
ಕಾಯಕವೇ ಕೈಲಾಸ..
@76865063
ದಯವೇ ಧರ್ಮದ ಮೂಲವಯ್ಯಾ.. ದೇಹವೇ ದೇಗುಲ.. ಅರಿವೇ ಗುರು..
ಅಲ್ಲಮಪ್ರಭುದೇವರ ವಚನ.. #ಬಸವಣ್ಣನವರ ವಚನಗಳು #ಬಸವಾದಿ ಶರಣ ಶರಣೆಯರು #ಶರಣ ಸಾಹಿತ್ಯ #//🌳ವಚನ ಸಾಹಿತ್ಯ 🌳// #ವಚನಗಳು
ವಿಶ್ವಗುರು ಬಸವಣ್ಣನವರ ವಚನ.. #ವಚನಗಳು #//🌳ವಚನ ಸಾಹಿತ್ಯ 🌳// #ಶರಣ ಸಾಹಿತ್ಯ #ಬಸವಾದಿ ಶರಣ ಶರಣೆಯರು #ಬಸವಣ್ಣನವರ ವಚನಗಳು
ಅಕ್ಕಮಹಾದೇವಿಯವರ ವಚನ.. #ಬಸವಣ್ಣನವರ ವಚನಗಳು #ಬಸವಾದಿ ಶರಣ ಶರಣೆಯರು #ಶರಣ ಸಾಹಿತ್ಯ #//🌳ವಚನ ಸಾಹಿತ್ಯ 🌳// #ವಚನಗಳು
"ಅರಿವಿಂದರಿದು ಏನುವ ತಟ್ಟದೆ ಮುಟ್ಟದೆ ಇದ್ದೆನಯ್ಯಾ, ಅಂತರಂಗ ಸನ್ನಿಹಿತ, ಬಹಿರಂಗ ನಿಶ್ಚಿಂತನಾಗಿದ್ದೆನಯ್ಯಾ. ಸ್ವಾತಿಯ ಬಿಂದುವ ಬಯಸುವ ಚಿಪ್ಪಿನಂತೆ ಗುರು ಕಾರುಣ್ಯವ ಬಯಸುತ್ತಿದ್ದೆ, ಕೂಡಲಸಂಗಮದೇವಾ.. ✍🏻 ವಿಶ್ವಗುರು ಬಸವಣ್ಣನವರ ವಚನ.. ಶರಣು ಶರಣಾರ್ಥಿಗಳು 🙏 #ವಚನಗಳು #//🌳ವಚನ ಸಾಹಿತ್ಯ 🌳// #ಶರಣ ಸಾಹಿತ್ಯ #ಬಸವಾದಿ ಶರಣ ಶರಣೆಯರು #ಬಸವಣ್ಣನವರ ವಚನಗಳು
#ಬಸವಣ್ಣನವರ ವಚನಗಳು #ಬಸವಾದಿ ಶರಣ ಶರಣೆಯರು #ಶರಣ ಸಾಹಿತ್ಯ #//🌳ವಚನ ಸಾಹಿತ್ಯ 🌳// #ವಚನಗಳು
ಶ್ರೀ ಗುರು ಬಸವ ಲಿಂಗಾಯನಮಃ.. "ನಮ್ಮಯ್ಯನ ಮನದಲ್ಲಿ ಮಾತಿನಲ್ಲಿ ಸೂಸುವ ಮೂರ್ತಿ ನೋಡನೋಡುತ್ತ ಬಯಲಾಯಿತ್ತಲ್ಲಾ! ಇದು ಅಲ್ಲಮಯ್ಯ ಮಾಡಿದ ಬೇಟ ಹೋದುದು ನಿಶ್ಚಯವಾದಡೆ ಕರುಳು ಕಳವಳಿಸುತ್ತಿದ್ದವು ಇಂತಪ್ಪ ಕಂದ ಪೋದಡೆಯೂ ಪೋಗಿಲ್ಲ ಗಂಗಾಪ್ರಿಯ ಕೂಡಲಸಂಗನ ಶರಣರ ಮೊಲೆಯನುಂಬುದಕ್ಕೆ ಬಾರ ಕೇಳಾ ಚೆನ್ನಬಸವಣ್ಣ.. ✍️ ಗಂಗಾಂಬಿಕೆ ತಾಯಿಯವರ ವಚನ.. ಶರಣು ಶರಣಾರ್ಥಿಗಳು 🙏🏻 #ವಚನಗಳು #//🌳ವಚನ ಸಾಹಿತ್ಯ 🌳// #ಶರಣ ಸಾಹಿತ್ಯ #ಬಸವಾದಿ ಶರಣ ಶರಣೆಯರು #ಬಸವಣ್ಣನವರ ವಚನಗಳು
✍️ ಚೆನ್ನಬಸವಣ್ಣ
ಅಂಕಿತ ನಾಮ: ಕೂಡಲಚೆನ್ನಸಂಗಮ ದೇವಾ..
"ಅಯ್ಯಾ ಎನಗೆ ವಿಭೂತಿಯೆ ಕುಲದೈವ; ಅಯ್ಯಾ ಎನಗೆ ವಿಭೂತಿಯೆ ಮನೆದೈವ; ಅಯ್ಯಾ ಎನಗೆ ವಿಭೂತಿಯೆ ಸರ್ವಕಾರಣ; ಅಯ್ಯಾ ಎನಗೆ ವಿಭೂತಿಯೆ ಸರ್ವಸಿದ್ಧಿ; ಅಯ್ಯಾ ಎನಗೆ ವಿಭೂತಿಯೆ ಸರ್ವವಶ್ಯ;
ಅಯ್ಯಾ ಕೂಡಲಚೆನ್ನಸಂಗಮದೇವಾ ಶ್ರೀಮಹಾಭೂತಿಯೆಂಬ ಪರಂಜ್ಯೋತಿ ನೀವಾದಿರಾಗಿ, ಎನಗೆ ವಿಭೂತಿಯೆ ಸರ್ವಸಾಧನ..!
ಚೆನ್ನಬಸವಣ್ಣವರು ವಿಭೂತಿ ಮಹತ್ವ ಹೇಳಿದ್ದಾರೆ
ವಿಭೂತಿ ಕುಲದೈವ
ವಿಭೂತಿ ಮನದೈವ
ವಿಭೂತಿ ಎಲ್ಲದಕ್ಕೂ ಸರ್ವಕಾರಣ ವಿಭೂತಿ ಸರ್ವಸಿದ್ದಿ ಇದುವೆ ಪರಂಜ್ಯೋತಿ ಎಂದಿದ್ದಾರೆ.
ವಿಭೂತಿಯನ್ನು ನಿರಂತರವಾಗಿ ಧರಿಸುವುದ್ದರಿಂದ ದುರ್ಗುಣ, ದುಶ್ಚಟಗಳು ದೂರವಾಗುತ್ತದೆ.
ಸಾವಿರಾರು ಗುಡಿಗುಂಡಾರ ವ್ರತ ಪೂಜೆ ಮಾಡುವುದನ್ನು ಬಿಟ್ಟು ಹಣೆಯ ಮೇಲೆ ಮೂರು ಎಳೆಯಾಗಿ ವಿಭೂತಿ ಧರಿಸಬೇಕು ಎಂದಿದ್ದಾರೆ. ಅಷ್ಟೇ ಅಲ್ಲದೆ ಇದರಲ್ಲಿ ವೈಜ್ಞಾನಿಕ ಸತ್ಯವು ಇದೆ. ಗೋವಿನ ಸಗಣೆಯಿಂದ ಸಿದ್ದವಾದ ವಿಭೂತಿಯಲ್ಲಿ
ರೋಗ ನಿರೋಧಕ ಶಕ್ತಿ ಇದೆ.
