ShareChat
click to see wallet page
search
***ಶ್ರೀಕೃಷ್ಣ ಕಣ್ಣೀರಿಟ್ಟ ಕಥೆ.*** ಒಮ್ಮೆ ದ್ವಾರಕೆಯಲ್ಲಿ ಶ್ರೀಕೃಷ್ಣನು,ಅರಮನೆಯ ಕಿಟಕಿಯಿಂದ ಹೊರಗೆ ನೋಡುತ್ತಾ ಕಣ್ಣೀರು ಹಾಕುತ್ತಿದ್ದನು. ಇದನ್ನು ಗಮನಿಸಿದ ಉದ್ದವನು, ಭಗವಂತ ನಿನ್ನ ದುಃಖಕ್ಕೆ ಕಾರಣವೇನು? ನೀನು ಈ ರೀತಿ ಅಳುವುದನ್ನು ನಾನು ಎಂದೂ ನೋಡಿರಲಿಲ್ಲ ಎನ್ನುತ್ತಾನೆ. ಆಗ ಶ್ರೀ ಕೃಷ್ಣ ಪರಮಾತ್ಮನು, ಉದ್ದವ, ನನ್ನನ್ನು ನೆನಪಿಸಿಕೊಳ್ಳುತ್ತಾ ಬೃಂದಾವನದ ಜನರು ಸದಾ ಕಣ್ಣೀರು ಹಾಕುತ್ತಿರುತ್ತಾರೆ. ನನಗೆ ಏನು ಮಾಡಬೇಕೆಂದೇ ತಿಳಿಯುತ್ತಿಲ್ಲ. ನನ್ನ ಈ ರಾಜಕಾರ್ಯಗಳು ಎಂದು ಮುಗಿಯುವೋ ಎನ್ನುತ್ತಾನೆ. ಆಗ ಉದ್ದವನು, ಭಗವಂತ ನೀನು ಒಬ್ಬ ಸಾಮಾನ್ಯ ಮನುಷ್ಯ ಎಂದು ಆ ಜನರೆಲ್ಲ ತಿಳಿದುಕೊಂಡಿದ್ದಾರೆ‌. ನೀನು ಭಗವಂತನೆಂದು ತಿಳಿದುಕೊಂಡರೆ, ಅವರ ದುಃಖ ಕಡಿಮೆಯಾಗುತ್ತದೆ. ನಾನು ಅವರಿಗೆ ಹೋಗಿ ಈ ಪರಮ ತತ್ವವನ್ನು ಉಪದೇಶ ಮಾಡಿ ಅವರ ದುಃಖವನ್ನು ಕಡಿಮೆ ಮಾಡಿ ಬರುತ್ತೇನೆ, ಯೋಚಿಸಬೇಡ ಎನ್ನುತ್ತಾನೆ ಆಗ ಶ್ರೀ ಕೃಷ್ಣನು ಸಂತೋಷದಿಂದ ಪ್ರತಿಯೊಬ್ಬರಿಗೂ ಒಂದೊಂದು ಪತ್ರವನ್ನು ಬರೆದುಕೊಡುತ್ತಾನೆ. ಸ್ನೇಹಿತರಿಗೆಲ್ಲ ಒಂದು ಪತ್ರ ,ತಂದೆ ತಾಯಿಯರಿಗೆ ಒಂದು ಪತ್ರ ಗೋಪಿಕೆಯರಿಗೆ ಒಂದು ಪತ್ರ. ಉದ್ದವನು ಅವುಗಳನ್ನು ತೆಗೆದುಕೊಂಡು ಶೀಘ್ರವಾಗಿ ಬೃಂದಾವನಕ್ಕೆ ಹೊರಡುತ್ತಾನೆ .ದಾರಿಯಲ್ಲಿ ಯಾರ ಬಳಿ, ಏನೇನು ಮಾತನಾಡಬೇಕೆಂದು ಯೋಚಿಸಿಕೊಂಡು ಬೃಂದಾವನವನ್ನು ಪ್ರವೇಶಿಸುತ್ತಾನೆ.