"ಲಿಂಗಾಯತ"ರೆಂಬ ಪದ ಬಂದೀರೋದೆ ಇಷ್ಟಲಿಂಗ ಶಿವಯೋಗ ಒಲಿದ ನಂತರ. ಆದರೆ ಈಗಿನವರು ಲಿಂಗನಿರೀಕ್ಷೆಯಿಂದ ದೂರ ~ ದೂರ..
ಇಲ್ಲಿ ನೇತ್ರವೆ ಸೂತ್ರ~
ನೋಟವೆ ಕೂಟ~
ಕೂಟವೆ ಮಾಟ~...
ಬಸವಣ್ಣನವರು ನಮ್ಮ ಆತ್ಮ ಚೈತನ್ಯ ಹಾಗೂ ಈ ಬ್ರಹ್ಮಾಂಡದ ರಹಸ್ಯ ಅರಿಯಲು ಅತ್ಯಂತ ಸರಳವಾದ ನಿಖರವಾದ ಇಷ್ಟಲಿಂಗ ತಂತ್ರಜ್ನ್ಯಾನವನ್ನು ಜನ ಸಾಮಾನ್ಯರಿಗೆ ನೀಡಿದ ವಿಶ್ವಗುರು..
ಬಸವಣ್ಣನವರು ನಿರಾಕಾರ ಶಿವನನ್ನು ಹಾಗೂ ತನ್ನ ಆತ್ಮ ಚೈತನ್ಯವನ್ನು ಮೊದಲು ಸಾಕ್ಷಿಕರಿಸಿಗೊಂಡಿದ್ದು ಈ ಇಷ್ಟಲಿಂಗ ನಿರೀಕ್ಷೆಯ ದ್ರಷ್ಟಿಯೋಗ~ ಶಿವಯೋಗದ ಮೂಲಕವೇ~ ನಂತರದಲ್ಲಿ ಸಮಾನತೆಯ "ಸಾಮಾಜಿಕ ಕ್ರಾಂತಿ" ಹಾಗೂ "ಅನುಭವ ಮಂಟಪ".. "ಶೂನ್ಯ ಸಂಪಾದನೆ" ಆಂದೋಲನ ಆರಂಭಗೊಂಡಿದ್ದು~
ಎಲ್ಲ ಲಿಂಗವಂತರೆಲ್ಲರೂ ಇಷ್ಟಲಿಂಗ ಶಿವಯೋಗ ಮಾಡಿದಾಗ ಸಮಾನತೆಯ ಗಾಢ ನೈಜತೆ ತನ್ನಿಂತಾನೆ ಪಸರಿಸುತ್ತದೆ. ಈ ಕಾಯದೊಳಗಿನ ತನ್ನ ಚೈತನ್ಯದ ರಹಸ್ಯ ಅರಿಯುವ ಸಾಧನೆಯಲ್ಲಿರುವವರಿಗೆಲ್ಲ ಎಲ್ಲರೂ ಸಮಾನರೆಂಬ ಭಾವ ತನ್ನಿಂತಾನೆ ಮೂಡುತ್ತದೆ..
ಮನುಷ್ಯ ದೇವನಾಗಬಹುದೆಂದು ತೋರಿಸಿಕೊಟ್ಟವರು ನಮ್ಮ ಬಸವಾದಿ ಶರಣ ಶರಣೆಯರು~ ಇಷ್ಟಲಿಂಗದ ದ್ರಷ್ಟಿಯೋಗದಿಂದ ನಮ್ಮೊಳಗಿನ ಚೈತನ್ಯವು ಜಾಗ್ರತಗೊಂಡು ಲಿಂಗಾಂಗ ಸಾಮರಸ್ಯದಿಂದ ನೀವೆ ದೇವರಾಗಬೇಕು. ನಮ್ಮನ್ನು ನಾವು ಅರಿಯಲು ಇಷ್ಟಲಿಂಗ ಶಿವಯೋಗ.... ದ್ರಷ್ಟೀಯೋಗ ನಿಖರವಾದ ಮಾರ್ಗ..
ಇಡಿ ಭಾರತ ದೇಶದ ಅಧ್ಯಾತ್ಮಿಕ ಇತಿಹಾಸದಲ್ಲೆ ಅತೀ ಸರಳ ನಿಖರವಾದ ತಂತ್ರಜ್ನ್ಯಾನ... ನಮ್ಮ ಈ ಕಾಯದೊಳಗಿನ ಜೈವಿಕ ಚೈತನ್ಯದ ರಹಸ್ಯ ಅರಿಯಲು~ ಸಾಬೀತುಗೊಳಿಸಲು ಇಷ್ಟಲಿಂಗ ಒಂದು ಶ್ರೇಷ್ಠ ಮತ್ತು ಅದ್ಭುತವಾದ ಸಾಧನ..
ಬಹಳಷ್ಟು ಲಿಂಗವಂತರು~ ಇನ್ನು ಲಿಂಗಾಯತ ಧರ್ಮದ ಕೆಲವು ವಿಶೇಷ ಮುಖಂಡರು ಇಷ್ಟಲಿಂಗವನ್ನು ಸರಿಯಾಗಿ ಅರಿಯಲೆ ಇಲ್ಲ~ ಇದರಲ್ಲಿ ಹಾಕಿರುವ ಅಷ್ಟ ಬಂಧಿಗಳು ನಮ್ಮ ಈ ದೇಹದ ಮೇಲೆ ಹೇಗೆ ಯಾವ ರೀತಿ ಪರಿಣಾಮ ಮಾಡುತ್ತವೆ ಎಂಬುದು ತಿಳಿಸಲೇ ಇಲ್ಲ~ ಕಾರಣ ಇದನ್ನು ಯಾರೂ ಪ್ರಚಾರ ಮಾಡಲೆ ಇಲ್ಲ~ ಗೊತ್ತಿರುವ ಕೆಲವರು ಸಹ ಈ ವಿಶೇಷವಾದ ತಂತ್ರಜ್ನ್ಯಾನವನ್ನು ಮುಚ್ಚಿಟ್ಟು ದಾರಿ ತಪ್ಪಿಸಿದವು~ ದ್ರಷ್ಟಿ ಯೋಗದಲ್ಲಿ ಲಿಂಗ ಹಾಗೂ ದ್ರಷ್ಟಿಯ ನಡುವೆ ಯಾವ ವಸ್ತುಗಳನ್ನು ಇಡಬಾರದು. 12 ವರ್ಷ ಸತತ ಸಂಶೋಧನೆ ಮಾಡಿ ಬಸವಣ್ಣನವರು ಇದನ್ನು ಹೊರತಂದಿದ್ದು.. ಭಕ್ತಿ ಎಷ್ಟು ಸತ್ಯವೋ ಇದರ ಲಕ್ಷಪಟ್ಟು ಸತ್ಯ ಇಷ್ಟಲಿಂಗ ತಂತ್ರಜ್ನ್ಯಾನ. ಆದರೆ ಸಾಧನೆ ಮಾಡಬೇಕು. ಸಾಧನೆಯೆ ಸತ್ಯ..! #ಬಸವಣ್ಣನವರ ವಚನಗಳು #ಬಸವಾದಿ ಶರಣ ಶರಣೆಯರು #//🌳ವಚನ ಸಾಹಿತ್ಯ 🌳// #ಶರಣ ಸಾಹಿತ್ಯ #ವಚನಗಳು


