ShareChat
click to see wallet page
search
#PSSM World ಸಹಾಯ ಮಾಡೋದಿಲ್ಲ ಅನ್ನೋವರಿಗೆ ಈ ಕಥೆ ಕಣ್ಣುತೆರೆಸುತ್ತದೆ!” ಒಂದು ಹಳ್ಳಿಯಲ್ಲಿ ರಾಮು ಎಂಬ ಬಡ ರೈತನು ಇದ್ದ. ಅವನು ಬಹಳ ಮುಗ್ಧ, ದೇವರ ಮೇಲೆ ಅಪಾರ ನಂಬಿಕೆ ಇಟ್ಟವನು. ಒಂದು ವರ್ಷ ಭಾರೀ ಬರ ಬಂತು. ಬೆಳೆ ಹಾಳಾಯಿತು. ಊರಿನವರು ಎಲ್ಲರೂ “ದೇವರು ಯಾರಿಗೂ ಸಹಾಯ ಮಾಡೋದಿಲ್ಲ” ಎಂದು ದೂರುತ್ತಿದ್ದರು. ಆದರೆ ರಾಮು ಪ್ರತಿದಿನ ದೇವಸ್ಥಾನಕ್ಕೆ ಹೋಗಿ, “ನನಗೆ ಶಕ್ತಿ ಕೊಡು” ಎಂದು ಮಾತ್ರ ಪ್ರಾರ್ಥಿಸುತ್ತಿದ್ದ. ಒಂದು ದಿನ ಅವನ ಹೊಲದ ಅಂಚಿನಲ್ಲಿ ಒಂದು ಹಳೆಯ ಬಾವಿ ಕಂಡುಬಂತು. ಊರಿನವರು “ಇದು ಒಣಗಿದೆ” ಎಂದು ನಿರ್ಲಕ್ಷಿಸಿದರು. ಆದರೆ ರಾಮು ಅದನ್ನು ಸ್ವಚ್ಛಗೊಳಿಸಲು ಆರಂಭಿಸಿದ. ಎರಡು ದಿನ ಶ್ರಮಪಟ್ಟ ನಂತರ ಅಲ್ಲಿ ನೀರು ಹೊರಬಂದಿತು. ಅದರಿಂದ ಅವನ ಹೊಲಕ್ಕೆ ಮಾತ್ರವಲ್ಲ, ಊರಿನ ಹಲವಾರು ಹೊಲಗಳಿಗೆ ನೀರು ಸಿಕ್ಕಿತು. ಆಗ ಊರಿನವರು ಕೇಳಿದರು: “ದೇವರು ನಿನಿಗೆ ನೇರವಾಗಿ ಸಹಾಯ ಮಾಡಿದನಾ?” ರಾಮು ನಗುತ ಹೇಳಿದ: “ದೇವರು ಕೈಯಿಂದ ಬರಲಿಲ್ಲ… ಆದರೆ ಶ್ರಮಿಸುವ ಮನಸ್ಸು ಕೊಟ್ಟ. ಅದೇ ದೊಡ್ಡ ಸಹಾಯ.” ಪಾಠ: ದೇವರು ಸಹಾಯ ಮಾಡುತ್ತಾನೆ… ಆದರೆ ನಮ್ಮ ಕೈಗಳ ಮೂಲಕ.