Malgudi Express
ShareChat
click to see wallet page
@news007
news007
Malgudi Express
@news007
Malgudi Express official Page
#📜ಪ್ರಚಲಿತ ವಿದ್ಯಮಾನ📜 ಆರ್‍ಐಎಂಸಿ ಪ್ರವೇಶ ಪರೀಕ್ಷೆಗೆ ಅರ್ಜಿ ಆಹ್ವಾನ ಬೆಂಗಳೂರು: ಡೆಹ್ರಾಡೂನ್‍ನಲ್ಲಿರುವ ರಾಷ್ಟ್ರೀಯ ಇಂಡಿಯನ್ ಮಿಲಿಟರಿ ಕಾಲೇಜ್‍ನಲ್ಲಿ (ಆರ್‍ಐಎಂಸಿ) ಜನವರಿ 2027ನೇ ಅಧಿವೇಶನಕ್ಕಾಗಿ 8ನೇ ತರಗತಿ ಪ್ರವೇಶಕ್ಕಾಗಿ ನಡೆಸಲಾಗುವ ಅರ್ಹತಾ ಪರೀಕ್ಷೆಗೆ ಜಿಲ್ಲೆಯ ಅರ್ಹ ಬಾಲಕ ಮತ್ತು ಬಾಲಕಿಯರಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 11 ವರ್ಷದಿಂದ 13 ವರ್ಷ ವಯೋಮಿತಿಯೊಳಗಿರಬೇಕು. ಅಂದರೆ 02-01-2014 ರಿಂದ 01-07-2015 ರ ನಡುವೆ ಜನಿಸಿರಬೇಕು. ಪ್ರವೇಶ ಪರೀಕ್ಷೆ 2026ರ ಜೂನ್ 7ರಂದು ಬೆಂಗಳೂರು ಕೇಂದ್ರದಲ್ಲಿ ನಡೆಯಲಿದ್ದು, ಆಸಕ್ತರು ಭರ್ತಿ ಮಾಡಿದ ಅರ್ಜಿಗಳನ್ನು ಅಗತ್ಯ ದಾಖಲೆಗಳೊಂದಿಗೆ ಏಪ್ರಿಲ್ 15, 2026 ರೊಳಗಾಗಿ ‘ನಿರ್ದೇಶಕರು, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಬೆಂಗಳೂರು – 560025 ವಿಳಾಸಕ್ಕೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 080-25589459 ಅಥವಾ ಇಲಾಖೆಯ ಅಧಿಕೃತ ಜಾಲತಾಣ www.rimc.gov.in ಅನ್ನು ಸಂಪರ್ಕಿಸಬಹುದು. #Applications #invited #RIMC #entranceexam #malgudiexpress #malgudinews #news #TopNews
📜ಪ್ರಚಲಿತ ವಿದ್ಯಮಾನ📜 - ಉದ್ಯೋಗ ಕರಯ್ & 'Saqe ಆರ್ ಐಎಂಸಿ ಪ್ರವೇಶ   EXPRESS ಪರೀಕ್ಷೆಗೆ ಅರ್ಜಿ ಆಹ್ವಾ್ 3 ಉದ್ಯೋಗ ಕರಯ್ & 'Saqe ಆರ್ ಐಎಂಸಿ ಪ್ರವೇಶ   EXPRESS ಪರೀಕ್ಷೆಗೆ ಅರ್ಜಿ ಆಹ್ವಾ್ 3 - ShareChat
#📜ಪ್ರಚಲಿತ ವಿದ್ಯಮಾನ📜 ಯುವಕರಿಗೆ ಪಕೋಡ ಮಾರಿ ಎಂದವರಿಂದ ಉದ್ಯೋಗದ ಮಾತು ಕರ್ನಾಟಕ ರಾಜ್ಯದಲ್ಲಿ 2013 ರಿಂದ 2018ರ ಅವಧಿಯಲ್ಲಿ ಅತಿ ಹೆಚ್ಚು ರಾಜ್ಯ ಸರ್ಕಾರದ ಹುದ್ದೆಗಳನ್ನು ತುಂಬಿರುತ್ತಾರೆ. ಈ ಅವಧಿಯಲ್ಲಿ ಒಂದು ಲಕ್ಷದ ಮೂವತ್ತು ಸಾವಿರಕ್ಕೂ ಹೆಚ್ಚು ಹುದ್ದೆಗಳನ್ನು ಭರ್ತಿ ಮಾಡಿರುತ್ತಾರೆ. ಈ ಅವಧಿಯಲ್ಲಿ ಸರ್ಕಾರವಿದ್ದದ್ದು ಕಾಂಗ್ರೆಸ್ ಪಕ್ಷದ ಸಿದ್ದರಾಮಯ್ಯ ನೇತೃತ್ವದ ಸರ್ಕಾರ. 2023ರಿಂದ ಇಲ್ಲಿಯ ತನಕ 40,000 ಹುದ್ದೆಗಳನ್ನು ವಿವಿಧ ಇಲಾಖೆಗಳಲ್ಲಿ ತುಂಬಿರುತ್ತಾರೆ ಮತ್ತು ಮತ್ತೆ ಸುಮಾರು 60 ಸಾವಿರಕ್ಕೂ ಹೆಚ್ಚು ಹುದ್ದೆಗಳನ್ನು ತುಂಬಲು ಆರ್ಥಿಕ ಇಲಾಖೆಯ ಅನುಮತಿಯನ್ನು ಪಡೆದಿದ್ದಾರೆ. 2019 ರಿಂದ 2023ರ ಅವಧಿಯಲ್ಲಿ ಒಟ್ಟಾರೆ ನಾಲ್ಕು ವರ್ಷದ ಅವಧಿಯಲ್ಲಿ ಕೇವಲ 40,000 ಹುದ್ದೆಗಳನ್ನು ಅಷ್ಟೇ ಬಿಜೆಪಿ ಸರ್ಕಾರ ತುಂಬಿರುತ್ತದೆ. ಕೇಂದ್ರದಲ್ಲಿ 40 ಲಕ್ಷ ಉದ್ಯೋಗಿಗಳ ಒಟ್ಟಾರೆ ಸಂಖ್ಯೆಯಲ್ಲಿ ಸುಮಾರು 10 ಲಕ್ಷ ಉದ್ಯೋಗಗಳು ಖಾಲಿ ಇದೆ. ಪ್ರತಿ ವರ್ಷ ಎರಡು ಕೋಟಿ ಹುದ್ದೆಗಳ ಸೃಷ್ಟಿ ಮಾಡುವುದಾಗಿ ಹೇಳಿದಂತಹ ಕೇಂದ್ರದ ಬಿಜೆಪಿ ಸರ್ಕಾರ ಕಳೆದ 11 ವರ್ಷದ ಅವಧಿಯಲ್ಲಿ ಕೇವಲ ಏಳು ಲಕ್ಷ ಹುದ್ದೆಗಳನ್ನು ಮಾತ್ರ ತುಂಬಿರುತ್ತಾರೆ. ಇದರಲ್ಲಿ ಹೆಚ್ಚಾಗಿ ರೈಲ್ವೆ ಇಲಾಖೆ ಮತ್ತು ರಕ್ಷಣಾ ವಿಭಾಗದಲ್ಲಿ ಉದ್ಯೋಗಗಳನ್ನು ನೀಡಿರುತ್ತಾರೆ. ಭಾರತದಲ್ಲಿ ಸುಮಾರು 3 ಕೋಟಿ ನಿರುದ್ಯೋಗಿ ಯುವ ಜನತೆ ಇದೆ ಎನ್ನುವ ಮಾಹಿತಿ ಇದೆ ಬಿಜೆಪಿ ನಾಯಕರು ರಾಜ್ಯ ಸರ್ಕಾರ ಖಾಲಿ ಇರುವ ಹುದ್ದೆ ತುಂಬಿ ಎಂದು ಹೋರಾಟ ಮಾಡುವ ಬದಲಿಗೆ ಕೇಂದ್ರದಲ್ಲಿ ಖಾಲಿ ಇರುವ ಸುಮಾರು ಹತ್ತು ಲಕ್ಷ ಉದ್ಯೋಗಗಳನ್ನು ತುಂಬುವಂತೆ ಒತ್ತಾಯವನ್ನು ಮಾಡಲಿ. ರಾಜ್ಯ ಸರ್ಕಾರ ನಿರುದ್ಯೋಗಿ ಜನರಿಗೆ ಅನುಕೂಲವಾಗಲಿ ಎನ್ನುವ ಕಾರಣಕ್ಕೆ ಯುವನಿಧಿ ಯೋಜನೆಯನ್ನು ಜಾರಿಗೆ ತಂದು ಈ ಮೂಲಕ ನಿರುದ್ಯೋಗಿ ಪದವೀಧರರಿಗೆ ಮಾಸಿಕವಾಗಿ 3000 ಪ್ರೋತ್ಸಾಹಧನವನ್ನು ಕೊಡುವಂತಹ ಕೆಲಸವನ್ನ ಮಾಡಿ ಅವರುಗಳು ವಿವಿಧ ಇಲಾಖೆಗಳಲ್ಲಿನ ಸಂದರ್ಶನಗಳಿಗೆ ಸಿದ್ದರಾಗಲು ಅನುಕೂಲವನ್ನು ಕಲ್ಪಿಸಿಕೊಡಲಾಗಿದೆ. ಹಾಲಿ ಇರುವಂತ ಎಲ್ಲ ಉದ್ಯೋಗಗಳನ್ನು ತುಂಬಬೇಕಾದದ್ದು ಸರಿಯಾದ ಮಾತು. ಆದರೆ ಯಾವುದೇ ರಾಜ್ಯ ಸರ್ಕಾರದಲ್ಲಿ ಮುಂಗಡಪತ್ರದ ಒಟ್ಟು ಮೊತ್ತದಲ್ಲಿ ಕೇವಲ 40ರಷ್ಟು ಭಾಗವನ್ನು ಮಾತ್ರ ಆಡಳಿತಾತ್ಮಕ ನಿರ್ವಹಣೆ ವೆಚ್ಚವನ್ನಾಗಿ ವೆಚ್ಚ ಮಾಡಬಹುದು. ಆರ್ಥಿಕ ಇಲಾಖೆಯ ಮಾನದಂಡಗಳ ಆಧಾರದ ಮೇಲೆ ಸರ್ಕಾರದ ಹುದ್ದೆಗಳನ್ನು ತುಂಬಬೇಕಾಗಿರುತ್ತದೆ. ಸರ್ಕಾರ ನಡೆಸಿದ ಬಿಜೆಪಿ ನಾಯಕರಿಗೆ ಕನಿಷ್ಠ ಜ್ಞಾನವು ಇಲ್ಲದೆ ಇರುವುದು ಬೇಸರದ ಸಂಗತಿ. ದೇಶದಲ್ಲಿ ನಿರುದ್ಯೋಗ ದೊಡ್ಡ ಪ್ರಮಾಣದಲ್ಲಿ ಬೆಳೆಯುತ್ತಿದೆ. ವಿದ್ಯಾವಂತರು ಉದ್ಯೋಗವಿಲ್ಲದೆ ಪರಿತಪಿಸುತ್ತಿದ್ದಾರೆ. ಈಗ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಎಂಬ ಭೂತ ಇಡೀ ಉದ್ಯೋಗ ವ್ಯವಸ್ಥೆಯನ್ನು ಹಾಳು ಮಾಡುವ ಸಾಧ್ಯತೆ ಇದೆ. ಪ್ರತಿದಿನ ಅನೇಕ ಕಂಪನಿಗಳಲ್ಲಿ ಮತ್ತು ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಸಂಸ್ಥೆಗಳಲ್ಲಿ ಹೇಳದೆ ಕೇಳದೆ ಉದ್ಯೋಗದಿಂದ ತೆಗೆದು ಹಾಕುತ್ತಿದ್ದಾರೆ. ಬಿಜೆಪಿ ನಾಯಕರು ಉದ್ಯೋಗಕ್ಕಾಗಿ ಹೋರಾಟ ಮಾಡುತ್ತಿರುವ ಯುವಕರ ಪರವಾಗಿ ಮಾತನಾಡುವ ನೆಪದಲ್ಲಿ ರಾಜಕಾರಣ ಮಾಡಲು ಹೋಗಿ ಅವಮಾನ ಮಾಡಿಸಿಕೊಂಡು ಬುದ್ಧಿ ಬಾರದೆ ಮಾತನಾಡುತ್ತಿದ್ದಾರೆ. ರಾಜ್ಯ ಸರ್ಕಾರವನ್ನು ಟೀಕೆ ಮಾಡುವ ಮೊದಲು ಕೇಂದ್ರ ಸರ್ಕಾರದಲ್ಲಿ ಖಾಲಿ ಇರುವ 10 ಲಕ್ಷ ಹುದ್ದೆಗಳನ್ನು ತುಂಬಲು ಹೇಳಿ. ಜೊತೆಗೆ ಅವರು ಕೊಟ್ಟ ಮಾತಿನಂತೆ ಪ್ರತಿ ವರ್ಷ ಎರಡು ಕೋಟಿ ಉದ್ಯೋಗದ ಲೆಕ್ಕದಲ್ಲಿ ಕೂಡಲೇ ಕನಿಷ್ಠ 20 ಕೋಟಿ ಉದ್ಯೋಗವನ್ನು ಸೃಷ್ಟಿ ಮಾಡುವ ಆರ್ಥಿಕ ಮತ್ತು ಆಡಳಿತಾತ್ಮಕ ವ್ಯವಸ್ಥೆಯನ್ನು ಸಿದ್ಧ ಮಾಡಿಕೊಡಲು ಒತ್ತಾಯವನ್ನು ಮಾಡಿ ಯುವಜನರ ಬಗ್ಗೆ ನಿಮ್ಮ ನಿಜವಾದ ಕಾಳಜಿಯನ್ನ ವ್ಯಕ್ತಪಡಿಸಿ. ನಿರುದ್ಯೋಗಿ ಯುವಜನರ ಪರವಾಗಿ ನಾವಿದ್ದೇವೆ ಎಂದು ರಾಜಕಾರಣ ಮಾಡುವ ಮಾತುಗಳನ್ನು ಹೇಳಿದರೆ ಕೇಳಿಸಿಕೊಳ್ಳಲು ಈ ದೇಶದಲ್ಲಿ ಯುವ ಜನರು ತಿಳುವಳಿಕೆ ಇಲ್ಲದವರಲ್ಲ. ಕಳೆದ 11 ವರ್ಷದಲ್ಲಿ ಕೇಂದ್ರ ಸರ್ಕಾರದಲ್ಲಿ ಉದ್ಯೋಗದ ಪ್ರಮಾಣ ಎಷ್ಟು ಏರಿಕೆಯಾಗಿದೆ ಮತ್ತು ನಿರುದ್ಯೋಗದ ಪ್ರಮಾಣ ಎಷ್ಟು ಏರಿದೆ ಎನ್ನುವ ಮಾಹಿತಿ ಎಲ್ಲ ಯುವಜನರಲ್ಲೂ ಇದೆ ಎನ್ನುವ ಜ್ಞಾನ ಬಿಜೆಪಿ ನಾಯಕರಿಗೆ ಇರಲಿ. - ಕೆ ಎಸ್ ನಾಗರಾಜ್, ಬೆಂಗಳೂರು #Talk #employment #sell #pakodas #youth #ksnagaraj #malgudiexpress #malgudinews #news #TopNews
📜ಪ್ರಚಲಿತ ವಿದ್ಯಮಾನ📜 - ಯುವಕರಿಗೆ ಪಕೋಡ ಮಾರಿ ಎಂದವರಿಂದ ಉದ್ಯೋಗದ  ಮಾತು ಸುದ್ರಿ & ಯ೦ರಯಲ್ಲಿ್ 'Saqa Please subscribe to Malgudi Express YouTube and Website EXPRESS ಯುವಕರಿಗೆ ಪಕೋಡ ಮಾರಿ ಎಂದವರಿಂದ ಉದ್ಯೋಗದ  ಮಾತು ಸುದ್ರಿ & ಯ೦ರಯಲ್ಲಿ್ 'Saqa Please subscribe to Malgudi Express YouTube and Website EXPRESS - ShareChat
#📜ಪ್ರಚಲಿತ ವಿದ್ಯಮಾನ📜 ಫ್ಯಾಕ್ಟ್ ಚೆಕ್: ಚಿಕ್ಕಬಳ್ಳಾಪುರ ಕಾಂಗ್ರೆಸ್ ಸಮಾವೇಶ 'ಫ್ಲಾಪ್' ಆಗಿತ್ತೇ? ಜೆಡಿಎಸ್ ಹಂಚಿಕೊಂಡ ವೀಡಿಯೊದ ಅಸಲಿಯತ್ತೇನು? ​ಬೆಂಗಳೂರು: ರಾಜಕೀಯ ಜಿದ್ದಾಜಿದ್ದಿನ ಕೇಂದ್ರವಾಗಿರುವ ಚಿಕ್ಕಬಳ್ಳಾಪುರದಲ್ಲಿ ಇತ್ತೀಚೆಗೆ ನಡೆದ ಕಾಂಗ್ರೆಸ್ ಸಮಾವೇಶದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೊ ಸಮರ ಶುರುವಾಗಿದೆ. ಜೆಡಿಎಸ್ ಹಂಚಿಕೊಂಡಿರುವ "ಖಾಲಿ ಕುರ್ಚಿ"ಗಳ ವೀಡಿಯೊ ಮತ್ತು ಕಾಂಗ್ರೆಸ್ ಹಂಚಿಕೊಂಡಿರುವ "ಜನಸಾಗರ"ದ ಫೋಟೋಗಳ ನಡುವಿನ ವ್ಯತ್ಯಾಸವನ್ನು ನಾವು ಕರಾರುವಕ್ಕಾಗಿ ಪರಿಶೀಲಿಸಿದ್ದೇವೆ. ವೈರಲ್ ಮಾಹಿತಿ: ​ಜೆಡಿಎಸ್‌ನ ಬೆಂಬಲಿತ ಫೇಸ್‌ಬುಕ್ ಪುಟ 'Jds Karunadu' ನಲ್ಲಿ ಒಂದು ರೀಲ್ಸ್ ಹಂಚಿಕೊಳ್ಳಲಾಗಿದ್ದು, ಅದಕ್ಕೆ "ಚಿಕ್ಕಬಳ್ಳಾಪುರ ಕಾಂಗ್ರೆಸ್ ಜನಗಳೇ ಇಲ್ಲದ ಸಮಾವೇಶ" ಎಂಬ ಕ್ಯಾಪ್ಶನ್ ನೀಡಲಾಗಿದೆ. ಇದರಲ್ಲಿ ಸಮಾವೇಶದ ಪೆಂಡಾಲ್ ಒಳಗೆ ನೂರಾರು ಕುರ್ಚಿಗಳು ಖಾಲಿ ಇರುವುದು ಕಂಡುಬರುತ್ತದೆ. ​ನಮ್ಮ ತನಿಖೆ ಮತ್ತು ವಾಸ್ತವ ಅಂಶಗಳು: ​ನಾವು ಈ ಎರಡು ಚಿತ್ರಗಳನ್ನು ಕೂಲಂಕಷವಾಗಿ ವಿಶ್ಲೇಷಿಸಿದಾಗ ಈ ಕೆಳಗಿನ ಸತ್ಯಾಂಶಗಳು ಬೆಳಕಿಗೆ ಬಂದಿವೆ: ​ಸಮಯದ ವ್ಯತ್ಯಾಸ (Time Frame): ಜೆಡಿಎಸ್ ಹಂಚಿಕೊಂಡಿರುವ ವೀಡಿಯೊದಲ್ಲಿ ವೇದಿಕೆಯ ಮೇಲಿರುವ ಎಲ್‌ಇಡಿ ಪರದೆಗಳು ಚಾಲನೆಯಲ್ಲಿವೆ, ಆದರೆ ವೇದಿಕೆಯ ಮೇಲೆ ಯಾವುದೇ ಪ್ರಮುಖ ನಾಯಕರು ಕಾಣಿಸುತ್ತಿಲ್ಲ. ಇದು ಸಾಮಾನ್ಯವಾಗಿ ಸಮಾವೇಶ ಆರಂಭವಾಗುವ ಮೊದಲು ಅಥವಾ ನಾಯಕರು ವೇದಿಕೆಗೆ ಬರುವ ಮುನ್ನ ತೆಗೆದ ದೃಶ್ಯವಾಗಿದೆ. ​ಜನಸಾಗರದ ಪುರಾವೆ: ಕಾಂಗ್ರೆಸ್ ಹಂಚಿಕೊಂಡಿರುವ ಎರಡನೇ ಚಿತ್ರದಲ್ಲಿ ಅದೇ ಪೆಂಡಾಲ್ ವಿನ್ಯಾಸದ ಅಡಿಯಲ್ಲಿ ಸಾವಿರಾರು ಜನರು ಕುಳಿತಿರುವುದು ಸ್ಪಷ್ಟವಾಗಿ ಕಾಣುತ್ತಿದೆ. ಪೆಂಡಾಲ್‌ನ ಮೇಲ್ಭಾಗದ ಕೇಸರಿ-ಬಿಳಿ-ಹಸಿರು ಬಣ್ಣದ ಬಟ್ಟೆಯ ಅಲಂಕಾರ ಎರಡೂ ಚಿತ್ರಗಳಲ್ಲಿ ಒಂದೇ ಆಗಿರುವುದನ್ನು ಗಮನಿಸಬಹುದು. ​ಸಮಾವೇಶದ ಮಹತ್ವ: ಫೆಬ್ರವರಿ ೨೦೨೬ರಲ್ಲಿ ನಡೆದ ಈ 'ಉದ್ಯೋಗ ಖಾತರಿ ಬಚಾವೋ' ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಭಾಗವಹಿಸಿದ್ದರು. ಅಂದಿನ ಅಧಿಕೃತ ನೇರ ಪ್ರಸಾರ (Live Stream) ವೀಡಿಯೊಗಳನ್ನು ಗಮನಿಸಿದಾಗ ಸಮಾವೇಶದಲ್ಲಿ ಜನಸಂದಣಿ ತುಂಬಿರುವುದು ಖಚಿತವಾಗಿದೆ. ​ಫ್ಯಾಕ್ಟ್ ಚೆಕ್ ತೀರ್ಪು: ​ಪೋಸ್ಟ್‌ನ ಸತ್ಯಾಸತ್ಯತೆ: ದಾರಿತಪ್ಪಿಸುವಂತಿದೆ (Misleading). ​ವಿವರಣೆ: ಜೆಡಿಎಸ್ ಹಂಚಿಕೊಂಡಿರುವ ವೀಡಿಯೊ ತುಣುಕು ತಾಂತ್ರಿಕವಾಗಿ ಎಡಿಟ್ ಮಾಡಲಾದ ಚಿತ್ರವಲ್ಲದಿದ್ದರೂ, ಅದನ್ನು ಬಳಸಿದ ರೀತಿ ದಾರಿತಪ್ಪಿಸುವಂತಿದೆ. ಸಮಾವೇಶದ ಪೂರ್ವಸಿದ್ಧತೆಯ ಸಂದರ್ಭದ ದೃಶ್ಯಗಳನ್ನು ಬಳಸಿ ಇಡೀ ಕಾರ್ಯಕ್ರಮ ವಿಫಲವಾಗಿದೆ ಎಂದು ಬಿಂಬಿಸಲಾಗಿದೆ. ಆದರೆ, ಸಮಾವೇಶವು ಪೂರ್ಣ ಪ್ರಮಾಣದಲ್ಲಿ ಆರಂಭವಾದಾಗ ಅಲ್ಲಿ ಭಾರೀ ಜನಸಂದಣಿ ಇತ್ತು ಎಂಬುದು ಕಾಂಗ್ರೆಸ್ ಹಂಚಿಕೊಂಡಿರುವ ಫೋಟೋದಿಂದ ದೃಢಪಟ್ಟಿದೆ. ​ಅಂತಿಮ ತೀರ್ಮಾನ: ಚಿಕ್ಕಬಳ್ಳಾಪುರ ಕಾಂಗ್ರೆಸ್ ಸಮಾವೇಶಕ್ಕೆ ಜನರೇ ಬಂದಿರಲಿಲ್ಲ ಎಂಬ ಜೆಡಿಎಸ್ ಸಾಮಾಜಿಕ ಜಾಲತಾಣದ ಪೋಸ್ಟ್ ಸತ್ಯಕ್ಕೆ ದೂರವಾದುದು. #FactCheck #Chikkaballapur #Congress #convention #flop #malgudiexpress #malgudinews #news #TopNews
📜ಪ್ರಚಲಿತ ವಿದ್ಯಮಾನ📜 - ಚಿಕ್ಕಬಳ್ಳಾಪುರ ಕಾಂಗ್ರೆಸ್ ಸಮಾವೇಶ 'ಫ್ಲಾಪ್' ಆಗಿತ್ತೇ? ಯಕ್ಟ್ ಚೆಕ್: K E F A C T ಲಾವೇಶ E&G FAcl 03303 రయెల్ల; . S901 HTTPS:IIMALGUDIEXPRESS.CO.IN/ EXPRESS ಚಿಕ್ಕಬಳ್ಳಾಪುರ ಕಾಂಗ್ರೆಸ್ ಸಮಾವೇಶ 'ಫ್ಲಾಪ್' ಆಗಿತ್ತೇ? ಯಕ್ಟ್ ಚೆಕ್: K E F A C T ಲಾವೇಶ E&G FAcl 03303 రయెల్ల; . S901 HTTPS:IIMALGUDIEXPRESS.CO.IN/ EXPRESS - ShareChat
#📜ಪ್ರಚಲಿತ ವಿದ್ಯಮಾನ📜 ಕಟ್ಟಡ ಕಾರ್ಮಿಕರು ಮೃತಪಟ್ಟಿದ್ದು ನಿಜಕ್ಕೂ ದುರದೃಷ್ಟಕರ: ಸಂತೋಷ್ ಲಾಡ್ ಹುಬ್ಬಳ್ಳಿ: ಹುಬ್ಬಳ್ಳಿಯ ಗಬ್ಬೂರು ಬಳಿ ನಿರ್ಮಾಣವಾಗುತ್ತಿರುವ ಕೆಎಲ್‌ಇ ಸಂಸ್ಥೆಯ ವೈದ್ಯಕೀಯ ಕಾಲೇಜು ಕಟ್ಟಡದಿಂದ ಆಯತಪ್ಪಿ ಬಿದ್ದು ಇಬ್ಬರು ಕಟ್ಟಡ ಕಾರ್ಮಿಕರು ಮೃತಪಟ್ಟಿದ್ದು ನಿಜಕ್ಕೂ ದುರದೃಷ್ಟಕರ. ವಿಷಯ ತಿಳಿದ ತಕ್ಷಣ ಕಿಮ್ಸ್‌ಗೆ ಭೇಟಿ ನೀಡಿ ಕುಟುಂಬ ಮೃತರ ಸದಸ್ಯರಿಗೆ ಸಾಂತ್ವನ ಹೇಳಿದೆ. ಅಲ್ಲದೇ ಅವರ ಕುಟುಂಬದ ನೆರವಿಗೆ ವೈಯಕ್ತಿಕವಾಗಿ ಧನಸಹಾಯ ಮಾಡಿದ್ದೇನೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ. ಕಟ್ಟಡ ನಿರ್ಮಾಣ ಕಾರ್ಮಿಕರು ಮೃತಪಟ್ಟರೆ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ನೆರವು ಒದಗಿಸಲಾಗುತ್ತದೆ. ಈ ಬಗ್ಗೆಯೂ ಪರಿಶೀಲನೆ ನಡೆಸಲಾಗುವುದು ಎಂದಿದ್ದಾರೆ. ಮೃತರನ್ನು ಕುಂದಗೋಳ ತಾಲೂಕಿನ ಹೊತ್ತಿಗೇರಿ ನಿವಾಸಿ ಮಲ್ಲೇಶ್‌ ಹಾಗೂ ಅಣ್ಣಿಗೇರಿಯ ಅಕ್ಬರ್‌ ಸಂಗಟಿ ಎಂದು ಗುರುತಿಸಲಾಗಿದೆ. ಘಟನಾ ಸ್ಥಳಕ್ಕೆ ಭೇಟಿ ನೀಡಿರುವ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ದುರ್ಘಟನೆ ಕುರಿತು ತನಿಖೆ ನಡೆಸಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಭರವಸೆ ನೀಡಿದ್ದಾರೆ. #truly #unfortunate #construction #workers #died #SantoshLad #Hubballi #malgudiexpress #malgudinews #news #TopNews
📜ಪ್ರಚಲಿತ ವಿದ್ಯಮಾನ📜 - ShareChat
#📜ಪ್ರಚಲಿತ ವಿದ್ಯಮಾನ📜 ಬೊಮ್ಮಾಯಿ ಅವರು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಉದ್ಯೋಗ ಸೃಷ್ಟಿ ಕುರಿತು ಮಾಡಿರುವ ಪೋಸ್ಟ್‌ನ ಫ್ಯಾಕ್ಟ್ ಚೆಕ್ ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಅವರು ಸಾಮಾಜಿಕ ಜಾಲತಾಣಗಳಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಉದ್ಯೋಗ ಸೃಷ್ಟಿಯ ಕುರಿತು ಮಾಡಿರುವ ಪೋಸ್ಟ್‌ನ ಫ್ಯಾಕ್ಟ್ ಚೆಕ್ (ಸತ್ಯಾಸತ್ಯತೆ ಪರಿಶೀಲನೆ) ವರದಿ ಇಲ್ಲಿದೆ. ​ಈ ವರದಿಯನ್ನು ಪ್ರಮುಖವಾಗಿ ಮೂರು ಭಾಗಗಳಲ್ಲಿ ವಿಶ್ಲೇಷಿಸಲಾಗಿದೆ: ​1. ಕೇಂದ್ರ ಸರ್ಕಾರದ ಉದ್ಯೋಗ ಸೃಷ್ಟಿಯ ಹಕ್ಕು ​ಹೇಳಿಕೆ: ಕೇಂದ್ರದ ಆರ್ಥಿಕ ಅಭಿವೃದ್ಧಿಯಿಂದಾಗಿ ಪ್ರತಿ ವರ್ಷ 2 ಕೋಟಿ ಕೆಲಸಗಳು ಮತ್ತು ಸ್ವಯಂ ಉದ್ಯೋಗಗಳು ಸೃಷ್ಟಿಯಾಗಿವೆ. ​ವಾಸ್ತವಾಂಶ: ​ದತ್ತಾಂಶ: ಪಿಎಲ್‌ಎಫ್‌ಎಸ್ (PLFS - Periodic Labour Force Survey) ವರದಿಗಳ ಪ್ರಕಾರ, ಭಾರತದ ನಿರುದ್ಯೋಗ ದರವು ಇತ್ತೀಚಿನ ವರ್ಷಗಳಲ್ಲಿ ಇಳಿಕೆಯಾಗಿದೆ ಮತ್ತು ಉದ್ಯೋಗಿಗಳ ಸಂಖ್ಯೆ ಹೆಚ್ಚಾಗಿದೆ. ಆದರೆ, ಪ್ರತಿ ವರ್ಷ ನಿಖರವಾಗಿ 2 