ShareChat
click to see wallet page
search
#ದಿನಕ್ಕೊಂದು ಕಥೆ #🔱 ಭಕ್ತಿ ಲೋಕ ಅಹಂಕಾರ ಅಳಿಯಬೇಕು :- ಅಹಂಕಾರ ಬಹಳ ಕೆಟ್ಟದ್ದು, ಇದು ನೆತ್ತಿಗೇರಿದರೆ ಮನುಷ್ಯ ಬಾಗುವುದಿಲ್ಲ ಅಹಂಕಾರ ಅವನ ಅವನತಿಗೂ ಕಾರಣ ವಾಗುತ್ತದೆ. ಏನು ಬೇಕಾದರೂ ಸಾಧಿಸಬಲ್ಲೆ ಅಂದರೆ ಅದು ಅವನ ನಂಬಿಕೆ, ನನ್ನಿಂದಲೇ ಎಲ್ಲಾ ಆಗಿದ್ದು ಎಂದು ತಿಳಿದರೆ ಅದು ಅಹಂಕಾರ. ಮಹಾಭಾರತದ ಕುರುಕ್ಷೇತ್ರದ ಯುದ್ಧ ನಡೆಯುತ್ತಿರುವ ಸಮಯ. ಮಹಾರತಿ ಕರ್ಣನಿಗೂ, ಅರ್ಜುನನಿಗೂ ನೇರ ಹಣಾಹಣಿ ಆರಂಭವಾಗಿದೆ. ಅರ್ಜು ನನ ಸಾರಥಿ ಶ್ರೀಕೃಷ್ಣ. ಅರ್ಜುನ ಬಾಣ ಬಿಟ್ಟಾಗ ಕರ್ಣನ ರಥ ಬಹಳ ದೂರ ಹೋಗುತ್ತಿತ್ತು. ಆದರೆ ಕರ್ಣ ಬಾಣ ಬಿಟ್ಟಾಗ ಅರ್ಜುನನ ರಥ ಏಳು ಅಡಿ ಮಾತ್ರ ಹೋಗುತ್ತಿತ್ತು. ಆದರೂ ಕೃಷ್ಣ ವಾಹ್ ಕರ್ಣ ನೀನೆಂಥಾ ಪರಾಕ್ರಮಿ ಎಂದು ಹೇಳುತ್ತಿದ್ದ ಇದು ಪ್ರತಿ ಸಲವು ಪುನರಾವರ್ತನೆಯಾ ಗುತ್ತಿ ತ್ತು. ಇದರಿಂದ ಅರ್ಜುನನ ಮನಸ್ಸಿಗೆ ಕಿರಿಕಿರಿ ಆಯ್ತು ಅವನು ನೇರವಾಗಿ ಕೇಳಿಬಿಟ್ಟ. ಕೃಷ್ಣ ನಾನು ಕರ್ಣನ ಮೇಲೆ ಬಾಣ ಬಿಟ್ಟಾಗ 20 ಅಡಿಗಿಂತ ದೂರ ಹೋಗುತ್ತದೆ . ಅದೇ ಕರ್ಣ ಬಾಣ ಬಿಟ್ಟಾಗ ನಮ್ಮ ರಥ ಏಳು ಅಡಿಯಷ್ಟು ಮಾತ್ರ ಹಿಂದೆ ಹೋಗುತ್ತದೆ. ಆದರೂ ನೀನು ಕರ್ಣನನ್ನೇ ವೀರ ಎಂದೆಲ್ಲಾ ಹೊಗಳುತ್ತಿಯಲ್ಲಾ? ಎಂದನು. ಇದನ್ನು ಕೇಳಿದ ಕೃಷ್ಣ ಹೇಳಿದ, ಅರ್ಜುನ ನಿನ್ನ ರಥದ ಮೇಲೆ ಹನುಮನಿದ್ದಾನೆ, ಜೊತೆಗೆ ನಾನಿದ್ದೇನೆ, ಆದರೆ ಕರ್ಣ ಒಬ್ಬಂಟಿ ಯಾಗಿ ಯುದ್ಧ ಮಾಡುತ್ತಿದ್ದಾನೆ . ಆದರೆ ಕರ್ಣ ಬಿಟ್ಟ ಬಾಣದಿಂದ ನಮ್ಮ ರಥ 7 ಅಡಿ ಮಾತ್ರ ಹಿಂದಕ್ಕೆ ಹೋಗುತ್ತಿದೆ ಎಂದರೆ ಅವನೆಷ್ಷು ಪರಾಕ್ರಮಿ ನೀನೇ ಹೇಳು ಎಂದನು. ಕೃಷ್ಣನ ಮಾತು ಅರ್ಥವಾಗಿ ಅರ್ಜುನ ತಲೆತಗ್ಗಿ ಸಿದ. ಅರ್ಜುನನಿಗೆ ಇನ್ನೊಂದು ಸಲ ಹೀಗೆ ಅಹಂಕಾರ ಬಂದಿತು. ತಾನು ಮಾತ್ರ ಶ್ರೀ ಕೃಷ್ಣನ ಅತ್ಯಂತ ನಿಷ್ಠಾವಂತ ಭಕ್ತ. ನನಗಿರುವಷ್ಟು ಭಕ್ತಿಯನ್ನು ಕೃಷ್ಣನ ಮೇಲೆ ಯಾರೂ ತೋರಿಸಲು ಸಾಧ್ಯವಿಲ್ಲ ಎಂಬ ಭಾವನೆ ಅವನಲ್ಲಿ ಮೊಳಕೆ ಯೊಡದಿತ್ತು. ಈ ವಿಚಾರ ಸರ್ವಾಂತರ್ಯಾಮಿ ಕೃಷ್ಣನಿಗೆ ತಿಳಿಯಿತು. ಅದನ್ನು ಹೋಗಲಾಡಿಸಲು ಅರ್ಜುನನನ್ನು ತಿರುಗಾಡಲು ಕರೆದುಕೊಂಡು ಹೊರಟನು. ಹೀಗೆ ಹೋಗು ತ್ತಿರುವಾಗ ಅಲ್ಲೊಬ್ಬ ಸಾತ್ವಿಕ ಬಡ ಬ್ರಾಹ್ಮಣ ಇದ್ದನು. ಅವ ನು ವಿಷ್ಣುವಿನ ಭಕ್ತನಾಗಿದ್ದನು. ಯಾವುದೇ ಜೀವಿಯನ್ನು ಹಿಂಸಿಸುವುದಿಲ್ಲ ಎಂಬುದು ಅವನ ನಿಯಮವಾಗಿತ್ತು. ಆಶ್ಚರ್ಯ ಎಂದರೆ ಹಸಿ ಹುಲ್ಲಿನಲ್ಲಿ ಜೀವ ಇರುತ್ತೆ ಎಂದುಕೊಂಡು ಹಸಿ ಹುಲ್ಲನ್ನು ತಿನ್ನುತ್ತಿರಲಿಲ್ಲ ಒಣಗಿದ ಹುಲ್ಲುಗಳನ್ನೇ ಆಹಾರವಾಗಿ ಸೇವಿಸುತ್ತಿದ್ದ. ಇನ್ನೂ ಒಂದು ವಿಚಿತ್ರ ಎಂದರೆ ಅವರ ಸೊಂಟದಲ್ಲಿ ಹರಿತವಾದ ಕತ್ತಿ ಇಟ್ಟುಕೊಂಡಿದ್ದ. ಅರ್ಜುನನಿಗೆ ಅನಿಸಿತು. ಈ ಮನುಷ್ಯ ತಿನ್ನುವುದು ಒಣ ಹುಲ್ಲು, ಯಾವುದೇ ಜೀವಿಗೂ ಹಿಂಸೆ ಮಾಡುವುದಿಲ್ಲ ಹೀಗಿರುವಾಗ ಇವನ ಸೊಂಟದಲ್ಲಿ ತಲೆಯನ್ನೆ ಕತ್ತರಿಸುವಂತ ಕತ್ತಿ ಇಟ್ಟುಕೊಂಡಿದ್ದಾನೆ ಯಾಕೆ? ಈ ಪ್ರಶ್ನೆ ಬಂದಿತು. ಕೃಷ್ಣನಲ್ಲಿ ಕೇಳಿದ. ಮುಗುಳ್ನಗುತ್ತಾ ನೀನೇ ಹೋಗಿ ಬ್ರಾಹ್ಮಣನನ್ನೆ ಕೇಳು ಎಂದ. ಬ್ರಾಹ್ಮಣನ ಬಳಿ ಹೋದ ಅರ್ಜುನ, ಸ್ವಾಮಿ ಅಹಿಂಸೆ ನಿಮ್ಮ ವ್ರತ ಇದಕ್ಕಾಗಿ ಹಸಿ ಹುಲ್ಲನ್ನು ತಿನ್ನದೆ ಒಣಹಲ್ಲನ್ನು ತಿನ್ನುತ್ತೀರಿ ಹೀಗಿರುವಾಗ ಇಷ್ಟು ಚೂಪಾದ ಕತ್ತಿಯನ್ನು ನಿಮ್ಮ ಸೊಂಟದಲ್ಲಿ ಏಕೆ ಇಟ್ಟುಕೊಂಡಿದ್ದೀರಿ? ಆ ಬ್ರಾಹ್ಮಣ ಹೇಳಿದ, ನನಗೆ ನಾಲ್ಕು ಜನ ಶತ್ರುಗಳಿದ್ದಾರೆ ಅವರೆಲ್ಲಾದರೂ ನನ್ನ ಕಣ್ಣೀಗೆ ಬಿದ್ದರೆ, ಅವರಿಗೆ ಶಿಕ್ಷೆ ಕೊಡುವುದಕ್ಕೆ ಈ ಹರಿತವಾದ ಕತ್ತಿಯನ್ನು ನನ್ನ ಬಳಿ ಇಟ್ಟುಕೊಂಡಿದ್ದೇನೆ ಎಂದನು. ಮತ್ತೂ ಆಶ್ಚರ್ಯ ದಿಂದ ಅರ್ಜುನ ಕೇಳಿದ ಆ ನಾಲ್ಕು ಜನ ಯಾರು ಎಂದು, ಅವರಲ್ಲಿ ಮೊದಲನೆಯವನು ನಾರದ, ನಾರದರಾ?, ಅವರೇನು ಮಾಡಿದರು? ನಾರದಗೆ ಮಾಡುವುದಕ್ಕೆ ಬೇರೆ ಕೆಲಸವಿಲ್ಲ. ನನ್ನ ಸ್ವಾಮಿಯನ್ನು, ಹಗಲು ರಾತ್ರಿ, ನಾರಾಯಣ, ನಾರಾಯಣ, ನಾರಾಯಣ, ನಾರಾಯಣ ಎಂದು ಸ್ಮರಣೆ ಮಾಡುತ್ತಾ ನನ್ನ ಭಗವಂತನ ವಿಶ್ರಾಂತಿಯನ್ನು, ನಿದ್ದೆಯನ್ನು ಕಿತ್ತುಕೊಂಡಿದ್ದಾನೆ. ಅವನಿಗೆ ಭಗವಂತನ ಮೇಲೆ ಸ್ವಲ್ಪವೂ ಕರುಣೆ ಇಲ್ಲ ಆದ್ದರಿಂದ ನಾರದ ಕಂಡರೆ ಅವನನ್ನು ಕತ್ತಿಯಿಂದ ವಿಚಾರಿಸುತ್ತೇನೆ ಎಂದ. ಈ ಕಥೆಯನ್ನು ಬರಹ ರೂಪಕ್ಕೆ ತಂದವರು — ಆಶಾ ನಾಗಭೂಷಣ. ಅರ್ಜುನ ಕೇಳಿದ ಎರಡನೆಯವರು ಯಾರು? ಮಹಾ ಅಹಂಕಾರಿ ದ್ರೌಪದಿ ಎಂದಾಗ ಆಶ್ಚರ್ಯದಿಂದ ಅರ್ಜುನ ಕೇಳಿದ ಅವಳೇನು ಮಾಡಿದಳು?. ಅವಳಾ ನನ್ನ ಸ್ವಾಮಿ ಮಲಗಿರುವಾಗ ಹೊತ್ತು ಗೊತ್ತಿಲ್ಲದೆ ಕೂಗಿ ಕರೆಯುತ್ತಾಳೆ. ಪಾಂಡವರು ಕಾಮ್ಯಕ ವನದಲ್ಲಿದ್ದಾಗ ದೂರ್ವಾಸಮುನಿಗಳ ಕೋಪಕ್ಕೆ ತುತ್ತಾಗಬೇಕಿತ್ತು. ಆ ದ್ರೌಪತಿ ನನ್ನ ಸ್ವಾಮಿ ಯನ್ನು ಕರೆದು ನಿದ್ರಾಭಂಗ ಮಾಡಿದಳು, ಇಷ್ಟೇ ಅಲ್ಲದೆ ತಾನು ತಿಂದು ಉಳಿದ ಎಂಜಲು ಅನ್ನ ತಿನ್ನಿಸಿದಳು. ಅವಳು ಸಿಕ್ಕಲಿ ದಂಡಿಸುತ್ತೇನೆ ಎಂದ. ಈಗ ಅರ್ಜುನ ಕೇಳಿದ ಹಾಗಾದರೆ ನಿಮ್ಮ ಕೋಪಕ್ಕೆ ಗುರಿಯಾಗಿರುವ ಮೂರನೇ ವ್ಯಕ್ತಿ ಯಾರು, ಅದೇ ಆ ಮಹಾ ಹಠವಾದಿ ಪ್ರಹಲ್ಲಾದ, ಇವನಂತು ಮಹಾ ಕ್ರೂರಿ, ನನ್ನ ಸ್ವಾಮಿಯು ಪ್ರಹಲ್ಲಾದನನ್ನು ರಕ್ಷಿಸಲು, ಭಾರಿ ಗಾತ್ರದ ಕಂಬವನ್ನು ಸೀಳಿಕೊಂಡು ಬರಬೇಕಾಯಿತು. ಕುದಿಯುವ ಎಣ್ಣೆಕೊಪ್ಪರಿಗೆಯಲ್ಲಿ ಕೈ ಹಾಕಬೇಕಾಯಿತು. ವಿಷದ ಹಾವುಗಳ ನಡುವೆ ಹೋಗಬೇಕಾಯಿತು. ಆನೆ ಕಾಲಿನಿಂದ ತುಳಿಸಿ ಕೊಳ್ಳಬೇಕಾಯಿತು. ಇವನಂತೂ ಎಷ್ಟೊಂದು ಕಷ್ಟ ಕೊಟ್ಟಿದ್ದಾನೆ ಆದ್ದರಿಂದ ಪ್ರಹ್ಲಾದವನ್ನು ಬಿಡುವುದಿಲ್ಲ ಎಂದ. ಅರ್ಜುನನು ಕೇಳಿದ ನಿನ್ನ ಕೋಪಕ್ಕೆ ಗುರಿಯಾದ ನಾಲ್ಕನೇ ವ್ಯಕ್ತಿ ಯಾರು ಎಂದನು. ಎದುರಿಗೆ ನಿಂತು ಪ್ರಶ್ನೆ ಕೇಳುತ್ತಿರು ವನು ಅರ್ಜುನ ಎಂದು ಗೊತ್ತಿಲ್ಲದೆ, ಆ ಬ್ರಾಹ್ಮಣ ಹೇಳಿದ,. ಅವನೇ ಆ ನೀಚ ಅರ್ಜುನ ಎಂದನು. ಆಶ್ಚರ್ಯವಾದರೂ ತೋರಗೊಡದೆ, ಅರ್ಜುನನಾ, ಅವನು ಏನು ಮಾಡ್ದ?ಅವನಾ, ಕುರುಕ್ಷೇತ್ರ ಯುದ್ಧದಲ್ಲಿ, ಭಗವಂತನನ್ನು , ತನ್ನ ರಥದ ಸಾರಥಿ ಯನ್ನಾಗಿ ಮಾಡಿಕೊಂಡು ರಥ ಓಡಿಸುವ ಕೆಲಸ ಮಾಡಿಸಿದ್ದಾನೆ. ಅವನು ಸಿಕ್ಕರು ಬಿಡುವುದಿಲ್ಲ ಎಂದನು. ಬ್ರಾಹ್ಮಣನ ಮಾತುಗಳನ್ನು ಕೇಳಿ, ತಾನೇ ಕೃಷ್ಣನ ದೊಡ್ಡ ಭಕ್ತ ಎಂದು ತಿಳಿದಿದ್ದ ಅರ್ಜುನನಿಗೆ ನೀರ ಮೇಲಣ ಗುಳ್ಳೆ ನಿಜವಲ್ಲ ಹರಿಯೇ ಎಂಬುದು. ತಿಳಿಯಿತು. 