#ದಿನಕ್ಕೊಂದು ಕಥೆ #🔱 ಭಕ್ತಿ ಲೋಕ #🙏🏻ಶ್ರೀಕೃಷ್ಣನ ಕಥೆಗಳು📜
ಕೃಷ್ಣ- ನಾರದ- ಬಲರಾಮರ ದ್ವಾರಕಾ ನಾಟಕ: ಭಾಗ 1
ಅದು ದ್ವಾಪರಯುಗ. ಧರ್ಮವನ್ನು ರಕ್ಷಿಸುವ ಸಲುವಾಗಿ ಕೃಷ್ಣನಾಗಿ ಅವತರಿಸಿ ದ್ವಾರಕೆಯಲ್ಲಿ ದ್ವಾರಕಾದೀಶನಾಗಿ ದ್ದಾನೆ. ಅಣ್ಣ ಬಲರಾಮ ದ್ವಾರಕಾದ ರಾಜನಾಗಿದ್ದಾನೆ. ಕೃಷ್ಣನ ಪರಮ ಭಕ್ತರಾಗಿರುವ ಪಾಂಡವರು ದುರ್ಯೋಧನ, ಶಕುನಿಯ ಮೋಸದ ದ್ಯೂತದಲ್ಲಿ ಸಿಲುಕಿ ವನವಾಸ ಮಾಡಲು ಕಾಡಿಗೆ ಹೊರಟು. ಕಷ್ಟದಿಂದ ಕಾಡಿನಲ್ಲಿ ವಾಸ ಮಾಡಿಕೊಂಡಿದ್ದಾರೆ. ಅಲ್ಲಿ ಬರುವ ಋಷಿಮುನಿಗಳನ್ನು ಆರಾಧಿಸಿ, ಪುರಾಣ ಪುಣ್ಯ ಕಥೆಗಳನ್ನು ಕೇಳುತ್ತಾ ಅತಿಥಿಗಳ ಸತ್ಕಾರದಲ್ಲಿ ಕಾಲ ಕಳೆಯುತ್ತಿದ್ದರು.
ಕೃಷ್ಣನ ದರ್ಶನ ಮಾಡುವ ಸಲುವಾಗಿ ನಾರದರು ಹರಿ ನಾಮ ಸಂಕೀರ್ತನೆ ಮಾಡುತ್ತಾ ದ್ವಾರಕೆಗೆ ಬಂದರು. ಬಲ ರಾಮ ತನ್ನ ಪತ್ನಿ ರೇವತಿಯೊಂದಿಗೆ ಅಂತಪುರದಲ್ಲಿ ಕಾಲ ಕಳೆಯುತ್ತಿದ್ದನು. ರೇವತಿ ಒಂದು ಪ್ರಶ್ನೆ ಕೇಳಿದಳು, ಸ್ವಾಮಿ ಶ್ರೀ ರಾಮ,ಪರಶುರಾಮ, ಪಟ್ಟಾಭಿರಾಮ ಭಾರ್ಗವ ರಾಮ, ಕೋದಂಡರಾಮ,ಇಂತಹ ಹೆಸರುಗಳನ್ನು ಕೇಳಿರುವೆ. ನಿಮ್ಮ ಹೆಸರು ಬಲರಾಮ ಅದು ಹೇಗೆ? ತನ್ನ ಹೆಸರನ್ನು ಕೇಳಿದ ಬಲರಾಮ ಜೋರಾಗಿ ನಕ್ಕನು. ರೇವತಿ ನಿನ್ನ ಗಂಡನ ಭುಜ ಬಲದ ಪರಾಕ್ರಮವನ್ನು ನೀನೇನು ಬಲ್ಲೆ, ಒಮ್ಮೆ ನಾನು ಹಲಾಯುಧವನ್ನು ಹಿಡಿದು ರಣರಂಗಕ್ಕೆ ಇಳಿದರೆ, ಈ ತ್ರಿಲೋಕದಲ್ಲಿ ನನಗೆ ಸರಿಸಾಟಿ ಯಾರಿದ್ದಾರೆ ಹೇಳು? ಪ್ರಖ್ಯಾತರಾಗಿರುವ ದುರ್ಯೋಧನ, ಭೀಮ ಇವರೆಲ್ಲ ನನ್ನ ಶಿಷ್ಯರು. ಗದಾಯುದ್ಧ- ಮಲ್ಲಯುದ್ಧದಲ್ಲಿ ನನ್ನ ಯುದ್ಧದ ವೈಕರಿ ಯಾರಿಗೂ ಬರುವುದಿಲ್ಲ. ರೇವತಿ ಹೇಳಿದಳು ಹಾಗಾದರೆ ಮಲ್ಲ ಯುದ್ಧ ಅಂದರೆ ಕುಸ್ತಿ ಮಾಡಿ ನಾನು ನೋಡಬೇಕು ಎಂದಳು. ಹಾಗಾದರೆ ನಿನಗೊಂದು ಅವಕಾಶ ದೊರಕಿಸುತ್ತೇನೆ ಎಂದ ಬಲರಾಮ, ರೇವತಿ ಅಯ್ಯೋ ಇನ್ನು ನಿಮ್ಮ ಅವಕಾಶಕ್ಕಾಗಿ ಕಾಯುತ್ತ ಕೂರುವಷ್ಟು ಸಮಯವಿಲ್ಲ. ಅರಮನೆಯಲ್ಲಿ ಸೇವಕರಿದ್ದಾರೆ ಅವರ ಜೊತೆ ಕುಸ್ತಿ ಮಾಡಿ ತೋರಿಸಿ ಎಂದಳು. ನಿನಗೆ ಗೊತ್ತಿಲ್ಲ, ನನಗೆ ಸರಿಸಾಟಿಯಾದವರು ಬಂದರೆ ನಿನಗೆ ತೋರಿಸುತ್ತೇನೆ ಎಂದು ಬಲರಾಮ ಹೇಳುತ್ತಿದ್ದ. ಆ ಸಮಯಕ್ಕೆ ಬ್ರಹ್ಮನ ಮಾನಸ ಪುತ್ರರಾದ ನಾರದರು, ತಂಬೂರಿ ಕೈಯಲ್ಲಿ ಚಿಟಿಕಿ ಹಿಡಿದು ನಾರಾಯಣ- ನಾರಾಯಣ ಎಂದು ನಾಮ ಸ್ಮರಣೆ ಮಾಡುತ್ತಾ ಬಂದರು. ಅವರನ್ನು ನೋಡುತಿದ್ದಂತೆ ರೇವತಿ ನಿನ್ನ ಆಸೆ ಕೈಗೂಡಿತು. ನನ್ನ ಜೊತೆಗೆ ನಾರದರೆ ಬಂದಿದ್ದಾರೆ ಎಂದು ಬಲರಾಮ ಹೇಳಿ, ನಾರದ ಏ
ನಾರದ ಎಂದು ಏಕವಚನದಲ್ಲಿ ಜೋರಾಗಿ ಕೂಗಿದ.
