ShareChat
click to see wallet page
search
#📜ಪ್ರಚಲಿತ ವಿದ್ಯಮಾನ📜 ಸಮಾನತೆಯ ಕನಸಿನ ಸಂವಿಧಾನ ಕಥನ: ಲ್ಯಾಂಡ್ ಲಾರ್ಡ್ ಕನಸು ಕಾಣುವುದು ಮನುಷ್ಯನ ಮೂಲಭೂತ ಹಕ್ಕು.ಆ ಕನಸು ಸ್ವತಂತ್ರ. ಅದಕ್ಕೆ ಬೇಲಿಗಳಿಲ್ಲ. ಆ ಕನಸನ್ನು ನನಸು ಮಾಡುವುದಕ್ಕಾಗಿ ಹೋರಾಟದ ಹಾದಿ ಹಿಡಿಯುವುದು, ಬಂಡಾಯದ ಬಾವುಟ ಹಾರಿಸುವುದು ಅನಿವಾರ್ಯ ಎಂಬಂತೆ ಚಿತ್ರಕತೆ ರೂಪುಗೊಂಡಿದೆ. ಈ ಬಂಡಾಯ ಬದುಕಿಗಾಗಿ ಜೀತದಾಳಿನಿಂದ, ಕೂಲಿಕಾರನಿಂದ ಬಿಡುಗಡೆ ಹೊಂದಿ, ಜಮೀನು ಪಡೆದು ವ್ಯವಸಾಯಗಾರನಾಗಿ ಸ್ವತಂತ್ರ ಬದುಕು ನಿರ್ಮಿಸಿಕೊಳ್ಳುವುದಕ್ಕಾಗಿ .ಇಲ್ಲಿನ ಕಥಾನಾಯಕ ರಾಚಯ್ಯ ಪಾಳೆಗಾರಿಕೆ ಮಾಡುವವರ ವಿರುದ್ಧ ತುಂಡು ಭೂಮಿಗಾಗಿ, ಸಮಾನತೆಗಾಗಿ ಹೋರಾಟ ನಡೆಸುವನು. ಮೊಟ್ಟಮೊದಲ ಬಾರಿಗೆ ಸಂವಿಧಾನದ ಸಮಾನತೆಯನ್ನು ಗಟ್ಟಿದನಿಯಾಗಿ ಬಿಂಬಿಸಿದೆ. .ಸಂವಿಧಾನದ ಕುರಿತಾಗಿ ಹೆಚ್ಚು ಚರ್ಚೆಗಳು ನಡೆಯುತ್ತಿರುವ ಸಮಯದಲ್ಲಿ ಸಿನಿಮಾ ಹೊಸ ಆಲೋಚನೆಗಳನ್ನು ಹೊತ್ತು ತಂದಿದೆ. ಈ ಸಿನಿಮಾದಲ್ಲಿನ ಸಣ್ಣ ಮಗುವಿನ ಕುರುಡಿಯ ಪಾತ್ರವು ಇಡೀ ಸಿನಿಮಾಕ್ಕೆ ಮುನ್ನುಡಿ ಬರೆದಿದೆ. ಕಣ್ಣು ಇಲ್ಲದವರಿಗೆ ಕಣ್ಣಾಗಬೇಕೆಂಬ ನಿಟ್ಟಿನಲ್ಲಿ ಸಿನಿಮಾದ ಕೊನೆಯ ದೃಶ್ಯದಲ್ಲಿ ನಾಯಕ ತಪ್ಪು ಮಾಡಿದವರಿಗೆ ಕಾನೂನಿನಲ್ಲಿ ಶಿಕ್ಷೆ ಏನಿದೆ ಎಂದು ಕೇಳುತ್ತಾನೆ.ಅದಕ್ಕೆ ಕಣ್ಣಿಲ್ಲದ ಪುಟ್ಟಿ ನನ್ನನ್ನು ಎತ್ತಿಕೊಳ್ಳಬೇಕು ಎಂಬ ಪ್ರತಿಧ್ವನಿ ಮಾರ್ಧನಿಸುತ್ತದೆ. ಅಸಹಾಯಕರ ಪಾಲಿಗೆ ಸಹಾಯಕರಾಗಬೇಕೆಂಬ ಸ್ವಚ್ಛ ದನಿ ಇದೆ. ಕೆಳಗಿನ ಕೇರಿ ಮ್ಯಾಲಿನ ಕೇರಿಯ ಸಂಘರ್ಷದ ಕಥನದಲ್ಲಿ ಸಮಾನತೆಯ ಅಂಶಕ್ಕಾಗಿ ಹೋರಾಟದ ಹಾದಿ ನಿರ್ಮಾಣಗೊಂಡಿದೆ. ಬಸವಿ ಬಿಡುವುದು ಶ್ರಮಕ್ಕೆ ತಕ್ಕ ಪ್ರತಿಫಲ ನೀಡದೆ ಕಾಳು ಹಂಚುವುದು, ದುಡ್ಡು ಕೊಡದೆ ದರ್ಪ ತೋರಿಸುವುದು. ಮರ್ಯಾದೆ ಹತ್ಯೆ,ಸತ್ತವರ ಬಟ್ಟೆಗಳನ್ನು ಕೆಳಗಿನ ಕೇರಿಯವರು ಧರಿಸುವುದು,ನ್ಯಾಯ ಪಂಚಾಯತಿಯಲ್ಲಿ ಜಮೀನ್ದಾರರ ಕಟ್ಟಡಗಳೇ ಅಂತಿಮ ಆದೇಶವಾಗಿದ್ದು, ಇದನ್ನು ಮೀರಿ ನಡೆದರೆ ಸಾವು ಕಟ್ಟಿಟ್ಟ ಬುತ್ತಿಯಾಗಿತ್ತು. ಹೀಗೆ ಅಮಾನವೀಯ ಘಟನೆಗಳಿಂದ ಸಮುದಾಯ ಹೇಗೆ ಹೊರ ಬರಬೇಕೆಂಬ ಹೋರಾಟದ ಛಾಯೆ ಚಿತ್ರದಲ್ಲಿದೆ . ಖಳನಾಯಕನಾಗಿ ರಾಜ್ ಬಿ ಶೆಟ್ಟಿ ಅಬ್ಬರ ಜೋರಾಗಿದೆ. ಮಹಿಳಾ ಪೊಲೀಸ್ ಖಳನಾಯಕನನ್ನು ಬಂಧಿಸುವುದು ಸಿನಿಮಾದ ಹೈಲೈಟ್. ಗಂಡಸುತನದ ಪ್ರಶ್ನೆಗಾಗಿ ಮಹಿಳಾ ಮಹಿಳಾ ಪೊಲೀಸ್ ನ್ನು ಬಸವೀ ಬಿಡುವುದಕ್ಕೆ ಮುಂದಾದಾಗ ಸಮಾಜದ ಪ್ರತಿಭಟನೆ ಶೂನ್ಯವಾಗಿರುವುದು ಸಿನಿಮಾದ ಮೈನಸ್. ನಾಯಕನ ಹೆಂಡತಿ ನಿಂಗವ್ವ ಗಂಡ ರಾಚಯ್ಯನ ಕೋಪವನ್ನು ಕಟ್ಟಿ ಹಾಕಿ ತಕ್ಕ ಸಮಯದಲ್ಲಿ ಗೂಳಿಯಾಗಲು ಬಿಡುತ್ತಾಳೆ. ಇದು ಹೆಣ್ಣಿನ ಆಂತರಿಕ ಸಂಘರ್ಷವನ್ನು ಸೂಚಿಸುವುದು. ಓದಿ ವಿದ್ಯಾವಂತಳಾದ ರಾಚಯ್ಯನ ಮಗಳನ್ನು ಕಂಡ ಊರಿನ ಪಾಳೆಗಾರರು ಸಹಿಸುವುದಿಲ್ಲ. ಓದಿ ಜ್ಞಾನ ಪಡೆದು ಕಾನೂನು ತಿಳಿದುಕೊಂಡರೆ ನಾವು ಗುಲಾಮರಾಗುತ್ತೇವೆ ಎಂಬ ಪಂಕದಲ್ಲಿ ಪಾಳೇಗಾರರು. ತಾಯಿಗೆ ಕೊಟ್ಟ ಮಾತನ್ನು ರಾಚಯ್ಯ ಉಳಿಸಿಕೊಂಡನಾದರೂ ತನ್ನ ಸ್ವಂತ ಜಮೀನಿನಲ್ಲಿ ಬೆಳೆ ಬರುವಾಗ ಅದನ್ನು ಹಾನಿ ಮಾಡಿದರು. ಮೇಲ್ವರ್ಗದವರು ಕೆಳವರ್ಗದವರು ತಮ್ಮ ಸರಿ ಸಮಾನ ಬರಬಾರದೆಂಬ ಹುನ್ನಾರವಿದು. ತುಂಡು ಭೂಮಿಗಾಗಿ ಹೋರಾಟದ ಕಥೆಗಳನ್ನು ಕನ್ನಡ ಸಾಹಿತ್ಯ ಲೋಕ ಪ್ರಸ್ತುತಪಡಿಸಿದೆ. ಚೋಮ,ಕುರುಮಯ್ಯ ರೊಂದಿಗೆ ಸಿನಿಮಾದ ರಾಚಯ್ಯನು ಭೂಮಿಗಾಗಿ ಹೋರಾಟ ಮಾಡಿದವರು ಆಗಿದ್ದಾರೆ. ಇಂಥ ಅನೇಕ ಜನರು ಇಂದಿಗೂ ಹಳ್ಳಿಗಳಲ್ಲಿ ವಾಸವಾಗಿದ್ದಾರೆ. ಪಟ್ಟಣಗಳಲ್ಲಿ ಅವಿತುಕೊಂಡಿದ್ದಾರೆ. ಜಾತೀಯ ಕಾರಣಕ್ಕಾಗಿ ಅವರು ಮುಂದೆ ಬರುವುದಕ್ಕೆ ಆಗಿಲ್ಲ. ಬಂದರು ಸಮುದಾಯ ಒಪ್ಪುವುದಿಲ್ಲ. ಕರ್ನಾಟಕದಲ್ಲಿ ದಲಿತ ಮುಖ್ಯಮಂತ್ರಿಯ ಕೂಗು ಇಂದಿಗೂ ಹೋರಾಟದ ಭಾಗವೇ ಆಗಿದೆ. ಶ್ರೀಮಂತಿಕೆ ಕೆಲವರ ಹತೋಟಿಯಲ್ಲಿದೆ ಅವರೇ ಸರ್ಕಾರವು ನಿಯಂತ್ರಿಸಿದ್ದಾರೆ ಎಂಬ ಸೂಚನೆ ಸಿನಿಮಾದಲ್ಲಿದೆ. ಜಡೇಶ್ ಹಂಪಿ ನಿರ್ದೇಶನದ ಚಿತ್ರ ಹಲವು ಆಯಾಮಗಳನ್ನು ಕನ್ನಡ ಚಿತ್ರರಂಗಕ್ಕೆ ಒದಗಿಸುತ್ತಿದೆ. ಆದರೂ ಸಿನಿಮಾ ಕೆಲವು ಸಿದ್ದ ಹಸ್ತಗಳಿಂದ ಹೊರಬಂದಿಲ್ಲ. ಸಿನಿಮಾದಲ್ಲಿ ಹಿಂಸೆ ಅತಿರೇಕಕ್ಕೆ ಹೋಗಿದೆ. ಆದರೆ ಕಥಾನಾಯಕ ಕೊನೆಯಲ್ಲಿ ಅಹಿಂಸೆಯನ್ನೇ ಪ್ರಧಾನವಾಗಿ ಒಪ್ಪಿದರೂ ಈ ಸಂದರ್ಭದಲ್ಲಿ ಕಥೆ ತನ್ನ ಹಿಮ್ಮುಖ ಚಲನೆ ಆರಂಭಿಸಿದಂತೆ ಭಾಸವಾಗುತ್ತದೆ. ಅನಕ್ಷರಸ್ತರಿಂದ ಸಂವಿಧಾನದ ಪಾಠ ಮಾಡಿದ ನಿರ್ದೇಶಕರ ಜಾಣ್ಮೆ ಮೆಚ್ಚಲೇಬೇಕು. ನಮ್ಮವರಿಂದಲೇ ನಮಗೆ ದೋಷವಾಗುತ್ತದೆ ಎಂಬುದು ವಿಧಿ ಲಿಖಿತವೆಂಬಂತೆ, ಹೋರಾಟಕ್ಕೆ ದನಿಗೂಡಿಸಿದರೆ ಹೋರಾಟದ ರಾಚಯ್ಯನ ಕೊಲೆಗೆ ಪ್ರಯತ್ನಿಸಲಾಗುತ್ತದೆ. ಅಕ್ಷರ ಕಲಿತವರಿಂದಲೇ ಸಂವಿಧಾನದ ಆಶಯಗಳು ಕರಗುತ್ತಿವೆ ಎಂಬ ಪ್ರಬಲ ಧ್ವನಿ ಸಿನಿಮಾದ್ದು. ತಾಂತ್ರಿಕವಾಗಿ ಕಥೆ ಮೈಮರೆತರೂ ಪ್ರತಿಭಟನೆಯ ಸಂಕೇತವಾಗಿ ರಾಚಯ್ಯ, ನಿಂಗವ್ವ ನಂತಹ ಅನೇಕ ಜನರು ಹೋರಾಟದ ಹಾದಿಯಲ್ಲಿ ಜೀವನ ಸಾಗಿಸುತ್ತಿರುವುದು ನಮ್ಮ ನಾಡಿನ ದುರಂತ. 1947 ರಲ್ಲಿ ಸ್ವಾತಂತ್ರ,1950 ರಲ್ಲಿ ಸಂವಿಧಾನ ಜಾರಿಯಾದರು ಕನಿಷ್ಠ ಮೂಲಭೂತ ಸೌಕರ್ಯಗಳನ್ನು ಪಡೆಯುವಲ್ಲಿ ನಾವು ಹಿಂದೆ ಬಿದ್ದಿದ್ದೇವೆ ಸರ್ಕಾರಿ ಸೌಲಭ್ಯಗಳನ್ನು ಉಪಯೋಗಿಸುವುದರಲ್ಲಿ ಪ್ರಾತ್ಸರ ಮನೋಭಾವವನ್ನು ತೋರುತ್ತಿದ್ದೇವೆ ಇದಕ್ಕೆ ಕಾರಣ ಅಧಿಕಾರಿಗಳು, ರಾಜಕಾರಣಿಗಳು, ಬಂಡವಾಳ ಶಾಹಿಗಳು ಎಂದು ಸಿನಿಮಾ ಹೇಳುತ್ತಿದೆ. ಅಂದಿನ ಜಮೀನ್ದಾರರೇ ಇಂದಿನ ಬಂಡವಾಳಶಾಹಿಗಳಾಗಿ ಮಾರ್ಪಾಡಾಗಿದ್ದಾರೆಂಬ ಸೂಚನೆ ಸಿನಿಮಾ ಹೇಳುತ್ತಿದೆ. ಚುನಾಯಿತ ಪ್ರತಿನಿಧಿಗಳ ಮಕ್ಕಳೆ ಮತ್ತು ಚುನಾಯಿತ ಪ್ರತಿನಿಧಿಗಳಾಗಿ ಆಯ್ಕೆಯಾಗುವುದು ರಾಜಪ್ರಭುತ್ವವಾಗುತ್ತದೆ ಹೊರತು ಪ್ರಜಾಪ್ರಭುತ್ವವಾಗುವುದಿಲ್ಲೆoಬ ಸಂದೇಶ ಮತದಾರರಿಗೆ ನೀಡಿದೆ. ಯಾವ ವ್ಯಕ್ತಿಯನ್ನು ಆಯ್ಕೆ ಮಾಡಬೇಕೆಂಬುದು ಮತದಾರರು ಇನ್ನು ಪಕ್ವಗೊಂಡಿಲ್ಲ ಎಂಬುದೇ ಈ ಮಾತಿನ ಸೂಚನೆ. ತಳ ಸಮುದಾಯದ ವ್ಯಕ್ತಿ ಜನಪ್ರತಿನಿಧಿಯಾದಾಗ ಆತನಲ್ಲಿ ಬೆವರು ವಾಸನೆ ಹೋಗಿ ಸುಗಂಧದ ವಾಸನೆ ಬರುವಂತ ದ್ರವ್ಯ ಬಳಸುತ್ತಿರುವಾಗ ಜನರ ಕಷ್ಟ ಸಂಕಟ ನೋವುಗಳು ಆತನಿಗೆ ಹೇಗೆ ಅರ್ಥವಾಗುತ್ತದೆ ಎಂಬುದನ್ನು ತೋರಿಸಿದ್ದಾರೆ. ಶಾಸಕನ ಮಗ ಶಾಸಕನೇ ಆಗಬೇಕೆಂಬ ಪ್ರಾಬಲ್ಯ ಕೊನೆಗೊಂಡು ಜನಸಾಮಾನ್ಯನಿಗೆ ವಿಶೇಷ ಅಧಿಕಾರವನ್ನು ನೀಡಬೇಕೆಂಬದು ಚಿತ್ರದ ಕ್ಲೈಮಾಕ್ಸ್. ಶಾಸಕ,ಕಾರ್ಯಾಂಗ, ನ್ಯಾಯಾಂಗಗಳಿಗೆ ಬೀಗ ಹಾಕಲಾಗಿದೆ. ಏಕೆಂದರೆ 'ತುಳಿತಾ ಇರೋರು ನಾವೇ, ತುಳಿಸಿಕೊಳ್ಳುತ್ತಾ ಇರುವವರು ನಾವೇ ' ಹಾಗಾಗಿ ಈ ದ್ವಂದ್ವದಿಂದ ಹೊರ ಬಂದಾಗ ಸಮಾನತೆಯ ಕನಸು ನನಸಾಗಲು ಸಾಧ್ಯ. ಮಳೆ ಬಂದರೆ ನಮ್ಮ ಭೂಮಿ ಹೇಗೆ ಹಸಿರಾಗುತ್ತದೋ ಹಾಗೆ ಸಂವಿಧಾನ ಬಂದರೆ ನಮ್ಮ ಬದುಕು ಹಸನಾಗುತ್ತದೆ ಎಂಬ ನಾಯಕನ ಮಾತು ಮನಮುಟ್ಟುವಂಥದ್ದು. ಸಮಾನತೆಯನ್ನು ಸಂವಿಧಾನ ಹಳ್ಳಿ ಹಳ್ಳಿಗೂ ಬರಬೇಕೆಂಬ ಕಾಳಜಿ ಪ್ರತಿಯೊಬ್ಬ ಅಕ್ಷರಸ್ಥನಲ್ಲಿ ಬಂದಾಗ ಅಸ್ಪೃಶ್ಯತೆ,ಅಸಮಾನತೆ, ಅಂಧಕಾರದ ಮೌಡ್ಯ ಶಕ್ತಿಗಳೆಲ್ಲವೂ ಬೇರುಸಹಿತ ನಾಶವಾಗುತ್ತದೆಂಬ ನಿಟ್ಟಿನಲ್ಲಿ ಸಿನಿಮಾ ಮಾತಾಡುತ್ತದೆ.ಸಾರಥಿ ಫಿಲಂಸ್ ಸಧಬಿ ರುಚಿಯ ಚಿತ್ರಗಳನ್ನು ನೀಡುತ್ತಿರಲಿ. ಅಜನೀಶ್ ಸಂಗೀತ ಗೀತ ಚಿತ್ರಕ್ಕೆ ಮತ್ತೊಂದು ಮೆರಗು ತಂದು ಕೊಟ್ಟಿದೆ. ಇನ್ನೊಂದು ಹಾಡು ಸಮಾನತೆಯ ಕುರಿತಾಗಿ ರಚಿಸಬೇಕಿತ್ತು ಎಂದು ಚಿತ್ರ ಬಯಸುತ್ತದೆ. ಆದರೆ ಈ ಸಿನಿಮಾವನ್ನು ನೋಡಬೇಕಾಗಿರುವವರು ಯಾರು ಎಂಬುದು