Malgudi Express
ShareChat
click to see wallet page
@news007
news007
Malgudi Express
@news007
Malgudi Express official Page
#📜ಪ್ರಚಲಿತ ವಿದ್ಯಮಾನ📜 ನನಸಾದ ಪೂಜ್ಯ ಸಿದ್ದೇಶ್ವರ ಶ್ರೀಗಳ ಕನಸು: ಎಂ ಬಿ ಪಾಟೀಲ್ ತೀಕೋಟಾದಲ್ಲಿ ಕಂಗೊಳಿಸುತ್ತಿದೆ ಕ್ಯಾಲಿಫೋರ್ನಿಯಾದ ಉತ್ಕೃಷ್ಟ ದ್ರಾಕ್ಷಿ ಬೆಳೆ • ರೈತರಿಗೆ ಉತ್ಕೃಷ್ಟ ದ್ರಾಕ್ಷಿ ತಳಿ ಆರಾ-36 (ARD-36) ಪರಿಚಯ • ತಿಕೋಟಾ ವ್ಯಾಪ್ತಿಯಲ್ಲಿ ಮೊದಲ ಹಂತದಲ್ಲಿ 100 ಎಕರೆಯಲ್ಲಿ ಬೆಳೆ • ಸಾಮಾನ್ಯ ದ್ರಾಕ್ಷಿಗಿಂತ ಮೂರು ಪಟ್ಟು ಅಧಿಕ ದರ - ರೈತರಿಗೆ ಹೆಚ್ಚಿನ ಲಾಭ ವಿಜಯಪುರ: ಒಂದು ಕಾಲದಲ್ಲಿ ಬರದನಾಡು ಎಂಬ ಹಣೆಪಟ್ಟಿ ಕಟ್ಟಿಕೊಂಡಿದ್ದ ವಿಜಯಪುರದ ಬದಲಾವಣೆಗೆ ಕಾರಣವಾದದ್ದು ನೀರಾವರಿ, ಅದಕ್ಕೆ ಸ್ಪೂರ್ತಿ ನೀಡಿದ್ದು ಪೂಜ್ಯ ಸಿದ್ದೇಶ್ವರ ಶ್ರೀಗಳ "ಈ ಭೂಮಿಗೆ ಒಂದು ಬೊಗಸೆ ನೀರು ಕೊಡಿ, ಇದು ಕ್ಯಾಲಿಫೋರ್ನಿಯಾವನ್ನು ಮೀರಿಸುತ್ತದೆ" ಎಂಬ ಆಶಯ ಎಂದು ಬೃಹತ್ ಕೈಗಾರಿಕಾ ಸಚಿವ ಎಂ ಬಿ ಪಾಟೀಲ್ ಹೇಳಿದರು. ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, 2013ರಿಂದ 2018ರ ಅವಧಿಯಲ್ಲಿ ಸಿದ್ದರಾಯ್ಯನವರ ನೇತೃತ್ವದ ಸರ್ಕಾರದಲ್ಲಿ ನಾನು ಜಲಸಂಪನ್ಮೂಲ ಸಚಿವನಾಗಿದ್ದಾಗ ನಮ್ಮ ಜಿಲ್ಲೆಯ ನೀರಾವರಿ ಕನಸು ನನಸಾಯಿತು. ಮುಂದೆ ರೈತರು ಹಲವಾರು ಕೃಷಿ-ತೋಟಗಾರಿಕೆ ಪ್ರಯೋಗಗಳನ್ನು ಮಾಡಿ ಸಮೃದ್ಧವಾಗಿ ಬೆಳೆ ತೆಗೆಯುತ್ತಿದ್ದಾರೆ ಎಂದರು. ಜಿಲ್ಲೆಗೆ ನಾವು ಹಾಕಿಕೊಂಡಿದ್ದ ಅಭಿವೃದ್ಧಿಯ ನೀಲನಕ್ಷೆ "ಜಲ - ವೃಕ್ಷ - ಶಿಕ್ಷಣ" ಕ್ರಾಂತಿಯಿಂದ ಮುಂದುವರಿದು ಇದೀಗ "ಕ್ಷೀರ ಕ್ರಾಂತಿ" ಹಾಗೂ "ಉದ್ಯೋಗ ಕ್ರಾಂತಿ"ಗೆ ಮುನ್ನುಡಿ ಬರೆಯುತ್ತಿದ್ದೇವೆ ಎಂದರು. ಅಂತೆಯೇ ನಮ್ಮ ಜನರ ಸ್ವಾವಲಂಬಿ ಬದುಕಿಗಾಗಿ ಈಗಾಗಲೇ ಹೆಸರಾಂತ ಅಕ್ಷಯಕಲ್ಪ ಹಾಗೂ ಕೃಷಿಕಲ್ಪ ಸಂಸ್ಥೆಗಳ ಸಹಯೋಗದಲ್ಲಿ ಕ್ಷೀರ ಪೈಲಟ್ ಯೋಜನೆಗನ್ನು ಜಾರಿಗೊಳಿಸುತ್ತಿದ್ದು, ಹೈನುಗಾರಿಕೆಯಲ್ಲಿ ನಮ್ಮ ಜನರಿಗೆ ತರಬೇತಿ, ಮಾಡೆಲ್ ಫಾರ್ಮ್, ಇತ್ಯಾದಿ ಕಲ್ಪಿಸಲಾಗುತ್ತಿದೆ ಎಂದರು. ಮತ್ತೊಂದು ವಿಶೇಷವಾದ ಯೋಜನೆ - ಮಹಾರಾಷ್ಟ್ರದ ನಾಸಿಕ್ ನ ಸಹ್ಯಾದ್ರಿ ಫಾರ್ಮ್ ಅವರ ಸಹಯೋಗದಲ್ಲಿ FPOಗಳ ಮೂಲಕ ನಮ್ಮ ರೈತರಿಗೆ ಸಂಘಟಿತ ಮಾರ್ಗದಲ್ಲಿ ಅಗತ್ಯ ತರಬೇತಿ ಹಾಗೂ ರಫ್ತು ಕೇಂದ್ರಿತ ಬೆಳೆಗಳನ್ನು ಬೆಳೆಯಲು ಉತ್ತೇಜಿಸಲಾಗುತ್ತಿದೆ ಎಂದರು. ಈ ಬೆಳವಣಿಗೆಯಡಿ ನಮ್ಮ ತೀಕೋಟಾದ ಕೃಷ್ಣವೇಣಿ FPO ಸಹ್ಯಾದ್ರಿ ಫಾರ್ಮ್ ಸಹಯೋಗದಲ್ಲಿ ಕ್ಯಾಲಿಫೋರ್ನಿಯಾದಲ್ಲಿ ಬೆಳೆಯುವ ಉತ್ಕೃಷ್ಟ ದರ್ಜೆಯ ಆರಾ-36 ತಳಿಯ ದ್ರಾಕ್ಷಿಯನ್ನು ಸುಮಾರು 100 ಎಕರೆ ಪ್ರದೇಶದಲ್ಲಿ ಬೆಳೆದು, ಉತ್ತಮ ಇಳುವರಿ ಪಡೆದಿದ್ದಾರೆ. ತಮ್ಮ ಬೆಳೆಯನ್ನು ಪೂಜ್ಯ ಸಿದ್ದೇಶ್ವರ ಶ್ರೀಗಳಿಗೆ ಅರ್ಪಿಸಿ ಗೌರವ ಸೂಚಿಸಿದ್ದಾರೆ. ಅವರು ಇಂದು ನನ್ನನ್ನು ಭೇಟಿ ಮಾಡಿ ಹಣ್ಣು ತಿನ್ನಿಸಿ ತಮ್ಮ ಸಂತಸ ಹಂಚಿಕೊಂಡರು ಎಂದರು. ಈ ದ್ರಾಕ್ಷಿ ತಳಿಯ ಬೆಲೆ ಸಾಮಾನ್ಯ ದ್ರಾಕ್ಷಿಗಿಂತ ಮೂರು ಪಟ್ಟು ಹೆಚ್ಚಿದ್ದು, ನಮ್ಮ ರೈತರಿಗೆ ಬಂಪರ್ ಲಾಭ ತರುವಲ್ಲಿ ಅನುಮಾನವಿಲ್ಲ. ರಫ್ತಿಗೂ ತುಂಬಾ ಬೇಡಿಕೆಯಿದೆ. ಮುಂದಿನ ದಿನಗಳಲ್ಲಿ ಇದನ್ನು ಒಂದು ಸಾವಿರ ಎಕರೆ ಪ್ರದೇಶಕ್ಕೆ ವಿಸ್ತರಣೆ ಮಾಡಲಿದ್ದಾರೆ. ಇದಕ್ಕೆ ಮುಖ್ಯವಾಗಿ ಕೃಷ್ಣವೇಣಿ FPOನ ಸಂದೀಪ ಪಾಟೀಲ, ಸಚಿನ ಪಾಟೀಲ ಹಡಲಸಂಗ ಇವರು ತೋಟಗಾರಿಕೆ ಪದವಿಧರರಾಗಿದ್ದು, ಸ್ಥಳೀಯ ರೈತರ ತಂಡವನ್ನು ಕಟ್ಟಿ ಉತ್ಸಾಹದಿಂದ ಈ ಕಾರ್ಯಕ್ಕೆ ಮುಂದಾಗಿರುವುದು ನಮ್ಮ ರೈತರಿಗೆ ಉತ್ತಮ ಮಾರ್ಗದರ್ಶನ ದೊರೆಯಲಿದೆ ಎಂದರು. ಈಗಾಗಲೇ ನಮ್ಮ ಬಿ.ಎಲ್.ಡಿ.ಇ ತಂಡ ನಾಸಿಕ್ ನ ಸಹ್ಯಾದ್ರಿ ಫಾರ್ಮ್ ಗೆ ಭೇಟಿ ನೀಡಿ, ಶ್ರೀ ವಿಲಾಸರಾವ್ ಶಿಂಧೆ ಅವರೊಂದಿಗೆ ಮಾತುಕತೆ ನಡೆಸಿ, ನಮ್ಮ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಇಲ್ಲಿಯೂ ಅಗತ್ಯ ಸೌಲಭ್ಯಗಳನ್ನು ನಿರ್ಮಾಣ ಮಾಡಲು ಕೋರಿದ್ದೇವೆ, ಅವರೂ ಸಹ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದರು. ಈ ಕಾರ್ಯದ ಮೂಲಕ ಶ್ರೀ ಸಿದ್ದೇಶ್ವರ ಶ್ರೀಗಳ ಕನಸು ನನಸಾಗಿದೆ. ಕ್ಯಾಲಿಪೋರ್ನಿಯಾದಲ್ಲಿ ಬೆಳೆಯುವ ಉತ್ಕೃಷ್ಟದರ್ಜೆಯ ಆರಾ-36 ತಳಿಯ ದ್ರಾಕ್ಷಿಯ ಬೆಳೆ ಇಲ್ಲಿ ಕಂಗೊಳ್ಳಿಸುತ್ತಿದೆ ಎಂದರು. ಪತ್ರಿಕಾಗೋಷ್ಟಿಯಲ್ಲಿ ರೈತರಾದ ಈರಪ್ಪ ಬಗಲಿ, ಪಿಂಟು ಕೊಣ್ಣೂರ, ಅಶೋಕ ಬಾಬರ, ಕೃಷ್ಣವೇಣಿ FPO ಪದಾಧಿಕಾರಿ ಸಂದೀಪ ಬಬನ ಪಾಟೀಲ, ಸಚಿನ ಪಾಟೀಲ ಹಾಜರಿದ್ದರು. #dream #SiddeshwaraSri #reality #MBPatil #malgudiexpress #malgudinews #news #TopNews
📜ಪ್ರಚಲಿತ ವಿದ್ಯಮಾನ📜 - 0 నoలv EXPRESS ಪೂಜ್ಯ  సిద్దిబ్బం ನನಸಾದ ಶೀಗಳ ಕನಸು: ಎಂ ಬಿ ಪಾಟೀಲ್ HTTPS:IIMALGUDIEXPRESS.CO.IN/ 0 నoలv EXPRESS ಪೂಜ್ಯ  సిద్దిబ్బం ನನಸಾದ ಶೀಗಳ ಕನಸು: ಎಂ ಬಿ ಪಾಟೀಲ್ HTTPS:IIMALGUDIEXPRESS.CO.IN/ - ShareChat
#📜ಪ್ರಚಲಿತ ವಿದ್ಯಮಾನ📜 ಯಾವುದೇ ಧರ್ಮವೂ ಹಿಂಸೆಯನ್ನು ಬೋಧಿಸುವುದಿಲ್ಲ: ಸಿದ್ದರಾಮಯ್ಯ ಬೆಂಗಳೂರು: ಹಜ್ ಯಾತ್ರಿಗರು ಮಾಡುವ ಪ್ರಾರ್ಥನೆಯಲ್ಲಿ ರಾಜ್ಯದ ಒಳಿತನ್ನೂ ಬಯಸಿರಿ ಎಂದು ಕೋರುತ್ತಾ, ಹಜ್ ಯಾತ್ರೆಯು ಸುಖಕರವಾಗಿರಲೆಂದು ಸಿಎಂ ಸಿದ್ದರಾಮಯ್ಯ ಹಾರೈಸಿದರು. ಕರ್ನಾಟಕ ಹಜ್ ಸಮಿತಿ ಆಯೋಜಿಸಿದ್ದ "ಹಜ್ -2026" ಹಜ್ ಯಾತ್ರಿಕರ ವಿಮಾನಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಇಸ್ಲಾಂ ಧರ್ಮದ ಪ್ರಮುಖ ಐದು ಆಧಾರ ಸ್ತಂಭಗಳಲ್ಲಿ ಹಜ್ ಆಚರಣೆಯೂ ಒಂದಾಗಿದ್ದು, ಪ್ರತಿಯೊಬ್ಬ ಮುಸಲ್ಮಾನನೂ ತನ್ನ ಜೀವಿತಾವಧಿಯಲ್ಲಿ ಒಮ್ಮೆಯಾದರೂ ಹಜ್ ಯಾತ್ರೆಯನ್ನು ಕೈಗೊಳ್ಳಲೇಬೇಕಾಗಿದೆ ಎಂದರು. ಹಜ್ ಯಾತ್ರೆ ಮಾಡುವುದರಿಂದ ಮನುಷ್ಯನ ಹಿಂದಿನ ಎಲ್ಲಾ ಪಾಪಗಳು ಕ್ಷಮಿಸಲ್ಪಡುತ್ತವೆ ಮತ್ತು ಆತ ಮರುಜನ್ಮ ಪಡೆದ ಮಗುವಿನಂತೆ ಪರಿಶುದ್ಧನಾಗುತ್ತಾನೆ ಎಂಬ ನಂಬಿಕೆಯಿದೆ. ಯಾರಾದರೂ ಒಬ್ಬ ಮನುಷ್ಯನನ್ನು (ಅಪರಾಧ ಮಾಡದಿದ್ದರೂ) ಕೊಂದರೆ, ಅವನು ಇಡೀ ಮಾನವಕುಲವನ್ನೇ ಕೊಂದಂತೆ; ಮತ್ತು ಯಾರಾದರೂ ಒಂದು ಜೀವವನ್ನು ಉಳಿಸಿದರೆ, ಅವನು ಇಡೀ ಮಾನವಕುಲವನ್ನೇ ಉಳಿಸಿದಂತೆ ಎಂದು ಜೀವದ ಬೆಲೆಯ ಬಗ್ಗೆ ಕುರಾನ್ ನೀಡುವ ಅತ್ಯುನ್ನತ ಸಂದೇಶವಾಗಿದೆ ಎಂದರು. ಪ್ರತಿಯೊಬ್ಬ ಹಜ್ ಯಾತ್ರಿಗನು ನಿಷ್ಕಲ್ಮಶ ಮನದಿಂದ ಯಾತ್ರೆ ಕೈಗೊಳ್ಳಬೇಕು. ಯಾತ್ರೆಯ ಸಂದರ್ಭದಲ್ಲಿ ಮಾಡುವ ಪ್ರಾರ್ಥನೆಯಲ್ಲಿ ಸರ್ಕಾರದ ಒಳಿತನ್ನೂ ಬಯಸಿರಿ ಎಂದು ಕೋರಿದರು. ಯಾವುದೇ ಧರ್ಮವೂ ಹಿಂಸೆಯನ್ನು ಬೋಧಿಸುವುದಿಲ್ಲ. ಆದರೆ ಮಾನವನು ಪರಸ್ಪರ ದ್ವೇಷವನ್ನು ಸಾಧಿಸುತ್ತಾನೆ. ಮಾನವೀಯತೆಯೇ ನಿಜವಾದ ಧರ್ಮ. ಪರರ ಒಳಿತನ್ನು ಬಯಸುವವರನ್ನು ದೇವರು ರಕ್ಷಿಸುತ್ತಾನೆ. ತನ್ನ ಧರ್ಮವನ್ನು ಪ್ರೀತಿಸಿ, ಆದರೆ ಇತರೆ ಧರ್ಮದ ಬಗ್ಗೆ ಸಹಿಷ್ಣುತೆ ಬೆಳೆಸಿಕೊಳ್ಳಬೇಕು. ಭ್ರಾತೃತ್ವ, ಸಮಾನತೆ ಮತ್ತು ಸೌಹಾರ್ದತೆಗಳೇ ನಮ್ಮ ಸಂವಿಧಾನದ ಮೂಲತತ್ವವಾಗಿದೆ ಎಂದರು. 2026-27ನೇ ಸಾಲಿನ ಆಯವ್ಯಯದಲ್ಲಿ ಕಲಬುರಗಿ ಮತ್ತು ಹುಬ್ಬಳ್ಳಿಯಲ್ಲಿ ಹಜ್ ಯಾತ್ರಾರ್ಥಿಗಳು ಹಾಗೂ ಅವರ ಸಂಬಂಧಿಕರಿಗೆ ಸೌಲಭ್ಯ ಮತ್ತು ಸೌಕರ್ಯಗಳನ್ನು ನೀಡಲು ಅನುಕೂಲವಾಗುವಂತೆ ಹಜ್ ಭವನಗಳ ನಿರ್ಮಾಣ ಮಾಡಲಾಗುತ್ತದೆ. ನಮ್ಮ ಸರ್ಕಾರ ಅಲ್ಪಸಂಖ್ಯಾತರ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುತ್ತದೆ ಎಂದರು. #religion #teaches #haj #violence #Siddaramaiah #malgudiexpress #malgudinews #news #TopNews
📜ಪ್ರಚಲಿತ ವಿದ್ಯಮಾನ📜 - ~8 ಕುಲುವೆ ತತ್ತೂರಿಯಲ್ಲ . ನಲನಿ EXPRESS ಯಾವುದೇ ಧರ್ಮವೂ ಹಿಂಸೆಯನ್ನು ಬೋಧಿಸುವದಿಲ್ಲ: ಸಿದ್ದರಾಮಯ್ಯ ಸಿದ್ದರಾಮಯ್ಯ , ಮುಖ್ಯಮಂತ್ರಿ ~8 ಕುಲುವೆ ತತ್ತೂರಿಯಲ್ಲ . ನಲನಿ EXPRESS ಯಾವುದೇ ಧರ್ಮವೂ ಹಿಂಸೆಯನ್ನು ಬೋಧಿಸುವದಿಲ್ಲ: ಸಿದ್ದರಾಮಯ್ಯ ಸಿದ್ದರಾಮಯ್ಯ , ಮುಖ್ಯಮಂತ್ರಿ - ShareChat
