#PSSM World ಸಂಪತ್ತು
ಜ್ಞಾನವನ್ನು ಪಡೆದುಕೊಳ್ಳುವುದು ಹೇಗೆ..? ಮೋಕ್ಷ ಹೇಗೆ ಉಂಟಾಗುತ್ತದೆ?
ನೀನು ಮುಕ್ತಿಯನ್ನು ಬಯಸಿದರೆ, ವಿಷದಂತಹ ಇಂದ್ರಿಯ ವಸ್ತುಗಳನ್ನು ತ್ಯಜಿಸಿ, ಕ್ಷಮೆ, ಪ್ರಾಮಾಣಿಕತೆ, ದಯೆ, ಕರುಣೆ, ತೃಪ್ತಿ ಮತ್ತು ಸತ್ಯವನ್ನು ಬೆಳೆಸಿಕೊ
ಕ್ಷಮೆ,ಪ್ರಾಮಾಣಿಕತೆ, ದಯೆ ತೃಪ್ತಿ, ಸತ್ಯತೆ — ಇವು ಜೀವಿಯ ಸ್ವಾಭಾವಿಕ ಗುಣಗಳು. ನಮ್ಮಲ್ಲಿ ಸಹಜವಾಗಿ ಇರುತ್ತವೆ. ಆದರೆ ಜಗತ್ತಿನೊಂದಿಗೆ ನಡೆಸುವ ವ್ಯವಹಾರಗಳಿಂದ, ಅಂದರೆ ಇಂದ್ರಿಯಗಳ ಮೂಲಕ ಬರುವ ಪ್ರಪಂಚದ ಸ್ಪರ್ಶದಿಂದ,, ದ್ವೇಷ, ಆಸಕ್ತಿ, ಅಭಿಮಾನ, ತಾರತಮ್ಯಗಳು, ಬಂಧನೆಗಳು ಹುಟ್ಟಿಕೊಳ್ಳುತ್ತವೆ.
ಅಂತಹ ಇಂದ್ರಿಯ ಸಂಪರ್ಕದಿಂದ ಕ್ಷಮೆ , ಸರಳತೆ/ಪ್ರಾಮಾಣಿಕತೆ ,ದಯೆ, ತೃಪ್ತಿ, ಸತ್ಯ ಗುಣಗಳು ನಿಧಾನವಾಗಿ ಮಾಯವಾಗುತ್ತವೆ.
ಆದ್ದರಿಂದ, ನಾವು ನಿಜವಾಗಿಯೂ ಮುಕ್ತರಾಗಿ ಮತ್ತು ಸಂತೋಷವಾಗಿರಲು ಬಯಸಿದರೆ,ಇಂದ್ರಿಯಲೋಲತೆಯಿಂದ ಮುಕ್ತರಾಗಬೇಕು. ಕ್ಷಮೆ, ಪ್ರಾಮಾಣಿಕತೆ, ದಯೆ, ಕರುಣೆ, ತೃಪ್ತಿ ಮತ್ತು ಸತ್ಯ ಗುಣಗಳನ್ನು ಬೆಳೆಸಿಕೊಳ್ಳಬೇಕು


