#ದಿನಕ್ಕೊಂದು ಕಥೆ
ಬುದ್ಧಿವಂತ ಸಂತನ ಕಥೆ :-
ಬುದ್ಧಿವಂತರಲ್ಲೇ ಬುದ್ಧಿವಂತನಾದ ಒಬ್ಬ ಸೂಫಿ ಸಂತನಿದ್ದನು. ಇವನು ಜ್ಞಾನಾಕಾಂಕ್ಷಿಯಾಗಿ ಆತ್ಮಜ್ಞಾನವನ್ನು ಪಡೆಯಲು ಊರೂರು ಅಲೆಯುತ್ತಿದ್ದ. ಇವನು ಎಷ್ಟು ಬುದ್ಧಿವಂತ ಎಂದರೆ ಆ ದೇಶದ ರಾಜನಿಗೆ ಸ್ನೇಹಿತನಾಗಿದ್ದ.ರಾಜನು ಎಷ್ಟೋ ಸಾರಿ ಇವನ ಬುದ್ಧಿವಂತಿಕೆಯನ್ನು ಮೆಚ್ಚಿ ನಿನ್ನ ಗುರು ಯಾರು ನಮಗೂ ಸ್ವಲ್ಪ ತಿಳಿಸು ನಾವು ಜಾಣರಾಗುತ್ತೇವೆ ಎನ್ನುತ್ತಿದ್ದ. ಸಂತ ಹೇಳುತ್ತಿದ್ದ ಅದನ್ನು ಹೇಳಲು ಸಾಧ್ಯವಿಲ್ಲ, ಆದರೆ ಪದೇ ಪದೇ ನಿನ್ನ ಗುರು ಯಾರು ಎಂದು ರಾಜನು ಒತ್ತಾಯ ಮಾಡಿದಾಗ, ಸಂತ ಹೇಳಿದ ಅದು ಹೇಳಲು ಸಾಧ್ಯವಿಲ್ಲ ನಾನು ಹೇಳುವುದೂ ಇಲ್ಲ .ಆದರೆ ನಿಮ್ಮ ಒತ್ತಾಯದ ಮೇಲೆ ನಾನು ಸಾಯುವ ಮೊದಲು ನಿಮಗೆ ಅದನ್ನು ತಿಳಿಸಿ ಸಾಯುತ್ತೇನೆ ಎಂದು ಹೇಳಿದ. ಇದಾದ ಮೇಲೆ ರಾಜ ಅವನನ್ನು ಕೇಳಲಿಲ್ಲ, ಸಂತನ ಕಾಲ ಕಳೆದು ವಯಸ್ಸಾಯಿತು ಸಾವು ಹತ್ತಿರ ಬಂದಿದೆ ಎಂದು ತಿಳಿಯಿತು .ತಕ್ಷಣ ಕೊಟ್ಟ ಮಾತನ್ನು ಉಳಿಸಿಕೊಳ್ಳುವ ಸಲುವಾಗಿ, ಊರಿನ ರಾಜನನ್ನು ಕರೆ ತರುವಂತೆ, ಹಾಗೆ ನಾನು ನನ್ನ ಗುರು ಯಾರು ಎಂದು ಅವರಿಗೆ ಈಗ ನಾನು ಹೇಳುವ ಸಮಯ ಬಂದಿದೆ. ಸೂಫಿ ಜೊತೆ ಇದ್ದಂತ ಎಲ್ಲರೂ ಆ ಕುತೂಹಲವನ್ನು ಕೇಳಲು ಕಾತುರರಾಗಿದ್ದರು. ಹಾಗೆ ರಾಜನಿಗೆ ತಿಳಿಯುತ್ತಿದ್ದಂತೆ ಅವಸರ ಅವಸರವಾಗಿ ರಾಜ ಹೊರಟನು. ಏಕೆಂದರೆ ಸಂತರು ಹೇಳದೆ ಸತ್ತೇ ಹೋಗುವರೊ ಎಂದು ಹೆದರಿ ಬೇಗ ಬಂದನು.
ಸಂತ ಸಾಯಲು ಕೆಲವೇ ಸಮಯ ಉಳಿದಿದ್ದು ರಾಜ ಹಾಗೂ ಅವನ ಪರಿವಾರ ಸೇರಿದಂತೆ ಅನೇಕ ಶಿಷ್ಯರು, ಸಂತನ ಬಾಯಿಂದ ಮಾತನ್ನು ಕೇಳಲು ತುದಿಕಾಲಲ್ಲಿ ಕಾಯುತ್ತಿದ್ದರು. ರಾಜನ ಕಡೆ ನೋಡುತ್ತಾ ಸಂತ ಹೇಳಿದ, ನೀವು ಕೇಳುತ್ತಿದ್ದ ಪ್ರಶ್ನೆಗೆ ನಾನು ಈಗಿ ಉತ್ತರ ಕೊಡುತ್ತೇನೆ. ನನಗೆ ಒಬ್ಬರಲ್ಲ ಮೂರು ಜನ ಗುರುಗಳು ಇದ್ದರು. ಇದನ್ನು ಕೇಳಿ ಎಲ್ಲರೂ ಓಹೋ ಅದಕ್ಕೆ ಈ ಸಂತ ಇಷ್ಟು ಬುದ್ದಿವಂತನಾಗಿದ್ದಾನೆ. ಎಲ್ಲರಿಗೂ ಒಬ್ಬನೇ ಗುರು ಇರುತ್ತಾರೆ. ಇವನಿಗೆ ಮೂರು ಜನ ಅದರಿಂದ ಬುದ್ಧಿವಂತ ಎಂದುಕೊಂಡರು. ಸಂತ ಮುಂದುವರಿಸಿ ನನ್ನ ಮೊದಲ ಗುರು ಒಬ್ಬ 'ಕಳ್ಳ'. ಹೀಗೆ ಹೇಳುತ್ತಿದ್ದಂತೆ ಎಲ್ಲರೂ ಮುಖ ಮುಖ ನೋಡಿಕೊಂಡರು, ಇದೇನು ಕಳ್ಳ ಗುರುವಾಗುತ್ತಾನಾ ಕೇಳಲು ಕಾತುರರಾದರು.
ಸಂತ ಹೇಳಿದ ನಾನು ಜ್ಞಾನಾರ್ಜನೆಗಾಗಿ ಊರೂರು ಅಲೆಯುತ್ತಿದ್ದೆ. ಎಷ್ಟೇ ಧ್ಯಾನ ಮಾಡಿದರು ಆತ್ಮಜ್ಞಾನ ನನಗೆ ಬರಲೇ ಇಲ್ಲ. ಎಲ್ಲಿ ಜ್ಞಾನ ತಿಳಿಯುತ್ತದೆ ಎಂದು ದಿಕ್ಕು ದೆಸೆ ಇಲ್ಲದೆ ಸುತ್ತುತ್ತಾ ಒಂದು ಹಳ್ಳಿಗೆ ಬಂದೆ ಆಗಲೇ ಕತ್ತಲಾಗಿತ್ತು. ಜನ ಸಂಚಾರ ಇರಲಿಲ್ಲ. ವಿಪರೀತ ಚಳಿ. ಚಳಿಗೋ ಅಥವಾ ಗೌ ಎನ್ನುವ ಕತ್ತಲೆಗೊ ಗೊತ್ತಿಲ್ಲ ಭಯವಾಯಿತು. ಎಲ್ಲಾದರೂ ರಾತ್ರಿ ತಂಗಬೇಕೆಂದು ಹುಡುಕಿದೆ ಏನು ಗೊತ್ತಾಗಲಿಲ್ಲ. ಆ ಹೊತ್ತಿಗೆ ದೂರದಲ್ಲಿ ಒಬ್ಬ ವ್ಯಕ್ತಿ ನಡೆದು ಬರುತ್ತಿದ್ದ. ಆತ ಹತ್ತಿರ ಬಂದ ಕೂಡಲೇ ನೀನು ಎಲ್ಲಿಗೆ ಹೊರಟಿರುವೆ ಎಂದೆ ಆತ ಸ್ವಲ್ಪವೂ ಅಳುಕಿಲ್ಲದೆ ಕಳ್ಳತನ ಮಾಡಲು ಹೊರಟಿರುವೆ ಈಗ ಸಮಯವಿಲ್ಲ ಎಂದ. ನನಗೆ ಆಶ್ಚರ್ಯವಾದರೂ ಅದು ಸಂಬಂಧವಿರಲಿಲ್ಲ ನನ್ನ ಗುರಿಯೇ ಬೇರೆ ಇತ್ತು ಆತನನ್ನು ಒಂದು ರಾತ್ರಿ ಎಲ್ಲಾದರೂ ಉಳಿಯಲು ವ್ಯವಸ್ಥೆ ಬೇಕಿತ್ತು ಆಗುತ್ತದೆಯೇ ಎಂದು ಕೇಳಿದೆ. ಅದಕ್ಕೆ ಕಳ್ಳ ಹೇಳಿದ ನೀವು ಉಳಿಯುವುದಾದರೆ ನನ್ನ ಗುಡಿಸಲೇ ಇದೆ ಆದರೆ ಕೆಲವು ನಿಬಂಧನೆಗಳ ಮೇಲೆ ನೀವು ಬರಬೇಕು. ಏನು ಎಂದಾಗ, ನೀವು ನನ್ನನ್ನು ಕುರಿತು ಪ್ರಶ್ನೆ ಕೇಳುವುದು, ಅನಗತ್ಯವಾಗಿ ತಿಳುವಳಿಕೆ ಉಪದೇಶ ಕೊಡುವಂತಿಲ್ಲ. ಇದಕ್ಕೆ ಸಮ್ಮತಿ ಇದ್ದರೆ ಎಷ್ಟು ದಿನ ಬೇಕಾದರೂ ಇರಬಹುದು, ನಿಮಗೆ ಊಟ- ಸ್ನಾನಕ್ಕೆ ಬಿಸಿ ನೀರು ಎಲ್ಲಾ ಕೊಡುತ್ತೇನೆ ಎಂದಾಗ, ನನಗೆ ಅನಿವಾರ್ಯ ಆಗಿತ್ತು ಎಂದು ಒಪ್ಪಿ ಕಳ್ಳನ ಮನೆಗೆ ಬಂದೆ.
ಕಳ್ಳನ ಮನೆಗೆ ಬಂದು 15- 20 ದಿನಗಳಾಯಿತು. ಆ ವೇಳೆಗೆ ಕಳ್ಳ ನನಗೆ ಮೆಚ್ಚುಗೆಯಾಗಿದ್ದ. ಅವನ ಮಾತು ನಡೆ ನುಡಿ ಎಲ್ಲ ಇಷ್ಟವಾಗಿತ್ತು. ಪ್ರತಿನಿತ್ಯ ಸ್ನಾನಕ್ಕೆ ನೀರು, ತಿಂಡಿ ಊಟ ಎಲ್ಲ ಒದಗಿಸುತ್ತಿದ್ದ. ನಾನು ಸಮಯವನ್ನು ಧ್ಯಾನದಲ್ಲಿ ಕಳೆಯುತ್ತಿದ್ದೆ. ಒಂದು ತಿಂಗಳು ಕಳೆಯಿತು. ಇಲ್ಲಿಯೂ ಜ್ಞಾನ ಸಿಗಲಿಲ್ಲ. ಸಾಧನೆ ಗುರಿ ಮುಟ್ಟಲಿಲ್ಲ. ಬೇರೆ ಕಡೆ ಹೋಗಬೇಕು ಎಂದು ಆ ರಾತ್ರಿ ನಿರ್ಧರಿಸಿದೆ. ಕಳ್ಳ ಬೆಳಗಿನ ಜಾವ ಬಂದನು. ನಾನು ಬೆಳಿಗ್ಗೆ ಮನೆ ಬಿಡುವುದರಿಂದ ಪ್ರಶ್ನೆ ಕೇಳಿದೆ. ನೀನು ಪ್ರತಿನಿತ್ಯ ಕಳ್ಳತನ ಮಾಡಲು ಹೋಗುವೆ, ಆದರೆ ಬರಿ ಗೈಯಲ್ಲಿ ಬರುವೆ. ಇಷ್ಟು ಕಷ್ಟಪಟ್ಟು ಏಕೆ ಕಳ್ಳತನಕ್ಕೆ ಹೋಗುವೆ ಬೇರೆ ಏನಾದರೂ ಮಾಡಬಹುದಲ್ಲ ಎಂದೆ. ಆತ ಹೇಳಿದ ನಾನು ದಿನವೂ ಕಳ್ಳತನಕ್ಕೆ ಹೋಗುತ್ತೇನೆ ಆದರೆ ಇದುವರೆಗೂ ನನಗೆ ಏನೂ ಸಿಕ್ಕಿಲ್ಲ. ಆದರೆ ನನ್ನ ಪ್ರಯತ್ನಕ್ಕೆ ಎಂದಾದರೂ ಒಂದು ದಿನ ಸಫಲತೆ ಸಿಗಬಹುದು, ಸಿಗುತ್ತದೆ ಎಂಬ ನಂಬಿಕೆ ಇದೆ ಅದಕ್ಕಾಗಿ ಕಳ್ಳತನಕ್ಕೆ ಹೋಗುತ್ತಿರುವೆ ಎಂದನು. ಕಳ್ಳನ ಮಾತು ಕೇಳಿ ಸಂತನಿಗೆ ಆಶ್ಚರ್ಯ ವಾಯಿತು. ಕೆಲವೇ ದಿನಗಳಿಂದ ಜ್ಞಾನ ಪಡೆಯಲು ಹೂರಟ ನಾನು ಸುಸ್ತಾದೆ. ಆದರೆ ಆತ ಅದೆಷ್ಟೋ ತಿಂಗಳುಗಳಿಂದ ಕಳ್ಳತನ ಮಾಡಲು ಪ್ರಯತ್ನ ಪಡುತ್ತಿದ್ದಾನೆ ಏನೂ ಸಿಗದಿದ್ದರೂ ಅವನ ಪ್ರಯತ್ನ ನಂಬಿಕೆ ಗಟ್ಟಿಯಾ ಗಿದೆ. ಅವನಿಗಿರುವ ವಿಶ್ವಾಸ ಇಲ್ಲ, ಪ್ರಯತ್ನ ನಾನು ಮಾಡಿಲ್ಲ. ನಾನು ಮಾಡಬೇಕಾದ್ದು ಇದೇ ನನ್ನ ಜೀವನ ಸಂದೇಶ ಪ್ರಯತ್ನ ಬಿಡಬಾರದು ಎಂಬುದು ಅರಿವಾಯಿತು. ಈ ಕಥೆಯನ್ನು ಬರಹ ರೂಪಕ್ಕೆ ತಂದವರು — ಆಶಾ ನಾಗಭೂಷಣ.