ಕೋಟಿ ಹೊಸ ಕೆಲಸಗಳು ಸೃಷ್ಟಿಯಾಗಿವೆ ಎಂಬ ಅಧಿಕೃತ ಅಂಕಿ-ಅಂಶಗಳು ಚರ್ಚಾಸ್ಪದವಾಗಿವೆ. ​ಸ್ವಯಂ ಉದ್ಯೋಗ: 'ಮುದ್ರಾ' (Mudra) ಯೋಜನೆ ಮತ್ತು 'ಪಿಎಂ ಸ್ವನಿಧಿ' ಅಡಿಯಲ್ಲಿ ಕೋಟ್ಯಂತರ ಜನರು ಸಾಲ ಪಡೆದು ಸ್ವಯಂ ಉದ್ಯೋಗ ಕಂಡುಕೊಂಡಿರುವುದು ನಿಜ. ಆದರೆ ಇವುಗಳಲ್ಲಿ ಎಷ್ಟು "ಹೊಸ ಉದ್ಯೋಗಗಳು" ಮತ್ತು ಎಷ್ಟು "ಬದುಕುಳಿಯುವಿಕೆಯ ಉದ್ಯೋಗಗಳು" ಎನ್ನುವ ಬಗ್ಗೆ ಆರ್ಥಿಕ ತಜ್ಞರಲ್ಲಿ ಭಿನ್ನಾಭಿಪ್ರಾಯವಿದೆ. ​2. ಕರ್ನಾಟಕದ ಶಿಕ್ಷಕರ ನೇಮಕಾತಿ (15,000 ಹುದ್ದೆಗಳು) ​ಹೇಳಿಕೆ: ಬಿಜೆಪಿ ಸರ್ಕಾರದ ಅವಧಿಯಲ್ಲಿ 15,000 ಶಿಕ್ಷಕರ ನೇಮಕ ಪ್ರಕ್ರಿಯೆ ಪೂರ್ಣಗೊಂಡಿತ್ತು, ಆದರೆ ಈಗಿನ ಸರ್ಕಾರ ಆದೇಶ ನೀಡಿಲ್ಲ. ​ವಾಸ್ತವಾಂಶ: ​ಹಿನ್ನೆಲೆ: 2022ರಲ್ಲಿ ಬಸವರಾಜ ಬೊಮ್ಮಾಯಿ ಅವರ ಸರ್ಕಾರ 15,000 ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ (GPT) ನೇಮಕಾತಿ ಪ್ರಕ್ರಿಯೆಯನ್ನು ಆರಂಭಿಸಿತ್ತು. ​ಸದ್ಯದ ಸ್ಥಿತಿ: ಈ ನೇಮಕಾತಿಯು ನ್ಯಾಯಾಲಯದ ವ್ಯಾಜ್ಯಗಳ (Legal Disputes) ಕಾರಣದಿಂದಾಗಿ ವಿಳಂಬವಾಗಿತ್ತು (ವಿಶೇಷವಾಗಿ ವಿವಾಹಿತ ಮಹಿಳಾ ಅಭ್ಯರ್ಥಿಗಳ ಜಾತಿ/ಆದಾಯ ಪ್ರಮಾಣಪತ್ರದ ವಿವಾದ). ​ಇತ್ತೀಚಿನ ಅಪ್ಡೇಟ್: ಕಾಂಗ್ರೆಸ್ ಸರ್ಕಾರ ಬಂದ ನಂತರ, ನ್ಯಾಯಾಲಯದ ಹಸಿರು ನಿಶಾನೆ ಸಿಕ್ಕ ಮೇಲೆ ಕೌನ್ಸೆಲಿಂಗ್ ಪ್ರಕ್ರಿಯೆ ನಡೆಸಲಾಗಿದೆ. ಆದರೆ, ಇನ್ನೂ ಕೆಲವು ತಾಂತ್ರಿಕ ಮತ್ತು ಕಾನೂನು ಕಾರಣಗಳಿಂದಾಗಿ ಪೂರ್ಣ ಪ್ರಮಾಣದ ನೇಮಕಾತಿ ಪತ್ರ ವಿತರಣೆ ವಿಳಂಬವಾಗುತ್ತಿರುವುದು ಕಂಡುಬಂದಿದೆ. ​3. ಕಲ್ಯಾಣ ಕರ್ನಾಟಕ ಮತ್ತು 1 ಲಕ್ಷ ಉದ್ಯೋಗಗಳ ಭರವಸೆ ​ಹೇಳಿಕೆ: ಕಲ್ಯಾಣ ಕರ್ನಾಟಕದಲ್ಲಿ 14 ಸಾವಿರ ಹುದ್ದೆಗಳ ನೇಮಕ ವಿಳಂಬವಾಗಿದೆ ಮತ್ತು ಬಜೆಟ್‌ನಲ್ಲಿ ಒಂದು ಲಕ್ಷ ಉದ್ಯೋಗದ ಸಿದ್ದತೆ ಮಾಡಲಾಗಿತ್ತು. ​ವಾಸ್ತವಾಂಶ: ​ಕಲ್ಯಾಣ ಕರ್ನಾಟಕ (Article 371J): ಈ ಭಾಗದಲ್ಲಿ ಸಾವಿರಾರು ಹುದ್ದೆಗಳು ಖಾಲಿ ಇರುವುದು ನಿಜ. ಬಿಜೆಪಿ ಅವಧಿಯಲ್ಲಿ ನೇಮಕಾತಿ ಘೋಷಣೆಯಾಗಿದ್ದರೂ, ಅಧಿಕಾರ ಹಸ್ತಾಂತರದ ಸಂದರ್ಭದಲ್ಲಿ ಪ್ರಕ್ರಿಯೆಗಳು ವಿವಿಧ ಹಂತಗಳಲ್ಲಿದ್ದವು. ​ಬಜೆಟ್ ಹಂಚಿಕೆ: ಹಿಂದಿನ ಸರ್ಕಾರ ಬಜೆಟ್‌ನಲ್ಲಿ ಉದ್ಯೋಗ ಸೃಷ್ಟಿಗೆ ಹಣ ಮೀಸಲಿಟ್ಟಿತ್ತು. ಆದರೆ, ಸರ್ಕಾರಿ ವಲಯದಲ್ಲಿ ನೇಮಕಾತಿ ಎಂಬುದು ಕೇವಲ ಬಜೆಟ್ ಮೇಲೆ ನಿರ್ಧಾರವಾಗುವುದಿಲ್ಲ; ಅದು ಆರ್ಥಿಕ ಇಲಾಖೆಯ ಅನುಮತಿ ಮತ್ತು ಕೆಪಿಎಸ್‌ಸಿ (KPSC) ಕಾರ್ಯವೈಖರಿಯ ಮೇಲೆ ಅವಲಂಬಿತವಾಗಿರುತ್ತದೆ. ​ತೀರ್ಪು (Verdict): ​ಬಸವರಾಜ ಬೊಮ್ಮಾಯಿ ಅವರ ಪೋಸ್ಟ್ ಭಾಗಶಃ ಸತ್ಯ ಮತ್ತು ಭಾಗಶಃ ರಾಜಕೀಯ ಟೀಕೆಯಿಂದ ಕೂಡಿದೆ. #Factcheck #Basavarajabommai #post #job #creation #central #state #governments #malgudiexpress #malgudinews #news #TopNews
📜ಪ್ರಚಲಿತ ವಿದ್ಯಮಾನ📜 - ಬೊಮ್ಮಾಯಿ ಅವರು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಉದ್ಯೋಗ ಸೃಷ್ಟಿ ಕುರಿತು ಮಾಡಿರುವ ಪೋಸ್ಟ್ನ ಫ್ಯಾಕ್ಟ್ ಚೆಕ್ ಚ K E F A C T FAcl 03303 రయెల్ల; . S9o)4 HTTPS:IIMALGUDIEXPRESS.CO.IN/ EXPRESS ಬೊಮ್ಮಾಯಿ ಅವರು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಉದ್ಯೋಗ ಸೃಷ್ಟಿ ಕುರಿತು ಮಾಡಿರುವ ಪೋಸ್ಟ್ನ ಫ್ಯಾಕ್ಟ್ ಚೆಕ್ ಚ K E F A C T FAcl 03303 రయెల్ల; . S9o)4 HTTPS:IIMALGUDIEXPRESS.CO.IN/ EXPRESS - ShareChat
#📜ಪ್ರಚಲಿತ ವಿದ್ಯಮಾನ📜 ಬೆಂಗಳೂರಿನಲ್ಲಿ ಅಮೆಜಾನ್ ಕಂಪನಿಯ ಕಾರ್ಪೊರೇಟ್ ಕಚೇರಿ ಉದ್ಘಾಟನೆ 35 ಬಿಲಿಯನ್ ಡಾಲರ್ ಹೂಡಿಕೆ 15 ಮಿಲಿಯನ್ ಸಣ್ಣ ಉದ್ಯಮಗಳಿಗೆ ನೆರವು ಲಕ್ಷಾಂತರ ಉದ್ಯೋಗಗಳ ಸೃಷ್ಟಿ! ಬೆಂಗಳೂರು: ಅಮೆಜಾನ್ ಕಂಪನಿಯು ಯಲಹಂಕ ಸಮೀಪದಲ್ಲಿ ನಿರ್ಮಿಸಿರುವ, 11 ಲಕ್ಷ ಚದರ ಅಡಿ ವಿಸ್ತಾರದ ಸುಸಜ್ಜಿತ ಕಾರ್ಪೊರೇಟ್ ಪ್ರಧಾನ ಕಚೇರಿಯನ್ನು ಬೃಹತ್ ಕೈಗಾರಿಕಾ ಸಚಿವ ಎಂ ಬಿ ಪಾಟೀಲ್ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಕರ್ನಾಟಕದಲ್ಲಿ ಇದು ಅಮೆಜಾನ್ ಕಂಪನಿಯ 10ನೆಯ ಕಾರ್ಪೊರೇಟ್ ಕಚೇರಿಯಾಗಿದೆ. ರಾಜ್ಯದೊಂದಿಗೆ ಎರಡು ದಶಕಗಳ ಬಾಂಧವ್ಯ ಹೊಂದಿರುವ ಕಂಪನಿಯು ಮುಂದಿನ 4 ವರ್ಷಗಳಲ್ಲಿ ಭಾರತದಲ್ಲಿ 35 ಬಿಲಿಯನ್ ಡಾಲರ್ ಬಂಡವಾಳ ಹೂಡಿಕೆ ಮಾಡಲಿದೆ. ಇದರಿಂದ 15 ಮಿಲಿಯನ್ ಸಣ್ಣ ಉದ್ಯಮಗಳಿಗೆ ನೆರವು ಸಿಗಲಿದ್ದು, ಲಕ್ಷಾಂತರ ಉದ್ಯೋಗಗಳು ಸೃಷ್ಟಿಯಾಗಲಿವೆ. ಇದರಲ್ಲಿ ರಾಜ್ಯಕ್ಕೆ ಗಮನಾರ್ಹ ಪಾಲು ಹರಿದು ಬರಲಿದೆ ಎಂದು ಅಭಿಪ್ರಾಯಪಟ್ಟರು. ರಾಜ್ಯ 3.80 ಲಕ್ಷ ರೂ.