#💐ಮಂಗಳವಾರದ ಶುಭಾಶಯಗಳು ಮಲೆನಾಡ ಗಾಂಧಿ' ಎಂದೇ ಪ್ರಸಿದ್ಧರಾಗಿದ್ದ ಎಚ್ ಜಿ ಗೋವಿಂದೇಗೌಡರು ಕರ್ನಾಟಕ ಸರ್ಕಾರದ ಶಿಕ್ಷಣ ಮಂತ್ರಿಗಳಾಗಿ ಹೆಸರು ಮಾಡಿದವರು. ಅವರ ಅಧಿಕಾರಾವಧಿಯಲ್ಲಿ ಒಂದು ಲಕ್ಷದ ಐದು ಸಾವಿರ ಶಿಕ್ಷಕರನ್ನು ನೇಮಿಸಿದರು. 1999ರಲ್ಲಿ ರಾಜಕೀಯ ನಿವೃತ್ತಿ ಹೊಂದಿದರು.ಎಚ್. ಜಿ. ಗೋವಿಂದೇಗೌಡರು ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ತಾಲ್ಲೂಕಿನ ಕಾನೂರು ಗ್ರಾಮದ ಹಿಣಚಿಯಲ್ಲಿ 1926 ಮೇ 26ರಂದು ಜನಿಸಿದರು.ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದ ಗೋವಿಂದೇಗೌಡರು ಕರ್ನಾಟಕದ ಶಿಕ್ಷಣ ಮಂತ್ರಿಯಾಗಿ ಒಂದು ಲಕ್ಷದ ಐದು ಸಾವಿರ ಶಿಕ್ಷಕರನ್ನು ನೇಮಿಸಿ ದಾಖಲೆಗೈದಿದ್ದಾರೆ. ಶಿಕ್ಷಕ ಹುದ್ದೆಯ ನೇಮಕಾತಿಯಲ್ಲಿ ಮಹಿಳೆಯರಿಗೆ ಶೇ.50 ಮೀಸಲಾತಿ ಕಲ್ಪಿಸಿದ ಹೆಗ್ಗಳಿಕೆಯೂ ಅವರಿಗಿದೆ. ಇಂತಹ ಮಹಾನ್ ವ್ಯಕ್ತಿ ನಮ್ಮ ಮಲೆನಾಡಿನ ಅವರು ಎಂಬುದಕ್ಕೆ ನಮಗೆ ಹೆಮ್ಮೆ ಹಾಗೂ ಗೌರವದಿಂದ ಗರ್ವದಿಂದ ಹೇಳಿಕೊಳ್ಳಬಹುದು ಇಂತಹ ಮಹಾನ್ ವ್ಯಕ್ತಿಯನ್ನು ನಮ್ಮೂರಿನಲ್ಲಿ ನೋಡಿದ ಹೆಮ್ಮೆಯ ನಮಗಿದೆ ಅವರು ಈ ನಮ್ಮ ಮಲೆನಾಡಿನ ಮಹಾನ್ ಚೇತನ ಇವರು ಸಾವಿರಾರು ಶಿಕ್ಷಕರನ್ನು ಸೃಷ್ಟಿಸಿದ ಮಹಾನ್ ಚೇತನ ಇಂತಹ ಅದ್ಭುತ ರಾಜಕಾರಣಿ ಸ್ವತಂತ್ರ ಹೋರಾಟಗಾರ ನಮ್ಮ ನಡುವೆ ಬದುಕಿ ಬಾಳಿ ಹೋರಾಟ ನಡೆಸಿ ನಮ್ಮ ನಾಡಿಗಾಗಿ ದುಡಿದ ಮಹಾನ್ ಚೇತನ ಗೋವಿಂದೇಗೌಡರು ನಮ್ಮ ಮಲೆನಾಡ ಗಾಂಧಿ ಇವರ ಪುಣ್ಯಸ್ಮರಣೆಯನ್ನು ಮಲೆನಾಡಿನ ಪ್ರತಿಯೊಬ್ಬರು ಇವರನ್ನು ಸ್ಮರಿಸೋಣ ಇವರಿಗೆ ನಮ್ಮ ಗೌರವಪೂರ್ವ ನಮನಗಳನ್ನು ಸಲ್ಲಿಸೋಣ ಎನ್ನುತ್ತಾ ನಿಮ್ಮ ಸ್ನೇಹಿತ ಅನಿಲ್ ಮಲ್ನಾಡ್


