Vijay Karnataka
ShareChat
click to see wallet page
@vijaykarnataka
vijaykarnataka
Vijay Karnataka
@vijaykarnataka
News Publisher
-
ಮುಂಜಾನೆ ನಾವು ಯಾವೆಲ್ಲಾ ಸಂಸ್ಕೃತ ನುಡಿಗಟ್ಟುಗಳನ್ನು ಅಥವಾ ವಾಕ್ಯಗಳನ್ನು ಪಠಿಸುವುದರಿಂದ, ಸ್ಮರಿಸುವುದರಿಂದ ಆತ್ಮವಿಶ್ವಾಸ ವೃದ್ಧಿಯಾಗುವುದು.? ಈ ಸಂಸ್ಕೃತ ನುಡಿಗಟ್ಟುಗಳನ್ನು ಪ್ರಯತ್ನಿಸಿ. #SanskritSentence #Sanskrit #🔱 ಭಕ್ತಿ ಲೋಕ
ಬ್ಯಾಟಿಂಗ್ ಮತ್ತು ಬೌಲಿಂಗ್ ಗಳೆರಡರಲ್ಲೂ ಸರ್ವಾಂಗೀಣ ಪ್ರದರ್ಶನ ನೀಡಿದ ಭಾರತ ತಾನೇಕೆ ಚುಟುಕು ಕ್ರಿಕಟ್ ನಲ್ಲಿ ನಂಬರ್ 1 ತಂಡ ಎಂಬುದನ್ನು ಮತ್ತೊಮ್ಮೆ ನಿರೂಪಿಸಿದೆ. #India Vs New Zealand Final
India Vs New Zealand Final - ShareChat
Ind Vs Nz Highlights- ಅಹ್ಮದಾಬಾದ್ ನಲ್ಲಿ ಕಿವೀಸ್ ಅನ್ನು `ಸೈಲೆಂಟ್' ಮಾಡಿದ ಭಾರತ: ಹಿಸ್ಟರಿ ರಿಪೀಟ್ ಆಯ್ತು, ಡಿಫೀಟೂ ಆಯ್ತು!
ICC T20 World Cup FInal Match- `ಹಿಸ್ಟರಿ ರಿಪೀಟ್ ಮಾಡ್ತೇವೆ, ಹಿಸ್ಟರಿ ಡಿಫೀಟ್ ಮಾಡ್ತೇವೆ'- ಇದೀಗ ಹೇಳಿದ್ದನ್ನು ಮಾಡಿ ತೋರಿಸಿದೆ ಟೀಂ ಇಂಡಿಯಾ! ಅಹ್ಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನ್ಯೂಜಿಲೆಂಡ್ ಅನ್ನು ಎಲ್ಲಾ ವಿಭಾಗಗಳಲ್ಲೂ ಸೈಲೆಂಟ್ ಮಾಡಿದ ಭಾರತ ತಂಡ ನಿರಂತರ 2ನೇ ಬಾರಿ ವಿಶ್ವಚಾಂಪಿಯನ್ ಆದ ಮೊದಲ ತಂಡವಾಗಿ ವಿಶ್ವದಾಖಲೆ ನಿರ್ಮಿಸಿದೆ. 2007ರಲ್ಲಿ ಮಹೇಂದ್ರ ಸಿಂಗ್ ಧೋನಿ, 2024ರಲ್ಲಿ ರೋಹಿತ್ ಶರ್ಮಾ ಬಳಗ ಮಾಡಿದ್ದ ಸಾಧನೆಯನ್ನು ಇದೀಗ ಸೂರ್ಯಕುಮಾರ್ ಯಾದವ್ ಬಳಗ ಪುನರಾವರ್ತಿಸಿದೆ. ಈ ಮೂಲಕ 3 ಬಾರಿ ಟಿ20 ವಿಶ್ವಕಪ್ ಗೆದ್ದ ಏಕೈಕ ತಂಡವೆಂಬ ಹೆಗ್ಗಳಿಕೆಗೂ ಈಗ ಪಾತ್ರವಾಗಿದೆ.