ಗಳಿಗಿಂತ ಹೆಚ್ಚು ತಲಾ ಆದಾಯ ಹೊಂದಿದ್ದು, ದೇಶದಲ್ಲೇ ಅಗ್ರಸ್ಥಾನದಲ್ಲಿದೆ. ಜೊತೆಗೆ, ದೇಶದ ಬೊಕ್ಕಸಕ್ಕೆ ವಾರ್ಷಿಕ 1.6 ಲಕ್ಷ ಕೋಟಿ ರೂ. ಜಿ.ಎಸ್.ಟಿ ಪಾವತಿ ಮೂಲಕ ದ್ವಿತೀಯ ಸ್ಥಾನದಲ್ಲಿದ್ದೇವೆ. ನಾವೀನ್ಯತಾ ಸೂಚ್ಯಂಕದಲ್ಲಿ ಬೆಂಗಳೂರು ಜಾಗತಿಕ ಸ್ತರದಲ್ಲಿ 21ನೇ ಸ್ಥಾನಕ್ಕೆ ಜಿಗಿದಿದೆ. ಟೆಕ್-ಸಿಟಿ ಸೂಚ್ಯಂಕದಲ್ಲಿ ಮೊದಲ 30 ಸ್ಥಾನಗಳ ಒಳಗೆ ಕಾಣಿಸಿಕೊಂಡಿರುವ ದೇಶದ ಏಕೈಕ ನಗರ ಬೆಂಗಳೂರಾಗಿದೆ ಎಂದರು. ಕಳೆದ ವರ್ಷ ಬೆಂಗಳೂರಿನಲ್ಲಿ 14.6 ಮಿಲಿಯನ್ ಚದರ ಅಡಿ ಜಾಗವನ್ನು ಕೈಗಾರಿಕಾ ವಹಿವಾಟು ಉದ್ದೇಶಕ್ಕೆ ಭೋಗ್ಯಕ್ಕೆ ನೀಡಿದ್ದು, ನಾವು ಪ್ರಥಮ ಸ್ಥಾನದಲ್ಲಿದ್ದೇವೆ ಎಂದರು. ದೇಶದಲ್ಲಿ ಒಟ್ಟು 900 ಜಿಸಿಸಿ ಕೇಂದ್ರಗಳಿದ್ದು, ಇವುಗಳ ಪೈಕಿ ಶೇ.35ರಷ್ಟು ಕರ್ನಾಟಕದಲ್ಲೇ ಇವೆ. ಇ-ಕಾಮರ್ಸ್ ವಹಿವಾಟಿಗೆ ಬೇಕಾದ ಮೂಲಸೌಕರ್ಯದಲ್ಲೂ ರಾಜ್ಯವು ಮೊದಲ ಸ್ಥಾನದಲ್ಲಿದೆ. ನಮ್ಮಲ್ಲಿ 42.48 ಲಕ್ಷ ಟನ್ ದಾಸ್ತಾನು ಸಂಗ್ರಹಿಸುವಷ್ಟು ಉಗ್ರಾಣಗಳು ಮತ್ತು 233 ಶೀತಲಗೃಹಗಳಿವೆ. ಇದಕ್ಕೆ ತಕ್ಕಂತೆ ಇ-ಕಾಮರ್ಸ್ ವಹಿವಾಟು ಶೇ.11ರಷ್ಟು ಬೆಳವಣಿಗೆ ಸಾಧಿಸುತ್ತಿದೆ ಎಂದರು. ಅಮೆಜಾನ್ ಮತ್ತು ಜಾಗತಿಕ ಮಟ್ಟದ ಇತರ ಕಂಪನಿಗಳು ರಾಜ್ಯದಲ್ಲಿರುವ ಈ ಕೈಗಾರಿಕಾಸ್ನೇಹಿ ಕಾರ್ಯಪರಿಸರದ ಲಾಭವನ್ನು ಪಡೆದುಕೊಂಡು ಹೆಚ್ಚುಹೆಚ್ಚು ಹೂಡಿಕೆ ಮಾಡಬೇಕು. ಜತೆಗೆ ಇಲ್ಲೇ ಉತ್ಪಾದನೆ ಮಾಡಿ, ಜಗತ್ತಿನ ವಿವಿಧ ದೇಶಗಳಿಗೆ ರಫ್ತು ಮಾಡುವ ಮೂಲಕ ಕರ್ನಾಟಕವನ್ನು ಜಾಗತಿಕ ಉತ್ಪಾದನಾ ಕೇಂದ್ರವನ್ನಾಗಿಸಬೇಕು ಎಂದು ಕರೆನೀಡಿದರು. ಕಾರ್ಯಕ್ರಮದಲ್ಲಿ ಅಮೆಜಾನ್ ಕಂಪನಿಯ ಜಾಗತಿಕ ವ್ಯವಹಾರಗಳ ವಿಭಾಗದ ಮುಖ್ಯಸ್ಥ ಡೇವಿಡ್ ಝಪೊಲೋಸ್ಕಿ, ಉಪಾಧ್ಯಕ್ಷ ಚೇತನ್ ಕೃಷ್ಣಸ್ವಾಮಿ, ಮತ್ತೋರ್ವ ಉಪಾಧ್ಯಕ್ಷ ಸಮೀರ್ ಕುಮಾರ್, ಜಾಗತಿಕ ಆಸ್ತಿಪಾಸ್ತಿಗಳ ವಿಭಾಗದ ಉಪಾಧ್ಯಕ್ಷ ಸೀನ್ ಲೀ ಮುಂತಾದವರು ಹಾಜರಿದ್ದರು. #Amazon #corporateoffice #inaugurated #Bengaluru #AmazonIndia #malgudiexpress #malgudinews #news #TopNews
📜ಪ್ರಚಲಿತ ವಿದ್ಯಮಾನ📜 - ణిజ్య ವೂ & ಬೆಂಗಳೂರಿನಲ್ಲಿ $000 EXPRESS ಅಮೆಜಾನ್ ಕಂಪನಿಯ  ಕಾರ್ಪೊರೇಟ್ ಕಚೇರಿ లుద్భాటని ణిజ్య ವೂ & ಬೆಂಗಳೂರಿನಲ್ಲಿ $000 EXPRESS ಅಮೆಜಾನ್ ಕಂಪನಿಯ  ಕಾರ್ಪೊರೇಟ್ ಕಚೇರಿ లుద్భాటని - ShareChat
#📜ಪ್ರಚಲಿತ ವಿದ್ಯಮಾನ📜 ದರ್ಶನ್ ಪುಟ್ಟಣ್ಣಯ್ಯ ಅವರು ಮಾತಾಡುತ್ತಿರುವ 'ನೂಕ್ ಸೆಂಟರ್' ಪರಿಕಲ್ಪನೆ ಏನು? ಶಾಲೆ-ಶಿಕ್ಷಕರಿಲ್ಲದ ವಿಭಿನ್ನ ಕಲಿಕಾ ಲೋಕ ಕೌಶಲ್ಯ ಬೆಳೆಸಿಕೊಳ್ಳಲು ಪೂರಕವಾಗಿರುವ ಹೊಸ ಆವಿಷ್ಕಾರವೇ 'ನೂಕ್ ಸೆಂಟರ್' ಕಳೆದ ಕೆಲವು ವರ್ಷಗಳಿಂದ ಕರ್ನಾಟಕದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ನಾಯಕ ಮತ್ತು ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ನೂಕ್ ಸೆಂಟರ್ ಪರಿಕಲ್ಪನೆ ಕುರಿತು ಅನೇಕ ಸಂದರ್ಭಗಳಲ್ಲಿ ಮಾತನಾಡುತ್ತಿದ್ದಾರೆ. ಭಾರತದ ಮಟ್ಟದಲ್ಲಿ ಒಬ್ಬ ಶಾಸಕರಾಗಿ ಈ ಪರಿಕಲ್ಪನೆ ಕುರಿತು ಮಾತನಾಡುತ್ತಿರುವ ಅಪರೂಪದ ವ್ಯಕ್ತಿ ದರ್ಶನ್ ಪುಟ್ಟಣ್ಣಯ್ಯ. ಅವರು ಹೇಳುತ್ತಿರುವ ನೂಕ್ ಸೆಂಟರ್ ಕುರಿತು ಮಾಹಿತಿ ನಿಮಗಾಗಿ ಇಲ್ಲಿದೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಶಿಕ್ಷಣ ಎಂದರೆ ಕೇವಲ ನಾಲ್ಕು ಗೋಡೆಗಳ ಮಧ್ಯೆ ಕುಳಿತು ಪರೀಕ್ಷೆ ಬರೆಯುವುದಷ್ಟೇ ಆಗಿ ಉಳಿದಿಲ್ಲ. ಸಾಂಪ್ರದಾಯಿಕ ಶಿಕ್ಷಣ ಪದ್ಧತಿಯಿಂದ ಹೊರಬಂದು, ಯುವಜನತೆ ತಮ್ಮ ಆಸಕ್ತಿಯ ಕ್ಷೇತ್ರಗಳಲ್ಲಿ ತಾವಾಗಿಯೇ ಕೌಶಲ್ಯ ಬೆಳೆಸಿಕೊಳ್ಳಲು ಪೂರಕವಾಗಿರುವ ಹೊಸ ಆವಿಷ್ಕಾರವೇ 'ನೂಕ್ ಸೆಂಟರ್' (Nook Center). ಏನಿದು ನೂಕ್? ಇದರ ವಿಶೇಷತೆಗಳೇನು? ಇಲ್ಲಿ ಕಲಿಕೆ ಹೇಗೆ ನಡೆಯುತ್ತದೆ? ಎಂಬ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ. ಏನಿದು ನೂಕ್ ಸೆಂಟರ್?: 'ನೂಕ್' ಎಂದರೆ ಒಂದು ಸಣ್ಣ ಜಾಗ ಅಥವಾ ಮೂಲೆಯೆಂದರ್ಥ. ಆದರೆ ಈ 'ನೂಕ್ ಸೆಂಟರ್'ಗಳು ಜ್ಞಾನದ ಆಗರ. ಅಲ್ಲಮಪ್ರಭು ಹೇಳುವ ಗುಹೇಶ್ವರ ಪರಿಕಲ್ಪನೆಗೂ ಇದಕ್ಕೂ ಸಾಮ್ಯತೆ ಇದೆ. ಇದು ಒಂದು ಸ್ವಯಂ-ನಿರ್ದೇಶಿತ ಕಲಿಕಾ ಕೇಂದ್ರ (Self-directed Learning Space). ಇಲ್ಲಿ ಯಾವುದೇ ಕಟ್ಟುನಿಟ್ಟಾದ ಪಠ್ಯಕ್ರಮ (Syllabus) ಇರುವುದಿಲ್ಲ, ಪಾಠ ಮಾಡಲು