ಏನಿದು ಯಾವಾಗಲೂ ಬ್ರಹ್ಮರ್ಷಿಗಳೇ, ಮಹರ್ಷಿಗಳೇ ಎಂದು ಕರೆಯುತ್ತಿದ್ದ ಬಲರಾಮ ಇಂದು ನಾರದ- ನಾರದ ಎಂದು ಕರೆಯುತ್ತಿದ್ದಾನಲ್ಲ. ಮತ್ತೆ ಬಲರಾಮ ಕೂಗಿದಾಗ, ಬಲರಾಮ ಹೇಳು ಎಂದರು. ನಾರದರೇ ನನ್ನ ಹೆಂಡತಿ ರೇವತಿಗೆ ನಾನು ಮಾಡುವ ಮಲ್ಲಯುದ್ಧ ನೋಡಬೇಕಂತೆ ನನ್ನ ಜೊತೆ ಕುಸ್ತಿ ಮಾಡಲು ನೀವೇ ಬನ್ನಿ, ಎಂದನು. ಇದನ್ನು ಕೇಳಿ ನಾರದರ ಕೈ ಕಾಲು ಥರಥರ ಗುಟ್ಟಿತು. ಏನು ನಿನ್ನ ಜೊತೆ ಯುದ್ಧ ಮಾಡಕ್ಕೆ ನಾನು ಬರಬೇಕೇ? ಹೌದು ನಾರದರೇ ನನ್ನ ಹೆಂಡತಿಗೆ ಮಲ್ಲಯುದ್ಧವನ್ನು ತೋರಿಸ ಬೇಕು, ನಾರದರು ಹೌ ಹಾರಿದರು. ಈ ಬಲರಾಮ ನನ್ನನ್ನು ಯುದ್ಧಕ್ಕೆ ಕರೆಯುತ್ತಾನೆ. ಯೋಚಿಸುತ್ತಾ, ಬಲರಾಮ ನೀನು ಭುಜಬಲ ಪರಾಕ್ರಮಿ, ನಾನೋ ಬಾಗವತೋತ್ತಮ,ನನಗೂ ನಿನಗೂ ಸಮವೇ? ಪರವಾಗಿಲ್ಲ ನಾರದರೇ ಒಂದು ಸಾರಿ ನಿಮ್ಮನ್ನು ಎತ್ತಿ ಮೇಲಿಂದ ಕೆಳಗೆ ಹಾಕುತ್ತೇನೆ. ನನ್ನ ಹೆಂಡತಿ ನೋಡಲಿ ಎಂದನು. ನಾರದರು ಹೆದರಿ ಪಂಚೆ ಮೇಲೆತ್ತಿ ಕೊಂಡು ಓಡತೊಡಗಿದರು. ಅವರನ್ನು ಹಿಡಿದು ತನ್ನಿ ಎಂದು ಬಲರಾಮ ಸೇವಕರನ್ನು ಕಳಿಸಿದ.
ಅಂತೂ ಬಲರಾಮನಿಂದ ಹೇಗೋ ತಪ್ಪಿಸಿಕೊಂಡು ಅರಮನೆಯೊಳಗೆ ನುಗ್ಗಿ ಕೃಷ್ಣನಿದ್ದ ಉದ್ಯಾನವನಕ್ಕೆ ಬಂದರು. ಜಗದೊಡೆಯನನ್ನು ಕಂಡ ನಾರದರು, ಕೃಷ್ಣ ಅಂತೂ ನಿನ್ನನ್ನು ಕಂಡೆ ಎಂದು ಕೊಂಡರು. ಯಾವುದೋ ಯೋಚನೆಯಲ್ಲಿ ಮುಳುಗಿದ್ದ ಕೃಷ್ಣ, ಓಹೋ, ಪೂಜ್ಯರೆ ಬನ್ನಿ ಎಂದನು. ನಾರದರು ಏನು ಕೃಷ್ಣ ಗಾಢವಾದ ಯೋಚನೆಯಲ್ಲಿ ಮುಳುಗಿರುವೆ? ಎಂದು ಕೇಳಿದರು. ಏನಿಲ್ಲ ಪೂಜ್ಯರೆ ನಿಮ್ಮನ್ನು ನೋಡಿದ ಮೇಲೆ ನನಗೊಂದು ಯೋಚನೆ ಬಂದಿದೆ. ನನಗೆ ಯಾಕೋ ಬೇಸರವಾಗಿದೆ ನನ್ನ ಬೇಸರ ಕಳೆಯಲು ಒಂದು ಕಥೆ ಹೇಳುತ್ತೀರಾ? ಎಂದು ಕೃಷ್ಣ ಕೇಳಿದ. ಕತೆನಾ? ನಾನು ಹೇಳುವುದಾ, ನಿನಗೆ ಎಂಥ ಕಥೆ ಬೇಕು? ಎಂದು ನಾರದರು ಕೇಳಿದಾಗ, ಕೃಷ್ಣ ಹೇಳಿದ, ಆ ಕಥೆಯನ್ನು ಹಿಂದೆ ಯಾರೂ ಕೇಳಿರಬಾರದು, ಮುಂದೆ ಯಾರು ಕೇಳಬಾರದು, ಹಿಂದೆ ನಡೆದಿರಬಾರದು ಮುಂದೆ ನಡೆಯಬಾರದು ಅಂತಹ ಕಥೆಯನ್ನು ಹೇಳಿ.