ಮೊದಲು ಉದ್ದವನನ್ನು ದೂರದಿಂದ ಕಂಡು, ಶ್ರೀಕೃಷ್ಣ ಪರಮಾತ್ಮನೇ ಬಂದನೆಂದು, ಬೃಂದಾವನವಾಸಿಗಳೆಲ್ಲ ಇವನ ಬಳಿ ಓಡಿ ಬರುತ್ತಾರೆ. ನಂತರ ಉದ್ದವನೆಂದು ತಿಳಿದು, ನಿರಾಶರಾಗುತ್ತಾರೆ. ಯಾವಾಗ ಅವನು ಶ್ರೀ ಕೃಷ್ಣನಿಂದ ಸಂದೇಶಗಳನ್ನು ತಂದಿದ್ದೇನೆ ಎಂದು ಹೇಳಿದನೋ, ಅವರೆಲ್ಲ ಅವನನ್ನು ಬಗೆಬಗೆಯಾಗಿ ಉಪಚರಿಸುತ್ತಾ ಅವನನ್ನು ಮುತ್ತಿಕೊಳ್ಳುತ್ತಾರೆ. ಮೊದಲು ಉದ್ದವನು ಶ್ರೀಕೃಷ್ಣನ ಸ್ನೇಹಿತರಿಗೆ ಅವರ ಪತ್ರವನ್ನು ಓದಿ ಹೇಳುತ್ತಾನೆ. ಅವರೆಲ್ಲ ಆನಂದದಿಂದ ಕಣ್ಣೀರು ಹಾಕುತ್ತಾರೆ. ಉದ್ದವನನ್ನು ಗಟ್ಟಿಯಾಗಿ ತಬ್ಬಿಕೊಳ್ಳುತ್ತಾರೆ ನಂತರ ಉದ್ದವನು ಯಶೋದೆ ಮತ್ತು ನಂದ ಮಹಾರಾಜರ ಅರಮನೆಯನ್ನು ಪ್ರವೇಶಿಸಿ ಅವರಿಗೆ ಶ್ರೀಕೃಷ್ಣನ ಸಂದೇಶಗಳನ್ನು ತಿಳಿಸುತ್ತಾನೆ ಕೊನೆಯಲ್ಲಿ ಗೋಪಿಯರು ಉದ್ದವನನ್ನು ,ಒಂದು ಏಕಾಂತ ಸ್ಥಾನಕ್ಕೆ ಕರೆದುಕೊಂಡು ಹೋಗಿ, ಅಲ್ಲಿ ಶ್ರೀಕೃಷ್ಣನ ಬಗ್ಗೆ ವಿಚಾರಿಸಿಕೊಳ್ಳುತ್ತಾರೆ. ಉದ್ದವನು ಮಾತನಾಡಲು ಆರಂಭಿಸಿದೊಡನೆಗಯೇ ಹೃದಯ ಹಿಂಡುವಂತೆ ಅಳಲು ಆರಂಭಿಸುತ್ತಾರೆ. ಉದ್ಧವನು, ಪತ್ರವನ್ನು ಓದುವುದನ್ನು ಕೂಡ ಅವರು ಕೇಳಿಸಿಕೊಳ್ಳುತ್ತಿಲ್ಲ. ಬರೇ ಅಳುತ್ತಿದ್ದಾರೆ. ಅವರನ್ನು ಸಮಾಧಾನ ಮಾಡುವುದೇ ಉದ್ದವನಿಗೆ ಬಹಳ ಕಷ್ಟಕರವಾಗಿ ಹೋಗುತ್ತದೆ. ಕೊನೆಗೆ ಬಹಳ ಪ್ರಯಾಸದಿಂದ, ಅವರ ಬಗೆ ಬಗೆಯ ಪ್ರಶ್ನೆಗಳಿಗೆ ಉತ್ತರ ಕೊಟ್ಟು ,ಶ್ರೀ ಕೃಷ್ಣನು ಸಾಮಾನ್ಯ ಮನುಷ್ಯನಲ್ಲ, ಅವನು ಭಗವಂತ. ನೀವೆಲ್ಲರೂ ಅವನನ್ನು ಭಕ್ತಿಯಿಂದ ಭಜಿಸಬೇಕು. ಭಗವಂತನಂತೆ ಪೂಜಿಸಬೇಕು. ಅವನು ಎಲ್ಲೆಡೆ ಇರುವ ನಿರಾಕಾರ ತತ್ವನು. ಆ ಶಕ್ತಿಗೆ ನೀವು ವಂದಿಸುತ್ತಾ, ಅದರಲ್ಲಿ ಒಂದಾದರೆ ನಿಮ್ಮ ಈ ದುಃಖವು ಪರಿಹಾರವಾಗುತ್ತದೆ ಎನ್ನುತ್ತಾನೆ. ಆಗ ಗೋಪಿಯರು ಉದ್ದವನನ್ನು ವಿಚಿತ್ರವಾಗಿ ನೋಡುತ್ತಾ, ಉದ್ದವಾ, ಶ್ರೀ ಕೃಷ್ಣನು ಭಗವಂತನು ಎಂದು ನಮಗೆ ಯಾರಿಗೂ ತಿಳಿದಿಲ್ಲ ಎಂದು ಭಾವಿಸಿರುವೆಯಾ? ನಮ್ಮ ಕಣ್ಣ ಮುಂದೆಯೇ ಅವನು ಅನೇಕ ಪವಾಡಗಳನ್ನು ಮಾಡಿರುವನು. ಭಗವಂತನಿಗೆ ನೋವು ನಲಿವುಗಳು ಇರಬಾರದೇನು? ಅವನು ಹರ್ಷಗೊಳ್ಳುವುದನ್ನೂ, ರಾಧೆಯ ವಿರಹದಿಂದ ವಿಲಾಪ ಮಾಡುವುದನ್ನು ಕೂಡ ನಾವು ಅನೇಕ ಬಾರಿ ನೋಡಿದ್ದೇವೆ. ಭಗವಂತನು ನಿರಾಕಾರ ತತ್ವ ನಾಗಿರುವಂತೆ ಸಾಕಾರ ತತ್ವನೂ ಕೂಡ ಆಗಿರುವನು. ಅವನು ನಮ್ಮ ಪ್ರೇಮ ಪೂರ್ವಕ ಸೇವೆಗಳನ್ನು ಸ್ವೀಕರಿಸಿ ಹರ್ಷಪಡುತ್ತಿದ್ದನು. ನಮ್ಮನ್ನು ಕೂಡ ಹರ್ಷಪಡಿಸುತ್ತಿದ್ದನು. ನಾವು ಈಗ ನಮ್ಮ ಈ ಬಾಹ್ಯ ಕಣ್ಣುಗಳಿಂದ ಅವನನ್ನು ನೋಡಲಾಗುತ್ತಿಲ್ಲವಾದರೂ ಅವನ ಮಾತನ್ನು ಈ ಕಿವಿಗಳಿಂದ ಕೇಳಿಸಿಕೊಳ್ಳಲು ಆಗುತ್ತಿಲ್ಲವಾದರೂ ,ನಮ್ಮ ಸುತ್ತಮುತ್ತ ಅವನ ಇರುವಿಕೆಯನ್ನು ಸದಾ ಗ್ರಹಿಸುತ್ತಿರುವೆವು. ಅವನು ಬೃಂದಾವನವನ್ನು ಬಿಟ್ಟು ಹೋಗಿರುವನು ಎಂದು ನಾವು ಎಂದೂ ಭಾವಿಸುವುದಿಲ್ಲ‌ ಎಂದರು ‌ಇದರಿಂದ ಅಚ್ಚರಿಗೊಂಡ ಉದ್ದವನನ್ನು ಗೋಪಿಯರು, ಶ್ರೀ ರಾಧಾ ರಾಣಿಯ ಬಳಿ, ಕರೆದುಕೊಂಡು ಹೋದರು. ಶ್ರೀರಾಧೆಯು ತನ್ನ ಬಳಿ ಬಂದ ಉದ್ದವನನ್ನೂ, ಗೋಪಿಯರನ್ನೂ ಗಮನಿಸಲೇ ಇಲ್ಲ. ಅವಳು ಆನಂದವಾಗಿ ಇರುವಂತೆ ವರ್ತಿಸುತ್ತಿದ್ದಳು. ಮರುಕ್ಷಣ ದುಃಖದಿಂದ ಅಳುವಳು .