ShareChat
click to see wallet page
search
"ಜಡೆ ಮುಡಿ ಬೋಳು ಹೇಗಾದಡಾಗಲಿ, ನಡೆನುಡಿ ಸಿದ್ದಾಂತವಾದಡೆ ಸಾಕು, ಆತ ಪರಂಜ್ಯೋತಿ ಗುರುವಹ. ಆ ಇರವ ನಿನ್ನ ನೀನರಿ, ಪುಣ್ಯಾರಣ್ಯ ದಹನ ಭೀಮೇಶ್ವರಲಿಂಗ ನಿರಂಗಸಂಗ.. ✍️ ಶರಣ ಕೋಲ ಶಾಂತಯ್ಯನವರ ವಚನ.. (12 ನೇ ಶತಮಾನ ಬಸವಕಲ್ಯಾಣ ಬೀದರ ಜಿಲ್ಲೆ).. ವಚನ ವಿಮರ್ಶೆ: ಬಹಿರಂಗವಾಗಿ ಮೀಸೆ ಗಡ್ಡ ಬಿಡುವುದು, ಜಡೆ ಬೆಳೆಸುವುದು, ತಲೆಗೂದಲು ಬೋಳಿಸಿಕೊಳ್ಳುವುದು ಇವೆಲ್ಲವೂ ಹೇಗಾದರೂ ಇರಲಿ ಆದರೆ ನಡೆ ನುಡಿ ಸರಿಯಾಗಿರಬೇಕು ಮತ್ತು ಅದೇ ಜೀವನದ ತತ್ವವಾಗಿರಬೇಕು. ಅಂತಹ ಮನುಷ್ಯರು ಮಾತ್ರ ಮಾರ್ಗದರ್ಶಕ ಗುರುಗಳು ಮತ್ತು ಜ್ಞಾನಿಗಳು. ಅಂತಹ ಅರಿವು ತಿಳಿದಿರಬೇಕು..! #ವಚನಗಳು #//🌳ವಚನ ಸಾಹಿತ್ಯ 🌳// #ಶರಣ ಸಾಹಿತ್ಯ #ಬಸವಣ್ಣನವರ ವಚನಗಳು #ಬಸವಾದಿ ಶರಣ ಶರಣೆಯರು
ವಚನಗಳು - L ழச 8ee ಶಾಂತ೦ತ L ழச 8ee ಶಾಂತ೦ತ - ShareChat