ಸರಿ ಹೋಯ್ತು ಕೃಷ್ಣ, ಮನಸ್ಸಿನಲ್ಲಿ ನಾರದರು ಅಂದು ಕೊಂಡರು, ಬಲರಾಮನಿಗೆ ಕುಸ್ತಿ ಆಡಕ್ಕೆ ಜೊತೆ ಬೇಕು, ಭಗವಂತನಾದ ಶ್ರೀ ಕೃಷ್ಣನಿಗೆ ಒಂದು ಕಥೆ ಬೇಕು, ಯೋಚಿ ಸಿದ ನಾರದರು, ಕೃಷ್ಣ ನಿನಗೆ ಕಥೆ ಬೇಕಾ? ನೋಡ್ತಾ ಇರು ಕಥೆನಾ ಕೇಳುವುದಲ್ಲ ನೋಡು ಅಂಥ ಕಥೆಯನ್ನೆ ತೋರಿ ಸುವೆ ಸ್ವಲ್ಪ ಸಮಯ ಕೊಡು ಈಗ ನಾನು ಹೊರಡುತ್ತೇನೆ ಎಂದು ಹೊರಟರು.
ಗಗನ ಮಾರ್ಗದಲ್ಲಿ ಹೊರಟ ನಾರದರು ಮನದಲ್ಲಿ, ಇಲ್ಲಿ ತನಕ ಕೃಷ್ಣ ಹೇಳುವುದನ್ನು ನಾನು ಕೇಳುತ್ತಾ ಕಾಲ ಕಳೆಯು ತ್ತಿದ್ದೆ, ಈಗ ನಿನಗೆ ಕಥೆ ಹೇಳುವ ಕಾಲ ಬಂದಿದೆ ಹೇಳುತ್ತೇನೆ ಎಂದುಕೊಂಡು ಕೆಳಗೆ ನೋಡಿದರು, ನಾರದರ ಶಿಷ್ಯನಾದ ಕೃತವರ್ಮ ತನ್ನ ಅರಮನೆಗೆ ಬರುತ್ತಿದ್ದ ಅತಿಥಿಗಳನ್ನು ಸತ್ಕರಿಸಿ ಒಳಗೆ ಕರೆಯುತ್ತಿದ್ದನು. ಇದನ್ನು ನೋಡಿದ ನಾರದರು ಬಲರಾಮನಿಗೆ ಜೊತೆ- ಕೃಷ್ಣನಿಗೆ ಕಥೆ ಇವೆರಡನ್ನು ಇಲ್ಲೇ ತೋರಿಸಬೇಕೆಂದು ಭೂಮಿಗೆ ಇಳಿದರು. ಕೃತವರ್ಮ ಗುರು ಗಳನ್ನು ಕಂಡು ಸಂತೋಷದಿಂದ ಒಳಗೆ ಕರೆದುಕೊಂಡು ಹೋದನು. ನಿಮ್ಮಿಂದಾಗಿ ನಾನು ಇಂದು ಸಹಸ್ರಾರು ಜನ ರಿಗೆ ಪ್ರತಿನಿತ್ಯ ಅನ್ನದಾನ ಮಾಡುತ್ತಿದ್ದೇನೆ ಎಂದನು.
ಒಂದು ಪೀಠದಲ್ಲಿ ನಾರದರನ್ನು ಕೂರಿಸಿದ, ಆಗಲೇ ಜನಗಳಿಗೆ ಎಲೆ ಹಾಕಿ ನಾನಾ ಥರದ ಭಕ್ಷ ಭೋಜ್ಯವನ್ನು ಬಡಿಸುತ್ತಿದ್ದರು. ಎಲ್ಲರೂ ಊಟ ಮಾಡಲು ಕಾಯುತ್ತಿದ್ದರು. ಕೃತವರ್ಮ ಗುರುಗಳಿಗೆ ನಮಸ್ಕಾರ ಮಾಡಲು ತನ್ನ ಪತ್ನಿ ಸತ್ಯವತಿಯನ್ನು ಕರೆದನು. ಪತಿಯ ಕರೆಗೆ ಓಡೋಡಿ ಬಂದಳು. ಕೃತವರ್ಮನ ಪತ್ನಿ ಸತ್ಯವತಿಯಂತೂ ಪತಿವ್ರತಾ ಪರಾಯಣೆ, ಅತ್ಯಂತ ಸುಂದರಿ, ಗುಣವಂತಳು. ಗಂಡ- ಹೆಂಡತಿ ನಾರದರಿಗೆ ನಮಸ್ಕರಿಸಿದರು. ನಾರದರು ಸತ್ಯವತಿಯನ್ನು ತದೇಕಚಿತ್ತದಿಂದ ನೋಡಿದರು. ಅವರ ಕತೆ ನಿರ್ಮಾಣ ಮಾಡಲು ಬೇಕಾದ ಸಾಮಗ್ರಿ ಇಲ್ಲಿ ಸಿಕ್ಕಿತು. ನಾರಾಯಣನ ಅಂಶ ಕೃಷ್ಣ, ಆದಿಶೇಷನ ಅವತಾರ ಬಲರಾಮ, ಇಂಥ ಬಲಶಾಲಿಗಳನ್ನು- ತ್ರಿಮೂರ್ತಿಗಳನ್ನು ಅಲುಗಾಡಿಸುವ ಶಕ್ತಿ ಇರುವುದು ಪತಿವ್ರತಾ ಶಕ್ತಿಯಲ್ಲಿ, ಪತಿವ್ರತೆ ಸತಿ ಸತ್ಯವತಿ ಈ ನಾಟಕದ ಪಾತ್ರಧಾರಿ. ಕೃಷ್ಣಾ! ಈಗ ನಾನು ತಯಾರು ಮಾಡುವ ನಾಟಕಕ್ಕೆ ನೀನು ಸಹಾಯ ಮಾಡಬೇಕು. ಎಂದುಕೊಂಡು ಭೋಜನದ ಮುಂದೆ ಕುಳಿತ ನಾರದರಿಗೆ,
ಶಿಷ್ಯ ಕೃತ ವರ್ಮ, ಗುರುಗಳೇ ನೀವು ಭೋಜನ ಸ್ವೀಕಾರ ಮಾಡದೆ ಯಾರೂ ಊಟ ಮಾಡುವುದಿಲ್ಲ ಭೋಜನ ಸ್ವೀಕಾರ ಮಾಡಿ ಎಂದನು. ಆಗ ನಾರದರು ನನ್ನ ಮನದ ಮಾತನ್ನು ನೀನು ನಡೆಸಿಕೊಡುತ್ತೇನೆ ಎಂದು ಮಾತು ಕೊಟ್ಟರೆ ನಾನು ಭೋಜನ ಮಾಡುತ್ತೇನೆ ಎಂದರು. ಆಯ್ತು ಗುರುಗಳೇ ನನ್ನ ಗುರುಗಳಾದ ನಿಮ್ಮ ಮೇಲೆ ಆಣೆ ಮಾಡಿ ಹೇಳುತ್ತೇನೆ ನಿಮ್ಮ ಮಾತನ್ನು ನಡೆಸಿಕೊಡುತ್ತೇನೆ ಕೇಳಿ ಎಂದನು. ನಾರದರು ಊಟ ಮುಗಿಯಲಿ ಕೇಳುತ್ತೇನೆ ಎಂದು ಎಲ್ಲರಿಗೂ ಭೋಜನ ಸ್ವೀಕರಿಸಲು ಅನುಮತಿ ಕೊಟ್ಟು ತಾವು ಊಟ ಮಾಡಿದರು.
ಊಟವಾದ ಮೇಲೆ ನಾರದರನ್ನು ಒಂದೆಡೆ ಕೂರಿಸಿ ಕೇಳಿ? ಗುರುಗಳೇ ಎಂದು ಕೃತವರ್ಮ ಹೇಳಿದನು. ನೋಡು ಶಿಷ್ಯ ಇಂದು ಇರುಳಿನ ನನ್ನ ಸೇವೆಗೆ ನಿನ್ನ ಸುಂದರ ಪತ್ನಿಯಾದ ಸತ್ಯವತಿಯನ್ನು ಕಳುಹಿಸಿಕೊಡು ಇಷ್ಟೇ ನನ್ನ ಬೇಡಿಕೆ. ಕೇಳಿದ, ಕೃತವರ್ಮನ ಜಂಘಾಭಲವೇ ಉಡುಗಿತು. ಗುರು ಗಳೇ ಬ್ರಹ್ಮಚಾರಿಗಳಾದ ನೀವು ನನ್ನ ಪತ್ನಿಯ ಸೇವೆಯನ್ನು ಬಯಸುತ್ತೀರಾ? ಹಿಂದೆ ಸತ್ಯ ಹರಿಶ್ಚಂದ್ರನು ತನ್ನ ಪತ್ನಿಯ ನ್ನು ಮಾರಿದ ಎಂದು ಕೇಳಿದ್ದೇನೆ. ಆದರೆ ಗುರುಗಳಿಗೆ ಒಪ್ಪಿಸಿದ ಎಂಬುದನ್ನು ಕೇಳಿಲ್ಲ ಎಂದು ಹಲುಬ ತೊಡಗಿದ್ದನ್ನು ಕಂಡ ನಾರದರು ಮೇಲೆದ್ದು ಹೋಗಲಿ ಸಂಕಟಪಡಬೇಡ, ನೀನು ಮಾತನ್ನು ನಡೆಸಿಕೊಡುತ್ತೇನೆ ಎಂದು ಪ್ರಮಾಣ ಮಾಡಿದ್ದನ್ನು ನಾನು ಎಲ್ಲೂ ಹೇಳಲ್ಲ ಎಂದು ಹೊರಟು ನಿಂತರು. ಕೃತವರ್ಮನು ನಿಲ್ಲಿ, ಗುರುಗಳೇ ಕೊಟ್ಟ ಮಾತನ್ನು ನಾನು ತಪ್ಪುವುದಿಲ್ಲ ಎಂದು ಒಳಗೆ ಹೋದನು. ಆತನ ಪತ್ನಿ ಸತ್ಯವತಿ ಎದುರಾಗಿ ಏಕೆ ನಿಮ್ಮ ಮುಖ ಕಳಹೀನವಾ ಗಿದೆ ಎಂದು ಕೇಳಿದಳು. ನಡೆದ ಸಂಗತಿಯನ್ನು ಸೂಕ್ಷ್ಮವಾಗಿ ಹೇಳಿದನು. ಆಕೆಯು ನೀವು ಚಿಂತಿಸಬೇಡಿ ನಾನು ಈಗಲೇ ಅಗ್ನಿ ಪ್ರವೇಶ ಮಾಡುತ್ತೇನೆ ಎಂದಳು. ಇದನ್ನು ಕೇಳಿ, ನೀನು ಅಗ್ನಿಗೆ ಹಾರಿದರೆ ನನ್ನ ಮಾತನ್ನು ಉಳಿಸಿದಂತಾಗುವುದಿಲ್ಲ ಎಂದನು. ಸತ್ಯವತಿಯು ನೀವು ಅನುಮತಿ ಕೊಟ್ಟರೆ ನಾನು ಹೋಗುತ್ತೇನೆ ಆದರೆ ಬೆಳಗ್ಗೆ ನನ್ನ ಮುಖವನ್ನು ನಿಮಗೆ ತೋರಿಸುವುದಿಲ್ಲ ಎಂದು ಹೇಳಿ, ಹಣ್ಣು ತುಂಬಿದ, ಹಾಲಿನ ತಟ್ಟೆ ತೆಗೆದುಕೊಂಡು ನಾರದರಲ್ಲಿಗೆ ಹೊರಟಳು. ವಾರೆಗಣ್ಣಿ ನಲ್ಲಿ ನೋಡಿದ ನಾರದರು ಆಕೆ ಬರುವುದನ್ನು ಖಚಿತಪಡಿಸಿ ಕೊಂಡು ಕೃಷ್ಣ, ಕೃಷ್ಣ, ಈ ಪರೀಕ್ಷೆಯಲ್ಲಿ ನೀನೇ ನನ್ನ ಕಾಪಾಡಬೇಕು ಎಂದುಕೊಂಡರು. ಸತ್ಯವತಿ ಬಂದಳು ಬಂದೆಯಾ ಸತ್ಯವತಿ ನೀನು ತಂದಿರುವ ಹಣ್ಣು- ಹಂಪಲುಗಳನ್ನು ಸ್ವಲ್ಪ ಹೊತ್ತು ಧ್ಯಾನ ಮಾಡಿ ಆಮೇಲೆ ತೆಗೆದುಕೊಳ್ಳುವೆ. ನಂತರ ಮಾತನಾಡುವೆ ಎಂದು "ಓಂ ನಮೋ ನಾರಾಯಣ" ಎಂಬ ನಾಮ ಸ್ಮರಣೆ ಮಾಡುತ್ತಾ ಧ್ಯಾನಕ್ಕೆ ಕುಳಿತರು.ಈ ಕಥೆಯನ್ನು ಬರಹ ರೂಪಕ್ಕೆ ತಂದವರು — ಆಶಾ ನಾಗಭೂಷಣ.
