‘ಹಾಸನದಲ್ಲಿ ದಂಧೆ ನಡೆಯುತ್ತಿದೆ’ – ಯಶ್ ತಾಯಿ ವಿರುದ್ಧ ಗಂಭೀರ ಆರೋಪ ಮಾಡಿದ ಸೈಟ್ ಮೂಲ ಮಾಲಕಿ ಲಕ್ಷ್ಮಮ್ಮ - AIN Kannada
ಹಾಸನದಲ್ಲಿ ನಟ ಯಶ್ ಅವರ ತಾಯಿ ಪುಷ್ಪಾ ಅರುಣ್ ಕುಮಾರ್ ಅವರ ನಿವೇಶನಕ್ಕೆ ಸಂಬಂಧಿಸಿದ ವಿವಾದ ಸದ್ಯಕ್ಕೆ ಮುಕ್ತಾಯವಾಗುವ ಲಕ್ಷಣ ಕಾಣುತ್ತಿಲ್ಲ. ದಿನದಿಂದ ದಿನಕ್ಕೆ ಹೊಸ ಆಯಾಮಗಳನ್ನು ಪಡೆಯುತ್ತಿರುವ ಈ ಪ್ರಕರಣಕ್ಕೆ ಇದೀಗ ಮತ್ತೊಂದು ಮಹತ್ವದ ತಿರುವು ಸಿಕ್ಕಿದೆ. ನಿವೇಶನದ ಮೂಲ ಮಾಲಕಿ ಎಂದು ಹೇಳಲಾಗುತ್ತಿರುವ ಲಕ್ಷ್ಮಮ್ಮ ಅವರು ಸಾರ್ವಜನಿಕವಾಗಿ ಪ್ರತ್ಯಕ್ಷರಾಗಿದ್ದು, “ಪುಷ್ಪಾ ಅರುಣ್ ಕುಮಾರ್ ಅವರ ಜಾಗ ಬೇರೆ ರಸ್ತೆಯಲ್ಲಿದೆ. ನಮ್ಮ ಜಾಗದಲ್ಲಿ ಕಾಂಪೌಂಡ್ ನಿರ್ಮಿಸಲಾಗಿತ್ತು. ಅದನ್ನು ನಾವು ತೆರವುಗೊಳಿಸಿದ್ದೇವೆ” ಎಂದು ಹೇಳಿದ್ದಾರೆ. ಸದ್ಯ ಲಕ್ಷ್ಮಮ್ಮ