#PSSM World ನಿಜವಾಗಿಯೂ ಇವೆಯೇ ಅಥವಾ ಅದು ಕೇವಲ ಮಾನಸಿಕ ಭ್ರಮೆಯೇ?
ವೇದೋಪನಿಷತ್ಗಳು, ಶೃತಿ ಸ್ಮೃತಿಗಳು, ಭಗವತಗೀತೆ, ಈ ದೆವ್ವ ಭೂತಗಳ ಕುರಿತು ಯಾಕೋ ಏನೂ ಹೇಳಲೇ ಇಲ್ಲ. ಶರಣರು ಸಂತರು, ಜ್ಞಾನಿಗಳು ಯೋಗಿಗಳು, ಮಹಾತ್ಮರು ಈ ಕುರಿತು ಏನೂ ಹೇಳಲೇ ಇಲ್ಲ.ಪರಮಾತ್ಮನ ಅನಂತ ಗುಣಗಳನ್ನು ವರ್ಣಿಸಿದ್ದಾರೆ. ಇವರೆಲ್ಲ ದೇವರ ಅಸ್ತಿತ್ವದ ಬಗ್ಗೆ ಅನೇಕ ಶಾಸ್ಥರಾರ್ಥವಾಗಿ ಚರ್ಚೆ, ವಿಚಾರ ಮಾಡಿದ್ದಾರೆಯೇ ವಿನಃ ದೆವ್ವಗಳ ಅಸ್ತಿತ್ವ ಕುರಿತು ಹೇಳಲೇ ಇಲ್ಲ. ನಮ್ಮನ್ನೆಲಾ ಹುಟ್ಟಿಸಿ, ಸಾಕಿ ಸಲುಹಿ, ಕೊನೆಗೆ ತನ್ನಲ್ಲಿಯೇ ಐಕ್ಯಗೊಳಿಸಿಕೊಳ್ಳುವ ದೇವರು, ತನ್ನ ವಿರುದ್ಧ ಗುಣಗಳಿಂದ ಕೂಡಿದ ದೆವ್ವಗಳ ಇರುವಿಕೆಯನ್ನು ಯಾಕೆ ಸ್ಪಷ್ಟ ಪಡಿಸಲಿಲ್ಲವೊ? ವಿಜ್ಞಾನದಲ್ಲಿ ಈ ಸೃಷ್ಟಿಯ ಕುರಿತು ಹೇಳಬೇಕಾಗಿ ಬಂದಾಗ ' ಶಕ್ತಿ' ಯೇ ಅಂತಿಮ ಎಂದು ಹೇಳಿ ಅಲ್ಲಿಗೆ ಮುಗಿಸಿದ್ದಾರೆ. ವಿಜ್ಞಾನಿಗಳಿಗೂ ದೆವ್ವ ಭೂತಗಳ ಬಗ್ಗೆ ಹೆದರಿಕೆ ಇದ್ದಂತೆ ಕಾಣುತ್ತೆ 🤣😂.
