
ಕಾಯಕವೇ ಕೈಲಾಸ..
@76865063
ದಯವೇ ಧರ್ಮದ ಮೂಲವಯ್ಯಾ.. ದೇಹವೇ ದೇಗುಲ.. ಅರಿವೇ ಗುರು..
ಶರಣ ಬಾಲ ಬೊಮ್ಮಣ್ಣ ನವರು.. #ಬಸವಾದಿ ಶರಣ ಶರಣೆಯರು #ಶರಣ ಸಾಹಿತ್ಯ #ವಚನಗಳು #//🌳ವಚನ ಸಾಹಿತ್ಯ 🌳// #ಬಸವಣ್ಣನವರ ವಚನಗಳು
ಅಕ್ಕಮಹಾದೇವಿಯವರ ವಚನ.. #ಬಸವಣ್ಣನವರ ವಚನಗಳು #//🌳ವಚನ ಸಾಹಿತ್ಯ 🌳// #ವಚನಗಳು #ಶರಣ ಸಾಹಿತ್ಯ #ಬಸವಾದಿ ಶರಣ ಶರಣೆಯರು
ಅಲ್ಲಮಪ್ರಭುದೇವರ ವಚನ.. #ಬಸವಾದಿ ಶರಣ ಶರಣೆಯರು #ಶರಣ ಸಾಹಿತ್ಯ #ವಚನಗಳು #//🌳ವಚನ ಸಾಹಿತ್ಯ 🌳// #ಬಸವಣ್ಣನವರ ವಚನಗಳು
"ಹಾಡಿದಡೆನ್ನೊಡೆಯನ ಹಾಡುವೆ.. ಬೇಡಿದಡೆನ್ನೊಡೆಯನ ಬೇಡುವೆ.. ಒಡೆಯಂಗೊಡಲ ತೋರಿ ಎನ್ನ ಬಡತನವ ಬಿನ್ನೈಸುವೆ.. ಒಡೆಯ ಮಹಾದಾನಿ ಕೂಡಲಸಂಗಮದೇವಂಗೆ ಸೆರಗೊಡ್ಡಿ ಬೇಡುವೆ.. ✍🏻 ವಿಶ್ವಗುರು ಬಸವಣ್ಣನವರ ವಚನ.. ಶರಣು ಶರಣಾರ್ಥಿಗಳು 🙏 #ಬಸವಣ್ಣನವರ ವಚನಗಳು #//🌳ವಚನ ಸಾಹಿತ್ಯ 🌳// #ವಚನಗಳು #ಶರಣ ಸಾಹಿತ್ಯ #ಬಸವಾದಿ ಶರಣ ಶರಣೆಯರು
ಶ್ರೀ ಗುರು ಬಸವ ಲಿಂಗಾಯ ನಮಃ.. "ಕಂಡುದೆಲ್ಲವೂ ಜಗದ ಸೊಮ್ಮು. ಕಾಣುದದೆಲ್ಲವೂ ಮಾಯೆಯ ಸೊಮ್ಮು. ಕಂಡುದ, ಕಾಣದುದ ತಾ ನಿಧಾನಿಸಿಕೊಂಡು ತನಗಿಲ್ಲದುದ ತಾನರಿದು, ನಷ್ಟವಪ್ಪುದ ಜಗಕ್ಕೆ ಕೊಟ್ಟು ಬಟ್ಟಬಯಲ ತುಟ್ಟತುದಿಯ ದೃಷ್ಟವ ಕಾಬುದಕ್ಕೆ ಮುನ್ನವೆ ದೃಕ್ಕು ದೃಶ್ಯಕ್ಕೆ ಹೊರಗಾಗಬೇಕು, ವೀರಶೂರ ರಾಮೇಶ್ವರಲಿಂಗವ ಕೂಡಬಲ್ಲಡೆ.. ✍🏻 ಶರಣ ಬಾಲಬೊಮ್ಮಣ್ಣನವರ ವಚನ.. ಬಸವ ಬೆಳಗಿನ ಶರಣು ಶರಣಾರ್ಥಿಗಳು 🙏🏻 #ಬಸವಾದಿ ಶರಣ ಶರಣೆಯರು #ಶರಣ ಸಾಹಿತ್ಯ #ವಚನಗಳು #//🌳ವಚನ ಸಾಹಿತ್ಯ 🌳// #ಬಸವಣ್ಣನವರ ವಚನಗಳು
"ಆದ್ಯರ ವಚನ ಪರುಷ ಕಂಡಣ್ಣಾ: ಸದಾಶಿವನೆಂಬ ಲಿಂಗವ ನೆರೆನಂಬುವುದು; ನಂಬಲೊಡನೆ ನೀ ವಿಜಯಿ, ಕಂಡಣ್ಣಾ. ಅಧರಕ್ಕೆ ಕಹಿ, ಉದರಕ್ಕೆ ಸಿಹಿ: ಕೂಡಲಸಂಗನ ಶರಣರ ವಚನ ಬೇವ ಸವಿದಂತೆ.. ✍️ ವಿಶ್ವಗುರು ಬಸವಣ್ಣನವರ ವಚನ.. ಶರಣು ಶರಣಾರ್ಥಿಗಳು 🙏 #ಬಸವಣ್ಣನವರ ವಚನಗಳು #//🌳ವಚನ ಸಾಹಿತ್ಯ 🌳// #ಬಸವಾದಿ ಶರಣ ಶರಣೆಯರು #ವಚನಗಳು #ಶರಣ ಸಾಹಿತ್ಯ
"ವೇದವನೋದಿದರೇನು??? "ಶಾಶ್ತ್ರವ ಕೇಳಿದರೇನು??? "ಜಪವ ಮಾಡಿದರೇನು??? "ತಪವ ಮಾಡಿದರೇನು??? "ಏನ ಮಾಡಿದರೇನು??? ನಮ್ಮ ಕೂಡಲ ಸಂಗನ ಮನಮುಟ್ಟದನ್ನಕ್ಕ.. ✍️ ವಿಶ್ವಗುರು ಬಸವಣ್ಣನವರ ವಚನ.. ಶರಣು ಶರಣಾರ್ಥಿಗಳು 🙏 #ಶರಣ ಸಾಹಿತ್ಯ #ವಚನಗಳು #ಬಸವಾದಿ ಶರಣ ಶರಣೆಯರು #//🌳ವಚನ ಸಾಹಿತ್ಯ 🌳// #ಬಸವಣ್ಣನವರ ವಚನಗಳು
"ನೀರ ಕಂಡಲ್ಲಿ ಮುಳುಗುವರಯ್ಯಾ.. "ಮರನ ಕಂಡಲ್ಲಿ ಸುತ್ತುವರಯ್ಯಾ.. "ಬತ್ತುವ ಜಲವ.. ನೊಣಗುವ ಮರವ.. ಮೆಚ್ಚುವವರು ನಿಮ್ಮನ್ನೆತ್ತ ಬಲ್ಲರು ಕೂಡಲಸಂಗಮದೇವಾ.. ✍️ ವಿಶ್ವಗುರು ಬಸವಣ್ಣನವರ ವಚನ.. ಶರಣು ಶರಣಾರ್ಥಿಗಳು 🙏 #ಬಸವಣ್ಣನವರ ವಚನಗಳು #//🌳ವಚನ ಸಾಹಿತ್ಯ 🌳// #ಬಸವಾದಿ ಶರಣ ಶರಣೆಯರು #ವಚನಗಳು #ಶರಣ ಸಾಹಿತ್ಯ
"ಆದಿ ಪುರಾಣ ಅಸುರಂಗೆ ಮಾರಿ.. "ವೇದ ಪುರಾಣ ಹೋತಿಂಗೆ ಮಾರಿ.. "ರಾಮ ಪುರಾಣ ರಕ್ಕಸಂಗೆ ಮಾರಿ.. "ಭಾರತ ಪುರಾಣ ಗೋತ್ರಕ್ಕೆ ಮಾರಿ.. "ಎಲ್ಲಾ ಪುರಾಣದ ಕರ್ಮಕ್ಕೆ ಮೊದಲು; ನಿಮ್ಮ ಪುರಾಣಕ್ಕೆ ಪ್ರತಿಯಿಲ್ಲ ಕೂಡಲಸಂಗಮದೇವಾ.. ✍️ ವಿಶ್ವಗುರು ಬಸವಣ್ಣನವರ ವಚನ.. ಶರಣು ಶರಣಾರ್ಥಿಗಳು 🙏 #ಶರಣ ಸಾಹಿತ್ಯ #ವಚನಗಳು #ಬಸವಾದಿ ಶರಣ ಶರಣೆಯರು #//🌳ವಚನ ಸಾಹಿತ್ಯ 🌳// #ಬಸವಣ್ಣನವರ ವಚನಗಳು
