ShareChat
click to see wallet page
search
#PSSM World ಶಿಕ್ಷಣದ ನಡುವೆ ಮರೆಯಾಗದಿರಲಿ ಆತ್ಮಜ್ಞಾನ - ಡಿಗ್ರಿ ಬೆನ್ನತ್ತಿದ ಶ್ವೇತಕೇತುವಿಗೆ ತಂದೆ ಕಲಿಸಿದ 'ಲೈಫ್ ಲೆಸನ್. ಹನ್ನೆರಡು ವರ್ಷಗಳ ಕಾಲ ಕಠಿಣ ಪರಿಶ್ರಮದಿಂದ ವೇದ-ಶಾಸ್ತ್ರಗಳನ್ನು ಓದಿ ಶ್ವೇತಕೇತು ಮನೆಗೆ ಬಂದಾಗ ಅವನ ನಡೆಯಲ್ಲಿ ವಿಧೇಯತೆ ಇರಲಿಲ್ಲ. ಬದಲಿಗೆ 'ನನಗಿಂತ ಜ್ಞಾನಿ ಯಾರೂ ಇಲ್ಲ' ಎಂಬ ಅಹಂಕಾರದ ದರ್ಪವಿತ್ತು. ತಂದೆಗೆ ನಮಸ್ಕಾರ ಮಾಡಲಿಲ್ಲ ಏಕೆಂದರೆ ನನ್ನ ತಂದೆ ನನ್ನಂತೆ ವೇದಗಳನ್ನು ಅಧ್ಯಯನ ಮಾಡಿಲ್ಲ. ಅಷ್ಟೊಂದು ಜ್ಞಾನವಿದ್ದರೆ ನನ್ನನ್ನು ಬೇರೆ ಗುರುಗಳ ಹತ್ತಿರ ವೇದಾಧ್ಯಯನಕ್ಕೆ ಏಕೆ ಕಳುಹಿಸುತ್ತಿದ್ದರು! ಇದನ್ನು ತಿಳಿದು ತಂದೆ ಮಗನಿಗೆ ಪಾಠವನ್ನು ಕಲಿಸಲು ನಿರ್ಧರಿಸಿ ಮಗನನ್ನು ಕೇಳಿದರು "ಮಗೂ, ಯಾವ ಒಂದನ್ನು ತಿಳಿದುಕೊಂಡರೆ ಈ ಜಗತ್ತಿನ ಸಮಸ್ತವನ್ನೂ ತಿಳಿದಂತಾಗುತ್ತದೆಯೋ, ಅಂತಹ ಪರಮ ವಿದ್ಯೆಯನ್ನು ನಿನ್ನ ಗುರುಗಳು ನಿನಗೆ ಕಲಿಸಿದ್ದಾರೆಯೇ?" ಪ್ರಶ್ನೆ ಕೇಳಿದ ಕೂಡಲೇ ಶ್ವೇತಕೇತುವಿಗೆ ತನ್ನ ಜ್ಞಾನದ ಅರಿವಾಯಿತು. ಅಂತಹ ವಿದ್ಯೆ ಯಾವುದು? ನನಗೆನನ್ನ ಗುರುಗಳು ಹೇಳಿಕೊಟ್ಟಿಲ್ಲ . ದಯವಿಟ್ಟು ನೀವೇ ನನಗೆ ಉಪದೇಶಿಸಿ ಎಂದು ನಮಸ್ಕರಿಸಿದನು. ತಂದೆ ಮಗನ ಅಹಂಕಾರ ಇಳಿದಿರುವುದನ್ನು ಅರಿತು ಉತ್ತರ ನೀಡಿದರು. “ನೋಡು ಮಗನೇ, ನಾವು ಮಣ್ಣಿನಿಂದ ತಯಾರಾದ ಮಡಿಕೆ, ಕುಡಿಕೆ, ಆನೆ, ಕುದುರೆ, ಗಿಳಿ, ಕೋಗಿಲೆ – ಹೀಗೆ ನಾನಾ ವಸ್ತುಗಳನ್ನು ನೋಡಿದ್ದೇವೆ. ಇವುಗಳೆಲ್ಲದಕ್ಕೂ ಮೂಲವೇ ಮಣ್ಣು. ಮಣ್ಣಿನ ಮುದ್ದೆಯ ಬಗ್ಗೆ ನೀನು ಕೂಲಂಕುಷವಾಗಿ ಅರ್ಥಮಾಡಿಕೊಂಡರೆ, ಅದರಿಂದಾಗುವ ಎಲ್ಲ ವಸ್ತುಗಳ ಪರಿಚಯವೂ ತಾನಾಗಿಯೇ ಆಗುತ್ತದೆ, ಅಲ್ಲವೇ?”