Vikas Chandra
ShareChat
click to see wallet page
@347372301
347372301
Vikas Chandra
@347372301
Changed the universe in meditation spirituality
#PSSM World ಜೀವನ::: ಮನುಷ್ಯನು ತಾನು ಬಾಲಕನಾಗಿದ್ದಾಗ ಈ ಜೀವನಕ್ಕಿಂತ ಮಿಗಿಲಾದದ್ದು ಇನ್ನಾವುದೂ ಇಲ್ಲ ಅಂತ ಅನ್ನೋ ಅರಿವಿರುವುದಿಲ್ಲ.ತನಗಿಂತ ವಯಸ್ಸಿನಲ್ಲಿ ಸ್ವಲ್ಪ ದೊಡ್ಡವರನ್ನು ನೋಡಿ ಅವರಂತೆ ಯಾವಾಗ ಆಗುವೇನೋ ಅಂತ ಅಂದುಕೊಳ್ಳುತ್ತಾನೆ. ಮನುಷ್ಯನ ಸ್ವಭಾವವೇ ಹೀಗೆ.ಯಾವುದು ತನ್ನಲ್ಲಿರುವುದೋ ಅದನ್ನು ಬಿಟ್ಟು ತನ್ನಲ್ಲಿ ಇಲ್ಲದಿರುವುದರ ಬಗ್ಗೆಯೇ ಚಿಂತೆ. ಮುಂದೆ ಓದು ಮುಗಿದು ನೌಕರಿ.ನಂತರ ಮದುವೆ, ಸಂಸಾರ ಮಕ್ಕಳು,ಇವುಗಳ ಸುಳಿಯಲ್ಲಿ ತನ್ನ ತಂದೆತಾಯಿ,ಅಕ್ಕತಂಗಿ, ಅಣ್ಣತಮ್ಮ ಸ್ನೇಹಿತರು ಎಲ್ಲರಿಂದಲೂ ಸ್ವಲ್ಪ ದೂರವಾಗತ್ತಾನೆ. ಸ್ವಲ್ಪ ಶ್ರೀಮಂತಿಕೆ ಬಂದ್ರೂ ಸಾಕು ಹಿಂದಿನ ಬಡತನವೆಲ್ಲವೂ ಮರೆತುಹೋಗಿ,ತಾನು ಹುಟ್ಟಿದಾಗಿಂದಲೂ ಹೀಗೆ ಶ್ರೀಮಂತನಾಗಿಯೇ ಇದ್ದೆ ಅನ್ನೋ ರೀತಿಯಲ್ಲಿ ವರ್ತಿಸುತ್ತಾನೆ. ವಯಸ್ಸಾಗುತ್ತಾ ಬಂದು ತನ್ನ ಮಕ್ಕಳಿಗೆಲ್ಲಾ ನೌಕರಿ ಮದುವೆ ಮುಂಜಿ ಮುಗಿದು ಅವರು ಕೂಡ ಇವನಂತೇ ಅವರವರ ಪಾಡಿಗೆ ಅವರು ಇರತೊಡ ಗಿದಾಗ ಇವನಿಗೆ ತನ್ನ ಹಿಂದಿನ ನೆನಪುಗಳು, ಸಂಭಂದಗಳು ಎಲ್ಲಾ ಪದೇಪದೇ ನೆನೆಪಿಗೆ ಬರುತ್ತವೆ. ಅಯ್ಯೋ ನನ್ನ ಬಾಲ್ಯದಲ್ಲಿ ಜೀವನ ಎಷ್ಟು ಸುಂದರವಾಗಿತ್ತು.ಅನ್ಯಾಯವಾಗಿ ಎಲ್ಲವನ್ನೂ ಕಳೆದುಕೊಂಡೆ.ಆಗ ನಾನು ಹಾಗಿರಬೇಕಿತ್ತು, ಹೀಗಿರಬೇಕಿತ್ತು,.ನಾನು ಸರಿಯಾಗಿ ಯೋಚಿಸದೆ ಎಲ್ಲವನ್ನು ಹಾಳು ಮಾಡಿಕೊಂಡುಬಿಟ್ಟೆ ಎಂದು ಕೊರಗಲು ಶುರುಮಾಡುತ್ತಾನೆ.ಎಲ್ಲರ ಜೀವನವೂ ಇಷ್ಟೇ. ಬಾಲ್ಯದಿಂದ ವೃದ್ಧಾಪ್ಯದವರೆಗೂ ಎಲ್ಲಾ ರೀತಿಯ ಜೀವನವನ್ನೂ ನಗುನಗುತ್ತಾ ಸ್ವಾಗತಿಸುತ್ತಾ ಆನಂದದಿಂದ ಅನುಭವಿಸುವವರು ತುಂಬಾ ಕಡಿಮೆ ಜನ.ಕಷ್ಟ ಕೂಡ.ಅರ್ಥ ಆಗೋ ಹೊತ್ತಿಗೆ ಸಮಯ ಜಾರಿರುತ್ತದೆ. ಜೀವನದಲ್ಲಿ ಬಾಲ್ಯಾವಸ್ಥೆ, ಯೌವ್ವನಾವಸ್ಥೆ, ಗೃಹಸ್ತಾವಸ್ಥೆ, ವೃದ್ಧಾಪ್ಯ ಹೀಗೆ ನಾಲ್ಕನ್ನೂ ಪ್ರತಿಯೊಂದನ್ನೂ ಅದು ಹೇಗಿದೆಯೋ ಹಾಗೆಯೇ ಒಪ್ಪಿಕೊಂಡು ಅದರೊಂದಿಗೆ ಹೊಂದಿಕೊಂಡಿರೋರು ಸದಾ ಸಂತೋಷದಿಂದ ಖುಷಿಯಾಗಿ ಜೀವನ ನಡೆಸುವರು.ಅವರಿಗೆ ಜೀವನದಲ್ಲಿ ಯಾವ ವ್ಯತ್ಯಾಸವೂ ಕಾಣುವುದಿಲ್ಲ.ಆದರೆ ಹೀಗೆ ಇರುವವರು ಕಡಿಮೆ.
#PSSM World ಜೀವನ::: ಮನುಷ್ಯನು ತಾನು ಬಾಲಕನಾಗಿದ್ದಾಗ ಈ ಜೀವನಕ್ಕಿಂತ ಮಿಗಿಲಾದದ್ದು ಇನ್ನಾವುದೂ ಇಲ್ಲ ಅಂತ ಅನ್ನೋ ಅರಿವಿರುವುದಿಲ್ಲ.ತನಗಿಂತ ವಯಸ್ಸಿನಲ್ಲಿ ಸ್ವಲ್ಪ ದೊಡ್ಡವರನ್ನು ನೋಡಿ ಅವರಂತೆ ಯಾವಾಗ ಆಗುವೇನೋ ಅಂತ ಅಂದುಕೊಳ್ಳುತ್ತಾನೆ. ಮನುಷ್ಯನ ಸ್ವಭಾವವೇ ಹೀಗೆ.ಯಾವುದು ತನ್ನಲ್ಲಿರುವುದೋ ಅದನ್ನು ಬಿಟ್ಟು ತನ್ನಲ್ಲಿ ಇಲ್ಲದಿರುವುದರ ಬಗ್ಗೆಯೇ ಚಿಂತೆ. ಮುಂದೆ ಓದು ಮುಗಿದು ನೌಕರಿ.ನಂತರ ಮದುವೆ, ಸಂಸಾರ ಮಕ್ಕಳು,ಇವುಗಳ ಸುಳಿಯಲ್ಲಿ ತನ್ನ ತಂದೆತಾಯಿ,ಅಕ್ಕತಂಗಿ, ಅಣ್ಣತಮ್ಮ ಸ್ನೇಹಿತರು ಎಲ್ಲರಿಂದಲೂ ಸ್ವಲ್ಪ ದೂರವಾಗತ್ತಾನೆ. ಸ್ವಲ್ಪ ಶ್ರೀಮಂತಿಕೆ ಬಂದ್ರೂ ಸಾಕು ಹಿಂದಿನ ಬಡತನವೆಲ್ಲವೂ ಮರೆತುಹೋಗಿ,ತಾನು ಹುಟ್ಟಿದಾಗಿಂದಲೂ ಹೀಗೆ ಶ್ರೀಮಂತನಾಗಿಯೇ ಇದ್ದೆ ಅನ್ನೋ ರೀತಿಯಲ್ಲಿ ವರ್ತಿಸುತ್ತಾನೆ. ವಯಸ್ಸಾಗುತ್ತಾ ಬಂದು ತನ್ನ ಮಕ್ಕಳಿಗೆಲ್ಲಾ ನೌಕರಿ ಮದುವೆ ಮುಂಜಿ ಮುಗಿದು ಅವರು ಕೂಡ ಇವನಂತೇ ಅವರವರ ಪಾಡಿಗೆ ಅವರು ಇರತೊಡ ಗಿದಾಗ ಇವನಿಗೆ ತನ್ನ ಹಿಂದಿನ ನೆನಪುಗಳು, ಸಂಭಂದಗಳು ಎಲ್ಲಾ ಪದೇಪದೇ ನೆನೆಪಿಗೆ ಬರುತ್ತವೆ. ಅಯ್ಯೋ ನನ್ನ ಬಾಲ್ಯದಲ್ಲಿ ಜೀವನ ಎಷ್ಟು ಸುಂದರವಾಗಿತ್ತು.ಅನ್ಯಾಯವಾಗಿ ಎಲ್ಲವನ್ನೂ ಕಳೆದುಕೊಂಡೆ.ಆಗ ನಾನು ಹಾಗಿರಬೇಕಿತ್ತು, ಹೀಗಿರಬೇಕಿತ್ತು,.ನಾನು ಸರಿಯಾಗಿ ಯೋಚಿಸದೆ ಎಲ್ಲವನ್ನು ಹಾಳು ಮಾಡಿಕೊಂಡುಬಿಟ್ಟೆ ಎಂದು ಕೊರಗಲು ಶುರುಮಾಡುತ್ತಾನೆ.ಎಲ್ಲರ ಜೀವನವೂ ಇಷ್ಟೇ. ಬಾಲ್ಯದಿಂದ ವೃದ್ಧಾಪ್ಯದವರೆಗೂ ಎಲ್ಲಾ ರೀತಿಯ ಜೀವನವನ್ನೂ ನಗುನಗುತ್ತಾ ಸ್ವಾಗತಿಸುತ್ತಾ ಆನಂದದಿಂದ ಅನುಭವಿಸುವವರು ತುಂಬಾ ಕಡಿಮೆ ಜನ.ಕಷ್ಟ ಕೂಡ.ಅರ್ಥ ಆಗೋ ಹೊತ್ತಿಗೆ ಸಮಯ ಜಾರಿರುತ್ತದೆ. ಜೀವನದಲ್ಲಿ ಬಾಲ್ಯಾವಸ್ಥೆ, ಯೌವ್ವನಾವಸ್ಥೆ, ಗೃಹಸ್ತಾವಸ್ಥೆ, ವೃದ್ಧಾಪ್ಯ ಹೀಗೆ ನಾಲ್ಕನ್ನೂ ಪ್ರತಿಯೊಂದನ್ನೂ ಅದು ಹೇಗಿದೆಯೋ ಹಾಗೆಯೇ ಒಪ್ಪಿಕೊಂಡು ಅದರೊಂದಿಗೆ ಹೊಂದಿಕೊಂಡಿರೋರು ಸದಾ ಸಂತೋಷದಿಂದ ಖುಷಿಯಾಗಿ ಜೀವನ ನಡೆಸುವರು.ಅವರಿಗೆ ಜೀವನದಲ್ಲಿ ಯಾವ ವ್ಯತ್ಯಾಸವೂ ಕಾಣುವುದಿಲ್ಲ.ಆದರೆ ಹೀಗೆ ಇರುವವರು ಕಡಿಮೆ.
#PSSM World ಸಂಪತ್ತು ಜ್ಞಾನವನ್ನು ಪಡೆದುಕೊಳ್ಳುವುದು ಹೇಗೆ..? ಮೋಕ್ಷ ಹೇಗೆ ಉಂಟಾಗುತ್ತದೆ? ನೀನು ಮುಕ್ತಿಯನ್ನು ಬಯಸಿದರೆ, ವಿಷದಂತಹ ಇಂದ್ರಿಯ ವಸ್ತುಗಳನ್ನು ತ್ಯಜಿಸಿ, ಕ್ಷಮೆ, ಪ್ರಾಮಾಣಿಕತೆ, ದಯೆ, ಕರುಣೆ, ತೃಪ್ತಿ ಮತ್ತು ಸತ್ಯವನ್ನು ಬೆಳೆಸಿಕೊ ಕ್ಷಮೆ,ಪ್ರಾಮಾಣಿಕತೆ, ದಯೆ ತೃಪ್ತಿ, ಸತ್ಯತೆ — ಇವು ಜೀವಿಯ ಸ್ವಾಭಾವಿಕ ಗುಣಗಳು. ನಮ್ಮಲ್ಲಿ ಸಹಜವಾಗಿ ಇರುತ್ತವೆ. ಆದರೆ ಜಗತ್ತಿನೊಂದಿಗೆ ನಡೆಸುವ ವ್ಯವಹಾರಗಳಿಂದ, ಅಂದರೆ ಇಂದ್ರಿಯಗಳ ಮೂಲಕ ಬರುವ ಪ್ರಪಂಚದ ಸ್ಪರ್ಶದಿಂದ,, ದ್ವೇಷ, ಆಸಕ್ತಿ, ಅಭಿಮಾನ, ತಾರತಮ್ಯಗಳು, ಬಂಧನೆಗಳು ಹುಟ್ಟಿಕೊಳ್ಳುತ್ತವೆ. ಅಂತಹ ಇಂದ್ರಿಯ ಸಂಪರ್ಕದಿಂದ ಕ್ಷಮೆ , ಸರಳತೆ/ಪ್ರಾಮಾಣಿಕತೆ ,ದಯೆ, ತೃಪ್ತಿ, ಸತ್ಯ ಗುಣಗಳು ನಿಧಾನವಾಗಿ ಮಾಯವಾಗುತ್ತವೆ. ಆದ್ದರಿಂದ, ನಾವು ನಿಜವಾಗಿಯೂ ಮುಕ್ತರಾಗಿ ಮತ್ತು ಸಂತೋಷವಾಗಿರಲು ಬಯಸಿದರೆ,ಇಂದ್ರಿಯಲೋಲತೆಯಿಂದ ಮುಕ್ತರಾಗಬೇಕು. ಕ್ಷಮೆ, ಪ್ರಾಮಾಣಿಕತೆ, ದಯೆ, ಕರುಣೆ, ತೃಪ್ತಿ ಮತ್ತು ಸತ್ಯ ಗುಣಗಳನ್ನು ಬೆಳೆಸಿಕೊಳ್ಳಬೇಕು
