
ಕಾಯಕವೇ ಕೈಲಾಸ..
@76865063
ದಯವೇ ಧರ್ಮದ ಮೂಲವಯ್ಯಾ.. ದೇಹವೇ ದೇಗುಲ.. ಅರಿವೇ ಗುರು..
ಅಲ್ಲಮಪ್ರಭುದೇವರ ವಚನ.. #ಶರಣ ಸಾಹಿತ್ಯ #ಬಸವಣ್ಣನವರ ವಚನಗಳು #//🌳ವಚನ ಸಾಹಿತ್ಯ 🌳// #ಬಸವಾದಿ ಶರಣ ಶರಣೆಯರು #ವಚನಗಳು
ವಿಶ್ವಗುರು ಬಸವಣ್ಣನವರ ವಚನ.. #ಬಸವಾದಿ ಶರಣ ಶರಣೆಯರು #ವಚನಗಳು #//🌳ವಚನ ಸಾಹಿತ್ಯ 🌳// #ಬಸವಣ್ಣನವರ ವಚನಗಳು #ಶರಣ ಸಾಹಿತ್ಯ
ಬಸವ ಯೋಗಿ ಸಿದ್ಧರಾಮೇಶ್ವರರ ವಚನ.. #ಶರಣ ಸಾಹಿತ್ಯ #ಬಸವಣ್ಣನವರ ವಚನಗಳು #//🌳ವಚನ ಸಾಹಿತ್ಯ 🌳// #ವಚನಗಳು #ಬಸವಾದಿ ಶರಣ ಶರಣೆಯರು
"ಎರದೆಲೆಯಂತೆ ಒಳಗೊಂದು ಹೊರಗೊಂದಾಡದೆ ಮೆಚ್ಚುವನೆ ಶಿವನು??? "ತಾನು ತನ್ನಂತೆ ನುಡಿಯೆರಡಾದರೆ ಮೆಚ್ಚುವನೆ ಶಿವನು??? "ತನು ತನ್ನಂತೆ ನಡೆ ಎರಡಾದರೆ ಮೆಚ್ಚುವನೆ??? "ಬಾರದ ಭವಂಗಳಲ್ಲಿ ಬರಿಸುವವನಲ್ಲದೆ ಮೆಚ್ಚುವನೆ??? ಅಘೋರ ನರಕವನುಣಿಸುವನಲ್ಲದೆ ಮೆಚ್ಚುವನೆ??? "ಉಡುಪಿನ ನಾಲಗೆಯಂತೆ ಎರಡಾದರೆ ಕೂಡಲಸಂಗಮ ದೇವನು ಮೆಚ್ಚುವನೆ??? ✍️ ವಿಶ್ವಗುರು ಬಸವಣ್ಣನವರ ವಚನ.. ಶರಣು ಶರಣಾರ್ಥಿಗಳು 🙏 #ಬಸವಾದಿ ಶರಣ ಶರಣೆಯರು #ವಚನಗಳು #//🌳ವಚನ ಸಾಹಿತ್ಯ 🌳// #ಬಸವಣ್ಣನವರ ವಚನಗಳು #ಶರಣ ಸಾಹಿತ್ಯ
"ಕೆರೆಯ ನೀರು, ಮರದ ಪುಷ್ಪ ಧರಿಸಿದಡೇನು ಆಗುವುದೇ ಲಿಂಗಾರ್ಚನೆ., ನೀರ ಎರೆಯಲಿಕ್ಕೆ ಆತನೇನು ಬಿಸಿಲಿನಿಂದ ಬಳಳಿದನೇ??? ಪುಷ್ಪವ ಧರಿಸಲಿಕ್ಕೆ ಆತನೇನು ವಿಟರಾಜನೇ??? ನಿನ್ನ ಮನವೆಂಬ ನೀರಿನಿಂದ, ಜ್ಞಾನವೆಂಬ ಪುಷ್ಪದಿಂದ, ಪೂಜಿಸಬಲ್ಲಡೆ ಭಕ್ತನೆಂಬೆ, ಮಹೇಶ್ವರನೆಂಬೆ ನೋಡಾ ಕಪಿಲ ಸಿದ್ದ ಮಲ್ಲಿಕಾರ್ಜುನ..! ✍️ ಬಸವ ಯೋಗಿ ಸಿದ್ದರಾಮೇಶ್ವರರ ವಚನ.. ಶರಣು ಶರಣಾರ್ಥಿಗಳು 🙏 #ಶರಣ ಸಾಹಿತ್ಯ #ಬಸವಣ್ಣನವರ ವಚನಗಳು #//🌳ವಚನ ಸಾಹಿತ್ಯ 🌳// #ವಚನಗಳು #ಬಸವಾದಿ ಶರಣ ಶರಣೆಯರು
