ShareChat
click to see wallet page
search
#PSSM World ಕಠೋರ, ಸತ್ಯ ಕಠಿಣ, ಸತ್ಯ ಶಾಶ್ವತ, ಸತ್ಯ ಸರಳ, ಸತ್ಯ ಒಂಟಿ, … ಸತ್ಯಂ ಶಿವಂ ಸುಂದರಂ 🙏🏼🙏🏼🌺 ಒಮ್ಮೆ ಸತ್ಯ ಹೇಳಿದ್ದೇ ಆದರೇ ಅದನ್ನು ಪುನರಾವರ್ತಿಸಬೇಕಿಲ್ಲ. ಏಕೆಂದರೆ ಕೆಲವೊಂದು ಸತ್ಯ ತೀವ್ರ ನೋವನ್ನು0ಟು ಮಾಡುತ್ತವೆ.. ಸತ್ಯ ಹೇಳಿದವರು ನಿರಾಳರಾಗುತ್ತಾರೆ ಒಳ್ಳೆಯದೋ, ಕೆಟ್ಟದ್ದೋ ಯಾವುದೋ ಒಂದು ಫಲಿತಾಂಶ ಬಂದೇ ಬರುತ್ತೆ. ಸತ್ಯ ಬೆಳಕಿನೆಡೆಗೆ ಕರೆದೋಯುತ್ತದೆ. ಅದು ಸೂರ್ಯ, ಚಂದ್ರ, ಭೂಮಿ, ಪ್ರಕೃತಿ, ಗಾಳಿಯಷ್ಟೇ ಪ್ರಾಮುಖ್ಯ. ಸತ್ಯ ಅರಿತವ, ನಡೆಯುವವ, ನುಡಿಯುವವ ನಿರ್ಭಯಿ ಯಾಗಿರುತ್ತಾನೆ.. ಏನೇ ತೊಂದರೆ, ಅಡೆತಡೆಗಳು ಬಂದರೂ, ಇದೆಯೋದೆಯದೆ ಸತ್ಯ ಹರಿಶ್ಚಂದ್ರನಂತೆ ಗೆದ್ದೇ ಗೆಲ್ಲುತ್ತಾನೆ. ಸುಳ್ಳು ಹಾಗಲ್ಲ, ಸುಳ್ಳು ಹೇಡಿ, ಒಂದು ಸುಳ್ಳಿಗೆ ಮತ್ತೊಂದು ಸುಳ್ಳು ಅದಕ್ಕೇ ಮಗದೊಂದು ಸುಳ್ಳು…ಕೊನೆಗೆ ಸುಳ್ಳಿನ ಸರಮಾಲೆ…ಸುಳ್ಳಿಗೊಂದು ಸುಳ್ಳು ಬೇಕೇ ಬೇಕು…ಸುಳ್ಳಿಗೆ ಧೈರ್ಯ ವಿಲ್ಲ, ಸುಳ್ಳು ಸಾಬೀತು ಮಾಡಲು ಆಣೆ, ಪ್ರಮಾಣ ಗಳು ಬೇಕು… ಸುಳ್ಳಾಡಿದವ ನಿಶ್ಚಿ0ತೆಯಿಂದ ಇರಲಾರ/ಮಲಗಲಾರ… ಈಗಿನ ಜಗತ್ತು ಸುಳ್ಳಿನ ಬಲ್ಲೂನ್ ನಂತಿದೆ, ಅದರಲ್ಲಿನ ಸತ್ಯದ ಗಾಳಿ ಹೊರಹೋದರೆ ⁉️ಸುಳ್ಳನ್ನು ನಂಬಿಸಲು ಪ್ರತಿ ಬಾರಿ, ನೂರಾರು ಬಾರಿ ಪುನರಾವರ್ತಿಸಲೇಬೇಕು.. (ಉದಾ: ಕೆಲವು ಕಂಪನಿಗಳ ಜಾಹೀರಾತು ಗಳು ) ಹೇಳಿದ ಸುಳ್ಳನ್ನೇ ರಿಪೀಟ್ ಮಾಡ್ತಾ ಮಾಡ್ತಾ ಇದ್ರೆ ಕೇಳುಗರಿಗೆ ಇದು ನಿಜವೇನೋ ಅನ್ನಿಸುತ್ತೆ. ಹೇಳಿದಂತೆ ನಡೆಕೊಳ್ಳೋಕೆ ಸರಕಾರ ಹೇಳೋದು,…. ಸತ್ಯ ಮೇವ ಜಯತೇ. 👍🏼👍🏼👍🏼🌸🌸🌸🙏🏼🙏🏼🙏🏼🌺🌺🌺🫡🫡. ಧನ್ಯವಾದಗಳು ಸರ್. 🤝