ನಾರಾಯಣನ ನಾಮ ಸ್ಮರಣೆಯಲ್ಲಿ ಇಡೀರಾತ್ರಿ ಕಳೆದರು. ನಸು ಬೆಳಕು ಹರಿಯಿತು. ನಾರದರು ಕೇಳಿದ್ದು ಇರುಳಿಗಾಗಿ ಅದು ಕಳೆಯಿತು. ಸತ್ಯವತಿ ತನ್ನ ಕೆಲಸ ಮುಗಿಯಿತೆಂದು ದಾಸಿಯ ಕೈಯಲ್ಲಿ ಹಣ್ಣು ಹಾಲಿನ ತಟ್ಟೆಕೊಟ್ಟು ಅರಮನೆಗೆ ಹೋದಳು. ನಾರದರು ಕಣ್ಣು ಬಿಟ್ಟು ಸತ್ಯವತಿ ಎಂದು ದಾಸಿ ಯನ್ನು ಕರೆದರು. ದಾಸಿ ನಡುಗುತ್ತಾ, ರಾಣಿ ಅಲ್ಲ ಅವರ ದಾಸಿ ಎಂದಳು. ಇದಕ್ಕಾಗಿ ಕಾದಿದ್ದ ನಾರದರು ನಖಶಿಕಾಂತ ಸಿಟ್ಟುಗೊಂಡಂತೆ, ದಾಸಿ ನಿನ್ನ ರಾಣಿ, ಶ್ರೇಷ್ಠ ಮುನಿಯನ್ನು ಅವಮಾನಿಸಿದ್ದಾಳೆ ಎಲ್ಲಿ ರಾಣಿ ಎಂದು ಕೂಗಿದರು. ದಾಸಿ ಹೆದರಿ ರಾಣಿಯನ್ನು ಕರೆತರಲು ಓಡಿದಳು.ತಿಳಿಸದೆ ಬಂದ ತಪ್ಪಿಗೆ, ಕೃತವರ್ಮ ಮತ್ತು ಸತ್ಯವತಿ ನಾರದರ ಹತ್ತಿರ ಕ್ಷಮೆ ಕೇಳಲು ಹೊರಟಿದ್ದರು. ನಾರದರು ಇದನ್ನು ಮನಗೊಂಡು ಮನಸ್ಸನ್ನು ಸ್ಥಿರವಾಗಿಟ್ಟುಕೊಂಡರು. ಅವರಿಗೆ ಮಾತನಾಡ ಲು ಅವಕಾಶ ಕೊಡಬಾರದು ಎಂದು ಸೆಟೆದು ಕುಳಿತರು.
