ShareChat
click to see wallet page
search
ತಾಯಿ "ನೀಲಾಂಬಿಕೆ".. ಇವರು ವಿಶ್ವಗುರು ಬಸವಣ್ಣನವರ ಧರ್ಮಪತ್ನಿ. ಸಿದ್ಧರಸರ ಮಗಳು. ಬಿಜ್ಜಳ ಮಹಾರಾಜನ ಸಾಕುತಂಗಿ. ಇವರಿಗೆ ಬಾಲಸಂಗಯ್ಯ ಹೆಸರಿನ ಮಗನಿದ್ದನೆಂದು ತಿಳಿದುಬರುತ್ತದೆ. 'ವಿಚಾರಪತ್ನಿ' ಎಂದು ತಮ್ಮನ್ನು ತಾವು ಕರೆದುಕೊಂಡಿರುತ್ತಾರೆ, ಬಸವಣ್ಣನವರ ಧರ್ಮಪತ್ನಿ ತಾಯಿ ನೀಲಾಂಬಿಕೆಯವರು ಬಸವಣ್ಣನವರ ಬದುಕಿನಲ್ಲಿ ಬಹುಮುಖ್ಯ ಪಾತ್ರವಹಿಸಿರುತ್ತಾರೆ. ಕಲ್ಯಾಣ ಕ್ರಾಂತಿಯ ಸಂದರ್ಭದಲ್ಲಿ ಕೂಡಲಸಂಗಮದ ಸಮೀಪದ "ತಂಗಡಗಿ"ಯಲ್ಲಿ ಐಕ್ಯರಾದರೆಂದು ತಿಳಿಯುತ್ತದೆ. ಕಾಲ "ಅಲ್ಲಲ್ಲಿಯ ಶರಣರು ಅಲ್ಲಲ್ಲಿಯೇ ನಿಲಲು, ಅಲ್ಲಲ್ಲಿಯ ಭಕ್ತಿ ಅಲ್ಲಲ್ಲಿಯೆ ಅಡಗಿತ್ತು. ಅಲ್ಲಲ್ಲಿಯ ಕಾಯವಲ್ಲಲ್ಲಿಯೆ ಸಂದು ನಾನು ಅಲ್ಲಲ್ಲಿಯೆ ಅಡಗಿಯಾನು ಅನುಮಿಷ ದೃಷ್ಟಿಯುಳ್ಳವಳಾದೆನು. ಅಲ್ಲಲ್ಲಿಯೇ ಭ್ರಮಿಸಲು ಭ್ರಮೆಯಡಗಿ ಸಂಗಯ್ಯನಲ್ಲಿ ಮುಖವರಿತೆನಯ್ಯ ಬಸವಪ್ರಭುವೆ.. ! ನೀಲಾಂಬಿಕೆಯವರ ಅಧಿಕ ಸಂಖ್ಯೆಯ ವಚನಗಳನ್ನು ರಚಿಸಿದ್ದಾರೆ. ಅಂಕಿತನಾಮ 'ಸಂಗಯ್ಯ' ಸದ್ಯ ೨೮೮ ವಚನಗಳು ಉಪಲಬ್ಧವಾಗಿವೆ. ಅವುಗಳಲ್ಲಿ ಹೆಚ್ಚಾಗಿ. ಬಸವ ಸ್ತುತಿ, ಅವರ ಅಗಲಿಕೆಯ ನೋವಿನ ಧ್ವನಿ ಕೇಳಿಬರುತ್ತವೆ. #ನೀಲಾಂಬಿಕೆ #Neelambike #ತಾಯಿನೀಲಾಂಬಿಕೆ #ಶರಣ ಸಾಹಿತ್ಯ #//🌳ವಚನ ಸಾಹಿತ್ಯ 🌳// #ವಚನಗಳು #ಬಸವಾದಿ ಶರಣ ಶರಣೆಯರು #ಬಸವಣ್ಣನವರ ವಚನಗಳು
ಶರಣ ಸಾಹಿತ್ಯ - ನಲಾಂಐಕತಾ೦ ನಲಾಂಐಕತಾ೦ - ShareChat