
ಕಾಯಕವೇ ಕೈಲಾಸ..
@76865063
ದಯವೇ ಧರ್ಮದ ಮೂಲವಯ್ಯಾ.. ದೇಹವೇ ದೇಗುಲ.. ಅರಿವೇ ಗುರು..
"ಲಿಂಗಾಯತ ಧರ್ಮದ ಬಂಧುಗಳಲ್ಲಿ ಕಳಕಳಿಯ ವಿನಂತಿ" "ಈ ನಮ್ಮ ಶರಣ ಬಂಧುಗಳ ಗ್ರೂಪ್ ನ ಉದ್ದೇಶ" "ಮಹಾತ್ಮಾ ವಿಶ್ವಗುರು ಜಗಜ್ಯೋತಿ ಬಸವಣ್ಣನವರ" ಮತ್ತು "ಬಸವಾದಿ ಮಹಾ ಶರಣರ" ಮತ್ತು "೧೨ ನೇಯ ಶತಮಾನದ ೭೭೦ ಅಮರ ಗಣಂಗಳ "ಜೀವನ ಚರಿತ್ರೆಗಳು" "ವಿಷಯ" "ವಿಚಾರ" "ವಚನಾಮೃತ"ಗಳನ್ನು ವಿಶ್ವವ್ಯಾಪ್ತಿಯಾಗಿ ಪ್ರಚಾರ ಪಡಿಸುವುದು" ಹಾಗೂ ನಮ್ಮ "ಬಸವ ಧರ್ಮ" ಕ್ಕೆ "ವಚನಾಮೃತಗಳ ಧರ್ಮ" ಕ್ಕೆ "ಲಿಂಗಾಯತ ಧರ್ಮ" ಕ್ಕೆ "ಸ್ವತಂತ್ರ ಧರ್ಮದ ಸಾಂವಿಧಾನಿಕ ಮಾನ್ಯತೆ" ಹಾಗೂ "ಅಲ್ಪಸಂಖ್ಯಾತರ ಸ್ಥಾನಮಾನ” ಹಾಗೂ "ನಮ್ಮ ಲಿಂಗಾಯತ ಧರ್ಮದ ಹಕ್ಕುಗಳನ್ನು ಪಡೆಯುವುದಕ್ಕಾಗಿ"ಯೇ ಹೊರತು "ಯಾರನ್ನೋ ವಿರೋಧಿಸುವುದಲ್ಲ".. "ಯಾರನ್ನೋ ತಿರಸ್ಕರಿಸುವುದಲ್ಲ".. "ಯಾರನ್ನೋ ಧೂಸಿಸುವುದಲ್ಲ".. "ಏಕೆಂದರೆ ಒತ್ತಾಯ ಪೂರ್ವಕವಾಗಿ ಯಾರನ್ನೂ ನಮ್ಮ ಮನದಲ್ಲಿ ಇಟ್ಟುಕೊಳ್ಳಲು ಸಾಧ್ಯವಿಲ್ಲ".. "ನೀವು ಅವರಿವರನ್ನು ತೆಗಳುವುದು" "ಅವರಿವರನ್ನು ವಿರೋಧಿಸುವುದು" "ವಿನಾಕಾರಣ ಕಾಲಹರಣ ಮತ್ತು ಸಮಯ ವ್ಯರ್ಥವಷ್ಷೇ".. "ಸ್ವಲ್ಪ ಸೂಕ್ಷ್ಮವಾಗಿ ಯೋಚಿಸಿ ನೋಡಿ".. "ಬೇಡದವರನ್ನು ವಿರೋಧಿಸುವವರನ್ನು ಅವರಿವರನ್ನು ವಿರೋಧಿಸುವುದರಿಂದ ಆಗುವಂತಹದ್ದು ಏನಿದೆ..??? ಅನಾವಶ್ಯಕ ವಿಷಯ ಹಾಗೂ ವಿಚಾರಗಳನ್ನು ಬಿಟ್ಟುಬಿಡಿ" "ನಮ್ಮ ಲಿಂಗಾಯತ ಧರ್ಮ ದೊಂದಿಗೆ ಕೂಡುವವರೊಂದಿಗೆ ಕೂಡಿ ಹೊಂದಿಕೊಂಡು".. "ನಮ್ಮ ಲಿಂಗಾಯತ ಧರ್ಮದ ಹಕ್ಕುಗಳನ್ನು ಪಡೆಯೋಣ" "ಬೇಡ ಎನ್ನುವವರನ್ನು ಬಿಟ್ಟುಬಿಡಿ".. "ಅವರಿವರೆನ್ನದೆ ನಾವು ನೀವು ಎಲ್ಲರೂ ಕೂಡಿ ನಮ್ಮ ಲಿಂಗಾಯತ ಧರ್ಮದ ಧಾರ್ಮಿಕ ಹಕ್ಕುಗಳನ್ನು ಪಡೆಯೋಣ".. "ವಿನಾಕಾರಣ ಆಗದವರ ವಿರೋಧಿಸುವ ಅವರಿವರ ಬಗ್ಗೆ ಅನಾವಶ್ಯಕ ವಾಗಿ ನಾವು ನೀವು ಚರ್ಚಿಸಿ ಆಗುವಂತಹದ್ದು ಏನಿದೆ"..??? "ಈಗ ವಿರೋಧಿಸುವವರು ಮುಂದೆ ಬೇಕಾದರೆ ನಮ್ಮ ಲಿಂಗಾಯತ ಧರ್ಮದೊಂದಿಗೆ ಕೂಡುವವರು ಕೂಡಿಕೊಳ್ಳಲಿ ಬೇಡವಾದರೆ ಬಿಟ್ಟು ಬಿಡಲಿ" "ದಯವಿಟ್ಟು ನಮ್ಮ ಮುಂದಿನ ಭವಿಷ್ಯದ ಲಿಂಗಾಯತ ಧರ್ಮದ.. ವಿದ್ಯಾರ್ಥಿ/ವಿಧ್ಯಾರ್ಥಿನಿಯರು, ಯುವಕರು/ಯುವತಿಯರು, ಮಾತೆಯರು, ಸಹೋದರ/ ಸಹೋದರಿಯರು, ಹಿರಿಯರು, ನಿರುದ್ಯೋಗಿಗಳು, ವೃದ್ಯಾಪ್ಯರು, ಬಡವರು, ನಿರ್ಗತಿಕರು, ಅಸಹಾಯಕರು, ಶೋಷಿತರು, ನಿರ್ಲಕ್ಷಿತರು, ಭಯಗ್ರಸ್ಥರು, ಅವಿದ್ಯಾವಂತರು, ಅನಾನುಕೂಲಸ್ಥರು, ಚಿಕ್ಕ ಪುಟ್ಟ ಉದ್ಯೋಗಸ್ಥರು ಅವರಿವರೆನ್ನದೆ ಲಿಂಗಾಯತ ಧರ್ಮವನ್ನು ಒಪ್ಪುವ ಎಲ್ಲರ ಬಗ್ಗೆ ಮುಂದೆ ಹೇಗೆ..??? ಮುಂದೆ ಏನು..??? ಎಂದು ಯೋಚಿಸೋಣ.. ಲಿಂಗಾಯತ ಬಂಧುಗಳೇ.. ಅನಾವಶ್ಯಕ ವಿಷಯಗಳನ್ನು ನಿಮ್ಮ ಮನದಿಂದ ತಿರಸ್ಕರಿಸಿ.. ಭವಿಷ್ಯದ ಬಗ್ಗೆ ಅತ್ಯಂತ ಸೂಕ್ಷ್ಮವಾಗಿ ಸಮಯೋಚಿತವಾಗಿ ಯೋಚಿಸಿ.. ವಿನಾಕಾರಣ ಅವರಿವರನ್ನು ತೆಗಳುತ್ತಾ ತಿರಸ್ಕರಿಸುತ್ತಾ ಕಾಲಹರಣ ಮಾಡುವುದು ಬೇಡ.. ಭವಿಷ್ಯದ ನಮ್ಮ ಬಗ್ಗೆ.. ನಮ್ಮ ಬಂಧುಗಳ ಬಗ್ಗೆ.. ನಮ್ಮ ಲಿಂಗಾಯತ ಧರ್ಮದ ಸಮಸ್ತ ಉಪ ಪಂಗಡಗಳ ಬಗ್ಗೆ.. ಚಿಂತನೆ ನಡೆಸಿ.. ಯೋಜನೆ ರೂಪಿಸಿ.. ನನ್ನ ಬರವಣಿಗೆಯಲ್ಲಿ ಏನಾದರೂ ತಪ್ಪಾಗಿದ್ದರೆ ದಯವಿಟ್ಟು ಕ್ಷಮಿಸಿ.. ನಾನು ಯಾರನ್ನೂ ವಿರೋಧಿಸುವದಿಲ್ಲ ನನ್ನಿಂದ ಯಾರ ಮನಸ್ಸಿಗೂ ನೋವಾಗಬಾರದು.. ಆದರೆ ನನ್ನ ಹಕ್ಕುಗಳನ್ನು ಮಾತ್ರ ನಾನು ಯಾವುದೇ ಕಾರಣಕ್ಕೂ ಬಿಡುವದಿಲ್ಲ.. ಶ್ರೀ ಗುರು ಬಸವ ಲಿಂಗಾಯನಮಃ.. ಅರಿವೇ ಗುರು, ದೇಹವೇ ದೇಗುಲ, ಕಾಯಕವೇ ಕೈಲಾಸ..! #ಶರಣ ಸಾಹಿತ್ಯ #ಬಸವಣ್ಣನವರ ವಚನಗಳು #//🌳ವಚನ ಸಾಹಿತ್ಯ 🌳// #ವಚನಗಳು #ಬಸವಾದಿ ಶರಣ ಶರಣೆಯರು
"ಹೊಯಿದವರೆನ್ನ ಹೊರೆದವರಂಬೇ.. "ಬಯಿದವರೆನ್ನ ಬಂಧುಗಳೆಂಬೇ.. "ನಿಂದಿಸಿದವರೆನ್ನ ತಂದೆ ತಾಯಿಗಳೆಂಬೆ.. "ಆಳಿಗೊಂಡವರೆನ್ನ ಆಳ್ದವರೆಂಬೇ.. "ಜರಿದವರೆನ್ನ ಜನ್ಮ ಬಂಧುಗಳೆಂಬೆ.. "ಹೊಗಳಿದವರೆನ್ನ ಹೊನ್ನ ಶೂಲದಲಿಕ್ಕಿದವರೆಂಬೇ
ಕೂಡಲಸಂಗಮದೇವ.. ✍️ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರ ವಚನ.. ಶರಣು ಶರಣಾರ್ಥಿಗಳು 🙏 #ಬಸವಾದಿ ಶರಣ ಶರಣೆಯರು #ವಚನಗಳು #//🌳ವಚನ ಸಾಹಿತ್ಯ 🌳// #ಬಸವಣ್ಣನವರ ವಚನಗಳು #ಶರಣ ಸಾಹಿತ್ಯ
"ಪುಣ್ಯ ಪಾಪವೆಂಬ ಉಭಯ ಕರ್ಮವನಾರು ಬಲ್ಲರಯ್ಯಾ??? ಇವನಾರುಂಬರು??? ಕಾಯ ತಾನುಂಬಡೆ ಕಾಯ ತಾ ಮಣ್ಣು, ಜೀವ ತಾನುಂಬಡೆ ಜೀವ ತಾ ಬಯಲು, ಈ ಉಭಯ ನಿರ್ಣಯವ ಕೂಡಲಸಂಗಮದೇವಾ, ನಿಮ್ಮ ಶರಣ ಬಲ್ಲ.. ✍️ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರ ವಚನ.. ಶರಣು ಶರಣಾರ್ಥಿಗಳು 🙏 #ಶರಣ ಸಾಹಿತ್ಯ #ಬಸವಣ್ಣನವರ ವಚನಗಳು #//🌳ವಚನ ಸಾಹಿತ್ಯ 🌳// #ವಚನಗಳು #ಬಸವಾದಿ ಶರಣ ಶರಣೆಯರು
ವಿಶ್ವಗುರು ಬಸವಣ್ಣನವರ ವಚನ.. #ಬಸವಾದಿ ಶರಣ ಶರಣೆಯರು #ವಚನಗಳು #//🌳ವಚನ ಸಾಹಿತ್ಯ 🌳// #ಬಸವಣ್ಣನವರ ವಚನಗಳು #ಶರಣ ಸಾಹಿತ್ಯ