ಯಾರೊಡನೆಯೋ ಮಾತನಾಡುವಳು‌ ಒಟ್ಟಿನಲ್ಲಿ ಅವಳು ಬೇರೆ ಯಾವುದೋ ಪ್ರಪಂಚದಲ್ಲಿ ಇರುವಂತೆ ಭಾಸವಾಗುತ್ತಿತ್ತು‌ ಇದೆಲ್ಲವನ್ನು ನೋಡಿದ ಉದ್ದವನಿಗೆ ,ಈ ಗೋಪಿಯರು ಭಗವಂತನೊಂದಿಗೆ, ಧ್ಯಾನ ಸ್ಥಿತಿಯಲ್ಲಿ ಸದಾ ವ್ಯವಹರಿಸುತ್ತಿರುವರು. ಇವರು ಧ್ಯಾನದ ಉನ್ನತ ಸ್ಥಿತಿಯನ್ನು ಈಗಾಗಲೇ ಪಡೆದುಕೊಂಡಿರುವರು. ಪ್ರೇಮ ಯೋಗ ವೆಂಬ ಈ ಬಗೆಯ ಧ್ಯಾನ ಸ್ಥಿತಿಯನ್ನು, ಇವರಿಂದ ನಾನು ಕಲಿತುಕೊಳ್ಳಲಿ ಎಂದು, ಭಗವಂತನು ನನ್ನನ್ನು ಇಲ್ಲಿಗೆ ಕರುಣೆಯಿಂದ ಕಳಿಸಿರುವನು. ಇವರು ಗಳಿಸಿರುವ ಪ್ರೇಮ ಯೋಗವನ್ನು ಗಳಿಸಲು ನಾನು ಎಷ್ಟು ತಪಸ್ಸು ಮಾಡಬೇಕಾಗಬಹುದು ಎಂದು ಕೈಮುಗಿದು, ಶ್ರೀ ರಾಧಾ ಮಂತ್ರವನ್ನು ಜಪಿಸಲು ಆರಂಭಿಸಿದನು‌ ಆಗ ಅವನು ತನ್ನ ಜ್ಞಾನದ ಕಣ್ಣುಗಳಿಂದ, ಬೃಂದಾವನದ ಎಲ್ಲೆಡೆಯಲ್ಲಿಯೂ, ಶ್ರೀ ಕೃಷ್ಣನು ಪ್ರತಿಯೊಬ್ಬರೊಡನೆಯೂ ಇರುವಂತೆ, ಅವರೊಡನೆ ಬಗೆಬಗೆಯಾಗಿ ವ್ಯವಹರಿಸುತ್ತಿರುವಂತೆ, ಆನಂದಿಸುತ್ತಿರುವಂತೆ, ದರ್ಶನವಾಯಿತು. ಪ್ರೇಮಯೋಗದ ತತ್ವವನ್ನು ಉದ್ದವನು ಆಗ ಅರಿತುಕೊಂಡನು. ಅವರಂತೆಯೇ ತನಗೂ, ಶ್ರೀ ಕೃಷ್ಣನ ಮೇಲೆ ಪ್ರೇಮವು ಬೆಳೆಯಲಿ ಎಂದು ಬಯಸುತ್ತಾ, ಉದ್ಧವನು ಬಹಳ ದಿನಗಳ ಕಾಲ ಅಲ್ಲಿಯೇ ಉಳಿದುಕೊಂಡನು. ❤️🙏🌷 ವಿಮಲ್ ನ್ಯೂಟ್ರಿಷನ್ ಸೆಂಟರ್ 🌷🙏❤️ #🎥 Motivational ಸ್ಟೇಟಸ್ #👦🏻 Bad Boyz ಸ್ಟೇಟಸ್ #✍️ ಮೋಟಿವೇಷನಲ್ ಕೋಟ್ಸ್ #😍 ನನ್ನ ಸ್ಟೇಟಸ್ #✍️ ಮೋಟಿವೇಷನಲ್ ಕೋಟ್ಸ್
🎥 Motivational ಸ್ಟೇಟಸ್ - ShareChat