#📜ಪ್ರಚಲಿತ ವಿದ್ಯಮಾನ📜 ತಮಿಳುನಾಡಿನ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ದಾಖಲಿಸಿದ ವಿಜಯ್ ದಳಪತಿ #tamilnadupolitics #assembly #AssemblyElection #vijaythalapathy #ambedkar #malgudiexpress #malgudinews #news #TopNews | Subscribe | Comment | Like | Share |
📜ಪ್ರಚಲಿತ ವಿದ್ಯಮಾನ📜 - ShareChat
00:22
#📜ಪ್ರಚಲಿತ ವಿದ್ಯಮಾನ📜 ದಾಖಲೆಯ ಮಟ್ಟಕ್ಕೆ ಕುಸಿದ ಭಾರತೀಯ ರೂಪಾಯಿ ಮೌಲ್ಯ! ರೂಪಾಯಿಗೆ ‘ಡಾಲರ್’ ಬಿಸಿ: ದೆಹಲಿ: ಭಾರತೀಯ ಆರ್ಥಿಕತೆಯ ಪಾಲಿಗೆ ಇಂದು ಆತಂಕಕಾರಿ ದಿನ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅಮೆರಿಕದ ಡಾಲರ್ ಎದುರು ಭಾರತೀಯ ರೂಪಾಯಿ ಮೌಲ್ಯ ಹಿಂದೆಂದೂ ಕಾಣದ ರೀತಿಯಲ್ಲಿ ₹95.03 ರ ದಾಖಲೆಯ ಮಟ್ಟಕ್ಕೆ ಕುಸಿತ ಕಂಡಿದೆ. ಇಂದು 11 ಪೈಸೆ ಕುಸಿತದೊಂದಿಗೆ ದಿನ ಕರಾಳವಾಗಿ ಮಾರ್ಪಟ್ಟಿತು. ಸತತ ಏರಿಳಿತಗಳನ್ನು ಕಾಣುತ್ತಿದ್ದ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಇಂದು ರೂಪಾಯಿ ದೊಡ್ಡ ಮಟ್ಟದ ಹೊಡೆತ ಅನುಭವಿಸಿದೆ. ಈ ಕುಸಿತ ಸಾಮಾನ್ಯ ಜನರಿಂದ ಹಿಡಿದು ದೊಡ್ಡ ಉದ್ಯಮಿಗಳವರೆಗೆ ಎಲ್ಲರಲ್ಲೂ ನಡುಕ ಹುಟ್ಟಿಸಿದೆ. ಕುಸಿತಕ್ಕೆ ಪ್ರಮುಖ ಕಾರಣಗಳೇನು?: ತಜ್ಞರ ವಿಶ್ಲೇಷಣೆಯ ಪ್ರಕಾರ, ರೂಪಾಯಿ ಮೌಲ್ಯ ಇಷ್ಟು ಕೆಳಮಟ್ಟಕ್ಕೆ ಇಳಿಯಲು ಈ ಕೆಳಗಿನ ಅಂಶಗಳು ಪ್ರಮುಖವಾಗಿವೆ: ಕಚ್ಚಾ ತೈಲ ಬೆಲೆ ಏರಿಕೆ: ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್‌ಗೆ $120 ರ ಗಡಿ ದಾಟಿರುವುದು ಭಾರತದ ಮೇಲೆ ಒತ್ತಡ ಹೇರಿದೆ. ಭಾರತ ತನ್ನ ತೈಲ ಅವಶ್ಯಕತೆಗಾಗಿ ಹೆಚ್ಚಿನ ಡಾಲರ್ ವ್ಯಯಿಸುತ್ತಿರುವುದು ರೂಪಾಯಿಯನ್ನು ದುರ್ಬಲಗೊಳಿಸಿದೆ. ಹೂಡಿಕೆದಾರರ ಹಿಂತೆಗೆತ: ಜಾಗತಿಕ ಅನಿಶ್ಚಿತತೆಯ ಹಿನ್ನೆಲೆಯಲ್ಲಿ ವಿದೇಶಿ ಹೂಡಿಕೆದಾರರು (FII) ಭಾರತೀಯ ಶೇರು ಮಾರುಕಟ್ಟೆಯಿಂದ ತಮ್ಮ ಹಣವನ್ನು ಹಿಂಪಡೆಯುತ್ತಿದ್ದಾರೆ. ಏಪ್ರಿಲ್ ತಿಂಗಳೊಂದರಲ್ಲೇ ಸಾವಿರಾರು ಕೋಟಿ ರೂಪಾಯಿ ಹೂಡಿಕೆ ಹೊರಹೋಗಿದೆ. ಅಮೆರಿಕದ ಫೆಡರಲ್ ರಿಸರ್ವ್ ನೀತಿ: ಅಮೆರಿಕ ತನ್ನ ಬಡ್ಡಿದರಗಳನ್ನು ಹೆಚ್ಚಿಸಿರುವುದು ಹೂಡಿಕೆದಾರರನ್ನು ಡಾಲರ್ ಕಡೆಗೆ ಆಕರ್ಷಿಸುತ್ತಿದೆ, ಇದರಿಂದಾಗಿ ಜಾಗತಿಕವಾಗಿ ಡಾಲರ್ ಬಲಿಷ್ಠವಾಗುತ್ತಿದೆ. ಸಾಮಾನ್ಯ ಜನರ ಮೇಲೆ ಬೀರುವ ಪ್ರಭಾವ: ರೂಪಾಯಿ ಮೌಲ್ಯ ಕುಸಿತ ಕೇವಲ ಅಂಕಿ-ಅಂಶಗಳ ಆಟವಲ್ಲ, ಇದು ನೇರವಾಗಿ ನಿಮ್ಮ ಜೇಬಿನ ಮೇಲೆ ಪರಿಣಾಮ ಬೀರುತ್ತದೆ: ದುಬಾರಿಯಾಗಲಿದೆ ಆಮದು: ಎಲೆಕ್ಟ್ರಾನಿಕ್ ವಸ್ತುಗಳು, ಮೊಬೈಲ್ ಫೋನ್ ಮತ್ತು ಲ್ಯಾಪ್‌ಟಾಪ್‌ಗಳ ಬೆಲೆ ಏರಿಕೆಯಾಗುವ ಸಾಧ್ಯತೆಯಿದೆ. ಇಂಧನ ದರ ಏರಿಕೆ: ತೈಲ ಕಂಪನಿಗಳು ಹೆಚ್ಚಿನ ಹಣ ನೀಡಿ ಕಚ್ಚಾ ತೈಲ ಖರೀದಿಸಬೇಕಾಗಿರುವುದರಿಂದ, ಮುಂದಿನ ದಿನಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರಗಳು ಮತ್ತಷ್ಟು ಹೆಚ್ಚಾಗಬಹುದು. ವಿದೇಶಿ ಶಿಕ್ಷಣ ಮತ್ತು ಪ್ರವಾಸ: ವಿದೇಶದಲ್ಲಿ ಓದುತ್ತಿರುವ ವಿದ್ಯಾರ್ಥಿಗಳ ಪೋಷಕರಿಗೆ ಹೆಚ್ಚಿನ ಹೊರೆ ಬೀಳಲಿದೆ. ಹಾಗೆಯೇ ವಿದೇಶಿ ಪ್ರವಾಸದ ಕನಸು ಕಾಣುತ್ತಿರುವವರು ಹೆಚ್ಚಿನ ಹಣ ವ್ಯಯಿಸಬೇಕಾಗುತ್ತದೆ. ಆರ್‌ಬಿಐ (RBI) ಮುಂದಿನ ಹೆಜ್ಜೆ ಏನು?: ರೂಪಾಯಿಯ ಮೌಲ್ಯ ಅತಿಯಾಗಿ ಕುಸಿಯದಂತೆ ತಡೆಯಲು ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ವಿದೇಶಿ ವಿನಿಮಯ ಮೀಸಲು ನಿಧಿಯನ್ನು ಬಳಸುವ ಮೂಲಕ ಮಾರುಕಟ್ಟೆಯಲ್ಲಿ ಮಧ್ಯಪ್ರವೇಶಿಸುವ ಸಾಧ್ಯತೆಯಿದೆ. ಆದರೆ, ಜಾಗತಿಕ ಮಾರುಕಟ್ಟೆಯ ಬಿರುಗಾಳಿಯ ಮುಂದೆ ಈ ಪ್ರಯತ್ನಗಳು ಎಷ್ಟು ಯಶಸ್ವಿಯಾಗುತ್ತವೆ ಎಂಬುದು ಕಾದು ನೋಡಬೇಕಿದೆ. ರೂಪಾಯಿ ಈ ಕುಸಿತ ಆಮದುದಾರರಿಗೆ ಶಾಪವಾದರೆ, ರಫ್ತುದಾರರಿಗೆ (ವಿಶೇಷವಾಗಿ ಐಟಿ ಕಂಪನಿಗಳಿಗೆ) ವರವಾಗಲಿದೆ. ಆದರೆ ಒಟ್ಟಾರೆಯಾಗಿ ಹಣದುಬ್ಬರ ಏರಿಕೆಯ ಭೀತಿ ಇರುವುದರಿಂದ ಸರ್ಕಾರ ಮತ್ತು ಆರ್‌ಬಿಐ ತುರ್ತು ಕ್ರಮ ಕೈಗೊಳ್ಳುವುದು ಅನಿವಾರ್ಯವಾಗಿದೆ. ಅಂದಹಾಗೆ ಮೋದಿಯವರು ಪ್ರಧಾನಿಯಾದರೆ 100 ರೂಪಾಯಿಗೆ 3 ಡಾಲರ್‌ ಆಗುವ ದಿನ ಬರುತ್ತವೆ ಎಂದವರು ಕಾಣೆಯಾಗಿದ್ದಾರೆ. ಜೊತೆಗೆ, ಈ ವಿಷಯವನ್ನು ದೇಶದ ಜನ ಕೂಡ ಮರೆತು ದರ ಏರಿಕೆಯ ಬರೆಯನ್ನು ಸುಮ್ಮನೆ ಅನುಭವಿಸುತ್ತಿದ್ದಾರೆ. #value #Indian #rupee #fallen #record #low #malgudiexpress #malgudinews #news #TopNews
📜ಪ್ರಚಲಿತ ವಿದ್ಯಮಾನ📜 - 0 ನ೦ಬನಿ 9சல oo வEXPRESS ರೂಪಾಯಿ ಮೌಲ್ತ ದಾಖಲೆಯ ಕುಸಿತ! ಮಟ್ಟಕ್ಕೆ ಕುಸಿದ ದಾಖಲೆಯ ಭಾರತೀಯ ರೂಪಾಯಿ $ USD 3305 INR < ಮೌಲ್ಯ * 795.33 ಕ್ಕೆ ತಲುಪಿದ ರೂಪಾಲಿ ಆಮದುವಸುಗಳ ಬೆಲೆಏರಿಕೆ ಬೀತಿ HTTPS:IIMALGUDIEXPRESS.CO.INI 0 ನ೦ಬನಿ 9சல oo வEXPRESS ರೂಪಾಯಿ ಮೌಲ್ತ ದಾಖಲೆಯ ಕುಸಿತ! ಮಟ್ಟಕ್ಕೆ ಕುಸಿದ ದಾಖಲೆಯ ಭಾರತೀಯ ರೂಪಾಯಿ $ USD 3305 INR < ಮೌಲ್ಯ * 795.33 ಕ್ಕೆ ತಲುಪಿದ ರೂಪಾಲಿ ಆಮದುವಸುಗಳ ಬೆಲೆಏರಿಕೆ ಬೀತಿ HTTPS:IIMALGUDIEXPRESS.CO.INI - ShareChat
#📜ಪ್ರಚಲಿತ ವಿದ್ಯಮಾನ📜 #📢ಪಂಚ ರಾಜ್ಯ ಚುನಾವಣಾ ಫಲಿತಾಂಶ; ಎಲ್ಲಿ ಹೇಗಿದೆ ಸ್ಥಿತಿ?🔴 ಬಿಜೆಪಿಗೆ ಅಭೂತಪೂರ್ವ ಗೆಲುವು, ಪ್ರಧಾನಿ ನರೇಂದ್ರ ಮೋದಿ ಸರ್ಕಾರಕ್ಕೆ ಜನರ ಮೆಚ್ಚುಗೆ: ಡಾ.ಕೆ.ಸುಧಾಕರ್ ಚಿಕ್ಕಬಳ್ಳಾಪುರ: ಪಂಚರಾಜ್ಯಗಳ ಚುನಾವಣೆಯಲ್ಲಿ ನಾಲ್ಕು ರಾಜ್ಯಗಳಲ್ಲಿ ಬಿಜೆಪಿಗೆ ಅಭೂತಪೂರ್ವ ಗೆಲುವು ದೊರೆತಿದೆ. ಇದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರದ ಅಭಿವೃದ್ಧಿ ಕಾರ್ಯಕ್ಕೆ ಜನ ನೀಡಿರುವ ಮೆಚ್ಚುಗೆ ಎಂದು ಸಂಸದ ಡಾ.ಕೆ.ಸುಧಾಕರ್ ಹೇಳಿದ್ದಾರೆ. ಅಸ್ಸಾಂ, ಪಶ್ಚಿಮ ಬಂಗಾಳ, ತಮಿಳುನಾಡು, ಪುದುಚೇರಿ ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್ ಡಿಎ ಕೂಟಕ್ಕೆ ದೊರೆತಿರುವ ಭರ್ಜರಿ ಜಯ ಪ್ರಧಾನಿ ನರೇಂದ್ರ ಮೋದಿಯವರ ಅಭಿವೃದ್ಧಿ ಕಾರ್ಯವನ್ನು ಜನ ಮೆಚ್ಚಿರುವ ಸಂಕೇತ. ಕಳೆದ‌ ಲೋಕಸಭಾ ಚುನಾವಣೆಯಿಂದಲೇ ಇಂಡಿ ಕೂಟವನ್ನು ರಚಿಸಿಕೊಂಡ ಕಾಂಗ್ರೆಸ್ ಹಾಗೂ ಮಿತ್ರ ಪಕ್ಷಗಳು ಬಿಜೆಪಿಯ ಕಡೆಗಿನ ಜನರ ಒಲವನ್ನು ಒಡೆಯಲು ನೋಡಿದ್ದವು. ಆದರೆ ಇಂಡಿ ಕೂಟ ಎನ್ನುವುದೇ ಅತಿ ದೊಡ್ಡ ವಿಫಲ ಹೆಜ್ಜೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ ಎಂದು ಅವರು ಹೇಳಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿಯವರ ಟಿಎಂಸಿಯ ದುರಾಡಳಿತ, ಕೋಮು ರಾಜಕಾರಣ, ಗೂಂಡಾಗಿರಿ, ಕೈಗಾರಿಕಾ ವಿರೋಧಿ ನೀತಿಗಳು, ಬಾಂಗ್ಲಾದ ಅಕ್ರಮ ವಲಸಿಗರ ಹಿತ ಕಾಯುವ ನೀತಿಗಳಿಂದ ಬೇಸತ್ತ ಜನರು ಎನ್ ಡಿಎ ಗೆ ಆಶೀರ್ವದಿಸಿ ಟಿಎಂಸಿಯನ್ನು ಕಿತ್ತೊಗೆದಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ದೀದಿ ಹೇಳಿದ್ದೇ ನಡೆಯುತ್ತದೆ ಎಂಬ ಸರ್ವಾಧಿಕಾರಕ್ಕೆ ಈ ಮೂಲಕ ಬಿಜೆಪಿ ಅಂತ್ಯ ಹಾಡಿದೆ. ಪಶ್ಚಿಮ ಬಂಗಾಳದ ಇತಿಹಾಸವೇ ನೆನಪಿಟ್ಟುಕೊಳ್ಳುವಂತಹ ಮ್ಯಾಜಿಕ್ ಅನ್ನು ಬಿಜೆಪಿ ನೇತೃತ್ವದ ಎನ್ ಡಿಎ ಮಾಡಿದೆ. ಇನ್ನು ಮುಂದೆ ಬಿಜೆಪಿ ಆಡಳಿತದ ಉಳಿದ ರಾಜ್ಯಗಳಂತೆ ಪಶ್ಚಿಮ ಬಂಗಾಳ ಕೂಡ ವಿಕಸಿತದ ಹಾದಿಯಲ್ಲಿ ಸರಾಗವಾಗಿ ಸಾಗಲಿದೆ ಎಂದಿದ್ದಾರೆ. ತಮಿಳುನಾಡಿನಲ್ಲಿ ಕಾಂಗ್ರೆಸ್ ನ ಗೆಳೆಯರಾದ ಎಂ.ಕೆ.ಸ್ಟಾಲಿನ್ ತಂಡಕ್ಕೆ ತೀವ್ರ ಮುಖಭಂಗವಾಗಿದ್ದು, ಎಐಎಡಿಎಂಕೆ ನೇತೃತ್ವದ ಎನ್ ಡಿಎ ಕೂಟಕ್ಕೆ ಅಭೂತಪೂರ್ವ ವಿಜಯ ಸಿಕ್ಕಿದೆ. ಅಸ್ಸಾಂ ಹಾಗೂ ಪುದುಚೇರಿಯಲ್ಲೂ ಕಮಲ ಅರಳಿದೆ. ಗ್ಯಾರಂಟಿ ಹೆಸರು ಹೇಳಿಕೊಂಡು ಅಭಿವೃದ್ಧಿ ಮಾಡದೆ ಲೂಟಿಯಲ್ಲಿ ನಿರತವಾಗಿರುವ ಕಾಂಗ್ರೆಸ್ ಸರ್ಕಾರಕ್ಕೆ ಇದು ದೊಡ್ಡ ಪಾಠವಾಗಲಿದೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಇದೇ ರೀತಿಯ ಫಲಿತಾಂಶ ಬಂದು ಕಾಂಗ್ರೆಸ್ ನ ಲಜ್ಜೆಗೆಟ್ಟ ಜನವಿರೋಧಿ ಆಡಳಿತ‌ ಕೊನೆಯಾಗಲಿದೆ. ಅಧಿಕಾರದ ಮದದಲ್ಲಿ ಜನಹಿತ ಮರೆತರೆ ಏನಾಗುತ್ತದೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ. ಇದನ್ನು‌ ನೋಡಿಯಾದರೂ ಕಾಂಗ್ರೆಸ್ ಪಾಠ ಕಲಿಯಬೇಕಿದೆ ಎಂದಿದ್ದಾರೆ. ಬಿಜೆಪಿ ಸೇರಿದಂತೆ ಎನ್ ಡಿಎ ಕೂಟಕ್ಕೆ ಬೆಂಬಲ‌ ನೀಡಿ ಹಾರೈಸಿದ ಮತದಾರ ಬಂಧುಗಳಿಗೆ ನಾನು ಅನಂತ ಕೃತಜ್ಞತೆ ಸಲ್ಲಿಸುತ್ತೇನೆ. ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವರಾದ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ನಿತಿನ್ ನಬಿನ್ ಹಾಗೂ ಕೋಟ್ಯಂತರ ಕಾರ್ಯಕರ್ತರಿಗೆ ಹಾರ್ದಿಕ ಅಭಿನಂದನೆಗಳು ಎಂದಿದ್ದಾರೆ. #Unprecedented #victory #BJP #people #appreciation #Modi #govt #KSudhakar #WestBengal #Assam #Puducherry #malgudiexpress #malgudinews #news #TopNews
📜ಪ್ರಚಲಿತ ವಿದ್ಯಮಾನ📜 - ಶ నoలv EXPRESS ಬಿಜೆಪಿಗೆ ಅಭೂತಪೂರ್ವ ಗೆಲುವು; ಪ್ರಧಾನಿ ನರೇಂದ್ರ ಮೋದಿ ಸರ್ಕಾರಕ್ಕೆ ಜನರ మిజ్బుగి: డాశి సుధాశిరా HTTPS:IIMALGUDIEXPRESS.CO.IN/ ಶ నoలv EXPRESS ಬಿಜೆಪಿಗೆ ಅಭೂತಪೂರ್ವ ಗೆಲುವು; ಪ್ರಧಾನಿ ನರೇಂದ್ರ ಮೋದಿ ಸರ್ಕಾರಕ್ಕೆ ಜನರ మిజ్బుగి: డాశి సుధాశిరా HTTPS:IIMALGUDIEXPRESS.CO.IN/ - ShareChat
#🔴ಮೊದಲ ಚುನಾವಣೆಯಲ್ಲೇ CM ಆಗ್ತಾರಾ ದಳಪತಿ; ಫ್ಯಾನ್ಸ್ ಗೆ ಸಿಹಿ ಸುದ್ದಿ🤩
🔴ಮೊದಲ ಚುನಾವಣೆಯಲ್ಲೇ CM ಆಗ್ತಾರಾ ದಳಪತಿ; ಫ್ಯಾನ್ಸ್ ಗೆ ಸಿಹಿ ಸುದ್ದಿ🤩 - ನೇರ ಫಲಿತಾಂಶಗಳು 2026 ಪುದುಚೆರಿ చెరిమ బంగాళ ಕೇರಳ శెమిబనాడు ಅನ೦೦ 2026 2021 2016 గెలువు మొన్నడి ಬಹುಮತ Share 0+107 118 (-11) TVK 0 + 65 8 (53) ಎನ್ಡಿಎ 0 + 62 118 (-56) ಡಿಎಂಕೆ + 234 பபு 118 ಡಿಎಂಕೆ TVK ఎసాదిఎ ನೇರ ಫಲಿತಾಂಶಗಳು 2026 ಪುದುಚೆರಿ చెరిమ బంగాళ ಕೇರಳ శెమిబనాడు ಅನ೦೦ 2026 2021 2016 గెలువు మొన్నడి ಬಹುಮತ Share 0+107 118 (-11) TVK 0 + 65 8 (53) ಎನ್ಡಿಎ 0 + 62 118 (-56) ಡಿಎಂಕೆ + 234 பபு 118 ಡಿಎಂಕೆ TVK ఎసాదిఎ - ShareChat
#📢ಪಂಚ ರಾಜ್ಯ ಚುನಾವಣಾ ಫಲಿತಾಂಶ; ಎಲ್ಲಿ ಹೇಗಿದೆ ಸ್ಥಿತಿ?🔴
📢ಪಂಚ ರಾಜ್ಯ ಚುನಾವಣಾ ಫಲಿತಾಂಶ; ಎಲ್ಲಿ ಹೇಗಿದೆ ಸ್ಥಿತಿ?🔴 - ನೇರ ಫಲಿತಾಂಶಗಳು 2026 ಪುದುಚೆರಿ చెరిమ బంగాళ ಕೇರಳ శెమిబనాడు ಅನ೦೦ 2026 2021 2016 గెలువు మొన్నడి ಬಹುಮತ Share 0+107 118 (-11) TVK 0 + 65 8 (53) ಎನ್ಡಿಎ 0 + 62 118 (-56) ಡಿಎಂಕೆ + 234 பபு 118 ಡಿಎಂಕೆ TVK ఎసాదిఎ ನೇರ ಫಲಿತಾಂಶಗಳು 2026 ಪುದುಚೆರಿ చెరిమ బంగాళ ಕೇರಳ శెమిబనాడు ಅನ೦೦ 2026 2021 2016 గెలువు మొన్నడి ಬಹುಮತ Share 0+107 118 (-11) TVK 0 + 65 8 (53) ಎನ್ಡಿಎ 0 + 62 118 (-56) ಡಿಎಂಕೆ + 234 பபு 118 ಡಿಎಂಕೆ TVK ఎసాదిఎ - ShareChat