ವಿಶ್ವಗುರು ಬಸವಣ್ಣನವರ ವಚನ.. #ಶರಣ ಸಾಹಿತ್ಯ #ಬಸವಣ್ಣನವರ ವಚನಗಳು #//🌳ವಚನ ಸಾಹಿತ್ಯ 🌳// #ವಚನಗಳು #ಬಸವಾದಿ ಶರಣ ಶರಣೆಯರು
"ಮರನನೇರಿದ ಮರ್ಕಟನಂತೆ ಹಲವು ಕೊಂಬೆಗೆ ಹಾಯುತಲಿದೆ; ಬೆಂದ ಮನವ ನಾನೆಂತು ನಂಬುವೆನಯ್ಯಾ??? ಎಂತು ನಚ್ಚುವೆನಯ್ಯಾ??? ಎನ್ನ ತಂದೆ ಕೂಡಲ ಸಂಗಮದೇವನಲ್ಲಿಗೆ ಹೋಗಲೀಯದಯ್ಯಾ! ✍️ ವಿಶ್ವಗುರು ಬಸವಣ್ಣನವರ ವಚನ.. ಶರಣು ಶರಣಾರ್ಥಿಗಳು 🙏 #ಬಸವಾದಿ ಶರಣ ಶರಣೆಯರು #ವಚನಗಳು #//🌳ವಚನ ಸಾಹಿತ್ಯ 🌳// #ಬಸವಣ್ಣನವರ ವಚನಗಳು #ಶರಣ ಸಾಹಿತ್ಯ
ಶ್ರೀ ಗುರು ಬಸವ ಲಿಂಗಾಯನಮಃ.. "ಅಗ್ನಿಮುಟ್ಟಲು ತೃಣವಗ್ನಿಯಪ್ಪುದು ತಪ್ಪದಯ್ಯ. ಗುರುಪ್ರಸಾದವಂಗವ ಸೋಂಕಿದಲ್ಲಿ ಸರ್ವಾಂಗ ಗುರುವಪ್ಪುದು ತಪ್ಪದಯ್ಯ. ಲಿಂಗಪ್ರಸಾದ ಮನವ ಸೋಂಕಿದಲ್ಲಿ ಮನ ಲಿಂಗವಪ್ಪುದು ತಪ್ಪದಯ್ಯ. ಜಂಗಮಪ್ರಸಾದ ಅರಿವ ಸೋಂಕಿದಲ್ಲಿ ಅಖಂಡಿತ ಪ್ರಸನ್ನಪ್ರಸಾದವಪ್ಪುದು ತಪ್ಪದಯ್ಯ. ಶಿವಶಿವಾ, ಪ್ರಸಾದದ ಮಹಿಮೆಯನೇನೆಂದುಪಮಿಸುವೆ??? ಪ್ರಸಾದವೇ ಗುರು, ಪ್ರಸಾದವೇ ಲಿಂಗ, ಪ್ರಸಾದವೇ ಜಂಗಮ, ಪ್ರಸಾದವೇ ಪರಾತ್ಪರ, ಪ್ರಸಾದವೇ ಪರಮಾನಂದ, ಪ್ರಸಾದವೇ ಪರಮಾಮೃತ, ಪ್ರಸಾದವೇ ಪರಮಜ್ಞಾನ, ಪ್ರಸಾದವೇ ವಾಙ್ಮನೋತೀತ, ಪ್ರಸಾದವೇ ನಿತ್ಯಪರಿಪೂರ್ಣ. ಇಂತಪ್ಪ ಪ್ರಸಾದವ ಕೊಂಡು ಬದುಕಿದೆನಯ್ಯ. ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.. ✍🏻 ಶರಣ ಉರಿಲಿಂಗಪೆದ್ದಿ ಯವರ ವಚನ.. ಶರಣು ಶರಣಾರ್ಥಿಗಳು 🙏 #ಶರಣ ಸಾಹಿತ್ಯ #ಬಸವಣ್ಣನವರ ವಚನಗಳು #//🌳ವಚನ ಸಾಹಿತ್ಯ 🌳// #ವಚನಗಳು #ಬಸವಾದಿ ಶರಣ ಶರಣೆಯರು