ಶಿಕ್ಷಕರಿರುವುದಿಲ್ಲ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಪರೀಕ್ಷೆಗಳ ಭಯವಿರುವುದಿಲ್ಲ. ಯುವಜನತೆ ತಮಗೆ ಬೇಕಾದ ವಿಷಯವನ್ನು ತಮಗೆ ಬೇಕಾದ ವೇಗದಲ್ಲಿ ಕಲಿಯಲು ಇಲ್ಲಿ ಮುಕ್ತ ಅವಕಾಶವಿದೆ. ಇಲ್ಲಿ ಕಲಿಕೆ ಹೇಗೆ?: ನೂಕ್ ಸೆಂಟರ್‌ನ ಕಾರ್ಯವೈಖರಿ ಅತ್ಯಂತ ಕುತೂಹಲಕಾರಿ. ಪೀರ್-ಟು-ಪೀರ್ ಲರ್ನಿಂಗ್: ಒಬ್ಬ ವಿದ್ಯಾರ್ಥಿಗೆ ತಿಳಿದ ವಿಷಯವನ್ನು ಮತ್ತೊಬ್ಬರಿಗೆ ಕಲಿಸುವುದು ಮತ್ತು ಚರ್ಚೆಯ ಮೂಲಕ ಹೊಸತನ್ನು ಕಲಿಯುವುದು ಇಲ್ಲಿನ ಮುಖ್ಯ ಮಂತ್ರ. ಸಂಪನ್ಮೂಲಗಳ ಬಳಕೆ: ಇಲ್ಲಿ ಇಂಟರ್ನೆಟ್ ಸೌಲಭ್ಯವಿರುವ ಕಂಪ್ಯೂಟರ್‌ಗಳು, ಎಲೆಕ್ಟ್ರಾನಿಕ್ ಕಿಟ್‌ಗಳು, ಕರಕುಶಲ ವಸ್ತುಗಳು ಮತ್ತು ವಿಜ್ಞಾನ ಉಪಕರಣಗಳು ಲಭ್ಯವಿರುತ್ತವೆ. ಇವುಗಳನ್ನು ಬಳಸಿಕೊಂಡು ಯುವಕರು ಹೊಸ ಪ್ರಾಜೆಕ್ಟ್‌ಗಳನ್ನು ಮಾಡುತ್ತಾರೆ. ಸೃಜನಶೀಲತೆಗೆ ಆದ್ಯತೆ: ಇಲ್ಲಿ ಕೇವಲ ಓದಿಗೆ ಸೀಮಿತವಾಗದೆ, ವಿಡಿಯೋ ಎಡಿಟಿಂಗ್, ಗ್ರಾಫಿಕ್ ಡಿಸೈನ್, ಫೋಟೋಗ್ರಫಿ, ರೋಬೋಟಿಕ್ಸ್ ಅಥವಾ ಕೃಷಿ ಸಂಬಂಧಿತ ತಂತ್ರಜ್ಞಾನಗಳಂತಹ ಪ್ರಾಯೋಗಿಕ ಕೆಲಸಗಳಿಗೆ ಪ್ರಾಮುಖ್ಯತೆ ನೀಡಲಾಗುತ್ತದೆ. ಪ್ರಾಜೆಕ್ಟ್ ಡಿಫೈ (Project DEFY) ಪಾತ್ರ: ಈ ಕ್ರಾಂತಿಕಾರಿ ಪರಿಕಲ್ಪನೆಯ ಹಿಂದೆ 'ಪ್ರಾಜೆಕ್ಟ್ ಡಿಫೈ' (Project DEFY - Design Education For Yourself) ಎನ್ನುವ ಸಂಸ್ಥೆಯ ಶ್ರಮವಿದೆ. ಶಿಕ್ಷಣವನ್ನು ಪ್ರತಿಯೊಬ್ಬರಿಗೂ ತಲುಪಿಸಬೇಕು ಮತ್ತು ಕಲಿಕೆ ಎನ್ನುವುದು ಬಲವಂತವಾಗಿರಬಾರದು ಎನ್ನುವ ಉದ್ದೇಶದಿಂದ ಇವರು ಇಂತಹ ಕೇಂದ್ರಗಳನ್ನು ದೇಶದ ವಿವಿಧೆಡೆ, ವಿಶೇಷವಾಗಿ ಗ್ರಾಮೀಣ ಭಾಗಗಳಲ್ಲಿ ಸ್ಥಾಪಿಸುತ್ತಿದ್ದಾರೆ. ನೂಕ್ ಸೆಂಟರ್‌ನ ಪ್ರಯೋಜನಗಳೇನು?: ಆರ್ಥಿಕ ಸಬಲೀಕರಣ: ಪದವಿ ಮುಗಿಸಿದರೂ ಕೆಲಸ ಸಿಗದೆ ಪರದಾಡುವ ಯುವಕರು ಇಲ್ಲಿ ಪ್ರಾಯೋಗಿಕ ಕೌಶಲ್ಯ ಕಲಿತು ಸ್ವಂತ ಉದ್ಯೋಗ ಮಾಡಬಹುದು. ಆತ್ಮವಿಶ್ವಾಸ ವೃದ್ಧಿ: ತಾವೇ ಸ್ವತಃ ಒಂದು ಹೊಸ ವಸ್ತುವನ್ನು ನಿರ್ಮಿಸಿದಾಗ ಅಥವಾ ಹೊಸ ಸಾಫ್ಟ್‌ವೇರ್ ಕಲಿತಾಗ ಯುವಜನರಲ್ಲಿ ಅಪಾರ ಆತ್ಮವಿಶ್ವಾಸ ಮೂಡುತ್ತದೆ. ಜೀವನ ಕೌಶಲ್ಯ: ಸಮಸ್ಯೆಗಳನ್ನು ಎದುರಿಸುವುದು (Problem Solving) ಮತ್ತು ಹೊಸ ಆಲೋಚನೆಗಳನ್ನು ಕಾರ್ಯರೂಪಕ್ಕೆ ತರುವುದನ್ನು ಇಲ್ಲಿ ಕಲಿಯಬಹುದು. ಸಮುದಾಯದ ಸಹಭಾಗಿತ್ವ: ನೂಕ್ ಸೆಂಟರ್‌ಗಳು ಕೇವಲ ಒಂದು ಕಟ್ಟಡವಲ್ಲ, ಅವು ಸಮುದಾಯದ ಕೇಂದ್ರಗಳಾಗಿವೆ. ಸ್ಥಳೀಯ ಸಮಸ್ಯೆಗಳಿಗೆ ಸ್ಥಳೀಯವಾಗಿ ಲಭ್ಯವಿರುವ ವಸ್ತುಗಳನ್ನು ಬಳಸಿ ಹೇಗೆ ಪರಿಹಾರ ಕಂಡುಕೊಳ್ಳಬಹುದು ಎಂಬುದಕ್ಕೆ ಈ ಕೇಂದ್ರಗಳು ಉತ್ತಮ ಉದಾಹರಣೆಗಳಾಗಿವೆ. ಒಟ್ಟಾರೆ, ಕೇವಲ ಅಂಕಗಳ ಬೆನ್ನು ಹತ್ತದೆ, ನಿಜವಾದ ಜ್ಞಾನ ಮತ್ತು ಕೌಶಲ್ಯವನ್ನು ಸಂಪಾದಿಸಲು ಬಯಸುವ ಯುವಕರಿಗೆ ನೂಕ್ ಸೆಂಟರ್ ಒಂದು ವರದಾನ. ಶಿಕ್ಷಣ ಕ್ಷೇತ್ರದಲ್ಲಿ ಇಂತಹ ಬದಲಾವಣೆಗಳು ಇಂದಿನ ತುರ್ತು ಅಗತ್ಯವಾಗಿದೆ ಎಂದರೆ ತಪ್ಪೇನಿಲ್ಲ. #NookCenter #concept #DarshanPuttannaiah #talking #education #malgudiexpress #malgudinews #news #TopNews
📜ಪ್ರಚಲಿತ ವಿದ್ಯಮಾನ📜 - ShareChat
#📜ಪ್ರಚಲಿತ ವಿದ್ಯಮಾನ📜 ಮೋದಿ ಭಾರತಕ್ಕೆ ಅಚ್ಚೇದಿನ್ ಹೇಗೆ ತಂದಿದ್ದಾರೆ ಅಂತ ನಿಮಗೆ ಗೊತ್ತಾ? ಒಬ್ಬ ಅಂಧಭಕ್ತನ ಅಚ್ಛೇ ದಿನ್ ಕನಸು! ನಾನು ಒಬ್ಬ ಅಂಧಭಕ್ತ, ಆರಾಮಾಗಿ ಕುಳಿತು ನನ್ನ ಹರಿದ ಚಡ್ಡಿಯನ್ನು ಹೊಲಿಯುತ್ತಿದ್ದೆ. ಅಷ್ಟರಲ್ಲಿ ಮೊಬೈಲ್ನಲ್ಲಿ ಮೆಸೇಜ್ ಬಂದ ಶಬ್ದವಾಯಿತು. ಮೊಬೈಲ್ ತೆಗೆದು ನೋಡಿದ್ದೇ ತಡ, ನನಗೆ ತಲೆತಿರುಗಿದಂತಾಯಿತು! ಮೆಸೇಜ್ನಲ್ಲಿ ಹೀಗಿತ್ತು: "ಕಪ್ಪು ಹಣ ವಾಪಸ್ ಬಂದಿದೆ, ಹಾಗಾಗಿ ನಿಮ್ಮ ಖಾತೆಗೆ 15 ಲಕ್ಷ ರೂಪಾಯಿ ಜಮೆಯಾಗಿದೆ." ನನ್ನ ಸಂತೋಷಕ್ಕೆ ಪಾರವೇ ಇರಲಿಲ್ಲ, ನಾನು ಕುಣಿಯಲು ಆರಂಭಿಸಿದೆ. ಮನೆಯ ಬಾಗಿಲು ತೆರೆದು ಬೀದಿಯಲ್ಲಿ ಕುಣಿಯುತ್ತಾ ಹೊರಬಂದೆ. ಆಗಲೇ ನನ್ನ ಪಕ್ಕದಲ್ಲಿ ಅತೀ ವೇಗವಾಗಿ ಒಂದು ವಾಹನ ಹಾದುಹೋಯಿತು, ಆದರೆ ಅದು ಏನೆಂದು ನನಗೆ ಕಾಣಿಸಲಿಲ್ಲ. ನೆರೆಹೊರೆಯವರು ಹೇಳಿದರು, "ಅದು ಬುಲೆಟ್ ಟ್ರೈನ್" ಎಂದು. ನಾನು ಇನ್ನೂ ಖುಷಿಯಾಗಿ ಹಾಡುತ್ತಾ, ಕುಣಿಯುತ್ತಾ ಮುಂದೆ ಸಾಗಿದೆ. ದಾರಿಯಲ್ಲಿ ಒಂದು ರಾಯಲ್ ಎನ್ಫೀಲ್ಡ್ ಶೋರೂಮ್ ಕಂಡಿತು. ಅದರ ಹೊರಗಿನ ಪೋಸ್ಟರ್ನಲ್ಲಿ ದೊಡ್ಡ ಅಕ್ಷರಗಳಲ್ಲಿ ಬರೆಯಲಾಗಿತ್ತು: "ರಸ್ತೆಯ ಮಾಲು ಅಗ್ಗದ ದರದಲ್ಲಿ ಪಡೆಯಿರಿ, ಬುಲೆಟ್ ಬೈಕ್ ಕೇವಲ 56 ಸಾವಿರಕ್ಕೆ!" ನನ್ನ ಕಣ್ಣುಗಳೇ ಮಂಜಾದವು. ತಕ್ಷಣ ಬುಲೆಟ್ ಖರೀದಿಸಿ ಸಂಭ್ರಮದಿಂದ ಮುಂದೆ ಸಾಗಿದೆ. ಇಂದು ಮನಸಾರೆ ಸುತ್ತಾಡೋಣ ಎಂದುಕೊಂಡು ಟ್ಯಾಂಕ್ ಫುಲ್ ಮಾಡಿಸಲು ಪೆಟ್ರೋಲ್ ಬಂಕ್ಗೆ ಹೋದೆ. ಅಲ್ಲಿ ನೋಡಿದರೆ ಅಮಿತಾಬ್ ಬಚ್ಚನ್ ಪೆಟ್ರೋಲ್ ನೋಜಲ್ ಹಿಡಿದು ನಿಂತಿದ್ದಾರೆ! ನಾನು ದಂಗಾಗಿ ಹೋದೆ. ಆಗ ಬಚ್ಚನ್ ಹೇಳಿದರು, "ಆಶ್ಚರ್ಯ ಪಡಬೇಡಪ್ಪಾ, ಈಗ ಪೆಟ್ರೋಲ್ ಲೀಟರ್ಗೆ ಕೇವಲ 35 ರೂಪಾಯಿ ಅಷ್ಟೇ." ನನ್ನ ಕಣ್ಣುಗಳಲ್ಲಿ ಆನಂದಬಾಷ್ಪ ಸುರಿಯಿತು. ಕೇವಲ 556 ರೂಪಾಯಿಯಲ್ಲಿ ಬೈಕ್ ಟ್ಯಾಂಕ್ ಫುಲ್ ಆಯಿತು. ನಾನು ಹೊರಡುವಷ್ಟರಲ್ಲಿ ಬಾಬಾ ರಾಮ್ದೇವ್ ಓಡಿ ಬಂದು ಹಿಂದಿನ ಸೀಟಿನಲ್ಲಿ ಒಂದು ಗ್ಯಾಸ್ ಸಿಲಿಂಡರ್ ಇಟ್ಟರು. "ಇದೇನಿದು ಸ್ವಾಮೀಜಿ?" ಅಂದೆ. "ಟ್ಯಾಂಕ್ ಫುಲ್ ಮಾಡಿಸಿದವರಿಗೆ ಉಚಿತ ಗ್ಯಾಸ್ ಸಿಲಿಂಡರ್" ಎಂದರು ಅವರು. ನನ್ನ ಸಂತೋಷದ ಕಣ್ಣೀರು ನಿಲ್ಲಲೇ ಇಲ್ಲ. ಬೈಕ್ ಏರಿ ಮುಂದೆ ಹೋದಾಗ, ಪೊಲೀಸರು ಕೆಲವು ಯುವಕರಿಗೆ ಲಾಠಿಯಿಂದ ಹೊಡೆಯುತ್ತಿರುವುದನ್ನು ಕಂಡೆ. ನಾನು ಪೊಲೀಸರನ್ನು ತಡೆದು ಕೇಳಿದೆ, "ಯಾಕೆ ಈ ಹುಡುಗರನ್ನು ಹೊಡೆಯುತ್ತಿದ್ದೀರಿ?" ಎಂದು. ಅದಕ್ಕೆ ಪೊಲೀಸ್ ಹೇಳಿದರು, "ಮೋದಿಜಿ 2 ಕೋಟಿ ಉದ್ಯೋಗಗಳನ್ನು ಸೃಷ್ಟಿಸಿದ್ದಾರೆ, ಆದರೆ ಜನರೇ ಸಾಲುತ್ತಿಲ್ಲ. ಅದಕ್ಕೆ ಇವರನ್ನು ಬಲವಂತವಾಗಿ ಹಿಡಿದು ಹೊಡೆದು ಎಸ್ಡಿಎಂ, ಎಸ್ಡಿಒ, ಜೆಇ ಕ್ಲರ್ಕ್ ಹುದ್ದೆಗಳಿಗೆ ಸೇರಿಸುತ್ತಿದ್ದೇವೆ." ನಾನು ಹೇಳಿದೆ, "ಇನ್ನೂ ಜೋರಾಗಿ ಹೊಡೆಯಿರಿ ಸಾಹೇಬ್ರೆ, ಈ ಸೋಮಾರಿಗಳನ್ನು ಕೆಲಸಕ್ಕೆ ಹಚ್ಚಿ!" ನಾನು ನಗರವೊಂದಕ್ಕೆ ಪ್ರವೇಶಿಸಿದೆ. ಅಲ್ಲಿನ ವೈಭವ ನೋಡಿ ನನಗೆ ಭಯವಾಯಿತು. ತಪ್ಪಿ ವಿದೇಶಕ್ಕೆ ಬಂದೇನಾ ಎಂದುಕೊಂಡೆ. ದಾರಿಯಲ್ಲಿ ಹೋಗುತ್ತಿದ್ದವನನ್ನು ನಿಲ್ಲಿಸಿ "ಇದು ಯಾವ ದೇಶ?" ಎಂದು ಕೇಳಿದೆ. ಅವನು "ಇದು ಭಾರತವೇ" ಎಂದ. "ಯಾವ ರಾಜ್ಯ?" ಎಂದಿದ್ದಕ್ಕೆ, ಅವನು "ಬಿಹಾರದ ಪೂರ್ಣಿಯಾ ಜಿಲ್ಲೆ" ಎಂದ. "ಇದು ಇಷ್ಟೊಂದು ಸುಂದರವಾಗಿ ಹೇಗೆ ಬದಲಾಯಿತು?" ಅಂದಿದ್ದಕ್ಕೆ, ಅವನು "ಇದು 100 ಸ್ಮಾರ್ಟ್ ಸಿಟಿಗಳ ಯೋಜನೆಯಡಿ ಬಂದಿದೆ" ಎಂದ. ಇದನ್ನು ಕೇಳಿ ನನ್ನ ಹೃದಯ ಉಕ್ಕಿ ಬಂದಿತು. ಸ್ವಲ್ಪ ದೂರ ಹೋದಾಗ ಏರ್ಪೋರ್ಟ್ ಕಂಡಿತು. ಅಲ್ಲಿ ಕೆಲವು ಜನರು ಕೈಯಲ್ಲಿ ಸೌದೆ ಮತ್ತು ಮೇಕೆಗಳನ್ನು ಹಿಡಿದು ಹೊರಬರುತ್ತಿದ್ದರು. ನಾನು ಆಶ್ಚರ್ಯದಿಂದ ಕೇಳಿದೆ, "ಇದೇನಿದು?" ಎಂದು. ಅವರು ಹೇಳಿದರು, "ನಾವು ದುಬೈನಿಂದ ಕೆಲಸ ಮುಗಿಸಿ ಬರುತ್ತಿದ್ದೇವೆ." "ಬೆಳಗ್ಗೆ ಹೋಗುತ್ತೇವೆ, ಸಂಜೆ ಬರುತ್ತೇವೆ!" ಎಂದು ಅವರು ಹೇಳಿದಾಗ ನನಗೆ ಮೋದಿಜಿಯ ಮಾತು ನೆನಪಾಯಿತು—"ಹವಾಯಿ ಚಪ್ಪಲಿ ಹಾಕುವವರು ಹವಾಯಿ ಪ್ರಯಾಣ ಮಾಡುತ್ತಾರೆ" ಎಂಬ ಕನಸು ಇಂದು ನನಸಾಗಿದೆ! ಮುಂದೆ 56 ಅಂತಸ್ತಿನ ಫೈವ್ ಸ್ಟಾರ್ ಹೋಟೆಲ್ನಲ್ಲಿ ಚಹಾ ಕುಡಿಯಲು ನಿಂತೆ. ಟೀ ಕುಡಿದು ಬಿಲ್ ಕೇಳಿದರೆ ವೀಟರ್ "ಒಂದೂವರೆ ರೂಪಾಯಿ" ಅಂದ! "ಇದೇನು ಫೈವ್ ಸ್ಟಾರ್ ಹೋಟೆಲ್ ಇಷ್ಟೊಂದು ಅಗ್ಗವೇ?" ಅಂದಿದ್ದಕ್ಕೆ ಅವನು ಹೇಳಿದ, "ಅಗ್ಗ ಎಲ್ಲಿದೆ ಸ್ವಾಮಿ? ಈಗ ಭಾರತದ 1 ರೂಪಾಯಿ 256 ಡಾಲರ್ಗೆ ಸಮನಾಗಿದೆ!" ನಾನು ನೆಮ್ಮದಿಯ ನಿಟ್ಟುಸಿರು ಬಿಟ್ಟೆ. ಮೋದಿಜಿಗೆ ಧನ್ಯವಾದ ಹೇಳಿದೆ, ಕೊನೆಗೂ "ಅಚ್ಛೇ ದಿನ್" ಬಂದೇ ಬಿಟ್ಟವು! ಅಷ್ಟರಲ್ಲಿ ಯಾರೋ ಜೋರಾಗಿ ಕೂಗಿದಂತಾಯಿತು... "ಏನ್ರಿ, ಎದ್ದೇಳಿ! ಮಧ್ಯಾಹ್ನವಾಯಿತು. ಆ ಹರಿದ ಚಡ್ಡಿಯಲ್ಲಿ ನಿಮ್ಮ ಪ್ರಮುಖ ವಸ್ತು ಕಾಣಿಸುತ್ತಿದೆ, ಮಕ್ಕಳು ದೊಡ್ಡವರಾಗಿದ್ದಾರೆ, ಹೀಗೆ ಉಲ್ಟಾ ಮಲಗುವುದನ್ನು ಬಿಡಿ!" ಛೇ... ಕನಸು ಕಾಣುತ್ತಿದ್ದೆ! ಎಚ್ಚರವಾದ ಮೇಲೆ ಮೊಬೈಲ್ ಚೆಕ್ ಮಾಡಿದೆ. ಅದರಲ್ಲಿ 156 ರೂಪಾಯಿ ಬ್ಯಾಲೆನ್ಸ್ ಇತ್ತು, ಅದರಲ್ಲಿಯೂ ಎಸ್ಬಿಐನವರು 147 ರೂಪಾಯಿ ಚಾರ್ಜ್ ಕಟ್ ಮಾಡಿಕೊಂಡಿದ್ದರು! 😓😓 ಹೃದಯ ಒಡೆದಿದೆ ಗೆಳೆಯರೇ, ಆದರೆ ನಾನು ಮೋದಿಜಿಯಂತಹ ಮಹಾನ್ ದೇಶಭಕ್ತನ ಭಕ್ತ ನನ್ನ ಮನೋಬಲ ಕುಗ್ಗಲು ಬಿಡುವುದಿಲ್ಲ. ನೆನಪಿರಲಿ... "ಬರೋದು ಮೋದಿಜಿಯೇ!" 😍 ಜೈ ಜೈ ಮೋದಿ ತೈ ತೈ ಮೋದಿ.🤗 (ಮೂಲ ಹಿಂದಿ) #know #how #Modi #brought #Achehdin #India #malgudiexpress #malgudinews #news #TopNews
📜ಪ್ರಚಲಿತ ವಿದ್ಯಮಾನ📜 - ShareChat