ಮುಂದೆ ನನ್ನ ಎರಡನೇ ಗುರು, ಒಂದು ಬೀದಿ ನಾಯಿ ಎಂದನು. ಇದನ್ನು ಕೇಳಿ, ಇದೇನು ವಿಚಿತ್ರ, ನಾಯಿ ಮನುಷ್ಯನಂತೆ ಮಾತನಾಡುವುದಿಲ್ಲ. ನಾಯಿ ಹೇಗೆ ಗುರುವಾಯಿತು ಎಂದು ಯೋಚಿಸುತ್ತಿದ್ದೆವು. ಸಂತ ಹೇಳ ತೊಡಗಿದ. ನಾನು ಸುತ್ತುತ್ತಿದ್ದಾಗ, ಒಮ್ಮೆ ಬಹಳ ಬಾಯಾರಿಕೆಯಾಗಿ ಅವರಿವರನ್ನು ಕೇಳಿ ನದಿ ಇರುವ ಜಾಗ ತಿಳಿದು ನೀರು ಕುಡಿಯಲು ಹೋದೆ. ನದಿಯಲ್ಲಿ ನೀರು ಕುಡಿದು ಮನಸ್ಸು ದೇಹ ತಂಪಾಯ್ತು, ಮರದ ನೆರಳಿನಲ್ಲಿ ಸ್ವಲ್ಪ ಹೊತ್ತು ವಿಶ್ರಮಿಸಿಕೊಳ್ಳಲು ಕುಳಿತೆ. ಆ ಹೊತ್ತಿಗೆ ಬಾಯಾರಿದ ಒಂದು ನಾಯಿ ಬಂದು ನೀರು ಕುಡಿಯಲು ಹೋಯಿತು ನೀರಿನಲ್ಲಿ ಅದರ ಪ್ರತಿಬಿಂಬ ಕಂಡು ಬೇರೆ ನಾಯಿ ಎಂದು ಬೊಗಳತೊಡಗಿತು. ಆ ಪ್ರತಿಬಿಂಬ ನಾಯಿ ಬೊಗಳಿದಂತೆ ಕಾಣುತ್ತಿತ್ತು. ಇದರಿಂದ ಇನ್ನೂ ಸಿಟ್ಟು ಮತ್ತು ಕ್ರೋಧದಿಂದ ಮತ್ತಷ್ಟು ಬೊಗಳತೊಡಗಿತು. ಒಂದಷ್ಟು ಹೊತ್ತು ಕೂಗಿದ ನಂತರ ಅದಕ್ಕೆ ಸುಸ್ತಾಗಿ ಹಿಂದೆ ಹೋಗಿ ಕುಳಿತಿತು. ಮತ್ತೆ ಸ್ವಲ್ಪ ಹೊತ್ತಾದ ಮೇಲೆ ಆ ನಾಯಿ ಹೋಗಿರಬಹುದು ಎಂದು ನೀರಿನ ಬಳಿ ಬಂದಿತು .ಆದರೆ ಅದರ ಪ್ರತಿಬಿಂಬ ಮತ್ತೆ ಕಂಡಿತು ಮತ್ತಷ್ಟು ಬೊಗಳಿತು. ಇದು ಎರಡು ಮೂರು ಸಲ ಪುನರಾವರ್ತನೆಯಾಗಿ. ನಾಯಿ ಯೋಚಿ ಸಿತು. ಈ ನಾಯಿಯನ್ನು ಓಡಿಸಲುಸಾಧ್ಯವಿಲ್ಲ. ನೀರು ಕುಡಿಯದೆ ಹೋದರೆ ಹೇಗೂ ಸಾಯುವೆ, ಸಾಯುವ ಮೊದಲು ನೀರು ಕುಡಿದರೆ ತೃಪ್ತಿಯಿಂದ ಸಾಯಬಹುದು, ಒಂದು ವೇಳೆ ಆ ನಾಯಿ ನನ್ನನ್ನು ತಿಂದರೂ ಸಾಯುವೆ ಎಂದು ಯೋಚಿಸಿ ರಭಸದಿಂದ ಓಡಿ ನೀರಿಗೆ ಧುಮುಕಿ ನೀರು ಕುಡಿದು ನೀರೊಳಗೆ ನೋಡಿತು ನಾಯಿ ಕಾಣಲಿಲ್ಲ ನೀರೊಳಗಿಂದ ನೋಡಿದಾಗ ಅದರ ಪ್ರತಿಬಿಂಬ ಕಾಣಲಿಲ್ಲ ಅದು ತೃಪ್ತಿಯಿಂದ ಓಡಿಹೋಯಿತು. ಇದನ್ನು ನೋಡಿದ ನನಗೆ ಅನ್ನಿಸಿತು ಹೊರಗಿನಿಂದ ನಿಂತು ನೋಡಿದರೆ ನಮಗೇನು ತಿಳಿಯುವುದಿಲ್ಲ
ಧುಮುಕಿದಾಗ ಮಾತ್ರ ಆಳದ ಅರಿವು ತಿಳಿಯಲು ಸಾಧ್ಯ. ಆದ್ದರಿಂದ ಮುಖಾ ಮುಖಿ ಎದುರಾಗಿ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬೇಕೇ ಹೊರತು, ಯಾವುದರ ಮೂಲಕವೂ ಅಥವಾ ದೂರದಿಂದ ನಿಂತು ಯೋಚನೆ ಮಾಡುವುದರಿಂದ ಬಗೆಹರಿಯುವುದಿಲ್ಲ ಎಂಬುದು ವೇದ್ಯವಾಯಿತು ಇದನ್ನು ನೋಡಿದ ಮೇಲೆ ನಾಯಿ ನನಗೆ ಎರಡನೇ ಗುರುವಾಯಿತು.
ಈಗ ಮೂರನೇ ಗುರು ಯಾರು ಎಂದರೆ. ಪುಟ್ಟ ಬಾಲಕಿ ಹೇಗೆಂದರೆ, ಒಮ್ಮೆ ಹೀಗೆ ಅಲೆಯುತ್ತಾ ಅಪರಿಚಿತರ ಮನೆಗೆ ಹೋದೆ. ಚಿಕ್ಕ ಮಗು ಓಡಿ ಬಂದು ಬಾಗಿಲು ತೆಗೆದು ಮತ್ತೆ ಹೋಗಿ ದೀಪವನ್ನು ಎರಡು ಕೈಯಿಂದ ಅಡ್ಡ ಹಿಡಿದುಕೊಂಡಿತು. ನಾನು ಒಳಗೆ ಹೋದೆ ಆ ಹುಡುಗಿ ಕೈಗಳಿಂದ ಮರೆ ಮಾಡಿ ದೀಪವನ್ನು ಹಿಡಿದುಕೊಂಡಿದ್ದು ನೋಡಿನಾನು ಚಿಂತಕ, ತಿಳಿದವನು, ಎಂಬ ಅಹಂನಿಂದ ಹಾಗೂ ಸ್ವಲ್ಪ ತಮಾಷೆಗೆ ಇಷ್ಟೇ ಬೆಳಕಾ ಎಂದು ಹುಡುಗಿಯನ್ನು ಕೇಳಿದೆ. ಕೂಡಲೇ ಆ ಬಾಲಕಿ ಮುಂದಿನ ಬಾಗಿಲು ಹಾಕಿ ಎಂದಳು ಬಾಗಿಲು ಹಾಕಿ ಈಗೆನಾಯ್ತು ಎಂದೆ ನನ್ನ ಪ್ರಶ್ನೆಗೆ ಉತ್ತರಿಸಿ ಎಂದ ಆ ಹುಡುಗಿ 'ಮುಷ್ಟಿಯಲ್ಲಿ ಹಿಡಿದರೆ ಹಿಡಿಯಷ್ಟು, ಮುಷ್ಟಿಯನ್ನು ಬಿಚ್ಚಿದರೆ ಮನೆ ತುಂಬಾ ಹರಡುವುದು” ಏನು ನೀವೇ ಹೇಳಿ ಎಂದಳು. ಯೋಚಿಸುತ್ತಿದ್ದೆ ಆ ಹುಡುಗಿ ಹೇಳಿದಳು. ಗಾಳಿಗೆ ದೀಪ ಆರುತ್ತದೆ ಎಂದು ದೀಪ ಮರೆ ಮಾಡಿದ್ದೆ. ಇಷ್ಟರ ತನಕ ನನ್ನ ಕೈಯೊಳಗಷ್ಟೇ ಬೆಳಕು ಇತ್ತು. ಕೈ ತೆಗೆದೆ ಮನೆ ತುಂಬಾ ಬೆಳಕು ಹರಡಿತು.
