#💐ಮಂಗಳವಾರದ ಶುಭಾಶಯಗಳು ಗಾನಯೋಗಿ ಪಂಚಾಕ್ಷರಿ ಗವಾಯಿಗಳ ಶಿಷ್ಯರಾಗಿ ಕರ್ನಾಟಕ ಹಾಗೂ ಹಿಂದೂಸ್ತಾನಿ ಸಂಗೀತ ಪದ್ಧತಿಯಲ್ಲಿ ಪ್ರಭುತ್ವ ಗಳಿಕೆ. ಹಾರ್ಮೋನಿಯಂ, ತಬಲಾ, ಪಿಟೀಲು, ಸಾರಂಗಿ ವಾದ್ಯಗಳಲ್ಲಿ ಪರಿಣತಿ ಪಡೆದ ಉಭಯಗಾನ ವಿಶಾರದ ಡಾ. ಪುಟ್ಟರಾಜ ಗವಾಯಿ ಅವರು ಗ್ವಾಲಿಯರ್ ಘರಾಣೆಯ ಸಮರ್ಥ ಸಾಧಕರು.ವೀರೇಶ್ವರ ಪುಣ್ಯಾಶ್ರಮದ ಸಮರ್ಥ ಉತ್ತರಾಧಿಕಾರಿಯಾಗಿ ಅನೇಕ ಸಂಗೀತ ಕಲಾವಿದರನ್ನು ರೂಪಿಸಿದ ಕೀರ್ತಿಗೆ ಭಾಜನರು.ಡಾ. ಪುಟ್ಟರಾಜ ಗವಾಯಿಗಳ ಸಾಧನೆ ಸಿದ್ಧಿಗಳಿಗೆ ಅನೇಕ ಪ್ರಶಸ್ತಿ-ಗೌರವಗಳು ಸಹ ದೊರೆತಿವೆ. ಅಂತಹ ಮಹಾನ್ ಸಾಧಕರ ಜನ್ಮದಿನದ ಅಂಗವಾಗಿ ಅವರಿಗೆ ಶುಭಾಶಯವನ್ನು ಕೋರೋಣ. ಅವರ ಸಾಧನೆಗಳನ್ನು ಸ್ಮರಿಸೋಣ ಅವರ ಸಾಧನೆಗಳ ಹಾದಿಯಲ್ಲಿ ನಾವು ಸಾಗೋಣ ಎನ್ನುತ್ತಾ #ನಿಮ್ಮ ಸ್ನೇಹಿತ ಅನಿಲ್ ಮಲ್ನಾಡ್


