ShareChat
click to see wallet page
search
#ಶ್ರೀನಿವಾಸ_ಗೋವಿಂದ, ತಿರುಪತಿ ಶ್ರೀನಿವಾಸನಿಗೆ, ವೆಂಕಟೇಶ್ವರ- ತಿಮ್ಮಪ್ಪ -ಮೂಡಲಗಿರಿ ವೆಂಕಟ ರಮಣ - ಬಂಗಾರ ಗಿರಿವಾಸ - ಏಳು ಬೆಟ್ಟಗಳ ಒಡೆಯ (ಏಳು ಕೊಂಡಲ ವಾಡ) ಎಂದು ಭಕ್ತರು ಅವನನ್ನು ನಾನಾ ಹೆಸರುಗಳಿಂದ ಕರೆಯುತ್ತಾರೆ. ಭೃಗು ಮಹರ್ಷಿಯ ನೆಪ ಮಾಡಿಕೊಂಡು ಭಗವಂತ ವಿಷ್ಣು ವೈಕುಂಠದಿಂದ ಧರೆಗೆ ಕಾಲಿಟ್ಟ ದಿನವೇ ವಿಜಯದಶಮಿ ಶ್ರವಣ ನಕ್ಷತ್ರ ವಾಗಿತ್ತು. ಅವನ ನಕ್ಷತ್ರ ರೋಹಿಣಿ ಆಗಿದ್ದರೂ, ಭೂಮಿಗೆ ಆವಿರ್ಭವಿಸಿದ ದಿನ ಶ್ರವಣ ವಿದ್ದುದರಿಂದ ಶ್ರವಣ ನಕ್ಷತ್ರ ಎಂದೇ ಹೇಳಿಕೊಂಡ. ಆಕಾಶ ರಾಜನ ಮಗಳು ಪದ್ಮಾವತಿ ಕೇಳಿದಾಗಲೂ ತನ್ನ ನಕ್ಷತ್ರ ಶ್ರವಣ ಎಂದೇ ಹೇಳಿದ. ಇಂತಹ ಶ್ರೀನಿವಾಸನಿಗೆ 'ಗೋವಿಂದ' ಎಂಬ ಹೆಸರು ಹೇಗೆ ಬಂದಿತು. ಇದನ್ನು ಯಾರು ಇಟ್ಟರು. ಇದಕ್ಕೊಂದು ಕಥೆ ಇದೆ.‌ ಒಮ್ಮೆ ಶಿವ ಮತ್ತು ವಿಷ್ಣು ಒಂದೆಡೆ ಕುಳಿತು ಮಾತಾಡುತ್ತಿದ್ದರು. ಹೀಗೆ ಮಾತಾಡುತ್ತಾ ವಿಷ್ಣು, ಶಿವನಿಗೆ ಕೇಳಿದನು. ಪರಮೇಶ್ವರ, ಅತಳ, ಸುತಳ, ಪಾತಾಳ, ಬ್ರಹ್ಮ ಲೋಕ, ಇಂದ್ರ ಲೋಕ ಹೀಗೆ ಬ್ರಹ್ಮಾಂಡದ ಎಲ್ಲಾ ಲೋಕಗಳನ್ನು ನೋಡಿದ್ದೇನೆ. ಆದರೆ ನೀವು ನೆಲೆಸಿರುವ ಕೈಲಾಸ ಮಾತ್ರ ನಾನು ನೋಡಿಲ್ಲ. ಅದನ್ನು ನಾನು ನೋಡಬೇಕು ಎಂಬ ಆಸೆ ಆಗಿದೆ ಎಂದನು. ಶಿವನು, ಅದಕ್ಕೆನಂತೆ ಎಂದಾದರೂ ಏಕೆ ನಾಳೆಯೇ ಬನ್ನಿ ಕೈಲಾಸವನ್ನು ನೋಡಬಹುದು ಎಂದನು. ವಿಷ್ಣು ಅದಕ್ಕೆ ಒಪ್ಪಿಕೊಂಡ. ಶಿವನು ಕೈಲಾಸಕ್ಕೆ ಬಂದು, ಭೃಂಗಿಯನ್ನು ಕರೆದು, ನಾಳೆ ವಿಷ್ಣು ಕೈಲಾಸ ನೋಡಲು ಬರುತ್ತಿದ್ದಾನೆ. ಕೈಲಾಸವನ್ನು