ಅಷ್ಟೇ ಅಲ್ಲದೆ ಶರೀಶರದ ನೋವುಗಳನ್ನು ತೆಗೆದುಹಾಕಿ. ಉಷ್ಣತೆಯನ್ನು ಕಾಪಾಡುತ್ತದೆ. ಶರೀರದ ಅಂಗದ ಮೂವತ್ತೆರಡು ಸ್ಥಳಗಳಲ್ಲಿ ಧರಿಸಬೇಕು ಎಂದಿದ್ದಾರೆ ಕೈ, ಮೂಗು, ಕಿವಿ, ಕುತ್ತಿಗೆ, ಪಾದ, ಹೊಟ್ಟೆ ಭಾಗ,ಬೆನ್ನು, ಮೊನಕೈ,ರಟ್ಟೆಭಾಗ ಹೀಗೆ ಎಲ್ಲಾ ಅಂಗದಲ್ಲಿ ಧರಿಸಬೇಕು. ಚೆನ್ನಬಸವಣ್ಣವರು ಒಂದು ವಚನದಲ್ಲಿ ಯಾರು ಯಾವ ಯಾವ ಅಂಗದಲ್ಲಿ ಧರಿಸಬೇಕು ಎನ್ನುವುದನ್ನು ಒಂದ ವಚನದಲ್ಲಿ ಹೇಳಿದ್ದಾರೆ. ಅಯ್ಯಾ, ಶ್ರೀವಿಭೂತಿಯ ಧರಿಸುವ ಭೇದವೆಂತೆಂದಡೆ :
ಸಹಜಲಿಂಗಧಾರಕರು ಎಂಟುಸ್ಥಾನದಲ್ಲಿ ಧರಿಸುವುದಯ್ಯಾ.
ಕ್ರಿಯಾದೀಕ್ಷಾನ್ವಿತರಾದ ಉಪಾಧಿಭಕ್ತರು
ಹದಿನಾರು ಸ್ಥಾನದಲ್ಲಿ ಧರಿಸುವುದಯ್ಯಾ.
ಕ್ರಿಯಾದೀಕ್ಷೆ, ಮಂತ್ರದೀಕ್ಷೆಯುಕ್ತರಾದ ನಿರುಪಾಧಿಭಕ್ತರು
ಮೂವತ್ತೆರಡು ಸ್ಥಾನದಲ್ಲಿ ಧರಿಸುವುದಯ್ಯಾ.
ಕ್ರಿಯಾದೀಕ್ಷೆ ಮಂತ್ರದೀಕ್ಷೆ ವೇಧಾದೀಕ್ಷೆಯುಕ್ತರಾದ ಸಹಜಭಕ್ತರು ಮೂವತ್ತಾರು ಸ್ಥಾನದಲ್ಲಿ ಧರಿಸುವುದಯ್ಯಾ. ಕ್ರಿಯಾದೀಕ್ಷೆ ಮಂತ್ರದೀಕ್ಷೆ ವೇಧಾದೀಕ್ಷೆ ಸಚ್ಚಿದಾನಂದದೀಕ್ಷಾಯುಕ್ತ
ರಾದ ನಿರ್ವಂಚನಭಕ್ತರು ನಾಲ್ವತ್ತುನಾಲ್ಕು ಸ್ಥಾನದಲ್ಲಿ ಧರಿಸುವುದಯ್ಯಾ. ಕ್ರಿಯಾ ಮಂತ್ರ ವೇಧಾ ಸಚ್ಚಿದಾನಂದ ನಿರ್ವಾಣಪದದೀಕ್ಷಾ ಸಮನ್ವಿತರಾದ
ಸದ್ಭಕ್ತಶರಣಗಣಂಗಳು, ಆಪಾದಮಸ್ತಕ ಪರಿಯಂತರ ಸ್ನಾನ ಧೂಳನವ ಮಾಡಿ ನಾಲ್ವತ್ತೆಂಟು ಸ್ಥಾನದಲ್ಲಿ
ಮಂತ್ರಸ್ಮರಣೆಯಿಂದ ತ್ರಿಪುಂಡ್ರವ ಧರಿಸುವುದಯ್ಯಾ
ಕೂಡಲಚೆನ್ನಸಂಗಮದೇವಾ. ಸತ್ ಚಿತ್ ಆನಂದ ಸ್ವರೂಪ ಗುರು ಲಿಂಗ ಜಂಗಮದ ಸ್ವರೂಪ ಸೃಷ್ಟಿ ಸ್ಥಿತಿ ಲಯ ಇಷ್ಟ ಪ್ರಾಣ ಭಾವ ಅ ಕಾರ ಉ ಕಾರ ಮ ಕಾರ ಸ್ವರೂಪವನ್ನು ಕ್ರಮವಾಗಿ ಸೂಚಿಸುವ ಅನಾಮಿಕಾಂಗುಲಿ
ಮಧ್ಯಮಾಂಗುಲಿ ತರ್ಜನಿ ಈ ಮೂರು ಬೆರಳುಗಳಿಂದ
ಶ್ರೀ ಮಹಾ ವಿಭೂತಿಯನ್ನು ಧರಿಸಬೇಕು. ಹೀಗೆ ಧರಿಸುವುದ್ದರಿಂದ ವಿಪತ್ತು ಭ್ರಮೆ ದೂರವಾಗಿ ತ್ರಿಕರಣ ಶುದ್ದಗೊಳ್ಳುತ್ತದೆ.