#📜ಪ್ರಚಲಿತ ವಿದ್ಯಮಾನ📜 ದೊಡ್ಡಹುಣಸೆ ಮಠದ ಶ್ರೀಗಳ ನೇತೃತ್ವದಲ್ಲಿ ಶಿಕ್ಷಣ ಮತ್ತು ಸಂಸ್ಕೃತಿ ವಿಸ್ತರಿಸಿದೆ: ಬಸವರಾಜ ಬೊಮ್ಮಾಯಿ ನಾನು ಅರ್ಥಶಾಸ್ತ್ರ ಮತ್ತು ತತ್ವಶಾಸ್ತ್ರ ಎರಡನ್ನೂ ಅಧ್ಯಯನ ಮಾಡುತ್ತೇನೆ. ಅರ್ಥಶಾಸ್ತ್ರದಲ್ಲಿ ಲಾಭ–ನಷ್ಟ ಇದ್ದರೆ, ಆಧ್ಯಾತ್ಮದಲ್ಲಿ ಪಾಪ–ಪುಣ್ಯ ಇವೆ. ವ್ಯವಹಾರದಲ್ಲಿ ನೀತಿ ಇರಬೇಕು, ಆಧ್ಯಾತ್ಮದಲ್ಲಿ ಜಾಗೃತಿ ಇರಬೇಕು. ಲಾಭದಿಂದಲೂ ಪುಣ್ಯ ಗಳಿಸಬೇಕಾದರೆ ಸನ್ಮಾರ್ಗ ಅಗತ್ಯ. ಅದನ್ನೇ ಬಸವಣ್ಣ ಅವರು ನಮಗೆ ಕಲಿಸಿದ್ದಾರೆ. ಅವರ ಅನುಭವ ಮಂಟಪವು ಜಗತ್ತಿನ ಮೊದಲ ಪಾರ್ಲಿಮೆಂಟ್ ಎಂದೇ ಹೇಳಲಾಗುತ್ತದೆ. “ಕಲಬೇಡ, ಕೊಲಬೇಡ, ಹುಸಿಯ ನುಡಿಯಬೇಡ” ಎಂದು ಅವರು ಸನ್ಮಾರ್ಗ ತೋರಿಸಿದರು. ಕಾಮ, ಕ್ರೋಧ, ಮದ, ಮತ್ಸರದಲ್ಲಿ ಸಿಲುಕಿದವನು ಮನುಷ್ಯ; ನ್ಯಾಯ, ನೀತಿ, ಪ್ರೀತಿ, ವಿಶ್ವಾಸದಲ್ಲಿ ಬದುಕುವವನು ಮಾನವ. ಆ ಮುಗ್ಧತೆ ಮತ್ತು ಆತ್ಮಸಾಕ್ಷಿ ಉಳಿಯಲು ಶ್ರೀಮಠಗಳ ಆಧ್ಯಾತ್ಮಿಕ ಜಾಗೃತಿ ಅಗತ್ಯ. ದೊಡ್ಡ ಹುಣಸೆ ಮಠದ ಶ್ರೀಗಳ ನೇತೃತ್ವದಲ್ಲಿ ಶಿಕ್ಷಣ ಮತ್ತು ಸಂಸ್ಕೃತಿ ವಿಸ್ತರಿಸಿದೆ. ಮುಂದಿನ ವರ್ಷ ಲಿಂಗೈಕ್ಯ ಶ್ರೀ ಗುರು ರಾಚೋಟೇಶ್ವರ ಮಹಾಸ್ವಾಮಿಗಳವರ 50ನೇ ಸ್ಮರಣೋತ್ಸವವನ್ನು ಎಲ್ಲರೂ ಸೇರಿ ಅರ್ಥಪೂರ್ಣವಾಗಿ ಆಚರಿಸೋಣ. - ಬಸವರಾಜ ಬೊಮ್ಮಾಯಿ, ಸಂಸದ #Education #culture #expanded #under #leadership #monks #DoddahunaseMath #BasavarajaBommai #malgudiexpress #malgudinews #news #TopNews
📜ಪ್ರಚಲಿತ ವಿದ್ಯಮಾನ📜 - ShareChat
#📜ಪ್ರಚಲಿತ ವಿದ್ಯಮಾನ📜 ವಸ್ತು ಪ್ರದರ್ಶನ ಸಣ್ಣ ಉದ್ಯಮಿಗಳು ಆದಾಯ ಹೆಚ್ಚಿಸಿಕೊಳ್ಳಲು ಉತ್ತಮ ವೇದಿಕೆ: ಸಂತೋಷ್ ಲಾಡ್ ಗುಡಿ ಕೈಗಾರಿಕೆ ಮತ್ತು ಕರಕುಶಲ ವಸ್ತುಗಳ ಪ್ರದರ್ಶನ ವಸ್ತು ಮಳಿಗೆ ವೀಕ್ಷಿಸಿ, ವಸ್ತುಗಳನ್ನು ಖರೀದಿಸಿ, ಪ್ರೋತ್ಸಾಹಿಸಿದ ಸಚಿವ ಧಾರವಾಡ: ಜಿಲ್ಲಾ ಪಂಚಾಯತಯ ಗ್ರಾಮೀಣ ಮತ್ತು ಸಣ್ಣ ಉದ್ಯಮ ವಿಭಾಗದಿಂದ 2025-26 ನೇ ಸಾಲಿನ ವಸ್ತುಪ್ರದರ್ಶನ ಯೋಜನೆಯಡಿ ಫೆಬ್ರವರಿ 24 ರಿಂದ 28, 2026 ರವರೆಗೆ ಆಯೋಜಿಸಿರುವ ಜಿಲ್ಲಾ ಮಟ್ಟದ ಕುಶಲಕರ್ಮಿಗಳ ಹಾಗೂ ಗುಡಿ ಕೈಗಾರಿಕೆಗಳ ಉತ್ಪನ್ನಗಳ ವಸ್ತುಪ್ರದರ್ಶನ ಮತ್ತು ಮಾರಾಟ ಮೇಳವನ್ನು ಧಾರವಾಡದ ಕರ್ನಾಟಕ ಕಾಲೇಜ (ಕೆಸಿಡಿ) ಮೈದಾನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಉದ್ಘಾಟಿಸಿದರು. ಪ್ರದರ್ಶನದಲ್ಲಿ ಭಾಗವಹಿಸಿದ್ದ ಗುಡಿ ಕೈಗಾರಿಕಾರರು ಹಾಗೂ ಸ್ವ ಸಹಾಯ ಸಂಘಗಳ ಸದಸ್ಯರೊಂದಿಗೆ ಮಾತನಾಡಿ, ವಸ್ತುಗಳನ್ನು ಹೇಗೆ ತಯಾರಿಸುತ್ತೀರಿ, ಕಚ್ಚಾ ಸಾಮಗ್ರಿ ಎಲ್ಲಿಂದ ತರುತ್ತೀರಿ, ದಿನನಿತ್ಯದ ಉತ್ಪಾದನೆ ಎಷ್ಟು, ವ್ಯಾಪಾರದ ಸ್ಥಿತಿ ಹೇಗಿದೆ ಎಂಬ ಬಗ್ಗೆ ವಿವರವಾಗಿ ವಿಚಾರಿಸಿ, ಮಾಹಿತಿ ಪಡೆದರು. ಪ್ರದರ್ಶನ ಮತ್ತು ಮಾರಾಟ ಮೇಳದಲ್ಲಿ ಒಟ್ಟು 32 ಮಳಿಗೆಗಳು ಸ್ಥಾಪಿಸಲ್ಪಟ್ಟಿದ್ದು, ಕೈಗಾರಿಕಾ ವಸ್ತುಗಳು, ಗೃಹೋಪಯೋಗಿ ಸಾಮಗ್ರಿಗಳು, ಆಹಾರ ಪದಾರ್ಥಗಳು, ಹಸ್ತಕಲಾ ವಸ್ತುಗಳು ಸೇರಿದಂತೆ ವಿವಿಧ ಉತ್ಪನ್ನಗಳನ್ನು ಪ್ರದರ್ಶನಕ್ಕೆ ಮತ್ತು ಮಾರಾಟಕ್ಕೆ ಇರಿಸಲಾಗಿತ್ತು. ಸಾರ್ವಜನಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು, ಹಲವರಾ ಸಾರ್ವಜನಿಕರು ಸ್ಥಳದಲ್ಲೇ ವಸ್ತುಗಳನ್ನು ಖರೀದಿಸಿದರು. ಸಂತೋಷ್ ಲಾಡ್ ತಮಗೆ ಇಷ್ಟವಾದ ಕೆಲವು ವಸ್ತುಗಳನ್ನು ಸ್ವತಃ ಖರೀದಿಸಿ, ಸ್ಥಳೀಯ ಕಲಾವಿದರು ಹಾಗೂ ಉದ್ಯಮಿಗಳನ್ನು ಪ್ರೋತ್ಸಾಹಿಸಿದರು. ಈ ವಸ್ತು ಪ್ರದರ್ಶನ ಸಣ್ಣ ಉದ್ಯಮಿಗಳಿಗೆ ತಮ್ಮ ಉತ್ಪನ್ನಗಳನ್ನು ಪರಿಚಯಿಸಲು ಹಾಗೂ ಆದಾಯವನ್ನು ಹೆಚ್ಚಿಸಿಕೊಳ್ಳಲು ಉತ್ತಮ ವೇದಿಕೆಯಾಗಿದೆ ಎಂದು ಅಭಿಪ್ರಾಯಪಟ್ಟರು. ಮೇಳದಲ್ಲಿ ಜಿಲ್ಲಾ ಪಂಚಾಯತ ಎನ್‍ಆರ್‍ಎಲ್‍ಎಮ್ ಮತ್ತು ಸಂಜೀವಿನಿ ಒಕ್ಕೂಟ ಯೋಜನೆಯಡಿ ಅನೇಕ ಸ್ತ್ರೀಸ್ವಸಹಾಯ ಸಂಘಗಳು ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿ, ಸಿಬ್ಬಂದಿ, ಸಾರ್ವಜನಿಕರು ಭಾಗವಹಿಸಿದರು. ಈ ಸಂದರ್ಭದಲ್ಲಿ ಕರ್ನಾಟಕ ಬಾಲವಿಕಾಸ ಅಕಾಡೆಮಿಯ ಅಧ್ಯಕ್ಷ ಸಂಗಮೇಶ ಅಪ್ಪಾಸಿ ಬಬಲೇಶ್ವರ, ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಸ್. ಆರ್. ಪಾಟೀಲ, ಜಿಲ್ಲಾಧಿಕಾರಿ ಸ್ನೇಹಲ್ ಆರ್., ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ, ಪ್ರೊಬೇಷನರಿ ಐಎಎಸ್ ಅಧಿಕಾರಿ ರೀತಿಕಾ ವರ್ಮಾ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ, ಮುಖ್ಯ ಯೋಜನಾಧಿಕಾರಿ ದೀಪಕ ಮಡಿವಾಳರ, ಯೋಜನಾ ನಿರ್ದೇಶಕ ಬಿ.ಎಸ್. ರಾಠೋಡ್ ಸೇರಿದಂತೆ ಇತರರು ಹಾಜರಿದ್ದರು. #Exhibition #good #platform #smallentrepreneurs #increase #income #SantoshLad #malgudiexpress #malgudinews #news #TopNews
📜ಪ್ರಚಲಿತ ವಿದ್ಯಮಾನ📜 - ShareChat