ಕಳಪೆ ಫಾರ್ಮ್ ಕಾರಣಕ್ಕಾಗಿ ಟೀಕೆಗೊಳಗಾಗಿದ್ದ ಟೀಂ ಇಂಡಿಯಾ ಆರಂಭಿಕ ಬ್ಯಾಟರ್ ಅಭಿಷೇಕ್ ಶರ್ಮಾ ಅವರು ಇದೀಗ ಫೈನಲ್ ಪಂದ್ಯದಲ್ಲಿ ಭರ್ಜರಿಯಾಗಿ ಬ್ಯಾಟ್ ಬೀಸಿದ್ದಾರೆ! #India Vs New Zealand Final
ಯುವರಾಜ್ ಸಿಂಗ್ ಅವರು ಲಖನೌ ಸೂಪರ್ ಜೈಂಟ್ಸ್ (LSG) ತಂಡದ ತರಬೇತುದಾರರಾಗಲಿದ್ದಾರೆ ಎಂಬ ವದಂತಿ ದಟ್ಟವಾಗಿ ಹಬ್ಬಿದೆ. ಇದು ಹೌದಾ? #IPL 2026
ವೆಸ್ಟ್ ಇಂಡೀಸ್ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ತವರಿಗೆ ಮರಳುವ ದಾರಿ ಯಾವುದಯ್ಯಾ ಎಂದು ತಲೆ ಮೇಲೆ ಕೈಹೊತ್ತು ಕುಳಿತಿರಬೇಕಾದರೆ, ಇಂಗ್ಲೆಂಡ್ ತಂಡ ಮಾತ್ರ ತನ್ನ ದೇಶಕ್ಕೆ ಮರಳಿರುವುದು ಇದೀಗ ಕ್ರಿಕೆಟ್ ವಲಯದಲ್ಲಿ ದೊಡ್ಡ ಸುದ್ದಿಯಾಗಿದೆ. #ICC t20 World Cup 2026
ICC t20 World Cup 2026 - ShareChat
ಇಂಗ್ಲೆಂಡ್ ತವರಿಗೆ ಮರಳಲು ವಿಶೇಷ ವಿಮಾನ ವ್ಯವಸ್ಥೆ ಮಾಡಿದ ಐಸಿಸಿ; ವಿಂಡೀಸ್- ದಕ್ಷಿಣ ಆಫ್ರಿಕಾ ಆಟಗಾರರಿಗೆ ಮಂಡೆಬಿಸಿ
ICC T20 World Cup 2026- ಸೂಪರ್ ಸಿಕ್ಸ್ ಹಂತದಲ್ಲೇ ವಿಶ್ವಕಪ್ ನಿಂದ ಹೊರಬಿದ್ದಿರುವ ವೆಸ್ಟ್ ಇಂಡೀಸ್ ಮತ್ತು ಮೊದಲ ಸೆಮಿಫೈನಲ್ ನಲ್ಲಿ ಸೋತಿರುವ ದಕ್ಷಿಣ ಆಫ್ರಿಕಾ ತಂಡಗಳು ಇದೀಗ ಮಧ್ಯಪ್ರಾಚ್ಯದಲ್ಲಿನ ಸಂಘರ್ಷದಿಂದಾಗಿ ತಮ್ಮ ತಮ್ಮ ತಾಯ್ನಾಡಿಗೆ ಮರಳಲು ಪ್ರಯಾಣದ ವ್ಯವಸ್ಥೆಯಿಲ್ಲದೆ ಭಾರತದಲ್ಲೇ ಬಾಕಿಯಾಗಿವೆ. ಆದೇ ಎರಡನೇ ಸೆಮಿಫೈನಲ್ ನಲ್ಲಿ ಭಾರತದ ವಿರುದ್ಧ ಸೋಲನುಭವಿಸಿದ ಇಂಗ್ಲೆಂಡ್ ಣಾತ್ರ ಶನಿವಾರವೇ ವಿಶೇಷ ವಿಮಾನದ ಮೂಲಕ ಲಂಡನ್ ಗೆ ತೆರಳಿದೆ. ಇದು ವಿಂಡೀಸ್ ಮತ್ತು ದಕ್ಷಿಣ ಆಫ್ರಿಕಾ ಆಟಗಾರರನ್ನು ಕೆರಳಿಸಿದೆ. ಐಸಿಸಿ ತಾರತಮ್ಯ ನೀತಿ ಅನುಸರಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.