ಶರಣರೇ ಕನ್ನಡಿಗರಾಗಿ ಹುಟ್ಟಿದ್ದಕ್ಕ ನೀವು ಹೆಮ್ಮೆ ಪಡ್ತೆರಿ ಪೂರ್ತಿಯಾಗಿ ಓದಿ.. "ಮೋಳಿಗೆ ಮಾರಯ್ಯ ಮತ್ತು ಅವರ ಧರ್ಮಪತ್ನಿ ಮಹಾದೇವಿ ಕಾಶ್ಮೀರದ ಅರಸು (ರಾಜ ರಾಣಿ) , ಬಸವಣ್ಣನವರನ್ನು ಅರಸುತ್ತ ಕರ್ನಾಟಕಕ್ಕೆ ಬಂದು ಕನ್ನಡ ಕಲಿತು ಅನುಭವ ಮಂಟಪದ 770 ಅಮರಗಣಗಳಲ್ಲಿ ಒಬ್ಬರಾದರು.. ಇದು ಕನ್ನಡಕ್ಕಿದ್ದ ಮಾಂತ್ರಿಕ ಶಕ್ತಿ ಅಲ್ಲದೆ ಇನ್ನೇನು?.. ಅದರಂತೆಯೇ.. "ಅಫ್ಘಾನ್ ಮೂಲದ ರಾಜ ಮರುಳಶಂಕರದೇವರು" "ತಮಿಳನಾಡಿನಿಂದ ಬಂದ ಮಾದಾರ ಚೆನ್ನಯ್ಯನವರು" "ಗುಜರಾತದಿಂದ ಬಂದ ಆದಯ್ಯನವರು" "ಉತ್ತರಪ್ರದೇಶದಿಂದ ಗೋರಖನಾಥ್ ರವರು" "ಮಧ್ಯಪ್ರದೇಶದಿಂದ ಬಂದ ಡೋಹರ ಕಕ್ಕಯ್ಯನವರು" "ಮಹಾರಾಷ್ಟ್ರದಿಂದ ಬಂದ ಸಿದ್ದರಾಮೇಶ್ವರರು" "ಮಹಾರಾಣಿ ಭೊಂತಾದೇವಿಯವರು" "ಆಂಧ್ರಪ್ರದೇಶದಿಂದ ಬಂದ ಉರಿಲಿಂಗಪೆದ್ದಿಯವರು" "ಜೈನ ಮುನಿ ಮನು ಮುನಿ ಗುಮ್ಮಟದೇವ" ಹಾಗೂ ಇನ್ನೂ ಅನೇಕಾನೇಕರು ಅನ್ಯ ಪ್ರದೇಶ ಅನ್ಯ ರಾಜ್ಯ ಅನ್ಯ ವಿಭಾಗ ಅನ್ಯ ಭಾಷೆಯವರು ವಿಶ್ವಗುರು ಬಸವಣ್ಣನವರನ್ನು ಹಾಗೂ ಬಸವಾದಿ ಮಹಾ ಶರಣರನ್ನು ಬಸವಾದಿ ಪ್ರಮಥರನ್ನು ಅರಸುತ್ತಾ ಕಲ್ಯಾಣಕ್ಕೆ ಬಂದಿರುತ್ತಾರೆ.. ೭೭೦ ಅಮರ ಗಣಂಗಳು ಹಾಗೂ ೧೯೬೦೦೦ ಬಸವಾದಿ ಮಹಾ ಶರಣ ಶರಣೆಯರು.. ನೋಡಲು ಬಂದವರು ಕನ್ನಡ ನಾಡಿಗೆ ಕನ್ನಡ ಭಾಷೆಗೆ ಶರಣರಿಗೆ ಮಂತ್ರಮುಗ್ಧರಾಗಿ ತಾಯಿ ಕನ್ನಡಾಂಬೆಯ ಮಡಿಲಲ್ಲಿ ಇಲ್ಲಿಯೇ ಉಳಿದುಬಿಟ್ಟರು ಕರ್ನಾಟಕಕ್ಕೆ ಬಂದು ಕನ್ನಡವನ್ನು ಕಲಿತು ಕನ್ನಡದಲ್ಲಿಯೇ ತಮ್ಮ ಅನುಭಾವದ ವಚನಗಳನ್ನ ಬರೆದು ಅಗ್ರಗಣ್ಯ ಬಸವಾದಿ ಶರಣರಾದರು.. ಇದು ಕನ್ನಡಕ್ಕಿರುವ ಪವಾಡ ಶಕ್ತಿಯಲ್ಲವೇ??? ಕಾಯಕ ತತ್ವದಿಂದ ದಕ್ಷಿಣ ಭಾರತದ ಹಾಗೂ ಕರ್ನಾಟಕದಲ್ಲಿ ಉದಯವಾದ ಏಕೈಕ ಧರ್ಮ "ಲಿಂಗಾಯತ ಧರ್ಮ".. ಕನ್ನಡಿಗನಾಗಿದ್ದಕ್ಕೆ ಇಷ್ಟು ಅಭಿಮಾನ ಸಾಕಲ್ಲವೇ ಅಥವಾ ಇನ್ನು ಬೇಕಾ??? #ಬಸವಣ್ಣನವರ ವಚನಗಳು #//🌳ವಚನ ಸಾಹಿತ್ಯ 🌳// #ಬಸವಾದಿ ಶರಣ ಶರಣೆಯರು #ವಚನಗಳು #ಶರಣ ಸಾಹಿತ್ಯ 🙏