ಕೃತ ವರ್ಮನು, ಗುರುಗಳೇ ತಪ್ಪಾಯ್ತು ಎನ್ನುವುದರೊಳಗೆ, ಅಲ್ಲೇ ನಿಲ್ಲಿ ಎಂದು ತಡೆದರು. "ಸ್ಥಿರವಾದ ಮನಸ್ಸಿಲ್ಲದ ನಿನ್ನ ಪತ್ನಿ ಪೂರ್ತಿಯಾಗಿ ನನ್ನ ಸೇವೆ ಮಾಡದೆ ಹಾಗೆ ಹೋದಳು. ನಿಂತಲ್ಲಿ ನಿಲ್ಲದ ಕುದುರೆಯಂಥ ಚಂಚಲ ಸ್ವಭಾವದ ನಿನ್ನ ಪತ್ನಿ ಹೆಣ್ಣು ಕುದುರೆಯಾಗಲಿ ಎಂದು ಶಾಪ ಕೊಟ್ಟರು". ಶಾಪ ಕೇಳಿ ತತ್ತರಿಸುವುದರೊಳಗೆ ಸತ್ಯವತಿ ಹೆಣ್ಣು ಕುದುರೆ ಯಾಗಿ ನಿಂತಳು. ಕೃತವರ್ಮನು, ಇದೇನು ಗುರುಗಳೇ ನಿಮ್ಮನ್ನೆ ನಂಬಿದ ನನಗೆ ಇಂಥ ಶಿಕ್ಷೆಯೇ ಎಂದು ಅಳುತ್ತಿದ್ದ ನು, ನಾರದರು ಅವನಿಗೆ ಬೇಜಾರು ಮಾಡಿಕೊಳ್ಳಬೇಡ ಕಾರಣಗಳು ಇಲ್ಲದೆ ಯಾವುದೂ ನಡೆಯುವುದಿಲ್ಲ. ಶಾಪ ವಿಮೋಚನೆಯನ್ನು ಹೇಳುತ್ತೇನೆ ಕೇಳು.ಯಾವತ್ತು “ಮೂರುವರೆ ವಜ್ರಗಳು” ಹೆಣ್ಣು ಕುದುರೆಯಾದ ನಿನ್ನ ಪತ್ನಿಯ ಮೈ ಸ್ಪರ್ಶಿಸುತ್ತವೆಯೋ, ಆಗ ಅವಳ ಶಾಪ ವಿಮೋಚನೆ ಆಗುತ್ತದೆ. ಇದನ್ನು ಕೇಳಿದ ಅರಮನೆ ಮಂತ್ರಿ ಅರಮನೆಯಲ್ಲಿ ಬೇಕಾದಷ್ಟು ವಜ್ರಗಳಿವೆ ತರುತ್ತೇನೆ ಎಂದು ಹೊರಟನು. ವಜ್ರಗಳು ಅಂದರೆ ಕಲ್ಲಿನ ವಜ್ರಗಳಲ್ಲ, ನನಗೆ ಗೊತ್ತು ನೀನು ಚಿಂತಿಸಬೇಡ ನಾನೇ ನಿನಗೆ ಎಲ್ಲಾ ಕೊಡುತ್ತೇನೆಂದು ಹೇಳಿ, ನಾರದರು ಹೊರಟರು.
(ಮುಂದುವರಿದ ಭಾಗವನ್ನು ನಾಳೆ ಹಾಕುತ್ತೇನೆ)
ವಂದನೆಗಳೊಂದಿಗೆ,
ಬರಹ: ©ಆಶಾ ನಾಗಭೂಷಣ
▬▬ஜ۩۞۩ஜ▬▬▬*▬▬▬ஜ۩۞۩ஜ▬▬
!! ಸರ್ವಂ ಶ್ರೀ ಕೃಷ್ಣಾರ್ಪಣಮಸ್ತು !!
🙏 ಸರ್ವೇ ಜನಾಃ ಸುಖಿನೋ ಭವಂತುಸರ್ವೇ
ಸಂತು ನಿರಾಮಯಾಃ 🙏
!! ಧರ್ಮೋ ರಕ್ಷತಿ ರಕ್ಷಿತಃ !!
▬▬▬ஜ۩۞۩ஜ▬▬▬▬▬▬ஜ۩۞۩ஜ▬▬▬
🙏 ಹರಿ ಸರ್ವೋತ್ತಮ ವಾಯು ಜೀವೋತ್ತಮ 🙏


