ShareChat
click to see wallet page
search
#🙏 ಓಂ ನಮಃ ಶಿವಾಯ #ದಿನಕ್ಕೊಂದು ಕಥೆ ಹರತಾಲಿಕಾ ಗೌರಿ ವ್ರತ ಕಥೆ :- ಒಮ್ಮೆ ಪಾರ್ವತಿ ದೇವಿ, ಪತಿ ಪರಮೇಶ್ವರನಲ್ಲಿ, ಸ್ವಾಮಿ ವ್ರತಗಳಲ್ಲಿ ಸರ್ವ ಶ್ರೇಷ್ಠ ಮತ್ತು ಕಡಿಮೆ ಶ್ರಮದಲ್ಲಿ ಅಧಿಕ ಪುಣ್ಯ ಸಿಗುವಂತ ವ್ರತ ಯಾವುದು? ಸೃಷ್ಟಿ, ಸ್ಥಿತಿ, ಲಯ,ಗಳು ಜಗತ್ಪರಿಪಾಲಕರಾದ ನಿಮ್ಮನ್ನು ಪತಿಯಾಗಿ ಪಡೆ ಯಲು ಪೂರ್ವದಲ್ಲಿ ನಾನು ಯಾವ ವ್ರಥ ,ದಾನ, ತಪಸ್ಸು, ಮಾಡಿ ಪಡೆದು ಕೊಂಡೆ ಎಂಬುದನ್ನು ತಿಳಿಸಿ ಎಂದು ಕೇಳಲು,ಪರಮೇಶ್ವರ ಹೇಳುತ್ತಾ,‌ ದೇವಿ ನಾನು ಹೇಳ ಹೊರಟಿರುವ ಕಥೆ ಬಹಳ ಗೌಪ್ಯವಾಗಿಯೂ, ಶ್ರೇಷ್ಠ ತರವಾದ ಕಥೆಯಾಗಿದೆ. ನಕ್ಷತ್ರಗಳಲ್ಲಿ ಚಂದ್ರನು, ಗ್ರಹಗಳಲ್ಲಿ ಸೂರ್ಯ, ಚಾತುರ್ವಣ್ಯ ಗಳಲ್ಲಿ ಬ್ರಾಹ್ಮಣನು, ದೇವತೆಗಳಲ್ಲಿ ವಿಷ್ಣುವು, ನದಿಗಳಲ್ಲಿ ಗಂಗೆ, ಪುರಾಣ ಗಳಲ್ಲಿ ಭಾರತವು, ವೇದಗಳಲ್ಲಿ ಸಾಮವೇದವು, ಇಂದ್ರಿಯಗಳಲ್ಲಿ ಮನಸ್ಸು ಶ್ರೇಷ್ಠವಾಗಿರುವಂತೆ, ಉತ್ತಮೊತ್ತಮವಾದ ನಿನ್ನ ಪೂರ್ವ ಜನ್ಮದ ಪುರಾಣ ಕತೆಯನ್ನ ಕಣ್ಣೆದುರೇ ನಡೆಯುತ್ತಿರುವಂತೆ ಕಥೆಯ ವೃತ್ತಾಂತ ನಿನಗೆ ಹೇಳು ವೆನು ಶ್ರದ್ಧೆಯಿಂದ ಕೇಳು ಎಂದು ಶಿವ ಕಥೆ ಹೇಳಿದನು. ಪರ್ವತರಾಜನ ಪುತ್ರಿಯಾಗಿದ್ದ ನೀನು, ತಪಸ್ಸು ಮಾಡುವ ಸಲುವಾಗಿ ಬಾಲ್ಯಾವಸ್ಥೆಯಲ್ಲಿಯೇ ಹಿಮಾಲಯ ಪರ್ವತಕ್ಕೆ ಹೋಗಿ ಗಿರಿ ಶಿಖರಗಳ ಮಧ್ಯೆ, ಮೈ ಕೊರೆವ ಚಳಿಯಲ್ಲಿ, ಅಧೋಮುಖಳಾಗಿ ನಿಂತು ಧೂಮ್ರ ಪಾನ ಮಾಡುತ್ತಾ 12 ವರ್ಷಗಳವರೆಗೆ ಘೋರವಾದ ತಪಸ್ಸನ್ನು ಆಚರಿಸಿದೆ. ಆನಂತರ ಕೇವಲ ತರಗೆಲೆಗಳನ್ನೇ ತಿಂದು 64 ವರ್ಷ ಕಾಲ ಕಷ್ಟಕರವಾದ ಅನುಷ್ಠಾನ ಮಾಡಿದೆ ಕೇವಲ ಒಣ ಎಲೆಗಳನ್ನೇ ಸೇವಿಸಿ ತಪಸ್ಸು ಮಾಡಿದ ಕಾರಣ ನಿನಗೆ 'ಅಪರ್ಣ' ಎಂಬ ಹೆಸರು ಬಂದಿತು (ಪರ್ಣ ಎಂದರೆ ಎಲೆ). ನಿನ್ನ ಈ ಕಷ್ಟವನ್ನು ಕಂಡ ನಿನ್ನ ತಂದೆ ಪರ್ವತರಾಜ, ಬಹಳ ದುಃಖಿತನಾದ ನು. ಇಂಥ ನನ್ನ ಪುತ್ರಿಯನ್ನು ಯಾರಿಗೆ ಮದುವೆ ಮಾಡಿಕೊಡಲಿ ಇವಳನ್ನು ಮದುವೆಯಾಗುವನು ಎಲ್ಲಿ ದ್ದಾನೆ ಎಂದು ಕೊರಗುತ್ತಿದ್ದನು. ಅದೇ ಸಮಯದಲ್ಲಿ ಶ್ರೀಮನ್ನಾರಾಯಣನಿಗೆ ವಿಷಯ ತಿಳಿದು ಸೌಂದರ್ಯ ಪುತ್ಥಳಿಯಾದ ನಿನ್ನನ್ನು (ಪಾರ್ವತಿಯನ್ನು)ಮದುವೆಯಾಗಲು ನಿರ್ಧರಿ ಸಿದನು. ಆತನು ನಾರದರ ಮುಖಾಂತರ ಪರ್ವತರಾಜನಲ್ಲಿ ವಿಷಯವನ್ನು ತಿಳಿಸಿ ಪಾರ್ವತಿ ಜೊತೆ ಮಾತಾಡಿ ಬರಲು ಕಳಿಸಿದನು. ಆ ಸಮಯಕ್ಕೆ ದೇವ ಲೋಕದಿಂದ ಗಗನ ಮಾರ್ಗದಲ್ಲಿ ನಾರದರು ಬಂದರು. ನಾರದರನ್ನು ಕಂಡು ಅತ್ಯಂತ ಹರ್ಷಿತನಾದ ಪರ್ವತರಾಜನು, ಅರ್ಘ್ಯ ಪಾದ್ಯಾಧಿಗಳಿಂದ ಅವರನ್ನು ಸತ್ಕರಿಸಿ ಕುಶ ಲೋಪರಿ ವಿಚಾರಿಸಿ ಬಂದ ಕಾರಣವೇನು ಎಂದು ಕೇಳಲು, ಪರ್ವತ ರಾಜ ನಿನ್ನ ಪುಣ್ಯಕ್ಕೆ ಎಣೆಯುಂಟೇ ಮಹಾವಿಷ್ಣು ನಿನ್ನ ಮಗಳು ಪಾರ್ವತಿಯನ್ನು ವಿವಾಹವಾಗಲು ನಿನ್ನ ಅಭಿಪ್ರಾಯವನ್ನು ಕೇಳಿ ಕೊಂಡು ಬರಲು ಇಲ್ಲಿಗೆ ಕಳಿಸಿದ್ದಾನೆ. ಇದನ್ನು ಕೇಳುತ್ತಿದ್ದಂತೆ ಪರ್ವತರಾಜನ ಎಲ್ಲಾ ಚಿಂತೆಗಳು ಹೇಳ ಹೆಸರಿಲ್ಲದಂತೆ ಮಾಯವಾಯಿತು. ತ್ರಿಮೂರ್ತಿಗಳ ಲ್ಲಿ ಒಬ್ಬನಾದ ಶ್ರೀ ಹರಿ ನನ್ನ ಮಗಳು ಪಾರ್ವತಿಯನ್ನು ಮದುವೆಯಾಗು ತ್ತಾನೆ ಎಂದರೆ ಅದಕ್ಕಿಂತ ಸೌಭಾಗ್ಯ ಬೇರೆ ಏನಿದೆ? ನನ್ನ ಮುದ್ದಿನ ಮಗಳ ನ್ನು ಮಹಾವಿಷ್ಣುವಿಗೆ ಕೊಟ್ಟು ಸಂತೋಷದಿಂದ ವಿವಾಹ ಮಾಡಿ ಕೊಡುತ್ತೇ ನೆ ಈ ಸುದ್ದಿಯನ್ನು ತಿಳಿಸು ಎಂದು ನಾರದರಿಗೆ ಹೇಳಿದನು. ಇಂಥ ಶುಭ ಸಮಾಚಾರವನ್ನು ತಿಳಿಸಲು, ಶಂಖ, ಚಕ್ರ ಪಿತಾಂಬರಧಾರಿಯಾಗಿ ಸುಶೋ ಭಿತನಾದ ನಾರಾಯಣನನ್ನು ಕಾಣಲು ವೇಗವಾಗಿ ವಿಷ್ಣು ಸದನಕ್ಕೆ ಬಂದು, ಪರ್ವತರಾಜನು ತನ್ನ ಮಗಳು ಪಾರ್ವತಿಯನ್ನು ನಿನಗೆ ವಿವಾಹ ಮಾಡಿಕೊ ಡಲು ಒಪ್ಪಿದ್ದಾನೆ. ನೀನು ವಿವಾಹಕ್ಕೆ ಸಿದ್ಧನಾಗು ಎಂದು ತಿಳಿಸಿದನು. ಪರ್ವತರಾಜ ತನ್ನ ಪುತ್ರಿ ಪಾರ್ವತಿಗೆ, ಮಗಳೇ ನಿನ್ನ ಅದೃಷ್ಟಕ್ಕೆ ಎಣೆಯಿಲ್ಲ ವೈಕುಂಠವಾಸಿಯಾದ, ಸಕಲ ಸೌಭಾಗ್ಯ ಶ್ರೀದೇವಿಗೆ ಆಶ್ರಯವನ್ನಿತ್ತ ಶೇಷ ಷಾಹಿ ಶ್ರೀಮನ್ನಾರಾಯಣನಿಗೆ ನಿನ್ನನ್ನು ಕೊಟ್ಟು ವಿವಾಹ ಮಾಡಿಕೊಡುತ್ತೇನೆ ಎನ್ನಲು, ಇದನ್ನು ಕೇಳಿದ, ಪಾರ್ವತಿ ಮನಸ್ಸಿಗೆ ಇದು ಒಪ್ಪಿಗೆಯಾಗದ ಕಾರಣ, ಏನೂ ಹೇಳದೆ, ಕ್ರೂರ ಮೃಗಗಳು ಹಾಗೂ ದಟ್ಟಾರಣ್ಯದಿಂದ ತುಂಬಿರುವ ಪರ್ವತ ಪ್ರದೇಶಕ್ಕೆ ತನ್ನ ಸಖಿಯೋಡನೆ ಹೋಗಿ ನಿರ್ಜನವಾದ ಸ್ಥಳದಲ್ಲಿ ದುಃಖದಿಂದ ಮಲಗಿಕೊಂಡಳು. ಇದನ್ನು ಕಂಡ ಸಖಿ, ಪಾರ್ವತಿ ನಿನ್ನ ದುಃಖಕ್ಕೆ ಕಾರಣವೇನು ನನಗೆ ಹೇಳು ಸರಿ ಮಾಡುತ್ತೇನೆ ಎಂದಳು. ಆಗ ಪಾರ್ವತಿ,‌ ನೋಡು ಸಖಿ, ನಾನು ಮನಸಾರೆ ಒಪ್ಪಿದ ಮಹಾದೇವನ ನ್ನೇ ವಿವಾಹವಾಗುವ ಸಂಕಲ್ಪ ಮಾಡಿದ್ದೆ, ಇದು ನನ್ನ ಬಯಕೆಯೂ ಆಗಿತ್ತು. ಆದರೆ ನನ್ನ ತಂದೆ ನನಗೆ ತಿಳಿಸದೆ, ವಿವಾಹ ಮಾಡಲು ಹೊರಟಿದ್ದಾರೆ. ಇದರಿಂದ ಬೇಸರವಾಗಿ ನಾನು ದೇಹ ತ್ಯೆಜಿಸಲು ಹೊರಟಿದ್ದೇನೆ ಎಂದಳು. ನೀನು ಚಿಂತಿಸಬೇಡ, ನಿನ್ನ ತಂದೆಗೆ ಯಾವತ್ತೂ ತಿಳಿಯದಂಥ ಒಂದು ಗುಪ್ತಸ್ಥಳಕ್ಕೆ ಕರೆದುಕೊಂಡು ಹೋಗುವೆ ಅಲ್ಲಿ ಶಿವನನ್ನು ಧ್ಯಾನಿಸು ಎಂದ ಸಖಿ ಕೂಡಲೇ, ಒಂದು ಗುಪ್ತ ಗುಹೆಗೆ ಕರೆದುಕೊಂಡು ಹೋದಳು. ಆ ಸ್ಥಳ ಶಿವನ ಗುಹೆಯಾಗಿದ್ದು ಅಲ್ಲಿ ಯಾರು ಬರುವಂತಿರಲಿಲ್ಲ.ಈ ಕಥೆಯನ್ನು ಬರಹ ರೂಪಕ್ಕೆ ತಂದವರು — ಆಶಾ ನಾಗಭೂಷಣ. ಇತ್ತ ಗಿರಿರಾಜನು ಮಗಳು ಎಲ್ಲಿಯೂ ಕಾಣದೆ ಚಿಂತಿತನಾಗಿ, ನನ್ನ ಮುದ್ದು ಮಗಳನ್ನು ಯಾವ ಕ್ರೂರ ಮೃಗ ಎಳೆದೊಯ್ದಿತೋ, ವಿಷಸರ್ಪ ಕಚ್ಚಿತೋ, ಅಥವಾ ದೇವ, ಅಸುರ ಗಂಧರ್ವ, ಕಿಂಪುರುಷರು ಯಾರಾದರೂ ಹರಣ ಮಾಡಿದರೋ, ಈಗ ನಾನೇನು ಮಾಡಲಿ, ನಾರದರಿಗೆ ಮಾತು ಕೊಟ್ಟಿದ್ದೇನೆ, ಗರುಡ ಧ್ವಜನಾದ ಶ್ರೀಮನ್ನಾರಾಯಣನಿಗೆ ಏನು ಹೇಳಲಿ? ಚಿಂತೆಯಿಂದ ಲೇ ಮೂರ್ಛಿತನಾದನು. ಅರಮನೆಯವರು ಸಾಂತ್ವಾನಗೊಳಿಸಿದರು. ಪಾರ್ವತಿ ಗುಪ್ತವಾದ ಗುಹೆಯಲ್ಲಿ ಲಿಂಗವನ್ನು ಮಾಡಿಕೊಂಡು ಶಿವನನ್ನು ಆರಾಧಿಸುತ್ತಾ ಅವನ ಧ್ಯಾನದಲ್ಲೇ ಮುಳುಗಿದಳು. ಪರ್ವತ ರಾಜ ಮಗಳ ನ್ನು ಹುಡುಕಲು ಎಲ್ಲಾ ಕಡೆ ಅಲೆದಲೆದು ಹುಡುಕುತ್ತಾ ಬಂದವನಿಗೆ ಗುಹೆ ಯಲ್ಲಿ ಕುಳಿತು ತಪಸ್ಸು ಮಾಡುತ್ತಿದ್ದ ಪಾರ್ವತಿ ಕಂಡು ಸಂತೋಷ ಗೊಂಡ ನು. ಪಾರ್ವತಿ ತಂದೆಗೆ ನಮಸ್ಕರಿಸಿ, ಪಿತಾಶ್ರೀ ನಾನು ಪರಮೇಶ್ವರರನ್ನೇ ಮದುವೆ ಯಾಗುತ್ತೇನೆ ಅವರನ್ನೇ ನನ್ನ ಪತಿಯಾಗಿ ವರಿಸಿದ್ದೇನೆ, ಇಲ್ಲದಿದ್ದರೆ ನನಗೆ ವಿವಾಹ ಬೇಡ ಇಲ್ಲಿಯೇ ಇರುತ್ತೇನೆ ಎಂದಳು. ಇದನ್ನು ಕೇಳಿದ ಗಿರಿರಾಜ ಸಂತೋಷದಿಂದ ಒಪ್ಪಿದನು ಮತ್ತು ವಿವಾಹವನ್ನು ಪರಮೇಶ್ವರನ ಜೊತೆ ಮಾಡುವೆ ಎಂದು ಮಾತು ಕೊಟ್ಟು ವಿವಾಹ ತಯಾರಿ ನಡೆಸಲು ಉದ್ಯುಕ್ತ ನಾದನು. ನಂತರ ವಿಧಿ, ವಿಧಾನದಂತೆ ನಮ್ಮಿಬ್ಬರ ವಿವಾಹವನ್ನು ವಿಜೃಂಭಣೆ ಯಿಂದ ನೆರವೇರಿಸಿದರು. ನೀನು ಕಠಿಣ ತಪಸ್ಸು, ದೃಢ ಸಂಕಲ್ಪ, ಕಟ್ಟು ನಿಟ್ಟಿನ ವ್ರತ ನಿಯಮಗಳನ್ನು ಮಾಡಿ ನನ್ನನ್ನೇ ವಿವಾಹ ಮಾಡಿಕೊಂಡೆ. ಸೃಷ್ಟಿಕರ್ತ ಬ್ರಹ್ಮನ ಸಮ್ಮುಖದಲ್ಲಿ,‌ ಮಹಾ ವಿಷ್ಣುವಿನ ನೇತೃತ್ವದಲ್ಲಿ ಪಾರ್ವತಿ ಪರಮೇಶ್ವರರ ವಿವಾಹ ಸಂಭ್ರಮ ನಡೆಯಿತು. ವಿವಾಹ ನಡೆದದ್ದು 'ಶಿವರಾತ್ರಿ' ದಿನ ಎಂದು ಪುರಾಣ ಗಳಲ್ಲಿ ಉಲ್ಲೇಖಿಸಲಾಗಿದೆ. ಭೂಲೋಕ ಪಾರ್ವತಿ ದೇವಿಯ ತವರು ಮನೆ ಅವಳು, ಪತಿ ಪರಮೇಶ್ವರ ಅನುಮತಿ ಪಡೆದು ಪ್ರತಿ ವರ್ಷ ಭಾದ್ರಪದ ಮಾಸದ ತದಿಗೆ ದಿನ ತವರು ಮನೆಗೆ ಬಂದು ಶಿವನಾಜ್ಞೆಯಂತೆ ಮೂರು ದಿನ ಅಥವಾ ಐದು ದಿನ ಅಥವಾ ಏಳು ದಿನ ತವರಿನಲ್ಲಿ ಇದ್ದು ಮಗ ಗಣೇಶನೊಂದಿಗೆ ಗಂಡನ ಮನೆಗೆ ಹೋಗುತ್ತಾಳೆ. ತಾಯಿ ಭೂಮಿಗೆ ಬಂದ ದಿನ ಭಾದ್ರಪದ ತದಿಗೆ ದಿನ ಯಾರು 'ಶುದ್ಧ ಮಡಿಯಿಂದ ಸ್ವರ್ಣ ಗೌರಿ” ವ್ರತವನ್ನು ಮಾಡುವರೋ ಅಥವಾ ಉತ್ತರ ಕರ್ನಾಟಕ ಭಾಗದಂತೆ ಉಪವಾಸವಿದ್ದು 'ಹರತಾಲಿಕ ಗೌರಿ' ವ್ರತವನ್ನು ಮಾಡುತ್ತಾರೋ, ಅವರ ಮನದಿಷ್ಟಾರ್ಥಗಳು ನೆರವೇರುತ್ತದೆ. ಮದುವೆಯಾಗುವ ಯುವತಿಯರು ಈ ವ್ರಥವನ್ನು ನಿಷ್ಠೆಯಿಂದ ಮಾಡಿದರೆ ಬಯಸಿದಂಥ ಪತಿ ದೊರೆಯುತ್ತಾನೆ. ಈ ವ್ರತ ಮಾಡಿ ವ್ರತ ಕಥೆಯನ್ನು ಹೇಳಿ-ಕೇಳಿದವರಿಗೆ ಸಕಲ ಸುಖ ಸೌಭಾಗ್ಯ ಸಂಪತ್ತು ಗಳು ದೊರೆತು ದೀರ್ಘಕಾಲ ಸುಖದಿಂದ ಬಾಳುವರು. ಎಂಬುದಾಗಿ ಸಾಕ್ಷಾತ್ ಪರಮೇಶ್ವರನು ತನ್ನ ಪ್ರಿಯ ಪತ್ನಿ ಪಾರ್ವತಿಗೆ ಹೇಳಿ ದನು. ( ನಾವು ಭಾದ್ರಪದ ಮಾಸದ ತದಿಗೆ ದಿನ 'ಸ್ವರ್ಣ ಗೌರಿ' ವ್ರತವನ್ನು ಮಾಡುವಂತೆ, ಉತ್ತರ ಕರ್ನಾಟಕ ಹಾಗೂ ಉತ್ತರ ಭಾರತದ ಕೆಲವು ಕಡೆಗಳಲ್ಲಿ ಭಾದ್ರಪದ ತದಿಗೆ ದಿನ 'ಹರತಾಲಿಕ ಗೌರಿ' ವ್ರತವನ್ನು ಮಾಡುತ್ತಾರೆ.) ಮಂಗಳಂ ಎನ್ನಿರಿ ಮಹಾದೇವಿಗೆ, ಜಯ ಮಂಗಳಂ ಎನ್ನಿರಿ ಮಹಂಕಾಳಿಗೆ ಮಂಗಳಂ ಎನ್ನಿರಿ ಮಹದೇವಿಗೆ !! ಗಿರಿರಾಜನ ಉದರದಿ ಜನಿಸಿ ಗಿರಿಜೆ ಎಂದೆನಿಸಿದೆ| ಗಿರಿ ಮಧ್ಯದಲ್ಲಿ ನಿಂತು ತಪವಗೈದೆ ಗಿರಿಜ ಶಂಕರನೆಂಬೊ ಹೆಸರನ್ನುದ್ದರಿಸಿದೆ ಜನನಿ ಜನಕರ ಮನಕೆ ಸಂತೋಷ ಕೊಡುವ ಮಂಗಳಂ ಎನ್ನಿರಿ ಮಹಾದೇವಿಗೆ; ಮಹಿಷ ಸುರನ ಕೊಂದು ಮಹಿಷೆ ಎಂದೆನಿಸಿದೆ ಚೆಂಡಸುರನ ಕೊಂದು ಚಾಮುಂಡಿಯಾದೆ ನಂದಿ ವಾಹನವೇರಿ ಆದಿಶಕ್ತಿಯು ಆದೆ ವಂದನೆಗಳೊಂದಿಗೆ, ಬರಹ: ©ಆಶಾ ನಾಗಭೂಷಣ ▬▬ஜ۩۞۩ஜ▬▬▬*▬▬▬ஜ۩۞۩ஜ▬▬ !! ಸರ್ವಂ ಶ್ರೀ ಕೃಷ್ಣಾರ್ಪಣಮಸ್ತು !! 🙏 ಸರ್ವೇ ಜನಾಃ ಸುಖಿನೋ ಭವಂತುಸರ್ವೇ ಸಂತು ನಿರಾಮಯಾಃ 🙏 !! ಧರ್ಮೋ ರಕ್ಷತಿ ರಕ್ಷಿತಃ !! ▬▬▬ஜ۩۞۩ஜ▬▬▬▬▬▬ஜ۩۞۩ஜ▬▬▬ 🙏 ಹರಿ ಸರ್ವೋತ್ತಮ ವಾಯು ಜೀವೋತ್ತಮ 🙏
🙏 ಓಂ ನಮಃ ಶಿವಾಯ - ShareChat