ShareChat
click to see wallet page
search
#🕉️ ಜೈ ಶ್ರೀ ರಾಮ🙏 #🙏🎵ಶ್ಲೋಕಗಳು!! ಶ್ರೀರಾಮ ಭುಜಂಗ ಪ್ರಯಾತ ಸ್ತೋತ್ರ ಶ್ಲೋಕ - 1 - ಸಂಸ್ಕೃತದಲ್ಲಿ : ವಿಶುದ್ಧಂ ಪರಂ ಸಚ್ಚಿದಾನಂದರೂಪಂ ಗುಣಾಧಾರಮಾಧಾರಹೀನಂ ವರೇಣ್ಯಮ್ ಮಹಾಂತಂ ವಿಭಾಂತಂ ಗುಹಾಂತಂ ಗುಣಾಂತಂ ಸುಖಾಂತಂ ಸ್ವಯಂ ಧಾಮ ರಾಮಂ ಪ್ರಪದ್ಯೇ ಕನ್ನಡದಲ್ಲಿ : ಪರಿಶುದ್ಧನುತ್ತಮ ಸಚ್ಚಿದಾನಂದ ರೂಪ ಗುಣಾಧಾರ ನಿರಾಧಾರ ಸರ್ವಶ್ರೇಷ್ಟ ಮಹಾಪುರುಷ ಜ್ಯೋತಿಸ್ವರೂಪೀ ಗುಣಾಢ್ಯ ಸುಖಸೀಮ ತಾ ಧಾಮ ರಾಮಂಗೆ ಶರಣು ವಿವರಣೆ : ಯಾರಿಗೆ ಯಾವುದೇ ಆಧಾರವಿಲ್ಲವೋ, ಹೃದಯದಲ್ಲಿ ಪರಿಶುದ್ಧನೋ, ಯಾರು ಶಾಶ್ವತ ಸತ್ಯನೋ, ಯಾರು ಅಂತಿಮ ಸಂತೋಷದ ಮೂರ್ತೀಕೃತನೋ, ಗುಣಗಳನ್ನು ಮೀರಿದವನೋ, ಮಹಾಮಹಿಮನೋ, ಅವಿಭಾಜ್ಯನೋ, ಗುಣಗಳಲ್ಲಿ ಅಂತಿಮನೋ, ಯಾರು ಅಂತಿಮ ಸಂತೋಷಿಯೋ, ಆ ಶ್ರೀ ರಾಮಚಂದ್ರನಿಗೆ ನನ್ನ ಭಕ್ತಿಪೂರ್ವಕ ನಮನಗಳು. ಶ್ಲೋಕ - 2 - ಸಂಸ್ಕೃತದಲ್ಲಿ : ಯದಾವರ್ಣಯತ್ಕರ್ಣಮೂಲೇsಂತಕಾಲೇ ಶಿವೋ ರಾಮ ರಾಮೇತಿ ರಾಮೇತಿ ಕಾಶ್ಯಾಮ್ ತದೇಕಂ ಪರಂ ತಾರಕಬ್ರಹ್ಮರೂಪಂ ಭಜೇsಹಂ ಭಜೇsಹಂ ಭಜೇsಹಂ ಭಜೇsಹಮ್ ಕನ್ನಡದಲ್ಲಿ : ದೇಹಾಂತ ಕಾಲದೊಳು ಶಿವನು ಕಾಶಿಯಲಿ ರಾಮರಾಮೆಂಬುವ ಮಂತ್ರವೊರೆವ ಕಿವಿಯಲ್ಲಿ ಆ ತಾರಕೇಕೈಕ ಬ್ರಹ್ಮ ರೂಪನನು ಭಜಿಸುವೆನು ಭಜಿಸುವೆನು ಭಜಿಸುವೆನು ನಾನು ವಿವರಣೆ : ತಾರಕ ಬ್ರಹ್ಮನ ಶಾಶ್ವತ ಮಹಾ ಸ್ವರೂಪವುಳ್ಳ ರೂಪವು ಶಂಕರ ಭಗವಾನನನ್ನು ಕಾಶಿಯಲ್ಲಿರುವ ಭಕ್ತನ ಅಂತ್ಯ ಕಾಲದ ಸಮಯದಲ್ಲಿ ಕಿವಿಯಲ್ಲಿ " ರಾಮ, ರಾಮ, ರಾಮ " ಎಂದು ಗುನುಗುನಿಸುವಂತೆ ಪ್ರೇರೇಪಿಸುತ್ತದೆ, ಆ ಬ್ರಹ್ಮನಿಗೆ ಭಕ್ತಿ ಪೂರ್ವಕವಾಗಿ ನಮಸ್ಕರಿಸುತ್ತೇನೆ. ಶ್ಲೋಕ - 3 - ಸಂಸ್ಕೃತದಲ್ಲಿ : ಪುರಃ ಪ್ರಾಂಜಲೀನಾಂಜನೇಯಾದಿ ಭಕ್ತಾನ್ ಸ್ವಚಿನ್ಮುದ್ರಯಾ ಭದ್ರಯಾ ಬೋಧಯಂತಮ್ ಭಜೇsಹಂ ಭಜೇsಹಂ ಸದಾ ರಾಮಚಂದ್ರಂ ತ್ವದನ್ಯಂ ನ ಮನ್ಯೇ ನ ಮನ್ಯೇ ನ ಮನ್ಯೇ ಕನ್ನಡದಲ್ಲಿ : ಮುಂದೆ ಕೈಮುಗಿದಾಂಜನೇಯಾದಿ ಭಕ್ತರಿಗೆ ಚಿನ್ಮುದ್ರೆಯಿಂ ಮಂಗಳ ಬೋಧೆಯೀವ ಶ್ರೀರಾಮ ಚಂದ್ರನನು ಭಜಿಪೆಂ ಸದಾ ನಾಂ ಬೇರೊಂದನೊಲ್ಲೆ ನಾನೊಲ್ಲೆ ನಾನೊಲ್ಲೆ ವಿವರಣೆ : ಯಾರನ್ನು ಸದಾ ನಮಸ್ಕರಿಸುವ ಆಂಜನೇಯ ಹಾಗೂ ಅನೇಕ ಭಕ್ತರು ಸದಾ ಸುತ್ತುವರೆದಿರುವರೋ ಮತ್ತು ಶಾಶ್ವತ ಜ್ಞಾನವನ್ನು ಅದರ ಲಾಂಛನವನ್ನು ತನ್ನ ಹಸ್ತದಲ್ಲಿ ಇರಿಸಿಕೊಂಡು ಬೋಧಿಸುತ್ತಿರುವನೋ ಆ ಶ್ರೀ ರಾಮಚಂದ್ರನನ್ನು ಸದಾ ಭಕ್ತಿಯಿಂದ ನಮಸ್ಕರಿಸುವೆ ಹಾಗೂ ಅವನನ್ನು ಹೊರತು ಪಡಿಸಿ ಬೇರಾರನ್ನೂ ಕನಸಿನಲ್ಲೂ ಯೋಚಿಸಲಾರೆ. ಶ್ಲೋಕ - 4 - ಸಂಸ್ಕೃತದಲ್ಲಿ : ಯದಾ ಮತ್ಸಮೀಪಂ ಕೃತಾಂತಸ್ಸಮೇತ್ಯ ಪ್ರಚಂಡೈಶ್ಚ ಕೋಪೈರ್ಭಟೈರ್ಭೀಷಯೇನ್ಮಾಮ್ ತದಾವಿಷ್ಕರೋಷಿ ತ್ವದೀಯಂ ಸ್ವರೂಪಂ ಸದಾಪತ್ಪ್ರಣಾಶಂ ಸಕೋದಂಡಬಾಣಮ್ ಕನ್ನಡದಲ್ಲಿ : ಯಮರಾಜನೊಂದಿಗೇ ಭಟರು ಬಳಿ ಬಂದು ಅತ್ಯುಗ್ರಕೋಪದಿಂ ಹೆದರಿಸಲು ನನ್ನ ಆಪತ್ತುಗಳನೆಲ್ಲ ನಾಶಗೈಯುವ ನಿನ್ನ ಕೋದಂಡ ಬಾಣಗಳ ಶಕ್ತಿ ತೋರಿಸುವೆ ವಿವರಣೆ : ಕಾಲ ಯಮನು ತನ್ನ ಕೋಪೋದ್ರಿಕ್ತ ಬಟರೊಂದಿಗೆ ನನ್ನೆದುರು ಬಂದು ನನ್ನನ್ನು ಹೆದರಿಸುವಾಗ ಹೇ ರಾಮಚಂದ್ರನೇ ಆ ಸಮಯದಲ್ಲಿ ನೀನು ನಿನ್ನ ಕೋದಂಡ ಬಾಣದೊಡನೆ ನನ್ನೆದುರು ಪ್ರತ್ಯಕ್ಷನಾಗು, ಆಗ ಅದು ನನ್ನಲ್ಲಿನ ಎಲ್ಲ ಭಯವನ್ನೂ ಹೋಗಲಾಡಿಸು ವುದು. ಶ್ಲೋಕ - 5 - ಸಂಸ್ಕೃತದಲ್ಲಿ : ನಿಜೇ ಮಾನಸೇ ಮಂದಿರೇ ಸನ್ನಿಧೇಹಿ ಪ್ರಸೀದ ಪ್ರಸೀದ ಪ್ರಭೋ ರಾಮಚಂದ್ರ ಸಸೌಮಿತ್ರಿಣಾ ಕೈಕಯೀನಂದನೇನ ಸ್ವಶಕ್ತ್ಯಾನುಭಕ್ತ್ಯಾ ಚ ಸಂಸೇವ್ಯಮಾನ ಕನ್ನಡದಲ್ಲಿ : ಸೌಮಿತ್ರಿ ಭರತನಿಂ ಭಕ್ತಗಣದಿಂದ ಸೀತೆಯೊಂದಿಗೆ ಸೇವೆಗೊಳ್ಳುತಿಹ ಸ್ವಾಮಿ ಎನ್ನ ಮಾನಸಮಂದಿರದಲ್ಲಿ ನೆಲೆಸು ಕೃಪೆದೋರು ಕೃಪೆದೋರು ಶ್ರೀರಾಮಚಂದ್ರ ವಿವರಣೆ : ಹೇ ರಾಮಚಂದ್ರನೇ ನನ್ನ ನೈಜ ಮನದಲ್ಲಿ ನೀನು ಹಾಗೂ ನಿನ್ನ ಸಹೋದರರಾದ ಲಕ್ಷ್ಮಣ, ಭರತ, ಶತೃಘ್ನರೊಂದಿಗೆ ಬಂದು ಅಲ್ಲೇ ನೆಲೆಸಿ ನಿನ್ನ ಅಪಾರವಾದ ಶಕ್ತಿಯಿಂದ ನಿನ್ನ ಭಕ್ತನಾದ ನನಗೆ ಸಹಾಯಮಾಡಿ ನನ್ನನ್ನು ಸಂತೋಷಪಡಿಸು. ಶ್ಲೋಕ - 6 - ಸಂಸ್ಕೃತದಲ್ಲಿ : ಸ್ವಭಕ್ತಾಗ್ರಗಣ್ಯೈಃ ಕಪೀಶೈರ್ಮಹೀಶೈ- ರನೀಕೈರನೇಕೈಶ್ಚ ರಾಮ ಪ್ರಸೀದ ನಮಸ್ತೇ ನಮೋsಸ್ತ್ವೀಶ ರಾಮ ಪ್ರಸೀದ ಪ್ರಶಾಧಿ ಪ್ರಶಾಧಿ ಪ್ರಕಾಶಂ ಪ್ರಭೋ ಮಾಮ್ ಕನ್ನಡದಲ್ಲಿ : ಕಪಿಶ್ರೇಷ್ಟರೊಡಗೂಡಿ ಭಕ್ತರಾಜರೊಡಗೂಡಿ ಅನೇಕಾನೇಕ ಸೇನೆಯೊಡನೆ ಮೈದೋರು ನಮಸ್ತೇ ನಮೋ ಒಡೆಯ ರಾಮ ಮೈದೋರು ಶಿಕ್ಷಣವನೀ ಜ್ಞಾನ ನೀಡೆನಗೆ ಸ್ವಾಮಿ ವಿವರಣೆ : ಮಹಾ ದೈವಭಕ್ತರು, ಮಹಾ ವಾನರ ರಾಜರುಗಳು, ಹಾಗೂ ಅನೇಕ ರಾಜ, ಮಹಾರಾಜರುಗಳು ಸುತ್ತುವರೆದಿರುವ ಓ ರಾಮಚಂದ್ರನೇ ! ನಿನಗೆ ನನ್ನ ಭಕ್ತಿಪೂರ್ವಕ ನಮಸ್ಕಾರಗಳು, ನನ್ನಲ್ಲಿ ಸುಪ್ರೀತನಾಗು, ಓ ದೇವನೇ ! ನನ್ನನ್ನು ಆಶೀರ್ವದಿಸು. ಶ್ಲೋಕ - 7 - ಸಂಸ್ಕೃತದಲ್ಲಿ : ನಮಸ್ಸಚ್ಚಿದಾನಂದರೂಪಾಯ ತಸ್ಮೈ ನಮೋ ದೇವದೇವಾಯ ರಾಮಾಯ ತುಭ್ಯಮ್ ನಮೋ ಜಾನಕೀಜೀವಿತೇಶಾಯ ತುಭ್ಯಂ ನಮಃ ಪುಂಡರೀಕಾಯತಾಕ್ಷಾಯ ತುಭ್ಯಮ್ ಕನ್ನಡದಲ್ಲಿ : ನಮೋ ಸಚ್ಚಿದಾನಂದ ರೂಪೆ ನಿನಗೆ ನಮೋ ದೇವ ದೇವ ಸಿರಿರಾಮ ನಿನಗೆ ನಮೋ ಜಾನಕಿಯ ಜೀವದೊಡೆಯ ನಿನಗೆ ನಮೋ ಕಮಲವನು ಪೋಲ್ವ ಕಣ್ಣವನೆ ನಿನಗೆ ವಿವರಣೆ : ಸಚ್ಚಿದಾನಂದ ಸ್ವರೂಪನಾದ ದೇವನಿಗೆ ವಂದನೆಗಳು, ಜಾನಕಿರಮಣನಾದ ಭಗವಾನ್ ರಾಮಚಂದ್ರನಿಗೆ, ಹಾಗೂ ಉದರದಲ್ಲಿ ಪದ್ಮವನ್ನು ಧರಿಸಿರುವ ರಾಮನಿಗೆ ನಮಸ್ಕಾರಗಳು. ಶ್ಲೋಕ - 8 - ಸಂಸ್ಕೃತದಲ್ಲಿ : ನಮೋ ಭಕ್ತಿಯುಕ್ತಾನುರಕ್ತಾಯ ತುಭ್ಯಂ ನಮಃ ಪುಣ್ಯಪುಂಜೈಕಲಭ್ಯಾಯ ತುಭ್ಯಮ್ ನಮೋ ವೇದವೇದ್ಯಾಯ ಚಾದ್ಯಾಯ ಪುಂಸೇ ನಮಃ ಸುಂದರಾಯೇಂದಿರಾವಲ್ಲಭಾಯ ಕನ್ನಡದಲ್ಲಿ : ಭಕ್ತರಲಿ ಅನುರಕ್ತ ನಿನಗೆ ನಮನ ಪುಣ್ಯಬಲದಿಂದಷ್ಟೆ ಲಭಿಸುವನೆ ನಮನ ವೇದದಿಂ ತಿಳಿವವನೆ ಆದಿಪುರುಷನೆ ನಮನ ಸುಂದರನೆ ಇಂದಿರಾವಲ್ಲಭನೆ ನಮನ ವಿವರಣೆ : ಭಕ್ತರನ್ನು ಪ್ರೀತಿಸುವ ಭಗವಂತನಿಗೆ ನಮಸ್ಕಾರಗಳು, ಪುಣ್ಯಕಾರ್ಯಗಳ ಮೂಲಕ ಮಾತ್ರ ಹೊಂದಬಹುದಾದ ಆ ದೇವನಿಗೆ ಅನಂತ ಪ್ರಣಾಮಗಳು. ಯುಗದ ಆದಿಪುರುಷ ಹಾಗೂ ವೇದಗಳ ದೈವನಿಗೆ ಭಕ್ತಿಪೂರ್ವಕ ವಂದನೆಗಳು. ಸೌಂದರ್ಯದ ಪ್ರತಿರೂಪ ಹಾಗೂ ಜನಕರಾಜನ ಪುತ್ರಿಯ ರಮಣನಿಗೆ ಅನೇಕ ನಮಸ್ಕಾರಗಳು. ಶ್ಲೋಕ - 9 - ಸಂಸ್ಕೃತದಲ್ಲಿ : ಶೀಲಾsಪಿ ತ್ವದಂಘ್ರಿಕ್ಷಮಾಸಂಗಿರೇಣು- ಪ್ರಸಾದಾದ್ಧಿ ಚೈತನ್ಯಮಾಧತ್ತ ರಾಮ ನರಸ್ತ್ವತ್ಪದದ್ವಂದ್ವಸೇವಾವಿಧಾನಾತ್ ಸುಚೈತನ್ಯಮೇತೀತಿ ಕಿಂ ಚಿತ್ರಮತ್ರ ಕನ್ನಡದಲ್ಲಿ : ಓ ರಾಮ ನಿನಪಾದ ಧೂಳ ದೆಸೆಯಿಂದ ಚೈತನ್ಯ ಪಡೆದಿತ್ತು ಶಿಲೆ ಕೂಡ ನೋಡ ಆ ಪಾದಯುಗ್ಮವನು ಸೇವಿಸುತ ನರನು ಶಕ್ತಿಯನು ಪಡೆವನೆನಲೇನು ಸೋಜಿಗವು ವಿವರಣೆ : ಹೇ ರಾಮಚಂದ್ರನೇ ! ಕೇವಲ ನಿನ್ನ ಪಾದ ಧೂಳಿನಿಂದ ಸಾಮಾನ್ಯ ಬಂಡೆಯು ಜೀವವನ್ನು ಮರಳಿ ಪಡೆಯಿತು, ನಿನಗೆ ನಮಸ್ಕರಿಸಿ ನಿನ್ನ ಪಾದ ಸೇವೆಯಿಂದ ಭಕ್ತರಿಗೆ ಮುಕ್ತಿದೊರಕಿದರೆ ಅದರಲ್ಲಿ ಆಶ್ಚರ್ಯಕರವಾದದ್ದು ಏನು? ಶ್ಲೋಕ - 10 - ಸಂಸ್ಕೃತದಲ್ಲಿ : ಪವಿತ್ರಂ ಚರಿತ್ರಂ ವಿಚಿತ್ರಂ ತ್ವದೀಯಂ ನರಾ ಯೇ ಸ್ಮರಂತ್ಯನ್ವಹಂ ರಾಮಚಂದ್ರ ಭವಂತಂ ಭವಾಂತಂ ಭರಂತಂ ಭಜಂತೋ ಲಭಂತೇ ಕೃತಾಂತಂ ನ ಪಶ್ಯಂತ್ಯತೋsoತೇ ಕನ್ನಡದಲ್ಲಿ : ಪವಿತ್ರವು ವಿಚಿತ್ರವು ನಿನ್ನಯ ಚರಿತ್ರೆ ಸಂಸಾರ ನಾಶಕನೆ ಪೋಷಕನೆ ರಾಮ ದಿವರಾತ್ರಿಯಲಿ ನರನು ನೆನೆಯುತ್ತ ನಿನ್ನ ಭಜಿಸುತಿರೆ ಮರೆವನವ ಯಮನ ಭಯವನ್ನ ವಿವರಣೆ : ಹೇ ರಾಮನೇ ! ನಿನ್ನ ಆಶ್ಚರ್ಯಕರವಾದ ಚರಿತ್ರೆಯನ್ನು ಸದಾ ನೆನಸುವ ಭಕ್ತರು ಮತ್ತು ನಿನ್ನ ನಾಮವನ್ನು ಭಜಿಸುವವರು, ದುಃಖದಿಂದ ಕೂಡಿದ ಸಾಂಸಾರಿಕ ಜೀವನವನ್ನು ನಾಶಪಡಿಸುವ ನಿನ್ನನ್ನು ಪೂಜಿಸಿ ತಮ್ಮ ಅಂತ್ಯ ಕಾಲದಲ್ಲಿ ತಾವು ಇಚ್ಚಿಸಿದ್ದನ್ನು ಪಡೆಯುವರು ಹಾಗೂ ಯಮನ ಭಯವನ್ನು ನಿವಾರಿಸಿಕೊಳ್ಳುವರು. ಶ್ಲೋಕ - 11 - ಸಂಸ್ಕೃತದಲ್ಲಿ : ದಶಗ್ರೀವಮುಗ್ರಂ ಸಪುತ್ರಂ ಸಮಿತ್ರಂ ಸರಿದ್ದುರ್ಗಮಧ್ಯಸ್ಥರಕ್ಷೋಗಣೇಶಮ್ ಭವಂತಂ ವಿನಾ ರಾಮ ವೀರೋ ನರೋ ವಾ- sಸುರೋ ವಾsಮರೋ ವಾ ಜಯೇತ್ಕಸ್ತ್ರಿಲೋಕ್ಯಾಮ್ ಕನ್ನಡದಲ್ಲಿ : ಪುತ್ರಮಿತ್ರರ ಕೂಡಿ ಶರಧಿಕೋಟೆಯಳಿದ್ದ ರಾಕ್ಷಸಗಣೇಶ್ವರನ ಉಗ್ರ ದಶಮುಖನ ನಿನ್ನ ಬಿಟ್ಟಾವ ಕಲಿ ನರರು ಸುರರಸುರರು ಗೆಲಲು ಸಾಧ್ಯವು ರಾಮ ಮೂಲೋಕದಲ್ಲಿ ವಿವರಣೆ : ಓ ರಾಮಚಂದ್ರನೇ ! ನಿನ್ನನ್ನು ಬಿಟ್ಟು ವಿಶ್ವದಲ್ಲಿ ಬೇರಾರೂ ಶೂರರೂ ಅಥವಾ ವೀರರೂ ಅಥವಾ ದೇವತೆಗಳಿಗೂ, ದಶಮುಖ ರಾವಣ ಹಾಗೂ ಅವನ ರಾಕ್ಷಸ ಗಣಗಳನ್ನು ಸಂಹಾರ ಮಾಡಲು ಸಾಧ್ಯವೇ ? ಶ್ಲೋಕ - 12 - ಸಂಸ್ಕೃತದಲ್ಲಿ : ಸದಾ ರಾಮ ರಾಮೇತಿ ರಾಮಾಮೃತಂ ತೇ ಸದಾರಾಮಮಾನಂದನಿಷ್ಯಂದಕಂದಮ್ ಪಿಬಂತಂ ನಮಂತಂ ಸುದಂತಂ ಹಸಂತಂ ಹನೂಮಂತಮಂತರ್ಭಜೇ ತಂ ನಿತಾಂತಮ್ ಕನ್ನಡದಲ್ಲಿ : ಶಾಂತಿ ಆನಂದಗಳ ಹೊಮ್ಮಿಸುವ ದಿವ್ಯ ರಾಮಾಮೃತವನು ಸದಾ ರಾಮರಾಮೆನುತ ಸೇವಿಸುತ ನಗುನಗುತ ನಮಿಸುತಿಹ ಸುದತಿ ಆ ಹನುಮನನು ಭಜಿಪೆ ಮನದಲ್ಲಿ ಸತತ ವಿವರಣೆ : ಹೇ ರಾಮಚಂದ್ರ ಪ್ರಭುವೇ ! ನಿನ್ನನ್ನು ಸದಾ " ರಾಮ, ರಾಮ " ಎಂದು ಭಜಿಸಿ ರಾಮನಾಮಾಮೃತವನ್ನು ಸದಾ ಕುಡಿಯುತ್ತಾ ಸದಾ ಆನಂದದ ಕಡಲಿನಲ್ಲಿನ ಅಲೆಗಳಲ್ಲಿ ಮೀಯುತ್ತಾ ನಿನಗೆ ಪದೇ ಪದೇ ನಮಸ್ಕರಿಸುತ್ತಾ ಸದಾ ಹಸನ್ಮುಖಿಯಾಗಿರುವ ಹುನುಮನನ್ನು ನಾನು ಸದಾ ಪೂಜಿಸುತ್ತೇನೆ. ಶ್ಲೋಕ - 13 - ಸಂಸ್ಕೃತದಲ್ಲಿ : ನಮಸ್ತೇ ಸುಮಿತ್ರಾಸುಪುತ್ರಾಭಿವಂದ್ಯ ನಮಸ್ತೇ ಸದಾ ಕೈಕಯೀನಂದನೇಡ್ಯ ನಮಸ್ತೇ ಸದಾ ವಾನರಾಧೀಶವಂದ್ಯ ನಮಸ್ತೇ ನಮಸ್ತೇ ಸದಾ ರಾಮಚಂದ್ರ ಕನ್ನಡದಲ್ಲಿ : ಸುಮಿತ್ರಾ ಸುಪುತ್ರನಿಂ ವಂದಿತನ ನಮಿಪೆ ಕೈಕೇಯಿ ನಂದನನು ಸ್ತುತಿಸುವನ ನಮಿಪೆ ಸದಾ ವಾನರಾಧೀಶ ನಮಿಸುವನ ನಮಿಪೆ ನಮಿಪೆ ನಿನ್ನನು ನಮಿಪೆ ಸದಾ ರಾಮಚಂದ್ರ ವಿವರಣೆ : ಸುಮಿತ್ರಾನಂದನನೆಂದು ಪೂಜಿಸಲ್ಪಡುವ ಶ್ರೀರಾಮನಿಗೆ ನಮಸ್ಕಾರಗಳು, ಕೈಕೇಯಿ ಪುತ್ರನಾದ ಭರತನಿಂದ ಸದಾ ಗೌರವಿಸಲ್ಪಡುವ ಶ್ರೀ ರಾಮಚಂದ್ರ ಪ್ರಭುವಿಗೆ ಭಕ್ತಿಪೂರ್ವಕ ನಮನಗಳು, ವಾನರ ರಾಜನ ಸದಾ ಸಖನಾದ ಶ್ರೀರಾಮನಿಗೆ ಅನೇಕ ವಂದನೆಗಳು. ಹೇ ರಾಮಚಂದ್ರ ಪ್ರಭುವೇ ನಿನಗೆ ಸದಾ ವಂದನೆಗಳು. ಶ್ಲೋಕ - 14 - ಸಂಸ್ಕೃತದಲ್ಲಿ : ಪ್ರಸೀದ ಪ್ರಸೀದ ಪ್ರಚಂಡ ಪ್ರತಾಪ ಪ್ರಸೀದ ಪ್ರಸೀದ ಪ್ರಚಂಡಾರಿಕಾಲ ಪ್ರಸೀದ ಪ್ರಸೀದ ಪ್ರಪನ್ನಾನುಕಂಪಿನ್ ಪ್ರಸೀದ ಪ್ರಸೀದ ಪ್ರಭೋರಾಮಚಂದ್ರ ಕನ್ನಡದಲ್ಲಿ : ಪ್ರಚಂಡ ಪ್ರತಾಪಿ ಕೃಪೆದೋರು ಕೃಪೆದೋರು ಅತ್ಯುಗ್ರ ಶತ್ರುಯಮ ಕೃಪೆದೋರು ಕೃಪೆದೋರು ಮೊರೆಹೊಕ್ಕವರ ಕಾಯ್ವ ಕೃಪೆದೋರು ಕೃಪೆದೋರು ಪ್ರಭು