ShareChat
click to see wallet page
search
#PSSM World " ಸುಖ " ಇನ್ಸ್ಟಾಲ್ಮೆಂಟ್ ನಲ್ಲಿ, " ದುಃಖ," ಮಾತ್ರ ರೈಲು ಬೋಗಿಯಂತೆ ಒಂದರ ಹಿಂದೊಂದು ಬಂದು ದಾಳಿ ಮಾಡೋದೇಕೆ? ಮನುಷ್ಯನ ಜೀವನದಲ್ಲಿ ಸುಖ ಕಡಿಮೆ %, ದುಃಖದ % ಜಾಸ್ತಿ.ಇದನ್ನು ಎಲ್ಲರು ಒಪ್ಪಿಕೊಳ್ಳಲೇಬೇಕು. ಹಳೆಯ ಹಿಂದಿ ಸಿನೆಮಾ 'ದೋಸ್ತಿ' ಚಲನ ಚಿತ್ರದ, ಶ್ರೇಷ್ಠ ಸಿನಿಮಾ ಕವಿ ಮಜರೂಹ್ ಸುಲ್ತಾನ್ಪುರಿ ಯವರ ಒಂದು ಹಾಡು ನೆನಪಾಗುತ್ತದೆ.ಮಜರೂಹರು ಹೀಗೆ ಹೇಳುತ್ತಾರೆ.'ರಾಹಿ ಮನವಾ ದುಖ್ ಕಿ ಚಿಂತಾ ಕ್ಯೊಂ ಸತಾತಿ ಹೈ ದುಖ್ ತೊ ಅಪ್ನಾ ಸಾಥಿ ಹೈ' ಮನುಷ್ಯನ ಜೀವನದಲ್ಲಿ ದುಃಖ ಯಾವಾಗಲೂ ಜೊತೆ ಯಾಗಿರುತ್ತದೆ ,ಸುಖ ಮಾತ್ರ ಆಗಾಗ ಬಿಸಿಲು,ನೆರಳಿನ ಹಾಗೆ ಬಂದು ಹೋಗುತ್ತದೆ. 'Human is bundle of wishes ' ಮನುಷ್ಯ ಯಾವಾಗಲು ಏನಾದರೊಂದು ಆಸೆಸುತ್ತಾನೆ, ಮನುಷ್ಯ ಆಸೆ ಬುರಕ,ಅವನ ಆಸೆಗೆ ಮಿತಿಯಿಲ್ಲ.'ಆಸೆ ದುಃಖಕ್ಕೆ ಕಾರಣ'ಮನುಷ್ಯ ಆಸೆಯಿಂದಲೆ ಜೀವಿಸುತ್ತಾನೆ,ಆಸೆ ಈಡೇರಿಸುವ ಕ್ರಮದಲ್ಲಿ ದುಃಖ ಅನುಭವಿಸುತ್ತಾನೆ.ಅವನ ಆಸೆಗಳು ಸೀರಿಯಲ್ ದ ಎಪಿಸೋಡ್ಗಳ ಹಾಗೆ ನಿರಂತರ ಬರ್ತಾ ಇರುತ್ತವೆ ಹಾಗೆಯೇ ಅವುಗಳನ್ನು ಈಡೇರಿಸುವ ಕ್ರಮದಲ್ಲಿ ನಿರಂತರ ದುಃಖಗಳನ್ನು ಅನುಭವಿಸುವುತ್ತಾನೆ.