#PSSM World ಮಾತುಗಳನ್ನು ಯಾವಾಗಲೂ ನೀವು ನೆನಪಿಡಬೇಕು? ** ಒಂದು ನಿಮಿಷದ ಸಮಯ ತೆಗೆದುಕೊಂಡು ಪೋಸ್ಟ್ ಖಂಡಿತವಾಗಿ ಓದಿ ** ನಗುವನ್ನು ಕಲಿಯಿರಿ, ಜನನವಾಗುವಾಗಲೇ ಜೀವನ ಅಳುವನ್ನು ಕಲಿಸುತ್ತದೆ. ಒಬ್ಬರಾಗಿ ನಡೆಯುವುದನ್ನು ಕಲಿಯಿರಿ ಏಕೆಂದರೆ ಆಧಾರ ಎಷ್ಟೇ ನಿಜವಾದರೂ ಒಂದು ದಿನ ತನ್ನ ನೈಜ ಸ್ವರೂಪವನ್ನು ತೋರಿಸುತ್ತದೆ. ಜೀವನದಲ್ಲಿ ಖಾಲಿ ಹೊಟ್ಟೆ ಮತ್ತು ಖಾಲಿ ಜೇಬು ಯಾವ ಪಾಠವನ್ನು ಕಲಿಸುತ್ತದೆಯೋ ಅದನ್ನು ಯಾವ ವಿಶ್ವವಿದ್ಯಾಲಯ ಅಥವಾ ಶಿಕ್ಷಕ ಕೂಡ ಕಲಿಸಲಾರರು. ಜೀವನದಲ್ಲಿ ಹಣದ ಜೊತೆಗೆ ಒಳ್ಳೆಯ ನಡತೆಯನ್ನೂ ಗಳಿಸಿ, ಏಕೆಂದರೆ ಶ್ಮಶಾನದಲ್ಲಿ ನಾಲ್ಕು ಕೋಟಿ ಅಲ್ಲ, ಕೇವಲ ನಾಲ್ಕು ಜನರೇ ಬಿಡಲು ಬರುತ್ತಾರೆ. ಎಷ್ಟೇ ದುಬಾರಿ ವಾಹನದಲ್ಲಿ ಸುತ್ತಾಡಿದರೂ, ಕೊನೆಯ ಪ್ರಯಾಣ ಬಿದಿರಿನ ಹಾಸಿಗೆಯಲ್ಲೇ ನಡೆಯಬೇಕು, ಇದೇ ಜೀವನದ ಸತ್ಯ. ಸದಾ ಅಂತಹ ಜನರ ಜೊತೆ ಇರಿ, ಯಾರು ನಿಮ್ಮನ್ನು ಯಶಸ್ಸಿನ ಕಡೆಗೆ ಕೊಂಡೊಯ್ಯುತ್ತಾರೆ.
#PSSM World ಅಸೂಯೆ ಗರಿಷ್ಠ ಮಿತಿ ಮೀರಿದಾಗ ಹಿಂಸೆಯೆಂಬುದು ಅನಿವಾರ್ಯ ಅದರ ನಿರೂಪಕನು ಪಂಚಭೂತಗಳಲ್ಲೊಂದಾದ ಆಕಾಶ ತತ್ವವೆ ಆಗಿರುತ್ತೆ.ಕಾರಣ ಎಲ್ಲಾ ವಿಕಾರ ಗಳಿಗಿಂತಲು ವಿಕೃತವಾದದ್ದು ನಿನ್ನನ್ನು ಪಾತಾಳಕ್ಕೆ ತುಳಿಯೋದು ನಿನ್ನಲ್ಲಿರುವ ಅಸೂಯೆ.ನೋಡಿ ಈ ಜಗತ್ತಿನಲ್ಲಿ ಸುಲಬವಾದ ಕೆಲಸ ಸುಖವಾದ ಸೆರೆಮನೆ ಎಲ್ಲೂ ಇಲ್ಲ.ಅಮೇಜಾನ್ ಮಾಲಿಕನಿಂದ ಅಂಬಾನಿಯವರೆಗೂ ಪ್ರತಿಯೊಬ್ಬರಿಗೂ ಅವರದೆ ಆದ ಕಷ್ಟಗಳಿವೆ ಅವರದೇ ಆದ ಹೋರಾಟಗಳಿವೆ.ಒಬ್ಬ 100 ಕೋಟಿ ಇನ್ವೆಷ್ಟ್ ಮಾಡಿ ದಿನಕ್ಕೆ 1 ಕೋಟಿ ಸಂಪಾದಿಸ್ತಾನೆ ,ಆದರೆ ಅವನ ಒಂದು ದಿನದ ಸಂಪಾದನೆಯಿಂದ ನನ್ನ ಜೀವನ ಸೆಟಲ್ ಆಗುತ್ತೆ ಅಂತ ಯೋಚಿಸ್ತೀರ .ಆದರೆ ಅವನು ಮಾಡಿರೋ 100 ಕೋಟಿ ಇನ್ವೆಷ್ಟ್ ನಿಮಗೆ ಕಾಣಿಸೊಲ್ಲ.ಆದರೆ ಅವನು ದಿನಕ್ಕೆ ಇಷ್ಟು ಸಂಪಾದಿಸ್ತಾನೆ ಅಂತ ಹೊಟ್ಟೆಉರಿದು ಕೊಳ್ಳೋದು ಅಸೂಯೆಯ ರೂಪದಲ್ಲಿ ಪಂಚಭೂತಗಳಿಗೆ ಕಂಡು ಬಿಟ್ಟಿರುತ್ತೆ.ಅದೇ ಒಬ್ಬ ಚಿತ್ರನಟ ಕೋಟಿ ಕೋಟಿ ಸಂಪಾದಿಸ್ತಾನೆ ಅಂತ ಯೋಚಿಸ್ತೀರ ಅದರಲ್ಲಿ ನಿಮ್ಮ ಅಸೂಯೆ ವ್ಯಕ್ತವಾಗುತ್ತೆ .ಆದರೆ ಆ ಕೋಟಿ ಕೋಟಿಯ ಇಂದೆ ಅವನ ಕಷ್ಟ ಮತ್ತು ನೋವಿರುತ್ತೆ.ಮತ್ತು ಅದನ್ನೆಲ್ಲ ಅವನು ತಿಂತ ಇರಲ್ಲ ದಾನ ದರ್ಮ ಮಾಡುತ್ತಿರುತ್ತಾನೆ,ಅದು ನಿಮಗೆ ಕಾಣದಿದ್ದರು ಪಂಚಭೂತಗಳಿಗೆ ಕಂಡು ಬಿಟ್ಟಿರುತ್ತೆ.ನೋಡಿ ಹ್ಯಾಂಕರ್ ಒಬ್ಬನ ನಾಲಿಗೆಯ ನೋವು ಅವನಿಗೆ ಗೊತ್ತು.ಒಬ್ಬ ಪೈಲ್ವಾನ್ ನ ಮಾಂಸ ಖಂಡದ ನೋವು ಅವನಿಗೆ ಗೊತ್ತು.