'ನಾನು' ಎಂಬು ದು ಹೋದರೆ ಭಗವಂತ ಎಲ್ಲರಿಗೂ ಅರ್ಥವಾಗುತ್ತಾನೆ. ಭಗವಂತನು ಭಕ್ತರು ಪ್ರೀತಿಯಿಂದ ಏನೇ ಕೊಟ್ಟರು ಸ್ವೀಕರಿಸುತ್ತಾನೆ. ಎಂಜಲನ್ನು ಕೊಟ್ಟರು ಸ್ವೀಕರಿಸುತ್ತಾನೆ. ರಥದ ಸಾರಥಿ ಯಾಗುತ್ತಾನೆ, ಮರದ ಕೆಳಗೆ ಮಲಗುತ್ತಾನೆ, ಪುಟ್ಟ ಪಕ್ಷಿ ಸಹಾಯ ಕೇಳಿದರು ಮಾಡುತ್ತಾನೆ, ಭಕ್ತಿಯಿಂದ ಕರೆದವರಿಗೆ ಬಾಲಕನಾಗಿ ಬರುತ್ತಾನೆ, ಗೆಳೆಯನಾಗಿ ಇರುತ್ತಾ ನೆ, ಮಗನಂತೆ ಸೇವೆ ಮಾಡುತ್ತಾನೆ. ಬಂಧು ಭಾಂದವನಾಗಿ ಇರುತ್ತಾನೆ. ಅಹಂಕಾರವನ್ನು ಭಗವಂತ ಸಹಿಸುವುದಿಲ್ಲ. ನಿನಗರ್ಪಿತ ಪ್ರಭುವೇ ನಿನಗರ್ಪಿತ ! ಅನುದಿನವು ನಾಗೈದ ಪಾಪ ಪುಣ್ಯದ ಫಲವು ನಿನಗರ್ಪಿತ ಪ್ರಭುವೇ ನಿನಗರ್ಪಿತ! ಪರರೆನ್ನ ನಿಂದಿಸಲು ನಿನಗರ್ಪಿತ ! ಪರರೆನ್ನ ವಂದಿಸಲು ಅದು ಅರ್ಪಿತ ಪರರೊಳಗೆ ನೀದೋರಿ ಪರಮಾದರದಿಂದ ಪಾಮರನ ಪಾಲಿಪುದು ಅದು ಅರ್ಪಿತ!! ಎನ್ನಯ ನಡೆ-ನುಡಿ ನಿನಗರ್ಪಿತ, ಎನ್ನಯ ತನುಮನ ಅದು ಅರ್ಪಿತ ಏನ್ನೋಡಲ ಉಸಿರಾಟ ನಿನಗರ್ಪಿತ ಎನ್ನಯ ಸರ್ವಸ್ವ ಅದು ಅರ್ಪಿತ !! ಅನವರತ ನಿನ್ನ ಸ್ಮರಣೆ ನಿನಗರ್ಪಿತ ! ಅದ ಬಿಟ್ಟು ವ್ಯವಹರಿಸೆ ಅದು ಅರ್ಪಿತ ಅಚ್ಚುತಾ, ಅನಂತ, ಗೋವಿಂದ, ಮುಕುಂದ, ಅಂಬೆ ಶಾರದಯೇ ನಿನಗರ್ಪಿತ!! ವಂದನೆಗಳೊಂದಿಗೆ, ಬರಹ: ©ಆಶಾ ನಾಗಭೂಷಣ ▬▬ஜ۩۞۩ஜ▬▬▬*▬▬▬ஜ۩۞۩ஜ▬▬ !! ಸರ್ವಂ ಶ್ರೀ ಕೃಷ್ಣಾರ್ಪಣಮಸ್ತು !! 🙏 ಸರ್ವೇ ಜನಾಃ ಸುಖಿನೋ ಭವಂತುಸರ್ವೇ ಸಂತು ನಿರಾಮಯಾಃ 🙏 !! ಧರ್ಮೋ ರಕ್ಷತಿ ರಕ್ಷಿತಃ !! ▬▬▬ஜ۩۞۩ஜ▬▬▬▬▬▬ஜ۩۞۩ஜ▬▬▬ 🙏 ಹರಿ ಸರ್ವೋತ್ತಮ ವಾಯು ಜೀವೋತ್ತಮ 🙏
ದಿನಕ್ಕೊಂದು ಕಥೆ - Nogobhushono Ashal Nogobhushono Ashal - ShareChat