ShareChat
click to see wallet page
search
#🕉️ ಜೈ ಶ್ರೀ ರಾಮ🙏 ಶ್ರೀರಾಮ ಕಥಾ ಮಹಿಮೆ:- ಅಧ್ಯಾಯ4 (ಹಿಂದಿನ ಅಧ್ಯಾಯದಲ್ಲಿ): ಕೇಶವ ಭಟ್ಟರ ಮಗ ನಾರಾಯಣ ಭಟ್ಟ ತಂದೆಯ ಆಜ್ಞೆಯಂತೆ ಶ್ರೀರಾಮನ ದರ್ಶನ ಪಡೆದು ಬರಲು ಹೊರಡುವಾಗ ಪತ್ನಿ ತಮ್ಮ ಮಗಳನ್ನು ಜೊತೆಯಲ್ಲಿ ಕರೆದುಕೊಂಡು ಹೋಗಿ ಎಂದು ಹಟದಿಂದ ಕಳಿಸಲು, ಶ್ರೀ ರಾಮನ ಇಚ್ಛೆ ಎಂದು ಮಗಳನ್ನು ಹೆಗಲ ಮೇಲೆ ಹೊತ್ತು ನಡೆದನು. ಒಂದು ಗ್ರಾಮದಲ್ಲಿ ಯಜ್ಞ ಯಾಗ ಗಳನ್ನು ಮಾಡುತ್ತಿದ್ದ ಬ್ರಾಹ್ಮಣ ಯುವಕನಿಗೆ ಮಗಳನ್ನು ಕೊಟ್ಟು ವಿವಾಹ ಮಾಡಿ ಅಳಿಯ ಮತ್ತು ಮಗಳಿಗೆ ಶ್ರೀರಾಮ ಉಪದೇಶವನ್ನು ಮಾಡಿ ಮುಂದೆ ಹೊರಟನು. ಇಲ್ಲಿಂದ ಮುಂದೆ.. ಹಾಗೆ ಬರುತ್ತಾ ಹುಟ್ಟು ಕುರುಡನಾದ ಮುದುಕನೊಬ್ಬಗೆ ರಾಮೋಪದೇಶ ಮಾಡಿದನು. ಆತನಿಗೆ ಕಣ್ಣು ಬಂದು ಸಂತೋಷದಿಂದ ಕುಟುಂಬ ಸಮೇತ ಇವನ ಬರುವಿಕೆಗಾಗಿ ಕಾಯುತ್ತಿದ್ದನು. ನಂತರ ಹೊರಟ ನಾರಾಯಣ ಭಟ್ಟನಿಗೆ ದುಃಖದಿಂದ ಕುಳಿತಿದ್ದ ಅವಿವಾಹಿತ ಕನ್ಯೆಯ ಸಮಸ್ಯೆಗೆ ಶ್ರೀರಾಮ ಉಪದೇಶ‌ ಮಾಡಲು ಆಕೆ ಉಪದೇಶದಂತೆ ಶ್ರೀರಾಮನನ್ನು ಆರಾಧಿಸಿದಳು. ನಾರಾಯಣ ಭಟ್ಟನನ್ನು ವಿವಾಹ ವಾಗು ಸುಖವಾಗಿರುವೆ ಎಂಬ ರಾಮನ ಸೂಚನೆಯಂತೆ ಅವನ ಬರುವಿಕೆಗಾಗಿ ಕಾಯುತ್ತಾ ಕುಳಿತಳು. ಅಲ್ಲಿಂದ ಹೊರಟ ನಾರಾಯಣ ಭಟ್ಟ ಚಿಂತಿತಳಾಗಿದ್ದ ವೃದ್ಧ ಸ್ತ್ರೀಯನ್ನು ಮಾತನಾಡಿಸಿ ರಾಮೋಪದೇಶ ಮಾಡಲು ಆಕೆ ಅದರಂತೆ ಮಾಡಿದಾಗ ವರ್ಷಗಳ ಹಿಂದೆ ಮನೆ ಬಿಟ್ಟು ಹೋಗಿದ್ದ ಪತಿ ಮನೆಗೆ ಹಿಂತಿರುಗಿದನು. ಭಿಕ್ಷಾನ್ನಕ್ಕೆ ಹೋಗಿದ್ದ ಮಗನು ಅನಿರೀಕ್ಷಿತವಾಗಿ ಆ ರಾಜ್ಯದ ರಾಜನಾದನು. ನಂತರ ತಂದೆ ತಾಯಿ ಯನ್ನು ಗೌರವದಿಂದ ಅರಮನೆಗೆ ಕರೆಸಿ ಕೊಂಡನು. ತಾಯಿಗೆ ಶ್ರೀ ರಾಮ ಮಹಿಮೆ ಉಪದೇಶ ಮಾಡಿದ್ದ ನಾರಾಯಣ ಭಟ್ಟನನ್ನು ಹುಡುಕಿ ತರಲು ಸೇವಕರನ್ನು ನಾಲ್ಕು ದಿಕ್ಕಿಗೂ ಕಳಿಸಿದನು. ಮತ್ತೆ ಮುಂದೆ ಹೋದಾಗ ನಾರಾಯಣ ಭಟ್ಟ ನಿಗೆ, ಭೂಮಿಯಲ್ಲಿದ್ದ ನಿಧಿಯನ್ನು ಕಾಯುತ್ತಾ ಹಾದಿಯ ಮಧ್ಯದಲ್ಲಿ ಅಡ್ಡಲಾಗಿ ಮಲಗಿದ್ದ ನಾಗರಾಜನ ಬಂಧನದ ಬಿಡುಗಡೆಗಾಗಿ ರಾಮೋಪದೇಶ ಮಾಡಿದನು. ಅದರಂತೆ ನಾಗರಾಜ ರಾಮನಾಮ ಧ್ಯಾನ ಮಾಡಲು ಶ್ರೀರಾಮ ಅನುಗ್ರಹ ಮಾಡಿ ಆ ನಿಧಿಯನ್ನು ನಾರಾಯಣ ಭಟ್ಟನಿಗೆ ಕೊಡಲು ತಿಳಿಸಿದನು. ಮುಂದೆ ಪಟ್ಟಣವೂಂದಕ್ಕೆ ಬಂದಾಗ ಅಲ್ಲಿಯ ರಾಜನು ಕಟ್ಟಿಸುತ್ತಿದ್ದ ಕೆರೆ ಏರಿ ನಿಲ್ಲದೆ ಒಡೆಯುತ್ತಿದ್ದು ರಾಜ ಚಿಂತಾಕ್ರಾಂತನಾಗಿದ್ದನು. ನಾರಾಯಣ ಭಟ್ಟನು ತಿಳಿಸಿದ ರಾಮೋಪದೇಶವನ್ನು ರಾಜನು ಪಾಲಿಸಲು, ಶ್ರೀರಾಮನ ಸೂಚನೆ ದೊರಕಿ ರಾಜನು ತನ್ನ ಮಗಳನ್ನು ನಾರಾಯಣ ಭಟ್ಟನಿಗೆ ಕೊಟ್ಟು ವಿವಾಹ ಮಾಡಲು ನಿರ್ಧರಿಸಿದನು. ಮರುದಿನವೇ ಕಟ್ಟುತ್ತಿದ್ದ ಕೆರೆ ಏರಿ ಒಡೆಯದೆ ನಿಂತು ಕೆರೆಯಲ್ಲಿ ನೀರು ತುಂಬಿತು. ಹೀಗೆ ಹಾದಿಯುದ್ಧಕ್ಕೂ ಕಷ್ಟದಲ್ಲಿದ್ದವರಿಗೆಲ್ಲ ರಾಮೋಪದೇಶ ಮಾಡುತ್ತಾ ಶ್ರೀ ರಾಮನ ದರ್ಶನವಾಗದೆ ಒಂದು ಹನಿ ನೀರು ಕುಡಿಯದೆ ಬರುತ್ತಿದ್ದನು. ಎಷ್ಟು ದಿನಗಳಾದರೂ ರಾಮನ ದರ್ಶನವಾಗಲಿಲ್ಲ. ನಾರಾಯಣ ಭಟ್ಟನು ಬಹಳ ಖಿನ್ನನಾಗಿ, ಹಿಂದೆ ಕನಕದಾಸರು ಕೃಷ್ಣನ ದರ್ಶನವಾಗದಿರಲು ಕೋಪಗೊಂಡು ಹಾಡಿದ ದೇವರ ನಾಮವನ್ನು ವರ್ಣಿಸಿದನು. ಆರು ಬದುಕಿದರಯ್ಯ ಹರಿ ನಿನ್ನ ನಂಬಿ! ತೋರು ಈ ಜಗದೊಳಗೆ ಒಬ್ಬರನ್ನು ಕಾಣೆ!! ಕಲಹ ಬಾರದ ಮುನ್ನ ಕರ್ಣನೊಬ್ಬನ ಕೊಂದೆ ! ಸುಲಭದಲ್ಲಿ ಕೌರವನ ಮನೆಯ ಮುಂದೆ! ನೆಲವ ಬೇಡುತ ಹೋಗಿ ಬಲಿಯ ಭೂಮಿಗೆ ತುಳಿದೆ! ಮೊಲೆಯನುಣಿಸಲು ಪೂತನಿಯ ಕೊಂದೆ !! ಕರಪತ್ರದಿಂದ ತಾಮ್ರಧ್ವಜನ ತಂದೆಯ! ಕೊರಳ ಕುಯಿಸಿದೆ ನೀನು ಕುಂದಿಲ್ಲದೆ! ದುರುಳನಂದದಿ ಹೋಗಿ ಮೃಗ ಮುನಿಯ ಕಣ್ಣೊಡೆದೆ ಅರಿತು ತ್ರಿಪುರಾ ಸುರನ ಹೆಂಡಿರನ್ನು ಬೆರೆದೆ !! ತಿರಿದುಂಬಾ ದಾಸನ ಕೈಲಿ ಕಪ್ಪವ ಕೊಂಬೆ ಗರುಡವಾಹನ ನಿನ್ನ ಚರಿಯವರಿಯೇ ವರಕಾಗಿ ನೆಲೆಯಾದಿ ಕೇಶವನ ಭಜಿಸಿದರೆ ತಿರುವೆನೆಂದರೆ ತಿರುಪೆ ಕೂಳ್ಹುಟ್ಟದೈ ಕೃಷ್ಣಾ !! ಶ್ರೀ ರಾಮನು ಇವನ ಭಕ್ತಿಗೆ ಮೆಚ್ಚಿ, ವೃದ್ದ ಬ್ರಾಹ್ಮಣ ರೂಪಿಯಾಗಿ ಬಂದು ಎಲೈ ಬ್ರಾಹ್ಮಣ ನೀನು ಅರಣ್ಯದಲ್ಲಿ ತಿರುಗಲು ಕಾರಣವೇನು ಎಂದು ಕೇಳಿದನು. ನಾರಾಯಣ ಭಟ್ಟ: ನಾನು ಶ್ರೀರಾಮನನ್ನು ಹುಡುಕಿಕೊಂಡು ಬಂದಿರುವೆನು. ವೃದ್ಧ ಬ್ರಾಹ್ಮಣ: ಆ ಶ್ರೀ ರಾಮನು ನಾನೇ ನಿನಗೆ ಬೇಕಾದ ವರವನ್ನು ಕೇಳು. ನಾರಾಯಣ ಭಟ್ಟ: ಸೀತಾ ಲಕ್ಷ್ಮಣ ಸಮೇತನಾದ ನಿನ್ನ ಸಂದರ್ಶನ ಒಂದೇ ನನಗೆ ನನಗಾದರೆ ಸಾಕು ಮತ್ಯಾವ ವರವು ಬೇಕಾಗಿಲ್ಲವು. ವೃದ್ಧ ಬ್ರಾಹ್ಮಣ: ನಕ್ಕು,ಇವನನ್ನು ಹೆಚ್ಚಿಗೆ ಪರೀಕ್ಷಿಸಬೇಕಾದ ಪ್ರಮೇಯ ವಿಲ್ಲವೆಂದು