"ಆಸೆಯೆಂಬುದು ಅರಸಂಗಲ್ಲದೆ ಶಿವಭಕ್ತರಿಗುಂಟೆ ಅಯ್ಯಾ! "ರೂಪವೆಂಬುದು ಯಮದೂತರಿಗಲ್ಲದೆ ಅಜಾತರಿಗುಂಟೆ ಅಯ್ಯಾ! " ಈಸಕ್ಕಿ ಆಸೆ ನಿಮಗೇಕೆ??? "ಈಶ್ವರನೊಪ್ಪ ಮಾರಯ್ಯ ಪ್ರಿಯ ಅಮರೇಶ್ವರ ಲಿಂಗಕ್ಕೆ ದೂರ ಮಾರ! ✍️ ಶರಣೆ ಆಯ್ದಕ್ಕಿ ಲಕ್ಕಮ್ಮ ನವರ ವಚನ.. ಶರಣು ಶರಣಾರ್ಥಿಗಳು 🙏 #ಬಸವಾದಿ ಶರಣ ಶರಣೆಯರು #ವಚನಗಳು #//🌳ವಚನ ಸಾಹಿತ್ಯ 🌳// #ಬಸವಣ್ಣನವರ ವಚನಗಳು #ಶರಣ ಸಾಹಿತ್ಯ
"ಒಲ್ಲೆನೆಂಬುದು ವೈರಾಗ್ಯ, ಒಲಿವೆನೆಂಬುದು ಕಾಯಗುಣ, ಆವ ಪದಾರ್ಥವಾದಡೇನು??? "ತಾನಿದ್ದೆಡೆಗೆ ಬಂದುದನು ಲಿಂಗಾರ್ಪಿತವ ಮಾಡಿ ಭೋಗಿಸುವುದೇ ಆಚಾರ, ಕೂಡಲಸಂಗಮದೇವನ ಒಲಿಸ ಬಂದ ಪ್ರಸಾದ ಕಾಯವನು ಕೆಡಿಸಲಾಗದು! ✍️ ವಿಶ್ವಗುರು ಬಸವಣ್ಣನವರ ವಚನ.. ಶರಣು ಶರಣಾರ್ಥಿಗಳು 🙏 #ಶರಣ ಸಾಹಿತ್ಯ #ಬಸವಣ್ಣನವರ ವಚನಗಳು #//🌳ವಚನ ಸಾಹಿತ್ಯ 🌳// #ವಚನಗಳು #ಬಸವಾದಿ ಶರಣ ಶರಣೆಯರು
"ಮೌನದಲುಂಬುದು ಆಚಾರವಲ್ಲ! " ಲಿಂಗಾರ್ಪಿತವ ಮಾಡಿದ ಬಳಿಕ ತುತ್ತಿಗೊಮ್ಮೆ ಶಿವಶರಣ ನೆನುತಿರಬೇಕು! ಕರಣ ಕರಣ ವೃತ್ತಿ ಗಳಡಗುವವು ಕೂಡಲಸಂಗನ ಶರಣರ ನೆನೆಯುತ್ತಾ ಉಂಡರೆ! ✍️ ವಿಶ್ವಗುರು ಬಸವಣ್ಣನವರ ವಚನ.. ಶರಣು ಶರಣಾರ್ಥಿಗಳು 🙏 #ಬಸವಾದಿ ಶರಣ ಶರಣೆಯರು #ವಚನಗಳು #//🌳ವಚನ ಸಾಹಿತ್ಯ 🌳// #ಬಸವಣ್ಣನವರ ವಚನಗಳು #ಶರಣ ಸಾಹಿತ್ಯ
"ಅಂದು ಇಂದು ಮತ್ತೊಂದೆನಬೇಡ. ದಿನವಿಂದೇ ಶಿವಶರಣೆಂಬವಂಗೆ, ದಿನವಿಂದೇ ಹರಶರಣೆಂಬವಂಗೆ, ದಿನವಿಂದೇ ನಮ್ಮ ಕೂಡಲಸಂಗನ ಮಾಣದೆ ನೆನೆವಂಗೆ.. ✍🏻 ವಿಶ್ವಗುರು ಬಸವಣ್ಣನವರ ವಚನ.. ಶರಣು ಶರಣಾರ್ಥಿಗಳು 🙏 #ಶರಣ ಸಾಹಿತ್ಯ #ಬಸವಣ್ಣನವರ ವಚನಗಳು #//🌳ವಚನ ಸಾಹಿತ್ಯ 🌳// #ವಚನಗಳು #ಬಸವಾದಿ ಶರಣ ಶರಣೆಯರು
"ಶರಣ ನಿದ್ದೆ ಗೈದಡೆ ಜಪ ಕಾಣಿರೋ, ಶರಣನೆದ್ದು ಕುಳಿತರೆ "ಶಿವರಾತ್ರಿ" ಕಾಣಿರೋ, ಶರಣ ನಡೆದುದೇ ಪಾವನ ಕಾಣಿರೋ, ಶರಣ ನುಡಿದುದೇ ಶಿವ ತತ್ವ ಕಾಣಿರೋ, ಕೂಡಲ ಸಂಗನ ಶರಣರ ಕಾಯವೇ ಕೈಲಾಸ ಕಾಣಿರೋ.. ✍️ ಬಸವ ಧರ್ಮ ಗುರು ವಿಶ್ವಗುರು ಬಸವಣ್ಣನವರ ವಚನ.. ಶರಣು ಶರಣಾರ್ಥಿಗಳು 🙏 #ಬಸವಾದಿ ಶರಣ ಶರಣೆಯರು #ವಚನಗಳು #//🌳ವಚನ ಸಾಹಿತ್ಯ 🌳// #ಬಸವಣ್ಣನವರ ವಚನಗಳು #ಶರಣ ಸಾಹಿತ್ಯ