ಅಂದವಾಗಿ ಕಾಣುವಂತೆ ಮಾಡುವ ಜವಾಬ್ದಾರಿ ನಿನ್ನದು ಎಂದನು. ಶಿವನ ಮಾತಿನಂತೆ ಭೃಂಗಿ ಕೈಲಾಸವನ್ನು ಶೃಂಗರಿಸಲು ಹೊರಟನು. ಕಣ್ಣು ಹಾಯಿಸಿ ಕೈಲಾಸ ನೋಡುತ್ತಾನೆ. ಎಲ್ಲೆಲ್ಲಿ ನೋಡಿದರೂ ಬೆಟ್ಟ, ಗುಡ್ಡ, ಬೂದಿ, ಕೈಲಾಸವನ್ನು ಸುಂದರ ಕಾಣುವಂತೆ ಮಾಡುವುದು ಹೇಗೆ ಎಂದು ಯೋಚಿಸಿ ಇದು ನನ್ನ ಕೈಯಲ್ಲಂತೂ ಸಾಧ್ಯವಿಲ್ಲ. ಏನು ಮಾಡಲಿ ಪರಮೇಶ್ವರ ಎಂದು ಅಂದುಕೊಳ್ಳುವಾಗ, ಅವನ ಮುಂದೆ ಹಸು ಸಗಣಿ ಹಾಕಿ ಹೋಗುವುದನ್ನು ನೋಡಿದ. ಅವನಿಗೊಂದು ಉಪಾಯ ಹೊಳೆಯಿತು. ಕೈಲಾಸದಲ್ಲಿರುವ ಹೆಣ್ಣು ಮಕ್ಕಳನ್ನು ಕರೆದು, ನೋಡಿ ನಾಳೆ ಮಹಾ ವಿಷ್ಣು ಕೈಲಾಸಕ್ಕೆ ಬರುತ್ತಿದ್ದಾರೆ. ನೀವೆಲ್ಲ ಸೇರಿ ಕೈಲಾಸ ದಲ್ಲಿರುವ ಸಗಣಿಯನ್ನೆಲ್ಲ ಒಟ್ಟು ಮಾಡಿ, ಸಗಣಿ ಮತ್ತು ನೀರಿನಿಂದ ಕೈಲಾಸಕ್ಕೆ ಕಡ್ಡ್ನೀರು ಸುರಿದು ಗುಡಿಸಿ - ಸಾರಿಸಿ, ಗುಡಿಸಿ, ಚಂದದ ರಂಗೋಲಿಗಳನ್ನು ಬರೆದು, ಹೂವುಗಳಿಂದ ಸಿಂಗರಿಸಿ, ಹಾಗೂ ಕೈಲಾಸದ ಮುಖ್ಯದ್ವಾರವನ್ನು, ಹೂವು ಬಳ್ಳಿಗಳಿಂದ ಅಲಂಕರಿಸಿ, ಮಾವಿನೆಲೆಗಳಿಂದ ತೋರಣ ಕಟ್ಟಿಬಿಡಿ. ಬೃಂಗಿ ಹೇಳಿದಂತೆ ಹೆಣ್ಣುಮಕ್ಕಳೆಲ್ಲ ಸೇರಿ ಕೈಲಾಸವನ್ನು ಅಲಂಕರಿಸುವ ಕೆಲಸವನ್ನು ಸಂತೋಷದಿಂದ ಮಾಡಿದರು. ಕೈಲಾಸ ಹೊಸ ಮಧುವಣಗಿತ್ತಿ ಯಂತೆ ನಳ ನಳಿಸಿತು. ಮರುದಿನ ವೈಕುಂಠದಿಂದ ವಿಷ್ಣು ಸರ್ವಾಲಂಕಾರ ಭೂಷಿತನಾಗಿ, ಮೈಗೆಲ್ಲ ಗಂಧ -ಸುಗಂಧಗಳನ್ನು ಲೇಪಿಸಿಕೊಂಡು, ಪೀತಾಂಬರವನ್ನು ಧರಿಸಿ, ಹಣೆಗೆ ತಿಲಕ ಇಟ್ಟುಕೊಂಡು, ಅಷ್ಟೈಶ್ವರ್ಯಗಳೊಂದಿಗೆ, ಶಂಕು ಚಕ್ರ ಗದಾ ಧಾರಿ ಯಾಗಿ,ಕೊರಳಲ್ಲಿ ಪರಿಮಳ ಭರಿತ ಪುಷ್ಪಮಾಲೆ, ತುಳಸಿಹಾರ ಧರಿಸಿ ಗರುಡಾರೂಢನಾಗಿ ಕೈಲಾಸಕ್ಕೆ ಬರುತ್ತಾನೆ. ವಿಷ್ಣು ಅಲಂಕಾರಪ್ರಿಯ ನಾದರೆ ಶಿವನು ಅಭಿಷೇಕ ಪ್ರಿಯ ಎಂದು ಇದಕ್ಕೆ ಹೇಳುವುದು. ವಿಷ್ಣು, ಕೈಲಾಸಕ್ಕೆ ಬರುತ್ತಿದ್ದಂತೆ ಪರಮೇಶ್ವರ ಹಾಗೂ ಅವನ ಗಣಗಳಾದ ನಂದಿ -ಭೃಂಗಿ ಸಹಿತ ಎಲ್ಲಾ ಗಣಗಳೊಡನೆ ಬಂದು, ವಿಷ್ಣುವನ್ನು ಆದರದಿಂದ ಕೈಲಾಸಕ್ಕೆ ಸ್ವಾಗತಿ ಸುತ್ತಾನೆ. ವಿಷ್ಣು ಕೈಲಾಸದ ಸುತ್ತ ಒಮ್ಮೆ ಕಣ್ಣಾಡಿಸಿ, ಇದೇನಿದು ಎಲ್ಲಿಂದ ಬರುತ್ತಿದೆ ಈ ಸುಗಂಧವಾದ ಪರಿಮಳ ಆಹಾ ಎಂದು ಕೇಳಿ ಸುಗಂಧ ಭರಿತ ಸುವಾಸನೆಯನ್ನು ಆಸ್ವಾದಿಸುತ್ತಾ ಅಲ್ಲಿಯೇ ನಿಂತಿರುವಾಗ, ಪರಶಿವನು ಬೃಂಗಿಯನ್ನು ಕರೆದು ಬೃಂಗಿ ಈಗ ಬರುತ್ತಿರುವ ಸುವಾಸನೆ ಯಾವುದರದ್ದು ಎಂದು ಕೇಳಿದನು. ಬೃಂಗಿಯು ಶಿವನಿಗೆ (ಗೋ+ವಿಂದ) ಗೋವಿಂದ ದಿಂದ ಈ ಸುಗಂಧ ದ್ರವ್ಯದ ಪರಿಮಳ ಬರುತ್ತಿರುವುದು ಎಂದು ಹೇಳಿದನು. ಬೃಂಗಿ ಹೇಳಿದ್ದನ್ನೆ ಜೋರಾಗಿ ಕೂಗಿ ಹರನು -ಹರಿಗೆ ಗೋವಿಂದ ದಿಂದ ಎಂದು ಹೇಳಿದನು. ಈ ಜೋರು ಧ್ವನಿಯ, ಗೋವಿಂದ ಹೆಸರನ್ನು ಕೇಳಿದ ಅಲ್ಲಿದ್ದವರೆಲ್ಲ , ಒಟ್ಟಾಗಿ ಸೇರಿ ಗೋ,ವಿಂದ, ಗೋ,ವಿಂದ, ಎಂದು ವೈಕುಂಠ ಪತಿಯಾದ ನಾರಾಯಣನನನ್ನು ಕರೆದರು. ಸಂತೋಷಗೊಂಡ ವಿಷ್ಣು ಇದೇ ವೈಕುಂಠ, ಇದೇ ಕೈಲಾಸ, ಎಂದು ಅಲ್ಲಿದ್ದ ಎಲ್ಲರಿಗೂ ಆಶೀರ್ವಾದ ಮಾಡಿದನು. ಇದನ್ನು ಕಂಡ ಪರಮೇಶ್ವರರು, ವಿಷ್ಣುವಿಗೆ, ಇನ್ನು ಮುಂದೆ ಭಕ್ತ ಜನರು ನಿನ್ನನ್ನು ಗೋವಿಂದಾ, ಗೋವಿಂದಾ, ಎಂಬ ಹೆಸರಿನಿಂದಲೇ ಕರೆಯಲಿ. ಈ ಹೆಸರಿನಿಂದ ಕರೆದ ಅವರೆಲ್ಲರಿಗೂ ಕಷ್ಟಗಳು ಕಳೆದು ಶುಭವಾಗುತ್ತದೆ ಎಂದು ಶಿವನು ಹರಸಿದನು. ಇಂಥ ಒಂದು ಶುಭ ಘಳಿಗೆಯಲ್ಲಿ ಶಿವನು ವಿಷ್ಣುವಿಗೆ 'ಗೋವಿಂದ' ಎಂಬ ಹೊಸತೊಂದು ಹೆಸರನ್ನು ನಾಮಕರಣ ಮಾಡಿದನು. ಅಂದಿನಿಂದ ಮಹಾ ವಿಷ್ಣು ವನ್ನು ಗೋವಿಂದ, ಎಂದು ಕರೆಯುತ್ತಾರೆ. ತಮ್ಮ ಕಷ್ಟಗಳಿಂದ ಮುಕ್ತಿ ಪಡೆಯುತ್ತಾರೆ. ತಿರುಪತಿಯಲ್ಲಿ ಬೆಟ್ಟ ಹತ್ತುವಾಗ ಗೋವಿಂದಾ, ಗೋವಿಂದಾ, ಎಂದು ಘೋಷಣೆ ರೂಪದ ಶ್ರೀನಿವಾಸನ ಸ್ಮರಣೆ ಮಾಡುತ್ತಾ ಬೆಟ್ಟ ಹತ್ತುತ್ತಾರೆ, ಎಂಥಾ ಕಠಿಣ ಕೆಲಸಗಳನ್ನು ಗೋವಿಂದ ಗೋವಿಂದ ಎನ್ನುತ್ತಾ ಮಾಡುತ್ತಾರೆ ಹೂವಿನ ಸರ ಎತ್ತಿದಂತೆ ಅವರ ಕಠಿಣ ಶ್ರಮಗಳು ಸಾರ್ಥಕವಾಗುತ್ತದೆ. ಕಾಯ, ವಾಚ, ಮನಸಾ, ಗೋವಿಂದ ನಾಮಾವಳಿಯನ್ನು ಭಜಿಸಿ ಮೈ ಮರೆತು ಕುಣಿದಾಡುತ್ತಾರೆ. ಈ ರೀತಿಯಾಗಿ ಗೋವಿಂದ ಎಂಬ ಹೆಸರು, ದೇವಲೋಕ, ಭೂಲೋಕ ಸೇರಿದಂತೆ ಜಗತ್ತಿ ನೆಲ್ಲೆಡೆ ಗೋವಿಂದ ನಾಮಾವಳಿ ಅಣುರಣಿಸಿತು. ಗೋವಿಂದ ಅನ್ನೋ ಹೆಸರಿನ ಅರ್ಥ, 'ಗೋ' ಅಂದರೆ ಗೋವು, 'ವಿಂದ' ಅಂದರೆ ಸಂಸ್ಕೃತದಲ್ಲಿ ಸಗಣಿ ಎಂದಾಗುತ್ತದೆ. ಸುಗಂಧ ಯಾವುದೆಂದು ಬೃಂಗಿಯನ್ನು ಕೇಳಿದಾಗ, ಸ್ವಲ್ಪ ದೂರದಲ್ಲಿದ್ದ ಬೃಂಗಿಯು 'ಗೋವಿಂದು' ಎಂದು ಕೂಗಿ ಹೇಳುತ್ತಾನೆ. ಇದನ್ನು ಕೇಳಿದ ಶಿವನು ಸಂತೋಷದಿಂದ ವಿಷ್ಣುವಿಗೆ ಇನ್ನು ಮುಂದೆ ನಿನ್ನ ಭಕ್ತರು ನಿನ್ನನ್ನು ಗೋವಿಂದ ಎಂಬ ಹೆಸರಿನಿಂದ ಕರೆದರೆ ಅವರಿಗೆ ಸುಲಭ ಮುಕ್ತಿ ದೊರೆಯುತ್ತದೆ ಎಂದು ಅನುಗ್ರಹಿಸುತ್ತಾನೆ ಹೀಗೆ ವಿಷ್ಣುವಿಗೆ ಶಿವನು ಇಟ್ಟ ಹೆಸರು ಗೋವಿಂದ ಎಂದಾಯಿತು. ಶ್ರೀನಿವಾಸ ಪದ್ಮಾವತಿಯರ ಮದುವೆಯನ್ನು ಆಕಾಶರಾಜನು ಹತ್ತು ದಿನಗಳ ಕಾಲ ವಿಜೃಂಭಣೆಯಿಂದ ಮಾಡಿದನು. ಆಕಾಶ ರಾಜನು ಮಗಳ ಮದುವೆ ಮಾಡಿದ ಮೇಲೆ ಅಳಿಯನಾದ ಶ್ರೀನಿವಾಸನಿಗೆ ಒಂದು ತಿಂಗಳು ಅರಮನೆ ಯಲ್ಲಿ ಇರುವಂತೆ ಹೇಳಿದನು. ಕಾರಣ ಮಗಳು ಪದ್ಮಾವತಿಯನ್ನು ಹುಟ್ಟಿದಾಗಿ ನಿಂದಲೂ ಬಿಟ್ಟು ಅಭ್ಯಾಸವಿಲ್ಲದ ಅವಳನ್ನು ಮದುವೆಯಾದ ಕೂಡಲೇ ಗಂಡನ ಮನೆಗೆ ಕಳುಹಿಸಿದರೆ, ನಮಗೂ ಹಾಗೂ ಪದ್ಮಾವತಿಗೂ ಬೇಜಾ ರಾಗುತ್ತದೆ? ಎಂದು ಸ್ವಲ್ಪ ಕಾಲ ಮಗಳಿಗೆ ಅಲ್ಲೇ ಇರುವಂತೆ ಹೇಳಿದನು. ಹಾಗೆ ಅಳಿಯನಾದ ಶ್ರೀನಿವಾಸನಿಗೂ ಇರುವಂತೆ ಹೇಳಿದನು. ಭೂಮಿಗೆ ಬಂದಿದ್ದೆ ಶ್ರೀನಿವಾಸ ಜಗತ್ತಿಗೆ ನೀತಿ ಪಾಠ ಹೇಳುವುದಕ್ಕಾಗಿ, ಈಗ ಅದನ್ನು ತೋರಿಸುವ ಸಮಯ ಬರುತ್ತಿದೆ. ಹಾಗಾಗಿ ಶ್ರೀನಿವಾಸನು ಲೋಕಕ್ಕೆ ಅರ್ಥವಾಗುವಂತೆ ಮಾಡಿದ ಮೊದಲ ನೀತಿ ಪಾಠ, ನಾನು ಇಲ್ಲಿ ಇರಲು ಸಾಧ್ಯವಿಲ್ಲ ನನಗೆ ಹೊರೆ ಕೆಲಸವಿದೆ. ನಾನು ಹೊರಡುತ್ತೇನೆ ಎಂದು ದಡ ದಡ ರಥ ಹತ್ತಿ ಅಗಸ್ತ್ಯರ ಆಶ್ರಮಕ್ಕೆ ದೌಡಾಯಿಸಿ ಬಂದನು. ಹಾಗೆ ನೋಡುತ್ತಾ ಹೋದರೆ ಶ್ರೀನಿವಾಸನಿಗೆ ಕರೆದು ಕಟ್ಟೆ ಹಾಕೋ ಕೆಲಸ ಯಾವುದೂ ಇರಲಿಲ್ಲ. ಆದರೆ ಮದುವೆಯಾದ ಮೇಲೆ ಅಳಿಯನು ಮಾವನ ಮನೆಯಲ್ಲಿ ಠಿಕಾಣಿ ಹೂಡಬಾರದು. ಅಪರೂಪಕ್ಕೆ ಅತಿಥಿಯಂತೆ ಕರೆದಾಗ ಬಂದು ಹೋಗಬೇಕು. ಎಂಬ ಲೋಕಕ್ಕೆ ನೀತಿ ಹೇಳವ ಸಂದೇಶವನ್ನು ಸಾರಿದನು. ಕರೆದು ಅಪರೂಪಕ್ಕೆ ಬಂದ ಅಳಿಯನಿಗೆ ಕೂರಲು ನಿಂತಲ್ಲಿಗೆ ಮಣೆ, ಕುಳಿತಲ್ಲಿಗೆ ನೀರು ಕೊಡುತ್ತಾರೆ. ಎರಡನೇ ದಿನವಾದರೆ ಅಲ್ಲೇ ಇದೆ ನೀನು ತೆಗೆದುಕೋ ಎನ್ನುತ್ತಾರೆ, ಮೂರನೇ ದಿನವಾದರೆ ಇದನ್ನು ಮಾಡಿ ಕೊಂಡು ಬಾ, ಅದನ್ನು ಕೊಟ್ಟು ಬಾ, ಇನ್ನೇನು ಅಡುಗೆ ಆಯಿತು ಬಡಿಸುತ್ತೇನೆ ಸ್ವಲ್ಪ ಕಾದಿರಿ ಎಂಬ ಉದಾಸೀನ ಭಾವ ತಾಳುತ್ತಾರೆ. ಆದುದರಿಂದ ಮಾವನ ಮನೆಗೆ 