ShareChat
click to see wallet page
search
#📜ಪ್ರಚಲಿತ ವಿದ್ಯಮಾನ📜 ಸುಬ್ಬು ಹೊಲೆಯಾರ್ ಅವರಿಗೆ ರಾಷ್ಟ್ರಕವಿ ಜಿ ಎಸ್ ಶಿವರುದ್ರಪ್ಪ ರಾಷ್ಟ್ರೀಯ ಪುರಸ್ಕಾರ ಪ್ರದಾನ ಬೆಂಗಳೂರು: ಪ್ರೊ. ಜಿ.ಎಸ್ ಶಿವರುದ್ರಪ್ಪ ಮತ್ತು ಪ್ರೊ. ಯು.ಆರ್.ಅನಂತಮೂರ್ತಿ ಸಾಂಸ್ಕೃತಿಕ ಜಂಟಿ ಕ್ರಿಯಾ ಸಮಿತಿ ಆಯೋಜನೆ ಮಾಡಿದ್ದ ಜನ್ಮ ಶತಮಾನೋತ್ಸವ ಕಾರ್ಯಕ್ರಮವನ್ನು ಕಲಾಗ್ರಾಮದ ಎನ್ ಎಸ್ ಡಿ ಆವರಣದಲ್ಲಿರುವ ಪುಣ್ಯ ಭೂಮಿಯಲ್ಲಿ ವಿಜೃಂಭಣೆಯಿಂದ ಶತಮಾನೋತ್ಸವ ಕಾರ್ಯಕ್ರಮವನ್ನು ನಡೆಸಲಾಯಿತು. ಜಿಎಸ್ ಶಿವರುದ್ರಪ್ಪ ಜನ್ಮ ಶತಮಾನೋತ್ಸವ ಪ್ರಯುಕ್ತ ಕಾವ್ಯ ವಾಚನ, ಗೀತೆ ಗಾಯನ, ಪ್ರಶಸ್ತಿ ಪ್ರಧಾನ, ಪುಷ್ಪ ನಮನ ನಡೆಯಿತು. ಸಮಾರಂಭದ ಅಧ್ಯಕ್ಷತೆಯನ್ನು ಡಾ. ಬೈರಮಂಗಲ ರಾಮೇಗೌಡ ವಹಿಸಿದ್ದರು. ಸಮಾರಂಭದಲ್ಲಿ ಡಾ.ಎಂ.ಪ್ರಭು ಜಯರಾಮ್, ಬಂಜಾರ ಸಂಸ್ಕೃತಿ ಭಾಷಾ ಅಕಾಡೆಮಿಯ ಮಾಜಿ ಅಧ್ಯಕ್ಷ ಡಾ. ಎ ಆರ್ ಗೋವಿಂದಸ್ವಾಮಿ, ಆಯೋಜಕರಾದ ಕುಮಾರ್ ಕೆ.ಹೆಚ್ ರಂಗೋತ್ರಿ, ಕವಿಗೋಷ್ಠಿ ಅಧ್ಯಕ್ಷ ಡಾ. ಹೆಚ್. ಲಕ್ಷ್ಮಿ ನಾರಾಯಣ, ಲಕ್ಷಿ ಶ್ರೀನಿವಾಸ್, ಮಂಜು ಪಾಂಡವಪುರ, ರಾಜು ಪವಾರ್, ವಕೀಲ ಶ್ಯಾಮ್ ಕುಮಾರ್ ಎ. ವಿ, ಮಲ್ಲಿಕಾರ್ಜುನ ಮಹಾಮನೆ ಮುಂತಾದವರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ನಾಡಿನ ಖ್ಯಾತ ಕವಿಗಳಲ್ಲಿ ಒಬ್ಬರಾದ ಸುಬ್ಬು ಹೊಲೆಯಾರ್ ಅವರಿಗೆ ಡಾ. ರಾಷ್ಟ್ರಕವಿ ಜಿಎಸ್ ಶಿವರುದ್ರಪ್ಪನವರ ರಾಷ್ಟ್ರೀಯ ಪುರಸ್ಕಾರವನ್ನು ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಉಪಸ್ಥಿತರಿದಂತಹ ಡಾ.ಬಿ.ಟಿ.ಲಲಿತ ನಾಯಕ್, ಡಾ.ಸತೀಶ್ ಕುಮಾರ್ ಎಸ್ ಹೊಸಮನಿ, ಕುಮಾರ್ ಕೆ ಎಚ್., ಪ್ರಭು ಜಯರಾಮ್, . ಬೈರಮಂಗಲ ರಾಮೇಗೌಡ, ಡಾ. ಎಆರ್ ಗೋವಿಂದ ಸ್ವಾಮಿ ಸುಬ್ಬು ವಲಯ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಿದರು. ಕವಿಗೋಷ್ಠಿಯಲ್ಲಿ ಕವಿಗಳಾದ ಡಾ. ಹನುಮಂತ್ ರಾಯಪ್ಪ, ಮಂಜು ಪಾಂಡವಪುರ, ರಾಜು ಪವಾರ್, ಶ್ಯಾಮ್ ಕುಮಾರ್ ಎ.