ಒಬ್ಬ ಕ್ರಿಕೇಟಿಗನ ಕೈ ನೋವು.ಒಬ್ಬ ಅಕೌಂಟೆಂಟ್ ನ ತಲೆ ನೋವು.ಅವೆಲ್ಲ ಅವರ ವೃತ್ತಿಗೆ ತಕ್ಕಂತೆ ಅವರಿಗೆ ಮಾತ್ರ ಗೊತ್ತಿರುತ್ತೆ.ಅದೇ ಒಬ್ಬ ಹಾರ್ಡ್ ವರ್ಕರ್ ಕಾರ್ಮಿಕ ಮೊಬೈಲ್ ನಲ್ಲಿ ಸಂಗೀತ ಕೇಳುತ್ತ ಕೆಲಸ ಮಾಡಬಹುದು.ಆದರೆ ಒಬ್ಬ ಬ್ಯಾಂಕ್ ಕ್ಯಾಷಿಯರ್ ಸಂಗೀತ ಕೇಳುತ್ತ ಕೆಲಸ ಮಾಡೋಕಾಗಲ್ಲ.ಆದರೆ ಈ ಅಸೂಯೆಗಳಿಗೆ ಅವರ ಸಂಭಳ ಅವರ ದುಡಿಮೇ ಕಾಣುತ್ತೆ ಹೊರತು ಅವರು ಮಾಡುವ ಕೆಲಸದ ಕಷ್ಟ ಮತ್ತು ನೋವು ಕಾಣೋದಿಲ್ಲ.ಮತ್ತು ಒಂದು ವಿಷಯ ನಿನಗೊಂದು ಕೆಲಸ ಕೊಡ್ತೀನಿ ಬೆಳಿಗ್ಗೆ ಯಿಂದ ಸಂಜೆವರೆಗೂ ಮಲಗೆ ಇರಬೇಕು.ಎಲ್ಲೂ ಎದ್ದು ಹೋಗೋಹಾಗಿಲ್ಲ.ನಿದ್ರೆ ಮಾಡೋಹಾಗಿಲ್ಲ ಎಂದರೆ ಆ ಕೆಲಸ ಕೂಡ ಸುಲಭವಲ್ಲ ಎರಡು ಮೂರು ದಿನದಲ್ಲಿ ಸ್ವಯಂ ಪ್ರೇರಿತವಾಗಿ ರಾಜಿನಾಮೆ ಕೊಟ್ಟು ಹೋಗ್ತಾನೆ.ಮಲಗಿರುವವನಿಗೆ ಗೊತ್ತು ಮಲಗುವ ನೋವು.ಹಾಗಗಿ ಯಾವುದೇ ಕೆಲಸ ಸುಲಭವಲ್ಲ.
"O.OOOOOO #PSSM World OOOOOOOOOOOOOOOOOOOOOOOOOOOOOOO1 ಗ್ರಾಂ ಎನ್ನುವುದು ಅಷ್ಟೊಂದು ಸಣ್ಣ ಭಾರವಲ್ಲ...! ಯಾಕೆ...! O.OOOOOOOOOOOOOOOOOOOOOOOOOOOOOOOOOOOOO1 ಗ್ರಾಂ ಎನ್ನುವುದು ಅಷ್ಟೊಂದು ಸಣ್ಣ ಭಾರವಲ್ಲ. ಸಾಮಾನ್ಯವಾಗಿ ನಮಗೆ ಈ ಭಾರವು ಬಹಳಷ್ಟು ಸಣ್ಣದೆಂದು ಅನಿಸಬಹು. ಆದರೆ ಈ ಭಾರವು ಒಂದೊಮ್ಮೆ ಪ್ರಪಂಚಕ್ಕೂ ಕಾರಣವಾಗಬಹುದು. ಸ್ವಿಟ್ಜರ್ಲೆಂಡ್‌‌ ನ ಜಿನಿವಾ ಮೂಲದ ಯುರೋಪಿಯನ್‌ ಆರ್ಗನೈಸೇಷನ್‌ ಫಾರ್‌ ನ್ಯೂಕ್ಲಿಯರ್‌ ರೀಸರ್ಚ್ (CERN) ನ Large Hadron Collider ನಲ್ಲಿ ನಡೆದ ಕಣ ಪರೀಕ್ಷೆಯಲ್ಲಿ ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದ ಭೌತಶಾಸ್ತ್ರಜ್ಞರು ಹೊಸದೊಂದು Sub-Atomic particles ನ್ನು ಕಂಡು ಹಿಡಿದಿದ್ದಾರೆ. ದ್ರವ್ಯ (Matter) ಮತ್ತು ಪ್ರತಿದ್ರವ್ಯಗಳಲ್ಲಿ (Antimatter) ತೂಗಾಡುತ್ತಿರುವ ಈ ಅಸ್ಥಿರ ಕಣಗಳಿಗೆ, ಪ್ರಪಂಚೋತ್ಪತ್ತಿಯಲ್ಲಿ ಅಥವಾ ಬಿಗ್‌ಬ್ಯಾಂಗ್ ಸ್ಪೋಟಕ್ಕೆ ಸಂಬಂಧಿಸಿ ಆಳವಾದ ಸಾಮೀಪ್ಯವಿರುವುದನ್ನು ಮನಗಂಡು ವಿಶ್ವದ ಹುಟ್ಟಿನ ಸತ್ಯ ಅರಿಯುವ ಕೆಲಸದಲ್ಲಿ ಮಹತ್ವದ ಸಾಧನೆಗಾಗಿ ಇದನ್ನು ಪರೀಕ್ಷಿಸಲಾಗುತ್ತದೆ. ನಂತರ ವಿಶ್ವದ ಉಗಮಕ್ಕೆ ಮೂಲ ಕಾರಣವಾದ ಅಣುಗಳಿಗೆ ಒಂದು ನಿರ್ದಿಷ್ಟ ರೂಪ, ಆಕಾರ ಮತ್ತು ದ್ರವ್ಯರಾಶಿಯನ್ನು ನೀಡಿದ್ದೇ ಈ ದೇವಕಣಗಳಾಗಿದೆ. ಈ ವಿಶ್ವವೆಂಬ ಸೃಷ್ಟಿಕ್ರಿಯೆ ಮಹಾಸ್ಪೋಟದ ರೂಪವಾಗಿ ಹೊರಹೊಮ್ಮಿತು ಎಂದು ಹೇಳಲಾಗುವ "ಬಿಗ್ ಬ್ಯಾಂಗ್" ಸಿದ್ಧಾಂತಕ್ಕೆ ಅನುರೂಪವಾಗಿ ಎಂಬಂತೆ, "ಪರಮಾಣು ಕಣ" ಗಳನ್ನು ಡಿಕ್ಕಿ ಹೊಡೆಸುವ ಮೂಲಕ Large Hadron Collider ಗಳನ್ನು ಸೃಷ್ಟಿಸಲಾಗಿದ್ದು, ಸೃಷ್ಟಿಮೂಲದ ಸ್ಥಿತಿಯನ್ನು ಮರುಸೃಷ್ಟಿಸಲು ಈ ನಿಟ್ಟಿನಲ್ಲಿ ಪ್ರಯತ್ನಿಸಲಾಗುತ್ತದೆ. Standard Model of particle physics ಅನುಸಾರ ಬಿಂಗ್ ಬ್ಯಾಂಗ್ ನಿಂದ ಮುಂದುವರಿದ ಭಾಗವಾಗಿ ಉಂಟಾದ ಪ್ರಪಂಚದ ಮೊದಲ ನಿಮಿಷಗಳಲ್ಲಿ Matter-Antinatter ರೂಪೀಕರಣವು ಸಮಾನ ರೂಪದಲ್ಲಿತ್ತು. Matter-Antinatter ಪರಸ್ಪರ ನಿಗ್ರಹಿಸಿ (Annihilation) ಶಕ್ತಿಯಾಗಿ, ನಂತರ ಶಕ್ತಿಯು ಪುನಃ Matter-Antinatter ಗಳಾಗಿ ರೂಪುಗೊಳ್ಳುತ್ತಿದ್ದವು. ಈ ರೀತಿಯಾದರೆ ಪ್ರಪಂಚವು ಶೂನ್ಯವಾಗಿರುತ್ತದೆ. ಅನಿಲ ಪೊರೆಗಳು, ಗ್ಯಾಲಕ್ಸಿಗಳು, ನಕ್ಷತ್ರಗಳು, ಗ್ರಹಗಳು ಮತ್ತು ಜೀವಾಣುಗಳು ಇರಲಾರದು. ಆದರೆ ಇಲ್ಲಿ ಅದಲ್ಲ ನಡೆದದ್ದು. ಪ್ರಪಂಚವು ದ್ರವ್ಯಾಧಿಪತ್ಯದ ಅಡಿಯಲ್ಲಿ ಬಂದು ಇಂದು ಕಾಣುವ ಅವಸ್ಥೆಯಾಯಿತು. ಆದರೆ ಯಾಕಾಗಿ Antimatter ನ್ನು ದಾಟಿ Matter ಆಧಿಪತ್ಯ ಗಳಿಸಿದ್ದು ಎನ್ನುವುದಕ್ಕೆ ತೃಪ್ತಿಕರವಾದ ಸಾರಾಂಶ ನೀಡಲು Particles ಗೆ ಇದುವರೆಗೆ ಸಾಧ್ಯವಾಗಲಿಲ್ಲ. ಅದಕ್ಕಾಗಿ ಈ ಪರಿಮಿತಿಯನ್ನು ಮೀರಿ ಹೊಸ ಸಂಶೋಧನೆಗೆ ಬೇಕಾದ ಎಲ್ಲಾ ರೀತಿಯ ಪ್ರಮುಖ ಅಂಶಗಳನ್ನು ಕಂಡುಹಿಡಿಯಲು ಪ್ರಯತ್ನಿಸುತ್ತಿದ್ದಾರೆ ಭೌತಶಾಸ್ತ್ರಜ್ಞರು. ಇನ್ನು CERN ನ Large Hadron Collider ನಲ್ಲಿ ನಡೆಸಿದ ಪರೀಕ್ಷೆಗೊಮ್ಮೆ ಕಣ್ಣೋಡಿಸೋಣ. ವಿದ್ಯುತ್ ಚಾರ್ಜ್ ಹೊರತುಪಡಿಸಿ ಉಳಿದ ಎಲ್ಲಾ ಶಕ್ತಿಗಳನ್ನು ಹೊಂದಿ, ಸಮಾನವಾದ ರೀತಿಯಲ್ಲಿ ನಿರ್ಮಿಸಲ್ಪಟ್ಟ ದ್ರವ್ಯವಾಗಿದೆ Antimatter. ಆದರೆ ಫೋಟಾನ್ ಗಳ (Photons) ಹಾಗಿರುವ ಕೆಲವು ಕಣಗಳು ಒಂದೇ ಸಮಯದಲ್ಲೇ ಫೋಟಾನ್ ಗಳಾಗಿಯೂ ಪ್ರತಿಕಣ ಗಳಾಗಿಯೂ ವರ್ತಿಸುತ್ತದೆ. ಅಂದರೆ Particle ಗಳಾಗಿಯೂ Antiparticle ಗಳಾಗಿಯೂ ವರ್ತಿಸುತ್ತದೆ ಎಂದರ್ಥ. ಇದನ್ನು Quantum Quirk of Superpositions ಎಂದೂ ಕರೆಯುತ್ತಾರೆ. ಅಂದರೆ ಈ ಕಣಗಳು Particles ಮತ್ತು Antiparticles ಗಳ ಮಧ್ಯೆ ಓಲಾಡುತ್ತಿರುತ್ತದೆ. ಈ ರೀತಿಯ ಕಣಗಳ ಕ್ಲಬ್ ಗಳಿಗೆ ಒಂದು ಹೊಸದಾದ ಅತಿಥಿ ಕೂಡ ಸೇರಿದೆ. ಚಾರ್ಮ್ ಮೆಸನ್ (Charm Meson) ಎಂದಾಗಿದೆ ಅದರ ಹೆಸರು. ಒಂದು Charm Quark ಮತ್ತು ಒಂದು Up Anti quark ಸೇರಿ Charm meson ನಿರ್ಮಿಸಲ್ಪಡುತ್ತದೆ. ಚಾರ್ಮ್ ಮೆಸಾನ್ ನ ಪ್ರತಿಕಣಗಳನ್ನು ನಿರ್ಮಿಸಲ್ಪಡುವುದು ಒಂದು Charm Anti quark ಒಂದು Up quark ಮೂಲಕವಾಗಿದೆ. (Up, Down, Top, Bottom, Strange, Charm ಎನ್ನುವ ಕ್ವಾರ್ಕ್ ಗಳು ಮತ್ತು ಅವುಗಳ ಆ್ಯಂಟಿ ಕ್ವಾರ್ಕ್ ಗಳು ಸೇರಿ ಹನ್ನೆರಡು ಕ್ವಾರ್ಕ್ ಗಳಿವೆ). ಆದರೆ ಹೊಸದಾಗಿ ಕಂಡು ಹಿಡಿದ ಚಾರ್ಮ್ ಮೆಸಾನ್, Standard Model ನಿಗಮನಕ್ಕೆ ವಿರುದ್ಧವಾಗಿ ಅದರ Matter ಮತ್ತು Antimatter ದ್ವಂದ್ವಗಳ ನಡುವೆ Oscillation ಅಥವಾ ಅಸ್ಥಿರತೆಯಿಂದ ಓಲಾಡುತ್ತಿರುತ್ತದೆ. ಆದರೆ ಸಂಶೋಧನೆಯ ಪ್ರಸಕ್ತಿ ಅದಲ್ಲ. ಸ್ವಿಟ್ಜರ್ಲೆಂಡ್‌‌ ನ ಜಿನಿವಾದ CERN (Conseil Européen pour la Recherche Nucléaire" ಅಥವಾ European Council for Nuclear Research) ನಲ್ಲಿ ನಡೆಸಿದ ಸಂಶೋಧನೆಯಲ್ಲಿ ಚಾರ್ಮ್ ಮೆಸಾನ್ ನ Matter ಮತ್ತು Antimatter ನ ರೂಪಗಳ mass ನಲ್ಲಿ ಸಣ್ಣಪುಟ್ಟ ವ್ಯತ್ಯಾಸಗಳಿದೆ ಎಂದು ಕಂಡು ಹಿಡಿದರು. ಇಲ್ಲಿ ಬಹಳ ಸಣ್ಣಪುಟ್ಟ ವ್ಯತ್ಯಾಸಗಳಿದೆ ಎಂದಾದರೂ (0.00000000000000000000000000000000000001 ಗ್ರಾಂ) Particle physics ನಲ್ಲಿ ಅದನ್ನು ಸಣ್ಣದೆಂದು ಕಂಡು ನಿರ್ಲಕ್ಷ್ಯ ತೋರುವುದು ಸರಿಯಲ್ಲ. Large Hadron Collider ನಲ್ಲಿ ನಡೆಸಲಾದ ಫೋಟಾನ್ - ಫೋಟಾನ್ ಸಂವಹನ ಅಥವಾ ಪರಸ್ಪರ ಸಂಪರ್ಕ (Interaction) ದಿಂದ ಚಾರ್ಮ್ ಮೆಸಾನ್ ಗಳ ಈ ರೀತಿಯ ಓಲಾಟವನ್ನು ಕಂಡು ಹಿಡಿದದ್ದು. ವಿದ್ಯುತ್ ಕಾಂತವನ್ನು ಉಪಯೋಗಿಸಿ, ಕಾರ್ಯವನ್ನು ನಿಯಂತ್ರಿಸಿ, ಸೂಕ್ಷ್ಮ ಕಣಗಳನ್ನು ಬೆಳಕಿನ ವೇಗದ ಹತ್ತಿರದಲ್ಲಿ ತಲುಪಿಸಿ Large Hadron Collider ನಲ್ಲಿ ಕಣಗಳ ಪರೀಕ್ಷೆಯನ್ನು ನಡೆಸಲಾಗುತ್ತದೆ. ಅಸ್ಥಿರ ಕಣಗಳಾದ Charm meson ಗಳು ಚಲಿಸಿ ಕೆಲವೇ ಕಿಲೋಮೀಟರ್‌ ಗಳಂತರದಲ್ಲಿ ಅದರ ಚಲನೆಯು ನಿಶ್ಚಲವಾಗಿ ಇತರ ಕಣಗಳಾಗಿ ರೂಪಾಂತರ ಹೊಂದುತ್ತದೆ. ಚಾರ್ಮ್ ಮೆಸೋನ್ ಗಳ Mass ನಲ್ಲಿ ಉಂಟಾಗುವ ವೆತ್ಯಾಸವು ಅದರ ವೇಗವನ್ನು ಕಡಿಮೆಯಾಗಸಿ ಜೀರ್ಣಾವಸ್ಥಗೆ ತಲುಪಿಸುತ್ತದೆ. Mass ನಲ್ಲಿರುವ ವೆತ್ಯಾಸವು ಬಹಳ ಸಣ್ಣದಾದರೂ ಪ್ರಪಂಚ ಚರಿತ್ರೆಯನ್ನು ವಿವರಿಸುವಾಗ ಈ ಅತೀ ಸಣ್ಣ ವೆತ್ಯಾಸ ಕೂಡ ನಿರ್ಣಾಯಕ ವೆನಿಸುತ್ತದೆ. ಅಂದರೆ ಪ್ರಪಂಚೋತ್ಪತ್ತಿಯ ಮೊದಲ ನಿಮಿಷಗಳಲ್ಲಿ Charm meson ಗಳಂತಹ Subatomic, Particle-Antiparticle ಕಣಗಳ ಮಾಸ್ ನಲ್ಲಿ ಉಂಟಾಗುವ ವೆತ್ಯಾಸದ ಕಾರಣ Antiparticle ನಿಂದ Particles ಗೆ ರೂಪಾಂತರ ಹೊಂದುವುದಕ್ಕಿಂತ ವೇಗವಾಗಿರುತ್ತದೆ. ಆದ್ದರಿಂದಲೇ Antimatter ನ್ನು ಮೀರಿ ಸಾಧಾರಣ ದ್ರವ್ಯವು (Baryonic Matter) ಪ್ರಪಂಚದಲ್ಲಿ ಆಧಿಪತ್ಯ ಸ್ಥಾಪಿಸಿದ್ದು. ಸಂಶೋಧನಾ ವರದಿಗಳು Physical Review Letters ನಲ್ಲಿ ಪ್ರಸಾರವಾಗಿದ್ದು, ಈ ಸಂಶೋಧನೆಯ ಫಲ ಅಂಗೀಕಾರವಾದರೆ ದ್ರವ್ಯ ರೂಪೀಕರಣದ ಕುರಿತಾದ ಹೆಚ್ಚಿನ ತೃಪ್ತಿಕರವಾದ ವಿವರಣೆಗಳನ್ನು ನೀಡಲು ಭೌತಿಕ ಶಾಸ್ತ್ರಜ್ಞರಿಗೆ ಸಾಧ್ಯ. ಪ್ರಪಂಚದ ಕುರಿತಾದ ನಮ್ಮ ‌ಭಾವನೆ, ಊಹೆ, ನಿಗಮನಗಳು ಪ್ರತಿಯೊಂದು ನಿಮಿಷಗಳಲ್ಲಿ ನವೀಕರಿಸಲ್ಪಡುತ್ತಿದೆ. ಒಂದೊಮ್ಮೆ ಶಾಸ್ತ್ರ ಜಗತ್ತಿನ ಹಿಂದಿನ ಸಿದ್ಧಾಂತವನ್ನು ಬದಲಿಸ ಬೇಕಾಗಬಹುದು. ಅಥವಾ ಇನ್ನಷ್ಟು ಅಧ್ಯಯನ, ಸಂಶೋಧನೆ, ವಿವರಣೆಗಳ ಅಗತ್ಯವಿರಬಹುದು. ಅಲ್ಲಾಹು ಅಅ್ಲಂ...! ಒಂದಂತೂ ಸತ್ಯ.. ತಾಂತ್ರಿಕ ಶಿಕ್ಷಣದ ಬೆಳವಣಿಗೆಯು ಅತ್ಯಂತ ನವೀನ ಮಾದರಿಯ ಸಂಶೋಧನಾ ಕೇಂದ್ರಗಳ ಉಗಮಕ್ಕೆ ಕಾರಣ ವಾದ್ದರಿಂದ ದಶಕಗಳ ಹಿಂದೆ ಬರೆದಿದ್ದ ಸಿದ್ಧಾಂತಗಳನ್ನು ಪರೀಕ್ಷಿಸಲು ಸಾಧ್ಯವಾಗುವ ಅವಸ್ಥೆಯಾಗಿದೆ ಇಂದಿರುವುದು.