'ಸದರ' ಆಗದೆ ಗೌರವದಿಂದ ಇರಬೇಕು ಎಂಬುದು. ಹಿರಿಯರಾದ ಅಗಸ್ತ್ಯರು, ಶ್ರೀನಿವಾಸನ ಮದುವೆಗೂ ಮೊದಲು, ನಿನ್ನ ಮದುವೆಯಾಗು ತ್ತಿದ್ದಂತೆ ಇಲ್ಲಿಗೆ ಬಂದು ಮೊದಲು ನನಗೆ ಮುಖ ತೋರಿಸಬೇಕು ಎಂದು ಆಜ್ಞೆ ಮಾಡಿದ್ದರು. ಅವತಾರ ಪುರುಷ ಶ್ರೀನಿವಾಸನಿಗೆ ಹಿರಿಯರ ಮಾತಿಗೆ, ಹಾಗೆ ಭಕ್ತರ ಮಾತಿಗೆ ಕಟ್ಟು ಬೀಳುವುದು ಎಂದರೆ ಬಹಳ ಪ್ರಿಯವಾದದ್ದು, ಶ್ರೀನಿವಾಸ ಅವನೇ ಹೇಳಿದಂತೆ 'ಭಕ್ತಪರಾಧೀನ' ಈ ಎಲ್ಲಾ ಕಾರಣಗಳಿಂದ ಅಗಸ್ತ್ಯರ ಆಶ್ರಮಕ್ಕೆ ಬಂದನು. ಅಲ್ಲದೆ ಹೊಸದಾಗಿ ಮದುವೆಯಾದವರು, ಆರು ತಿಂಗಳು ಬೆಟ್ಟ ಹತ್ತುವುದು, ಸಮುದ್ರ ಈಜುವುದು, ದೇಶ ಸುತ್ತುವುದು, ಪರ್ವತ ಏರುವುದು, ಕಾಡು- ಮೇಡು ಅಲೆಯುವುದು, ಮಾಡುವಂತಿಲ್ಲ. ಈ ಸೂಕ್ಷ್ಮಗಳನ್ನೆಲ್ಲ ಲೋಕಕ್ಕೆ ಅರ್ಥ ಮಾಡಿಸುವಂತೆ ಶ್ರೀನಿವಾಸನು ಈ ಕಟ್ಟು ಪಾಡುಗಳನ್ನೆಲ್ಲ ಪಾಲಿಸುತ್ತಿದ್ದನು. ಶ್ರೀನಿವಾಸನು ಮದುವೆಯಾದ ವೈಶಾಖ ಮಾಸದಿಂದ ಅಶ್ವಿಜ ಮಾಸ ಆರು ತಿಂಗಳ ತನಕ ಅಗಸ್ತ್ಯರ ಆಶ್ರಮದಲ್ಲಿ ಇರುತ್ತಾನೆ. ನಂತರ ಬೆಟ್ಟ ಹತ್ತುತ್ತಾನೆ. ಅಗಸ್ತ್ಯರ ಆಶ್ರಮ ಈಗ ಇರುವುದು ಎಂದರೆ ಕಲ್ಯಾಣ ಶ್ರೀನಿವಾಸ, ಅಥವಾ 'ಶ್ರೀನಿವಾಸ ಮಂಗಾ ಪುರ' ಎಂದು ಕರೆಯುತ್ತಾರೆ. 'ಅಲಮೇಲು ಮಂಗಾಪುರ' ಪದ್ಮಾವತಿಯ ಊರು. ಅಗಸ್ತ್ಯರ ಆಶ್ರಮದಿಂದ ಅಶ್ವಿಜ ಮಾಸದಲ್ಲಿ ಶ್ರೀನಿವಾಸ ಬೆಟ್ಟ ಹತ್ತಲು ಆರಂಭಿಸಿದನು. 🙏❤️🌷 ವಿಮಲ್ ನ್ಯೂಟ್ರಿಷನ್ ಸೆಂಟರ್ 🌷❤️🙏 #😍 ನನ್ನ ಸ್ಟೇಟಸ್ #🎥 Motivational ಸ್ಟೇಟಸ್ #✍️ ಮೋಟಿವೇಷನಲ್ ಕೋಟ್ಸ್ #👦🏻 Bad Boyz ಸ್ಟೇಟಸ್
😍 ನನ್ನ ಸ್ಟೇಟಸ್ - 05 05 - ShareChat