ShareChat
click to see wallet page
search
"ಕೆರೆಯ ನೀರು, ಮರದ ಪುಷ್ಪ ಧರಿಸಿದಡೇನು ಆಗುವುದೇ ಲಿಂಗಾರ್ಚನೆ, ನೀರ ಎರೆಯಲಿಕ್ಕೆ ಆತನೇನು ಬಿಸಿಲಿನಿಂದ ಬಳಲಿದನೇ? ಪುಷ್ಪವ ಧರಿಸಲಿಕ್ಕೆ ಆತನೇನು ವಿಟರಾಜನೇ? ನಿನ್ನ ಮನವೆಂಬ ನೀರಿನಿಂದ, ಜ್ಞಾನವೆಂಬ ಪುಷ್ಪದಿಂದ, ಪೂಜಿಸಬಲ್ಲಡೆ ಭಕ್ತನೆಂಬೆ, ಮಹೇಶ್ವರನೆಂಬೆ ನೋಡಾ ಕಪಿಲ ಸಿದ್ದ ಮಲ್ಲಿಕಾರ್ಜುನ..! ✍️ಶಿವಯೋಗಿ ಸಿದ್ದರಾಮೇಶ್ವರರ ವಚನ.. ವಚನದ ಭಾವಾರ್ಥ: ಸರಳ ಆಚರಣೆಯ ಪೂಜೆಯನ್ನು ಸಿದ್ದರಾಮೇಶ್ವರರು ಪ್ರತಿಪಾದಿಸಿದ್ದಾರೆ. ಅಭಿಷೇಕ ಮಾಡಿ ಪೂಜೆ ಮಾಡುತ್ತೇನೆ ಎನ್ನಲು ದೇವರೇನು ಬಿಸಿಲಿನ ತಾಪಕ್ಕೆ ಒಳಗಾದವನೆ??? ಪುಷ್ಪದಿಂದ ಅಲಂಕರಿಸಲು ದೇವನೇನು ಶೋಕಿ ಮಾಡುವ ರಸಿಕನಾ??? ಶುದ್ಧ ಮನಸ್ಸು ಮತ್ತು ಜ್ಞಾನದಿಂದ ಆಂತರಿಕವಾಗಿ ಆರಾಧಿಸುವುದೇ ಪೂಜೆ..! #ಬಸವಾದಿ ಶರಣ ಶರಣೆಯರು #//🌳ವಚನ ಸಾಹಿತ್ಯ 🌳// #ವಚನಗಳು #ಶರಣ ಸಾಹಿತ್ಯ #ಬಸವಣ್ಣನವರ ವಚನಗಳು
ಬಸವಾದಿ ಶರಣ ಶರಣೆಯರು - ಒಂಶೀಗುರುಬಸವಲಿಂಗಾಯನವಃ ಒಂಶೀಗುರುಬಸವಲಿಂಗಾಯನವಃ - ShareChat