ವಿ , ಸುಮನ ಮುಂತಾದವರು ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ತಾಯಿ ರಮಾಬಾಯಿ ಅಂಬೇಡ್ಕರ್ ಅವರ ನೆನಪಿನಲ್ಲಿ ಕುವೆಂಪು, ಯೂ ಆರ್ ಅನಂತಮೂರ್ತಿ, ಜಿ ಎಸ್ ಶಿವರುದ್ರಪ್ಪ, ಡಾ.ಸಿದ್ದಲಿಂಗಯ್ಯ ಸ್ಮರಣಾರ್ಥ ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಪ್ರತಿಭಾನ್ವಿತ ವಿದ್ಯಾರ್ಥಿಗಳಾದ ಲತಾ ಜಿ.ಎಲ್, ರಕ್ಷಿತ್ ಕುಮಾರ್ ರವರಿಗೆ ಶ್ರೀ ಪ್ರಭು ಜಯರಾಮ್ ಪ್ರತಿಭಾ ಪುರಸ್ಕಾರ ನೀಡಲಾಯಿತು. ವಿವಿಧ ಕಲಾತಂಡಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಬಿ .ಟಿ ಲಲಿತ ನಾಯಕ್ ರವರು ಮಾತನಾಡಿ, ಸಿನಿಮಾ ನಟರಿಗೆ ಉತ್ಕೃಷ್ಟವಾಗಿ ಸ್ಮಾರಕಗಳನ್ನು ನಿರ್ಮಿಸಿದಂತೆ ಕಲಾಗ್ರಾಮದಲ್ಲಿರುವ ಡಾ.ಜಿ.ಎಸ್ ಶಿವರುದ್ರಪ್ಪ, ಯು.ಆರ್ ಅನಂತಮೂರ್ತಿ, ಡಾ. ಸಿದ್ದಲಿಂಗಯ್ಯರವರ ಸಮಾಧಿಗಳನ್ನು ಜೀರ್ಣೋದ್ಧಾರ ಮಾಡುವ ಬಗ್ಗೆ ಈ ಸಂಸ್ಥೆಯೊಂದಿಗೆ ಜೊತೆಗೂಡಿ ಸರ್ಕಾರವು ಅಭಿವೃದ್ಧಿಪಡಿಸಬೇಕೆಂದು ಆಗ್ರಹಪಡಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ, ಬೈರಮಂಗಲ ರಾಮೇಗೌಡ, ಈ ಪ್ರದೇಶದಲ್ಲಿ ಜಿಎಸ್ ಶಿವರುದ್ರಪ್ಪ ರವರ ಸ್ಮಾರಕದ ಜೊತೆಗೆ ಒಂದು ಗ್ರಂಥಾಲಯ ಮತ್ತು ಡಾ. ಸಿದ್ದಲಿಂಗಯ್ಯ ಅವರ ಹೆಸರಿನಲ್ಲಿ ರಂಗಮಂದಿರ ತುರ್ತಾಗಿ ನಿರ್ಮಾಣಮಾಡಿ ಅವರ ಹೆಸರು ಇಡಬೇಕೆಂದು ಒತ್ತಾಯಿಸಿದರು. ನಂತರ ಸ್ಮಾರಕಗಳನ್ನ ನಿರ್ಮಿಸಲು ತಿಳಿಸಿದವರ ಉದ್ದೇಶವನ್ನು ತಿಳಿಯದ ಸರ್ಕಾರ ಹಾಗೂ ಸಂಸ್ಕೃತಿ ಇಲಾಖೆ ಸ್ಮಾರಕ ನಿರ್ಮಾಣ ಮಾಡಿದ್ದು ಆ ಸ್ಮಾರಕಗಳ ಉದ್ದೇಶವನ್ನು ಅರಿಯುವ ಮನಸ್ಸು ಮಾಡಬೇಕು ಎಂದು ಸರ್ಕಾರಕ್ಕೆ ಎಲ್ಲರೂ ಸೇರಿ ಚಾಟಿ ಬೀಸಬೇಕು ಎಂದರು. #SubbuHoleyar #awarded #NationalPoet #GSShivarudrappa #NationalAward #malgudiexpress #malgudinews #news #TopNews
📜ಪ್ರಚಲಿತ ವಿದ್ಯಮಾನ📜 - ShareChat