ShareChat
click to see wallet page
search
#📜ಪ್ರಚಲಿತ ವಿದ್ಯಮಾನ📜 SIR ಮ್ಯಾಪಿಂಗ್ ಮಾಡುವುದರಿಂದ ಮಾತ್ರ ಮತದಾರರ ಹೆಸರು ಸುರಕ್ಷಿತವಾಗುವುದಿಲ್ಲ: ಅಪ್ಸರ್ ಕೊಡ್ಲಿಪೇಟೆ ದಾವಣಗೆರೆ: ಮತದಾರರ ಪಟ್ಟಿಯಲ್ಲಿ ಅರ್ಹ ನಾಗರಿಕರ ಹೆಸರು ಉಳಿಯುವುದು ಕೇವಲ ಆಡಳಿತಾತ್ಮಕ ಪ್ರಕ್ರಿಯೆಯ ವಿಷಯವಲ್ಲ; ಅದು ರಾಜಕೀಯ ಅಸ್ತಿತ್ವ ಮತ್ತು ಸಂವಿಧಾನಾತ್ಮಕ ಮತದಾನದ ಹಕ್ಕಿನ ಪ್ರಶ್ನೆಯಾಗಿದೆ. SIR 2.0 ಪ್ರಕ್ರಿಯೆಯಡಿಯಲ್ಲಿ ನಡೆಯುತ್ತಿರುವ ಎನ್ಯೂಮರೇಷನ್ ಕಾರ್ಯದಲ್ಲಿ ಸರಿಯಾದ ಫಾರ್ಮ್‌ಗಳ ಭರ್ತಿ ಮತ್ತು ಅಗತ್ಯ ದಾಖಲೆಗಳ ಸಲ್ಲಿಕೆ ಅತ್ಯಂತ ಮಹತ್ವದ್ದಾಗಿದೆ. ಕೇವಲ SIR ಮ್ಯಾಪಿಂಗ್ ಮಾಡುವುದರಿಂದ ಮಾತ್ರ ಮತದಾರರ ಹೆಸರು ಸುರಕ್ಷಿತವಾಗುವುದಿಲ್ಲ; ಎನ್ಯೂಮರೇಷನ್ ಫಾರ್ಮ್‌ಗಳ ಸಮರ್ಪಕ ಭರ್ತಿ ಪ್ರಕ್ರಿಯೆಯಲ್ಲಿ ಜಾಗೃತಿ, ತಾಂತ್ರಿಕ ತಿಳುವಳಿಕೆ ಮತ್ತು ಸಮರ್ಪಕ ಹಸ್ತಕ್ಷೇಪ ಅಗತ್ಯವಾಗಿದೆ ಎಂದು ಅಪ್ಸರ್ ಕೊಡ್ಲಿಪೇಟೆ ಅಭಿಪ್ರಾಯಪಟ್ಟರು. ದಾವಣಗೆರೆ ಜಿಲ್ಲೆಯಾದ್ಯಂತ ನೆಲಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿರುವ ವಾಲಂಟಿಯರ್‌ಗಳು ಮತ್ತು ಬೂತ್ ಲೆವೆಲ್ ಸಹಾಯಕರು (BLA)ಗಳಿಗೆ ವಿಡಿಯೋ ಹಾಗೂ PPT ಆಧಾರಿತ ಪ್ರಾಯೋಗಿಕ ಶಿಕ್ಷಣ ಮತ್ತು ತರಬೇತಿ ಕಾರ್ಯಕ್ರಮವನ್ನು ದಾವಣಗೆರೆ ಜಿಲ್ಲಾ ಕಚೇರಿಯಲ್ಲಿ ಆಯೋಜಿಸಲಾಯಿತು. ಈ ಕಾರ್ಯಕ್ರಮದ ಉದ್ದೇಶ SIR 2.0 ಪ್ರಕ್ರಿಯೆಯನ್ನು ತಳಮಟ್ಟದಲ್ಲಿ ಸಮರ್ಪಕವಾಗಿ ಅನುಷ್ಠಾನಗೊಳಿಸುವಂತೆ ಕಾರ್ಯಕರ್ತರನ್ನು ಸಜ್ಜುಗೊಳಿಸುವುದಾಗಿತ್ತು. ಕಾರ್ಯಕ್ರಮಕ್ಕೆ ಮುಖ್ಯ ತರಬೇತುದಾರರಾಗಿ ಭಾಗವಹಿಸಿದ್ದ SDPI ರಾಜ್ಯ ಪ್ರಧಾನ ಕಾರ್ಯದರ್ಶಿ ಅಪ್ಸರ್ ಕೊಡ್ಲಿಪೇಟೆ, SIR 2.0 ಪ್ರಕ್ರಿಯೆಯ ಸಂಪೂರ್ಣ ವಿವರವನ್ನು ವಿವರಿಸಿದರು. ಎನ್ಯೂಮರೇಷನ್ ಫಾರ್ಮ್‌ಗಳನ್ನು ಹೇಗೆ ಸರಿಯಾಗಿ ಭರ್ತಿ ಮಾಡಬೇಕು, ಯಾವ ದಾಖಲೆಗಳು ಕಡ್ಡಾಯ, ಸಾಮಾನ್ಯವಾಗಿ ನಡೆಯುವ ತಪ್ಪುಗಳು ಯಾವುವು, ಸಾರ್ವಜನಿಕರಿಗೆ ಮಾರ್ಗದರ್ಶನ ನೀಡುವ ವಿಧಾನಗಳು ಯಾವುವು ಎಂಬುದರ ಬಗ್ಗೆ ಸಮಗ್ರವಾಗಿ ತರಬೇತಿ ನೀಡಿದರು. ಮತದಾರರ ಪಟ್ಟಿಯಿಂದ ಯಾವುದೇ ಅರ್ಹ ನಾಗರಿಕರು ಹೊರಗುಳಿಯದಂತೆ ಜಾಗೃತಿ ಮೂಡಿಸುವ ಜವಾಬ್ದಾರಿ ಪ್ರತಿಯೊಬ್ಬ ಕಾರ್ಯಕರ್ತರ ಮೇಲಿದೆ ಎಂದು ಅವರು ಒತ್ತಿ ಹೇಳಿದರು. ಮತದಾನ ಹಕ್ಕು ಕೇವಲ ಚುನಾವಣಾ ಹಕ್ಕಲ್ಲ; ಅದು ಪ್ರಜಾಪ್ರಭುತ್ವದ ಅಸ್ತಿತ್ವದ ಮೂಲಭೂತ ಅಂಶವಾಗಿದೆ ಎಂಬುದನ್ನು ಅವರು ನೆನಪಿಸಿದರು. ಈ ತರಬೇತಿ ಶಿಬಿರದಲ್ಲಿ ಶಿವಮೊಗ್ಗ, ಹಾವೇರಿ, ಚಿತ್ರದುರ್ಗ ಹಾಗೂ ದಾವಣಗೆರೆ ಜಿಲ್ಲೆಗಳ ಆಯ್ದ BLA ಗಳು ಭಾಗವಹಿಸಿದರು. ತಮ್ಮ ತಮ್ಮ ಜಿಲ್ಲೆಗಳ ಮಟ್ಟದಲ್ಲಿ ಪ್ರಕ್ರಿಯೆಯನ್ನು ಪರಿಣಾಮಕಾರಿಯಾಗಿ ಕಾರ್ಯಗತಗೊಳಿಸುವ ತಂತ್ರಗಳ ಬಗ್ಗೆ ಚರ್ಚೆ ನಡೆಸಲಾಯಿತು. ಪ್ರಶ್ನೋತ್ತರ ಅಧಿವೇಶನದ ಮೂಲಕ ಭಾಗವಹಿಸಿದವರ ಅನುಮಾನಗಳಿಗೆ ಸ್ಪಷ್ಟನೆ ನೀಡಲಾಯಿತು ಮತ್ತು ನೆಲಮಟ್ಟದ ಅನುಭವಗಳನ್ನು ಹಂಚಿಕೊಳ್ಳಲಾಯಿತು. ಕಾರ್ಯಕ್ರಮದ ಆರಂಭದಲ್ಲಿ ಮೊಹಮ್ಮದ್ ಮೊಹ್ಸಿನ್ ಅವರನ್ನು ಸ್ವಾಗತಿಸಿ ರಾಜ್ಯ ಸಮಿತಿ ಸದಸ್ಯರಾದ ಫಯಾಜ್ ಅರಿಹಂತ್ ಪ್ರಾಸ್ತಾವಿಕವಾಗಿ ಮಾತನಾಡಿದರು. ದಾವಣಗೆರೆ ಜಿಲ್ಲಾ ಅಧ್ಯಕ್ಷ ತಾಹೀರ್ ಹುಸೇನ್ ಸಮಾರೋಪ ಭಾಷಣ ಮಾಡಿ, ಜಿಲ್ಲೆಗಳ ಮಟ್ಟದಲ್ಲಿ ಸಹಾಯ ಕೇಂದ್ರಗಳನ್ನು ಇನ್ನಷ್ಟು ಬಲಪಡಿಸಿ ಪ್ರತಿಯೊಬ್ಬ ಅರ್ಹ ಮತದಾರನಿಗೂ ನ್ಯಾಯ ಸಿಗುವಂತೆ ಸಂಘಟಿತ ಹಾಗೂ ನಿರಂತರ ಪ್ರಯತ್ನಗಳನ್ನು ಮುಂದುವರಿಸಲಾಗುವುದು ಎಂದು ತಿಳಿಸಿದರು. ದಾವಣಗೆರೆ ಜಿಲ್ಲಾ ಸಮಿತಿಯ ಪ್ರಕಟಣೆಯಲ್ಲಿ, ಮತದಾರರ ಹಕ್ಕುಗಳ ರಕ್ಷಣೆಗೆ ಸಂಘಟಿತ ಜಾಗೃತಿ ಅಭಿಯಾನವನ್ನು ಇನ್ನಷ್ಟು ವಿಸ್ತರಿಸಲಾಗುವುದು ಹಾಗೂ SIR 2.0 ಪ್ರಕ್ರಿಯೆಯಲ್ಲಿ ಯಾವುದೇ ತಾಂತ್ರಿಕ ಅಥವಾ ದಾಖಲೆ ಸಂಬಂಧಿತ ಸಮಸ್ಯೆಗಳು ಎದುರಾದರೆ ಸಹಾಯ ಕೇಂದ್ರಗಳ ಮೂಲಕ ಪರಿಹಾರ ಒದಗಿಸಲಾಗುವುದು ಎಂದು ತಿಳಿಸಿದರು. #SIR #mapping #notsecure #voter #names #ApsarKodlipete #malgudiexpress #malgudinews #news #TopNews
📜ಪ್ರಚಲಿತ ವಿದ್ಯಮಾನ📜 - ShareChat