ಭಾವಿಸಿ, ನಿಂತಲ್ಲಿಯೇ ಶ್ರೀ ಸೀತಾ ರಾಮಚಂದ್ರ, ಲಕ್ಷ್ಮಣ, ಭರತ, ಶತ್ರುಘ್ನ, ಆಂಜನೇಯ ಸಮೇತನಾಗಿ ದರ್ಶನ ಕೊಟ್ಟಾಗ, ನಾರಾಯಣ ಭಟ್ಟ ಶ್ರೀ ರಾಮನನ್ನು ಮನದಣಿಯೇ ನೋಡಿ, ಕಣ್ತುಂಬಿಕೊಂಡು ಆನಂದ ಬಾಷ್ಪಾ ನಂದವನ್ನು ಸುರಿಸುತ್ತಾ, ಇಂಥ ಪ್ರಭುವ ಕಾಣೆನೋ ಈ ಜಗದೊಳಗಿಂಥ ಪ್ರಭುವ ಕಾಣೆನೋ!! ಅಂಥಾ ಪ್ರಭುವ ಕಾಣೆ ಶಾಂತಿಮೂರುತಿ ಜಗದಂತಾ ರಂಗನು ಲಕ್ಷ್ಮಿಕಾಂತ ಸರ್ವಾಂತರ್ಯಾಮಿ !! ಇಂಥ ಪ್ರಭುವ ಕಾಣೆನೋ!! ಬೇಡಿದಿಷ್ಟಾವ ಕೊಡುವ !ಭಕ್ತರ ತಪ್ಪು ನೋಡದೆ ಬಂದು ಪೊರೆವ ಗಾದಿಕಾರನು ಗರುಡಾರೂಢಾ ಗುಣವಂತ ಮಹಾಪ್ರೌಢಪ್ರತಾಪದಿ ಜಗದಿ ಗೂಢದಿ ಸಂಚರೀಪ. ಪಾಡಿ ಪೊಗಳಿ ಕೊಂಡಾಡುವವರ ಮುಂದಾಡುತಲಿಪ್ಪನು ನಾಡಿನೊಳಿದ್ದರು ಕೇಡಿಗನೇ ನಾಡಾಡಿಗಳಂದದಿ ಈಡುಂಟೆ ನೋಡಿ ವೆಂಕಟನೀಗೆ !! ನಿರ್ದು:ಖಾನಂದ ಭರಿತ ನಿರ್ವದ್ಯ ಸುಖ ಆರ್ದ್ರಾಹೃದಯ ತೋರುತ್ತಾ! ನಿದ್ರೆಯೊಳಿದ್ದವಗುಪದ್ರವ ಕೊಡಿಸಿನೀ ಕ್ಷುದ್ರಾದೈತ್ಯನ ಒಗೆದು ಸುಭದ ಜಗಕಿತ್ತಾ! ನಿರ್ದಯದಲ್ಲಿ ಸಮುದ್ರಶಯನ ಲಕ್ಷ್ಮೀ ಜನಾರ್ದನರವರ ಶೇಷಾದ್ರಿ ನಿವಾಸ !! ಇಂಥಾ ಪ್ರಭುವ ಕಾಣೆನೋ!! ಎಂದು ಸಾಷ್ಟಾಂಗ ಪ್ರಣಾಮ ಮಾಡಿ, ಹೇ ದೇವ ಇಂದು ನನ್ನ ಜನ್ಮವು ಸಫಲವಾಯಿತು ನನ್ನ ಮಾತಾಪಿತರುಗಳ ಆಜ್ಞೆಯನ್ನು ನೆರವೇರಿಸಿದಂತಾಯ್ತು ನಾನು ಈ ಸ್ಥಳದಲ್ಲಿಯೇ ಅನ್ನ ಆಹಾರಾದಿಗಳನ್ನು ತೊರೆದು ನಿನ್ನ ಧ್ಯಾನಸಕ್ತ ನಾಗಿ ತಪಸ್ಸನ್ನಾಚರಿಸುವೆ ಎನ್ನಲು, ' ಕಂದ ಹಾಗೆನ್ನಬೇಡ, ನೀನು