"ಗಾಂಧಾರಿ ಮಾಂಧಾರಿಯೆಂಬ ಆಹೋ ರಾತ್ರಿಯಲ್ಲಿ ಲಿಂಗವ ಪೂಜಿಸಬೇಕು. ಊರ ಕೋಳಿ ಕೂಗವ ಮುನ್ನ, ಕಾಡ ನವಿಲು ಒದರದ ಮುನ್ನ, ಲಿಂಗವ ಪೂಜಿಸಬೇಕು. ಗೋವುಗಳ ಕೊಲುವ ಪಾಪಿಯ ದ್ವನಿ ಕೇಳದ ಮುನ್ನ, ತುಂಬಿ ಮುಟ್ಟಿ ಪುಷ್ಪ ನಿಮ೯ಲ್ಯವಾಗದ ಮುನ್ನ, ಲಿಂಗವ ಪೂಜಿಸಬೇಕು. ಶುದ್ಧಾಂತ: ಕರಣವಾಗಿ ಶಿವಪೂಜೆಯ ಮಾಡಬೇಕು. ತನ್ನೊಡನೆ ಮಲಗಿದ೯ ಸತಿಯನೆಬ್ಬಿಸದೆ ಶಿವಲಿಂಗಕ್ಕೆರೆದ ಸದ್ಬಕ್ತನ ಶ್ರೀಪಾದವ ತೋರಿ ಬದುಕಿಸಯ್ಯಾ ಕೂಡಲಸಂಗಮದೇವಾ.. ✍️ ವಿಶ್ವಗುರು ಬಸವಣ್ಣನವರ ವಚನ.. ಶರಣು ಶರಣಾರ್ಥಿಗಳು 🙏 #ಶರಣ ಸಾಹಿತ್ಯ #//🌳ವಚನ ಸಾಹಿತ್ಯ 🌳// #ವಚನಗಳು #ಬಸವಣ್ಣನವರ ವಚನಗಳು #ಬಸವಾದಿ ಶರಣ ಶರಣೆಯರು