(ಕಾರಣವನ್ನು ಅರಿತರೆ, ಕಾರ್ಯವನ್ನು ಅರಿತಂತೆ) ಹಾಗೆಯೇ, ಮೂಲವಸ್ತುವಾದ ಚಿನ್ನದ ಬಗ್ಗೆ ನಾವು ಸರಿಯಾಗಿ ಅರ್ಥಮಾಡಿಕೊಂಡರೆ, ಅದರಿಂದ ತಯಾರಾದ ಆಭರಣಗಳನ್ನುಅರ್ಥಮಾಡಿಕೊಂಡಂತೆ. ಸಮಗ್ರ ಸೃಷ್ಟಿಯ ಮೂಲವನ್ನು ಅರಿತಾಗಲೇ ಸಕಲ ವಸ್ತುಗಳು ಅರ್ಥವಾಗುವುದು. “ಆ ಮರವನ್ನು ನೋಡು. ಅದರ ಕಾಂಡದ ಯಾವುದೇ ಭಾಗವನ್ನು ಕೆತ್ತಿದರೂ, ಒಂದು ರೀತಿಯ ದ್ರವ (ರಸ) ಹೊರಬರುತ್ತದೆ, ಆದರೆ ಮರ ಬದುಕಿರುತ್ತದೆ. ಅದರ ಒಂದು ಕೊಂಬೆಯನ್ನು ಮುರಿದರೆ, ಕೆಲವೇ ಕಾಲದಲ್ಲಿ ಆ ಕೊಂಬೆ ಒಣಗಿ ಉದುರಿ ಹೋಗುತ್ತದೆ, ಆದರೆ ಮರ ಬಾಡುವುದಿಲ್ಲ. ಆ ಮರದಲ್ಲಿ ಜೀವವೆಂಬ ಚೈತನ್ಯ ರಸ ಇಲ್ಲದಂತಾದಾಗ ಮಾತ್ರ ಇಡೀ ಮರ ಒಣಗುತ್ತದೆ, ಅಷ್ಟೇ ಅಲ್ಲವೇ?” ನೋಡು, ಮರದ ಒಂದು ಕೊಂಬೆ ಮುರಿದರೂ, ಅದರ ಜೀವಂತ ಶಕ್ತಿ ಇರುವುದರಿಂದ ಮರ ಬದುಕುತ್ತದೆ. ಆದರೆ, ಅದರಲ್ಲಿ ಜೀವಚೈತನ್ಯವಿಲ್ಲವಾದರೆ, ಇಡೀ ಮರ ಒಣಗಿ ಹೋಗುತ್ತದೆ." "ಹೀಗೆಯೇ, ಮಾನವನ ದೇಹವು ಕೂಡ ಆತ್ಮ ಚೈತನ್ಯವನ್ನು ಕಳೆದುಕೊಂಡಾಗ, ಅದುಅದು ಒಣಗಿದ ಕಟ್ಟಿಗೆಯಾಗುತ್ತದೆ. ಆದರೆ ಆತ್ಮ ಎಂಬ ಚೈತನ್ಯಕ್ಕೆ ಜನನ-ಮರಣದ ಬಾಧೆಗಳಿಲ್ಲ. ಅದು ಅವಿನಾಶಿ, ವಿಶ್ವವ್ಯಾಪಿ. ಆ ಆತ್ಮನೇ ನೀನು. ನಾನಿದ್ದೇನೆ, ನಾವೆಲ್ಲರೂ ಇದ್ದೇವೆ.” ಈ ಉಪದೇಶದ ಮೂಲಕ, ವೇದಗಳ ನಿಜವಾದ ಜ್ಞಾನವೆಂದರೆ ಬಾಹ್ಯ ಜ್ಞಾನವಲ್ಲ, ಬದಲಿಗೆ ಸಕಲಕ್ಕೂ ಆಧಾರವಾಗಿರುವ ಆ ಆತ್ಮತತ್ವವನ್ನು ಅರಿಯುವುದೇ ನಿಜವಾದ ಜ್ಞಾನ, ಮತ್ತು ಅದೇ ವಿನಯಕ್ಕೆ ಕಾರಣ ಎಂಬುದನ್ನು ತಂದೆ ಮಗನಿಗೆ ಮನವರಿಕೆ ಮಾಡಿಕೊಟ್ಟರು. ಇಂದಿಗೂ ನಾವು ಶ್ವೇತ ಕೇತುನನ್ನು ಅನುಸರಿಸಬೇಕೆ, ಲೌಕಿಕ ಶಿಕ್ಷಣ ಆಂತರಿಕ ಬೆಳವಣಿಗೆಯನ್ನು ಸಹ ಕೊಡುವುದಿಲ್ಲ. "ನಾನು ಹೆಚ್ಚು ಬುದ್ಧಿವಂತನು" ಎಂಬ ಭಾವನೆ ನಮ್ಮನ್ನು ದಿಕ್ಕು ತಪ್ಪಿಸಬಹುದು. ಬಾಹ್ಯಮತ್ತು ಆಂತರ್ಯ ಎರಡನ್ನು ತಿಳಿಯಬೇಕು ಹೊರಗಿನ ವ್ಯವಹಾರದ ಜ್ಞಾನ ಬದುಕಲು ಬೇಕು, ಆದರೆ ಬದುಕನ್ನು ಅರ್ಥಮಾಡಿಕೊಳ್ಳಲು ಆತ್ಮಜ್ಞಾನ ಬೇಕು. ಸೃಷ್ಟಿಯ ಮೂಲವನ್ನು ಅರಿತರೆ ಈ ಜಗತ್ತಿನ ಕಷ್ಟ-ಸುಖಗಳು ನಮ್ಮನ್ನು ಅತಿಯಾಗಿ ಬಾಧಿಸುವುದಿಲ್ಲ. ಲೌಕಿಕ ಶಿಕ್ಷಣದ ಜೊತೆಗೆ ಜೀವನದ ದರ್ಶನ ಮತ್ತು ಆತ್ಮಜ್ಞಾನ ಸೇರಿದಾಗ ಮಾತ್ರ 'ಪೂರ್ಣಜ್ಞಾನ'ವಾಗಲು ಸಾಧ್ಯ.