ಮುಖ್ಯವಾದ ಪ್ರಶ್ನೆ. ಸಮಾನತೆಯ ಕನಸು ಕಾಣುವವರು ಮಾತ್ರ ಸಿನಿಮಾ ನೋಡಿ ಹೌದೆನ್ನಬಹುದು. ಅಸಮಾನತೆಯನ್ನೇ ಜೀವಂತವಾಗಿ ಇಟ್ಟು ಕೊಂಡಿರುವ ಮನಸ್ಸುಗಳು ಈ ಸಿನಿಮಾವನ್ನು ನೋಡಲು ಸಾಧ್ಯವೇ? ಸಿನಿಮಾಕ್ಕೆ ಯಶಸ್ಸು ಸಿಗಬಹುದು. ಆದರೆ ಜೀವನದ ಅಸಮಾನತೆ ಹಂಗನ್ನು ತೊರೆಯಲು ಮನಸ್ಸುಗಳು ಸಿದ್ಧವಾದರೆ ಮಾತ್ರ ಸಿನಿಮಾಕ್ಕೆ ನಿಜವಾದ ಯಶಸ್ಸು ಲಭಿಸುವುದು. ಸಮಾನತೆಯ ಹೆಸರಿನ ಸಂವಿಧಾನ ಉಸಿರಾಡಲು ಸಾಧ್ಯವಾಗುವುದು. ಒಟ್ಟಿನಲ್ಲಿ ಲ್ಯಾಂಡ್ ಲಾರ್ಡ್ ಸಿನಿಮಾವು ಕೇವಲ ಭೂಮಿಗಾಗಿ ಮಾತ್ರವಲ್ಲದೆ ಸಮಾಜದಲ್ಲಿ ಸ್ಥಾಪಿತ ಸಂಪ್ರದಾಯಗಳನ್ನು ಮುರಿದು ಹಾಕಿ ವೈಚಾರಿಕ ಪ್ರಜ್ಞೆಯ ನೆಲೆಗಟ್ಟಿನಲ್ಲಿ ಬದುಕಬೇಕೆಂಬ ಆಶಯ ಸಿನಿಮಾದಲ್ಲಿದೆ. - ಡಾ. ರಾಜೇಂದ್ರಕುಮಾರ್ ಕೆ ಮುದ್ನಾಳ್, ಸಂಶೋಧಕರು, ಯಾದಗಿರಿ #Constitution #Essay #DreamofEquality #LandLord #malgudiexpress #malgudinews #news #TopNews
📜ಪ್ರಚಲಿತ ವಿದ್ಯಮಾನ📜 - సమోనతియి శెనేసిన సించిధాన శేథినః ల్యాండా ಲಾರ್ಡ್ ಸುದ್ರಿ & ಉಂಯಲ್ಲಿ್ 'Saqa Please subscribe to Malgudi Express YouTube and Website EXPRESS సమోనతియి శెనేసిన సించిధాన శేథినః ల్యాండా ಲಾರ್ಡ್ ಸುದ್ರಿ & ಉಂಯಲ್ಲಿ್ 'Saqa Please subscribe to Malgudi Express YouTube and Website EXPRESS - ShareChat