಸಮಾಜದ ಬಾಯಿಗೆ ತುತ್ತಾಗುವುದು ಮಾತ್ರ ತಪ್ಪುವುದಿಲ್ಲ. ಮನೆಗೆ ತಡವಾಗಿ ಬಂದರೆ ಮನೆಯವರಿಗೆ ಇಲ್ಲದ ಚಿಂತೆ ಇವರಿಗೆ.‌ ಒಂದು ಹೆಣ್ಣು ಗಂಡಿನೊಂದಿಗೆ ಮಾತನಾಡುವುದಂತೂ ಶಿಕ್ಷಾರ್ಹ ಅಪರಾಧ ಎಂಬಂತೆ. ತಂದೆತಾಯಿ ತಮ್ಮ ಮಕ್ಕಳನ್ನುನಂಬಿದರೂ ಈ ನೆರೆಹೊರೆಯವರು ನಂಬಲಾರರು. ಅಷ್ಟೇ ಅಲ್ಲದೆ ಅವರ ಪಂಚಾಯಿತಿಗೆ ಮಾತಿಗೆ ಗುರಿಯಾಗುವುದು ತಪ್ಪುವುದಿಲ್ಲ :)
#PSSM World ನಿಮ್ಮ ಜೀವನದಲ್ಲಿ ನೀವು ಎದುರಿಸಿದ ವೈಪಲ್ಯತೆ ಬಗ್ಗೆ ವಿವರಿಸಿ ಮತ್ತು ನೀವು ಅದನ್ನು ನಿಭಾಯಿಸಿದ್ದೀರಿ? "ಸೋಲೇ ಗೆಲುವಿನ ಸೋಪಾನ"ಈ ಮಾತನ್ನ ನಾವು ಚಿಕ್ಕವರಿದ್ದಾಗಲಿಂದ ಕೇಳ್ಕೊಂಡು ಬಂದ್ದಿದಿವಿ, ಹೌದು ಸೋತ್ರೆನೆ ಗೆಲ್ಲೊ ಛಲ ಬರೋದು ಈ ಪ್ರಶ್ನೆ ನೋಡಿದ ತಕ್ಷಣ ನಂಗೆ ನನ್ನ ಹೈಸ್ಕೂಲಲ್ಲಿ ನಡೆದ ಘಟನೆ ನೆನಪು ಬಂತು.. ನಾನು ಆ ಸನ್ನಿವೇಶ ಬರೋ ತನಕ ನನ್ನಿಂದ ಇದು ಸಾಧ್ಯ ಅಂತ ಅಂದುಕೊಂಡಿರ್ಲಿಲ್ಲ ಹಾಗಂತ ನಾನೇನೋ ದೊಡ್ ಸಾಧನೆ ಮಾಡ್ದೆ ಅಂತ ಅಲ್ಲ ಆದ್ರೆ ನನ್ನೊಳಗಿನ ಆ ಛಲ ಅವತ್ತು ನನಗೆ ಅರಿವಾಯ್ತು.. ಆಗ ನಾನು ೮ನೆ ತರಗತಿ ಓದಿನಲ್ಲಿ ಅಷ್ಟು ಆಸಕ್ತಿ ಇರಲ್ಲಿಲ್ಲ ಅನ್ನೋದ್ರಕಿಂತ copy ಹೊಡಿಯೋ ಸರಳ ದಾರಿ ರೂಡಿಯಲ್ಲಿತ್ತು,😜, ಒಂದಿನ ಕಿರು ಪರೀಕ್ಷೆ ಇತ್ತು ನನ್ನ ಗೆಳತಿ ಹೇಳಿಕೊಡ್ತಾಳೆ ಅನ್ನೋ ಭರವಸೆಯಲ್ಲಿ ಏನನ್ನು ಓದದೇ ಹೋಗಿದ್ದೆ ಅವಳು ಕೂಡ ನನ್ನ ಹಾಗೆ ಇನ್ನೊಬ್ಬರ ಭರವಸೆಯಲ್ಲಿ ಓದದೇ ಬಂದಿದ್ದಳು ಅವಳಿಗೆ ಇನ್ನೊಬ್ಬ ಗೆಳತಿ ಉತ್ತರ ಹೇಳಿಕೊಡುತ್ತಿದ್ದಳು ಆದರೆ ಅವಳಿಗೆ ಒಂದು ಷರತ್ತು ಹಾಕಿದಳು"ನಿನಗೆ ಉತ್ತರ ತೋರಿಸ್ತೀನಿ ಆದ್ರೆ ಅವಳಿಗೆ(ನನಗೆ)ಉತ್ತರ ಹೇಳಿ ಕೊಟ್ಟರೆ ತೋರಿಸುವುದಿಲ್ಲ ಅಂತ" ಅವಳದು ಅಸಹಾಯಕ ಪರಿಸ್ಥಿತಿ. ಅವತ್ತು ನಾನು ಅವಳಿಗೆ ಹೇಳಿದೆ ಪರವಾಗಿಲ್ಲ ನೀನು ಅವಳ ಹತ್ತಿರ ಉತ್ತರ ಹೇಳಿಸ್ಕೊ ನಾನು ಈ ಪರೀಕ್ಷೆಯಲ್ಲಿ ಫೇಲ್ ಆದರೂ ಪರವಾಗಿಲ್ಲ ನಾಳಿನ ಪರೀಕ್ಷೆಗೆ ಚೆನ್ನಾಗಿ ಸಿದ್ದಲಾಗಿ ಬರ್ತೇನೆ ಇನ್ಮುಂದೆ ಸೋಂಬೇರಿತನದಿಂದ ಇನ್ನೊಬ್ಬರ ಭರವಸೆಯಲ್ಲಿ ಇನ್ಬರೋದಿಲ್ಲ ಅಂತ…ನಿಜ ಅವತ್ತು ನಾನು ಆ ಕಿರು ಪರೀಕ್ಷೆಯಲ್ಲಿ ಸೋತೆ ಆದರೆ ಅವತ್ತು ಮಾಡಿದ ನಿರ್ಧಾರದಿಂದ ನನಗೆ ನನ್ನೊಳಗಿನ ಶಕ್ತಿ ಅರಿವಿಗೆ ಬಂತು ಅವತ್ತಿನಿಂದ ನನ್ನ ಪರಿಶ್ರಮದ ಫಲವಾಗಿ ಕ್ಲಾಸಿಗೆ ೨ರಾಂಕ್ ಬಂದೆ.. ಇದು ನನ್ನ ಜೀವನದ ವೈಫಲ್ಯವನ್ನು ಎದುರಿಸಿದೆ ಮೊದಲ ಸನ್ನಿವೇಶ..