ಬಸವಣ್ಣನವರ ಒಂದ ವಚನದಲ್ಲಿ ಹಣೆಯ ಮೇಲೆ ವಿಭೂತಿ ಇರಲು ನಾನೇಕೆ ಹಣೆ ಬರಹ ನಂಬಲಯ್ಯಾ.
ವಿಭೂತಿ ಧರಿಸುವುದ್ದರಿಂದ ಹಣೆ ಬರಹ ಬದಲಾಗುತ್ತದೆ.
ಶರಣರು ವಿಭೂತಿ ಹಾಗು ರುದ್ರಾಕ್ಷಿ ಬಗ್ಗೆ ಬಹಳಷ್ಟು ಮಹತ್ವ ಕೊಟ್ಟಿದ್ದಾರೆ.
ಪ್ರತಿಯೊಬ್ಬರೂ ದಿನ ನಿತ್ಯ ವಿಭೂತಿಯನ್ನು ಮೂರು ಎಳೆಯಾಗಿ ಹಣೆಗೆ ಧರಿಸಬೇಕು ಎಂದು ಬಹಳಷ್ಟು ವಚನಗಳಲ್ಲಿ
ಚೆನ್ನಬಸವಣ್ಣ, ಬಸವಣ್ಣನವರು, ಷಣ್ಮುಖ ಶಿವಯೋಗಿ ಮಹಾಂತ ಶಿವಯೋಗಿಗಳು,
ಅಕ್ಕಮಹಾದೇವಿ ಹೀಗೆ ಬಹಳಷ್ಟು ಶರಣರು ವಿಭೂತಿ ಮಹತ್ವವನ್ನು ತಮ್ಮ ವಚನಗಳ ಅನುಭಾವದ ಮೂಲಕ ಸಾರಿ ಹೇಳಿದ್ದಾರೆ. ವಿಭೂತಿಯೇ ಎಲ್ಲದಕ್ಕೂ ಸರ್ವಕಾರಣ ಎಂದಿದ್ದಾರೆ.. #ಬಸವಣ್ಣನವರ ವಚನಗಳು #ಬಸವಾದಿ ಶರಣ ಶರಣೆಯರು #ಶರಣ ಸಾಹಿತ್ಯ #//🌳ವಚನ ಸಾಹಿತ್ಯ 🌳// #ವಚನಗಳು
ಶ್ರೀ ಗುರಬಸವ ಲಿಂಗಾಯ ನಮಃ.. "ಮಾಂಶಪಿಂಡವೆಂದೆನಿಸದೆ ಮಂತ್ರಪಿಂಡವೆಂದೆನಿಸಿದ ಬಸವಣ್ಣ. ವಾಯುಪ್ರಾಣಿಯೆಂದೆನಿಸದೆ ಲಿಂಗಪ್ರಾಣಿಯೆಂದೆನಿಸಿದ ಬಸವಣ್ಣ. ಜಗಭರಿತನೆಂಬ ಶಬ್ದಕ್ಕೆ ಅಂಗವಿಸದೆ ಶರಣಭರಿತ ಲಿಂಗವೆನಿಸಿದ ಕೂಡಲ ಚೆನ್ನಸಂಗಯ್ಯನಲ್ಲಿ ಬಸವಣ್ಣನು.. ✍️ ಚಿನ್ಮಯಜ್ಞಾನಿ ಚೆನ್ನಬಸವಣ್ಣನವರ ವಚನ.. ಶರಣು ಶರಣಾರ್ಥಿಗಳು 🙏 #ವಚನಗಳು #//🌳ವಚನ ಸಾಹಿತ್ಯ 🌳// #ಶರಣ ಸಾಹಿತ್ಯ #ಬಸವಾದಿ ಶರಣ ಶರಣೆಯರು #ಬಸವಣ್ಣನವರ ವಚನಗಳು
