#ಚೈತ್ರ ಮಾಸ
ಚೈತ್ರ ಮಾಸದ ಪಾವಿತ್ರ್ಯತೆ!
ಚೈತ್ರ ಮಾಸ ಎಂಬ ಹೆಸರು ಬರಲು ಕಾರಣ, ಈ ಮಾಸದ ಹುಣ್ಣಿಮೆ ಸನಿಹದಲ್ಲಿ ಬರುವ ಚಿತ್ತಾ ನಕ್ಷತ್ರ.
ಚೈತ್ರ ಶುದ್ಧ ಪ್ರತಿಪದದಿಂದ ಚೈತ್ರ ಶುದ್ಧ ನವಮಿವರೆಗೂ ಶ್ರೀ ರಾಮನವರಾತ್ರೋತ್ಸವ ಅಥವಾ ವಸಂತ ನವರಾತ್ರಿ ನಡೆಯುತ್ತದೆ. ಶ್ರೀ ರಾಮಚಂದ್ರ ಪ್ರಭು ಚೈತ್ರ ಶುದ್ಧ ನವಮಿಯಂದು ಕೌಸಲ್ಯಾ, ದಶರಥರ ಮೂಲಕ ಅವತರಿಸಿದರು.
ಚೈತ್ರ ಮಾಸ ಬಂದರೆ ವಸಂತ ಋತುವಿನ ಆಗಮನ. ಪ್ರಕೃತಿ ಚಿಗುರಿ ಹೊಸ ಜೀವಶಕ್ತಿ ತುಂಬುತ್ತದೆ. ಈ ಮಾಸದ ನಿಯಾಮಕ ಭಗವದ್ರೂಪ ಶ್ರೀ ಮಹಾವಿಷ್ಣು.
ಚೈತ್ರ ಮಾಸವು ಶುಕ್ಲ ಪ್ರತಿಪದದಿಂದ ಆರಂಭವಾಗುತ್ತದೆ. ಈ ದಿನವನ್ನು ಕಲಾದಿ ತಿಥಿ ಎಂದು ಕರೆಯಲಾಗುತ್ತದೆ. ಸತ್ಯಯುಗದ ಆರಂಭವೂ ಇದೇ ದಿನವೆಂದು ಪರಿಗಣಿಸಲಾಗಿದೆ.
ಯುಗಾದಿಯಂದು ಅಭ್ಯಂಜನ ಸ್ನಾನ ಮಾಡಿ, ದೇವರ ಪೂಜೆ, ಹೊಸ್ತಿಲು ಪೂಜೆ ತುಳಸಿ ಪೂಜೆ ಮಾಡಿ, ಬೇವು-ಬೆಲ್ಲಾದಿ ನಿಂಬಕದಳವನ್ನು ಸಮರ್ಪಿಸಿ ಭಕ್ಷಿಸಬೇಕು. ಸಂಜೆ ಪಂಚಾಂಗ ಶ್ರವಣ ಮಾಡುವುದು ಶ್ರೇಷ್ಠ.
ಚೈತ್ರ ನವರಾತ್ರಿ ಕೇವಲ ಆಚರಣೆ ಅಲ್ಲ, ಇದು ದೇಹ, ಮನಸ್ಸು, ಪ್ರಕೃತಿ ಮತ್ತು ಭಗವಂತನೊಂದಿಗೆ ಸಮತೋಲನ ಸಾಧಿಸುವ ಪವಿತ್ರ ಅವಕಾಶ.. 🙏🌺🙏🌺🙏
▬▬ஜ۩۞۩ஜ▬▬▬*▬▬▬ஜ۩۞۩ஜ▬▬
!! ಸರ್ವಂ ಶ್ರೀ ಕೃಷ್ಣಾರ್ಪಣಮಸ್ತು !!
🙏 ಸರ್ವೇ ಜನಾಃ ಸುಖಿನೋ ಭವಂತುಸರ್ವೇ
ಸಂತು ನಿರಾಮಯಾಃ 🙏
!! ಧರ್ಮೋ ರಕ್ಷತಿ ರಕ್ಷಿತಃ !!
▬▬▬ஜ۩۞۩ஜ▬▬▬▬▬▬ஜ۩۞۩ஜ▬▬▬
🙏 ಹರಿ ಸರ್ವೋತ್ತಮ ವಾಯು ಜೀವೋತ್ತಮ 🙏


