#PSSM World . ಮೊದಲು ನಂಬುತ್ತಿರಲಿಲ್ಲ . ಒಬ್ಬರು ಮಾಡಿದ ತಪ್ಪುಗಳನ್ನು ಖಂಡಿಸುತ್ತಿದ್ದೆ. ಅದಕ್ಕೆ ಅವರು ನನ್ನ ಮೇಲೆ ವಾಮಾಚಾರ ಪ್ರಯೋಗಿಸಿದ್ದಾರೆ ಹಣಕಾಸಿನಲ್ಲಿ ನಷ್ಟ… ತುಂಬಾ ಅನಾರೋಗ್ಯ. ಯಾವ ಕೆಲಸಕ್ಕೆ ಕೈಹಾಕಿದರು ವಿಫಲ ಮನಸ್ಸು ಸದಾ ಒತ್ತಡ ದಲ್ಲಿರುತ್ತದೆ ಧನ್ಯವಾದಗಳು?
ನಿಜ , ವಾಮಾಚಾರ ನಿಜ..ಪಾಸಿಟಿವ್ ಎನರ್ಜಿ ಒಳ್ಳೆಯದು ಹಾರೈಕೆ ಇದ್ದ ಮೇಲೆ-ನೆಗೆಟಿವ್ ಎನರ್ಜಿ, ಕೆಟ್ಟದು, ಶಾಪ ಇದ್ದೆ ಇರುತ್ತದೆ…ಒಂತರಾ ಬೆಳಕು ಕತ್ತಲು ತರಹ…
ಒಬ್ಬರ ಮೇಲೆ ವಾಮಾಚಾರ ನಡೆದಾಗ ಹಣಕಾಸಿನ, ಆರೊಗ್ಯದ , ಕೌಟುಂಬಿಕ, ಒತ್ತಡದ ತೊಂದರೆ ಸಾಮಾನ್ಯ…
ಇದಕ್ಕೆ 2ರೀತಿಯ ಪರಿಹಾರ ಯೋಚನೆ ಮಾಡಿದರೆ
…ನೆಗೆಟಿವ್ ಎನರ್ಜಿ ಗೆ ವಿರುದ್ಧವಾಗಿ ನೆಗೆಟಿವ್ ಎನರ್ಜಿ ಯನ್ನೇ ಬಳಸುವುದು .. ನಿಮಗೆ ವಾಮಾಚಾರ ಮಾಡಿದವರ ಮೇಲೆ ನೀವು ವಾಮಾಚಾರ ಮಾಡುವುದು… ಹೀಗೆ ಮಾಡುವುದು ನಿಮ್ಮ ಬದುಕನ್ನು ಸರ್ವನಾಶ ಮಾಡಿಕೊಂಡಂತೆ… ಹಾಗಾಗಿ ಈ ತರಹದ ಯೋಚನೆ ಬೇಡ..
ಇನ್ನು ನೆಗೆಟಿವ್ ಎನರ್ಜಿ ವಿರುದ್ಧ ಪಾಸಿಟಿವ್ ಎನರ್ಜಿ ಬಳಸುವುದು…. ಹೆಚ್ಚು ಹೆಚ್ಚು ದೇವರ ಕಾರ್ಯ ಮಾಡುವುದು ಅದಕ್ಕಿಂತ ಮುಖ್ಯವಾಗಿ ದಿನಾಲೂ ದೇವಸ್ಥಾನಕ್ಕೆ ಹೋಗಿ ಸ್ವಲ್ಪ ಕಾಲ ಅಲ್ಲಿ ಇರುವುದು… ನಂಬಿದ ದೇವರಿಗೆ ಸಂಪೂರ್ಣ ಶರಣಾಗುವುದು… ಯಾವಾಗಲೂ ದೇವರ ಸ್ಮರಣೆ ಇರಲಿ…ಪಾಸಿಟಿವ್ ಎನರ್ಜಿಯ ವಸ್ತುಗಳು (ತಾಯತ, ಕುಂಕುಮ, ಇತ್ಯಾದಿ) ಜೊತೆಗೆ ಇರಲಿ…
ಒಂದು ನೆನಪಿರಲಿ… ಒಬ್ಬ ವ್ಯಕ್ತಿಗೆ ಒಂದು ಪೆಟ್ಟು ಹೊಡೆದರೆ ಒಂದೊ ಅವನು ವಾಪಸ್ ಇನ್ನೊಂದೆರಡು ಪೆಟ್ಟು ಹೊಡೆಯಬಹುದು ಅದು ಕೇವಲ ಆ ಸಮಯದಲ್ಲಿ ಮಾತ್ರ ನೋವು…ಅದೇ ವಾಮಾಚಾರ ಮಾಡಿದರೆ ಅವರ ಈ ಜನ್ಮದಲ್ಲಿ ಮಾತ್ರ ಅಲ್ಲ ಮುಂದಿನ ಜನ್ಮದಲ್ಲಿ. , ಅವರ ಮುಂದಿನ ಪೀಳಿಗೆಯೂ ಅನುಭವಿಸಬೇಕಾಗುತ್ತದೆ . ನೀವು ಕೇಳಬಹುದು ವಾಪಸ್ ಹೊಡೆಯದೇ ಅವರಿಗೆ ನೋವು ಆಗುತ್ತದೆ ಅಂತ ಕರ್ಮಫಲ ಎನ್ನುವುದು ಬಿಡಲು ಸಾಧ್ಯವೇ ಇಲ್ಲ…
ನನ್ನ ಮೇಲೂ ಕೆಟ್ಟ ದೃಷ್ಟಿ ಆಗಿದೆ ಅನ್ನುವ ಮಾತಿದೆ…ತಲೆ ಕೆಡಿಸಿಕೊಳ್ಳಲಿಲ್ಲ .. ತಲೆ ಭಾರವನ್ನು ಶ್ರೀ ಬ್ರಹ್ಮಲಿಂಗೇಶ್ವರ, ಅಣ್ಣಪ್ಪ ಸ್ವಾಮಿ, ವೀರಭದ್ರ ಸ್ವಾಮಿಯ ಪಾದದ ಮೇಲೆ ಇಟ್ಟಿದ್ದೆನೆ … ಇವಾಗ ಕೆಟ್ಟತನದಲ್ಲೂ ಒಳ್ಳೆಯದು ಆಗುತ್ತಾ ಇದೆ😊😊😊
ಶುಭ ವಾಗಲಿ….