#PSSM World ಶಿಕ್ಷಣದ ನಡುವೆ ಮರೆಯಾಗದಿರಲಿ ಆತ್ಮಜ್ಞಾನ - ಡಿಗ್ರಿ ಬೆನ್ನತ್ತಿದ ಶ್ವೇತಕೇತುವಿಗೆ ತಂದೆ ಕಲಿಸಿದ 'ಲೈಫ್ ಲೆಸನ್. ಹನ್ನೆರಡು ವರ್ಷಗಳ ಕಾಲ ಕಠಿಣ ಪರಿಶ್ರಮದಿಂದ ವೇದ-ಶಾಸ್ತ್ರಗಳನ್ನು ಓದಿ ಶ್ವೇತಕೇತು ಮನೆಗೆ ಬಂದಾಗ ಅವನ ನಡೆಯಲ್ಲಿ ವಿಧೇಯತೆ ಇರಲಿಲ್ಲ. ಬದಲಿಗೆ 'ನನಗಿಂತ ಜ್ಞಾನಿ ಯಾರೂ ಇಲ್ಲ' ಎಂಬ ಅಹಂಕಾರದ ದರ್ಪವಿತ್ತು. ತಂದೆಗೆ ನಮಸ್ಕಾರ ಮಾಡಲಿಲ್ಲ ಏಕೆಂದರೆ ನನ್ನ ತಂದೆ ನನ್ನಂತೆ ವೇದಗಳನ್ನು ಅಧ್ಯಯನ ಮಾಡಿಲ್ಲ. ಅಷ್ಟೊಂದು ಜ್ಞಾನವಿದ್ದರೆ ನನ್ನನ್ನು ಬೇರೆ ಗುರುಗಳ ಹತ್ತಿರ ವೇದಾಧ್ಯಯನಕ್ಕೆ ಏಕೆ ಕಳುಹಿಸುತ್ತಿದ್ದರು! ಇದನ್ನು ತಿಳಿದು ತಂದೆ ಮಗನಿಗೆ ಪಾಠವನ್ನು ಕಲಿಸಲು ನಿರ್ಧರಿಸಿ ಮಗನನ್ನು ಕೇಳಿದರು "ಮಗೂ, ಯಾವ ಒಂದನ್ನು ತಿಳಿದುಕೊಂಡರೆ ಈ ಜಗತ್ತಿನ ಸಮಸ್ತವನ್ನೂ ತಿಳಿದಂತಾಗುತ್ತದೆಯೋ, ಅಂತಹ ಪರಮ ವಿದ್ಯೆಯನ್ನು ನಿನ್ನ ಗುರುಗಳು ನಿನಗೆ ಕಲಿಸಿದ್ದಾರೆಯೇ?" ಪ್ರಶ್ನೆ ಕೇಳಿದ ಕೂಡಲೇ ಶ್ವೇತಕೇತುವಿಗೆ ತನ್ನ ಜ್ಞಾನದ ಅರಿವಾಯಿತು. ಅಂತಹ ವಿದ್ಯೆ ಯಾವುದು? ನನಗೆನನ್ನ ಗುರುಗಳು ಹೇಳಿಕೊಟ್ಟಿಲ್ಲ . ದಯವಿಟ್ಟು ನೀವೇ ನನಗೆ ಉಪದೇಶಿಸಿ ಎಂದು ನಮಸ್ಕರಿಸಿದನು. ತಂದೆ ಮಗನ ಅಹಂಕಾರ ಇಳಿದಿರುವುದನ್ನು ಅರಿತು ಉತ್ತರ ನೀಡಿದರು. “ನೋಡು ಮಗನೇ, ನಾವು ಮಣ್ಣಿನಿಂದ ತಯಾರಾದ ಮಡಿಕೆ, ಕುಡಿಕೆ, ಆನೆ, ಕುದುರೆ, ಗಿಳಿ, ಕೋಗಿಲೆ – ಹೀಗೆ ನಾನಾ ವಸ್ತುಗಳನ್ನು ನೋಡಿದ್ದೇವೆ. ಇವುಗಳೆಲ್ಲದಕ್ಕೂ ಮೂಲವೇ ಮಣ್ಣು. ಮಣ್ಣಿನ ಮುದ್ದೆಯ ಬಗ್ಗೆ ನೀನು ಕೂಲಂಕುಷವಾಗಿ ಅರ್ಥಮಾಡಿಕೊಂಡರೆ, ಅದರಿಂದಾಗುವ ಎಲ್ಲ ವಸ್ತುಗಳ ಪರಿಚಯವೂ ತಾನಾಗಿಯೇ ಆಗುತ್ತದೆ, ಅಲ್ಲವೇ?”(ಕಾರಣವನ್ನು ಅರಿತರೆ, ಕಾರ್ಯವನ್ನು ಅರಿತಂತೆ) ಹಾಗೆಯೇ, ಮೂಲವಸ್ತುವಾದ ಚಿನ್ನದ ಬಗ್ಗೆ ನಾವು ಸರಿಯಾಗಿ ಅರ್ಥಮಾಡಿಕೊಂಡರೆ, ಅದರಿಂದ ತಯಾರಾದ ಆಭರಣಗಳನ್ನುಅರ್ಥಮಾಡಿಕೊಂಡಂತೆ. ಸಮಗ್ರ ಸೃಷ್ಟಿಯ ಮೂಲವನ್ನು ಅರಿತಾಗಲೇ ಸಕಲ ವಸ್ತುಗಳು ಅರ್ಥವಾಗುವುದು. “ಆ ಮರವನ್ನು ನೋಡು. ಅದರ ಕಾಂಡದ ಯಾವುದೇ ಭಾಗವನ್ನು ಕೆತ್ತಿದರೂ, ಒಂದು ರೀತಿಯ ದ್ರವ (ರಸ) ಹೊರಬರುತ್ತದೆ, ಆದರೆ ಮರ ಬದುಕಿರುತ್ತದೆ. ಅದರ ಒಂದು ಕೊಂಬೆಯನ್ನು ಮುರಿದರೆ, ಕೆಲವೇ ಕಾಲದಲ್ಲಿ ಆ ಕೊಂಬೆ ಒಣಗಿ ಉದುರಿ ಹೋಗುತ್ತದೆ, ಆದರೆ ಮರ ಬಾಡುವುದಿಲ್ಲ. ಆ ಮರದಲ್ಲಿ ಜೀವವೆಂಬ ಚೈತನ್ಯ ರಸ ಇಲ್ಲದಂತಾದಾಗ ಮಾತ್ರ ಇಡೀ ಮರ ಒಣಗುತ್ತದೆ, ಅಷ್ಟೇ ಅಲ್ಲವೇ?” ನೋಡು, ಮರದ ಒಂದು ಕೊಂಬೆ ಮುರಿದರೂ, ಅದರ ಜೀವಂತ ಶಕ್ತಿ ಇರುವುದರಿಂದ ಮರ ಬದುಕುತ್ತದೆ. ಆದರೆ, ಅದರಲ್ಲಿ ಜೀವಚೈತನ್ಯವಿಲ್ಲವಾದರೆ, ಇಡೀ ಮರ ಒಣಗಿ ಹೋಗುತ್ತದೆ." "ಹೀಗೆಯೇ, ಮಾನವನ ದೇಹವು ಕೂಡ ಆತ್ಮ ಚೈತನ್ಯವನ್ನು ಕಳೆದುಕೊಂಡಾಗ, ಅದುಅದು ಒಣಗಿದ ಕಟ್ಟಿಗೆಯಾಗುತ್ತದೆ. ಆದರೆ ಆತ್ಮ ಎಂಬ ಚೈತನ್ಯಕ್ಕೆ ಜನನ-ಮರಣದ ಬಾಧೆಗಳಿಲ್ಲ. ಅದು ಅವಿನಾಶಿ, ವಿಶ್ವವ್ಯಾಪಿ. ಆ ಆತ್ಮನೇ ನೀನು. ನಾನಿದ್ದೇನೆ, ನಾವೆಲ್ಲರೂ ಇದ್ದೇವೆ.” ಈ ಉಪದೇಶದ ಮೂಲಕ, ವೇದಗಳ ನಿಜವಾದ ಜ್ಞಾನವೆಂದರೆ ಬಾಹ್ಯ ಜ್ಞಾನವಲ್ಲ, ಬದಲಿಗೆ ಸಕಲಕ್ಕೂ ಆಧಾರವಾಗಿರುವ ಆ ಆತ್ಮತತ್ವವನ್ನು ಅರಿಯುವುದೇ ನಿಜವಾದ ಜ್ಞಾನ, ಮತ್ತು ಅದೇ ವಿನಯಕ್ಕೆ ಕಾರಣ ಎಂಬುದನ್ನು ತಂದೆ ಮಗನಿಗೆ ಮನವರಿಕೆ ಮಾಡಿಕೊಟ್ಟರು. ಇಂದಿಗೂ ನಾವು ಶ್ವೇತ ಕೇತುನನ್ನು ಅನುಸರಿಸಬೇಕೆ, ಲೌಕಿಕ ಶಿಕ್ಷಣ ಆಂತರಿಕ ಬೆಳವಣಿಗೆಯನ್ನು ಸಹ ಕೊಡುವುದಿಲ್ಲ. "ನಾನು ಹೆಚ್ಚು ಬುದ್ಧಿವಂತನು" ಎಂಬ ಭಾವನೆ ನಮ್ಮನ್ನು ದಿಕ್ಕು ತಪ್ಪಿಸಬಹುದು. ಬಾಹ್ಯಮತ್ತು ಆಂತರ್ಯ ಎರಡನ್ನು ತಿಳಿಯಬೇಕು ಹೊರಗಿನ ವ್ಯವಹಾರದ ಜ್ಞಾನ ಬದುಕಲು ಬೇಕು, ಆದರೆ ಬದುಕನ್ನು ಅರ್ಥಮಾಡಿಕೊಳ್ಳಲು ಆತ್ಮಜ್ಞಾನ ಬೇಕು. ಸೃಷ್ಟಿಯ ಮೂಲವನ್ನು ಅರಿತರೆ ಈ ಜಗತ್ತಿನ ಕಷ್ಟ-ಸುಖಗಳು ನಮ್ಮನ್ನು ಅತಿಯಾಗಿ ಬಾಧಿಸುವುದಿಲ್ಲ. ಲೌಕಿಕ ಶಿಕ್ಷಣದ ಜೊತೆಗೆ ಜೀವನದ ದರ್ಶನ ಮತ್ತು ಆತ್ಮಜ್ಞಾನ ಸೇರಿದಾಗ ಮಾತ್ರ 'ಪೂರ್ಣಜ್ಞಾನ'ವಾಗಲು ಸಾಧ್ಯ.
