ಕೇಂದ್ರ ಬಜೆಟ್ 2026- ಕೃಷಿಕರಿಗೆ ಏನು ಕೊಡುಗೆ? ಭಾರತ್ ವಿಸ್ತಾರ್ AI ಪರಿಕರದಿಂದ ರೈತರಿಗೇನು ಲಾಭ?
India Budget 2026-27- ಇದ ಕೃತಕ ಬುದ್ಧಿಮತ್ತೆಯದ್ದೇ ಕಾಲ. ಹೀಗಿರುವಾಗ ಕೃಷಿ ಕ್ಷೇತ್ರದಲ್ಲಿ ಎಐ ಇಲ್ಲದಿದ್ದರೆ ಹೇಗೆ? ರೈತರ ಆದಾಯ ಹೆಚ್ಚಿಸುವತ್ತ ಗಮನ ಹರಿಸಲಾಗುವುದು ಎಂದು ತಿಳಿಸಿರುವ ಕೇಂದ್ರ ವಿತ್ತ ಸಚವೆ ನಿರ್ಮಲಾ ಸೀತಾರಾಮನ್, ಕೃಷಿಕರ ಸಹಾಯ- ಸಲಹೆಗಾಗಿ 'ಭಾರತ್ ವಿಸ್ತಾರ್' ಎಂಬ ಬಹುಭಾಷಾ AI ಸಾಧನ ಪರಿಚಯಿಸುತ್ತಿರುವುದಾಗಿ ತಿಳಿಸಿದೆ. ಇನ್ನು ಕರಾವಳಿ ಮತ್ತು ಗುಡ್ಡಗಾಡು ಪ್ರದೇಶಗಳಲ್ಲಿ ತೆಂಗು, ಶ್ರೀಗಂಧ, ಗೋಡಂಬಿ, ವಾಲ್ನಟ್ ಬೆಳೆಗಳ ಅಭಿವೃದ್ಧಿಗೆ ಬೆಂಬಲ ನೀಡಲಾಗುವುದು ಎಂದು ತಿಳಿಸಲಾಗುವುದು.