ಶ್ರೀ ಗುರು ಬಸವ ಲಿಂಗಾಯನಮಃ.. "ತನ್ನ ತಾನರಿತೆನೆಂಬಲ್ಲಿ ತಾನಾರು??? ಅರಿತುದೇನಯ್ಯಾ??? ತನ್ನ ಮರೆದು ಇದಿರಿಂಗೆ ಅರಿವ ಹೇಳುವಲ್ಲಿ ಆ ಮರೆವ ಅರಿವಿಂಗೆ ಕುರುಹುಂಟೆ??? ಇಂತೀ ಉಭಯದಲ್ಲಿ ತಿಳಿದು ಮತ್ತೆ ವಚನ ನಿರ್ವಚನವೆಂಬುದು ಎಲ್ಲಿ ಅಡಗಿತ್ತು ಹೇಳಾ??? ತನ್ನಲ್ಲಿ ತೋರಿದ ಸ್ವಪ್ನ ತನಗೆ ಭೀತಿ ನಿರ್ಭೀತಿಯಾದಂತೆ ಇದಿರ ಘಟ್ಟಕ್ಕೆ ಪಡಿಪುಚ್ಚವುಂಟೆ??? ಇಂತೀ ಭಾವವ ತಿಳಿದಲ್ಲಿ ಆ ವಸ್ತು ತನಗೆ ಅನ್ಯ ಭಿನ್ನವಿಲ್ಲ ಚೆನ್ನಬಸವಣ್ಣ ಪ್ರೀಯ ಭೋಗಮಲ್ಲಿಕಾರ್ಜುನಲಿಂಗವು.. ✍️ ಪ್ರಸಾದಿ ಬೊಮ್ಮಣ್ಣನವರ ವಚನ.. ಶರಣು ಶರಣಾರ್ಥಿಗಳು 🙏 #ಬಸವಣ್ಣನವರ ವಚನಗಳು #ಶರಣ ಸಾಹಿತ್ಯ #//🌳ವಚನ ಸಾಹಿತ್ಯ 🌳// #ಬಸವಾದಿ ಶರಣ ಶರಣೆಯರು #ವಚನಗಳು
"ಹೊಯಿದವರೆನ್ನ ಹೊರೆದವರಂಬೇ.. "ಬಯಿದವರೆನ್ನ ಬಂಧುಗಳೆಂಬೇ.. "ನಿಂದಿಸಿದವರೆನ್ನ ತಂದೆ ತಾಯಿಗಳೆಂಬೆ.. "ಆಳಿಗೊಂಡವರೆನ್ನ ಆಳ್ದವರೆಂಬೇ.. "ಜರಿದವರೆನ್ನ ಜನ್ಮ ಬಂಧುಗಳೆಂಬೆ.. "ಹೊಗಳಿದವರೆನ್ನ ಹೊನ್ನ ಶೂಲದಲಿಕ್ಕಿದವರೆಂಬೇ
ಕೂಡಲಸಂಗಮದೇವ.. ✍️ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರ ವಚನ.. ಶರಣು ಶರಣಾರ್ಥಿಗಳು 🙏 #ವಚನಗಳು #ಬಸವಾದಿ ಶರಣ ಶರಣೆಯರು #//🌳ವಚನ ಸಾಹಿತ್ಯ 🌳// #ಶರಣ ಸಾಹಿತ್ಯ #ಬಸವಣ್ಣನವರ ವಚನಗಳು