ಜೀವನ ನಡೆಸುವುದಕ್ಕೆದುಡ್ಡು ಸಾಕಾಗದೆ ಇರುವಾಗ ಅದನ್ನು ಹೇಗೆ ನಾವು ಸರಿ ಮಾಡಿಕೊಳ್ಳುವುದು? ನೀವು ಬದುಕಲು ಸಾಕಷ್ಟು ಹೊಂದಿಲ್ಲದಿದ್ದರೆ, ನಿಮ್ಮ ಪರಿಸ್ಥಿತಿಯನ್ನು ಸುಧಾರಿಸಲು ನೀವು ಹಲp #PSSM World ವಾರು ಹಂತಗಳನ್ನು ತೆಗೆದುಕೊಳ್ಳಬಹುದು:  ಬಜೆಟ್ ರಚಿಸಿ: ನಿಮ್ಮ ಎಲ್ಲಾ ಆದಾಯ ಮತ್ತು ವೆಚ್ಚಗಳ ಬಜೆಟ್ ಮಾಡುವ ಮೂಲಕ ಪ್ರಾರಂಭಿಸಿ. ನಿಮ್ಮ ಹಣ ಎಲ್ಲಿಗೆ ಹೋಗುತ್ತಿದೆ ಎಂಬುದನ್ನು ನೋಡಲು ಮತ್ತು ನೀವು ಖರ್ಚುಗಳನ್ನು ಕಡಿತಗೊಳಿಸಬಹುದಾದ ಪ್ರದೇಶಗಳನ್ನು ಗುರುತಿಸಲು ಇದು ನಿಮಗೆ ಸಹಾಯ ಮಾಡುತ್ತದೆ.    ನಿಮ್ಮ ಆದಾಯವನ್ನು ಹೆಚ್ಚಿಸಿ: ನಿಮ್ಮ ಪ್ರಸ್ತುತ ಆದಾಯವು ನಿಮ್ಮ ಖರ್ಚುಗಳನ್ನು ಸರಿದೂಗಿಸಲು ಸಾಕಾಗದೇ ಇದ್ದರೆ, ನಿಮ್ಮ ಆದಾಯವನ್ನು ಹೆಚ್ಚಿಸಲು ಪಕ್ಕದ ಹಸ್ಲ್ ಅಥವಾ ಅರೆಕಾಲಿಕ ಕೆಲಸವನ್ನು ಹುಡುಕುವುದನ್ನು ಪರಿಗಣಿಸಿ.    ಖರ್ಚುಗಳನ್ನು ಕಡಿತಗೊಳಿಸಿ: ನಿಮ್ಮ ಖರ್ಚುಗಳನ್ನು ಕಡಿಮೆ ಮಾಡುವ ಮಾರ್ಗಗಳಿಗಾಗಿ ನೋಡಿ, ಉದಾಹರಣೆಗೆ ಹೊರಗೆ ತಿನ್ನುವ ಬದಲು ಮನೆಯಲ್ಲಿ ಅಡುಗೆ ಮಾಡುವುದು, ನಿಮ್ಮ ಶಕ್ತಿಯ ಬಳಕೆಯನ್ನು ಕಡಿಮೆ ಮಾಡುವುದು ಅಥವಾ ನೀವು ಬಳಸದ ಚಂದಾದಾರಿಕೆಗಳನ್ನು ರದ್ದುಗೊಳಿಸುವುದು.    ನೆರವು ಪಡೆಯಿರಿ: ಆರ್ಥಿಕವಾಗಿ ಸಂಕಷ್ಟದಲ್ಲಿರುವ ಜನರಿಗೆ ವಿವಿಧ ರೀತಿಯ ನೆರವು ಲಭ್ಯವಿದೆ. ಹಣಕಾಸಿನ ನೆರವು ಅಥವಾ ಇತರ ರೀತಿಯ ಬೆಂಬಲವನ್ನು ನೀಡುವ ಲಾಭೋದ್ದೇಶವಿಲ್ಲದ ಸಂಸ್ಥೆಗಳು, ಸರ್ಕಾರಿ ಏಜೆನ್ಸಿಗಳು ಅಥವಾ ಸ್ಥಳೀಯ ದತ್ತಿಗಳನ್ನು ನೀವು ತಲುಪಬಹುದು.    ಸಾಲ ನಿರ್ವಹಣೆಯನ್ನು ಪರಿಗಣಿಸಿ: ನೀವು ಸಾಲವನ್ನು ಹೊಂದಿದ್ದರೆ, ನಿಮ್ಮ ಸಾಲವನ್ನು ವೇಗವಾಗಿ ಮತ್ತು ಹೆಚ್ಚು ಪರಿಣಾಮಕಾರಿಯಾಗಿ ಪಾವತಿಸಲು ಸಹಾಯ ಮಾಡಲು ಸಾಲ ನಿರ್ವಹಣೆ ಯೋಜನೆಯನ್ನು ಪರಿಗಣಿಸಿ.    ಹಣಕಾಸಿನ ಸಮಾಲೋಚನೆಯನ್ನು ಹುಡುಕುವುದು: ನಿಮ್ಮ ಹಣಕಾಸು ನಿರ್ವಹಣೆಯಲ್ಲಿ ನಿಮಗೆ ಸಮಸ್ಯೆ ಇದ್ದರೆ, ನಿಮ್ಮ ಹಣಕಾಸಿನ ಪರಿಸ್ಥಿತಿಯನ್ನು ಸುಧಾರಿಸಲು ಯೋಜನೆಯನ್ನು ಅಭಿವೃದ್ಧಿಪಡಿಸಲು ನಿಮಗೆ ಸಹಾಯ ಮಾಡುವ ಹಣಕಾಸು ಸಲಹೆಗಾರ ಅಥವಾ ಸಲಹೆಗಾರರಿಂದ ಸಹಾಯವನ್ನು ಪಡೆಯಲು ಪರಿಗಣಿಸಿ.