ShareChat
click to see wallet page
search
ಜ್ಞಾನೋದಯ ಶ್ರಾವಸ್ತಿಯಲ್ಲಿ ಅತ್ಯಂತ ಶ್ರೀಮಂತ ವ್ಯಾಪಾರಿಯ ಮಗಳು ಪಟಾಚಾರಾ. ಆಕೆ ತುಂಬ ಚೆಲುವೆ. ಎಲ್ಲ ಸಮದ್ಧಿಯಿದ್ದರೂ ವಯಸ್ಸಿನ ಪ್ರಮಾದದಿಂದ ಮನೆಯ ಕಾವಲುಗಾರನನ್ನು ಪ್ರೀತಿಸಿದಳು. ತಂದೆ ಬೇರೊಬ್ಬ ಶ್ರೀಮಂತನ ಮಗನೊಡನೆ ಈಕೆಯ ಮದುವೆಯನ್ನು ನಿಶ್ಚಯ ಮಾಡಿದಾಗ ಒಂದು ದಿನ ಬೆಳಿಗ್ಗೆ ಯಾರಿಗೂ ತಿಳಿಯದಂತೆ ಮನೆಬಿಟ್ಟು ಆ ಕಾವಲುಗಾರನೊಡನೆ ಓಡಿಹೋದಳು. ದೂರದ ಕಾಡಿನ ಪಕ್ಕದ ಹಳ್ಳಿಯಲ್ಲಿ ಇಬ್ಬರೂ ನೆಲೆಯಾದರು. ಗಂಡ ಹೊಲ ಉಳುವನು, ಕಾಡಿನಿಂದ ಸೌದೆ ತರುವನು. ಈಕೆ ನೀರು ತಂದು, ಅಕ್ಕಿಕುಟ್ಟಿ ಅಡುಗೆ ಮಾಡುವಳು. ಹೀಗೆಯೇ ಕೆಲಕಾಲ ಸಂಸಾರ ನಡೆಯಿತು. ಪಟಾಚಾರಾ ಗರ್ಭವತಿಯಾದಳು. ಹೆರಿಗೆಯ ದಿನ ಸಮೀಪಿಸಿದಾಗ ತನ್ನವರು ಯಾರೂ ಇಲ್ಲವೆಂಬ ಅರಿವಾಗಿ ತಾಯಿಯ ಮನೆಗೆ ಹೋಗಲು ಬಯಸಿದಳು. ಗಂಡ ಬೇಡವೆಂದ. ಆಕೆ ಕೇಳದೇ ಹೊರಟು ಬಿಟ್ಟಳು. ದಾರಿಯಲ್ಲಿ ಪ್ರಸವ ವೇದನೆ ಹೆಚ್ಚಾದಾಗ ಗಂಡ ಅಲ್ಲಿಯೇ ಸೊಪ್ಪು, ಪೊದೆಗಳಿಂದ ಹಾಸಿಗೆ ಮಾಡಿದ. ಪಟಾಚಾರಾ ಗಂಡು ಮಗುವಿಗೆ ಜನ್ಮ ನೀಡಿದಳು. ಇನ್ನು ತಾಯಿಯ ಮನೆಗೆ ಹೋಗುವುದೇಕೆ ಎಂದು ಮರಳಿ ಬಂದಳು. ಮರುವರ್ಷ ಮತ್ತೊಂದು ಗರ್ಭ ಮೊಳೆಯಿತು. ಈ ಬಾರಿಯಾದರೂ ಪ್ರಸವದ ಹೊತ್ತಿಗೆ ತಾಯಿಯ ಊರು ಸೇರಬೇಕೆಂದು ಹೊರಟಳು. ಮತ್ತೆ ಕಳೆದ ಬಾರಿಯಂತೆ ದಾರಿಯಲ್ಲೇ ಪ್ರಸವವೇದನೆ ಅಧಿಕವಾಯಿತು. ಗಂಡ ಮೆದುವಾದ ಹಾಸಿಗೆ ಮಾಡಲು ಎಲೆ ಕೀಳುತ್ತಿರುವಾಗ ಸರ್ಪಕಚ್ಚಿ ಸಾವನ್ನಪ್ಪಿದ. ಈಕೆಗೆ ಅದು ತಿಳಿಯಲೇ ಇಲ್ಲ. ಬಹಳ ಸಂಕಟಪಡುತ್ತ ಪಟಾಚಾರ ಮತ್ತೊಂದು ಗಂಡುಮಗುವನ್ನು ಹೆತ್ತಳು. ಆ ಹೊತ್ತಿಗೆ ಭಾರೀ ಮಳೆ ಅಪ್ಪಳಿಸಿತು. ನಿಲ್ಲಲು ಸ್ಥಳವಿಲ್ಲ. ಈಗ ತಾನೇ ಹುಟ್ಟಿದ ಮಗು ಮಳೆಯಲ್ಲಿ ನೆನೆದು ಅರಚುತ್ತಿದೆ, ಅದರ ಮೈ ಜ್ವರದಿಂದ ಕೆಂಡವಾಗಿದೆ. ಎರಡೂ ಮಕ್ಕಳನ್ನು ಎದೆಗವಚಿಕೊಂಡು ಗಂಡನನ್ನು ಹುಡುಕಿದಳು. ಹತ್ತಿರದಲ್ಲೇ ಶವವಾಗಿ ಬಿದ್ದಿದ್ದ ಗಂಡನನ್ನು ನೋಡಿ ಎದೆಗೆಟ್ಟಳು. ಮಕ್ಕಳನ್ನು ಕಟ್ಟಿಕೊಂಡು ತಾಯಿಯ ಊರು ಶ್ರಾವಸ್ತಿಗೆ ನಡೆದಳು. ನಡುವೆ ನದಿ. ಅದಕ್ಕೆ ಭಾರೀ ಮಹಾಪೂರ. ವರ್ಷದ ಮಗುವನ್ನು ಈ ದಂಡೆಯಲ್ಲಿ ಕೂಡ್ರಿಸಿ, ಆಗ ತಾನೇ ಹುಟ್ಟಿದ ಮಗುವನ್ನು ಎತ್ತಿಕೊಂಡು ಆ ದಡಕ್ಕೆ ಹೋದಳು. ಅದನ್ನು ಅಲ್ಲಿ ಮರದ ಕೆಳಗೆ ಮಲಗಿಸಿ ಮತ್ತೆ ಈ ದಡಕ್ಕೆ ಬಂದು ದೊಡ್ಡ ಮಗುವನ್ನು ಕರೆದುಕೊಳ್ಳಲು ಸಾಗಿದಳು. ಅರ್ಧ ನದಿ ದಾಟಿದಾಗ ತಿರುಗಿ ನೋಡಿದರೆ ದೊಡ್ಡ ಹದ್ದೊಂದು ಪುಟ್ಟ ಕೂಸನ್ನು ಎತ್ತಿಕೊಂಡು ಹೋಗುತ್ತಿದೆ. ಅಯ್ಯೋ ಎಂದು ಕೈ ಎತ್ತಿ ಕೂಗಿದಾಗ ಈ ದಡದಲ್ಲಿದ್ದ ಮಗು ತನ್ನನ್ನು ತಾಯಿ ಕರೆಯುತ್ತಿದ್ದಾಳೆ ಎಂದು ಭಾವಿಸಿ ನೀರಿಗಿಳಿದು ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಯಿತು. ಗಂಡ ಹಾವಿಗೆ ಆಹುತಿ, ಒಂದು ಮಗು ಹದ್ದಿನ ಬಾಯಿಗೆ, ಇನ್ನೊಂದು ಪ್ರವಾಹದ ಪಾಲಿಗೆ. ಗಂಡ, ಇಬ್ಬರು ಮಕ್ಕಳನ್ನು ಒಂದೇ ದಿನ ಕಳೆದುಕೊಂಡು ಕಂಗಾಲಾಗಿ ಶ್ರಾವಸ್ತಿ ಸೇರಿದಳು. ತನ್ನ ತಾಯಿಯ ಮನೆಯ ಮುಂದೆ ನೂರಾರು ಜನ. ಹಿಂದಿನ ದಿನದ ಭಾರೀ ಮಳೆಗೆ ಮನೆ ಕುಸಿದು ಎಲ್ಲರೂ ಸತ್ತುಹೋಗಿದ್ದರು. ಪಟಾಚಾರಾ ಸಿಮಿತವನ್ನೇ ಕಳೆದುಕೊಂಡಳು, ಹುಚ್ಚಿಯಾದಳು, ನಗ್ನಳಾದಳು. ಜನ ಆಕೆಗೆ ಕಲ್ಲೆಸೆದು, ರಾಡಿ ಎಸೆದು ತಮಾಷೆ ಮಾಡಿದರು. ಬುದ್ಧದೇವ ಬಂದ. ಕರೆದು ಕರುಣೆಯಿಂದ ಪ್ರೀತಿಯಿಂದ ಮಾತನಾಡಿಸಿದ. ಬದುಕಿನ ಆಸೆಯ ಕೊನರು ಚಿಗುರಿತು. ಒಂದು ದಿನ ಆಕೆ ಕಾಲು ತೊಳೆದುಕೊಳ್ಳುವಾಗ ಹರಿದ ನೀರು ಸ್ವಲ್ಪ ದೂರ ಹೋಗಿ ಇಂಗಿತು. ಇನ್ನಷ್ಟು ನೀರು ಹಾಕಿದರೆ ಮತ್ತಷ್ಟು ದೂರ ಹೋಗಿ ಒಣಗಿತು. ಮತ್ತಷ್ಟು ಹೆಚ್ಚು ನೀರು ಸುರಿದಾಗ ಇನ್ನು ಹೆಚ್ಚು ದೂರ ಹೋಗಿ ಇಂಗಿತು. ತಕ್ಷಣ ಪಟಾಚಾರಾಳಿಗೆ ಜ್ಞಾನೋದಯವಾಯಿತು. ಆಕೆ ಹೇಳಿದಳು, ಮೊದಲನೆ ಸಲ ಸ್ವಲ್ಪ ದೂರವೇ ಹರಿದು ಮರೆಯಾದ ನೀರಿನಂತೆ ಕೆಲವರು ಬಾಲ್ಯದಲ್ಲೇ ಸಾಯುತ್ತಾರೆ. ಎರಡನೇ ಬಾರಿಯ ಹೆಚ್ಚು ಹೆಚ್ಚು ನೀರಿನಂತೆ ಕೆಲವರು ಪ್ರಾಯಕ್ಕೆ ಬಂದು ಸಾಯುತ್ತಾರೆ, ಮೂರನೇ ಬಾರಿಯ ಮತ್ತಷ್ಟು ಹೆಚ್ಚು ನೀರಿನಂತೆ ಕೆಲವರು ವೃದ್ಧಾಪ್ಯದವರೆಗೂ ಬದುಕಿ ಸಾಯುತ್ತಾರೆ. ಅಂತೂ ಸಾಯದೇ ಉಳಿದವರು ಯಾರೂ ಇಲ್ಲ . ಅದನ್ನು ಕೇಳಿ ಬುದ್ಧ ಹೇಳಿದ, ಮಗೂ, ಈ ತತ್ವವನ್ನು ತಿಳಿದು ಒಂದೇ ಕ್ಷಣ ಬದುಕಿರುವುದು, ಅದನ್ನು ತಿಳಿಯದೇ ನೂರು ವರ್ಷ ಬದುಕಿರುವುದಕ್ಕಿಂತ ಉತ್ತಮ. ❤️🙏🌷 ವಿಮಲ್ ನ್ಯೂಟ್ರಿಷನ್ ಸೆಂಟರ್ 🌷🙏❤️ #🎥 Motivational ಸ್ಟೇಟಸ್ #👦🏻 Bad Boyz ಸ್ಟೇಟಸ್ #✍️ ಮೋಟಿವೇಷನಲ್ ಕೋಟ್ಸ್ #😍 ನನ್ನ ಸ್ಟೇಟಸ್ #✍️ ಮೋಟಿವೇಷನಲ್ ಕೋಟ್ಸ್
🎥 Motivational ಸ್ಟೇಟಸ್ - ShareChat