ಇನ್ನೂ ಕೆಲವು ಕಾಲ ಶ್ರೀರಾಮ ಮಹಿಮೆ ಕಥೆ ಪೂಜೆಗಳನ್ನು ಜನರಲ್ಲಿ ಉಪದೇಶಿಸುತ್ತಾ ಕಾಲ ಕಳೆಯುತ್ತಿರು. ಅಂತ್ಯದಲ್ಲಿ ನನ್ನನ್ನು ಸೇರುವೆ ನೀನು ಯಾವ ರೀತಿಯಲ್ಲಿ ಯಾವ ಮಾರ್ಗದಲ್ಲಿ ಯಾರ್ಯಾರನ್ನು ಸಂಧಿಸಿ ನೇಮದಿಂದ ಬಂದೇಯೋ ಅದೇ ರೀತಿಯಲ್ಲಿ ಅದೇ ಮಾರ್ಗದಲ್ಲಿ ಅವರುಗಳನ್ನು ಸಂಧಿಸಿ ಹೋಗು, ನಿನ್ನ ಕಾರ್ಯಗಳೆಲ್ಲವೂ ಕೈಗೂಡುವುದು ಎಂದು ಹೇಳಿ ಶ್ರೀರಾಮನು ಅಂತರ್ಧಾನ ನಾದನು. ಇಲ್ಲಿ ನಾರಾಯಣ ಭಟ್ಟನಿಗೆ 'ಶ್ರೀರಾಮನ' ಸಂದರ್ಶನವಾಗುತ್ತಲೇ, ಊರಿನಲ್ಲಿ ತಂದೆ ಕೇಶವ ಭಟ್ಟನ ಮನೆಯಲ್ಲಿ ಐಶ್ವರ್ಯ ತುಂಬಿ ತುಳುಕಾಡು ತ್ತಿತ್ತು. ಇದರ ಆಂತರ್ಯವನ್ನು ಅರಿತ ಕೇಶವ ಭಟ್ಟನು ತನ್ನ ಮಗನ ಆಗಮನ ವನ್ನು ನಿರೀಕ್ಷಿಸುತ್ತಿದ್ದನು. ಎಂಬಲ್ಲಿಗೆ ನಾಲ್ಕನೇ ಅಧ್ಯಾಯ ಸಂಪನ್ನವಾಯಿತು. ( ನಾಳೆಗೆ ಪಂಚಮ ಅಧ್ಯಾಯವನ್ನು ಬರೆಯುವೆ) ಅಲ್ಲಿ ನೋಡಲು ರಾಮ ಇಲ್ಲಿ ನೋಡಲು ರಾಮ ಎಲ್ಲೆಲ್ಲಿ ನೋಡಿದರೂ ಅಲ್ಲಿ ಶ್ರೀರಾಮ !! ಹನುಮದಾದಿ ಸಾಧು, ಜನರು ಅಪ್ಪಿಕೊಂಡು ಕುಣಿಕುಣಿದಾಡಿದರು ಹರುಷದಿಂದ!! ಕ್ಷಣದಲಿ ಪುರಂದರ ವಿಠಲ ರಾಯನು ಕೊನೆಗೊಡೆಯನೆ ತಾನೊಬ್ಬನಾಗಿ ನಿಂತ !! ▬▬ஜ۩۞۩ஜ▬▬▬*▬▬▬ஜ۩۞۩ஜ▬▬ !! ಸರ್ವಂ ಶ್ರೀ ಕೃಷ್ಣಾರ್ಪಣಮಸ್ತು !! 🙏 ಸರ್ವೇ ಜನಾಃ ಸುಖಿನೋ ಭವಂತುಸರ್ವೇ ಸಂತು ನಿರಾಮಯಾಃ 🙏 !! ಧರ್ಮೋ ರಕ್ಷತಿ ರಕ್ಷಿತಃ !! ▬▬▬ஜ۩۞۩ஜ▬▬▬▬▬▬ஜ۩۞۩ஜ▬▬▬ 🙏 ಹರಿ ಸರ್ವೋತ್ತಮ ವಾಯು ಜೀವೋತ್ತಮ 🙏
🕉️ ಜೈ ಶ್ರೀ ರಾಮ🙏 - ShareChat