ಮಕ್ಕಳು ಚಿಕ್ಕವರು ಅವರಿಗೆ ಗೊತ್ತಿಲ್ಲ ಅಥವಾ ನಮ್ಮ ಕಾಲ ಚೆನ್ನಾಗಿತ್ತು ನಿಮ್ಮ ಕಾಲ ಕೆಟ್ಟು ಹೋಯಿತು. ಹೀಗೆ ಯಾರಿಗೂ ಏನನ್ನು ಹೇಳಬಾರದು ಯಾರಲ್ಲಿ ಯಾವ ಪ್ರತಿಭೆಗಳು ಇರುತ್ತದೋ ಯಾರಿಗೂ ಗೊತ್ತಿರುವುದಿಲ್ಲ. ವಯಸ್ಸು - ವಿದ್ಯಾರ್ಹತೆ- ಬಡತನ ಸಿರಿತನ ಪಟ್ಟಣದವನು- ಹಳ್ಳಿಯವನು ಯಾವ ತಾರತಮ್ಯವೂ ಇರುವುದಿಲ್ಲ. ಜ್ಞಾನ ಇರಬೇಕು - ಬರಬೇಕು ಎಂದರೆ, ಅದು ಯಾರ ಸ್ವತ್ತು ಅಲ್ಲ ಚಿಕ್ಕ ಮಗುವಾದರೆ ಏನು ಶುಕಮುನಿಯಾದ ರೇನು ಯಾರಿಗೆ ಬೇಕಾದರೂ ಬರುತ್ತದೆ. ಈ ರೀತಿ ಸೂಫಿ ಸಂತ ತನ್ನ ಮೂರು ಕಥೆಗಳ ಮೂಲಕ ಗುರುಗಳನ್ನು ಪರಿಚಯಿಸಿದನು.
ನೀತಿ: ಯಾವುದೇ ಕಾರಣಕ್ಕೂ ಪ್ರಯತ್ನ ಬಿಡ ಬಾರದು ವಿಶ್ವಾಸ ಕಳೆದು ಕೊಳ್ಳಬಾರದು. ಎರಡನೇದು ನೀರಿನ ಆಳ ಅಗಲ ಎಷ್ಟು ಇದೆ ಎಂದು ನೋಡಲು ನೀರಿಗೆ ತಿಳಿಯಬೇಕು ಹೊರಗೆ ನಿಂತು ನೋಡಿದರೆ ತಿಳಿಯುವುದಿಲ್ಲ. ನಾನು ದೊಡ್ಡ ಜ್ಞಾನಿ, ನನಗೆ ಎಲ್ಲಾ ತಿಳಿದಿದೆ ಎಂಬ ಅಹಂಕಾರ ಎಂದಿಗೂ ಸಲ್ಲದು.
ಅಜ್ಞಾನ ತಿಮಿರಾಂಧಸ್ಯ ಜ್ಞಾನಾಂಜನ ಶಲಾಕಾಯ !
ಚಕ್ಷುರುನ್ಮೀಲಿತಂ ಯೇನ, ತಸ್ಮೈ ಶ್ರೀ ಗುರವೇ ನಮಃ!!
ಅಜ್ಞಾನವೆಂಬ ಕತ್ತಲೆಯಿಂದ ಕುರುಡಾದವನ ಕಣ್ಣನ್ನು,
ಗುರುವು ಜ್ಞಾನವೆಂಬ ಬಾಡಿಗೆಯ ಕಣ್ಣಿನಿಂದ ತೆರೆಯುತ್ತಾನೆ
ಅಂತಹ ಶ್ರೀ ಗುರುವಿಗೆ ನಮಸ್ಕಾರ.
ವಂದನೆಗಳೊಂದಿಗೆ,
ಬರಹ: ©ಆಶಾ ನಾಗಭೂಷಣ
▬▬ஜ۩۞۩ஜ▬▬▬*▬▬▬ஜ۩۞۩ஜ▬▬
!! ಸರ್ವಂ ಶ್ರೀ ಕೃಷ್ಣಾರ್ಪಣಮಸ್ತು !!
🙏 ಸರ್ವೇ ಜನಾಃ ಸುಖಿನೋ ಭವಂತುಸರ್ವೇ
ಸಂತು ನಿರಾಮಯಾಃ 🙏
!! ಧರ್ಮೋ ರಕ್ಷತಿ ರಕ್ಷಿತಃ !!
▬▬▬ஜ۩۞۩ஜ▬▬▬▬▬▬ஜ۩۞۩ஜ▬▬▬
🙏 ಹರಿ ಸರ್ವೋತ್ತಮ ವಾಯು ಜೀವೋತ್ತಮ 🙏


