"ದೀಪದಂತಿಹ ಜನ್ಮ
ಬಂದುದು ತಿಳಿಯಬಾರದು,
ಹೋಹುದು ತಿಳಿಯಬಾರದು.
ಮೇಘದಂತಿಹ ಜನ್ಮ
ಬಂದುದು ತಿಳಿಯಬಾರದು,
ಹೋಹುದು ತಿಳಿಯಬಾರದು.
ಶಿಶುವಿನಂತಿಹ ಜನ್ಮ
ಬದುಕುವುದು ತಿಳಿಯದು,
ಬದುಕಿ ಬಾಳೀತೆಂಬುದು
ತಿಳಿಯಬಾರದು ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ.
✍️ ಬಸವಯೋಗಿ ಸಿದ್ದರಾಮೇಶ್ವರರ ವಚನ
ಬಸವ ಬೆಳಗಿನ ಶರಣು ಶರಣಾರ್ಥಿಗಳು 🙏 #//🌳ವಚನ ಸಾಹಿತ್ಯ 🌳// #ವಚನಗಳು #ಶರಣ ಸಾಹಿತ್ಯ #ಬಸವಾದಿ ಶರಣ ಶರಣೆಯರು #ಬಸವಣ್ಣನವರ ವಚನಗಳು