#📢ಪಂಚ ರಾಜ್ಯ ಚುನಾವಣಾ ಫಲಿತಾಂಶ; ಎಲ್ಲಿ ಹೇಗಿದೆ ಸ್ಥಿತಿ?🔴
📢ಪಂಚ ರಾಜ್ಯ ಚುನಾವಣಾ ಫಲಿತಾಂಶ; ಎಲ್ಲಿ ಹೇಗಿದೆ ಸ್ಥಿತಿ?🔴 - ನೇರ ಫಲಿತಾಂಶಗಳು 2026 ಪಶ್ಚಿಮ ಬಂಗಾಳ పుదుజరి ತಮಿಳುನಾಡು ಕೇರಳ 2026 2021 2016 ಗೆಲುವು + ಮುನ್ನಡೆ ಬಹುಮತ Share 0+1 ಅಘೋಷಿತ 16 (-3) 210 16 (4) ~~.0.0 0+3 16 (-13) ಇತರರು 16 (-14) ಡಿಎಂಕೆ 30 ಬಿದೆವತ ]6 ಅಘೋಷಿತ ಇತರರು దీఎంకి ఎనోదిఎ ನೇರ ಫಲಿತಾಂಶಗಳು 2026 ಪಶ್ಚಿಮ ಬಂಗಾಳ పుదుజరి ತಮಿಳುನಾಡು ಕೇರಳ 2026 2021 2016 ಗೆಲುವು + ಮುನ್ನಡೆ ಬಹುಮತ Share 0+1 ಅಘೋಷಿತ 16 (-3) 210 16 (4) ~~.0.0 0+3 16 (-13) ಇತರರು 16 (-14) ಡಿಎಂಕೆ 30 ಬಿದೆವತ ]6 ಅಘೋಷಿತ ಇತರರು దీఎంకి ఎనోదిఎ - ShareChat
#📢ಪಂಚ ರಾಜ್ಯ ಚುನಾವಣಾ ಫಲಿತಾಂಶ; ಎಲ್ಲಿ ಹೇಗಿದೆ ಸ್ಥಿತಿ?🔴
📢ಪಂಚ ರಾಜ್ಯ ಚುನಾವಣಾ ಫಲಿತಾಂಶ; ಎಲ್ಲಿ ಹೇಗಿದೆ ಸ್ಥಿತಿ?🔴 - ನೇರ ಫಲಿತಾಂಶಗಳು 2026  ಕೇರಳ బరిచు బంగాళ ಪುದುಚೆರಿ ತಮಿಳುನಾಡು ಅಸಾ೦ 2026 2021 2016 ಗೆಲುವು మొన్నడి ಬಹುಮತ Share 0+182 148 +34) ಎನೆ ದಿ 0+91 148 (-57) ಟಎಂಸಿ' 0+16 ಅಘೋವಿತ್ 148 (-132) LEFT 0+3 148 (-145) FRONI 294 0+2 AJUP 148 (-146) ಬಹುಮತ 148 ಅಘೋಷಿತ್ ಎನ್ ಡಿಎ LEFT FRONT AJUP ಟಎಂಸಿ ನೇರ ಫಲಿತಾಂಶಗಳು 2026  ಕೇರಳ బరిచు బంగాళ ಪುದುಚೆರಿ ತಮಿಳುನಾಡು ಅಸಾ೦ 2026 2021 2016 ಗೆಲುವು మొన్నడి ಬಹುಮತ Share 0+182 148 +34) ಎನೆ ದಿ 0+91 148 (-57) ಟಎಂಸಿ' 0+16 ಅಘೋವಿತ್ 148 (-132) LEFT 0+3 148 (-145) FRONI 294 0+2 AJUP 148 (-146) ಬಹುಮತ 148 ಅಘೋಷಿತ್ ಎನ್ ಡಿಎ LEFT FRONT AJUP ಟಎಂಸಿ - ShareChat
#📢ಪಂಚ ರಾಜ್ಯ ಚುನಾವಣಾ ಫಲಿತಾಂಶ; ಎಲ್ಲಿ ಹೇಗಿದೆ ಸ್ಥಿತಿ?🔴
📢ಪಂಚ ರಾಜ್ಯ ಚುನಾವಣಾ ಫಲಿತಾಂಶ; ಎಲ್ಲಿ ಹೇಗಿದೆ ಸ್ಥಿತಿ?🔴 - ನೇರ ಫಲಿತಾಂಶಗಳು 2026  వుదుజిరి ಪಶಿಮ ಬಂಗಾಳ Beog ತಮಿಳುನಾಡು ಅಸಾಂ 2026 2021 2016 ಗೆಲುವು మొన్నడి ಬಹುಮತ Share 0+98 64 (+34) ఎసోదిఎ 0+25 64 (-39) INC + 0+3 64 (-61) ఇకరరు 126 ಬಹುಮತ 61 INC + ಇತರರು ఎసోది ఎ ನೇರ ಫಲಿತಾಂಶಗಳು 2026  వుదుజిరి ಪಶಿಮ ಬಂಗಾಳ Beog ತಮಿಳುನಾಡು ಅಸಾಂ 2026 2021 2016 ಗೆಲುವು మొన్నడి ಬಹುಮತ Share 0+98 64 (+34) ఎసోదిఎ 0+25 64 (-39) INC + 0+3 64 (-61) ఇకరరు 126 ಬಹುಮತ 61 INC + ಇತರರು ఎసోది ఎ - ShareChat