ಶ್ರೀ ಗುರು ಬಸವ ಲಿಂಗಾಯ ನಮಃ.. "ಆಸೆಯೆಂಬುದು ಆರಾರನು ಕೆಡಿಸದಯ್ಯ??? ಸೀಮೆ ಭೂಮಿಗಾಸೆಗೈದು ಮಡಿದ ರಾಜರ ಹೇಳೆಂದರೊಂದು ಕೋಟ್ಯಾನುಕೋಟಿ. ಹೊನ್ನು ಹೆಣ್ಣಿಂಗೆ ಆಸೆಗೈದು ಮಡಿದವರ ಹೇಳೆಂದರೊಂದು ಕೋಟ್ಯಾನುಕೋಟಿ. ಹೆಣ್ಣು ವಿಷಯಕ್ಕೆ ಆಸೆಗೈದು ಮಡಿದವರೊಂದು ಕೋಟ್ಯಾನುಕೋಟಿ. ಹೊನ್ನು ಹೆಣ್ಣು ಮಣ್ಣಿಗೆ ಆಸೆಗೈದು ಮಡಿದವರ ಕಾಂಬೆನಲ್ಲದೆ, ನಿನಗಾಡಿ ನಿರಾಸಕ್ತರಾಗಿ ಸತ್ತವರನಾರನೂ ಕಾಣೆನಯ್ಯಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.. ✍🏻 ಶರಣ ಹೇಮಗಲ್ಲ ಹಂಪನವರ ವಚನ.. ಬಸವ ಬೆಳಗಿನ ಶರಣು ಶರಣಾರ್ಥಿಗಳು 🙏🏻 #ಬಸವಾದಿ ಶರಣ ಶರಣೆಯರು #ವಚನಗಳು #//🌳ವಚನ ಸಾಹಿತ್ಯ 🌳// #ಬಸವಣ್ಣನವರ ವಚನಗಳು #ಶರಣ ಸಾಹಿತ್ಯ
ಓಡದಿರು, ಓಡದಿರು ನಿನ್ನ ಬೇಡುವಾತ ನಾನಲ್ಲ ಶಿವನೆ| ನೋಡುವೆನು ಕಣ್ಣ ತುಂಬ, ಆಡಿ ಪಾಡಿ ನಲಿದಾಡುವೆ|ಬೇಡೆನ್ನ ಕೂಡೆ ಮಾತಾಡಲಾಗದೆ, ಎಲೆ ಶಿವನೆ| ಕೂಡಲಸಂಗಮದೇವಾ, ನೀನಾಡಿಸುವ ಬೊಂಬೆ ನಾನು| ✍️ ವಿಶ್ವಗುರು ಬಸವಣ್ಣನವರ ವಚನ.. ಶರಣು ಶರಣಾರ್ಥಿಗಳು 🙏 #ಶರಣ ಸಾಹಿತ್ಯ #ಬಸವಣ್ಣನವರ ವಚನಗಳು #//🌳ವಚನ ಸಾಹಿತ್ಯ 🌳// #ವಚನಗಳು #ಬಸವಾದಿ ಶರಣ ಶರಣೆಯರು
"ಇವನಾರವ ಇವನಾರವ ಇವನಾರವ ನೆಂದೆನಿಸದಿರಯ್ಯಾ.. "ಇವ ನಮ್ಮವ ಇವ ನಮ್ಮವ ಇವನಮ್ಮವ ನೆಂದೆನಿಸಯ್ಯಾ.. "ಕೂಡಲಸಂಗಮದೇವಯ್ಯಾ ನಿಮ್ಮ ಮನೆಯ ಮಗನೆಂದೆನಿಸಯ್ಯಾ.. ✍️ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರ ವಚನ.. ಶರಣು ಶರಣಾರ್ಥಿಗಳು 🙏 #ಬಸವಾದಿ ಶರಣ ಶರಣೆಯರು #ವಚನಗಳು #//🌳ವಚನ ಸಾಹಿತ್ಯ 🌳// #ಬಸವಣ್ಣನವರ ವಚನಗಳು #ಶರಣ ಸಾಹಿತ್ಯ