ರಾಮಚಂದಿರನೆ ಕೃಪೆದೋರು ಕೃಪೆದೋರು ವಿವರಣೆ : ನಿನ್ನ ಕರುಣೆಯ ವರ್ಷಧಾರೆಯನ್ನು ಹರಿಸು ಅಧಿಕ ಗೌರವವುಳ್ಳ, ಹೇ ದೇವನೆ ! ಶತ್ರುಗಳಿಗೆ ಯಮಪ್ರಾಯನಾದವನೇ ಕರುಣೆದೋರು, ಭಕ್ತರಲ್ಲಿ ಅಧಿಕ ಕರುಣೆಯುಳ್ಳವನೇ ಕೃಪೆತೋರು, ಕೃಪೆತೋರು. ಓ ರಾಮಚಂದ್ರ ಪ್ರಭುವೇ ಕೃಪೆತೋರು, ಕೃಪೆತೋರು. ಶ್ಲೋಕ - 15 - ಸಂಸ್ಕೃತದಲ್ಲಿ : ಭುಜಂಗಪ್ರಯಾತಂ ಪರಂ ವೇದಸಾರಂ ಮುದಾ ರಾಮಚಂದ್ರಸ್ಯ ಭಕ್ತ್ಯಾ ಚ ನಿತ್ಯಮ್ ಪಠನ್ ಸಂತತಂ ಚಿಂತಯನ್ ಸ್ವಾಂತರಂಗೇ ಸ ಏವ ಸ್ವಯಂ ರಾಮಚಂದ್ರಃ ಸ ಧನ್ಯಃ ಕನ್ನಡದಲ್ಲಿ : ವೇದಸಾರವು ಶ್ರೇಷ್ಠವೀ ಭುಜಂಗಪ್ರಯಾತವನು ಶ್ರೀರಾಮ ಸ್ತೋತ್ರವನು ಹರುಷದಲಿ ನಿತ್ಯ ಪಠಿಸುತ್ತ ನಿನ್ನೊಳಗೆ ನಿರುತ ನೆನೆವಾತ ನಿಜದಿ ರಾಮಚಂದಿರನಹನು ಬಹುಧನ್ಯನಾತ ವಿವರಣೆ : ರಾಮಚಂದ್ರಪ್ರಭುವಿನ ವೇದಗಳ ಸಾರವಾದ ಭುಜಂಗ ಪ್ರಯಾತ ಸ್ತೋತ್ರವನ್ನು ಪ್ರತಿದಿನವೂ ಮನದಲ್ಲಿ ಸದಾ ಧ್ಯಾನಿಸುವವರಿಗೆ, ಪಠಿಸುವವರಿಗೆ ರಾಮಚಂದ್ರನ ಆಶೀರ್ವಾದವು ಸದಾ ಸಿಗುವುದು ಹಾಗೂ ಅವನೇ ಧನ್ಯ. ▬▬ஜ۩۞۩ஜ▬▬▬*▬▬▬ஜ۩۞۩ஜ▬▬ !! ಸರ್ವಂ ಶ್ರೀ ಕೃಷ್ಣಾರ್ಪಣಮಸ್ತು !! 🙏 ಸರ್ವೇ ಜನಾಃ ಸುಖಿನೋ ಭವಂತುಸರ್ವೇ ಸಂತು ನಿರಾಮಯಾಃ 🙏 !! ಧರ್ಮೋ ರಕ್ಷತಿ ರಕ್ಷಿತಃ !! ▬▬▬ஜ۩۞۩ஜ▬▬▬▬▬▬ஜ۩۞۩ஜ▬▬▬ 🙏 ಹರಿ ಸರ್ವೋತ್ತಮ ವಾಯು ಜೀವೋತ್ತಮ 🙏
🕉️ ಜೈ ಶ್ರೀ ರಾಮ🙏 - ಶೀರಾಮ ಭುಜಂಗ ಪ್ರಯಾತ ಸ್ತೋತ್ರ ಶೀರಾಮ ಭುಜಂಗ ಪ್ರಯಾತ ಸ್ತೋತ್ರ - ShareChat