#💐ಮಂಗಳವಾರದ ಶುಭಾಶಯಗಳು ಕಾಡನ್ನು ಹಾಳು/ನಾಶ ಮಾಡುವುದರಿಂದ ಅಲ್ಲಿನ ವನ್ಯ ಜೀವಿಗಳಿಗೆ ತುಂಬಾ ತೊಂದರೆ. ಆದ್ದರಿಂದ ಭವಿಷ್ಯದ ಪೀಳಿಗೆಗಾಗಿ ವನ್ಯ ಜೀವಿಯನ್ನು ಸಂರಕ್ಷಿಸಲು ಅನೇಕ ಪ್ರಾಣಿ ಅಭಯಾರಣ್ಯಗಳು, ಸಂರಕ್ಷಣಾಲಯಗಳು ಕಾಳಜಿ ವಹಿಸುತ್ತಿವೆ. ನಾವೆಲ್ಲರೂ ಒಂದಾಗಿ ವನ್ಯಜೀವಿಗಳನ್ನು ಸಂರಕ್ಷಿಸಲು ಮುಂದಾಗದಿದ್ದರೆ, ಇವೆಲ್ಲವನ್ನೂ ನಾವು ಕಳೆದುಕೊಳ್ಳಬೇಕಾಗುತ್ತದೆ. ಒಂದು ಬಾರಿ ಪ್ರಾಣಿ, ಪಕ್ಷಿಗಳು ವಿನಾಶ ಹೊಂದಿದರೆ, ಶಾಶ್ವತವಾಗಿ ಕಳೆದುಕೊಂಡಂತೆ. ಅದು ಆಗದಂತೆ ಕಾಳಜಿವಹಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಅಳಿವಿನಂಚಿನಲ್ಲಿರುವ ವನ್ಯಜೀವಿಗಳನ್ನು ಉಳಿಸುವುದಕ್ಕಾಗಿ ವನ್ಯಜೀವಿ ದಿನವಾದ ಇಂದು ಎಲ್ಲರೂ ಜಾಗೃತಿ ಮೂಡಿಸೋಣ. ಎನ್ನುತ್ತಾ ನನ್ನೆಲ್ಲ ಸ್ನೇಹಿತರಿಗೆ ವಿಶ್ವ ವನ್ಯಜೀವಿ ದಿನದ ಶುಭಾಶಯಗಳು #ನಿಮ್ಮ ಸ್ನೇಹಿತ ಅನಿಲ್ ಮಲ್ನಾಡ್


