#📜ಪ್ರಚಲಿತ ವಿದ್ಯಮಾನ📜
ಅಣ್ಣಾವ್ರ ಅಭಿಮಾನಿಗಳ ಬಹು ದಿನಗಳ ಆಸೆ ಈಡೇರುವ ದಿನ ಸನ್ನಿಹಿತ
ಅಣ್ಣಾವ್ರ ಬಗ್ಗೆ ನನ್ನ "ಅಂತರಂಗದ ಅಣ್ಣ" ಪುಸ್ತಕವೂ ಸೇರಿದಂತೆ ನೂರಾರು ಪುಸ್ತಕಗಳು ಬಂದಿವೆ, ಮುಂದೆ ಇನ್ನೂ ಎಷ್ಟೋ ಪುಸ್ತಕಗಳು ಬರಬಹುದು. ಆದರೆ ಕಳೆದ 70-80ರ ದಶಕದಲ್ಲಿ "ವಿಜಯ ಚಿತ್ರ" ನಿಯತಕಾಲಿಕೆಗೆ ಸ್ವತಃ ಡಾ.ರಾಜಕುಮಾರ್ ಅವರೇ ಕುಳಿತು ಹೇಳಿ, ಚಿ.ಉದಯಶಂಕರ್ ಅವರ ಸಹೋದರ, ಸಿನಿಮಾ ನಿರ್ದೇಶಕ ಚಿ.ದತ್ತರಾಜ್ ಅವರ ಬಳಿ ಬರೆಸಿದ "ಕಥಾನಾಯಕನ ಕಥೆ" ಅನ್ನುವ ಧಾರಾವಾಹಿ ರೂಪದ ಅಣ್ಣಾವ್ರ ಆತ್ಮ ಕಥನ ಆಗ ಓದಿದ್ದವರನ್ನು ಬಿಟ್ಟರೆ ಇನ್ಯಾರಿಗೂ ಲಭ್ಯವಿರಲಿಲ್ಲ!
ಬಹಳಷ್ಟು ಅಭಿಮಾನಿಗಳು ಅದನ್ನು ಓದಲು ಕಾತುರರಾಗಿದ್ದಾರೆ. ನಾನು ಇದನ್ನು ಪುಸ್ತಕ ರೂಪದಲ್ಲಿ ತರಲು ಬಹಳಷ್ಟು ಪ್ರಯತ್ನಿಸಿದ್ದೆ. ಆದರೆ ಸಂಪೂರ್ಣ ಬರವಣಿಗೆ ದೊರಕದ ಕಾರಣ ಅದು ಸಾಧ್ಯವಾಗಿರಲಿಲ್ಲ. ನನ್ನನ್ನು ಹಂಪಿ ವಿಶ್ವವಿದ್ಯಾಲಯದ ಡಾ.ರಾಜಕುಮಾರ್ ಅಧ್ಯಯನ ಪೀಠದ ಸಲಹಾ ಸಮಿತಿ ಸದಸ್ಯನನ್ನಾಗಿ ನೇಮಿಸಿದ ಮೇಲೆ ಈ ಕೆಲಸ ಆಗಲೇಬೇಕೆಂದು ಹಟ ತೊಟ್ಟು ಎಲ್ಲಾ ಪ್ರತಿಗಳನ್ನು ಹುಡಕ ತೊಡಗಿದೆವು.
ಕಡೆಗೆ ಬೆಂಗಳೂರಿನ ರವಿಶಂಕರ್ ಅನ್ನುವ ಅಣ್ಣಾವ್ರ ಅಭಿಮಾನಿಯೊಬ್ಬರ ಬಳಿ ಸಂಪೂರ್ಣ ಬರಹಗಳಿವೆ ಅನ್ನುವ ವಿಷಯ ಇನ್ನೊಬ್ಬ ಅಭಿಮಾನಿಗಳಾಗ ಕೆ ಇ ಬಿ ರಾಜು ಅನ್ನುವವರಿಂದ ತಿಳಿದಾಗ ಅವರ ಮೂಲಕ ರವಿಶಂಕರ್ ಅವರನ್ನು ನಾನು ಮತ್ತು ಅಧ್ಯಯನ ಪೀಠದ ಅಧ್ಯಕ್ಷರು, ಚಿಂತಕರು, ಸಾಹಿತಿಗಳು ಮತ್ತು ಪ್ರಾಧ್ಯಾಪಕರೂ ಆದ ಶ್ರೀ ಎ ಎಸ್ ಪ್ರಭಾಕರ್ ಅವರು ಭೇಟಿಮಾಡಿ, ಆ ಪ್ರತಿಗಳನ್ನು ಪಡೆದೆವು. ಅದರ ಪ್ರತಿಫಲ ಈಗ "ಕಥಾನಾಯಕನ ಕಥೆ" ಪುಸ್ತಕ ರೆಡಿಯಾಗಿದೆ.
ಇದೇ ತಿಂಗಳು ಬೆಂಗಳೂರಿನಲ್ಲಿ ಪುಸ್ತಕ ಬಿಡುಗಡೆಯಾಗುವುದು ನಿರ್ಧಾರವಾಗಿದೆ. ಶಿವರಾಜ್ಕುಮಾರ್ ಅವರ ಡೇಟಿಗಾಗಿ ಕಾಯುತ್ತಿದ್ದೇವೆ, ಅವರ ಡೇಟ್ ನೋಡಿಕೊಂಡು ಬಿಡುಗಡೆ ಕಾರ್ಯ ಹಮ್ಮಿಕೊಳ್ಳುತ್ತೇವೆ.
- ಪ್ರಕಾಶ್ ರಾಜ್ ಮೇಹು, ನಿರ್ದೇಶಕ
#day #cherished #wish #Rajkumar #fans will #come #true #near #PrakashRajMehu #sandalwood #entertainment #malgudiexpress #malgudinews #news #TopNews