ದೆವ್ವ ಭೂತಗಳ ಅಸ್ತಿತ್ವ ಬಗ್ಗೆ ತಿಳಿದುಕೊಳ್ಳಬೇಕಾದರೆ, ಮೊದಲು ಮನಸ್ಸಿನ ಸ್ವರೂಪದ ಕುರಿತು ತಿಳಿದುಕೊಳ್ಳಬೇಕು. ಮನುಷ್ಯನ ಆಲೋಚನೆಗಳು, ಭಾವನೆಗಳು, ಕಲ್ಪನೆಗಳು ಪ್ರಜ್ಞೆಯಿಂದ ಹೊರಹೋಮ್ಮತ್ತವೆ.( mind precedes from consciousness. Mind is everything.) ಆದ್ದರಿಂದ ಅವುಗಳಿಗೆ ಅಷ್ಟೊಂದು ಶಕ್ತಿ ಸಂಚಯ ವಾಗುತ್ತದೆ.( waves of energy in the space and time). ನಾವು ಪ್ರತಿಸಲ ಏನನ್ನು ಆಲೋಚಿಸುತ್ತೇವೆಯೋ, ಕಲ್ಪಿಸುತ್ತ ಇರುವೆಯೋ ಅದು ನಮ್ಮ ಜೀವನವನ್ನು ರೂಪಗೋಳಿಸುತ್ತದೆ. ಪ್ರಜ್ಞೆ ಇಲ್ಲದಿದ್ದರೆ ಆಲೋಚನೆ, ಭಾವನೆ, ಕಲ್ಪನೆಗಳು ನೀರ್ಜಿವ ವಾಗುತ್ತವೆ.ಈ ಸೃಷ್ಟಿಯನ್ನು ಅರಿಯಬೇಕಾದರೆ ಪ್ರಜ್ಞೆ ಇರಲೇಬೇಕು. ಮನುಷ್ಯನಿಂದ ಪ್ರಜ್ಞೆಯನ್ನು ಬೆರ್ಪಡಿಸಿದರೆ ಏನು ಉಳಿಯುವುದು? ಏನೂ ಅಸ್ತಿತ್ವ ಹೊಂದಿರುವುದಿಲ್ಲ.
ಇಂತಹ ಶಕ್ತಿಶಾಲಿಯಾದ ಮನಸ್ಸು ಅದ್ಭುತವಾದ ಭ್ರಮಾ ಲೋಕವನ್ನು ಕ್ಷಣಾರ್ದದಲ್ಲಿ ಏನನ್ನಾದರೂ ಸೃಷ್ಟಿಸಬಲ್ಲದು. ಈ ಮನಸ್ಸಿಗೆ ದೆವ್ವವೇ ಇರಲಿ, ದೇವರೇ ಇರಲಿ,ಅದು ತನ್ನ ಕಲ್ಪನಾ ಶಕ್ತಿಯಿಂದ ಏನನ್ನಾದರೂ ನಿಜದಂತೆ ತೋರಿಸಬಲ್ಲದು.ಅದು ಸತ್ಯ ಅಲ್ಲದಿದ್ದರೂ, ನಮ್ಮ ನಂಬಿಕೆಯ ಕಾರಣದಿಂದ ಆ ಘಟನೆಗಳು ಸತ್ಯವಾಗಿಬಿಡುವವು.ಇದು ಪ್ರತಿನಿತ್ಯ ಎಲ್ಲರಿಗೂ ಅನುಭವ ಆಗುವುದು. ನಾವು ರಾತ್ರಿ ಮಲಗಿ ನಿದ್ರಿಸುವಾಗ, ಕನಸಿನ ಪ್ರಪಂಚದಲ್ಲಿ ನಮಗೆ ಏನೆಲ್ಲಾವೂ ಚಿತ್ರ ವಿಚಿತ್ರವಾಗಿ ಗೋಚರಿಸುವುದಿಲ್ಲವೇ? ಸುಖ ದುಃಖ, ಭಯ, ಪ್ರಯಾಣದ ಅನುಭವ, ಶ್ರೀಮಂತಿಕೆ,ಬಡತನದ ನೋವು ಇತ್ಯಾದಿಗಳುಕನಸಿನಲ್ಲಿ ನಿಜದಂತೆ ನಮಗೆ ಭಾಸವಾಗುವುದು.ಈ ಮನಸ್ಸಿನ ಕುತಂತ್ರತೆ, ಜಾಲವನ್ನು ಅರಿಯಬೇಕು. ಕನಸಿನಲ್ಲಿ ನಡೆದಿದ್ದು ನಿಜವಲ್ಲ ಅಂದಮೇಲೆ ಎಚ್ಚರದಲ್ಲಿ ನಡೆಯುವ ಎಲ್ಲ ಸಂಗತಿಗಳು ಒಂದು ತಾತ್ಕಾಲಿಕ ಬ್ರಮ್ಹಾ ಅಷ್ಟೇ.
ಧನ್ಯವಾದಗಳು 🙏🙏.

